ಮಂಗಳವಾರ, ಏಪ್ರಿಲ್ 27, 2010

ಕೃಷ್ಣನ್ ಲವ್ ಸ್ಟೋರಿ ಶೀಘ್ರದಲ್ಲೆ ತೆರೆಗೆ

ಅಜಯ್, ರಾಧಿಕಾಪಂಡಿತ್ ಜೋಡಿಯ, ಶಶಾಂಕ್ ನಿರ್ದೇಶನದ 'ಕೃಷ್ಣನ್ ಲವ್ ಸ್ಟೊರಿ' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ವಿ.ಶ್ರೀಧರ್ ಸಾರಥ್ಯದಲ್ಲಿ ಹಿನ್ನಲೆ ಸಂಗೀತ ನೀಡಲಾಗುತ್ತಿದೆ. ಹಾಗೆಯೇ ಮುಂಬೈ ನಗರದ ಪ್ರಸಿದ್ಧ ಸ್ಟುಡಿಯೋದಲ್ಲಿ ಡಿ.ಟಿ.ಎಸ್, ಡಿ ಐ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಭಿನ್ನ ಪ್ರೇಮಕಥೆಯುಳ್ಳ ಈ ಚಿತ್ರ ಯುವಪೀಳಿಗೆಗೆ ಹತ್ತಿರವಾಗಲಿದೆ ಎಂದು ಶಶಾಂಕ್ ತಿಳಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ಧವಾಗಲಿದ್ದು ಮುಂದಿನ ತಿಂಗಳು ತೆರೆ ಕಾಣುವ ಸಾಧ್ಯತೆಯಿದೆ.ಶ್ರೀವೆಂಕಟೇಶ್ವರ ಕೃಪ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತ ಹಾಗೂ ಮೋಹನ್.ಜಿ.ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯೋಗೀಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಎಂ.ಎಲ್.ಪ್ರಸನ್ನ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸವಿರುವ ‘ಕೃಷ್ಣನ್ ಲವ್ ಸ್ಟೊರಿಗೆ ಸಿ.ಎಚ್.ಸುರೇಶ್ ಮತ್ತು ಲೋಕೇಶ್ ಆವರ ಸಹ ನಿರ್ಮಾಣವಿದೆ.
ಮಥುರಾನಗರಿಯಲ್ಲಿ ರಮ್ಯಾ ಪ್ರೇಮ ಲೋಕ!
ಬೆಂಗಳೂರು ರಾಯಲ್ ಚಾಲೆಂಜರ್ಸ್ ನ ರಾಯಭಾರಿ ರಮ್ಯಾ ಇಷ್ಟು ದಿನ ಐಪಿಎಲ್ ಪಂದ್ಯಾವಳಿಯಲ್ಲಿ ಕಳೆದು ಹೋಗಿದ್ದರು. ಇದೀಗ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ನಟ ಧ್ಯಾನ್ ಗೆ ಜೊತೆಯಾಗಲಿದ್ದಾರೆ ರಮ್ಯಾ. ಚಿತ್ರದ ಹೆಸರು 'ಮಥುರಾನಗರಿ'. ಟ್ಯಾಗ್ ಲೈನ್ 'ರಾಧೆಯ ಪ್ರೇಮಲೋಕ'!'ಒಂದು ಪ್ರೀತಿಯ ಕಥೆ' ನಿರ್ದೇಶಿಸಿದ್ದ ರಾಜಶೇಖರ ರಾವ್ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ರಮ್ಯಾ ಮತ್ತು ಧ್ಯಾನ್ ಕತೆಯ ಪಾತ್ರಗಳಿಗೆ ಸೂಕ್ತವಾಗಿ ಒಪ್ಪುತ್ತಾರೆ ಎಂಬ ಕಾರಣಕ್ಕೆ ಅವರಿಬ್ಬರನ್ನು ತಮ್ಮ 'ಮಥುರಾನಗರಿ' ಚಿತ್ರಕ್ಕೆ ಆಯ್ಕೆ ಮಾಡಿದ್ದಾಗಿ ರಾಜಶೇಖರ ರಾವ್ ತಿಳಿಸಿದ್ದಾರೆ.ಹಳ್ಳಿಹುಡುಗನ ರೀತಿ ಕಾಣುವ ನಟ ಬೇಕಾಗಿತ್ತು. ಧ್ಯಾನ್ ಗಿಂತಲೂ ಸೂಕ್ತ ನಟ ಇನ್ಯಾರಿದ್ದಾರೆ ಎಂಬುದು ರಾವ್ ಅವರ ಪ್ರತಿಕ್ರಿಯೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ರಮ್ಯಾ ಅವರಿಗೆ ಈ ಪಾತ್ರ ಹೇಳಿ ಮಾಡಿಸಿದಂತಿದೆ. ಆಧುನಿಕ ರಾಧೆಯಾಗಿ ರಮ್ಯಾ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ ಎನ್ನುತ್ತಾರೆ ರಾಜಶೇಖರ.ಚಿತ್ರದ ಉಳಿದ ತಂತ್ರಜ್ಞರ ಹಾಗೂ ತಾರಾಬಳಗದ ಆಯ್ಕೆ ಪ್ರಗತಿಯಲ್ಲಿದ
ಕಿರುತೆರೆಯಲ್ಲಿ ಕಿಚ್ಚ ಸುದೀಪ್ ರಿಯಾಲಿಟಿ ಶೋ
ಹೆಚ್ಚಿನ ನಾಯಕ ನಟರು ಕಿರುತೆರೆ ಎಂದರೆ ಮೂಗುಮುರಿಯುತ್ತಾರೆ. ಆದರೆ ನಮ್ಮ ಕಿಚ್ಚ ಸುದೀಪ್ ಯಾವುದೇ ಅಳುಕಿಲ್ಲದೆ ಕಿರುತೆರೆಗೆ ಅಡಿಯಿಡಲು ಮುಂದಾಗಿದ್ದಾರೆ. ರಮೇಶ್, ದೇವರಾಜ್, ರಕ್ಷಿತಾ, ವರ್ಷಾ ನಂತರ ಇದೀಗ ಸುದೀಪ್ ಕಿರುತೆರೆಯತ್ತ ದಾಪುಗಾಲು ಹಾಕಿದ್ದು ರಿಯಾಲಿಟಿ ಶೋ ಒಂದನ್ನು ನಡೆಸಿಕೊಡಲಿದ್ದಾರೆ.ಸುವರ್ಣ ವಾಹಿನಿಗಾಗಿ ಸುದೀಪ್ ನಡೆಸಿಕೊಡುವ ರಿಯಾಲಿಟಿ ಶೋ ಹೆಸರು 'ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್'. ಹೆಸರು ವಿಚಿತ್ರವಾಗಿ ಹಾಗೂ ಆಕರ್ಷಕವಾಗಿದೆ ಅನ್ನಿಸುವುದಿಲ್ಲವೆ? ಪೇಟೆ ಹುಡುಗಿಯರನ್ನು ಹಳ್ಳಿಗೆ ಬಿಟ್ಟು ಅಲ್ಲಿನ ವಾತಾವರಣಕ್ಕೆ ಅವರೆಲ್ಲಾ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ತಿಳಿದುಕೊಳ್ಳಲಾಗುತ್ತದೆ. ಹಳ್ಳಿಗರ ಎಲ್ಲಾ ಸ್ಪರ್ಧೆಯಲ್ಲಿ ಗೆದ್ದ ಪೇಟೆ ಹುಡುಗಿಯರಿಗೆ ವಿಶೇಷ ಬಹುಮನಾ ಕೊಡಲಾಗುತ್ತದೆ. ಸುದೀಪ್ ನಿರೂಪಿಸುವ ಈ ಕಾರ್ಯಕ್ರಮಕ್ಕೆ ತೀರ್ಪುಗಾರರು ಸಹ ಅವರೇ ಎಂಬುದು ಗಮನಾರ್ಹ ಅಂಶ. ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್ ಕಾರ್ಯಕ್ರಮಕ್ಕೆ ಮಾರ್ಗದರ್ಶನವನ್ನೂ ನೀಡಲಿದ್ದಾರೆ ಸುದೀಪ್.ಈಗಾಗಲೆ ಈ ರಿಯಾಲಿಟಿ ಶೋನ ಚಿತ್ರೀಕರಣ ಆರಂಭವಾಗಿದೆ. 'ವೀರ ಪರಂಪರೆ' ಚಿತ್ರೀಕರಣ ಮುಗಿದ ಕೂಡಲೆ ಸುದೀಪ್ ಕಿರುತೆರೆಗೆ ಮುಖ ಮಾಡಲಿದ್ದಾರೆ. ಸದ್ಯಕ್ಕೆ 'ಕನ್ವರ್ ಲಾಲ್' ಹಾಗೂ ತೆಲುಗಿನಲ್ಲಿ 'ರಕ್ತ ಚರಿತ್ರ' ಚಿತ್ರಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಒಟ್ಟಾರೆಯಾಗಿ ಕಿರುತೆರೆ ಮೂಲಕ ಸುದೀಪ್ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವಣ್ಣನ ಹೊಸ ಚಿತ್ರ ಕ್ಷತ್ರಿಯ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರ 'ಜೋಗಯ್ಯ' ಸೆಟ್ಟೇರುವುದು ತಡವಾಗಲಿದೆ. ಕಾರಣ ಶಿವಣ್ಣ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಚಿತ್ರದ ಹೆಸರು 'ಕ್ಷತ್ರಿಯ'. ಸದ್ಯಕ್ಕೆ ಶಿವಣ್ಣ ಅಭಿನಯಿಸುತ್ತಿರುವ 'ಮೈಲಾರಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.ಕನ್ನಡದ ದಾಖಲೆ ಚಿತ್ರ 'ಜೋಗಿ' ಚಿತ್ರದ ಮುಂದುವರಿದ ಭಾಗ 'ಜೋಗಯ್ಯ' ಎಂಬುದು ಗೊತ್ತೆಯಿದೆ. ರಕ್ಷಿತಾ ಪ್ರೇಮ್ ನಿರ್ಮಿಸುತ್ತಿರುವ 'ಜೋಗಯ್ಯ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಪ್ರೇಮ್. ಚಿತ್ರಕತೆ ಎಲ್ಲವನ್ನೂ ಸಿದ್ಧವಾಗಿಟ್ಟುಕೊಂಡಿರುವ ಪ್ರೇಮ್ಈ ಚಿತ್ರವನ್ನು ಆದಷ್ಟು ಬೇಗ ಮುಗಿಸಬೇಕು ಎಂಬುದು ಉದ್ದೇಶ. ಏತನ್ಮಧ್ಯೆ ಶಿವಣ್ಣ ದಿಢೀರನೆ 'ಕ್ಷತ್ರಿಕ'ನನ್ನು ಒಪ್ಪಿಕೊಂಡು 'ಜೋಗಯ್ಯ'ನಿಗೆ ಬ್ರೇಕ್ ಹಾಕಿದ್ದಾರೆ. ಆದಷ್ಟು ಬೇಗ ಕ್ಷತ್ರಿಯನನ್ನು ಮುಗಿಸಿ ಜುಲೈ ವೇಳೆಗೆ 'ಜೋಗಯ್ಯ'ನನ್ನು ಕೈಗೆತ್ತಿಕೊಳ್ಳಲು ಶಿವಣ್ಣ ನಿರ್ಧರಿಸಿದ್ದಾರೆ. ಕ್ಷತ್ರಿಯ ಚಿತ್ರವನ್ನು ತೆಲುಗಿನ ನಿರ್ಮಾಪಕರಾದ ರವಿ ಮತ್ತು ಭಾಸ್ಕರ್ ನಿರ್ಮಿಸುತ್ತಿದ್ದಾರೆ. ವಿ ವಿ ಬದ್ರಿ ನಿರ್ದೇಶನ, ರಮಣ ಗೋಗುಲ ಅವರ ಸಂಗೀತ ಚಿತ್ರಕ್ಕಿರುತ್ತದೆ. ಮೈಲಾರಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಕ್ಷತ್ರಿಯ ಚಿತ್ರೀಕರಣ ಅರಂಭವಾಗಲಿದೆ. ಆ ಬಳಿಕವಷ್ಟೆ ಜೋಗಯ್ಯನ ಅಬ್ಬರ ಶುರುವಾಗಲಿದೆ ಎನ್ನುತ್ತವೆ ಮೂಲಗಳು. ಸುದೀರ್ಘ ಸಮಯ ಬಳಿಕ ಸಂಗೀತ ನಿರ್ದೇಶಕ ರಮಣ ಕನ್ನಡ ಚಿತ್ರಕ್ಕೆ ಮರಳುತ್ತಿದ್ದಾರೆ. ಅಂದಹಾಗೆ ಮೈಲಾರಿ ಚಿತ್ರಕ್ಕೆ ಸದಾ ಹಾಗೂ ಗಂಡ ಹೆಂಡತಿ ಸಂಜನಾ ಇಬ್ಬರು ನಾಯಕಿಯರು. ಇದು ಶಿವಣ್ಣನ 99ನೇ ಚಿತ್ರ.
ಕೊಳ್ಳೆಗಾಲದಲ್ಲಿ ಗಣೇಶನ ಮದುವೆ ಸಂಭ್ರಮ
ಸದಾ ಹಚ್ಚಹಸಿರಿನಿಂದ ಕಂಗೊಳ್ಳಿಸುವ ಜಿಲ್ಲೆ ಕೊಳ್ಳೆಗಾಲ. ಆ ಜಿಲ್ಲೆಯ ಸಮೀಪ ಎಡಕುರಿಯಾ ಎಂಬ ಸುಂದರ ಹಳ್ಳಿ. ಆ ಹಳ್ಳಿಯಲ್ಲಿ ಗಣೇಶ್ ನಾಯಕನಾಗಿ ನಟಿಸುತ್ತಿರುವ 'ಮದುವೆಮನೆ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಗಣೇಶ್, ಶ್ರದ್ಧಾಆರ್ಯ, ಸ್ಪೂರ್ತಿ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ 'ಮದುವೆಮನೆ' ಚಿತ್ರವನ್ನು ಸುನೀಲ್‌ಕುಮಾರ್ ಸಿಂಗ್ ಕಥೆ , ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕರಿಗೆ ಹಿರಿತೆರೆಯಲ್ಲಿ ಇದು ಚೊಚ್ಚಲ ಯತ್ನ. ಗಣೇಶ್ ಹಾಗೂ ಶ್ರದ್ದಾಆರ್ಯ ನಾಯಕ/ನಾಯಕಿಯರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ 'ಜುಗಾರಿ'ಯ ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಬಲನಾಣಿ, ಶರಣ್, ಹನುಮಂತೇಗೌಡ, ಕೆ.ವಿ.ನಾಗೇಶ್‌ಕುಮಾರ್, ಎಂ.ಎನ್.ಎಂ. ಚಿತ್ಕಲಾ, ಡಾ.ನಾಗೇಶ್, ಜಾದವ್‌ಮೈಸೂರು, ಚಿನ್ನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ, ಮೋಹನ್ ಬಿ ಕೆರೆ ಕಲಾನಿರ್ದೇಶನ 'ಮದುವೆಮನೆ' ಚಿತ್ರಕ್ಕಿದೆ.
ಹೃತಿಕ್ ಜೊತೆ ರೋಮಾನ್ಸ್ ಗೆ ಕ್ರಿಸ್ಟೇನ್
ಹೃತಿಕ್ ರೋಷನ್ ಜೊತೆ ಮತ್ತೊಬ್ಬ ಫಿರಂಗಿ ಚೋರಿ ಕುಣಿಯುವುದು ಖಾತ್ರಿಯಾಗಿದೆ. ಬರ್ಬರಾ ಮೋರಿ ನಂತರ ಈಗ 20 ವರ್ಷದ ಚೆಲುವೆ ಕ್ರಿಸ್ಟೆನ್ ಸ್ಟೀವರ್ಟ್ ಬಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರೆ. ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಅವರ ಪಾನಿ ಚಿತ್ರದಲ್ಲಿ ಈ ಚೆಲುವೆ ಹೃತಿಕ್ ಜೊತೆ ರೋಮಾನ್ಸ್ ಮಾಡಲಿದ್ದಾಳೆ.
Read: In English ಎಲಿಜಬೇತ್ ಚಿತ್ರ ಖ್ಯಾತಿಯ ಶೇಖರ್ ಕಪೂರ್ ಅವರ ಅಭಿಮಾನಿಯಾದ ಈ 'ಟ್ವಿಲೈಟ್ 'ತಾರೆ ಕ್ರಿಸ್ಟೆನ್, ಶೇಖರ್ 'ಪಾನಿ' ಚಿತ್ರದ ಬಗ್ಗೆ ಹೇಳಿದ ತಕ್ಷಣ ಒಪ್ಪಿಕೊಂಡಿದ್ದಾರೆ. ಚಿತ್ರದ ಕಥೆ ಯ ಬಗ್ಗೆ ಶೇಖರ್ ಹೆಚ್ಚು ಸುಳಿವು ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಇದು ಮತ್ತೊಂದು ಹಾಲಿವುಡ್ ಬಾಲಿವುಡ್ ಮಿಶ್ರಣದ ಚಿತ್ರ. ಮೊದಲು ಇಂಗ್ಲೀಷ್ ನಲ್ಲಿ ಚಿತ್ರೀಕರಿಸಿ ನಂತರ ಹಿಂದಿಗೆ ಡಬ್ಬಿಂಗ್ ಮಾಡುವ ಸಾಧ್ಯತೆಯಿದೆ. ಮುಂಬೈನ ಬಡವ ಶ್ರೀಮಂತರ ಕಥೆ ಇದಾಗಿದ್ದು, ಹೃತಿಕ್ ಕೆಳವರ್ಗದ ಯುವಕನ ಪಾತ್ರವಹಿಸಿದ್ದರೆ, ಕ್ರಿಸ್ಟೆನ್ ಶ್ರೀಮಂತ ಹುಡುಗಿ ಪಾತ್ರ ಧರಿಸಲಿದ್ದಾರೆ. ಇವರಿಬ್ಬರ ಪ್ರೇಮಕಥೆಯೇ ಪಾನಿ ಎನ್ನಲಾಗಿದೆ.ಕೈಟ್ಸ್ ನಲ್ಲಿ ಮೆಕ್ಸಿಕನ್ ಬೆಡಗಿ ಬರ್ಬರಾ ಮೋರಿ ಜೊತೆ ಸ್ವಲ್ಪ ಹೆಚ್ಚಾಗೆ ರೋಮಾನ್ಸ್ ಮಾಡಿ ಪತ್ನಿ ಸುಜಾನ್ ಕಣ್ಣು ಕೆಂಪಗಾಗುವಂತೆ ನೀಲಿ ಕಂಗಳ ಚೆಲುವ ಹೃತಿಕ್ ಮಾಡಿದ್ದುಂಟು. ಈ ಜೋಡಿ ಈಗಳೂ ಚಿತ್ರ ಪ್ರಚಾರಕ್ಕಾಗಿ ಮಾರಿಷಸ್ ,ಮುಂಬೈ ಅಲ್ಲಿ ಇಲ್ಲಿ ಎಂದು ಒಟ್ಟಿಗೆ ಓಡಾಡಿಕೊಂಡಿದೆ. ಮತ್ತೊಂದು ವಿದೇಶಿ ಬ್ಯೂಟಿ ಗೆ ಬಾಲಿವುಡ್ ನ ಬೇಡಿಕೆ ನಟನ ಜೊತೆ ಹೆಜ್ಜೆ ಹಾಕುವ ಅದೃಷ್ಟ ಒದಗಿದೆ. ಪಾನಿ ಎಲ್ಲಿಂದ ಎಲ್ಲಿಗೆ ಹರಿಯುವುದೋ ಕಾದು ನೋಡೋಣ.

ಕಾಮೆಂಟ್‌ಗಳಿಲ್ಲ: