ಸೋಮವಾರ, ಡಿಸೆಂಬರ್ 28, 2009

ಹಿರಿಯ ಕಾಂಗ್ರೆಸ್ಸಿಗರಿಗೆ ಸಂಸ್ಥಾಪನಾ ದಿನದ ಸನ್ಮಾನ

ಅರಕಲಗೂಡು/ರಾಮನಾಥಪುರ,ಡಿ.28: ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ತಾಲ್ಲೂಕಿನ ಹಿರಿಯ ಕಾಂಗ್ರೆಸ್ಸಿಗರನ್ನು ಜಿಲ್ಲಾ ಕಾಂಗೈ ಅಧ್ಯಕ್ಷ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೀರ್ತಿರಾಜ್ ಸನ್ಮಾನಿಸಿದರು. ಪಕ್ಷದ 125ನೇ ವರ್ಷಾಚರಣೆಯ ಅಂಗವಾಗಿ ಪಟ್ಟಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ನಾಗರಾಜಶೆಟ್ಟಿ, ಮರಿಗೌಡ, ಇಬ್ರಾಹಿಂ ರನ್ನು ಫಲ ಪುಷ್ಪ ನೀಡಿ ಶಾಲು ಹೊದೆಸಿ ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಮತ್ತು ಜಿಲ್ಲಾ ಕಾಂಗೈ ಅಧ್ಯಕ್ಷರಾದ ಎ ಮಂಜು ಪಕ್ಷದ ವರಿಷ್ಠರ ಸೂಚನೆಯಂತೆ ಈ ಸಂಧರ್ಭದಲ್ಲಿ ಪಕ್ಷದ ಮುಖಂಡರನ್ನು ಸನ್ಮಾನಿಸಲಾಗುತ್ತಿದೆ, ತಾಲೂಕಿನ ಎಲ್ಲಾ 29 ಗ್ರಾಮ ಪಂಚಾಯ್ತಿಗಳಲ್ಲು ಹಿರಿಯ ಕಾಮಗ್ರೆಸ್ಸಿಗರನ್ನು ಗುರುತಿಸಲಾಗಿದ್ದು ಪಕ್ಷದ ಮುಖಂಡರು ಸನ್ಮಾನಿಸುವರು ಎಂದರು. ಹಿರಿಯ ಕಾಂಗ್ರೆಸ್ಸಿಗರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಾಗಿದೆ ಎಂದು ನುಡಿದ ಅವರು ಪಕ್ಷದ ಬಲವರ್ಧನೆಯಾಗಿದ್ದು ಜನರ ಏಳಿಗೆಗಾಗಿ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳ ಪ್ರಯೋಜನ ಮತ್ತು ಅನುಷ್ಠಾನಕ್ಕೆ ಪಕ್ಷ ಹೋರಾಟ ಮಾಡುವುದು ಎಂದರು. ಈ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಪ್ರಸನ್ನಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಹಿಂದುಳಿದ ವರ್ಗದ ಅದ್ಯಕ್ಷ ಮುತ್ತಿಗೆ ರಮೇಶ್, ಮುಖಂಡರಾದ ಬಾಲಾಜಿ, ಅತಿಉಲ್ಲಾ ಖಾನ್, ವಿಶ್ವೇಶ್ವರಯ್ಯ, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಹಿರಿಯ ಮುಖಂಡರುಗಳಾದ ಕಬ್ಬಳಿಗೆರೆ ಬೈರೇಗೌಡ, ಕೊಣನೂರಿನ ನಾರಾಯಣ, ಪುಟ್ಟಸ್ವಾಮಿ, ಕರೀಂಸಾಬ್, ರಾಮನಾಥಪುರದ ತಿಪ್ಪೇಗೌಡ, ಗೋವಿಂದರಾಜಶೆಟ್ಟಿ, ಚೌಡೇಗೌಡ ಮತ್ತಿತರನ್ನು ಅವರ ನಿವಾಸಗಳಿಗೆ ತೆರಳಿ ಸನ್ಮಾನಿಸಲಾಯಿತು.

ಕಾಮೆಂಟ್‌ಗಳಿಲ್ಲ: