ಮಂಗಳವಾರ, ಸೆಪ್ಟೆಂಬರ್ 29, 2009

ಶಂಕರನ ನೆನಪು.........


ಶಂಕರ್ ನಾಗ್ ....ನಮ್ಮನಗಲಿ ಇಂದಿಗೆ 35ವರ್ಷ 10ತಿಂಗಳು 21ದಿನ, ವಿಧಿಯ ವಿಪರ್ಯಾಸವೋ ಏನೋ ಸದಾ ಕ್ರಿಯಾಶೀಲ ಚಿಂತನೆಗಳಲ್ಲಿ ತೊಡಗಿಸಿಕೊಂಡು ತನ್ನೊಂದಿಗಿದ್ದವರನ್ನು ಬೆಳೆಸುತ್ತಾ, ಸಮಾಜದ ಅಭಿವೃದ್ದಿ ಚಿಂತನೆಗೆ ತನ್ನದೇ ಆದ ವಿಶಿಷ್ಠ ರೀತಿಯಲ್ಲಿ ಕೊಡುಗೆ ನೀಡಿದ ಶಂಕರ್ ನಾಗ್ ಯುವ ಸಮೂಹಕ್ಕೆ ಆದರ್ಶ ಮತ್ತು ಅನುಕರಣೀಯ. ಸಂಕೇತ್ , ಕಂಟ್ರಿಕ್ಲಬ್, ಹೊಸ ಅಲೆಯ ಸಿನಿಮಾಗಳು , ರಂಗ ನಾಟಕಗಳು ಹೀಗೆ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಎಲ್ಲರ ಮನಗೆದ್ದವರು ನಮ್ಮ-ನಿಮ್ಮೆಲ್ಲರ ಶಂಕರ್ ನಾಗ್..

ಶಂಕರ್ ನೆನಪಿಗೆ ಅರಕಲಗೂಡಿನ ಸಮಾನ ಗೆಳೆಯರು ಸೇರಿ ಶಂಕರ್ ನೆಟಿಸಿದ ಚಿತ್ರಗಳ ಆಯ್ದ ತುಣುಕುಗಳ ಪ್ರದರ್ಶನ, ಶಂಕರ್ ಒಡನಾಡಿ ಪ್ರಜಾವಾಣಿ ಪತ್ರಿಕೆಯ ಹಿರಿಯ ನಿವೃತ್ತ ಪತ್ರಕರ್ತ ಎಂ ಕೆ. ಭಾಸ್ಕರ್ ರಾವ್ ರಿಂದ ಶಂಕರ್ ನೆನಪು ಮೊಗೆದು ಕೊಡಲಿದ್ದಾರೆ. ಅಂತಿಮವಾಗಿ ಹಾಸನದ ಕಲಾಸಿರಿ ತಂಡದವರಿಂದ "ಒಂದು ಬೊಗಸೆ ನೀರು" ನಾಟಕ ಪ್ರದರ್ಶನ ಇದೆ. ಈ ಎಲ್ಲ ಕಾರ್ಯಕ್ರಮಗಳು ಸೆ.೩೦ ರಂದು ಸಂಜೆ 6ಗಂಟೆಗೆ ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆಯಲಿದೆ. ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶ. ಕಾರ್ಯಕ್ರಮಕ್ಕೆ ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ....



ಕಾಮೆಂಟ್‌ಗಳಿಲ್ಲ: