ಮಂಗಳವಾರ, ಏಪ್ರಿಲ್ 27, 2010

ಕೃಷ್ಣನ್ ಲವ್ ಸ್ಟೋರಿ ಶೀಘ್ರದಲ್ಲೆ ತೆರೆಗೆ

ಅಜಯ್, ರಾಧಿಕಾಪಂಡಿತ್ ಜೋಡಿಯ, ಶಶಾಂಕ್ ನಿರ್ದೇಶನದ 'ಕೃಷ್ಣನ್ ಲವ್ ಸ್ಟೊರಿ' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ವಿ.ಶ್ರೀಧರ್ ಸಾರಥ್ಯದಲ್ಲಿ ಹಿನ್ನಲೆ ಸಂಗೀತ ನೀಡಲಾಗುತ್ತಿದೆ. ಹಾಗೆಯೇ ಮುಂಬೈ ನಗರದ ಪ್ರಸಿದ್ಧ ಸ್ಟುಡಿಯೋದಲ್ಲಿ ಡಿ.ಟಿ.ಎಸ್, ಡಿ ಐ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಭಿನ್ನ ಪ್ರೇಮಕಥೆಯುಳ್ಳ ಈ ಚಿತ್ರ ಯುವಪೀಳಿಗೆಗೆ ಹತ್ತಿರವಾಗಲಿದೆ ಎಂದು ಶಶಾಂಕ್ ತಿಳಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ಧವಾಗಲಿದ್ದು ಮುಂದಿನ ತಿಂಗಳು ತೆರೆ ಕಾಣುವ ಸಾಧ್ಯತೆಯಿದೆ.ಶ್ರೀವೆಂಕಟೇಶ್ವರ ಕೃಪ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತ ಹಾಗೂ ಮೋಹನ್.ಜಿ.ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯೋಗೀಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಎಂ.ಎಲ್.ಪ್ರಸನ್ನ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸವಿರುವ ‘ಕೃಷ್ಣನ್ ಲವ್ ಸ್ಟೊರಿಗೆ ಸಿ.ಎಚ್.ಸುರೇಶ್ ಮತ್ತು ಲೋಕೇಶ್ ಆವರ ಸಹ ನಿರ್ಮಾಣವಿದೆ.
ಮಥುರಾನಗರಿಯಲ್ಲಿ ರಮ್ಯಾ ಪ್ರೇಮ ಲೋಕ!
ಬೆಂಗಳೂರು ರಾಯಲ್ ಚಾಲೆಂಜರ್ಸ್ ನ ರಾಯಭಾರಿ ರಮ್ಯಾ ಇಷ್ಟು ದಿನ ಐಪಿಎಲ್ ಪಂದ್ಯಾವಳಿಯಲ್ಲಿ ಕಳೆದು ಹೋಗಿದ್ದರು. ಇದೀಗ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ನಟ ಧ್ಯಾನ್ ಗೆ ಜೊತೆಯಾಗಲಿದ್ದಾರೆ ರಮ್ಯಾ. ಚಿತ್ರದ ಹೆಸರು 'ಮಥುರಾನಗರಿ'. ಟ್ಯಾಗ್ ಲೈನ್ 'ರಾಧೆಯ ಪ್ರೇಮಲೋಕ'!'ಒಂದು ಪ್ರೀತಿಯ ಕಥೆ' ನಿರ್ದೇಶಿಸಿದ್ದ ರಾಜಶೇಖರ ರಾವ್ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ರಮ್ಯಾ ಮತ್ತು ಧ್ಯಾನ್ ಕತೆಯ ಪಾತ್ರಗಳಿಗೆ ಸೂಕ್ತವಾಗಿ ಒಪ್ಪುತ್ತಾರೆ ಎಂಬ ಕಾರಣಕ್ಕೆ ಅವರಿಬ್ಬರನ್ನು ತಮ್ಮ 'ಮಥುರಾನಗರಿ' ಚಿತ್ರಕ್ಕೆ ಆಯ್ಕೆ ಮಾಡಿದ್ದಾಗಿ ರಾಜಶೇಖರ ರಾವ್ ತಿಳಿಸಿದ್ದಾರೆ.ಹಳ್ಳಿಹುಡುಗನ ರೀತಿ ಕಾಣುವ ನಟ ಬೇಕಾಗಿತ್ತು. ಧ್ಯಾನ್ ಗಿಂತಲೂ ಸೂಕ್ತ ನಟ ಇನ್ಯಾರಿದ್ದಾರೆ ಎಂಬುದು ರಾವ್ ಅವರ ಪ್ರತಿಕ್ರಿಯೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ರಮ್ಯಾ ಅವರಿಗೆ ಈ ಪಾತ್ರ ಹೇಳಿ ಮಾಡಿಸಿದಂತಿದೆ. ಆಧುನಿಕ ರಾಧೆಯಾಗಿ ರಮ್ಯಾ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ ಎನ್ನುತ್ತಾರೆ ರಾಜಶೇಖರ.ಚಿತ್ರದ ಉಳಿದ ತಂತ್ರಜ್ಞರ ಹಾಗೂ ತಾರಾಬಳಗದ ಆಯ್ಕೆ ಪ್ರಗತಿಯಲ್ಲಿದ
ಕಿರುತೆರೆಯಲ್ಲಿ ಕಿಚ್ಚ ಸುದೀಪ್ ರಿಯಾಲಿಟಿ ಶೋ
ಹೆಚ್ಚಿನ ನಾಯಕ ನಟರು ಕಿರುತೆರೆ ಎಂದರೆ ಮೂಗುಮುರಿಯುತ್ತಾರೆ. ಆದರೆ ನಮ್ಮ ಕಿಚ್ಚ ಸುದೀಪ್ ಯಾವುದೇ ಅಳುಕಿಲ್ಲದೆ ಕಿರುತೆರೆಗೆ ಅಡಿಯಿಡಲು ಮುಂದಾಗಿದ್ದಾರೆ. ರಮೇಶ್, ದೇವರಾಜ್, ರಕ್ಷಿತಾ, ವರ್ಷಾ ನಂತರ ಇದೀಗ ಸುದೀಪ್ ಕಿರುತೆರೆಯತ್ತ ದಾಪುಗಾಲು ಹಾಕಿದ್ದು ರಿಯಾಲಿಟಿ ಶೋ ಒಂದನ್ನು ನಡೆಸಿಕೊಡಲಿದ್ದಾರೆ.ಸುವರ್ಣ ವಾಹಿನಿಗಾಗಿ ಸುದೀಪ್ ನಡೆಸಿಕೊಡುವ ರಿಯಾಲಿಟಿ ಶೋ ಹೆಸರು 'ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್'. ಹೆಸರು ವಿಚಿತ್ರವಾಗಿ ಹಾಗೂ ಆಕರ್ಷಕವಾಗಿದೆ ಅನ್ನಿಸುವುದಿಲ್ಲವೆ? ಪೇಟೆ ಹುಡುಗಿಯರನ್ನು ಹಳ್ಳಿಗೆ ಬಿಟ್ಟು ಅಲ್ಲಿನ ವಾತಾವರಣಕ್ಕೆ ಅವರೆಲ್ಲಾ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ತಿಳಿದುಕೊಳ್ಳಲಾಗುತ್ತದೆ. ಹಳ್ಳಿಗರ ಎಲ್ಲಾ ಸ್ಪರ್ಧೆಯಲ್ಲಿ ಗೆದ್ದ ಪೇಟೆ ಹುಡುಗಿಯರಿಗೆ ವಿಶೇಷ ಬಹುಮನಾ ಕೊಡಲಾಗುತ್ತದೆ. ಸುದೀಪ್ ನಿರೂಪಿಸುವ ಈ ಕಾರ್ಯಕ್ರಮಕ್ಕೆ ತೀರ್ಪುಗಾರರು ಸಹ ಅವರೇ ಎಂಬುದು ಗಮನಾರ್ಹ ಅಂಶ. ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್ ಕಾರ್ಯಕ್ರಮಕ್ಕೆ ಮಾರ್ಗದರ್ಶನವನ್ನೂ ನೀಡಲಿದ್ದಾರೆ ಸುದೀಪ್.ಈಗಾಗಲೆ ಈ ರಿಯಾಲಿಟಿ ಶೋನ ಚಿತ್ರೀಕರಣ ಆರಂಭವಾಗಿದೆ. 'ವೀರ ಪರಂಪರೆ' ಚಿತ್ರೀಕರಣ ಮುಗಿದ ಕೂಡಲೆ ಸುದೀಪ್ ಕಿರುತೆರೆಗೆ ಮುಖ ಮಾಡಲಿದ್ದಾರೆ. ಸದ್ಯಕ್ಕೆ 'ಕನ್ವರ್ ಲಾಲ್' ಹಾಗೂ ತೆಲುಗಿನಲ್ಲಿ 'ರಕ್ತ ಚರಿತ್ರ' ಚಿತ್ರಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಒಟ್ಟಾರೆಯಾಗಿ ಕಿರುತೆರೆ ಮೂಲಕ ಸುದೀಪ್ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವಣ್ಣನ ಹೊಸ ಚಿತ್ರ ಕ್ಷತ್ರಿಯ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರ 'ಜೋಗಯ್ಯ' ಸೆಟ್ಟೇರುವುದು ತಡವಾಗಲಿದೆ. ಕಾರಣ ಶಿವಣ್ಣ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಚಿತ್ರದ ಹೆಸರು 'ಕ್ಷತ್ರಿಯ'. ಸದ್ಯಕ್ಕೆ ಶಿವಣ್ಣ ಅಭಿನಯಿಸುತ್ತಿರುವ 'ಮೈಲಾರಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.ಕನ್ನಡದ ದಾಖಲೆ ಚಿತ್ರ 'ಜೋಗಿ' ಚಿತ್ರದ ಮುಂದುವರಿದ ಭಾಗ 'ಜೋಗಯ್ಯ' ಎಂಬುದು ಗೊತ್ತೆಯಿದೆ. ರಕ್ಷಿತಾ ಪ್ರೇಮ್ ನಿರ್ಮಿಸುತ್ತಿರುವ 'ಜೋಗಯ್ಯ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಪ್ರೇಮ್. ಚಿತ್ರಕತೆ ಎಲ್ಲವನ್ನೂ ಸಿದ್ಧವಾಗಿಟ್ಟುಕೊಂಡಿರುವ ಪ್ರೇಮ್ಈ ಚಿತ್ರವನ್ನು ಆದಷ್ಟು ಬೇಗ ಮುಗಿಸಬೇಕು ಎಂಬುದು ಉದ್ದೇಶ. ಏತನ್ಮಧ್ಯೆ ಶಿವಣ್ಣ ದಿಢೀರನೆ 'ಕ್ಷತ್ರಿಕ'ನನ್ನು ಒಪ್ಪಿಕೊಂಡು 'ಜೋಗಯ್ಯ'ನಿಗೆ ಬ್ರೇಕ್ ಹಾಕಿದ್ದಾರೆ. ಆದಷ್ಟು ಬೇಗ ಕ್ಷತ್ರಿಯನನ್ನು ಮುಗಿಸಿ ಜುಲೈ ವೇಳೆಗೆ 'ಜೋಗಯ್ಯ'ನನ್ನು ಕೈಗೆತ್ತಿಕೊಳ್ಳಲು ಶಿವಣ್ಣ ನಿರ್ಧರಿಸಿದ್ದಾರೆ. ಕ್ಷತ್ರಿಯ ಚಿತ್ರವನ್ನು ತೆಲುಗಿನ ನಿರ್ಮಾಪಕರಾದ ರವಿ ಮತ್ತು ಭಾಸ್ಕರ್ ನಿರ್ಮಿಸುತ್ತಿದ್ದಾರೆ. ವಿ ವಿ ಬದ್ರಿ ನಿರ್ದೇಶನ, ರಮಣ ಗೋಗುಲ ಅವರ ಸಂಗೀತ ಚಿತ್ರಕ್ಕಿರುತ್ತದೆ. ಮೈಲಾರಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಕ್ಷತ್ರಿಯ ಚಿತ್ರೀಕರಣ ಅರಂಭವಾಗಲಿದೆ. ಆ ಬಳಿಕವಷ್ಟೆ ಜೋಗಯ್ಯನ ಅಬ್ಬರ ಶುರುವಾಗಲಿದೆ ಎನ್ನುತ್ತವೆ ಮೂಲಗಳು. ಸುದೀರ್ಘ ಸಮಯ ಬಳಿಕ ಸಂಗೀತ ನಿರ್ದೇಶಕ ರಮಣ ಕನ್ನಡ ಚಿತ್ರಕ್ಕೆ ಮರಳುತ್ತಿದ್ದಾರೆ. ಅಂದಹಾಗೆ ಮೈಲಾರಿ ಚಿತ್ರಕ್ಕೆ ಸದಾ ಹಾಗೂ ಗಂಡ ಹೆಂಡತಿ ಸಂಜನಾ ಇಬ್ಬರು ನಾಯಕಿಯರು. ಇದು ಶಿವಣ್ಣನ 99ನೇ ಚಿತ್ರ.
ಕೊಳ್ಳೆಗಾಲದಲ್ಲಿ ಗಣೇಶನ ಮದುವೆ ಸಂಭ್ರಮ
ಸದಾ ಹಚ್ಚಹಸಿರಿನಿಂದ ಕಂಗೊಳ್ಳಿಸುವ ಜಿಲ್ಲೆ ಕೊಳ್ಳೆಗಾಲ. ಆ ಜಿಲ್ಲೆಯ ಸಮೀಪ ಎಡಕುರಿಯಾ ಎಂಬ ಸುಂದರ ಹಳ್ಳಿ. ಆ ಹಳ್ಳಿಯಲ್ಲಿ ಗಣೇಶ್ ನಾಯಕನಾಗಿ ನಟಿಸುತ್ತಿರುವ 'ಮದುವೆಮನೆ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಗಣೇಶ್, ಶ್ರದ್ಧಾಆರ್ಯ, ಸ್ಪೂರ್ತಿ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ 'ಮದುವೆಮನೆ' ಚಿತ್ರವನ್ನು ಸುನೀಲ್‌ಕುಮಾರ್ ಸಿಂಗ್ ಕಥೆ , ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕರಿಗೆ ಹಿರಿತೆರೆಯಲ್ಲಿ ಇದು ಚೊಚ್ಚಲ ಯತ್ನ. ಗಣೇಶ್ ಹಾಗೂ ಶ್ರದ್ದಾಆರ್ಯ ನಾಯಕ/ನಾಯಕಿಯರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ 'ಜುಗಾರಿ'ಯ ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಬಲನಾಣಿ, ಶರಣ್, ಹನುಮಂತೇಗೌಡ, ಕೆ.ವಿ.ನಾಗೇಶ್‌ಕುಮಾರ್, ಎಂ.ಎನ್.ಎಂ. ಚಿತ್ಕಲಾ, ಡಾ.ನಾಗೇಶ್, ಜಾದವ್‌ಮೈಸೂರು, ಚಿನ್ನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ, ಮೋಹನ್ ಬಿ ಕೆರೆ ಕಲಾನಿರ್ದೇಶನ 'ಮದುವೆಮನೆ' ಚಿತ್ರಕ್ಕಿದೆ.
ಹೃತಿಕ್ ಜೊತೆ ರೋಮಾನ್ಸ್ ಗೆ ಕ್ರಿಸ್ಟೇನ್
ಹೃತಿಕ್ ರೋಷನ್ ಜೊತೆ ಮತ್ತೊಬ್ಬ ಫಿರಂಗಿ ಚೋರಿ ಕುಣಿಯುವುದು ಖಾತ್ರಿಯಾಗಿದೆ. ಬರ್ಬರಾ ಮೋರಿ ನಂತರ ಈಗ 20 ವರ್ಷದ ಚೆಲುವೆ ಕ್ರಿಸ್ಟೆನ್ ಸ್ಟೀವರ್ಟ್ ಬಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರೆ. ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಅವರ ಪಾನಿ ಚಿತ್ರದಲ್ಲಿ ಈ ಚೆಲುವೆ ಹೃತಿಕ್ ಜೊತೆ ರೋಮಾನ್ಸ್ ಮಾಡಲಿದ್ದಾಳೆ.
Read: In English ಎಲಿಜಬೇತ್ ಚಿತ್ರ ಖ್ಯಾತಿಯ ಶೇಖರ್ ಕಪೂರ್ ಅವರ ಅಭಿಮಾನಿಯಾದ ಈ 'ಟ್ವಿಲೈಟ್ 'ತಾರೆ ಕ್ರಿಸ್ಟೆನ್, ಶೇಖರ್ 'ಪಾನಿ' ಚಿತ್ರದ ಬಗ್ಗೆ ಹೇಳಿದ ತಕ್ಷಣ ಒಪ್ಪಿಕೊಂಡಿದ್ದಾರೆ. ಚಿತ್ರದ ಕಥೆ ಯ ಬಗ್ಗೆ ಶೇಖರ್ ಹೆಚ್ಚು ಸುಳಿವು ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಇದು ಮತ್ತೊಂದು ಹಾಲಿವುಡ್ ಬಾಲಿವುಡ್ ಮಿಶ್ರಣದ ಚಿತ್ರ. ಮೊದಲು ಇಂಗ್ಲೀಷ್ ನಲ್ಲಿ ಚಿತ್ರೀಕರಿಸಿ ನಂತರ ಹಿಂದಿಗೆ ಡಬ್ಬಿಂಗ್ ಮಾಡುವ ಸಾಧ್ಯತೆಯಿದೆ. ಮುಂಬೈನ ಬಡವ ಶ್ರೀಮಂತರ ಕಥೆ ಇದಾಗಿದ್ದು, ಹೃತಿಕ್ ಕೆಳವರ್ಗದ ಯುವಕನ ಪಾತ್ರವಹಿಸಿದ್ದರೆ, ಕ್ರಿಸ್ಟೆನ್ ಶ್ರೀಮಂತ ಹುಡುಗಿ ಪಾತ್ರ ಧರಿಸಲಿದ್ದಾರೆ. ಇವರಿಬ್ಬರ ಪ್ರೇಮಕಥೆಯೇ ಪಾನಿ ಎನ್ನಲಾಗಿದೆ.ಕೈಟ್ಸ್ ನಲ್ಲಿ ಮೆಕ್ಸಿಕನ್ ಬೆಡಗಿ ಬರ್ಬರಾ ಮೋರಿ ಜೊತೆ ಸ್ವಲ್ಪ ಹೆಚ್ಚಾಗೆ ರೋಮಾನ್ಸ್ ಮಾಡಿ ಪತ್ನಿ ಸುಜಾನ್ ಕಣ್ಣು ಕೆಂಪಗಾಗುವಂತೆ ನೀಲಿ ಕಂಗಳ ಚೆಲುವ ಹೃತಿಕ್ ಮಾಡಿದ್ದುಂಟು. ಈ ಜೋಡಿ ಈಗಳೂ ಚಿತ್ರ ಪ್ರಚಾರಕ್ಕಾಗಿ ಮಾರಿಷಸ್ ,ಮುಂಬೈ ಅಲ್ಲಿ ಇಲ್ಲಿ ಎಂದು ಒಟ್ಟಿಗೆ ಓಡಾಡಿಕೊಂಡಿದೆ. ಮತ್ತೊಂದು ವಿದೇಶಿ ಬ್ಯೂಟಿ ಗೆ ಬಾಲಿವುಡ್ ನ ಬೇಡಿಕೆ ನಟನ ಜೊತೆ ಹೆಜ್ಜೆ ಹಾಕುವ ಅದೃಷ್ಟ ಒದಗಿದೆ. ಪಾನಿ ಎಲ್ಲಿಂದ ಎಲ್ಲಿಗೆ ಹರಿಯುವುದೋ ಕಾದು ನೋಡೋಣ.

ಭಾನುವಾರ, ಏಪ್ರಿಲ್ 11, 2010

ತಜ್ಞರ ಸಲಹೆ ಪಡೆದು ಮುಂದುವರೆಯಿರಿ:ಡಾ|| ಸೋಕಿ

Potato Club Organising a Potato Cultivation Seminar at Arkalgud. Farmer M C Rangaswamy inagurating the function. Pavan Joth Sidhu, Seed Supplier, Pathologist Dr. S S Soki, Potato Club Founder Yogaramesh, Hemmige Mohan and others seen in the picture

ಬುಧವಾರ, ಏಪ್ರಿಲ್ 7, 2010

Dr. VISHNUVARDHAN NUDI NAMANA







Vishnu Sena Samithi Organising a Nudi Namana Programme, Ramesh Arvind Indagurating function, Abhijith inagurating naming ceremony for Vishnuvardhan Road, Actor Shivaram, RameshBhat,Honnavally Krishna,Director Hashyam, Social Worker Yogaramesh and others seen in the picture.

ಮಂಗಳವಾರ, ಏಪ್ರಿಲ್ 6, 2010

ANUSHKA - SHAHID KAPOOR

ಶಾಹಿದ್ ಕಪೂರ್ ಎಂಬ ಬಾಲಿವುಡ್ ಸುರಸುಂದರಾಂಗ ದಿನದಿಂದ ದಿನಕ್ಕೆ ತನ್ನ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಗಾಸಿಪ್, ಸಿನಿಮಾ, ಡ್ಯಾನ್ಸ್ ಹೀಗೆ ಎಲ್ಲ ವಲಯದಲ್ಲೂ ಸಾಕಷ್ಟು ಸುದ್ದಿ ಮಾಡುವ ಶಾಹಿದ್ ಇದೀಗ ತಾನು ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋನೇ ಎಂದು ಸಾಬೀತು ಪಡಿಸಿದ್ದಾರೆ.

ಹೌದು. ಸದ್ಯ ಶಾಹಿದ್ ಹಾಗೂ ಬೆಂಗಳೂರಿನ ಚೆಲುವೆ ಅನುಷ್ಕಾ ಶರ್ಮಾ ಜೋಡಿಯ ಬದ್ಮಾಶ್ ಕಂಪನಿ ಎಂಬ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರೀಕರಣ ನಡೆಯುವ ಸಂದರ್ಭ, ಶಾಹಿದ್ ಅನುಷ್ಕಾ ವಿಶಾಲವಾದ ಹಾಲ್ ಒಂದರಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾಗ, ಹಾಲ್‌ನ ಮೇಲೆ ಇದ್ದ ಗಾಜುಗಳ ಅಲಂಕೃತ ಬೃಹತ್ ದೀಪ ಹಠಾತ್ ನೆಲಕ್ಕೆ ಉರುಳಿತು. ಉರುಳುತ್ತಿರುವ ಸಂದರ್ಭವೇ ಜಾಗೃತನಾದ ಶಾಹಿದ್ ತನ್ನ ಜೊತೆಗೆ ಅನುಷ್ಕಾಳನ್ನೂ ಹಿಡಿದೆಳೆದ. ಇಬ್ಬರೂ ದೂರ ಬಿದ್ದರು. ಕೂದಲೆಳೆಯ ಅಂತರದಲ್ಲಿ ಇಬ್ಬರೂ ಭಾರೀ ಅವಘಡವೊಂದರಿಂದ ಪಾರಾದರು! ಆ ಮೂಲಕ ಶಾಹಿದ್ ಮತ್ತೆ ರಿಯಲ್ ಹೀರೋ ಆಗಿಬಿಟ್ಟ!!!
ಅನುಷ್ಕಾಗಂತೂ ಎದೆ ಢವಢವ. ಆ ವಿದ್ಯುದ್ದೀಪ ಬಿದ್ದಿದ್ದರೆ ಖಂಡಿತಾ ಭಾರೀ ಪೆಟ್ಟಾಗುತ್ತಿತ್ತು. ಜೀವ ಸಹಿತ ಉಳಿಯುವುದೇ ಕಷ್ಟ. ಯಾಕೆಂದರೆ ಅದು ಅಷ್ಟು ಚೂಪಾಗಿತ್ತು. ಆದರೆ ಶಾಹಿದ್ ಮಿಂಚಿನ ವೇಗದಲ್ಲಿ ನನ್ನನ್ನು ಹಿಡಿದೆಳೆದ. ಒಂದು ಕ್ಷಣ ನನಗೇನಾಗುತ್ತಿದೆ ಅಂತಾನೇ ಅರ್ಥವಾಗಲಿಲ್ಲ. ಶಾಹಿದ್ ನನ್ನ ಪ್ರಾಣ ಉಳಿಸಿದ. ಆತನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎಂದು ಅನುಷ್ಕಾ ಹೇಳುತ್ತಾಳೆ.

ಆದರೆ ಶಾಹಿದ್ ಇದೇ ಮೊದಲ ಬಾರಿಗೆ ಹೀಗೆ ಮಾಡಿದ್ದಲ್ಲ. ಹಿಂದೆಯೂ ಶಾಹಿದ್ ಹೀಗೆ ಮಾಡಿದ ಉದಾಹರಣೆಯಿದೆ. ಈ ಹಿಂದೆ ಪ್ರಿಯಾಂಕಾ ಛೋಪ್ರಾ ಜೊತೆ ಕಮೀನೇ ಚಿತ್ರದಲ್ಲಿ ನಟಿಸುತ್ತಿದ್ದಾಗ, ಪ್ರಿಯಾಂಕಾ ಅಕಸ್ಮಾತಾಗಿ ಶೂಟಿಂಗ್ ಸಮಯದಲ್ಲಿ ಬೈಕ್‌ನಿಂದ ಬಿದ್ದಳಂತೆ. ಆಗ ಅದೇ ಸಮಯಕ್ಕೆ ಜಾಗೃತನಾದ ಶಾಹಿದ್ ಆಕೆ ನೆಲದ ಮೇಲೆ ಬೀಳುವುದನ್ನು ತಪ್ಪಿಸಿ ತನ್ನ ಬಾಹುಗಳನ್ನೇ ಆಕೆಗೆ ಆಧಾರವಾಗಿ ನೀಡಿದನಂತೆ. ಹೀಗಾಗಿ ಪ್ರಿಯಾಂಕಾರ ಮುಖ ನೆಲಕ್ಕೆ ಬಡಿದು ಗಾಯಗಳಾಗುವುದು ತಪ್ಪಿತ್ತು. ಸಿನಿಮೀಯ ಮಾದರಿಯಲ್ಲಿ ಪ್ರಿಂಯಾಂಕಾರನ್ನು ಹೀಗೆ ರಕ್ಷಿಸಿದ ಮೇಲೆ ಪ್ರಿಯಾಂಕಾ- ಶಾಹಿದ್ ನಡುವೆ ಏನೋ ಇದೆ ಎಂದು ಗಾಸಿಪ್ ಹರಡಿದ್ದು ಸುಳ್ಳಲ್ಲ. ಅದೇನೇ ಇರಲಿ, ಇದೆಲ್ಲ ಹಳೇ ಕಥೆ.

ಒಟ್ಟಾರೆ ಶಾಹಿದ್ ರೀಲ್ ಮಾತ್ರ ಅಲ್ಲ, ರಿಯಲ್ ಹೀರೋ ಎನ್ನೋಣವೇ!

GANESH WITH MUMBAI BEAUTIES


ಯುವಿಕಾ ಚೌಧರಿ, ಅಂಜನಾ ಸುಖಾನಿಯಂಥಾ ಬಾಲಿವುಡ್ ಬೆಡಗಿಯರ ಜೊತೆ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಮಳೆಯಲಿ ಜೊತೆಯಲಿ ನೆನೆದಿದ್ದು ಗೊತ್ತೇ ಇದೆ. ಅದೇ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಈಗ ಮತ್ತೆ ಬಾಲಿವುಡ್ ಬೆಡಗಿಯರ ಜೊತೆ ಮೈ ಕುಣಿಸುವ ಯೋಗ ಬಂದಿದೆ. ಗಣೇಶ್ ಇದೀಗ ಇಂದ್ರಜಿತ್ ಲಂಕೇಶ್ ನಿರ್ದೇಶನದ ತುಂಟ ತುಂಟಿ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ಲೇಖಾ ವಾಷಿಂಗ್ಟನ್ ಹಾಗೂ ಇಶಿತಾ ಶರ್ಮಾ ಎಂಬಿಬ್ಬರು ಬಾಲಿವುಡ್ ಲಲನಾಮಣಿಯರು ಜೊತೆಯಾಗುತ್ತಿದ್ದಾರೆ. ಇದೇ ಎಪ್ರಿಲ್‌ನಿಂದ ತುಂಟ ತುಂಟಿ ಚಿತ್ರೀಕರಣ ಆರಂಭವಾಗಲಿದೆ.

ಇಶಿತಾ ಶರ್ಮಾ ನಾಯಕಿಯಾಗಿ ನಟಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಕೆಲವು ಆಟಕ್ಕುಂಟು ಲೆಕ್ಕಕ್ಕಿಲ್ಲದಂಥಾ ಬಾಲಿವುಡ್ ತೋಪು ಚಿತ್ರಗಳಲ್ಲಿ ನಟಿಸಿದ ಇಸಿತಾ ಈ ಬಾರಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಹಾಗಾಗಿ ಇದು ಆಕೆಯ ಜೀವನದಲ್ಲೊಂದು ಮಹತ್ವದ ಮೈಲುಗಲ್ಲು.

ಇಶಿತಾಗೆ ಇಂದ್ರಜಿತ್ ಅವರು ಚಿತ್ರದ ಕಥೆಯನ್ನು ವಿವರಿಸಿದಾಗ ಖುಷಿಯೋ ಖುಷಿಯಂತೆ. ಇಂದ್ರಜಿತ್ ಹೇಳಿದ ಕಥೆ ತುಂಬಾ ಚೆನ್ನಾಗಿತ್ತು. ನಾನು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದೇನೆ. ಜೊತೆಗೆ ಕನ್ನಡವನ್ನೂ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನಾನು ಸಿನಿಮಾ ಕುಟುಂಬದಿಂದ ಬಂದಿಲ್ಲ. ನನ್ನ ಕುಟುಂಬಕ್ಕೆ ಸಿನಿಮಾ ರಂಗ ಹೊಸತು. ಆದರೂ ನನ್ನ ಕುಟುಂಬದವರು ನನ್ನ ಈ ಆಯ್ಕೆಗೆ ತುಂಬ ಸಂತೋಷ ಹೊಂದಿದ್ದಾರೆ ಎಂದು ಇಶಿತಾ ನುಡಿದರು.

ಲೇಖಾ ವಾಷಿಂಗ್ಟನ್ ಮಾಜಿ ಐಪಿಎಲ್ ನಿರೂಪಕಿ. ಈಗ ಸದ್ಯ ಅಂಡಮಾನ್ ನಿಕೋಬಾರ್‌ನಲ್ಲಿ ವೀಟರ್ ಗಯಾ ಕಾಮ್ ಸೇ ಎಂಬ ಹಿಂದಿ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾಳೆ. ಜೊತೆಗೆ ಕನ್ನಡ ತುಂಟ ತುಂಟಿಗೂ ಒಕೆ ಅಂದಿದ್ದಾಳೆ. ಆದರೂ ತುಂಟ ತುಂಟಿಯ ಬಗ್ಗೆ ಚಕಾರವೆತ್ತದೆ ತುಟಿಪಿಟಿಕ್ಕೆನ್ನದೆ ಕೂತಿದ್ದಾಳೆ. ಕೇಳಿದರೆ, ಈಗ ಚಿತ್ರದ ಬಗ್ಗೆ ಮಾತಾಡುವ ಹಕ್ಕು ನನಗಿಲ್ಲ. ಮಾತಾಡುವ ಅವಕಾಶ ಸೃಷ್ಟಿಯಾದಾಗ ಮಾತಾಡುತ್ತೇನೆ ಎನ್ನುತ್ತಾಳೆ ಈ ಬೆಡಗಿ.

ಈಗಷ್ಟೇ ತೆಲುಗು ಚಿತ್ರ 'ವೇದಂ'ನಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿದ್ದಾಳೆ. ನನ್ನ ತೆಲುಗು ಚಿತ್ರ ಒಂದು ಉತ್ತಮ ಪ್ರಾಜೆಕ್ಟ್. ಇದೀಗ ಕನ್ನಡ ಚಿತ್ರದಲ್ಲೂ ಅವಕಾಶ ಬಂದಿದೆ. ಹಿಂದಿಯಲ್ಲೂ ನಟಿಸುತ್ತಿದ್ದೇನೆ. ಐಪಿಎಲ್‌ನಲ್ಲಿ ಆಂಕರ್ (ನಿರೂಪಕಿ) ಆಗಿ ಕೆಲಸ ಮಾಡಿದ ನಂತರ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸೃಷ್ಟಿಯಾಯಿತು. ಸಿನಿಮಾದ ಹಿನ್ನೆಲೆ ಇಲ್ಲದ, ದಕ್ಷಿಣದ ಮಂದಿಗೆ ಬಾಲಿವುಡ್‌ಗೆ ಎಂಟ್ರಿಯಾಗೋದು ತುಂಬ ಕಷ್ಟ ಎನ್ನುತ್ತಾಳೆ ಈ ಬೆಡಗಿ ಲೇಖಾ.

CHAYASINGH


CHAYA SINGH






ಭರ್ಜರಿ ಸಾಹಸದಲ್ಲಿ ಮಿಂದೇಳಲಿದೆ ವಿಜಯ್‌ರ 'ಕಂಠೀರವ'

ಅದು ಅಂತಿಂಥ ಫೈಟ್ ಅಲ್ಲ. ಭರ್ಜರಿ ಫೈಟ್. ಕುಸ್ತಿಯಿಂದ ಆರಂಭವಾಗುವ ಇದು ಮಾರ್ಷಲ್ ಆರ್ಟ್ಸ್‌ನಲ್ಲಿ ಅಂತ್ಯಗೊಳ್ಳುವುದೇ ಕಂಠೀರವ ಚಿತ್ರದ ವಿಶೇಷ.

ಹೌದು. ವಿಜಯ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರ ಸಾಹಸದಲ್ಲಿ ಒಂದು ಹೊಸ ಮೈಲುಗಲ್ಲನೇ ಸೃಷ್ಟಿಸಲಿದೆ ಎಂದು ಹೇಳುತ್ತಿದೆ ಚಿತ್ರತಂಡ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಹೇಳಿ ಕೇಳಿ, ಈ ಚಿತ್ರದ ನಿರ್ಮಾಪಕರು ರಾಮು. ಅವರ ಚಿತ್ರಗಳಲ್ಲಿ ಸಾಹಸ, ಅದ್ದೂರಿತನಕ್ಕೆ ಕಡಿಮೆಯೇ ಇಲ್ಲ. ಜೊತೆಗೆ ಇನ್ನ ಹೆಚ್ಚಿನ ವಿಶೇಷವೆಂದರೆ, ಇದು ಕಂಠೀರವ ಚಿತ್ರ. ಮೈಸೂರಿನ ಅರಸ ರಣಧೀರ ಕಂಠೀರವ ಕುಸ್ತಿ ಪಟು. ಜೊತೆಗೆ ಕುಸ್ತಿ ನಮ್ಮ ಮಣ್ಣಿನ ಕ್ರೀಡೆ ಎಂಬ ಕಾರಣಕ್ಕೆ ಈ ಫೈಟ್ ಅನ್ನು ಕುಸ್ತಿ ಮೂಲಕವೇ ಆರಂಭಿಸಲಾಗುವುದು ಎನ್ನುತ್ತಾರೆ ವಿಜಯ್.

ವಿಜಯ್‌ಗೆ ಇಲ್ಲಿ ಇಬ್ಬರು ನಾಯಕಿಯರು. ರಿಷಿಕಾ ಮತ್ತು ಶುಭಾ ಪೂಂಜಾ. ರಿಷಿಕಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳು. ನಟ ಆದಿತ್ಯರ ತಂಗಿ. ಅವರಿಗಿಲ್ಲಿ ತುಂಟತನದ, ಹೆಚ್ಚು ಮಾತನಾಡುವ ಪಾತ್ರ. ಅಂದ ಹಾಗೆ ಶುಭಾ ಪೂಂಜಾಗೆ ನಾಲ್ಕನೇ ಬಾರಿ ವಿಜಯ್ ಜೋಡಿಯಾದ ಖುಷಿ. ಈ ಚಿತ್ರದಲ್ಲಿ ಅವರಿಗೆ ಮಾನಸಿಕ ಅಸ್ವಸ್ಥೆಯ ಪಾತ್ರ!

ಈ ಚಿತ್ರವನ್ನು ತುಷಾರ್ ರಂಗನಾಥ್ ನಿರ್ದೇಶಿಸುತ್ತಿದ್ದಾರೆ. ವಿಜಯ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡರಂತೆ. ಇದು ತೆಲುಗಿನ ಸಿಂಹಾದ್ರಿ ಚಿತ್ರದ ರಿಮೇಕ್. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಕೂಡ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ತುಷಾರ್.
ಭರದಿಂದ ಸಾಗುತ್ತಿದೆ ದರ್ಶನ್ ಅವರ 'ಶೌರ್ಯ'!
ದರ್ಶನ್ ನಾಯಕನಾಗಿ ನಟಿಸುತ್ತಿರುವ ಶೌರ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸಧ್ಯದಲ್ಲಿಯೇ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ.

ಚಿತ್ರದಲ್ಲಿ ಮೂರು ಹಾಡುಗಳಿವೆ. ಇದರಲ್ಲಿ ಒಂದು ಗೀತೆ ಭಾರತದ ಪ್ರಸಿದ್ಧ ಪ್ರವಾಸಿ ತಾಣ ಕುಲು ಹಾಗೂ ಮನಾಲಿಯ ಚುಮುಚುಮು ಚಳಿಯಲ್ಲಿ ಚಿತ್ರೀಕರಣಗೊಳ್ಳಲಿದ್ದು, ಮತ್ತೆರಡು ಗೀತೆಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಕಮ್ ಸಂಗೀತ ನಿರ್ದೇಶಕರಾಗಿರುವ ಸಾಧುಕೋಕಿಲಾ ಅಭಿಪ್ರಾಯ.

ಚಿತ್ರಕ್ಕೆ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. ನಾಯಕಿಯಾಗಿ ರೀಮಾ ವರ್ಮ ಅಭಿನಯಿಸುತ್ತಿದ್ದಾರೆ. ಮುಮೈತಾ ಖಾನ್ ಅವರ ಬೆಡಗು ಬಿನ್ನಾಣವೂ ಇದೆ. ಪ್ರೇಕ್ಷಕರನ್ನು ನಗಿಸಲು ಬುಲೆಟ್ ಪ್ರಕಾಶ್ ಹಾಸ್ಯನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಶೀಘ್ರದಲ್ಲಿ ಚಿತ್ರ ಬಿಡುಗಡೆಗೆ ಚಿತ್ರತಂಡ ಸಜ್ಜುಗೊಳ್ಳುತ್ತಿದೆ.
ಸಿನಿಮಾಕ್ಕೆ ಅಗತ್ಯವಿದ್ದರೆ ಬಿಚ್ಚಲು ಸಿದ್ಧ: ಶೀನಾ ಶಹಬಾದಿ!
ಹಾಲಿವುಡ್ ಸಿನಿಮಾಗಳಲ್ಲಿ ಬಿಚ್ಚುವುದು, ಮುತ್ತಿಕ್ಕುವುದು ಎಲ್ಲಾ ಚಿತ್ರದ ಅವಿಭಾಜ್ಯ ಅಂಗ. ಆದರಿದು ಇತ್ತೀಚಿನ ಕೆಲವು ವರ್ಷಗಳಿಂದ ಬಾಲಿವುಡ್‌ನಲ್ಲೂ ಕಾಮನ್ ಎನ್ನಿಸುವಷ್ಟರ ಮಟ್ಟಿಗೆ ನಡೆಯುತ್ತಿದೆ. ಜೊತೆಗೆ ನಿಧಾನವಾಗಿ ದಕ್ಷಿಣ ಭಾರತೀಯ ಚಿತ್ರಗಳತ್ತಲೂ ಪ್ರಭಾವ ಬೀರುತ್ತಿದೆ. ಹೊಸದಾಗಿ ಪಾದಾರ್ಪಣೆ ಮಾಡುವ ಬೆಡಗಿಯರೂ ಕೂಡಾ ಇಂಥದ್ದಕ್ಕೆಲ್ಲ ರೆಡಿಯಾಗೇ ಬಂದಿರುತ್ತಾರೆ. ಈಗ ಇಂಥದ್ದಕ್ಕೆಲ್ಲ ತಯಾರಾಗಿರೋದು ಶೀನಾ ಶಹಬಾದಿ!

ಬಾಲಿವುಡ್‌ನಲ್ಲಿ ತೇರೇ ಸಂಗ್ ಎಂಬ ಚಿತ್ರದಲ್ಲಿ ನಟಿಸಿದ ಈಕೆ ಹಿರಿಯ ನಟಿ ಸಾಧನಾ ಸಿಂಗ್ ಅಂವರ ಮಗಳು. ತೆಲುಗಿನಲ್ಲೂ ಇತ್ತೀಚೆಗೆ ಬಿಂದಾಸ್ ಎಂಬ ಚಿತ್ರದಲ್ಲಿ ನಟಿಸಿ ಪಡ್ಡೆಗಳ ಹೃದಯ ಕೊಳ್ಳೆಹೊಡೆದಿದ್ದಳು. ಇದೀಗ ರಾಜಧಾನಿ ಎಂಬ ಕನ್ನಡ ಚಿತ್ರದಲ್ಲಿ ಯಶ್‌ಗೆ ಜೋಡಿಯಾಗಿ ನಟಿಸಲು ಬೆಂಗಳೂರಿಗೆ ಬಂದಿದ್ದಾಳೆ.

ಚಿತ್ರದ ಪಾತ್ರಕ್ಕೆ ಅಗತ್ಯವಿದ್ದರೆ ಖಂಡಿತಾ ನಾನು ಬಿಚ್ಚುವುದಕ್ಕೆ ಸಿದ್ಧ. ಬಿಚ್ಚಲು ನನಗೇನೂ ಮುಜುಗರವಿಲ್ಲ. ಆದರೆ ಅಗತ್ಯವಿದ್ದರೆ ಮಾತ್ರ ಬಿಚ್ಚುವ ನಿರ್ಧಾರ ಕೈಗೊಳ್ಳುತ್ತೇನೆ ಎನ್ನುತ್ತಾಳೆ ಶೀನಾ.

ನೋಡಲು ಇನ್ನೂ ಪುಟ್ಟ ಹುಡುಗಿಯಂತೆ ಕಾಣುವ ಶೀನಾಗೆ ಮದುವೆಯೂ ಆಗಿದೆ. ಆದರೆ ಅಷ್ಟೇ ಬೇಗ ವಿಚ್ಛೇದನವೂ ಆಗಿದೆ. ಅದಾದ ಮೇಲೆ ಚಿತ್ರದಲ್ಲಿ ನಟಿಸಲು ಚಿತ್ರರಂಗದ ಅಂಗಳಕ್ಕೆ ಇಳಿದಿದ್ದಾಳೆ. ಇತ್ತೀಚೆಗಷ್ಟೇ ಆಕೆಯ ಮಾಜಿ ಗಂಡ ಆಕೆಯ ಜೊತೆಗೆ ತಾನಿದ್ದಾಗ ತೆಗೆದಿದ್ದ ಕೆಲವು ಹಸಿಬಿಸಿ ಫೋಟೋಗಳನ್ನು ಇಂಟರ್‌ನೆಟ್‌ಗೆ ಹರಿಯಲು ಬಿಟ್ಟಿದ್ದ. ಇದು ಭಾರೀ ಸುದ್ದಿ ಮಾಡಿತ್ತು. ಇದಕ್ಕೆಲ್ಲ ಹೆದರದಿರುವ ಈ ಬೆಡಗಿ, ತಾನೀಗ ಚಿತ್ರರಂಗದಲ್ಲಿ ಮಿಂಚುತ್ತಿರುವು ನೋಡಿ ಆತನಿಗೆ ಹೊಟ್ಟೆಕಿಚ್ಚಾಗುತ್ತಿದೆ. ಅದಕ್ಕೇ ಆತ ಹೀಗೆಲ್ಲಾ ಮಾಡಿ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ದೂರಿದ್ದಳು. ಸದ್ಯಕ್ಕೆ ಕನ್ನಡ ಚಿತ್ರದಲ್ಲಿ ಬ್ಯುಸಿಯಾಗಿರುವ ಶೀನಾ ಚಿತ್ರರಂಗದಲ್ಲಿ ಬೆಳೆಯಲು ಕನಸು ಕಾಣುತ್ತಿದ್ದಾಳೆ.

ಹಾಡುಗಳ ಹರಿಕಾರ ಗೀತಪ್ರಿಯ ಹಿನ್ನೋಟ

ಕನ್ನಡ ಚಲನಚಿತ್ರರಂಗದ ಪ್ರಮುಖ ಗೀತರಚನಕಾರ ಹಾಗೂ ನಿರ್ದೇಶಕರ ಸಾಲಿಗೆ ಸೇರುವ ಮತ್ತೊಂದು ಹೆಸರು ಗೀತಪ್ರಿಯ. ಇವರ ನಿಜವಾದ ಹೆಸರು ಲಕ್ಷ್ಮಣರಾವ್ ಮೋಹಿತೆ.ಬಾಲ್ಯಮಿತ್ರ ವಿಜಯಭಾಸ್ಕರ್ ಸಹಾಯದಿಂದ 1955ರಲ್ಲಿ 'ಶ್ರೀರಾಮಪೂಜಾ' ಚಲನಚಿತ್ರಕ್ಕೆ ಗೀತೆ ಬರೆಯುವ ಅವಕಾಶ ದೊರಕಿತು. ವಿಜಯ ಭಾಸ್ಕರ್ ಅವರೆ ಇವರಿಗೆ ಗೀತಪ್ರಿಯ ಎಂದು ನಾಮಕರಣ ಮಾಡಿದರು.

ಇಷ್ಟೆಲ್ಲಾ ಪೀಠಿಕೆಗೆ ಕಾರಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುವ ವಿಭಿನ್ನ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ' ಯಲ್ಲಿ ಗೀತಪ್ರಿಯ ಅವರನ್ನು ಭೇಟಿಯಾಗಬಹುದು. ಏಪ್ರಿಲ್ 10ರಂದು ಸಂಜೆ 4.30ಕ್ಕೆ ಬಾದಾಮಿ ಹೌಸ್ ನಲ್ಲಿ ಗೀತಪ್ರಿಯ ಜೊತೆ ಹಿನ್ನೋಟಕ್ಕೆ ಹೊರಳಬಹುದು.

ಬೆಸುಗೆ ಬೆಸುಗೆ ಜೀವನವೆಲ್ಲಾ ಸುಂದರ ಬೆಸುಗೆ, ನಮ್ಮೂರ್ನಾಗ್ ನಾನೊಬ್ಬನೆ ಜಾಣ, ಇದೇನ ಸಭ್ಯತೆ,ಇದೇನ ಸಂಸ್ಕೃತಿ, ಹಕ್ಕಿಯು ಹಾರುತಿದೆ, ವೀಣಾ ನಿನಗೇಕೋ ಈ ಕಂಪನ...ಹಾಡುಗಳನ್ನು ಕೇಳಿದಾಗಲೆಲ್ಲಾ ಅವರು ಕೇವಲ ಗೀತಪ್ರಿಯರಷ್ಟೆ ಅಲ್ಲ ಸಂಗೀತ ಪ್ರಿಯರು ಎಂಬುದು ಮನದಟ್ಟಾಗುತ್ತದೆ. ಒಂದೇ ಬಳ್ಳಿಯ ಹೂಗಳು, ಬೆಟ್ಟದ ಹುಲಿ, ಹೊಂಬಿಸಿಲು ಸೇರಿದಂತೆ ಮುವ್ವತ್ತು ಅರ್ಥಪೂರ್ಣ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕರು ಗೀತಪ್ರಿಯ.

ಗೀತಪ್ರಿಯ ನಿರ್ದೇಶನದ 'ಮಣ್ಣಿನ ಮಗ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಗೀತಪ್ರಿಯ ನಲವತ್ತೈದು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಬೆಳುವಲದ ಮಡಿಲಲ್ಲಿ, ಪುಟಾಣಿ ಏಜೆಂಟ್ 123, ಪ್ರೀತಿಸಿ ನೋಡು, ಬೆಸುಗೆ, ಹೊಂಬಿಸಿಲು ಚಿತ್ರಗಳು ಗೀತಪ್ರಿಯ ಅವರ ಪ್ರೌಢ ನಿರ್ದೇಶನಕ್ಕೆ ಕನ್ನಡಿ ಹಿಡಿಯುತ್ತವೆ.

ಮಾಜಿ ಪ್ರೇಮಿ ವಿರುದ್ಧ ರಾಖಿ ಕುಣಿತ ಸಮರ



ಬಾಲಿವುಡ್ ನ ಐಟಂಗರ್ಲ್, ವಿವಾದಗಳ ರಾಣಿ ರಾಖಿ ಸಾವಂತ್ ಮತ್ತೆ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯಲು ಸಜ್ಜಾಗಿದ್ದಾರೆ. ಸ್ಟಾರ್ ಪ್ಲಸ್ ನ ರಿಯಾಲಿಟಿ ಷೋ' ಜರಾ ನಚ್ಕೆ ದಿಖಾ' ದಲ್ಲಿ ಕುಣಿಯಲು ರಾಖಿ ಮನಸ್ಸು ಮಾಡಿದ್ದಾರೆ. ರಾಖಿ ಸ್ಪರ್ಧಿಗಿಳಿಯುತ್ತಿರುವುದು ತನ್ನ ಮಾಜಿ ಪ್ರೇಮಿ ಅಭಿಷೇಕ್ ಅವಸ್ಥಿ ವಿರುದ್ಧ ಎಂಬುದು ಇಲ್ಲಿ ವಿಶೇಷ.

ಅಭಿಷೇಕ್ ಕೂಡ ಸ್ಪರ್ಧಿಯಾಗಿದ್ದಾನೆ ಈ ಬಗ್ಗೆ ಏನು ಹೇಳ್ತೀರಾ ಎಂದು ಕೇಳಿದರೆ, 'ಅಭಿಷೇಕ್ ಅವಸ್ಥಿಯಾಗಲಿ, ಅಮೀರ್ ಖಾನ್, ಶಾರುಖ್ ಖಾನ್ ಆಗಲಿ ನಾನು ಕೇರ್ ಮಾಡುವುದಿಲ್ಲ, ಸ್ಪರ್ಧಿಗಿಳಿದ ಮೇಲೆ ಎಲ್ಲರೂ ಒಂದೇ. ಇಲ್ಲಿ ಗೆಲುವು ನಮಗೆ ಖಚಿತ' ಎಂಬ ಬಿಂದಾಸ್ ಮಾತುಗಳನ್ನಾಡಿದರು ರಾಖಿ.

ಸುಮಾರು 9 ವಾರಗಳ ಕಾಲ ನಡೆಯುವ ಈ ಬಾಯ್ಸ್ V/s ಗರ್ಲ್ಸ್ ಡಾನ್ಸ್ ಸಮರದಲ್ಲಿ ಕಿರುತೆರೆಯ ಪ್ರಸಿದ್ಧ ತಾರೆಗಳ ದಂಡೆ ಇದೆ. ರಾಖಿ ಅಲ್ಲದೆ, ಅದಿತಿ ಗುಪ್ತಾ, ಹಜೆಲ್ ಕ್ರೋನಿ, ಕೃತಿಕಾ ಕಾಮ್ರಾ, ಮುಕ್ತಿ ಮೋಹನ್, ರಷ್ಮಿ ದೇಸಾಯಿ, ಸಂಗೀತಾ ಘೋಷ್, ಸಂಜೀದಾ ಶೇಖ್ , ಸಪರ್ಶ್ ಕಂಚಂನ್ ದಾನಿ ಮತ್ತಿತ್ತರಿದ್ದಾರೆ. ಇವರಿಗೆ ಟಾಂಗ್ ಕೊಡಲು ಅಭಿಷೇಕ್ ಅವಸ್ತಿ ಅಲ್ಲದೆ ಕರಣ್ ಕುಂದ್ರಾ, ಸಿದ್ದೇಶ್ ಪೈ, ಸುಶಾಂತ್ ಮುಂತಾದವರು ಭಾಗವಹಿಸಲಿದ್ದಾರೆ.

ವಿ ಮನೋಹರ್ ಕನಸಿನ ಕೂಸು 'ಭೂಮಿ ಗೀತ

ಚಿತ್ರಸಾಹಿತಿ, ಸಂಗೀತ ನಿರ್ದೇಶಕ ವಿ. ಮನೋಹರ್ ಮೊದಲಿನಿಂದಲೂ ಜಾನಪದ ಕಲೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದಾರೆ. ಜಾನಪದ ಕಲೆಯನ್ನು ಇನ್ನೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬುಡಕಟ್ಟು ಜನರ ಹಾಡುಗಾರಿಕೆ, ಕಲೆಯ ಬಗ್ಗೆ ಅಧ್ಯಯನ ಮಾಡಲು ಸಜ್ಜಾಗಿದ್ದಾರೆ. ಅದಕ್ಕಾಗಿ 'ಭೂಮಿ ಗೀತ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಕುರಿತು ಕೆಲ ವಿವರಣೆಗಳನ್ನು ವಿ ಮನೋಹರ್ ನೀಡಿದ್ದಾರೆ.

ಬಾಲ್ಯದಲ್ಲಿ ಕೋಲಾಟದ ದಲಿತರ ಒಂದು ಹಾಡನ್ನು (ಕಥನ ಗೀತೆ) ಕೇಳಿದ್ದೆ. ಅದರ ಒಂದು ಸಾಲು ಮಾತ್ರ ನನಗೆ ನೆನಪಿತ್ತು. ನಾನು ಮತ್ತೆ 5 ವರ್ಷದ ನಂತರ ಅದನ್ನು ಹುಡುಕಿಕೊಂಡು ಹೋದಾಗ ಆ ಹಾಡೂ ಇರಲಿಲ್ಲ. ಅದನ್ನು ಹಾಡುವವರೂ ಇರಲಿಲ್ಲ. ಆ ಹಾಡನ್ನು ಹಾಡಿದರೆ ನಮ್ಮನ್ನು ಕೀಳುಜಾತಿಯವರೆಂದು ನಿರ್ಲಕ್ಷಿಸುತ್ತಾರೆ ಎಂದು ಆ ದಲಿತ ಬುಡಕಟ್ಟು ಜನಾಂಗದವರು ಆ ಹಾಡು ಹಾಡುವುದನ್ನು ಬಿಟ್ಟುಬಿಟ್ಟರು.

ಆ ರೀತಿಯ ಪ್ರದರ್ಶನ ಕೀಳರಿಮೆಯ ಕಾರಣದಿಂದ ನಾಶವಾಗುತ್ತ ಹೋಗುತ್ತದೆ. ಆ ಕಲೆಯನ್ನು ಉಳಿಸಿಕೊಂಡವರನ್ನು ಪ್ರೋತ್ಸಾಹಿಸಿ ಪುನಃ ಬೆಳೆಸಿ ಉಳಿಸಲು ನಮ್ಮ ಸಂಸ್ಥೆಯಿಂದ ಪ್ರಯತ್ನಿಸುತ್ತೇನೆ. ಸಂಗೀತ ನಿರ್ದೇಶಕ ಹಂಸಲೇಖ ಅವರು ನನ್ನ ಸ್ಟುಡಿಯೋದಲ್ಲಿ ಅವರನ್ನು ಕರೆಸಿ ಹಾಡಿಸಿ ಎಂದುನಮಗೆ ಬೆಂಬಲ ಸೂಚಿಸಿದ್ದಾರೆ.

ಸೋಲಿಗರು, ಹಕ್ಕಿ-ಪಿಕ್ಕಿ ವಂಶಜರು ಎಲ್ಲಾ ಸೇರಿ ಹೀಗೆ 45 ರೀತಿಯ ಕೈ-ಕಸುಬುದಾರರಿದ್ದಾರೆ. ಅಂಥವರೆಲ್ಲರ ಸಾಂಸ್ಕೃತಿಕ ಕಲೆಯನ್ನು ಪುನರುಜ್ಜೀವನಗೊಳಿಸಲು ಭೂಮಿಗೀತ ಪ್ರಯತ್ನಿಸುತ್ತದೆ ಎಂದು ತಮ್ಮ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿ. ಮನೋಹರ ವಿವರಿಸಿದರು.ಹೆಸರಾಂತ ಜನಪದ ಕಲಾವಿದ ಮೈಸೂರು ಜನ್ನಿ ಮಾತನಾಡಿ ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯನ್ನು ನಾವು ನಿಕೃಷ್ಟವಾಗಿ ಕಾಣುತ್ತಿದ್ದೇವೆ. ಅದನ್ನು ಮತ್ತೆ ಜೀವಂತವಾಗಿರಿಸಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ, ಬೆಂಬಲ ಕೂಡ ಅತ್ಯಗತ್ಯವಾಗಿದೆ ಎಂದರು.

ಕುಶಾಲನಗರದಲ್ಲಿ ಪುನೀತ್ 'ಜಾki

ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ಡಾ.ರಾಜ್ [^]‌ಕುಮಾರ್ ಅರ್ಪಿಸಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ 'ಜಾಕಿ'. ಈ ಚಿತ್ರದ ಚಿತ್ರೀಕರಣವು ಏಪ್ರಿಲ್ 4 ರಿಂದ ಕುಶಾಲನಗರದಲ್ಲಿ ಮುಂದುವರೆದಿದೆ.ಚಿತ್ರಕ್ಕಾಗಿ 19 ದಿನಗಳ ಕಾಲ ಪುನೀತ್-ಭಾವನಾ ಮತ್ತಿತರರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಬೆಂಗಳೂರಿನ ಸುತ್ತಮುತ್ತ ಸತ್ಯ ಹೆಗ್ಡೆ ಛಾಯಾಗ್ರಹಣದಲ್ಲಿ ನಿರ್ದೇಶಕ ಸೂರಿ ಚಿತ್ರಿಸಿಕೊಂಡರು.

ಹತ್ತು ದಿನಗಳ ಕಾಲ ಕುಶಾಲನಗರ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು ನಂತರ ಮೈಸೂರಿನಲ್ಲಿ ಚಿತ್ರೀಕರಣ ಮುಂದುವರೆಯಲಿದೆ ಎಂದು ನಟ-ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ.ಚಿತ್ರಕ್ಕೆ ಯೋಗರಾಜ್ ಆರ್. ಭಟ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯ, ಸತ್ಯ ಹೆಗ್ಡೆ ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಶಶಿಧರ ಅಡಪ ಕಲೆ, ಇಮ್ರಾನ್ ನೃತ್ಯ, ರವಿವರ್ಮ- ಡಿಫರೆಂಟ್ ಡ್ಯಾನಿ ಸಾಹಸ, ಮಲ್ಲಿಕಾರ್ಜುನ ನಿರ್ಮಾಣ ಮೇಲ್ವಿಚಾರಣೆ ಇದೆ.

ಕಥೆ- ಚಿತ್ರಕಥೆ- ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಸೂರಿ ಹೊತ್ತಿದ್ದಾರೆ.ತಾರಾಗಣದಲ್ಲಿ ಪುನೀತ್ ರಾಜ್ ಕುಮಾರ್ ಜೋಡಿಯಾಗಿ ಚತುರ್ಭಾಷಾ ತಾರೆ ಭಾವನಾ ಕಾಣಿಸಿಕೊಳ್ಳುತ್ತಿದ್ದು, ರಂಗಾಯಣ ರಘು, ರವಿ ಕಾಳೆ, ಶೋಭರಾಜ್, ಸಂಪತ್, ಉಮೇಶ್ ಮುಂತಾದವರಿದ್ದಾರೆ