ಸೋಮವಾರ, ಡಿಸೆಂಬರ್ 28, 2009

ಬಿಜೆಪಿ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಗದ್ದಲ ಕೋಲಾಹಲ

ಅರಕಲಗೂಡು: ತಾಲ್ಲೂಕು ಬಿಜೆಪಿ ಅಧ್ಯಕ್ಷರ ಆಯ್ಕೆ ಸಂಧರ್ಬದಲ್ಲಿ ಗದ್ದಲ-ಕೋಲಾಹಲ ಉಂಟಾಗಿ ಕೈ ಕೈ ಮಿಲಾಯಿಸಿದ ಪ್ರಸಂಗ ಇಂದು ಪಟ್ಟಣದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನಡೆಯಿತು. ತಾಲೂಕು ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಿಗದಿಯಾಗಿತ್ತು. ಕಾರ್ಯಕ್ರಮ ಏರ್ಪಾಟಾಗಿದ್ದ ಶ್ರೀ ಚನ್ನಬಸವೇಶ್ವರ ಕಲ್ಯಾಣ ಮಂಠಪಕ್ಕೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಕೊಡಗಿನ ಬಿಜೆಪಿ ಮುಖಂಡ ಮೇದಪ್ಪ ಸಭೆಯಲ್ಲಿ ಚುನಾವಣ ಪ್ರಕ್ರಿಯೆಯನ್ನು ಘೋಷಿಸಿ ಪಕ್ಷದ ಬಲವರ್ದನೆಗೆ ಕಾರ್ಯಕರ್ತರು ಶ್ರಮಿಸಬೇಕು ಈ ನಿಟ್ಟಿನಲ್ಲಿ ಸಮರ್ಥರನ್ನು ಆಯ್ಕೆ ಮಾಡುವಂತೆ ಕರೆ ನೀಡಿದರು. ಹಾಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ 13ಮಂದಿ ಉತ್ಸುಕರಿದ್ದಾರೆ ಎಂದು ತಿಳಿಸಿದ ಅವರು ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬಂದು ಒಬ್ಬ ವ್ಯಕ್ತಿಯನ್ನು ಅಂತಿಮಗೊಳಿಸಬೇಕೆಂದು ಮನವಿ ಮಾಡಿದರು. ನಂತರ ಚುನಾವಣಾಧಿಕಾರಿಗಳು ಮತ್ತು ಮುಖಂಡರು ಕೆಲವು ಮಂದಿ ಆಕಾಂಕ್ಷಿಗಳನ್ನು ಕರೆದುಕೊಂಡು ವೇದಿಕೆ ಹಿಂದಿನ ಕೊಠಡಿಗೆ ತೆರಳಿದ್ದು ಹೊರಗೆ ಉಳಿದಿದ್ದ ಅಭ್ಯರ್ಥಿಗಳನ್ನು ಕೆರಳಿಸಿತು. ಬಿಜೆಪಿಯಲ್ಲಿ ಮುಕ್ತವಾಗಿ ಚುನಾವಣೆ ನಡೆಸುತ್ತಿಲ್ಲ, ಚುನಾವಣೆ ಕ್ರಮವನ್ನೆ ಸರಿಯಾಗಿ ತಿಳಿಸಿಲ್ಲ, ತಮಗೆ ಬೇಕಾದವರನ್ನು ಸ್ಥಾಯಿ ಸಮಿತಿ ಸದಸ್ಯರನ್ನಾಗಿ ಮಾಡಿಕೊಂಡು ಅವರ ಮೂಲಕ ಬೇಕಾದವರನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಐಯ್ಯಣ್ಣ ಗೌಡ ಮತ್ತು ಶಿವಲಿಂಗ ಶಾಸ್ತ್ರಿ ಆರೋಪಿಸಿದಾಗ ರೊಚ್ಚಿಗೆದ್ದ ಇತರೆ ಕಾರ್ಯಕರ್ತರು ನೂಕಾಟ-ತಳ್ಳಾಟ ಆರಂಭಿಸಿದರು. ಅಧ್ಯಕ್ಷ ಸ್ಥಾನದ ಻ತೃಪ್ತರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದಾಗ ಕೆಲ ಕಾರ್ಯರ್ತರು ಅಡ್ಡಿಪಡಿಸಲು ಯತ್ನಿಸಿದರು ಈ ಹಂತದಲ್ಲಿ ಬಿಜೆಪಿ ಅಧ್ಯಕ್ಷ ರೊಂದಿಗೆ ಅತೃಪ್ತರು ನೇರವಾಗಿಯೇ ಮಾತಿನ ಚಕಮಕಿ ನಡೆಸಿದರಲ್ಲದೇ ಬಿಜೆಪಿಯ ಅಂತರಂಗವನ್ನು ಬಯಲುಗೊಳಿಸಲೆತ್ನಿಸಿದರು. ಇದರಿಂದ ಕ್ರುದ್ದರಾದ ಕೆಲ ಕಿಡಿಗೇಡಿಗಳು ಅತೃಪ್ತರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರಲ್ಲದೇ ಸಭಾಂಗಣದಿಂದಲೇ ಆಚೆಗಟ್ಟಿದರು. ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿ ಅದ್ಯಕ್ಷ ನವಿಲೆ ಅಣ್ಣಪ್ಪ ಈ ಹಿಂದೆ ಪಕ್ಷ ಸಂಘಟಿಸುವಾಗ ಇಲ್ಲದವರು ಈಗ ಪಕ್ಷ ಅಧಿಕಾರದಲ್ಲಿರುವುದರಿಂದ ಲಾಭದ ಆಸೆಗೆ ಗೋಂದಲ ಸೃಷ್ಟಿಸುತ್ತಿದ್ದಾರೆ ಇದೆಲ್ಲ ಸಹಜವಾಗಿದೆ ಎಂದರು. ಅಂತಿಮವಾಗಿ ಸರ್ವಸಮ್ಮತ ಅಂತಿಮವಾಗಿ ಸರ್ವ ಸಮ್ಮತ ಆಯ್ಕೆಯ ಅಧ್ಯಕ್ಷರನ್ನಾಗಿ ಹಳ್ಳಿಮೈಸೂರಿನ ನಟರಾಜ್ ರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಕೇಶವೇಗೌಡ, ಪ್ರತಿನಿಧಿಗಳಾಗಿ ಶಿವಲಿಂಗ ಶಾಸ್ತ್ರಿ, ಕುಮಾರಸ್ವಾಮಿಯನ್ನು ಆಯ್ಕೆ ಮಾಡಲಾಯಿತು. ಈ ಪ್ರಕಟಣೆ ಹೊರಬೀಳುತ್ತಿದ್ದಂತೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಐಯ್ಯಣ್ಣಗೌಡ ಸಭೆಯಿಂದ ಹೊರನೆಡೆದರು ಅವರನ್ನು ಅವರ ಬೆಂಬಲಿಗರು ಹಿಂಬಾಲಿಸಿದರು. ವೇದಿಕೆಯಲ್ಲಿದ್ದ ಹೊಳೆನರಸೀಪುರದ ತಾ.ಪಂ. ಸದಸ್ಯ ಚಂದ್ರಶೇಖರ್ ಸಹಾ ಆಯ್ಕೆಯಲ್ಲಿ ಕುರುಬ ಸಮಾಜದ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ ಎಂದು ಅತೃಪ್ತಿ ವ್ಯಕ್ತ ಪಡಿಸಿ ಬೆಂಬಲಿಗರೊಂದಿಗೆ ತೆರಳಿದರು. ಗೋಂದಲದ ಗೂಡಾಗಿದ್ದ ವೇದಿಕೆಯಲ್ಲಿ ತರಾತುರಿಯಲ್ಲಿ ನಿಕಟಪೂರ್ವ ಅಧ್ಯಕ್ಷ ನಟೇಶ್ ಕುಮಾರ್ ನೂತನ ಅಧ್ಯಕ್ಷ ನಟರಾಜ್ ಗೆ ಅಧಿಕಾರ ಹಸ್ತಾಂತರಿಸಿದರು. ವೇದಿಕೆಯಲ್ಲಿ ಮುಖಂಡರಾದ ರವಿಕುಮಾರ್, ಲೋಹಿತ್ ಕುಂದೂರು, ಭುವನಾಕ್ಷ, ನಾರಾಯಣ, ನಂಜುಂಡೇಗೌಡ, ಮಧುಕರ್ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ಕಾಂಗ್ರೆಸ್ಸಿಗರಿಗೆ ಸಂಸ್ಥಾಪನಾ ದಿನದ ಸನ್ಮಾನ

ಅರಕಲಗೂಡು/ರಾಮನಾಥಪುರ,ಡಿ.28: ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ತಾಲ್ಲೂಕಿನ ಹಿರಿಯ ಕಾಂಗ್ರೆಸ್ಸಿಗರನ್ನು ಜಿಲ್ಲಾ ಕಾಂಗೈ ಅಧ್ಯಕ್ಷ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೀರ್ತಿರಾಜ್ ಸನ್ಮಾನಿಸಿದರು. ಪಕ್ಷದ 125ನೇ ವರ್ಷಾಚರಣೆಯ ಅಂಗವಾಗಿ ಪಟ್ಟಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ನಾಗರಾಜಶೆಟ್ಟಿ, ಮರಿಗೌಡ, ಇಬ್ರಾಹಿಂ ರನ್ನು ಫಲ ಪುಷ್ಪ ನೀಡಿ ಶಾಲು ಹೊದೆಸಿ ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಮತ್ತು ಜಿಲ್ಲಾ ಕಾಂಗೈ ಅಧ್ಯಕ್ಷರಾದ ಎ ಮಂಜು ಪಕ್ಷದ ವರಿಷ್ಠರ ಸೂಚನೆಯಂತೆ ಈ ಸಂಧರ್ಭದಲ್ಲಿ ಪಕ್ಷದ ಮುಖಂಡರನ್ನು ಸನ್ಮಾನಿಸಲಾಗುತ್ತಿದೆ, ತಾಲೂಕಿನ ಎಲ್ಲಾ 29 ಗ್ರಾಮ ಪಂಚಾಯ್ತಿಗಳಲ್ಲು ಹಿರಿಯ ಕಾಮಗ್ರೆಸ್ಸಿಗರನ್ನು ಗುರುತಿಸಲಾಗಿದ್ದು ಪಕ್ಷದ ಮುಖಂಡರು ಸನ್ಮಾನಿಸುವರು ಎಂದರು. ಹಿರಿಯ ಕಾಂಗ್ರೆಸ್ಸಿಗರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಾಗಿದೆ ಎಂದು ನುಡಿದ ಅವರು ಪಕ್ಷದ ಬಲವರ್ಧನೆಯಾಗಿದ್ದು ಜನರ ಏಳಿಗೆಗಾಗಿ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳ ಪ್ರಯೋಜನ ಮತ್ತು ಅನುಷ್ಠಾನಕ್ಕೆ ಪಕ್ಷ ಹೋರಾಟ ಮಾಡುವುದು ಎಂದರು. ಈ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಪ್ರಸನ್ನಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಹಿಂದುಳಿದ ವರ್ಗದ ಅದ್ಯಕ್ಷ ಮುತ್ತಿಗೆ ರಮೇಶ್, ಮುಖಂಡರಾದ ಬಾಲಾಜಿ, ಅತಿಉಲ್ಲಾ ಖಾನ್, ವಿಶ್ವೇಶ್ವರಯ್ಯ, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಹಿರಿಯ ಮುಖಂಡರುಗಳಾದ ಕಬ್ಬಳಿಗೆರೆ ಬೈರೇಗೌಡ, ಕೊಣನೂರಿನ ನಾರಾಯಣ, ಪುಟ್ಟಸ್ವಾಮಿ, ಕರೀಂಸಾಬ್, ರಾಮನಾಥಪುರದ ತಿಪ್ಪೇಗೌಡ, ಗೋವಿಂದರಾಜಶೆಟ್ಟಿ, ಚೌಡೇಗೌಡ ಮತ್ತಿತರನ್ನು ಅವರ ನಿವಾಸಗಳಿಗೆ ತೆರಳಿ ಸನ್ಮಾನಿಸಲಾಯಿತು.

ಮಂಗಳವಾರ, ಡಿಸೆಂಬರ್ 8, 2009

ನೀರಾವರಿ ತಜ್ಞ ಎಚ್ ಎನ್ ನಂಜೇಗೌಡರ ವಾರ್ಷಿಕ ಸ್ಮರಣೆ

ಖ್ಯಾತ ನೀರಾವರಿ ತಜ್ಞ ದಿ. ಎಚ್ ಎನ್ ನಂಜೇಗೌಡರ ವಾರ್ಷಿಕ ಪುಣ್ಯತಿಥಿಯಂದು ಮೌನ ಮೆರವಣಿಗೆ ನಡೆಸಿ ಶ್ರಧ್ದಾಂಜಲಿ ಅರ್ಪಿಸಿದ ಪಟ್ಟಣದ ವಿವಿಧ ಸಂಘಸಂಸ್ಥೆಗಳ ಮುಖಂಡರು ತಹಸೀಲ್ದಾರ್ ಕಛೇರಿಗೆ ಮನವಿ ಅರ್ಪಿಸಿದರು. ಚಿತ್ರದಲ್ಲಿ ಬಿಎಸ್ ಪಿ ಮುಖಂಡ ರಾಜೇಶ್, ತಾ.ಪಂ ಅಧ್ಯಕ್ಷ ನಂಜುಂಡಾಚಾರ್, ಪ.ಪಂ ಸದಸ್ಯ ರವಿಕುಮಾರ್, ಪತ್ರಕರ್ತು ಶಂಕರ್, ದಸಂಸ ದ ವೀರಾಜ್, ರಮೇಶ್ ವಾಟಾಳ್ ಇದ್ದಾರೆ.

ನಂಜೇಗೌಡರ ಸ್ಮರಣೆಯಲ್ಲಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮೌನ ಚಳುವಳಿ

ಅರಕಲಗೂಡು: ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಖ್ಯಾತ ನೀರಾವರಿ ತಜ್ಞ ದಿ.ನಂಜೇಗೌಡರ ಸ್ಮರಣಾರ್ಥ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.
ಪಟ್ಟಣದ ಅನಕೃ ವೃತ್ತದಿಂದ ತೆರಳಿದ ಮೌನ ಮೆರವಣಿಗೆ ತಾಲೂಕು ಕಛೇರಿ ಮುಂದೆ ಸಮಾವೇಶ ಗೊಂಡಿತು, ಈ ಸಂಧರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯತ್ ಅಧ್ಯಕ್ಷ ನಂಜುಂಡಚಾರ್ ನಿರ್ಭೀತ ನಡೆ-ನುಡಿಯ ಶ್ರೇಷ್ಠ ರಾಜಕಾರಣಿ ಎಚ್ ಎನ್ ನಂಜೇಗೌಡ, ಅವರು ತಾವು ನಂಬಿದ ತತ್ವಗಳನ್ನು ಬಿಟ್ಟು ರಾಜೀ ಮನೋಭಾವ ಅನುಸರಿಸಿದ್ದರೆ ರಾಜ್ಯದ ಮುಖ್ಯಮಂತ್ರಿ ಯಾಗುತ್ತಿದ್ದರಲ್ಲದೇ ಕೇಂದ್ರದಲ್ಲಿ ಸಚಿವರೂ ಆಗಬಹುದಿತ್ತು ಆದರೆ ಯಾವತ್ತಿಗೂ ನಂಜೇಗೌಡರು ತಾವು ನಂಬಿದ ಮೌಲ್ಯಗಳನ್ನು ಬಿಡಲಿಲ್ಲ ಎಂದರು. ತಾಲೂಕಿನ ಹಲವು ನೀರಾವರಿ ಯೋಜನೆಗಳಿಗೆ ಮಹತ್ವದ ಪಾತ್ರ ವಹಿಸಿರುವ ಗೌಡರು ರಾಜ್ಯದ ನೀರಾವರಿ ವಿಚಾರ ಬಂದಾಗಲೂ ಅಂಕಿ ಅಂಶ ಸಮೇತ ರಾಜ್ಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದರು ಎಂದರು. ಬಿಎಸ್ಪಿ ಮುಖಂಡ ರಾಜೇಶ್ ಮಾತನಾಡಿ ಭೋಫೋರ್ಸ್ ಹಗರಣದ ಸಂಧರ್ಭ ಪ್ರಾಮಾಣಿಕ ನಡೆ ನುಡಿಯಿಂದ ತಮ್ಮ ವ್ಯಕ್ತಿತ್ವ ಕಾಯ್ದು ಕೊಂಡು ಇತರರಿಗೆ ಮಾದರಿಯಾದ ನಂಜೇಗೌಡರು ತಾಲೂಕಿನ ರಾಮನಾಥಪುರ-ಕೊಣನೂರು ಹೋಬಳಿಯ ಜನರ ಕೃಷಿ ಬದುಕು ಹಸನಿಗೆ ಕಾರಣರಾಗಿದ್ದಾರೆ. ಅವರು ರೂಪಿಸಿದ ಹಾರಂಗಿ ನೀರಾವರಿ ಯೋಜನೆ ಯಿಂದ ಇವತ್ತು ರೈತರು ನೆಮ್ಮದಿಯ ದಿನಗಳನ್ನು ಕಾಣುತ್ತಿದ್ದಾರೆ ಇಂತಹ ಶ್ರೇಷ್ಠ ರಾಜಕಾರಣಿಯನ್ನು ಜನತೆ ನೆನೆಸಿಕೊಳ್ಳಬೇಕು ಹಾಗೂ ಇದೇ ಸಂಧರ್ಭದಲ್ಲಿ ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಹಲವು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು. ಪ.ಪಂ ಸದಸ್ಯ ರವಿಕುಮಾರ್ ಮಾತನಾಡಿ ಒಬ್ಬ ಪ್ರಾಮಾಣಿಕ ರಾಜಕೀಯ ಮುತ್ಸದ್ದಿಯನ್ನು ನೆನಪು ಮಾಡಿಕೊಳ್ಳುವ ಜೊತೆಗೆ ಅವರು ನಂಬಿದ ಮೌಲ್ಯಗಳಿಗೆ ಗೌರವ ಸಿಗಬೇಕಾದರೆ ಅವರ ಕನಸಿನ ನೀರಾವರಿ ಯೋಜನೆ ಜಾರಿಯಾಗಬೇಕು ಎಂದರು. ದಸಂಸ ದ ವಿರಾಜ್ ಮಾತನಾಡಿ ತಾಲ್ಲೂಕಿನಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳ ಗುಣಮಟ್ಟ ಸಂಪೂರ್ಣ ಕಳಪೆಯಾಗಿದೆ, ರೈತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಇಂಜಿನಿಯರುಗಳು ಆಸ್ಥೆ ವಹಿಸುತ್ತಿಲ್ಲ ಇದು ವಿಷಾಧನೀಯಕರ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಜಿ ಚಂದ್ರಶೇಖರ್, ಅ. ರಾ. ಸುಬ್ಬರಾವ್ ಮತ್ತಿತರರು ಮಾತನಾಡಿದರು. 2ನಿಮಿಷಗಳ ಮೌನ ಆಚರಣೆ ನಂತರ ತಾಲೂಕು ಕಛೇರಿ ವ್ಯವಸ್ಥಾಪಕ ಗಂಗರಾಜುವಿಗೆ ಪ್ರತಿಭಟನಾ ನಿರತರು ಮನವಿ ಅರ್ಪಿಸಿದರು.
ಶ್ರದ್ದಾಂಜಲಿ ಅರ್ಪಣೆ: ತಾಲ್ಲೂಕಿನ ಪೊಟ್ಯಾಟೋ ಕ್ಲಬ್ ವತಿಯಿಂದ ನೀರಾವರಿ ತಜ್ಞ ಎಚ್ ಎನ್ ನಂಜೇಗೌಡರ ವಾರ್ಷಿಕ ಸ್ಮರಣೆ ಆಚರಿಸಲಾಯಿತು. ತಹಸೀಲ್ದಾರ್ ವಿ ಆರ್ ಶೈಲಜಾ , ಎಚ್ ಎನ್ ನಂಜೇಗೌಡರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌಡರ ಗುಣಗಾನ ಮಾಡಿದರು. ಪೋಟಾಟೋ ಕ್ಲಬ್ ನ ರಾಜೇಂದ್ರ ದೊಡ್ಡಮಗ್ಗೆ ಮಾತನಾಡಿದರು ಕಾರ್ಯಕ್ರಮದಲ್ಲಿ ಮುಖಂಡರಾದ ಜಯಪ್ಪ, ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ಸೋಮವಾರ, ಡಿಸೆಂಬರ್ 7, 2009

ಕುರಿ-ಆಡು ಸಾಕಾಣಿಕೆ ರೈತರ ಆರ್ಥಿಕಾಭಿವೃದ್ದಿಗೆ ಸಹಾಯಕ




೧. ಪೊಟ್ಯಾಟೋ ಕ್ಲಬ್ ನ ಆಶ್ರಯದಲ್ಲಿ ಏರ್ಪಾಡಾಗಿದ್ದ ರೈತರ ಸಮಾವೇಶ ದಲ್ಲಿ ಕುರಿ-ಆಡು ಸಾಕಾಣಿಕೆ ಅಭಿವೃದ್ದಿ ಕೇಂದ್ರದ ಸಮಿತಿ ಸದಸ್ಯ ವೀರಕೆಂಪಣ್ಣ ಆಡುಮತ್ತು ಕುರಿಗಳಿಗೆ ಹಾರ ಹಾಕುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಪ್ರಯೋಜಕರಾದ ಯೋಗಾರಮೇಶ್, ಮತ್ತು ಅತಿಥಿಗಳಾದ ಹೊಂಬೇಗೌಡ,ಆಲದಹಳ್ಳಿ ಸುಬ್ಬೇಗೌಡ, ಮತ್ತು ಇತರರು ಉಪಸ್ಥಿತರಿದ್ದರು.


ಸೋಮವಾರ, ನವೆಂಬರ್ 23, 2009

ರಾಮನಾಥಪುರ ಸಂಭ್ರಮದ ರಥೋತ್ಗವ

ಹಾಸನ ಜಿಲ್ಲೆಯ ರಾಮನಾಥಪುರದ ಶ್ರಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ ಇಂದು ಸಂಭ್ರಮದಿಂದ ಜರುಗಿತು.

ಸೋಮವಾರ, ನವೆಂಬರ್ 16, 2009

CHILDREN'S DAY PROGRAMME AT ARKALGUD


Niveditha School organising a "PRATHIBHOTSAVA-09'programming on the occassion of Children's Day at Arkalgud Town. Writer. N. ShylajaHassan Inagurating the function, Leader Channakeshavegowda and School Secretary A.R. Subbarao will be seen the picture.

ಮಂಗಳವಾರ, ನವೆಂಬರ್ 10, 2009

ಕರೆಂಟು ವಿತರಣೆ ಅಸಮರ್ಪಕ ಕರವೇ ಪ್ರತಿಭಟನೆ




ಶಂಕರ್ ನಾಗ್ ನೆನಪಿಗೊಂದು ವೆಬ್ ಸೈಟು!


ಶಂಕರ್ ನಾಗ್ ಒಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ ನಾಡಿನ ಜನಮನದಲ್ಲಿ ಅಜರಾಮರ. ಯಾವುದೇ ಸ್ಟಾರ್ ಗಿರಿಯ ಹಂಬಲವಿಲ್ಲದೇ ತನ್ನದೇ ಆದ ಆಲೋಚನೆಗಳಿಗೆ ರೂಪು ಕೊಡುತ್ತಾ, ಹೊಸ ಚಿಂತನೆಗಳನ್ನು ಹರವಿಕೊಳ್ಳುತ್ತಾ ಸಾರಸ್ವತ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಧೀಮಂತ. ನಾಟಕದ ಹುಚ್ಚು ಹತ್ತಿಸಿಕೊಂಡು ಇದ್ದ ಬ್ಯಾಂಕ್ ಆಫ್ ಇಂಡಿಯಾದ ನೌಕರಿಗೆ ತಿಲಾಂಜಲಿ ಇಟ್ಟು ಕನಸುಗಳನ್ನು ಕಟ್ಟಿದ, ಕನಸನ್ನು ನಿಜ ಮಾಡಿದ, ತಾನೂ ಬೆಳೆದ, ತನ್ನೊಂದಿಗೆ ಹಲವರನ್ನು ಬೆಳೆಸಿದ, ವ್ಯವಸ್ಥೆಯಲ್ಲಿ ಒಂದು ಹೊಸ ಸಂಚಲನವನ್ನು ಹುಟ್ಟುಹಾಕಿದ ಸಾಹಸಿ ಆತ! ಬದುಕಿದ್ದು 3ದಶಕಗಳಾದರೂ ಸಾಧಿಸಿದ್ದು ಮತ್ತು ನಮ್ಮೊಂದಿಗೆ ಬಿಟ್ಟು ಹೋಗಿದ್ದು ಎಂದೆಂದಿಗೂ ಮರೆಯಲಾಗದ ಕನಸುಗಳ ಸಾಕಾರವನ್ನು ಹೊಸ ಸಂಚಲನದ ಸೃಷ್ಟಿಯನ್ನು. ಶಂಕರ್ ಗೆ ಅಂತ ಒಂದು ಅಭಿಮಾನಿ ಸಂಘವಿರಲಿಲ್ಲ ಆದರೆ ಆತ ತನ್ನ ನಾಟಕಗಳ ಮೂಲಕ ಜಗತ್ತಿನ ಹಲವು ದೇಶಗಳನ್ನು ಸುತ್ತಿದ್ದ. ದೇಶಿ ಪರಂಪರೆಯನ್ನು ವಿದೇಶದಲ್ಲೂ ಪಸರಿಸಿದ್ದ, ಒಂದೇ ಒಂದು ಟೆಲಿ ಸೀರಿಯಲ್ ಸ್ವಾಮಿ ಅಂಡ್ ಹಿಸ್ ಪ್ರೆಂಡ್ಸ್ ಆತನಿಗೆ ಜಾಗತಿಕ ಖ್ಯಾತಿಯನ್ನು ತಂದು ಕೊಟ್ಟಿತು. ದೇಶದಲ್ಲಿಯೇ ಮೊದಲನೆಯದು ಎನ್ನುವಂತಹ ಕಂಟ್ರಿಕ್ಲಬ್ ನಿರ್ಮಿಸಿದ ಶಂಕರ್ ಒಂದೊಳ್ಳೆಯ ಪತ್ರಿಕೆಯನ್ನು, ನಮ್ಮದೇ ಆದ ಕನ್ನಡದ ಛಾನಲ್ ಅನ್ನು, ಬಡವರಿಗೆ ಕಡಿಮೆ ಬೆಲೆಯ ಮನೆಯನ್ನು, ನಂದಿ ಬೆಟ್ಟಕ್ಕೆ ರೋಪ್ ವೇ ಯನ್ನು, ಮೆಟ್ರೋ ರೈಲು ಯೋಜನೆಗೆ ಹೀಗೆ ಬಿಡುವಿಲ್ಲದ ಕನಸುಗಳನ್ನು ಕಟ್ಟಿಕೊಂಡಿದ್ದ .

ಭಾನುವಾರ, ನವೆಂಬರ್ 8, 2009

ಗಣೇಶನೊಂದಿಗೆ ಕನ್ನಡದಲ್ಲಿ ಪ್ರಿಯಾಮಣಿಯ ಹೊಸ ಇನ್ನಿಂಗ್ಸ್


ಬೆಂಗಳೂರು ಹುಡುಗಿ ಪ್ರಿಯಮಣಿ ಪುನೀತ್ ಜೊತೆಗೆ ರಾಮ್ ಚಿತ್ರದಲ್ಲಿ ನಟಿಸುತ್ತಿರುವ ಬೆನ್ನಿಗೇ ಗಣೇಶ್ ಜೊತೆಗೆ ನಾಯಕಿಯಾಗುವ ಅವಕಾಶ ಬಂದಿದೆ. ನಿಮಿಷಾಂಬ ಪ್ರೊಡಕ್ಷನ್ಸ್‌ನ ಚಂದ್ರಶೇಖರ್ ನಿರ್ಮಿಸುತ್ತಿರುವ ಹೆಸರಿಡದ ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯಾಗಿ ಪ್ರಿಯಮಣಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ ಆರಂಭದಲ್ಲಿ ಚಿತ್ರೀಕರಣವೂ ಆರಂಭವಾಗಲಿದೆ.ಈ ಸಿನಿಮಾವನ್ನು ಮುಸ್ಸಂಜೆ ಮಹೇಶ್ ನಿರ್ದೇಶಿಸಲಿದ್ದು, ಮಹೇಶ್ ಉತ್ತಮ ಚಿತ್ರದ ಆಫರ್ ಪಡೆದಿರುವುದಕ್ಕೆ ಸಂತಸಹೊಂದಿದ್ದಾರೆ. ಪಿ.ಕೆ.ಎಚ್.ದಾಸ್ ಈ ಚಿತ್ರಕ್ಕೆ ಕ್ಯಾಮರಾ ಉಸ್ತುವಾರಿ ವಹಿಸಲಿದ್ದಾರೆ ಎಂದು ಚಂದ್ರಶೇಖರ್ ತಿಳಿಸಿದರು.ಪ್ರಿಯಮಣಿ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದು, ಅವರು ಚಿತ್ರಕಥೆ ಕೇಳಿ ತುಂಬ ಹರ್ಷಚಿತ್ತರಾಗಿದ್ದಾರೆ. ತನ್ನ ಎರಡನೇ ಕನ್ನಡ ಚಿತ್ರವೂ ಉತ್ತಮವಾಗಿರೋದನ್ನೇ ಪಡೆದಿರೋದಕ್ಕೆ ಅವರಿಗೆ ತುಂಬ ಖುಷಿಯಾಗಿದೆ ಎಂದು ಚಂದ್ರಶೇಖರ್..
ತ್ರಿಷಾ ಬದಲಿಗೆ ಪ್ರಿಯಮಣಿ?: ಮೂಲಗಳ ಪ್ರಕಾರ ಖ್ಯಾತ ತಮಿಳು ನಟಿ ತ್ರಿಷಾಳನ್ನು ಕರೆತರುವ ಯೋಚನೆ ನಿರ್ಮಾಪಕರದ್ದಾಗಿತ್ತು. ತ್ರಿಷಾಗೂ ಕನ್ನಡದಲ್ಲಿ ನಟಿಸಲು ಆಸಕ್ತಿಯಿದೆ. ಆದರೆ ಆಕೆಗೆ ಸದ್ಯ ಡೇಟ್ಸ್ ಸಮಸ್ಯೆಯಿತ್ತು. ಈಗಾಗಲೇ ಆಕೆ ಹಿಂದಿ ಚಿತ್ರವೊಂದರಲ್ಲಿ ಬ್ಯುಸಿಯಾಗಿರೋದ್ರಿಂತ ಕನ್ನಡದಲ್ಲಿ ಸದ್ಯಕ್ಕೆ ನಟಿಸಲು ಆಕೆಯಲ್ಲಿ ಸಮಯದ ಕೊರತೆಯಿತ್ತು. ಹಾಗಾಗಿ ಪ್ರಿಯಮಣಿಯನ್ನು ಸಂಪರ್ಕಿಸಲಾಯಿತು ಎನ್ನಲಾಗಿದೆ.

ಯೋಗರಾಜ್ ಭಟ್ಟರ ಹೊಸ ಸಾಹಸಕ್ಕೆ ದಿಗಂತ್-ಪುನೀತ್

ಹೌದು. ಮುಂಗಾರು ಮಳೆಯಿಂದ ಹಿಡಿದು ಮೊನ್ನೆ ಮೊನ್ನೆಯ ಮನಸಾರೆವರೆಗೆ ಯೋಗರಾಜ ಭಟ್ಟರು ತನ್ನ ಚಿತ್ರಗಳಲ್ಲಿ ಭಡ್ತಿ ನೀಡುತ್ತಲೇ ಬಂದ ನಟನೆಂದರೆ ಅದು ದಿಗಂತ್ ಮಾತ್ರ. ಮುಂಗಾರು ಮಳೆಯ ಪುಟ್ಟ ಪಾತ್ರ, ಗಾಳಿಪಟದಲ್ಲಿ ಮೂವರು ನಾಯಕರಲ್ಲಿ ಮತ್ತೊಬ್ಬನಾಗಿ, ನಂತರ ಮನಸಾರೆಯಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಂಗೊಳಿಸಿದ್ದು ದಿಗಂತ್ ಜೀವನದಲ್ಲಿ ನಿಜಕ್ಕೂ ಅದ್ಭುತ ಮೆಟ್ಟಿಲುಗಳೇ ಸರಿ. ಈಗ ಭಟ್ಟರು ಅದೇ ದಿಗಂತ್ ಜೊತೆಗೆ ಮತ್ತೆ ಇನ್ನೊಂದು ಚಿತ್ರವನ್ನೂ ಆರಂಭಿಸಲು ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದ್ದಾರೆ.ಭಟ್ಟರದೇ ಪ್ರೊಡಕ್ಷನ್: ಹೌದು. ಯೋಗರಾಜ ಭಟ್ಟರು ದಿಗಂತರನ್ನು ಬಿಟ್ಟಿಲ್ಲ. ಡಿಸೆಂಬರ್‌ನಲ್ಲಿ ತಮ್ಮದೇ ಬ್ಯಾನರ್‌ನ ನಿರ್ಮಾಣವನ್ನು ಆರಂಭಿಸಲು ಭಟ್ಟರು ತಯಾರಿ ನಡೆಸುತ್ತಿದ್ದಾರೆ. ''ಕೆಲವು ಸಿನಿಮಾ ನಿರ್ಮಾಪಕರು ಈಗೀಗ ನನ್ನ ಬಳಿ ಬಂದು ದೊಡ್ಡ ಬಜೆಟ್ ಹೂಡಿ ಅದ್ದೂರಿ ಚಿತ್ರ ತೆಗೆಯಲು ರೆಡಿ ಇದ್ದಾರೆ. ನಾನು ಅವರ ಆಫರನ್ನು ಇನ್ನೂ ಒಪ್ಪಿಕೊಳ್ಳುವ ನಿರ್ಧಾರ ಮಾಡಿಲ್ಲ. ಮಾಡಿದರೂ ಮಾಡಿಯೇನು. ಆ ಬಗ್ಗೆ ಇನ್ನೂ ಯೋಚಿಸಿಲ್ಲ. ಆದರೆ ಇದರ ಜೊತೆಗೆ ನನ್ನದೊಂದು ಯೋಚನೆಯೂ ಇದೆ. ಬ್ಯಾಂಕ್‌ನಿಂದ ಸಾಲ ಮಾಡಿ ನನ್ನದೇ ಒಂದು ಪ್ರೊಡಕ್ಷನ್ ಹೌಸ್ ನಿರ್ಮಿಸಿ ದಿಗಂತ್ ಹಾಕಿಕೊಂಡು ಸಿನಿಮಾ ಮಾಡಬೇಕೆಂದಿದ್ದೇನೆ. ಇನ್ನೊಂದೆರಡು ವಾರಗಳಲ್ಲಿ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುತ್ತೇನೆ'' ಅಂತಾರೆ ಯೋಗರಾಜ್ ಭಟ್.ಹಾಗಾದರೆ ಪುನೀತ್ ಹಾಕಿಕೊಂಡು ಮಾಡುವ ಚಿತ್ರದ ಕಥೆಯೇನಾಯಿತು ಎಂದರೆ, ''ಅದೂ ಇದೆ. ಅದಕ್ಕಿನ್ನೂ ಹೆಸರಿಟ್ಟಿಲ್ಲ. ಪೂರ್ತಿ ಸಂಗೀತಮಯ ಚಿತ್ರವದು. ಸಿಕ್ಕಾಪಟ್ಟೆ ಕನಸನ್ನಿಟ್ಟುಕೊಂಡು, ತುಂಬಾ ಕಷ್ಟಪಟ್ಟು ಆ ಚಿತ್ರಕಥೆ ಬರೆದಿಟ್ಟಿದ್ದೇನೆ'' ಎನ್ನುತ್ತಾರೆ ಭಟ್ಟರು

ಗಣೇಶ್ ಈಸ್ ಗ್ರೇಟ್ ಆಕ್ಟರ್: ಮನಸಾರೆ ಚಿತ್ರದಲ್ಲಿ ದಿಗಂತ್ ಪಾತ್ರವನ್ನು ಗಣೇಶ್ ಪಾತ್ರಕ್ಕೆ ಎಲ್ಲರೂ ಹೋಲಿಸುತ್ತಿದ್ದಾರಲ್ಲಾ? ಎಂದರೆ, ''ಗಣೇಶ್ ಒಬ್ಬ ಗ್ರೇಟ್ ನಟ. ದಿಗಂತ್ ಕೂಡಾ ಉತ್ತಮ ನಟನೇ. ಇಬ್ಬರಿಗೂ ಅವರದ್ದೇ ಆದ ನಟನಾ ತಾಕತ್ತಿದೆ, ಪ್ರತಿಭೆಯಿದೆ. ಇವರಿಬ್ಬರನ್ನೂ ಹೋಲಿಸುವುದು ಸ್ವಾಭಾವಿಕ, ಯಾಕೆಂದರೆ ಇಬ್ಬರೂ ಒಂದೇ ನಿರ್ದೇಶಕನ ಜೊತೆಗೆ ಕೆಲಸ ಮಾಡಿದವರಲ್ಲವೇ'' ಎನ್ನುತ್ತಾರೆ ಭಟ್.ಹಾಗಾದರೆ ಈ ಬಾರಿ ಮನಸಾರೆ ಮೂಲಕ ಗಣೇಶ್ ಅವರನ್ನು ಈ ಬಾರಿ ಮಿಸ್ ಮಾಡಿಕೊಂಡಂತೆ ಅನಿಸುತ್ತಿಲ್ಲವಾ? ಎಂದರೆ ಅದಕ್ಕೂ ಯೋಗರಾಜ್ ಭಟ್ ಬಳಿ ಸಿದ್ಧ ಉತ್ತರವಿದೆ. ''ಚಿತ್ರಕಥೆ ಬರೆದು ಗಣೇಶ್ ಜೊತೆಗೆ ಚಿತ್ರಕ್ಕೆ ತಯಾರಿ ಮಾಡೋದೇ ಒಂಥರಾ ಖುಷಿ, ಮಜಾ. ಆದರೂ ಮನಸಾರೆ ಚಿತ್ರಕ್ಕೆ ನನ್ನ ಆಯ್ಕೆ ದಿಗಂತ್ ಆಗಿದ್ದರು. ಗಣೇಶ್ ಅಲ್ಲ. ಹಾಗಾಗಿ ನಾನು ಗಣೇಶ್ ಅವರನ್ನು ಮಿಸ್ ಮಾಡಿಕೊಂಡೆ ಅನಿಸಿಲ್ಲ. ಆದರೆ ಮನಸಾರೆಯ ಯಶಸ್ಸು ಮುಂಗಾರು ಮಳೆಯ ಪರ್ವಕಾಲದಿಂದ ನನಗೆ ಮುಕ್ತಿ ಕರುಣಿಸಿದೆ. ಮನಸಾರೆಯನ್ನು ಗಣೇಶ್ ಜೊತೆಗೆ ಕೂತು ವೀಕ್ಷಿಸಬೇಕು ಹಾಗೂ ಆತನ ಮುಖದಲ್ಲಿ ಪ್ರತಿಕ್ರಿಯೆಯನ್ನು ನೋಡಬೇಕು ಎಂಬ ಆಸೆಯಿದೆ. ಗಣೇಶ್‌ನನ್ನು ನಾನು ತುಂಬ ಗೌರವಿಸುತ್ತೇನೆ'' .
ಮನಸಾರೆಯಿಂದ ಯದ್ವಾತದ್ವಾ ಖುಷಿ: ಮನಸಾರೆಗೆ ಸಿಕ್ಕಾಪಟ್ಟೆ ಉತ್ತಮ ಪ್ರತಿಕ್ರಿಯೆ ಕಂಡು ಸ್ವತಃ ಯೋಗರಾಜ ಭಟ್ಟರು ಥ್ರಿಲ್ಲಾಗಿದ್ದಾರಂತೆ. ''ಕರ್ನಾಟಕದೆಲ್ಲೆಡೆ ಐಂದ್ರಿತಾ, ದಿಗಂತ್ ಹಾಗು ಇತರ ನಟರ ಜೊತೆಗೆ ಸುತ್ತಿದ್ದೇನೆ. ಜನರ ಪ್ರತಿಕ್ರಿಯೆ ಕಂಡು ಆಶ್ಚರ್ಯವಾಯಿತು. ನಾನೇ ಸ್ವತಃ ಇಂಥ ಯಶಸ್ಸನ್ನು ನಿರೀಕ್ಷಿಸಿರಲಿಲ್ಲ'' ಎನ್ನುತ್ತಾರೆ.''ಮುಂಗಾರು ಮಳೆಯ ನಂತರ ಬಹಳಷ್ಟು ಮಂದಿ ತಾವೂ ತಮ್ಮ ಸಿನಿಮಾದಲ್ಲಿ ಮುಂಗಾರು ಮಳೆಯಂತೆಯೇ ಮಾಡಹೊರಟರು. ನನ್ನ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಮಾತಾಡಿಕೊಂಡರು. ಆದರೆ ಜನರು ನನ್ನ ಕೈಬಿಡಲಿಲ್ಲ. ನನ್ನ ಸಿನಿಮಾಗಳ ಬಗ್ಗೆ ಜನರು ಒಂದು ನಂಬಿಕೆಯಿಟ್ಟುಕೊಂಡಿದ್ದಾರೆ. ಮನಸಾರೆಯ ಈ ಯಶಸ್ಸು ಹಲವು ಮಂದಿಯ ಬಾಯಿಗೆ ಬೀಗ ಜಡಿದಂತಾಗಿದೆ'' ಎಂದು ಯೋಗರಾಜ ಭಟ್ಟರು ಹೇಳುತ್ತಾರೆ.

ಶುಕ್ರವಾರ, ಅಕ್ಟೋಬರ್ 16, 2009

REAL MARRIAGE ON REEL



- Baduku Jatakaabandi, a meaningful journey
Bangalore, October 16 2009: Zee Kannada’s Baduku Jatakaabandi transcends above all reality shows in Kannada. Trying to fulfill the social responsibility of a channel, Zee Kannada through Baduku Jatakaabandi has been serving the society in more ways than one, tangibly and intangibly.
This time around Zee Kannada stands witness to the matrimony of a couple against all odds. First time ever a real marriage conducted on reality TV. A love story that rises above caste barrier. Naminatha, a boy from Jain community and Sangeetha, the girl from Kuruba community face stiff opposition from their parents for their marriage and have been threatened that they will never support them financially or otherwise.
But the villagers who are witnesses to this love story got the couple to Baduku Jatakaabandi to find a solution and get them married. The girl though had come all ready to get married but the boy then seemed to have second thoughts. As the episode unfolds, anchor Malavika and everybody present succeed in ridding him of all fears pertaining to the marriage and counsels him to go ahead with it.
Entire ambience turns into a celebration mode. Naminatha and Sangeetha get married on the sets of Baduku Jatakaabandi. All rituals, tradition and customs were followed as per their wish and were married in full glory. Naturally the scene was emotional, sentimental and yet joyous for all present.
Watch the entire drama of a real marriage unfold on reel on Zee Kannada’s Baduku Jatakaabandi. A Diwali special episode lighting the lives of two souls on Monday, October 19 at 1.30pm.

ಮಂಗಳವಾರ, ಸೆಪ್ಟೆಂಬರ್ 29, 2009

ಶಂಕರನ ನೆನಪು.........


ಶಂಕರ್ ನಾಗ್ ....ನಮ್ಮನಗಲಿ ಇಂದಿಗೆ 35ವರ್ಷ 10ತಿಂಗಳು 21ದಿನ, ವಿಧಿಯ ವಿಪರ್ಯಾಸವೋ ಏನೋ ಸದಾ ಕ್ರಿಯಾಶೀಲ ಚಿಂತನೆಗಳಲ್ಲಿ ತೊಡಗಿಸಿಕೊಂಡು ತನ್ನೊಂದಿಗಿದ್ದವರನ್ನು ಬೆಳೆಸುತ್ತಾ, ಸಮಾಜದ ಅಭಿವೃದ್ದಿ ಚಿಂತನೆಗೆ ತನ್ನದೇ ಆದ ವಿಶಿಷ್ಠ ರೀತಿಯಲ್ಲಿ ಕೊಡುಗೆ ನೀಡಿದ ಶಂಕರ್ ನಾಗ್ ಯುವ ಸಮೂಹಕ್ಕೆ ಆದರ್ಶ ಮತ್ತು ಅನುಕರಣೀಯ. ಸಂಕೇತ್ , ಕಂಟ್ರಿಕ್ಲಬ್, ಹೊಸ ಅಲೆಯ ಸಿನಿಮಾಗಳು , ರಂಗ ನಾಟಕಗಳು ಹೀಗೆ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಎಲ್ಲರ ಮನಗೆದ್ದವರು ನಮ್ಮ-ನಿಮ್ಮೆಲ್ಲರ ಶಂಕರ್ ನಾಗ್..

ಶಂಕರ್ ನೆನಪಿಗೆ ಅರಕಲಗೂಡಿನ ಸಮಾನ ಗೆಳೆಯರು ಸೇರಿ ಶಂಕರ್ ನೆಟಿಸಿದ ಚಿತ್ರಗಳ ಆಯ್ದ ತುಣುಕುಗಳ ಪ್ರದರ್ಶನ, ಶಂಕರ್ ಒಡನಾಡಿ ಪ್ರಜಾವಾಣಿ ಪತ್ರಿಕೆಯ ಹಿರಿಯ ನಿವೃತ್ತ ಪತ್ರಕರ್ತ ಎಂ ಕೆ. ಭಾಸ್ಕರ್ ರಾವ್ ರಿಂದ ಶಂಕರ್ ನೆನಪು ಮೊಗೆದು ಕೊಡಲಿದ್ದಾರೆ. ಅಂತಿಮವಾಗಿ ಹಾಸನದ ಕಲಾಸಿರಿ ತಂಡದವರಿಂದ "ಒಂದು ಬೊಗಸೆ ನೀರು" ನಾಟಕ ಪ್ರದರ್ಶನ ಇದೆ. ಈ ಎಲ್ಲ ಕಾರ್ಯಕ್ರಮಗಳು ಸೆ.೩೦ ರಂದು ಸಂಜೆ 6ಗಂಟೆಗೆ ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆಯಲಿದೆ. ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶ. ಕಾರ್ಯಕ್ರಮಕ್ಕೆ ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ....



ಮಂಗಳವಾರ, ಸೆಪ್ಟೆಂಬರ್ 22, 2009

ವಿಷ್ಣು 60ರ ಸಂಭ್ರಮಕ್ಕೆ ಅಭಿಮಾನಿಗಳ ಹಾರೈಕೆ!

ಅರಕಲಗೂಡಿನ ವಿಷ್ಣು ಸೇನಾ ಸಮಿತಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ವಿಷ್ಣುವರ್ಧನ್ ಗೆ 60ತುಂಬಿದ ಸಂಧರ್ಭದಲ್ಲಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದರಲ್ಲದೇ, ಅವರ ನಿವಾಸದ ಎದುರು ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಚಿತ್ರದಲ್ಲಿ ಅರಕಲಗೂಡು ತಾಲೂಕು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವಿಷ್ಣುಪ್ರಕಾಶ್ (ಎಡಬದಿಯವರು) ರನ್ನು ಕಾಣಬಹುದು.

ಬುಧವಾರ, ಸೆಪ್ಟೆಂಬರ್ 9, 2009

ಕಾಸರವಳ್ಳಿ ಚಿತ್ರಗಳತ್ತ ಪ್ರಕಾಶ್ ರೈ ಚಿತ್ತ

ಸೋಮವಾರ ರಾತ್ರಿ (ಸೆ. 7) ಬಹುಹೊತ್ತಿನವರೆಗೂ ಅವರ ದೂರವಾಣಿ ಬಿಡುವು ಕಳೆದುಕೊಂಡಿತ್ತು. ’ಅಭಿನಂದನೆಗಳು. ನಮಗೆ ತುಂಬಾ ಹೆಮ್ಮೆ’. ಪ್ರಕಾಶ್ ನಕ್ಕರು. ಥ್ಯಾಂಕ್ಸ್ ಎಂದರು. ನನಗೂ ಖುಷಿಯಾಗುತ್ತಿದೆ ಎಂದರು. ಅವರ ನಗುವಿನಲ್ಲಿ ಖುಷಿಯಿತ್ತು, ಸಂಭ್ರಮವಿತ್ತು, ಹೆಮ್ಮೆಯಿತ್ತು, ಅಧ್ಯಾತ್ಮವೂ!

ಸ್ವಲ್ಪ ಹಿಂದಕ್ಕೆ ನೋಡೋಣ. ನಾಟಕ, ಕವಿತೆಯ ಗುಂಗು ಹಚ್ಚಿಕೊಂಡು, ಕಣ್ಣ ತುಂಬ ಕನಸುಗಳನ್ನು ತುಂಬಿಕೊಂಡು ಬೆಂಗಳೂರಿನ ಕಲಾಕ್ಷೇತ್ರದ ಮೊಗಸಾಲೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ, ಸಿಕ್ಕಸಿಕ್ಕವರೊಡನೆ ಜಗಳಕ್ಕೆ ನಿಲ್ಲುತ್ತಿದ್ದ ಹದಿಹರೆಯದ ಹುಡುಗ ಭಾರತೀಯ ಚಿತ್ರರಂಗದ ಅನನ್ಯ ಪ್ರತಿಭೆಯಾಗಿ ರೂಪುಗೊಂಡಿರುವುದು ಈಗ ಚರಿತ್ರೆ. ಈ ಹುಡುಗ ಕಾಲೇಜು ದಿನಗಳಲ್ಲಿ ಅತ್ಯುತ್ತಮ ಸ್ಕೌಟು ಪಟುವಾಗಿದ್ದ. ರಾಷ್ಟ್ರಪತಿಗಳ ಪ್ರಶಸ್ತಿ ಪಡೆದಿದ್ದ. ಈಗ ಮತ್ತೊಮ್ಮೆ ’ಅತ್ಯುತ್ತಮ ನಟ’ ಪ್ರಶಸ್ತಿ ನೆಪದಲ್ಲಿ ರಾಷ್ಟ್ರಪತಿಗಳ ಎದುರು ನಿಲ್ಲಲಿಕ್ಕೆ ಸಜ್ಜು. ಇದಲ್ಲವೇ ಬದುಕಿನ ಸೌಂದರ್ಯ!

ಪ್ರಕಾಶ್ ರೈ ಕಾಲೇಜು [^] ದಿನಗಳಲ್ಲಿ ಅತ್ಯುತ್ತಮ ಚರ್ಚಾಪಟು ಕೂಡ. ನಾಟಕಗಳಲ್ಲಿ ಕೂಡ ತಮ್ಮ ಮಾತುಗಾರಿಕೆಯಿಂದ ಅವರು ಗಮನಸೆಳೆದಿದ್ದರು. ಬೇಕಿದ್ದರೆ ಈ ಮಾತಿನಮಲ್ಲನನ್ನು ಜಗಳಗಂಟ ಎನ್ನಲಿಕ್ಕೂ ಅಡ್ಡಿಯಿಲ್ಲ. ಲಂಕೇಶ್ ಮೇಷ್ಟ್ರು, ನಾಗೇಶ್ ಮೇಷ್ಟ್ರು- ರೈ ಆಡಿದ ಜಗಳಗಳಿಗೆ ಲೆಕ್ಕವಿಲ್ಲ. ನಾಟಕದಿಂದ ಅವರು ಹೊರಳಿಕೊಂಡಿದ್ದು ಕಿರುತೆರೆಯತ್ತ. ‘ಬಿಸಿಲುಕುದುರೆ’, ‘ಗುಡ್ಡದಭೂತ’ ಧಾರಾವಾಹಿಗಳು ಹೆಸರು ತಂದುಕೊಟ್ಟವು. ಇಲ್ಲಿಯೇ ಉಳಿದಿದ್ದರೆ ಪ್ರಕಾಶ್ ಮತ್ತೊಬ್ಬ ರವಿಕಿರಣ್, ಸುನೀಲ್ ಪುರಾಣಿಕ್ ಅಥವಾ ವೆಂಕಿ ಆಗುತ್ತಿದ್ದರೇನೊ? ಅದೃಷ್ಟ ಬೇರೆಯೇ ಇತ್ತು. ಕೆ.ಬಾಲಚಂದರ್ ಎನ್ನುವ ಮಾಂತ್ರಿಕನ ಕಣ್ಣು ಅವರ ಮೇಲೆ ಬಿದ್ದಿತ್ತು.

‘ಡುಯೆಟ್’ ಮೂಲಕ ಪ್ರಕಾಶ್ ರೈ ತಮಿಳು ಚಿತ್ರರಂಗ ಪ್ರವೇಶಿಸಿದರು. ಎಚ್‌ಎಲ್‌ಎನ್ ಸಿಂಹ ಮುತ್ತುರಾಜನನ್ನು ರಾಜಕುಮಾರ್ [^] ಎಂದು ಕರೆದಂತೆ, ಬಾಲಚಂದರ್ ರೈ ಹೆಸರನ್ನು ರಾಜ್ ಎಂದು ಬದಲಿಸಿದರು (ಕನ್ನಡಿಗರಿಗೇ ಅವರು ಯಾವತ್ತಿಗೂ ರೈ!). ನಂತರದ್ದು ಏಣಿ ಹತ್ತುವ ದಿನಗಳು. ತೆಲುಗು, ತಮಿಳು, ಮಲೆಯಾಳಂ, ಹಿಂದಿ- ಕನ್ನಡಕ್ಕೇ ಅಪರೂಪ ಎನ್ನುವಂತಾದರು ಪ್ರಕಾಶ್. ಆದರೂ, ರೈ ಅಪರೂಪಕ್ಕೆ ಬಿಡುವು ಮಾಡಿಕೊಂಡು ತವರಿಗೆ ಬಂದು ಬಣ್ಣಹಚ್ಚಿಕೊಂಡರು. ತಾರಾ [^] ವರ್ಚಸ್ಸಿನ ಉತ್ತುಂಗದ ದಿನಗಳಲ್ಲಿ ಒಂದು ರೂಪಾಯಿ ಸಂಭಾವನೆ ಪಡೆದು ಶೇಷಾದ್ರಿ ಅವರ ’ಅತಿಥಿ’ ಚಿತ್ರದಲ್ಲಿ ನಟಿಸಿದರು. ಅದು ಪ್ರಕಾಶ್ ರೈ ಕನ್ನಡ ಪ್ರೇಮ. ‘ರಾಮಾಚಾರಿ’, ‘ಹರಕೆಯ ಕುರಿ’, ‘ಏಕಾಂಗಿ’, ‘ನಾಗಮಂಡಲ’, ‘ಬಿಂಬ’- ರೈ ನಟನೆಯ ಎದ್ದು ಕಾಣುವ ಕನ್ನಡ ಚಿತ್ರಗಳು.

ಕೇವಲ ನಟನೆಗಷ್ಟೇ ಸೀಮಿತ ಆಗಿದ್ದಿದ್ದರೆ ಇವತ್ತು ಪ್ರಕಾಶ್ ರೈ ಸಂಭ್ರಮ ಆತ್ಮತೃಪ್ತಿಯ ರೂಪ ಪಡೆದುಕೊಳ್ಳುತ್ತಿರಲಿಲ್ಲವೇನೊ? ಅವರ ಪ್ರಯೋಗಶೀಲ ಮನಸ್ಸು ಸಿನಿಮಾ ನಿರ್ದೇಶನದಲ್ಲೂ ತೊಡಗಿದೆ. ಹೊಸ ಪ್ರತಿಭೆಗಳ ಅಖಾಡಕ್ಕೆ ಕರೆತರುವ ಕೆಲಸದಲ್ಲಿ ಪ್ರಕಾಶ್ ಖುಷಿ ಕಾಣುತ್ತಿದ್ದಾರೆ. ಪ್ರಕಾಶ್ ನಿರ್ಮಾಣದ ‘ಮೊಳಿ’ ಹೊಸ ಅಲೆಯ ಚಿತ್ರ. ಬಾಲಚಂದರ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಚಂದರ್ ನಟಿಸಿದ್ದಾರೆ ಕೂಡ. ‘ದಾಯ’, ‘ಪೊಯ್’, ‘ವೆಳ್ಳಿತಿರೈ’, ‘ಅಭಿಯುಂ ನಾನುಂ’ ಅವರ ನಿರ್ಮಾಣದ ಇತರ ಚಿತ್ರಗಳು. ’ಕಾಂಜೀವರಂ’ ಕಲಶಪ್ರಾಯದ ಚಿತ್ರ.

’ಕಾಂಜೀವರಂ’ ಚಿತ್ರದ್ದು ದುಪ್ಪಟ್ಟು ಸಂಭ್ರಮ. ಅತ್ಯುತ್ತಮ ಚಿತ್ರ ಎನ್ನುವ ಗೌರವದ ಜೊತೆಗೆ ಅತ್ಯುತ್ತಮ ನಟ ಎನ್ನುವ ಸಮ್ಮಾನ. ತನ್ನ ನಿರ್ಮಾಣದ ಚಿತ್ರ ಅತ್ಯುತ್ತಮ ಎನ್ನಿಸಿಕೊಳ್ಳುವುದು, ತನ್ನ ನಟನೆಗೆ ಪುರಸ್ಕಾರ ಸಲ್ಲುವುದು- ಪೂರ್ಣ ತೃಪ್ತಿ ಎಂದದ್ದು ಇದನ್ನೇ.

ಡಬ್ಬಲ್ ಪ್ರಶಸ್ತಿಗಳು ಪ್ರಕಾಶ್‌ಗೆ ಖುಷಿ ಕೊಟ್ಟಿವೆ. ಹಾಗೆಂದು ಅವರು ಮೈಮರೆತಿಲ್ಲ. ‘ಗುಡ್ಡದ ಭೂತ’ ನೆನ್ನೆ ನಡೆದಂಗಿದೆ. ನಾಟಕಗಳು ಮೊನ್ನೆ ನಡೆದ ರೀತಿ ಇದೆ ಎನ್ನುವ ರೈಗೆ ಪ್ರಶಸ್ತಿಗಳ ಬಗ್ಗೆ ಹೆಮ್ಮೆಯಿದ್ದರೂ ಹಮ್ಮಿಲ್ಲ. ’ನನಗೆ ನಾಲ್ಕು ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ (ಕಾಂಜೀವರಂ ಚಿತ್ರದ ಪ್ರಶಸ್ತಿ ಸೇರಿದಂತೆ) ಎಂದರೆ ಅದು ಎಲ್ಲವೂ ಆದಂತೆ ಅಲ್ಲ. ಆ ವರ್ಷದ ಸಿನಿಮಾಗಳ ಪೈಕಿ ನಾನು ಅತ್ಯುತ್ತಮ ನಟ ಎನ್ನುವುದು ಪ್ರಶಸ್ತಿಯ ಅರ್ಥ. ಪ್ರಶಸ್ತಿ ಎನ್ನುವುದು ತುಂಬಾ ಸಾಪೇಕ್ಷವಾದದ್ದು’. ಇದು ಪ್ರಕಾಶ್ ರೈ ವಿನಯ.

’ಸಿನಿಮಾಗೆ ಬಂದಾಗ ನನಗೆ ಮೂವತ್ತು ವರ್ಷ. ಆ ಮೂವತ್ತು ವರ್ಷಗಳ ಕಾಲ ನಾನು ಏನಾಗಿದ್ದೆ, ಸಿನಿಮಾದ ಈವರೆಗಿನ ಅವಧಿಯಲ್ಲಿ ನಾನು ಏನಾಗಿದ್ದೇನೆ- ಇವೆಲ್ಲ ನನಗೇ ಗೊತ್ತು. ಒಂದಂತೂ ನಿಜ, ಇನ್ನೂ ಇಪ್ಪತ್ತು ವರ್ಷಗಳು ನನಗೆ ಬಾಕಿಯಿವೆ ಎಂದಾದರೆ, ಆ ಎರಡು ದಶಕಗಳ ನಂತರವೂ ನಾನು ನಾನಾಗಿಯೇ ಇರ್ತೇನೆ’. ಪ್ರಕಾಶ್ ಮಾತುಗಳಲ್ಲಿ ಯಾವುದು ಅನುಭವ, ಯಾವುದು ಖುಷಿ, ಯಾವುದು ಅಧ್ಯಾತ್ಮ- ವಿಂಗಡಿಸುವುದು ಕಷ್ಟ.

ರಾಷ್ಟ್ರಪ್ರಶಸ್ತಿ ಬಂದಾಯಿತು- ಮುಂದೇನು? ಹಾಗೆ ಪ್ರಶ್ನಿಸಿಕೊಳ್ಳುವುದು ಪ್ರಕಾಶ್ ರೈ ಜಾಯಮಾನ ಅಲ್ಲವೇ ಅಲ್ಲ. ತನ್ನ ಪಾಲಿನ ಕೆಲಸವನ್ನು ತಾನು ಸುಮ್ಮನೆ ಮಾಡುತ್ತಾ ಹೋಗಬೇಕು ಎನ್ನುವುದು ಅವರ ಪಾಲಿಸಿ. ಸದ್ಯ, ತಮ್ಮ ನಿರ್ಮಾಣದ ’ಅಭಿಯುಂ ನಾನುಂ’ ಚಿತ್ರವನ್ನು ಗೆಳೆಯ ಬಿ.ಸುರೇಶ್ ಸಹಕಾರದಲ್ಲಿ ಕನ್ನಡದಲ್ಲಿ ನಿರ್ದೇಶಿಸುವ ಆಸೆ ಅವರದ್ದು. ಯಾವಾಗ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಅಂದಹಾಗೆ, ನಟನೆಯ ನಿಟ್ಟಿನಲ್ಲಿ ಪ್ರಕಾಶ್ ರೈ ಅವರ ಕನಸೇನು ಗೊತ್ತಾ? ಗಿರೀಶ್ ಕಾಸರವಳ್ಳಿ ಚಿತ್ರದಲ್ಲಿ ನಟಿಸಬೇಕು ಎನ್ನುವುದು. ಈ ಹಂಬಲವನ್ನು ಕಾಸರವಳ್ಳಿ ಅವರಲ್ಲಿ ತೋಡಿಕೊಂಡೂ ಇದ್ದಾರೆ. ಯಾರಿಗೆ ಗೊತ್ತು, ಕನ್ನಡ [^]ದಲ್ಲಿ ಗಿರೀಶ್-ಪ್ರಕಾಶ್ ಕಾಂಬಿನೇಷನ್ ಸಾಧ್ಯವಾಗಿ ’ಕಾಂಜೀವರಂ’ ಇತಿಹಾಸ ಮರುಕಳಿಸಲೂಬಹುದು.

(Courtesy: thatskannada.com)

ಮಂಗಳವಾರ, ಆಗಸ್ಟ್ 4, 2009

ಮರಬೆಳೆಸಿದರೆ ರೈತರ ಆತ್ಮಹತ್ಯೆ ತಡೆಯಬಹುದು-ಯೋಗಾರಮೇಶ್


ಅರಕಲಗೂಡು: ಬೆಳೆ ನಾಶದಿಂದ ಬೇಸತ್ತ ರೈತ ಸಾಯುವುದನ್ನು ಮರಬೆಳೆಯುವುದರಿಂದ ತಪ್ಪಿಸಬಹುದು ಎಂದು ಸಮಾಜ ಸೇವಕರಾದ ಯೋಗಾರಮೇಶ್ ಹೇಳಿದ್ದಾರೆ.
ಪರಿಸರ ಜಾಗೃತಿ ಮೂಡಿಸಲುತಾಲ್ಲೂಕಿನ ಹೊಳಲಗೋಡು ಗ್ರಾಮದಲ್ಲಿ 10ಸಾವಿರ ವಿವಿಧ ಜಾತಿಯ ಸಸಿಗಳನ್ನುಉಚಿತವಾಗಿ ವಿತರಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ರೈತರ ಆತ್ಮಹತ್ಯೆ ಸೋಂಕು ರೋಗದಂತಾಗಿದೆ, ಸರ್ಕಾರಗಳು ರೈತರ ನೆರವಿಗೆ ಧಾವಿಸುತ್ತಿಲ್ಲ, ಸೂಕ್ತ ಸಮಯದಲ್ಲಿ ರೈತರಿಗೆ ಮಾರ್ಗದರ್ಶನ ಸಿಗುತ್ತಿಲ್ಲ ೆಂದು ವಿಷಾದಿಸಿದರು. ರೈತರು ತಮ್ಮ ಜಮೀನಿನ ಸುತ್ತ ಸಸಿ ಬೆಳೆಸಿದಲ್ಲಿ ಅದು ಅವರನ್ನು ಕಾಯುತ್ತದೆ, ಆಗ ಬೆಳೆ ನಷ್ಟವಾಯಿತೆಂದು ಯಾರು ಸಾಯಬೇಕಿಲ್ಲ, ಗಿಡ ಬೆಳೆಸುವುದು ಸಾಮಾಜಿಕ ಚಳುವಳಿಯಾಗಬೇಕು. ಒಂದು ಧೇಶದ ಅರಣ್ಯ ಸಂಪತ್ತು ಆ ದೇಶದ ಾರ್ಥಿಕತೆಯ ಬೆನ್ನೆಲುಬಾಗಿರುತ್ತದೆ ಎಂದು ನುಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಉಪನ್ಯಾಸಕಿ ಅನಸೂಯ ಜನಪದರ ಜೀವನದಲ್ಲಿ ಗಿಡ, ಮರಗಳಿಗೆ ಅದರದ್ದೆ ಆದ ಆದ್ಯತೆಯನ್ನು ನೀಡಲಾಗಿದೆ, ಕಾಲಾನಂತರದಲ್ಲಿ ಹಳ್ಳಿಗಳಲ್ಲಿ ಆಧುನೀಕರಣ ಪೃಕೃತಿಯ ನಾಶಕ್ಕೆ ಕಾರಣವಾಗಿದೆ, ಪರಿಣಾಮ ಕೃಷಿಯ ಮೇಲೆ ಆಗುತ್ತಿದೆ, ಮಳೆ-ಬೆಳೆ ನಿಗದಿತ ಸಮಯಕ್ಕೆ ಆಗುತ್ತಿಲ್ಲ ಆದ್ದರಿಂದ ಗಿಡಮರಬೆಳೆಸಿ ಬದುಕನ್ನು ಪಾವನವಾಗಿಸಿಕೊಳ್ಳಿ ಎಂದರು. ಆಶೀರ್ವಚನ ನೀಡಿ ಮಾತನಾಡಿದ ದೊಡ್ಡಮಠದ ಶ್ರೀ ಮಲ್ಲಿಕಾರ್ಜುನಸ್ವಾಮೀಜಿ ಪೃಕೃತಿ ದೇವರ ಸಮಾನ, ಮರ-ಗಿಡಗಳ ಬದುಕಿನ ಆಸರೆಯಾಗುತ್ತವೆ, ಕೃಷಿಗೆ ಆದಯತೆ ಕೊಟ್ಟಷ್ಟು ಮರಗಿಡ ಬೆಳೆಸಲು ಕಷ್ಠ ಪಡಬೇಕಿಲ್ಲ ಆದ್ದರಿಮದ ಜಾಗೃತರಾಗಿ ಮನುಕುಲಕ್ಕೆ ಒಳಿತಾಗುವ ಪೃಕೃತಿ ಕೊಡುಗೆ ನೀಡಿ ಎಂದರು. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಹುಲುಕೋಡಯ್ಯ,ಮುಖಂಡರಾದ ಬೊಮ್ಮೇಗೌಡ, ರೈತಸಂಘದ ಹೊ ತಿ ಹುಚ್ಚಪ್ಪ, ಗ್ರಾ.ಪಂ. ಅಧ್ಯಕ್ಷರಾದ ಬಸವರಾಜು, ವಕೀಲ ಸತ್ಯನಾರಾಯಣ ುಪಸ್ಥಿತರಿದ್ದರು. ಹೊಳಲಗೋಡು ಮತ್ತು ಸುತ್ತಮುತ್ತಲ ಗ್ರಾಮಗಳ ರೈತರಿಗೆ ಸಸಿಗಳನ್ನು ವಿತರಿಸಲಾಯಿತು. ಮುಂದಿನ ವಾರ ಮಲ್ಲಿಪಟ್ಟಣ ಹೋಬಳಿಯ ಆಲದಹಳ್ಳಿ ಗ್ರಾಮದಲ್ಲಿ ಗಿಡ ವಿರಿಸಲಾಗುವುದು, ಗಿಡಬೆಳೆಸುವ ಆಂಧೋಲನವನ್ನು ಈ ಮೂಲಕ ತಾಲ್ಲೂಕಿನಾಧ್ಯಂತ ನಡೆಸಲಾಗುತ್ತಿದೆ. ಪರಿಸರ ಜಾಗೃತಿ ಇದರ ಉದ್ದೇಶ ಎಂದು ಯೋಗಾರಮೇಶ್ ಪತ್ರಿಕೆಗೆ ತಿಳಿಸಿದರು.

ಶುಕ್ರವಾರ, ಜುಲೈ 31, 2009

ವಿದೇಶ ಪ್ರವಾಸಕ್ಕೆ ಶುಭಹಾರೈಕೆ





ಅರಕಲಗೂಡು ತಾಲ್ಲೂಕಿನ ಜನಪ್ರಿಯ ಶಾಸಕರು ಮತ್ತು ಹಾಸನ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರು ಆದ ಶ್ರೀ ಎ. ಮಂಜು ರವರ ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಿಗೆ ದಿನಾಂಕ 29-07-2009 ತೆರಳಿರುತ್ತಾರೆ, ವಿದೇಶ ಪ್ರವಾಸ ತೆರಳುತ್ತಿರುವ ಈ
ಸಂಧರ್ಭದಲ್ಲಿ ಸುಖಕರ ಪ್ರಯಾಣಕ್ಕೆ ಶುಭಹಾರೈಸುವ

ಚಿತ್ರ 1. ನಂದಕುಮಾರ್ (ಗಹನ)
ಶಾಸಕರ ಆಪ್ತ ಸಹಾಯಕರು
2. ಎ. ಸಿ. ರಮೇಶ್ (ಎಸಿಆರ್)
ಅರಕಲಗೂಡು
3. ಸನ್ಮಾನ್ಯ ಶ್ರೀ ಎ. ಮಂಜು ರವರು


ಶುಕ್ರವಾರ, ಜುಲೈ 24, 2009

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಇದು ಕಟ್ಟೆಪುರ ಕಟ್ಟೆಯ ಕರ್ಮಕಾಂಡ





1.ಕೃಷ್ಣರಾಜಕಟ್ಟೆಯ ಬಲದಂಡೆ ನಾಲೆಯ ಬಳಿ ಗೋಡೆ ಕುಸಿದು ನೀರು ಹರಿಯುತ್ತಿರುವುದು

2.ಅರಕಲಗೂಡು ತಾಲೂಕಿನ ಕೃಷ್ಣರಾಜ ಕಟ್ಟೆಯ ತಡೆಬಾಗಿಲುಗಳು ನಾಶಹೊಂದಿದ ಪರಿಣಾಮ ನುಗ್ಗುತ್ತಿರುವ ನೀರು
3. ಕೃಷ್ಣರಾಜಕಟ್ಟೆಯ ಕಟ್ಟೆಪುರ ಎಡದಂಡೆಬಳಿ ಎರಡು ಗೇಟುಗಳು ಮುರಿದ ಪರಿಣಾಮ ಹೊರಬರುತ್ತಿರುವ ನೀರು
4. ಕೃಷ್ಣರಾಜ ಕದಟ್ಟೆಯ ಬಲದಂಡೆ ಜಾಕ್ ವೆಲ್ ಬಳಿ ಅಳವಡಿಸಲಾಗಿರುವ 4ಹೊಸಗೇಟ್ ಗಳು ಕಿತ್ತು ಬಂದಿರುವುದು
5. 2ತಿಂಗಳ ಹಿಂದೆ ಗೇಟ್ ಅಳವಡಿಸುವಾಗ ಸಮರ್ಪಕ ಕಾಮಗಾರಿ ಮಾಡದೇ ಕಿತ್ತುಹೋದ ಗೇಟ್ ಹಾಗು ತುಕ್ಕು ಹಿಡಿದಿರುವುದು.

ಳೆದ ವಾರ ಅರಕಲಗೂಡು ತಾಲೂಕಿನ ಕಟ್ಟೆಪುರ ಗ್ರಾಮದಲ್ಲಿರುವ ಕೃಷ್ಣರಾಜ ಕಟ್ಟೆಗೆ ಏಕಾಏಕಿ 9ಸಾವಿರ ಕ್ಯೂಸೆಕ್ಸ ನೀರು ಹರಿದು ಬಂದ ಪರಿಣಾಮ ಕಟ್ಟೆಯ 2ಬದಿ ಅಳವಡಿಸಲಾಗಿರುವ 18ಜಾಕ್ವೆಲ್ ಬಾಗಿಲುಗಳ ಪೈಕಿ 6ಬಾಗಿಲುಗಳು ಮುರಿದಿವೆ ಮತ್ತು ತೆರೆಯಲು ಆಗದ ಸ್ಥಿತಿಯಲ್ಲಿ ಮಡಚಿಕೊಂಡಿವೆ. ಪರಿಣಾಮ ರೈತರ ಬೆಳೆಗಳಿಗೆ ಸಂಗ್ರಹಿಸಲಾಗುತ್ತಿದ್ದ ಸಾವಿರಾರು ಕ್ಯೂಸೆಕ್ಸ ನೀರು ಪೋಲಾಗುತ್ತಿದೆ. ಇದರಿಂದಾಗಿ ಈ ಬಾಗದಲ್ಲಿ ಶುಂಠಿ ಹಾಗೂ ತೋಟದ ನೂರಾರು ಎಕರೆ ಬೆಳೆ ನೆರೆಯಹಾವಳಿಗೆ ತುತ್ತಾಗಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅಧಿಕೃತ ಮಾಹಿತಿಗಳೊಂದಿಗೆ ಪತ್ರಿಕೆ ವರದಿ ಪ್ರಕಟಿಸಿತ್ತು. ಆದರೆ ಹಾರಂಗಿ ಜಲಾಶಯ ಯೋಜನೆಯ ಅಧಿಕಾರಿಗಳು ಇಲ್ಲಿನ ಕಾಮಗಾರಿಗಳಲ್ಲಿ ಎಸಗಿರುವ ತಪ್ಪು ಮತ್ತು ಕಳಪೆ ಕಾಮಗಾರಿ ನಿರ್ವಹಣೆ ಬಯಲಿಗೆ ಬಂದಿತೆನ್ನುವ ಭಯಕ್ಕೆ ಬಿದ್ದು ತರಾತುರಿಯಲ್ಲಿ ಪತ್ರಿಕಾಹೇಳಿಕೆ ನೀಡಿ ಪತ್ರಿಕೆಯ ವರದಿಯನ್ನು ಅಲ್ಲಗೆಳೆದಿತ್ತು. ಆದರೆ ಸಾರ್ವಜನಿಕರಿಗೆ ವಿಶ್ವಾಸಾರ್ಹ ಮಾಹಿತಿ ಒದಗಿಸುವ ದೃಷ್ಠಿಯಿಂದ ಪತ್ರಿಕೆ ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ಈ ವರದಿ ನೀಡಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಹಳೆಯ ಜಾಕ್ವೆಲ್ ಬಾಗಿಲುಗಳನ್ನು ತೆಗೆದು 18ಹೊಸ ಬಾಗಿಲುಗಳನ್ನು ಅಳವಡಿಸಿರುವ ಅಧಿಕಾರಿಗಳು ಕಳಪೆಯಾಗಿ ಕಾಮಗಾರಿ ನಿರ್ವಹಿಸಿದ ಪರಿಣಾಮ ಬಾಗಿಲು ಗಳು ಹಾನಿಗೊಳಗಾಗಿವೆ ಮತ್ತು ಕಟ್ಟೆಯ ಬಲದಂಡೆ ಬಳಿ ಕಟ್ಟಡವೇ ಕಿತ್ತುಹೋಗಿದೆ, ಎಡದಂಡೆ ಬಳಿ ನೀರು ಸೋರಿಕೆಯಾಗುತ್ತಿದೆ. ಮಳೆ ಹೆಚ್ಚಿನ ಪ್ರಮಾಣದಲ್ಲಿ ಬಿದ್ದರೆ ಕಟ್ಟೆ ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿಗಳು ಹಾರಂಗಿ ಜಲಾಶಯದ ಅಧಿಕಾರಿಗಳ ವರದಿಯನ್ನು ನೆಚ್ಚಿ ಕೂರದೇ ಸ್ಥಳಕ್ಕೆ ಭೇಟಿ ನೀಡಿದರೆ ವಾಸ್ತವ ಪರಿಸ್ಥಿತಿ ಅರಿಯಬಹುದು.




























































ಭಾನುವಾರ, ಜುಲೈ 19, 2009

ಬಾ ಮಳೆಯೇ ಬಾ....

ರಾಜ್ಯದ ವಿವಿದೆಡೆ ಸಮೃದ್ಧವಾಗಿ ಮಳೆಯಾಗುತ್ತಿದೆ. ಈ ಬಾರಿ ಮುಂಗಾರು ತಡವಾಗಿ ಆರಂಭವಾದರೂ ದಿನದಿಂದ ದಿನಕ್ಕೆ ಪಡೆದುಕೊಂಡ ಬಿರುಸು, ರಾಜ್ಯದ ಪ್ರಮುಖ ಜಲಾಶಯಗಳು ಮೈದುಂಬಿಕೊಳ್ಳಲು ಕಾರಣವಾಗಿದೆ. ಮುಂಗಾರು ತಡವಾದಾಗ ಅಲ್ಲಲ್ಲಿ ರೈತರ ಬೆಳೆಗಳಿಗೆ ರೋಗ ರುಜಿನ ತಗುಲುವ ಬೀತಿಯ ಜೊತೆಗೆ, ಬೆಳೆ ಒಣಗಿ ಹೋಗುವ ಸ್ಥಿತಿ ಸೃಷ್ಠಿಯಾಗಿತ್ತು. ಮುಂಗಾರು ಆರಂಬದ ಮುನ್ನ ದಿನಗಳ ಬಿಸಿಲ ತೀವ್ರತೆಯೂ ಸಹಾ ದಕ್ಷಿಣದ ಜಿಲ್ಲೆಗಳಲ್ಲಿ ಹಿಂದಿಗಿಂತ ಹೆಚ್ಚಾಗಿತ್ತು. ಮುಂದೇನೋ ಎಂದು ರೈತ ಇಲ್ಲಿ ಕೈ ಹೊತ್ತು ಕುಳಿತಿದ್ದರೆ, ಮುಂದಿನ ಪರಿಸ್ಥಿತಿ ಏನು? ಬಿತ್ತನೆ ಬೀಜ, ರಸಗೊಬ್ಬರ,ವಿದ್ಯುತ್ಕೊರತೆ ಬರಲಿರುವ ದಿನಗಳಿಗೆ ಹೇಗೆ ಸಜ್ಜಾಗಬೇಕು? ಎಂದು ಚಿಂತಿಸದೇ ಹೊಣೆಗೇಡಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟ ದರ್ಜೆ ಸಚಿವರು ಮಳೆಯ ಬಗೆಗೆ, ವಿದ್ಯುತ್ತಿನ ಬಗ್ಗೆ ದಿನಕ್ಕೊಂದು ಬಗೆಯ ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕ ಪ್ರಹಸನ ಆರಂಭಿಸಿದ್ದರು. ಸಿಎಂ ಯಡ್ಡಿಯೂರಪ್ಪ ತಿರುಪತಿಗೆ, ಚೆನ್ನೈ ಗೆ ಮಳೆಗಾಗಿ ಪ್ರಾರ್ಥಿಸಲು ಹೋಗಿದ್ದರು.! ಇನ್ನು ಒಂದು ಹೆಜ್ಜೆ ಮುಂದೆ ಹೋದ ಮೂರ್ಖರು ಸಾರ್ವಜನಿಕರ ತೆರಿಗೆ ಹಣದಲ್ಲಿ ಅನಾಮತ್ತು 33ಲಕ್ಷರೂಪಾಯಿಗಳನ್ನು ರಾಜ್ಯದ ವಿವಿಧ ದೇಗುಲಗಳಲ್ಲಿ ಮಳೆಗಾಗಿ ಪ್ರಾರ್ಥಿಸಲು ವೆಚ್ಚ ಮಾಡಿದರು..! ಕರೆಂಟ್ ಮಂತ್ರಿ ವಿದ್ಯುತ್ ಕಡಿತದ ಬಗ್ಗೆ ಒಂದು ಸ್ಪಷ್ಟ ನಿಲುವು ಪ್ರಕಟಿಸಲಾರದೇ ಹೋದರು. ಪರಿಣಾಮ ಜನ ಅನಿಯಮಿತ ವಿದ್ಯುತ್ ಕಡಿತದಿಂದ ತೊಂದರೆ ಪಡುವಂತಾಯಿತು. ಅಂತೂ ಇಂತೂ ಮುಂಗಾರು ಮಳೆ ಬಂತು ಇವರು ಬಚಾವಾದರು. ಇವರ ಮಂಗಾಟ ಇದೇ ಮೊದಲಲ್ಲ,ಸರ್ಕಾರದ ರಚನೆಯಾದಾಗ ಮುಜುರಾಯಿ ದೇಗುಲಗಳಲ್ಲಿ ಸಿಎಂ ಯಡಿಯೂರಪ್ಪನ ಹೆಸರಿನಲ್ಲಿ ಪ್ರಥಮ ಪೂಜೆ ಸಲ್ಲಿಸುವ ಪ್ರಸ್ತಾಪ ಮಾಡಿ ಮುಜುಗುರ ಅನುಭವಿಸಿದ್ದರು, ನಂತರ ತಿರುಪತಿ ಲಡ್ಡುಗಳನ್ನು ತಂದು ಹಂಚುವ ಕೆಲಸ ಮಾಡಿದರು, ಶಿವರಾತ್ರಿ ಸಂಧರ್ಭದಲ್ಲಿ ಗಂಗಾಜಲವನ್ನು ತಂದು ದೇಗುಲಗಳಿಗೆ ನೀಡಿದರು..! ಇಂತಹ ಮಹಾನ್ ಕಾರ್ಯಗಳಿಂದ ಸಾರ್ವಜನಿಕರಿಗೆ ಆದ ಪ್ರಯೋಜನವೇನು? ಈ ಯೋಜನೆಗಳಿಗೆ ಖಜಾನೆಯಿಂದ ಸಾರ್ವಜನಿಕರ ಎಷ್ಟು ಕೋಟಿ ಹಣ ವೆಚ್ಚವಾಗಿದೆ ಎಂಬುದು ಈಗ ಚರ್ಚೆಯಾಗ ಬೇಕಾಗಿದೆ. ರಾಜ್ಯದಲ್ಲಿ ಮುಜುರಾಯಿಗೆ ಸೇರಿದ ಸಾವಿರಾರು ದೇಗುಲಗಳಿವೆ, ಅವುಗಳ ಜೀರ್ಣೊದ್ದಾರಕ್ಕೆ, ಅದನ್ನು ನೋಡಿಕೊಳ್ಳುವ ಅರ್ಚಕರು, ಪಾರುಪತ್ತೆಗಾರರುಗಳಿಗೆ ಸರಿಯಾದ್ದೊಂದು ದಾರಿ ಮಾಡುವ ಯೋಗ್ಯತೆ ಇಲ್ಲದ ಈ ಸರ್ಕಾರಕ್ಕೆ ಲಾಡು, ಗಂಗಾಜಲ, ಮಳೆಪೂಜೆ ಇವೆಲ್ಲಾ ಬೇಕಾ? ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ತೊಗರಿಗೆ ನಿಗದಿತವಾದ ಬೆಂಬಲ ಬೆಲೆ ಸಿಗಲಿಲ್ಲ, ಹಾಸನ ಜಿಲ್ಲೆಯ ರೈತ ಬೆಳೆದ 100ಕೋಟಿಗೂ ಹೆಚ್ಚು ಮೊತ್ತದ 40ಸಾವಿರ ಹೆಕ್ಟೇರುಗಳಲ್ಲಿ ಬೆಳೆದ ಬೆಳೆ ಹಾಳಾಯ್ತು, ರಾಜ್ಯಾಧ್ಯಂತ ರಸಗೊಬ್ಬರದ ಸಮಸ್ಯೆ ಉಲ್ಭಣಿಸಿತ್ತು, ಹೇಳುವವರು, ಕೇಳುವವರಿಲ್ಲದೇ ಅನಾಥನಾದ ರೈತ ಕಣ್ಣೀರಿಟ್ಟ, ಹತಾಶನಾಗಿ ನೇಣಿಗೆ ಶರಣಾದ ಈ ಬಗ್ಗೆ ಕಿಂಚಿತ್ತ ಕಾಳಜಿ ವಹಿಸದ ಸರ್ಕಾರ ಯಾತಕ್ಕೂ ಬೇಡದ ಯೋಜನೆಗಳನ್ನು ಪ್ರಕಟಿಸುತ್ತಾ ಜನರನ್ನು ವಂಚಿಸಿದೆ, ಕಳೆದ ಎರಡು ಸರ್ಕಾರಗಳಲ್ಲಿ ಬಿತ್ತನೆ ಗೊಬ್ಬರಕ್ಕೆ ಹೆಚ್ಚಿನ ರಿಯಾಯ್ತಿ ಇತ್ತು ಈ ಭಾರಿ ಅದು ಶೇ.25ಕ್ಕೆ ಇಳಿದಿದೆ, ಎತ್ತು ಗಾಡಿ ಯೋಜನೆ ಎಕ್ಕ ಎದ್ದು ಹೋಗಿದೆ. ಹೀಗೆ ವಾಸ್ತವ ನೆಲೆಗಟ್ಟಿನಲ್ಲಿ ಚರ್ಚೆಯಾದಗೆಲ್ಲ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರುವ ಚಾಳಿ ಬೆಳೆಸಿಕೊಂಡಿರುವ ರಾಜ್ಯ ಸರ್ಕಾರ ತನ್ನಲ್ಲಿ ಒಂದು ಗುಪ್ತಚರ ಇಲಾಖೆ ಇದೆ, ತನ್ನ ರಾಜ್ಯದ ರೈತರಿಗೆ ಯಾವ ಗೊಬ್ಬರ ಬೇಕು, ಯಾವಾಗ ಬೇಕು? ಎಂದೆಲ್ಲ ಯೋಚಿಸಿದ್ದರೆ ಸಮಸ್ಯೆ ನಿಬಾಯಿಸುವುದು ಯಾವುದೆ ಸರ್ಕಾರಕ್ಕೂ ಕಷ್ಠ ಸಾಧ್ಯವಲ್ಲ. ಈಗ ಸದನ ಕಲಾಪಗಳು ನಡೆಯಲಾರಂಭಿಸಿವೆ, ಮಾನ್ಯ ಚುನಾಯಿತ ಮಹನೀಯರುಗಳೇ ಸದನದಲ್ಲಿ ಈ ವಿಚಾರ ಚರ್ಚೆಯಾಗಲಿ.
ಇರಲಿ ಹಾಸನ ಜಿಲ್ಲೆ ಈಗ ರಾಜಕೀಯ ಅಸ್ಪೃಶ್ಯತೆಯನ್ನು ಎದುರಿಸುತ್ತಿದೆ, ಎಲ್ಲ ವಿಚಾರಗಳಲ್ಲು ಹಾಳು ರಾಜಕೀಯ ಮುಂದು ಮಾಡಿಕೊಂಡು ಸಾರ್ವಜನಿಕವಾದ, ಅವಶ್ಯಕವಾದ ಅಬಿವೃದ್ದಿ ಕೆಲಸಗಳಿಗೆ ಸಿ ಎಂ ಯಡಿಯೂರಪ್ಪ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ, ಇದು ಕೃಷಿ ಪ್ರಧಾನ ಜಿಲ್ಲೆ , ಆರ್ಥಿಕ ವಲಯದಲ್ಲಿ ಬರುವ ಪ್ರಮುಖ ಜಿಲ್ಲೆ ಹಾಗಿದ್ದಾಗ್ಯೂ ಇಲ್ಲಿನ ಜನರ ನೋವಿಗೆ ದನಿಯಾಗದ ಯಡಿಯೂರಪ್ಪ ಜಿಲ್ಲೆಯ ಜನರನ್ನು ನೋಡಲು ಬಂದಿದ್ದು ಮತಯಾಚನೆಗೆ ಮಾತ್ರ. ಚುನಾವಣೆಗಳಲ್ಲಿ ಜಿಲ್ಲೆಯ ಜನತೆ ಬೇರೆ ರಾಜಕೀಯ ಪಕ್ಷಗಳಿಗೆ ತೋರಿದಷ್ಟೇ ಆದರವನ್ನು ಬಿಜೆಪಿಗೂ ತೋರಿದ್ದಾರೆ. ಹಾಗಿದ್ದಾಗ್ಯೂ ಯಡಿಯೂರಪ್ಪ ಮಲತಾಯಿ ಧೋರಣೆ ತೋರಬಹುದೇ. ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾಗಿದೆ ಜಿಲ್ಲೆಗೆ ನೇಮಕವಾದ ಉಸ್ತುವಾರಿ ಸಚಿವರೇ ನಾಪತ್ತೆಯಾಗಿದ್ದಾರೆ..! ಜಿಲ್ಲೆಯಲ್ಲಿ ಅಧಿಕಾರಿಗಳದ್ದೇ ದರ್ಬಾರು, ಯಾವ ಅಭಿವೃದ್ದಿ ಕೆಲಸವಾಗಬೇಕು, ನಡೆಯುತ್ತಿರುವ ಕೆಲಸ ಯಾವ ಹಂತದಲ್ಲಿದೆ, ಏನು ಅಡಚಣೆಯಾಗಿದೆ, ಜಿಲ್ಲೆಯ ಜನರ ಸಂಕಷ್ಟಗಳೇನು?ಅವರ ನಿರೀಕ್ಷೆಗಳೇನು ಕೇಳಿಸಿಕೊಳ್ಳುವವರು ಯಾರು ಸ್ವಾಮಿ? ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸದನದಲ್ಲಿ ಏನು ಮಾಡುತ್ತಾರೋ ಕಾದು ನೋಡಬೇಕು. ಒಂದು ವೇಳೆ ಅಲ್ಲಿಯೂ ಜಿಲ್ಲೆಯ ಶಾಸಕರುಗಳು ಅಸ್ಪೃಶ್ಯತೆ ಅನುಭವಿಸಿದರೆ ಅದು ಜಿಲ್ಲೆಯ ಜನತೆಗೆ ಶಾಪವೇ...
ಜಿಲ್ಲೆಯ ಯಗಚಿ, ಹೇಮಾವತಿ, ವಾಟೆಹೊಳೆ ಅಣೆಕಟ್ಟೆಯ ಜೊತೆಜೊತೆಗೆ ಕಾವೇರಿ ನದಿಯ ಮೊದಲ ಕಟ್ಟೆ ಎಂದೇ ಹೆಸರಾಗಿರುವ ಕಟ್ಟೇಪುರ ಕಟ್ಟೆ ಭೋರ್ಗರೆದು ಹರಿಯುತ್ತಿವೆ. ಸ್ವಲ್ಪ ಪ್ರಮಾಣದಲ್ಲಿ ಬಿತ್ತನೆಯಾಗಿರುವ ಆಲೂಗಡ್ಡೆ ಯಥಾಪ್ರಕಾರ ರೋಗಕ್ಕೆ ತುತ್ತಾಗಿದೆ, ಉಳಿದಂತೆ ಅಡಿಕೆ,ತಂಬಾಕು, ಹೂವು, ತರಕಾರಿ ಬೆಳೆಗಳು, ಭತ್ತ, ಜೋಳ ಇತ್ಯಾದಿ ಉತ್ತಮವಾಗಿದೆ. ಸಧ್ಯ ಜಿಲ್ಲೆಯಲ್ಲಿ ಗೊಬ್ಬರ ಸಮಸ್ಯೆಯಾಗಿಲ್ಲ. ಅಷ್ಟರಮಟ್ಟಿಗೆ ರೈತ ಸಂತಸದಲ್ಲಿದ್ದಾನೆ.

ಮಂಗಳವಾರ, ಜುಲೈ 14, 2009

ತಂಬಾಕು ಬಂಪರ್ ಬೆಳೆ: ಇಮ್ಮುಡಿಯಾದ ರೈತರ ಉತ್ಸಾಹ



(ವಿಶೇಷ ವರದಿ) ಸಿ . ಜಯಕುಮಾರ್



ತಂಬಾಕು ಬೆಳೆಗಾರರು ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ 2ವರ್ಷಗಳಿಂದ ಈ ಭಾಗದಲ್ಲಿ ಬೆಳೆಯುವ ತಂಬಾಕಿಗೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಧಾರಣೆಗಿಂತ ಹೆಚ್ಚಿನ ಧಾರಣೆ ದೊರೆತಿರುವುದು ರೈತರ ಉತ್ಸಾಹವನ್ನು ಇಮ್ಮುಡಿಸುವಂತೆ ಮಾಡಿದೆ. ಇಲ್ಲಿನ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2007ರಲ್ಲಿ ೧೭.5ಮಿಲಿಯನ್ ತಂಬಾಕು ಮಾರಾಟವಾಗಿದ್ದರೆ 2008ರಲ್ಲಿ ೨೧.5ಮಿಲಿಯನ್(1ಮಿಲಿಯನ್=೧೦,೦೦,000ಕೆಜಿ) ತಂಬಾಕು ಹರಾಜಾಗಿದೆ.ಮತ್ತು ಕ್ರಮವಾಗಿ 2007ರಲ್ಲಿ 102ಕೋಟಿ, 2008ರಲ್ಲಿ 235ಕೋಟಿ ವಹಿವಾಟು ನಡೆದಿದೆ. ಕೇವಲ ಒಂದೇ ವರ್ಷದಲ್ಲಿ 133ಕೋಟಿ ಹೆಚ್ಚಿನ ವಹಿವಾಟು ನಡೆದಿದೆ. ಈ ಬಾರಿ ಅದು ದುಪ್ಪಟ್ಟು ಆಗುವ ಸಾಧ್ಯತೆ ನಿಚ್ಚಳವಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ಹರಾಜು ಮಾರುಕಟ್ಟೆ ಅಧೀಕ್ಷಕ ಶಿವರುದ್ರಯ್ಯಕಳೆದ ಬಾರಿಗಿಂತ ೩.5ಮಿಲಿಯನ್ ನಷ್ಟು ತಂಬಾಕು ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ, ಒಟ್ಟಾರೆಯಾಗಿ 25ಮಿಲಿಯನ್ ತಂಬಾಕು ಮಾರುಕಟ್ಟೆಗೆ ಆವಕವಾಗುವುದೆಂದು ನಿರೀಕ್ಷಿಸಲಾಗಿದೆ ಎಂದರು. ಇದುವರೆಗೂ ರಾಮನಾಥಪುರ ಮಾರುಕಟ್ಟೆ ವ್ಯಾಪ್ತಿಯಲ್ಲಿ ಭವ್ಯ, ರತ್ನ ದಂತಹ ತಳಿಗಳನ್ನು ಬೆಳೆಯಲಾಗುತ್ತಿತ್ತು. ಕಳೆದ 2ವರ್ಷಗಳಲ್ಲಿ ಕಾಂಚನ ಎಂಬ ನೂತನ ತಳಿಯನ್ನು ರೈತರು ಬೆಳೆದಿದ್ದಾರೆ ಅದು ಅಧಿಕ ಇಳುವರಿ ನೀಡಿದೆ ಹಾಗು ನಿರಿಕ್ಷೆಗು ಮೀರಿದ ಬೆಲೆ ರೈತರಿಗೆ ಸಿಕ್ಕಿರುವುದು ತಂಬಾಕು ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಕಾರಣವಾಗಿದೆ ಎಂದರು. ಕಳೆದ ವರ್ಷ ಶಿವಮೊಗ್ಗದ ತಂಬಾಕು ಮಾರುಕಟ್ಟೆಯನ್ನು ರಾಮನಾಥಪುರಕ್ಕೆ ವರ್ಗಾಯಿಸಿರುವುದರಿಂದ ಇಲ್ಲಿನ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿ ವಿಸ್ತಾರವಾದಂತಾಗಿದೆ. ರಾಮನಾಥಪುರದಲ್ಲಿ ೭ ಹಾಗೂ 63ಪ್ಲಾಟ್ ಫಾರಂಗಳು ಸ್ಥಾಪನೆಯಾಗಿವೆ. ಈ ಮಾರುಕಟ್ಟೆಗೆ ತಾಲ್ಲೂಕಿನ ರಾಮನಾಥಪುರ, ದೊಡ್ಡಮಗ್ಗೆ, ಮಲ್ಲಿಪಟ್ಟಣ ಕೊಣನೂರು ಹೋಬಳಿ ಸೇರಿದಂತೆ ಹೊಳೆನರಸೀಪುರದ ಹಳ್ಳಿ ಮೈಸೂರು, ಕೊಡಗಿನ ಶನಿವಾರಸಂತೆ ,ಹೆಬ್ಬಾಲೆ,ತೊರೆನೂರು, ಮೈಸೂರು ಜಿಲ್ಲೆಯ ಸಾಲಿಗ್ರಾಮ, ಹನಸೋಗೆ, ಜಿಲ್ಲೆಯ ಆಲೂರು ಹಾಗೂ ಶಿವಮೊಗ್ಗದಿಂದ ತಂಬಾಕು ಆವಕವಾಗುತ್ತದೆ.
ದೇಶದಲ್ಲಿಯೇ ಅತ್ಯುತ್ಕ್ರುಷ್ಠ ತಂಬಾಕು ಬೆಳೆಯನ್ನು ರಾಮನಾಥಪುರ ಹಾಗೂ ಪಿರಿಯಾಪಟ್ಟಣ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿದೆ. ಈ ಭಾಗದ ಕೆಂಪು ಮಣ್ಣು ಹಾಗೂ ಅದರ ನೀರು ಹಿಡಿದಿಡುವ ಸಾಮರ್ಥ್ಯ ೬.೫ ರಷ್ಟಿರುವುದು ಸಹಾ ತಂಬಾಕು ಉತ್ಕ್ರಷ್ಠತೆಗೆ ಪೂರಕವಾಗಿದೆ. ಸಧ್ಯ ತಾಲ್ಲೂಕಿನಲ್ಲಿ 11500ಮಂದಿ ಅಧಿಕೃತ ತಂಬಾಕು ಬೆಳೆಗಾರರಿದ್ದು 5000ದಷ್ಟು ಅನಧಿಕೃತ ತಂಬಾಕು ಬೆಳೆಗಾರರಿದ್ದಾರೆ. ಅನಧಿಕೃತ ಬೆಳೆಗಾರರನ್ನು ಅಧಿಕೃತಗೊಳಿಸಲು ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದು ಅಧೀಕ್ಷಕ ಶಿವರುದ್ರಯ್ಯ ಹೇಳುತ್ತಾರೆ. ಈ ವರ್ಷ ೨೧,೫೦೦ ಹೆಕ್ಟೇರಿನಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಕಳೆದ ವರ್ಷ 17500ಹೆಕ್ಟೇರಿನ್ಲಲಿ ತಂಬಾಕು ಬೆಳೆಯಲಾಗಿತ್ತು. ಅದೇ ರೀತಿ ಪ್ರತೀ ಕೆಜಿಗೆ 2007ರಲ್ಲಿ 68ರೂಪಾಯಿ ಗರಿಷ್ಠ ಧಾರಣೆಯಿದ್ದರೆ, 2008ರಲ್ಲಿ ಅದು ರೂ.೧೫೩.೦೦ ಆಗಿತ್ತು, ಮತ್ತು ಕನಿಷ್ಠ ದರ ರೂ. ೪೦ ಆಗಿತ್ತು. ಪ್ರಸ್ತುತ ಆಂದ್ರಪ್ರದೇಶದಲ್ಲಿ ನಡೆಯುತ್ತಿರುವ ತಂಬಾಕು ವಹಿವಾಟಿನಲ್ಲಿ ಹೆಚ್ಚಿನ ಧಾರಣೆ 140ರೂಪಾಯಿ ಇದೆ. ಇದು ಏರಿಕೆ ಇಲ್ಲವೇ ಇಳಿಕೆ ಆಗಬಹುದು, ಯಾವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಶಿವರುದ್ರಯ್ಯ.
ಪ್ರತೀ ಹೆಕ್ಟೇರಿಗೆ 1550ಕೆಜಿ ಸರಿಸುಮಾರು ತಂಬಾಕು ಬೆಳೆ ಬೆಳೆಯಲು ಸಾಧ್ಯವಿದೆ, ಈ ಪ್ರಕಾರ ಆಳು-ಕಾಳು, ಗೊಬ್ಬರ,ತಂಬಾಕು ಬ್ಯಾರನ್ ನಿರ್ವಹಣೆ ಹಾಗೂ ಸಾಗಣೆ ವೆಚ್ಚಗಳೆಲ್ಲ ಸೇರಿ ಪ್ರತೀ ಕೇಜಿಗೆ ೪೫-50ರೂಪಾಯಿ ವೆಚ್ಚ ವಾಗುತ್ತದೆ. ಈ ದರದ ಅನುಸರಣೆಯಲ್ಲಿ ಮಾರುಕಟ್ಟೆ ದರ ಪ್ರತೀ ಕೆಜಿ ತಂಬಾಕಿಗೆ 3ರಷ್ಟಿದೆ. ಸಾಧಾರಣವಾಗಿ ಮೇ ಮಾಹೆಯ ಕೊನೆ ವಾರದಲ್ಲಿ ತಂಬಾಕು ಬಿತ್ತನೆ ಆಗುತ್ತದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಬೆಳೆಯುವ ತಂಬಾಕು ಬೆಳೆಯನ್ನು ಕಟಾವು ಮಾಡಿ ಬ್ಯಾರನ್ ಮನೆಗಳಲ್ಲಿ ಬೇಯಿಸಲಾಗುತ್ತದೆ. 5ಮಾದರಿ ಹಂತಗಳಲ್ಲಿ ಇವನ್ನು ವಿಂಗಡಿಸುವುದರಿಂದ ಕ್ರಮವಾಗಿ 90ಡಿಗ್ರಿ, 110ಡಿಗ್ರಿ, 120ಡಿಗ್ರಿ ಮತ್ತು 160ದಿಗ್ರಿ ಸೆಲಿಷಿಯಸ್ ಉಷ್ಣಾಂಶದಲ್ಲಿ ಸೊಪ್ಪನ್ನು ಹದಮಾಡಿ ಬೇಯಿಸಲಾಗುತ್ತದೆ. ಒಂದು ಬ್ಯಾರನ್ ವ್ಯಾಪ್ತಿಗೆ ೩.5ಎಕ್ರೆ ಭೂಮಿಯ ವ್ಯಾಪ್ತಿಯಿದೆ.
ಈ ಬಾರಿ ತಂಬಾಕು ಬೆಳೆಯ ಪ್ರಮಾಣ ಹೆಚ್ಚಿರುವಂತೆಯೇ ಕೂಲಿ ಆಳುಗಳ ಕೊರತೆ ಹಾಗೂ ಸೌದೆ ಕೊರತೆ ತೀವ್ರವಾಗಿ ಕಾಡಲಾರಂಭಿಸಿದೆ,ಶ್ರೀಮಂತ ಬೆಳೆಗಾರರು ಪಕ್ಕದ ಆಂದ್ರಪ್ರದೇಶದಿಂದ ಕೂಲಿ ಆಳುಗಳನ್ನು ಗುತ್ತಿಗೆ ಆಧಾರದಲ್ಲಿ ಕರೆ ತರುತ್ತಾರೆ. ಮದ್ಯಮವರ್ಗದ ರೈತ ಸ್ಥಳೀಯರನ್ನೇ ಅವಲಂಬಿಸಬೇಕಾಗಿರುವುದರಿಂದ ತೀವ್ರ ತೊಂದರೆ ಅನುಭವಿಸಿದ್ದಾನೆ. ಪ್ರತೀ ಬ್ಯಾರನ್ ಒಂದಕ್ಕೆ ತಗುಲುವ ಕೂಲಿವೆಚ್ಚ ಈ ಬಾರಿ ದುಪ್ಪಟ್ಟಾಗಿದೆ, ಸೌದೆ ಕೊರತೆ ಕಾಡಲಾರಂಬಿಸಿದೆ , ಈ ವರ್ಷ ಆರಂಭದಲ್ಲಿ ನಿಗದಿತ ಻ವಧಿಗೆ ಮಳೆ ಆರಂಭವಾಗುದಿದ್ದುದು, ಭಯ ಹುಟ್ಟಿಸಿತ್ತಾದರೂ ತಂಬಾಕಿಗೆ ಅಗತ್ಯವಿರುವಷ್ಟು ಮಳೆ ಈಗ ಆಗಿದೆ, ಆದರೆ ಕೆಲವೆಡೆ ರೈತರು ಬೆಳೆಗೆ ಗೊಬ್ಬರ ಇಡುವಾಗ ಸರಿಯಾದ ಕ್ರಮ ಅನುಸರಿಸದಿದ್ದುದು ಬೆಳೆಯ ಕುಂಟಿತತೆಗೆ ಕಾರಣವಾಗಿತ್ತು. ಆದರೆ ಅಂತಹ ಸಂಖ್ಯೆ ತೀರಾ ವಿರಳ. ಈ ಬಾಗದ ಎಲ್ಲ ಬ್ಯಾಂಕುಗಳು ತಂಬಾಕು ಬೆಳೆಗಾರರಿಗೆ ನಿರಾತಂಕವಾಗಿ ಎಕ್ರೆಗೆ ೧೭-20ಸಾವಿರ ಸಾಲ ನೀಡಿವೆ. ಎಲ್ಲ ಸಂಕಷ್ಠಗಳ ನಡುವೆಯು ತಂಬಾಕು ಬೆಳೆಗಾರ ಹುಮ್ಮಸಿನಿಂದ ತಂಬಾಕು ಬೆಳೆ ಬೆಳೆಯುತ್ತಿದ್ದಾನೆ. ಮುಂಬರುವ ದಿನಗಳಲ್ಲಿ ನಿರೀಕ್ಷೆಯಂತೆ ಉತ್ಪಾದನೆಯಾಗಿ ದುಪ್ಪಟ್ಟು ಬೆಲೆ ದೊರೆತರೆ ರೈತ ಬಚಾವ್.

ಶನಿವಾರ, ಜೂನ್ 13, 2009

ದರೋಡೆ, ಕಗ್ಗೊಲೆ ಮಾಡಿ ಕಾರು ಕದ್ದರು ಮೀಸೆ ಮೂಡದ ಈ ಹುಡುಗರು

ಅರಕಲಗೂಡು: ಬೆಂಗಳೂರು ಐಟಿಪಿಎಲ್ ಕಾಲ್ ಸೆಂಟರ್ ಕಾರು ಚಾಲಕನೋರ್ವನ್ನನ್ನು ಕಾರು ಸಮೇತ ಅಪಹರಿಸಿ ಕೊಲೈಗೈದು ಹೂತು ಹಾಕಿದ ಘಟನೆ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಬಳಿಯ ಕೆರೆಕೋಡಿ ಬಳಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ತೊಣಚಗೊಂಡನಹಳ್ಳಿ ಗ್ರಾಮದ ನಂಜುಂಡಪ್ಪನ ಮೊದಲ ಪುತ್ರ ನವೀನ್ ಕುಮಾರ್ (೨೨) ಎಂಬಾತ ಕಳೆದ 2ವರ್ಷ ಗಳ ಹಿಂದೆ ಬೆಂಗಳೂರು ಸೇರಿಕೊಂಡಿದ್ದ, ಎಸ್ ಎಸ್ ಎಲ್ ಸಿ ಗೆ ಓದು ನಿಲ್ಲಿಸಿದ್ದ ನವೀನ ಚಾಲನೆ ಕಲಿತು ಬೆಂಗಳೂರಿನ ಆಸ್ಪತ್ರೆಯೊಂದರ ಅಂಬ್ಯುಲೆನ್ಸ್ ಗೆ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಅದೇನಾಯ್ತೊ ಗೊತ್ತಿಲ್ಲ ಅಲ್ಲಿನ ಉದ್ಯೋಗ ಬಿಟ್ಟು ಐ ಟಿ ಪಿ ಎಲ್ ಕಾಲ್ ಸೆಂಟರ್ ಗೆ ಕ್ವಾಲಿಸ್ ವಾಹನ ಚಾಲಕನಾಗಿ ಕಳೆದ 15ದಿನಗಳ ಹಿಂದೆಯಷ್ಟೇ ಸೇರಿಕೊಂಡಿದ್ದ. ಅದು ಫ್ರೇಜರ್ ಟೌನ್ ನಲ್ಲಿರುವ ಬಾಲರಾಜ್ ಎಂಬುವವನಿಗೆ ಸೇರಿದ ಕ್ಯಾಬ್ ಸರ್ವೀಸ್ ಸೆಂಟರ್ ನ ಕ್ವಾಲೀಸ್ ಆಗಿತ್ತು. ಬೆಂಗಳೂರಿನ ಸುಂಕದ ಕಟ್ಟೆ ಯಲ್ಲಿ ನಾಲ್ಕೈದು ಮಂದಿ ಗೆಳೆಯರೊಂದಿಗೆ ಸೇರಿ ರೂಮು ಮಾಡಿಕೊಂಡಿದ್ದ ನವೀನ ಕುಮಾರ್ ಮೇ. ೨೪ ರ ರಾತ್ರಿ 9ಗಂಟೆ ಸುಮಾರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟು ನಿಂತ.ಅಂದು ಅವನ ನಸೀಬು ಕೆಟ್ಟಿತ್ತು ಎನಿಸುತ್ತೆ, ಸಿಟಿ ಮಧ್ಯೆ ಬರುವಾಗ 2ಮಂದಿ ಕೈತೋರಿಸಿ (ಪ್ರಯಾಣಿಕರಂತೆ ನಟಿಸಿ) ಹತ್ತಿಕೊಂಡಿದ್ದಾರೆ ಇನ್ನೂ ಸ್ವಲ್ಪ ಮುಂದೆ ಬಂದಾಗ ಇನ್ನೂ 3ಮಂದಿ ಜೊತೆಯಾಗಿದ್ದಾರೆ. 5ಮಂದಿ ಒಟ್ಟಾಗುತ್ತಿದ್ದಂತೆ ಚಾಲಕ ನವೀನನಿಗೆ ಬೆದರಿಸಿ ಹಿಂದೆ ಕೂರಿಸಿ ಕೊಂಡು ಕಾರು ಚಾಲನೆ ಮಾಡಿದ್ದಾರೆ. ರಸ್ತೆಯ ಮಧ್ಯೆ ಸಿಕ್ಕೆ ಪೆಟ್ರೋಲ್ ಬಂಕ್ ಒಂದರಲ್ಲಿ ಇಂದನ ಹಾಕಿಸಿಕೊಂಡು ದುಡ್ಡು ಕೊಡದೇ ಪರಾರಿಯಾಗಿದ್ದಾರೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಣ್ಣಪುಟ್ಟ ಕಳ್ಳತನ, ಸರಣಿ ದರೋಡೆ ಮಾಡಿದ ಪಾತಕಿಗಳು ನಂತರ ಹಾಸನ ಜಿಲ್ಲೆಯ ಻ರಕಲಗೂಡು ತಾಲ್ಲೂಕಿನ ಕಾರಹಳ್ಳಿ ಎಂಬ ಗ್ರಾಮಕ್ಕೆ ಬಂದಿಳಿದಿದ್ದಾರೆ. ಅಲ್ಲಿ ಪಾತಕಿಯೊಬ್ಬನ ಮನೆಯಲ್ಲಿ ಉಳಿದು ಮಾಂಸದ ಅಡುಗೆ ಮಾಡಿಸಿ ಉಂಡಿದ್ದಾರೆ... ಈ ನಡುವೆ ಗುಂಡು ಏರಿಸಿದ್ದಾರೆ. ಜೊತೆಯಲ್ಲಿದ್ದ ಕಾರು ಚಾಲಕನಿಗೂ ಗುಂಡು ಹಾಕಿಸಿದ್ದಾರೆ. ನಂತರ ಅವನನ್ನು ಬಿಟ್ಟು ಕಳುಹಿಸುವ ಮನಸ್ಸು ಮಾಡಿದ್ದಾರೆ. ಆದರೆ ಚಾಲಕನ ದುರಾದೃಷ್ಟ ಅವನು ದುಷ್ಕರ್ಮಿಗಳು ಬಂದ ಹಾದಿ, ಉಳಿದ ಮನೆ, ಊರು ತೋರಿಸುತ್ತಾನೆ ಆಗ ತಮಗೆ ಉಳಿಗಾಲವಿಲ್ಲ ಎಂಬುದು ಗೊತ್ತಾಗಿದೆ, ಆಗ ಆತನನ್ನು ಕೊಲೆಗೈದು ಕಾರು ಅಪಹರಿಸಲು ನಿರ್ಧರಿಸಿದ್ದಾರೆ. ಅದರಂತೆ ಬಹುಶ ಮೇ 25ರಂದು ಆತನ ಮರ್ಮಾಂಗಕ್ಕೆ ಒದ್ದು, ಕುತ್ತಿಗೆ ಬಿಗಿದು ಕೊಲೆಗೈದಿದ್ದಾರೆ. ನಂತರ ಮಧ್ಯರಾತ್ರಿ ವೇಳೆಗೆ ಅರಕಲಗೂಡಿನಿಂದ 16ಕಿಮಿ ದೂರವಿರುವ ದೊಡ್ಡಮಗ್ಗೆ ಬಳಿಯ ಕೆರೆಕೋಡಿ ಬಳಿಗೆ ಬಂದು ಗುಂಡಿ ತೆಗೆದು ಆತನ ಶವವನ್ನು ಹೂತು ಹಾಕಿದ್ದಾರೆ. ನಂತರ ಅರಕಲಗೂಡು ಕಡೆ ಬಂದ ದುಷ್ಕರ್ಮಿಗಳು ರಾತ್ರಿ 11ಗಂಟೆ ಸುಮಾರಿಗೆ ಬೆಂಗಳೂರಿನಿಂದ ಻ರಕಲಗೂಡಿಗೆ ಬಂದು ಬರಗೂರು ಗ್ರಾಮಕ್ಕೆ ತೆರಳಲು ಬಸ್ ಕಾಯುತ್ತಿದ್ದ ಬಿಎಂಟಿಸಿ ಚಾಲಕ ಶಂಕರ್ ನನ್ನು ಡ್ರಾಪ್ ಮಾಡುವುದಾಗಿ ಹತ್ತಿಸಿ ಕೊಂಡಿದ್ದಾರೆ. ನಂತರ ಬಿದಿರುಮೆಳೆ ಕೊಪ್ಪಲು ಗ್ರಾಮದ ಬಳಿಗೆ ಕರೆದೊಯ್ದು ಹಲ್ಲೆ ನಡೆಸಿ ಆತನ ಬಳಿಯಿದ್ದ ಉಂಗುರ, ಚೈನು, ನಗದು ೧೮೦೦೦ ಮೊತ್ತವನ್ನು ದೋಚಿದ್ದಾರೆ, ಆತನ ಜೇಬಿನ್ಲಲಿ ಎಟಿಎಂ ಸಿಕ್ಕಿದಾಗ ವಾಪಸ್ ಗೊರೂರು ರಸ್ತೆಗೆ ಬಂದು ಗೊರೂರಿನ ಎಟಿಎಂ ನಲ್ಲಿ 1400ರೂಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಮುಂದೆ ಆತನ್ನನ್ನು ಕಟ್ಟಾಯ ಸಮೀಪದ ಜಿನ್ನೇನಹಳ್ಳಿ ಬಳಿ ಇಳಿಸಿ ಬಯಲು ಪ್ರದೇಶದಲ್ಲಿ ಓಡುವಂತೆ ತಿಳಿಸಿದ್ದಾರೆ. ಪ್ರಾಣ ಭಯದಿಂದ ಆತ ಓಡಿಹೋಗಿದ್ದಾನೆ. ಮುಂದೆ ಹಾದಿಯಲ್ಲಿ ಸಿಕ್ಕವರನ್ನೇಲ್ಲ ದೋಚಿಕೊಂಡು ಹೋದ ದುಷ್ಕರ್ಮಿಗಳು ಚನ್ನರಾಯಪಟ್ಟಣ ಬಳಿ ಬಸ್ ಚಾಲಕನೋರ್ವ ನನ್ನು ದೋಚಿದ್ದಾರೆ. ಆಗ ದಾಖಲಾದ ದೂರಿನ ಸುಳಿವು ಅನುಸರಿಸಿ ಮಂಡ್ಯದ ಸರ್ಕಲ್ ಇನ್ಸ್ಪೆಕ್ಟರ್ ಜಯಮಾರುತಿ ತನಿಖೆಗೆ ಮುಂದಾಗಿದ್ದಾರೆ. ಇದೇ ವೇಳೆ ಇದೇ ದುಷ್ಖರ್ಮಿಗಳು ಪಾಂಡವಪುರದಲ್ಲಿಯೂ ಒಬ್ಬನ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ಹೊಗಿದ್ದಾರೆ. ಸದರಿ ಮೊಬೈಲ್ ನ ಸುಳಿವು ಬೆನ್ನು ಬಿದ್ದ ಸಿಪಿಐ ಜಯಮಾರುತಿ ತನಿಖೆಗೆ ಮುಂದಾಗಿದ್ದಾರೆ. ಆಗಿ ಸಿಕ್ಕಿ ಬಿದ್ದವರೇ ಕೊಪ್ಪದ ಯೋಗೇಶ, ರಾಮನಗರದ ಹರೀಶ್ ಮತ್ತು ಪೀನ್ಯ ದ ಮಂಜುನಾಥ್. ಅವರನ್ನು ಏರೋಪ್ಲೇನ್ ಹತ್ತಿಸಿದ ಮೇಲೆ ಪಾಪಿಗಳು ತಾವು ಮಾಡಿದ ಒಂದೊಂದೆ ಪಾತಕಗಳನ್ನು ಬಾಯಿ ಬಿಟ್ಟಿದ್ದಾರೆ. ಆಗ ನವೀನ ಕುಮಾರನ ಕೊಲೆ ಬಯಲಾಗಿದೆ. ಇನ್ನು ಇಬ್ಬರು ಆರೋಪಿಗಳಾದ ಕಾರಹಳ್ಳಿ ಗ್ರಾಮದ ಕಾಂತ, ಹಾಸನದ ಕುಮಾರ ಕ್ವಾಲೀಸ್ ವಾಹನದೊಂದಿಗೆ ನಾಪತ್ತೆಯಾಗಿದ್ದಾರೆ. ಜೂನ್ 10ರಂದು ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲೆಯ ವಿವಿದೆಡೆ ಕಳೆದ ಒಂದು ವಾರದಲ್ಲಿ ನಡೆದಿದೆಯೆನ್ನಲಾದ ಹಲವು ದರೋಡೆ ಪ್ರಕರಣದಲ್ಲೂ ಸದರಿ ಆರೋಪಿಗಳು ಭಾಗಿಯಾಗಿರುವ ನಿರೀಕ್ಷೆಯಿದೆ. ಜಿಲ್ಲೆಯ ಪ್ರಕರಣಕ್ಕೆ ಸಂಭಂದಿಸಿದಂತೆ ಸದರಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವುದಾಗಿ ಅರಕಲಗೂಡು ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಪತ್ರಿಕೆಗೆ ತಿಳಿಸಿದ್ದಾರೆ. ಈ ಸಂಧರ್ಭ ಪತ್ರಿಕೆಯೊಂದಿಗೆ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ಜಯಮಾರುತಿ ಪ್ರಯಾಣಿಕರು ರಾತ್ರಿ ವೇಳೆ ಸರ್ಕಾರಿ ವಾಹನ ಹೊರತು ಪಡಿಸಿ ಖಾಸಗಿ ಮತ್ತು ಅಪರಿಚಿತ ವಾಹನಗಳಲ್ಲಿ ಹತ್ತ ಬಾರದೆಂದು ಮನವಿ ಮಾಡಿದ್ದಾರೆ. ಆರೋಪಿಗಳು ಬೆಂಗಳೂರಿನ್ಲಲಿ ಪಾನಿಪೂರಿ ಮತ್ತಿತರೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದು ದುಡ್ಡು ಮಾಡುಬ ಹಪಾಹಪಿಗೆ ಬಿದ್ದು ಈ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆನ್ನಲಾಗಿದೆ. ತನಿಖೆ ಪ್ರಗತಿಯಲ್ಲಿದೆ.