ಶನಿವಾರ, ಸೆಪ್ಟೆಂಬರ್ 4, 2010

ನೈತಿಕ ಬೆಂಬಲ ನೀಡಿದರೆ ಭ್ರಷ್ಟಾಚಾರದ ವಿರುದ್ದ ಹೋರಾಟ

ಅರಕಲಗೂಡು: ಸರ್ಕಾರದ ಸಂವಿದಾನ ಬದ್ದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರ ಭ್ರಷ್ಟಾಚಾರದಿಂದಾಗಿ ಸಾರ್ವಜನಿಕ ಸಂಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಂಡಿವೆ ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ವಿಷಾಧಿಸಿದ್ದಾರೆ. ಪಟ್ಟಣದಲ್ಲಿ ಏರ್ಪಾಡಾಗಿದ್ದ ಜೆಡಿಎಸ್ ಪಕ್ಷದ ಸಭೆ ಯಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರ ನಿಯಂತ್ರಿಸಲಾಗದಷ್ಟು ಮಟ್ಟಿಗೆ ವ್ಯಾಪಿಸಿದೆ, ಈ ವ್ಯವಸ್ಥೆಯ ಸುಧಾರಣೆಗೆ ನೈತಿಕ ಬೆಂಬಲ ನೀಡಿದರೆ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸುತ್ತೇನೆ ಎಂದು ನುಡಿದ ಅವರು ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು, ತಾಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಪಕ್ಷದ ಬಲ ವೃದ್ದಿಸಿದೆ, ಗ್ರಾ.ಪಂ ಚುನಾಯಿತ ಪ್ರತಿನಿಧಿಗಳನ್ನು ಗೌರವಿಸುವ ಸಲುವಾಗಿ ಇಂದು ಕಾರ್ಯಕ್ರಮ ನಡೆಸುತ್ತಿದ್ದೇವೆ 15ದಿನಗಳ ಮುಂಚೆಯೇ ಕಾರ್ಯಕ್ರಮಕ್ಕಾಗಿ ಶಿಕ್ಷಕರ ಭವನವನ್ನು ಅಧಿಕೃತವಾಗಿ ಪಡೆಯಲಾಗಿದೆ ಆದರೆ ಇಂತಹ ಕಾರ್ಯಕ್ರಮಕ್ಕೂ ಅಧಿಕಾರ ಶಾಹಿ ಅಡ್ಡಿ ಪಡಿಸಿತು ಎಂದರು. ಶಿಕ್ಷಕ ಸಮುದಾಯದ ಸಹಕಾರದಿಂದ ಅಡ್ಡಿ ನಿವಾರಣೆಯಾಗಿದೆ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ ಎಂದು ನುಡಿದರು.
ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳ ಕುರಿತು ಮಾತನಾಡಿದ ಅವರು ತಾಲೂಕಿನಲ್ಲಿ ನನ್ನಿಂದಾಗಿ ಕೂಲಿಕಾರರ ಹಣ ನಿಂತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಇದು ಸರಿಯಲ್ಲ, ಕಣ್ಣೆದುರಿಗೆ ಅಕ್ರಮ ನಡೆಯುತ್ತಿದ್ದರೆ ನೋಡಿಕೊಂಡು ಕುಳಿತಿರಲು ಸಾಧ್ಯವಿಲ್ಲ. ಜನರ ತೆರಿಗೆ ದುಡ್ಡನ್ನು ಇಂಜಿನಿಯರುಗಳು ಲೂಟಿ ಮಾಡುತ್ತಿದ್ದರೆ ಸಹಿಸುವುದು ಹೇಗೆ ಎಂದು ಪ್ರಶ್ನಿಸಿದ ಅವರು ಇಂಜಿನಿಯರುಗಳಿಗೆ ಅನ್ನ ತಿನ್ನಿ ಎಂದರೆ ಭ್ರಷ್ಟಾಚಾರ ನಡೆಸುವ ಮೂಲಕ ಮಣ್ಣುತಿನ್ನುವ ಕೆಲಸ ಮಾಡಿದ್ದಾರೆ, ಇಂತಹದ್ದನ್ನು ಪ್ರಶ್ನೆ ಮಾಡಲು ಹತಾಶ ಸ್ಥಿತಿ ಬರಬಾರದು, ಅಂತಹ ಸ್ಥಿತಿ ಎದುರಾದರೆ ಪ್ರಜಾಪ್ರಭುತ್ವದ ಕಗ್ಗೊಲೆ ಆದಂತೆ ಆಗುತ್ತದೆ ಇದಕ್ಕೆ ಅವಕಾಶ ಮಾಡಬೇಡಿ ಎಂದು ಮನವಿ ಮಾಡಿದರು.ಉದ್ಯೋಗ ಖಾತ್ರಿ ಯೋಜನೆಗೆ ಯಾವ ಪುಣ್ಯಾತ್ಮ ಮಹಾತ್ಮ ಗಾಂಧಿ ಹೆಸರಿಟ್ಟನೋ ಗೊತ್ತಿಲ್ಲ ಇದಕ್ಕೆ ಚಂಬಲ್ ಕಣಿವೆಯ ಡಕಾಯಿತರ ಹೆಸರನ್ನು ಇಲ್ಲವೇ ವೀರಪ್ಪನ್ ಹೆಸರನ್ನಿಟ್ಟಿದ್ದರೆ ಚೆನ್ನಾಗಿತ್ತು, ಯೋಜನೆಗೆ ಮಹಾತ್ಮ ಗಾಂಧಿ ಹೆಸರನ್ನಿಟ್ಟು ಅಪಮಾನವೆಸಗಲಾಗಿದೆ, ವ್ಯಾಪಕ ಅಕ್ರಮದ ತವರು ಉದ್ಯೋಗ ಖಾತ್ರಿ ಯೋಜನೆಯಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮತ್ತು ಇಂಜಿನಿಯರುಗಳು ಇಡೀ ತಾಲೂಕಿನ ಜನಸಾಮಾನ್ಯರಿಗೆ ಮಣ್ಣುತಿನ್ನಿಸಿದ್ದಾರೆ, ಜನಸಂಖ್ಯೆಗನುಗುಣವಾಗಿ ಕ್ರಿಯಾ ಯೋಜನೆಗಳು ತಯಾರಾಗಬೇಕು ಮತ್ತು ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆಗೊಳ್ಳಬೇಕು ಆದರೆ ಆ ಪ್ರಕ್ರಿಯೆಗಳು ನಡೆದಿಲ್ಲ, ಇಡೀ ಯೋಜನೆಯಲ್ಲಿ ಹೆಜ್ಜೆ ಹೆಜ್ಜೆಗೂ ಅಕ್ರಮದ ಸಾಕ್ಷ್ಯ ಇದೆ ಪ್ರಜಾ ರಾಜ್ಯದಲ್ಲಿ ಇಂಜಿನಿಯರುಗಳು ಮನಸ್ಸೊ ಇಚ್ಚೆ ವರ್ತಿಸುವ ಮೂಲಕ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ಎಂದರು. ತಾಲೂಕಿಗೆ ನಿಗದಿಯಾದ ಅನುದಾನಕ್ಕಿಂತ ಹೆಚ್ಚಿಗೆ ಅಂದರೆ 150ಕೋಟಿ ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ 3ಕೋಟಿ ಸಪ್ಲೈ ಬಿಲ್ ಗಳನ್ನು ಡ್ರಾ ಮಾಡಲಾಗಿದೆ, ಕೆರೆ-ಕಟ್ಟೆಗಳ ಕೆಲಸವನ್ನು ಪೂರ್ಣಗೊಳಿಸದೇ ಎಂಬಿ ಬರೆಯಲಾಗಿದೆ, ನಕಲಿ ಜಾಬ್ ಕಾರ್ಡುಗಳನ್ನು ಸೃಷ್ಟಿಸಲಾಗಿದೆ ಆ ಮೂಲಕ ಅಮಾಯಕ ಜನರನ್ನು ವಂಚಿಸಲಾಗಿದೆ ಇದನ್ನು ಪ್ರಶ್ನಿಸಿದ್ದು ತಪ್ಪೇ? ಪ್ರಶ್ನಿಸಿದರೆ ಅಭಿವೃದ್ದಿ ನಿಂತು ಹೋಗುತ್ತಾ? ವಿಧಾನ ಸಭೆಯಲ್ಲಿ ಹಗಲು ರಾತ್ರಿ ಪ್ರತಿಭಟನೆ ಮಾಡಿದರಲ್ಲ, ಆಗ ಅಭಿವೃದ್ದಿ ನಿಂತು ಹೋಗಿತ್ತಾ ಎಂದು ಹಾಲಿ ಶಾಸಕರನ್ನು ಪರೋಕ್ಷವಾಗಿ ಚುಚ್ಚಿದ ಎಟಿಆರ್ ನನ್ನ ಹೋರಾಟದ ಉದ್ದೇಶ ಹಾಗೂ ಕಳಕಳಿಯನ್ನು ಅರಿಯಿರಿ ಎಂದರು. ನನ್ನ ಅಣ್ಣನ ಮಗನೇ ಬನ್ನೂರಿನಲ್ಲಿ ಅಧ್ಯಕ್ಷನಾಗಿದ್ದಾನೆ ಅಲ್ಲಿಂದಲೇ ಅಕ್ರಮಗಳ ತನಿಖೆ ಆರಂಭವಾಗಲಿ ಸಂತೋಷಿಸುತ್ತೇನೆ, ಪಟ್ಟಾಭಿರಾಮ ಶಾಲೆಯ ುದ್ಯೋಗ ಖಾತ್ರಿ ಕೆಲಸದ ಬಗ್ಗೆ ಕೇಳಬೇಕಿತ್ತು ಎಂದು ಹೇಳುವವರು ತಾವೇ ಅ ಬಗ್ಗೆ ಪ್ರಶ್ನಿಸಬಹುದಿತ್ತಲ್ಲವೇ ? ತಪ್ಪು ಯಾರು ಮಾಡಿದರೂ ತಪ್ಪೇ, ನಾನು ಆ ಪಾರ್ಟಿ ಈ ಪಾರ್ಟಿ ಎಂದು ಎಲ್ಲೂ ಹೇಳಿಲ್ಲ ಆದರು ನನ್ನ ಬಗ್ಗೆ ಸಣ್ಣತನದ ಆರೋಪ ಮಾಡಲಾಗಿದೆ ಸಣ್ಣತನ ನನ್ನ ಜಾಯಮಾನದಲ್ಲೇ ಇಲ್ಲ ನೈತಿಕತೆ ಇದ್ದರೆ ಅದನ್ನು ಅರಿತುಕೊಳ್ಳಲಿ ಎಂದರು. ಮಾನವೀಯತೆ ದೃಷ್ಟಿಯಿಂದ ತಾಳಿಬಾಳಿ ಹೋಗುತ್ತಿದ್ದೇನೆ, ಇತ್ತೀಚೆಗೆ ರಾಮನಾಥಪುರದಲ್ಲಿ ಸಿಕ್ಕಿಬಿದ್ದ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ ದೇಶದ್ರೋಹಿಯನ್ನು ಜೊತೆಗಿಟ್ಟುಕೊಂಡು ಓಡಾಡುವ ಇವರಿಂದ ನಾನು ಕಲಿಯಬೇಕಾದುದೇನಿಲ್ಲ, ನನ್ನಲ್ಲಿ ಪಾಪದ ರಕ್ತವಿಲ್ಲ ಶುದ್ಧ ರಕ್ತವಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆಯ ಅಕ್ರಮದ ತೀವ್ರತೆ ಎಷ್ಟಿದೆ ಎಂದರೇ ಗ್ರಾಮ ಪಂಚಾಯ್ತಿಯೊಂದರ ಮಹಿಳಾ ಕಾರ್ಯದರ್ಶಿಯೋರ್ವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಪರಿಶೀಲನೆಗೆ ಬಂದಿದ್ದಾಗ ಖಾತ್ರಿ ಯೋಜನೆಯಲ್ಲಿ ಶೇ.1ರಷ್ಟು ಕೆಲಸವೂ ಆಗಿಲ್ಲ, ನಾನು ಆತ್ಮಹತ್ಯೆ ಮಾಡ್ಕೋತೀನಿ ಎಂದರು ಇದಕ್ಕಿಂತ ಹೆಚ್ಚಿಗೆ ಬೇರೇನೂ ಹೇಳಲು ಸಾಧ್ಯ ಎಂದರು.
ಇದಕ್ಕೂ ಮುನ್ನ ಮಾತನಾಡಿದ ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಜಿಲ್ಲಾ ಪಂಚಾಯ್ತಿಯ ಉಪಕಾರ್ಯದರ್ಶಿ ಬಾಲಕೃಷ್ಣ ತಾಲೂಕಿನ ಅಧಿಕಾರಿಗಳಿಗೆ ಟೋಪಿ ಹಾಕಿದ್ದಾರೆ ಆ ಮೂಲಕ ಜನತೆಯನ್ನು ವಂಚಿಸಿದ್ದಾರೆ ಎಂದರು. ತಾಲೂಕಿನಲ್ಲಿ ಕಳೆದ ವರ್ಷಕ್ಕೆ 22.80ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ಮಾಡಬೇಕಿತ್ತು ಆದರೆ ಬಾಲಕೃಷ್ಣರ ಕುಮ್ಮಕ್ಕಿನಿಂದ 300ಕೋಟಿಗೆ ಬೇಕಾಬಿಟ್ಟಿ ಕ್ರಿಯಾ ಯೋಜನೆ ಮಾಡಲಾಗಿದೆ 15ಒಕೋಟಿಗೆ ಅನುಮೋದನೆ ನೀಡಿ 3ಕೋಟಿ ಸಪ್ಲೈ ಬಿಲ್ ಪಡೆಯಲಾಗಿದೆ ಈ ಕುರಿತು ಕೇಂದ್ರ ಸರ್ಕಾರ ಡಿಸೆಂಬರ್ ಅಂತ್ಯದಲ್ಲೇ ನೋಟೀಸ್ ನೀಡಿ ಉದ್ಯೋಗ ಚೀಟಿ 1:6 ಆಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಯೋಜನೆಯನ್ನು ಸ್ಥಗಿತಗೊಳಿಸಿತ್ತು ಆದರೆ ಇದನ್ನು ಸರಿಪಡಿಸಲಾಗದ ಅಧಿಕಾರಿಗಳು ಸಾಮೂಹಿಕ ವರ್ಗಾವಣೆಗೆ ಸಂಚು ರೂಪಿಸಿದ್ದರು ಈ ಮಾಹಿತಿ ತಿಳಿದ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಜುಲೈ ತಿಂಗಳಿನಲ್ಲಿ ದೂರು ನೀಡಿದರು ಆಗ ಇಂಜಿನಿಯರುಗಳ ಅಕ್ರಮ ಬೆಳಕಿಗೆ ಬಂದಿದೆ ಎಂದರು. ಆದರೆ ರಾಮಸ್ವಾಮಿ ಯೋಜನೆಯ ದುಡ್ಡು ನಿಲ್ಲಿಸಿದ್ದಾರೆ ಎಂಬ ಆರೋಪ ಸರಿಯಾದುದಲ್ಲ ಜನರಿಗೆ ದಕ್ಕಬೇಕಾಗಿದ್ದ ಯೋಜನೆಯಲ್ಲಿ ಹಣ ಲೂಟಿ ಆಗುತ್ತಿದ್ದರೆ ನೋಡಿಕೊಂಡು ಕೂರಲು ಸಾಧ್ಯವೇ ಇಲ್ಲ ಇಂಜಿನಿಯರುಗಳಿಂದ ಜನರ ಕೂಲಿ ಹಣ ನಿಂತಿದೆ ಅವರನ್ನು ಶಿಕ್ಷಿಸಬೇಕು ಮತ್ತು ಹಣ ವಸೂಲು ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ರಾಜ್ಯಸಭಾ ಸದಸ್ಯ ಜವರೇಗೌಡ, ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ,ಮತ್ತಿತರ ಮುಖಂಡರು ಮಾತನಾಡಿದರು.
ಆರೋಪ: ತಾಲೂಕು ಕಛೇರಿ ಆವರಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಭಾಗವಹಿಸದೇ ಸ್ಥಳೀಯ ಸಂಸ್ಥೆಯ ಜೆಡಿಎಸ್ ಪ್ರತಿನಿಧಿಗಳು ಜನರಿಗೆ ವಂಚನೆ ಮಾಡಿದ್ದಾರೆ ಎಂದು ಪ.ಪಂ ಸದಸ್ಯ ರವಿಕುಮಾರ್ ಆರೋಪಿಸಿದ್ದಾರೆ. ಜೆಡಿಎಸ್ ಸದಸ್ಯರುಗಳಿಗೆ ಜನರ ಸಮಸ್ಯೆಗಳಿಗಿಂತ ಪಕ್ಷದ ಸಭೆ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.

ಶುಕ್ರವಾರ, ಸೆಪ್ಟೆಂಬರ್ 3, 2010

ನೈಮತುಲ್ಲಾ ಷರೀಫ್ ಗೆ ಅಮೇರಿಕಾ ವಿ.ವಿ ಪಿಎಚ್ ಡಿ


ಅರಕಲಗೂಡು: ಇಲ್ಲಿಗೆ ಸಮೀಪದ ಗೊರೂರು ಎ ಎನ್ ವಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ನೈಮತುಲ್ಲಾ ಷರೀಫ್ ಗೆ ಅಮೇರಿಕ ದೇಶದ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿದೆ.
ನೈಮತುಲ್ಲಾ ಷರೀಫ್ ಎ ಎನ್ ವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಪಕರಾಗಿದ್ದು "ಇಂಡೋ ಪರ್ಶಿಯನ್ ಸಿಂಥಸಿಸ್ ಡ್ಯೂರಿಂಗ್ ಮೆಡೀವಲ್ ಪೀರಿಯಡ್(1206 ಎಡಿ ನಿಂದ 1707 ಎಡಿ) ಎ ಕ್ರಿಟಿಕಲ್ ಸ್ಟಡಿ" ಎಂಬ ಮಹಾ ಪ್ರಬಂಧವನ್ನು ಅಮೇರಿಕಾ ದೇಶದ ಗೋಲ್ಡನ್ ಗೇಟ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ವಿಶ್ವ ವಿದ್ಯಾಲಯವು ಅವರ ಪ್ರಬಂಧಕ್ಕೆ ಮಾನ್ಯತೆ ನೀಡಿ ಪಿಎಚ್ ಡಿ ಪದವಿ ನೀಡಿದೆ. ಡಾಡಬ್ಲ್ಯೂ.ಪಿ. ಮಾರ್ಟಿನ್ ಪ್ರಬಂದ ರಚನೆಗೆ ಮಾರ್ಗದರ್ಶನ ನೀಡಿದ್ದರು.
ಶ್ರಾವಣ ಪೂಜೆ: ಪಟ್ಟಣದ ವಾಸವಿ ವನಿತಾ ಸಂಘದ ವತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಛತ್ರದಲ್ಲಿ ಲಕ್ಷ್ಮೀ ವೆಂಕಟೇಶ್ವರಮಣ ಸ್ವಾಮಿ ಹಾಗೂ 7ಬೆಟ್ಟದ ಪೂಜೆಯನ್ನು ಲೋಕಕಲ್ಯಾಣಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಪಿ ಎಸ್ ಎನ್ ಪ್ರಸಾದ್ ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆ: ತಾಲೂಕಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ಎಲ್ಲಾ ಶಿಕ್ಷಕರೂ ಕಡ್ಡಾಯವಾಗಿ ಹಾಜರಿರುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಮನವಿ ಮಾಡಿದ್ದಾರೆ. ಪಟ್ಟಣದ ಶಿಕ್ಷಕರ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಖ್ಯಾತ ರಂಗಕರ್ಮಿ ಹಾಗೂ ಚಿತ್ರನಟ ಪ್ರೊಪೆಸರ್ ಪಿ.ಎಸ್. ಲೋಹಿತಾಶ್ವ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಎ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಜನಸಂಪರ್ಕ ಸಭೆ : ತಾಲೂಕು ಕಸಬಾ ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನು ಸೆ.4 ರಂದು ಬೆಳಿಗ್ಗೆ 11ಗಂಟೆಗೆ ತಾಲ್ಲೂಕು ಕಛೇರಿ ಆವರಣದಲ್ಲಿ ನಡೆಯಲಿದೆ. ಈ ಸಂಬಂಧ ಪ್ರಕಟಣೆ ನೀಡಿರುವ ತಹಸೀಲ್ದಾರ್ ಸವಿತಾ ಜನಸ್ಪಂದನ ಸಭೆಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸ ಬೇಕೆಂದು ಮನವಿ ಮಾಡಿದ್ದಾರೆ.
ನೂತನ ಕಟ್ಟಡ ನಿರ್ಮಾಣದ ಭರವಸೆ
ಅರಕಲಗೂಡು: ಗೊರೂರು ಗ್ರಾಮ ಪಂಚಾಯಿತಿಗೆ ನೂತನ ಕಟ್ಟಡವನ್ನು ತಮ್ಮ ಅವಧಿಯಲ್ಲೆ ನಿರ್ಮಿಸುವ ಬದ್ದತೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ದ್ಯಾವೇಗೌಡ ಹೇಳಿದ್ದಾರೆ. ಇಂದು ಗೊರೂರು ಗ್ರಾಮಕ್ಕೆ ಅಧಿಕೃತ ಭೇಟಿ ನೀಡಿದ್ದ ಅವರು ಪಂಚಾಯ್ತಿ ವ್ಯಾಪ್ತಿಯ ಅಭಿವೃದ್ದಿಯನ್ನು ಪರಿಶೀಲಿಸಿದರು, ಇದೇ ಸಂಧರ್ಭದಲ್ಲಿ ಕಾರ್ಯ ನಿರ್ವಹಿಸಲು ಅತ್ಯಂತ ಕಿರಿದಾಗಿದ್ದ ಪಂಚಾಯ್ತಿ ಕಟ್ಟಡವನ್ನು ಗಮನಿಸಿ ತಮ್ಮ ಅವಧಿಯಲ್ಲಿಯೇ ಗೊರೂರು ಗ್ರಾಮ ಪಂಚಾಯ್ತಿಗೆ ನೂತನ ಕಟ್ಟಡ ನಿರ್ಮಿಸಿಕೊಡಲಾಗುವುದು ಎಂದರು. ಉಪಾಧ್ಯಕ್ಷರ ಜೊತೆ ಹಾಸನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಅನಂತರಾಜು, ಗ್ರಾ.ಪಂ. ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷ ಪ್ರಶಾಂತ್ ಮತ್ತು ಪಂಚಾಯ್ತಿ ಸದಸ್ಯರುಗಳು ಹಾಗೂ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮಣಿ ಇದ್ದರು.

ಗುರುವಾರ, ಸೆಪ್ಟೆಂಬರ್ 2, 2010

ಅರಕಲಗೂಡಿನಲ್ಲಿ ರಾಧಾ-ಕೃಷ್ಣರ ಸಮಾವೇಶ



ಅರಕಲಗೂಡು: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಟ್ಟಣದಲ್ಲಿ ರಾಧಾ-ಕೃಷ್ಣ ವೇಷದಾರಿಗಳ ಸಮಾವೇಶ ನಿವೇದಿತಾ ಶಾಲೆಯ ಆಶ್ರಯದಲ್ಲಿ ಏರ್ಪಾಟಾಗಿತ್ತು. ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ ಸಮಾವೇಶದಲ್ಲಿ 100ಕ್ಕೂ ಅಧಿಕ ರಾಧಾ-ಕೃಷ್ಣರ ವೇಷಧಾರಿ ಮಕ್ಕಳು ಪಾಲ್ಗೊಂಡಿದ್ದರು. 1ರಿಂದ 7ನೇ ತರಗತಿಯವರೆಗಿನ ಮಕ್ಕಳು ವಿವಿಧ ರೀತಿಯ ಉಡುಗೆ ಧರಿಸಿ ರಾಧ-ಕೃಷ್ಣರಾಗಿ ಕಂಗೊಳಿಸಿದರು, ಮುಸಲ್ಮಾನ ಭಾಂಧವರ ಮಕ್ಕಳು ಸಹಾ ಕೃಷ್ಣ-ರಾಧೆಯ ವೇಷಧರಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು. ಇದೇ ಸಂಧರ್ಭದಲ್ಲಿ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಸಹಾ ಏರ್ಪಾಟಾಗಿತ್ತು. ಸಮಾವೇಶವನ್ನು ವಾಸವಿ ಮಹಿಳಾ ಸಮಾಜದ ಪದ್ಮಾವತಮ್ಮ ಉದ್ಘಾಟಿಸಿದರು. ರಾಗಿಣಿ-ಅಕ್ಷತಾ ಪ್ರಾರ್ಥಿಸಿ, ನಂದಿನಿ ಸ್ವಾಗತಿಸಿದರು, ಲತಾ ವಂದಿಸಿ ರಂಜಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷ್ಣ ವೇಷಧಾರಿ ವಿಜೇತರ ವಿವರ: ತೇಜಸ್ ಎಸ್ ಕಶ್ಯಪ್ (ಪ್ರಥಮ) ಜ್ಯೋತಿ ಆಂಗ್ಲಶಾಲೆ, ಶ್ರೀರಾಂ(ದ್ವಿತಿಯ) ನಿವೇದಿತಾ ಶಾಲೆ, ಪೃಥ್ವಿ (ತೃತೀಯ). ರಾಧೆ ವೇಷಧಾರಿ ವಿಜೇತರು: ಪರ್ವಿತ(ಪ್ರಥಮ), ಮಾನ್ಯ ಎಚ್. ಎಂ(ದ್ವಿತಿಯ), ಮೇಘ(ತೃತೀಯ). ಭಗವದ್ಗೀತೆ ಕಂಠಪಾಠ ವಿಜೇತರು: ಮೇಘನಾ(ಪ್ರಥಮ),ಅನುಕೌಶಿಕ್(ದ್ವಿತಿಯ)ಸುರಭಿ ಎಂ(ತೃತಿಯ).

ಅರಕಲಗೂಡು: ಜಾತ್ಯಾತೀತ ಜನತಾದಳದ ಕಾರ್ಯಕರ್ತರ ಸಭೆ ಸೆಪ್ಟಂಬರ್ 4ರಂದು ಬೆಳಿಗ್ಗೆ 11ಗಂಟೆಗೆ ಶಿಕ್ಷಕರ ಭವನದಲ್ಲಿ ಏರ್ಪಾಟಾಗಿದೆ ಎಂದು ಜೆಡಿಎಸ್ ಮುಖಂಡ ತಾಲೂಕು ಪಂಚಾಯ್ತಿ ಅಧ್ಯಕ್ಷ ಎಚ್ ಮಾದೇಶ್ ತಿಳಿಸಿದ್ದಾರೆ. ಅಂದಿನ ಸಭೆಗೆ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ರಾಜ್ಯ ಸಭಾ ಸದಸ್ಯ ಎಚ್ ಕೆ ಜವರೇಗೌಡ, ಕೃಷಿಕ ಸಮಾಜದ ಅಧ್ಯಕ್ಷ ಎಂ ಸಿ ರಂಗಸ್ವಾಮಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮುತ್ತಿಗೆ ರಾಜೆಗೌಡ, ಮತ್ತಿತರ ಜೆಡಿಎಸ್ ಮುಖಂಡರು ಭಾಗವಹಿಸುವರು, ಮಾಜಿ ಶಾಸಕ ಎ ಟ ರಾಮಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದ್ದಾರೆ.

ಗೋಹತ್ಯೆ ಪ್ರತಿಭಟನೆ: ಗೋ ಹತ್ಯೆ ಕಾಯ್ದೆಗೆ ಅಂಕಿತಾ ಹಾಕುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ಘಟಕ ಸೆ.3ರಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಮುಖಂಡ ಕೇಶವೇಗೌಡ ತಿಳಿಸಿದ್ದಾರೆ.

ಶುಕ್ರವಾರ, ಆಗಸ್ಟ್ 27, 2010

ಅಂಗಮಾರಿಯಿಂದ ಮುಕ್ತ ಆಲೂಗಡ್ಡೆ ಬೆಳೆ, ರೈತರ ಮೊಗದಲ್ಲಿ ಮೂಡಿದ ಹರ್ಷ


ಅರಕಲಗೂಡು: ಜಿಲ್ಲೆಯ ವಿವಿದೆಡೆ ಬೆಳೆಯಲಾಗಿರುವ ಆಲೂಗಡ್ಡೆ ಬೆಳೆ ಅಂಗಮಾರಿಗೆ ಸಿಲುಕಿದ್ದು ರೈತರು ಸಂಕಷ್ಟದಲ್ಲಿದ್ದಾರೆ . ಆದರೆ ತಾಲೂಕಿನಲ್ಲಿ ಪೊಟ್ಯಾಟೋ ಕ್ಲಬ್ ವತಿಯಿಂದ ವಿತರಿಸಲಾಗಿರುವ ಧೃಢೀಕೃತ ಆಲೂಗಡ್ಡೆ ಬಿತ್ತಿದ ರೈತರ ಬೆಳೆ ಅಂಗಮಾರಿಯಿಂದ ಮುಕ್ತವಾಗಿದ್ದು ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.ಇಂತಹದ್ದೊಂದು ಹರ್ಷಕ್ಕೆ ಕಾರಣವಾಗಿದ್ದು ತಾಲ್ಲೂಕಿನಲ್ಲಿ ರೈತರ ಹಿತಾಸಕ್ತಿಗಾಗಿ ಸ್ಥಾಪಿತವಾಗಿರುವ ಪೊಟ್ಯಾಟೋ ಕ್ಲಬ್!. ಪಂಜಾಬ್ ರಾಜ್ಯದಿಂದ ಸುಮಾರು 5ಲಾರಿ ಲೋಡು ಧೃಢೀಕೃತ ಆಲೂಗಡ್ಡೆಯನ್ನು ಕ್ಲಬ್ ವತಿಯಿಂದ ತರಿಸಿ 600ಚೀಲ ಆಲೂಗಡ್ಡೆಯನ್ನು ಪ್ರಾಯೋಗಿಕವಾಗಿ ರೈತರಿಗೆ ನೀಡಿತ್ತು.
ಕಳೆದ 2ವರ್ಷಗಳಿಂದ ಜಿಲ್ಲೆಯ ಸುಮಾರು 40ಸಾವಿರ ಹೆಕ್ಟೇರುಗಳಲ್ಲಿ ಬೆಳೆದಿದ್ದ ಆಲೂಗಡ್ಡೆ ಅಂಗಮಾರಿಗೆ ತುತ್ತಾಗಿ ನೂರಾರು ಕೋಟಿರೂ ನಷ್ಟ ಸಂಭವಿಸಿತ್ತು. ಬೆಳೆ ಕಳೆದುಕೊಂಡ ರೈತರಿಗೆ ಬೆಳೆಗೆ ಕಟ್ಟಿದ ವಿಮಾ ಹಣವಾಗಲಿ ಸರ್ಕಾರದ ಪರಿಹಾರ ಧನವಾಗಲಿ ದೊರೆಯದೇ ಹಲವು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ರಾಜ್ಯ ಸರ್ಕಾರ ಕೂಡ ಜಿಲ್ಲೆಯ ರೈತರ ಸಂಕಷ್ಟಕ್ಕೆ ಸ್ಪಂದಿಸಿರಲಿಲ್ಲ. ಕರ್ನಾಟಕ ರಾಜ್ಯ ಬೀಜ ನಿಗಮ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದರೂ ಸಹಾ ಆಲೂಗಡ್ಡೆ ಬಿತ್ತನೆ ಬೀಜ ನಮ್ಮ ರೈತರಿಗೆ ಧೃಢೀಕೃತವಾಗಿ ಲಭ್ಯವಿರಲಿಲ್ಲ, ಪರಿಣಾಮ ರೈತನ ಗೋಳು ಕೇಳುವವರು ದಿಕ್ಕಿಲ್ಲದಂತಾಗಿತ್ತು. ಈ ಸಂಧರ್ಭದಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ರೈತರ ಸಹಕಾರದಿಂದ ಯೋಗಾರಮೇಶ್ ಪೊಟ್ಯಾಟೋ ಕ್ಲಬ್ ಗೆ ಚಾಲನೆ ನೀಡಿದರ. ಕ್ಲಬ್ ವತಿಯಿಂದ ಆಲೂ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳ ಚಿಂತನ-ಮಂಥನ ನಡೆಯಿತು. ಆಲೂಬೆಳೆ ಹಾಗೂ ಬಿತ್ತನೆ ಬೀಜದ ಪ್ರಾತ್ಯಕ್ಷಿಕೆ ಅರಿಯಲು ತಾಲೂಕಿನ ರೈತರನ್ನು ಕ್ಲಬ್ ವತಿಯಿಂದ ಪಂಜಾಬ್ ಗೆ ಕಳುಹಿಸಲಾಯಿತು. ಅಷ್ಟೇ ಅಲ್ಲ, ಅಲ್ಲಿ ಆಲೂ ಬಿತ್ತನೆ ಬೀಜ ಉತ್ಪಾದಿಸುವ ದೊಡ್ಡ ರೈತರನ್ನು , ತಜ್ಞರನ್ನು ತಾಲೂಕಿಗೆ ಕರೆಸಿ ಸ್ಥಳೀಯ ಕೃಷಿ ಅಧಿಕಾರಿಗಳ ಸಹಾಯದೊಂದಿಗೆ ದೃಶ್ಯರೂಪದ ಪ್ರಾತ್ಯಕ್ಷಿಕೆ ಮತ್ತು ರೈತರಿಗೆ ಬೆಳೆಯಲ್ಲಿ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ದೇಶದ ಪ್ರಸಿದ್ದ ಕೀಟ ಶಾಸ್ತ್ರಜ್ಞ ಡಾ ರಾವುಲ್ ಮತ್ತು ವಿಜ್ಞಾನಿಗಳ ತಂಡವೂ ಕಾಲಾನುಕಾಲಕ್ಕೆ ರೈತರ ಜಮೀನುಗಳಿಗೆ ತೆರಳಿ ಬೆಳೆಯನ್ನು ಪರಿಶೀಲಿಸಿದ್ದರಲ್ಲದೇ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ತೋರಿಸಕೊಟ್ಟಿದ್ದರು. ಕ್ಲಬ್ ವತಿಯಿಂದ ಧೃಢೀಕೃತ ಆಲೂಗಡ್ಡೆ ಪಡೆದ ರೈತರಿಗೆ ಉಚಿತ ಔಷದ ಹಾಗೂ ಸ್ಪ್ರೇಯರ್ ಗಳನ್ನು ಸಹಾ ನೀಡಲಾಗಿತ್ತು. ಆಲೂಬಿತ್ತನೆ ಮಾಡುವಾಗ ಬೀಜೋಪಚಾರದಿಂದ ಹಿಡಿದು ಬೆಳೆ ಬರುವವರೆಗೂ ರೈತರು, ತಜ್ಞರು ಸೂಚಿಸಿದ ಕ್ರಮಗಳನ್ನೇ ಅನುಸರಿಸಿದ್ದರು. ಪರಿಣಾಮವಾಗಿ ಧೃಢೀಕೃತ ಬಿತ್ತನೆಯ ಆಲೂಗಡ್ಡೆ ಬೆಳೆಯ ಗಿಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ದಪ್ಪ ಸೈಜಿನ ಆಲೂಗಡ್ಡೆ ಬಿಟ್ಟಿದೆ. ಇಳುವರಿ ಅತ್ಯುತ್ತಮವಾಗಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ನಿರೀಕ್ಷೆಯಲ್ಲಿರುವಾಗಲೇ ಇಲ್ಲಿ ನ ಆಲೂಗಡ್ಡೆಯನ್ನು ಕೊಳ್ಳಲು ಪಂಜಾಬ್ ರಾಜ್ಯದಿಂದ ಬೇಡಿಕೆ ಬಂದಿದೆ ಎನ್ನುತ್ತಾರೆ ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಯೋಗಾರಮೇಶ್. ಈಗಾಗಲೇ ಆಲೂಗಡ್ಡೆಯನ್ನು ಸ್ಯಾಂಪಲ್ ಆಗಿ ಪಂಜಾಬ್ ಗೆ ಕಳುಹಿಸಲಾಗಿದೆ. ಚಿಪ್ಸ್ ತಯಾರಿಸುವ ಕಂಪನಿಗಳು ಈ ಆಲೂಗಡ್ಡೆ ಕೊಳ್ಳಲು ಒಲವು ವ್ಯಕ್ತಪಡಿಸಿವೆ ಎನ್ನುತ್ತಾರೆ ಕ್ಲಬ್ ನ ಮುಖಂಡ ರಾಜೇಂದ್ರ. ಪ್ರಮಾಣೀಕರಿಸಿದ ಬೀಜದ ಆಲೂಗಡ್ಡೆ ಬೆಳೆಯ ಪಕ್ಕದಲ್ಲೇ ಪ್ರಮಾಣೀಕರಿಸದ ಕಡಿಮೆ ಬೆಲೆಯ ಆಲೂಗಡ್ಡೆ ಯನ್ನು ಇತರೆ ರೈತರು ಬೆಳೆದಿದ್ದು ಅದು ಅಂಗಮಾರಿಗೆ ತುತ್ತಾಗಿದೆ ಹಾಗೂ ಕೆಲವೆಡೆ ಕರಿಕಡ್ಡಿ ರೋಗದ ಭಾಧೆಗೆ ಬೆಳೆ ಸಿಲುಕಿದೆ. ಜಿಲ್ಲಾ ಆಡಳಿತವೂ ಸಹಾ ಈ ಬಾರಿ ಪ್ರಮಾಣೀಕೃತ/ಪ್ರಮಾಣೀಕರಿಸದ ಆಲೂಗಡ್ಡೆ ಬಿತ್ತನೆ ಬೀಜಕ್ಕೆ ವ್ಯವಸ್ಥೆ ಮಾಡಿತ್ತಾದರೂ ಹೆಚ್ಚಿನ ಮಂದಿ ಕಡಿಮೆ ಬೆಲೆಗೆ ಸಿಗುವ ಸಾಧಾರಣ ಬಿತ್ತನೆ ಬೀಜವನ್ನೆ ಪಡೆದಿದ್ದರೂ ಹಾಗೂ ಕ್ರಮಬದ್ದ ಬೇಸಾಯ ವಿಧಾನವನ್ನು ಅನುಸರಿಸದಿದ್ದುದರಿಂದ ಅಂತಹ ಬೆಳೆಗಳು ಅಂಗಮಾರಿ ಮತ್ತು ಕರಿಕಡ್ಡಿ ರೋಗಕ್ಕೆ ತುತ್ತಾಗಿವೆ. ಈ ನಡುವೆ ಪೊಟ್ಯಾಟೋ ಕ್ಲಬ್ ನ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು ಮುಂದಿನ ಭಾರಿ ರೈತರನ್ನು ಮತ್ತುಷ್ಟು ಜಾಗೃತಿ ಗೊಳಿಸಿ ಸಂಕಷ್ಟದಿಂದ ಪಾರುಮಾಡಲು ಯತ್ನಿಸಲಾಗುವುದು ಹಾಗೂ ರೈತರ ಸಹಕಾರದಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆಗೂ ಪ್ರಯತ್ನಿಸಲಾಗುವುದು ಎನ್ನುತ್ತಾರೆ ಕ್ಲಬ್ ನ ಅಧ್ಯಕ್ಷ ಯೋಗಾರಮೇಶ್.
ಅರಕಲಗೂಡು: ತಾಲೂಕಿನಲ್ಲಿ ಬಾಕಿ ಉಳಿದಿರುವ ವೃದ್ದಾಪ್ಯ ವೇತನ/ವಿಧವಾ ವೇತನ/ಅಂಗವಿಕಲರ ವೇತನಗಳ ಕಡತವನ್ನು ವಾರದೊಳಗೆ ವಿಲೇ ಮಾಡಲಾಗುವುದೆಂದು ಕಂದಾಯಾಧಿಕಾರಿಗಳು ತಿಳಿಸಿದ್ದಾರೆಂದು ಪಟ್ಟಣ ಪಂಚಾಯ್ತಿ ಸದಸ್ಯ ರಾಮಣ್ಣ ಹೇಳಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಪಿಂಚಣಿ ವೇತನಗಳ ಅರ್ಜಿಗಳು ಬಾಕಿ ಉಳಿದಿದ್ದು ಕಂದಾಯ ಇಲಾಖೆ ನೌಕರರು ಅವುಗಳನ್ನು ವಿಲೇ ಮಾಡಲು ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಗ್ಗೆ ದೂರುಗಳಿತ್ತು ಈ ಹಿನ್ನೆಲೆಯಲ್ಲಿ ಪ.ಪಂ ಉಪಾಧ್ಯಕ್ಷ ರಮೇಶ್, ಸದಸ್ಯರಾದ ಮುನ್ನಾ, ಶಂಕರಯ್ಯ ಮತ್ತಿತರರು ಶುಕ್ರವಾರ ತಹಸೀಲ್ದಾರ್ ಸವಿತಾರನ್ನು ಭೇಟಿ ಆಗಿದ್ದೆವು. ಈ ಸಂಧರ್ಭದಲ್ಲಿ ಅವರು ಬಾಕಿ ಉಳಿದಿದ್ದ 800ಕಡತಗಳನ್ನು ವಿಲೇ ಮಾಡಲಾಗಿದೆ ಇನ್ನುಳಿದ 200ರಷ್ಟು ಕಡತಗಳಿಗೆ ಈ ತಿಂಗಳ ಅಂತ್ಯದೊಳಗೆ ವಿಲೇ ಮಾಡಲಾಗುವುದು, ಯಾವುದೇ ದೂರುಗಳಿದ್ದರೂ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ್ದಾರೆ ಎಂದರು.

ಮಂಗಳವಾರ, ಆಗಸ್ಟ್ 24, 2010

ರಕ್ಷಾ ಸಮಿತಿ ಸಭೆಯಲ್ಲಿ ಬಯಲಾದ ಸಾರ್ವಜನಿಕ ಆಸ್ಪತ್ರೆ ಹುಳುಕು

ಅರಕಲಗೂಡು: ಕಳೆದ 4ತಿಂಗಳಿನಿಂದಲೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳಿಗೆ ಆಹಾರ ಒದಗಿಸದೇ ನಿರ್ಲಕ್ಷ್ಯ ವಹಿಸಿರುವುದು, ಅಸಮರ್ಪಕ ಸ್ವಚ್ಚತೆ ಕೆಲಸ, ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮಕ್ಕೆ ಫಿಜಿಶಿಯನ್ ಗಳ ಅಸಹಕಾರ ಹೀಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಲವು ವೈಫಲ್ಯಗಳು ಇಂದು ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತಲ್ಲದೇ ಕೆಲ ಸಿಬ್ಬಂದಿಗಳ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಲಾಯಿತು.
ಹಲವು ದಿನಗಳಿಂದ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯಕ್ಕೆ ಒಳಗಾಗಿದ್ದ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದ ಶಾಸಕ ಎ ಮಂಜು ಆಸ್ಪತ್ರೆ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಸಂಧರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಶೀತಲ್ ಕುಮಾರ್ ಕೆಟ್ಟಿರುವ ಎಕ್ಸ್ ರೇ ಯಂತ್ರವನ್ನು 2ತಿಂಗಳೊಳಗಾಗಿ ಸರಿಪಡಿಸಲಾಗುವುದು, ನೂತನ ಕಟ್ಟಡವನ್ನು 15ದಿನಗಳೊಳಗಾಗಿ ವಶಕ್ಕೆ ಪಡೆಯಲಾಗುವುದು, ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ತಿಂಗಳಿಗೊಮ್ಮ ನಡೆಸಲಾಗುವುದು ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಔಷಧ ಮಾತ್ರೆ, ಅಂಬ್ಯುಲೆನ್ಸ್ ಸೇವೆ ಒದಗಿಸಿದರೆ ಎಪಿಎಲ್ ಕಾರ್ಡು ದಾರರಿಗೆ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಪ್ರತಿ ಕಿಮಿಗೆ 1ರೂ. ಪಟ್ಟಣದಿಂದ ಹಳ್ಳಿಗೆ ಅಂಬ್ಯುಲೆನ್ಸ್ ಸೇವೆ ಒದಗಿಸಿದರೆ ಪ್ರತಿ ಕಿಮಿಗೆ 4ರೂ ದರ ಪಡೆಯಲಾಗುವುದು ಎಂದರು. ಆಸ್ಪತ್ರೆಗೆ ವಾರ್ಷಿಕವಾಗಿ 8.86ಲಕ್ಷರೂಪಾಯಿ ವೆಚ್ಚದಲ್ಲಿ ಔಷಧ ಮಾತ್ರೆ ಖರೀದಿಗೆ ಅವಕಾಶವಿದೆ ಈ ವರ್ಷ ಸದರಿ ವೆಚ್ಚವನ್ನು ಬಳಸಲಾಗಿದೆ ಎಂದರು. ಆಗ ಮದ್ಯೆ ಪ್ರವೇಶಿಸಿ ಮಾತನಾಡಿ ಶಾಸಕ ಎ ಮಂಜು ಸಾರ್ವಜನಿಕರಿಗೆ ಮಾಹಿತಿಯನ್ನು ಫಲಕದ ಮೇಲೆ ಪ್ರಕಟಿಸಬೇಕು, ರೋಗಿಗಳಿಗೆ ತೊಂದರೆಯಾಗದಂತೆ ಆರೋಗ್ಯ ಸೇವೆ ಒದಗಿಸಲು ಕಾಳಜಿ ವಹಿಸಬೇಕು ಯಾವುದೇ ಕಾರಣಕ್ಕೂ ಸೂಜಿ-ಮಾತ್ರೆಗಳಿಗೆ ಖಾಸಗಿ ಅಂಗಡಿಗಳಿಗೆ ಚೀಟಿ ಬರೆಯಬಾರದು ಈ ಬಗ್ಗೆ ದೂರುಗಳು ಬಂದರೆ ಅದನ್ನು ತಾವು ಸಹಿಸುವುದಿಲ್ಲ ಎಂದು ವೈದ್ಯರುಗಳಿಗೆ ಎಚ್ಚರಿಸಿದರು. ರಕ್ಷಾ ಸಮಿತಿಯ ಸದಸ್ಯರುಗಳು ಆಸ್ಪತ್ರೆಯ ಸ್ವಚ್ಚತೆ ಬಗಗ ಕಿಡಿ ಕಾರಿದಾಗ ಆಗಿರುವ ಲೋಪವನ್ನು ಸ್ವಚ್ಚತೆ ಉಸ್ತವಾರಿ ಪಡೆದಿರುವ ಕೃಷ್ಣ ಎಂಟರ್ ಪ್ರೈಸಸ್ ನ ಉಮೇಶ್ ಒಪ್ಪಿಕೊಂಡರು. ಸ್ವಚ್ಚತಾ ಕಾಮಗಾರಿಯ ಲೋಪಗಳಿಗೆ ಅಸಹನೆ ವ್ಯಕ್ತಪಡಿಸಿದ ಶಾಸಕರು ಕಡ್ಡಾಯವಾಗಿ ಬೆಳಿಗ್ಗೆ 7ಮಂದಿ ಮತ್ತು ರಾತ್ರಿ 2ಮಂದಿ ಕಾರ್ಯ ನಿರ್ವಹಿಸಬೇಕು ಮತ್ತು ಸದರಿ ಕೆಲಸಗಾರರು ಗುರುತು ಪತ್ರ ಹೊಂದಿರಬೇಕು ಅವರಿಗೆ ಸರ್ಕಾರದಿಂದ ನಿಗದಿಯಾಗಿರುವ 2300ರೂ ಸಂಬಳವನ್ನು ನೀಡಬೇಕು ಎಂದು ಟೆಂಡರುದಾರನಿಗೆ ತಾಕೀತು ಮಾಡಿದರು. ಆತ ಇದುವರೆಗೂ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಹೋಗುವ ಭರವಸೆ ನೀಡಿ ಕ್ಷಮೆಯಾಚಿಸಿದರು. ಆಸ್ಪತ್ರೆಯ ವೈದ್ಯರುಗಳಾದ ಡಾ ಶಂಕರಪ್ಪ, ಡಾ ಯೋಗೇಶ್ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗುತ್ತಿದ್ದಾರೆ, ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಶಾಸಕರು ಸದರಿ ವೈದ್ಯರುಗಳಿಗೆ ತಪ್ಪನ್ನು ತಿದ್ದಿಕೊಳ್ಳುವಂತೆ ತಿಳಿ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ದಂತ ವೈದ್ಯರುಗಳಿದ್ದು ಅವರನ್ನು ಕೊಣನೂರಿನ ಸರ್ಕಾರಿ ಆಸ್ಪತ್ರೆಗೆ ತಲಾ 3ದಿನ ನಿಯೋಜನೆ ಕಳುಹಿಸುವಂತೆ ಸೂಚಿಸಲಾಯಿತು. ಇದೇ ಸಂಧರ್ಭದಲ್ಲಿ ಮಾತನಾಡಿದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ ಸ್ವಾಮಿಗೌಡ ಸರ್ಕಾರದ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯ ಅನುಷ್ಠಾನಕ್ಕೆ ಆಸ್ಪತ್ರೆಯ ಫಿಜಿಶಿಯನ್ಗಳು ಮತ್ತು ದಂತ ವೈದ್ಯರುಗಳು ಸಹಕರಿಸುತ್ತಿಲ್ಲ ಇದರಿಂದಾಗಿ ತಾಲ್ಲೂಕಿನ 4530ಮಕ್ಕಳಿಗೆ ಅನ್ಯಾಯ ಮಾಡಿದಂತಾಗಿದೆ ಈ ಬಗ್ಗೆ ಸದರಿ ವೈದ್ಯರುಗಳಿಗೆ ಸೂಚನೆ ನೀಡಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಕಳೆದ ಫೆಬ್ರುವರಿ ತಿಂಗಳಿನಲ್ಲೆ ಟೆಂಡರು ಆಗಿದ್ದರು ಸಹಾ ಆಡಳಿತಾತ್ಮಕ ಮಂಜೂರಾತಿಯ ನೆಪದಲ್ಲಿ ಕಳೆದ 4-5ತಿಂಗಳಿನಿಂದ ಆಸ್ಪತ್ರೆಯ ರೋಗಿಗಳಿಗೆ ಆಹಾರ ಒದಗಿಸದೇ ವಂಚಿಸಲಾಗಿದೆ ಈ ಹಿನ್ನೆಲೆಯಲ್ಲಿ ಸದರಿ ಲೋಪಕ್ಕೆ ಕಾರಣಕರ್ತನಾಗಿರುವ ಆಸ್ಪತ್ರೆಯ ಗುಮಾಸ್ತ ರಾಕಿ ಜೇಕಬ್ ನ್ನು ತರಾಟೆಗೆ ತೆಗೆದುಕೊಂಡ ಶಾಸಕ ಮಂಜು ಆತನ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಲು ಸೂಚಿಸಿದರು. ಕಳೆದ ತಿಂಗಳು ಆಸ್ಪತ್ರೆಯಲ್ಲಿ ಕುಡಿದು ಗಲಾಟೆ ಮಾಡಿದ ಡಿ ಗ್ರೂಪ್ ನೌಕರ ದೇವರಾಜು ವಿರುದ್ದವೂ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲು ಶಾಸಕರು ಸೂಚಿಸಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಮಾದೇಶ್, ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರ್, ತಹಸೀಲ್ದಾರ್ ಸವಿತಾ, ತಾಲೂಕು ಆಡಳಿತಾಧಿಕಾರಿ ಡಾಸ್ವಾಮಿಗೌಡ, ರಕ್ಷಾ ಸಮಿತಿಯ ಸದಸ್ಯರಾದ ಮಾಜಿ ಜಿ.ಪಂ. ಸದಸ್ಯ ಶೆಟ್ಟಿಗೌಡ, ಪಿಎಸ್ಎನ್ ಪ್ರಸಾದ್, ಗುಂಡಣ್ಣ, ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಮತ್ತಿತರರು ಉಪಸ್ತಿತರಿದ್ದರು.
ಅರಕಲಗೂಡು: ಮಿನಿಟ್ರಕ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ತೀವ್ರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಪಟ್ಟಣದ ಕೋಟೆಯಲ್ಲಿ ನಡೆಯಿತು.
ಹಾಸನದಿಂದ ಅರಕಲಗೂಡು ಪಟ್ಟಣಕ್ಕೆ ಬರುತ್ತಿದ್ದ 407ಮಿನಿಟ್ರಕ್ ಗೆ ಅರಕಲಗೂಡು ಕೋಟೆ ಮಿನಿ ವಿಧಾನಸೌಧದೆದುರು ದಿಢೀರನೇ ರಸ್ತೆಯ ಬಲಬದಿಗೆ ಚಲಿಸಿದ ಬೈಕ್ ಡಿಕ್ಕಿ ಹೊಡೆಯಿತು. ಆಗ ಬೈಕ್ ಸವಾರ ರುದ್ರಪಟ್ಟಣದ ಜಯಣ್ಣ(50) ತೀವ್ರವಾಗಿ ಗಾಯಗೊಂಡರು, ಹಿಂಬದಿಯ ಸವಾರನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಇಬ್ಬರನ್ನು ಹಾಸನದ ಆಸ್ಪತ್ರೆಗೆ ಕಳುಹಿಸಲಾಗಿದೆ. ಅರಕಲಗೂಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರ, ಆಗಸ್ಟ್ 23, 2010

ಅತಿಥಿ ಉಪನ್ಯಾಸಕರ ಸಂದರ್ಶನ ಇಂದು

ಅರಕಲಗೂಡು: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆ.24ರಂದು ಸಂದರ್ಶನ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಚಲುವಯ್ಯ ತಿಳಿಸಿದ್ದಾರೆ. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಕನ್ನಡ-1,ಇಂಗ್ಲೀಷ್-2,ಅರ್ಥಶಾಸ್ತ್ರ-2,ಸಮಾಜ ಶಾಸ್ತ್ರ-3,ವಾಣಿಜ್ಯ ಶಾಸ್ತ್ರ-9,ಇತಿಹಾಸ-1 ಮತ್ತು ಪರಿಸರ ಅಧ್ಯಯನ-1 ತಾತ್ಕಾಲಿಕ ಉಪನ್ಯಾಸಕ ಹುದ್ದೆಗಳು ಖಾಲಿ ಇದ್ದು ವಿವಿ ನಿಯಮಾನುಸಾರ NET,SLET,PhD., ಆದವರಿಗೆ ಆದ್ಯತೆ ನೀಡಲಾಗುವುದು. ಅರ್ಹರು ಆ.24ರಂದು ಮದ್ಯಾಹ್ನ ಕಾಲೇಜಿನಲ್ಲಿ ಸಂದರ್ಶನ ನಡೆಯಲಿದೆ, ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸಿದ್ದಾರೆ.
ದಸಂಸ ನೂತನಸಮಿತಿ: ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಯನ್ನು ಪುನರ್ ರಚಿಸಲಾಗಿದೆ. ದಸಂಸ ಮುಖಂಡ ಡಿ ಇ ಜನಾರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮುಂದಿನಂತೆ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಟಿ ವಿ ಶಿವರಾಮಯ್ಯ-ಸಂಚಾಲಕರು, ಮಗ್ಗೆಸಣ್ಣಸ್ವಾಮಿ,ಎ ಸಿ ಮಂಜುನಾಥ,ಸುರೇಶ-ಸಂಘಟನಾ ಸಂಚಾಲಕರುಗಳು ಗಿರೀಶ್-ಖಜಾಂಚಿ, ಪ್ರವೀಣ್ ಕುಮಾರ್,ಜೆ ಸ್ವಾಮಿ,ಚನ್ನಕೇಶವ, ಡಿ ಜೆ ಸಾಗರ್ - ಸಲಹಾ ಸಮಿತಿ ನಿರ್ದೇಶಕರುಗಳು.

ಶುಕ್ರವಾರ, ಆಗಸ್ಟ್ 20, 2010

ಅರಕಲಗೂಡು ಪ.ಪಂ. ಅಧ್ಯಕ್ಷೆಯಾಗಿ ಯಶೋಧಮ್ಮ,ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ

ಅರಕಲಗೂಡು: ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಯಶೋಧಮ್ಮ ಹಾಗೂ ಎ ಪಿ ರಮೇಶ್ ಆಯ್ಕೆಯಾಗಿದ್ದಾರೆ. ಯಶೋಧಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದುರಮೇಶ್ ಪಕ್ಷೇತರ ಸದಸ್ಯರಾಗಿ ಜೆಡಿಎಸ್ ಬೆಂಬಲದಿಂದ ಆಯ್ಕೆಯಾಗಿದ್ದಾರೆ. ಈಗ 30ತಿಂಗಳ ಅದಿಕಾರಾವಧಿ ಉಳಿದಿದ್ದು 15ತಿಂಗಳು ಅಧಿಕಾರ ಹಂಚಿಕೆ ಆಗಿದೆ. ಆ ನಂತರದ ಅವಧಿಗೆ ಮತ್ತೆ ಬೇರೆ ಆಯ್ಕೆ ನಡೆಯಲಿದೆ ಎಂದು ಶಾಸಕ ಎ ಮಂಜು ಹೇಳಿದ್ದಾರೆ.

ಅರಕಲಗೂಡು: ಪಟ್ಟಣದ ರಿಲಾಯನ್ಸ್ ಶೋ ರೂಂ ಮಳಿಗೆಯ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಕೇವಲ ಒಂದು ತಿಂಗಳ ಅಂತರದಲ್ಲಿ ನಡೆದಿರುವ 2ನೇ ಕಳ್ಳತನ ಇದಾಗಿದೆ. ಪಟ್ಟಣದ ಕೋಟೆಯಲ್ಲಿ ನೂತನವಾಗಿ ಆರಂಭಗೊಂಡಿದ್ದ ರಿಲಾಯನ್ಸ್ ಶೋರೂಂ ನ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು 10ಸಾವಿರ ನಗದು ಹಾಗೂ ಹಲವು ಮೊಬೈಲ್ ಸೆಟ್ ಗಳನ್ನು ಕದ್ದೊಯ್ದಿದ್ದಾರೆ ಎಂದು ಮಾಲೀಕ ನಾಗೇಶ್ ಅರಕಲಗೂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಗುರುವಾರ, ಆಗಸ್ಟ್ 19, 2010

ಅರಕಲಗೂಡು ಪ.ಪಂ. ಅಧ್ಯಕ್ಷೆಯಾಗಿ ಯಶೋಧಮ್ಮ,ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ

ಅರಕಲಗೂಡು: ಪಟ್ಟಣ ಪಂಚಾಯ್ತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕ್ರಮವಾಗಿ ಕಾಂಗ್ರೆಸ್ ನ ಯಶೋಧಮ್ಮ ಅಧ್ಯಕ್ಷರಾಗಿ ಹಾಗೂ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿತ್ತು ಕಾಂಗ್ರೆಸ್ ನಿಂದ ಯಶೋಧಮ್ಮ ಏಕಮಾತ್ರ ಅಭ್ಯರ್ಥಿಯಾಗಿದ್ದರು,ಜೆಡಿಎಸ್ ನಲ್ಲಿ ಈ ವರ್ಗದಿಂದ ಯಾವ ಸದಸ್ಯರೂ ಇಲ್ಲದಿದ್ದುದರಿಂದ ಯಶೋಧಮ್ಮ ಅವರ ಆಯ್ಕೆ ಸುಗಮವಾಗಿ ಮುಗಿಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ರವಿಕುಮಾರ್ ಹಾಗೂ ಜೆಡಿಎಸ್ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿ ರಮೇಶ್ ಸ್ಪರ್ದಿಸಿದರು. ಆದ್ದರಿಂದ ಚುನಾವಣೆ ಅನಿವಾರ್ಯವಾಗಿ ಎರಡು ಅಭ್ಯರ್ಥಿಗಳ ಪರ ಬೆಂಬಲಿಗರ ಕೈ ಎತ್ತಿಸುವ ಮೂಲಕ ಮತ ಎಣಿಕೆ ಮಾಡಲಾಯಿತು. ಇಬ್ಬರು ಅಭ್ಯರ್ಥಿಗಳಿಗೂ ಸಮಾನ ಮತಗಳು ಬಂದಿದ್ದರಿಂದ ಲಾಟರಿ ಎತ್ತಲಾಯಿತು. ಅಂತಿಮವಾಗಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ರಮೇಶ್ ಅವರಿಗೆ ವಿಜಯಲಕ್ಷ್ಮಿ ಒಲಿಯಿತು. ನಂತರ ಮಾತನಾಡಿದ ಉಪಾಧ್ಯಕ್ಷ ರಮೇಶ್ ಸಂತಸದ ಭಾವೋದ್ವೇಗ ತಡೆಯಲಾರದೇ ಗಳಗಳನೆ ಅತ್ತರಲ್ಲದೇ ಅವರ ಗೆಲುವನ್ನು ಮತದಾರರಿಗೆ ಸಮರ್ಪಿಸುವುದಾಗಿ ತಿಳಿಸಿದರು. ನಿರ್ಗಮಿತ ಅಧ್ಯಕ್ಷ ಲೋಕೇಶ್ ಮಾತನಾಡಿ ತನ್ನ ಅವಧಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ ಮುಂದೆಯೂ ಅದೇ ರೀತಿ ಅಧಿಕಾರ ನಿರ್ವಹಿಸಿ ಎಂದರು, ಪರಾಜಿತ ಅಭ್ಯರ್ಥಿ ರವಿಕುಮಾರ್ ಮಾತನಾಡಿ ಅಭಿವೃದ್ದಿ ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು. ಚುನಾವಣೆಯಲ್ಲಿಯೂ ಭಾಗವಹಿಸಿ ಮಾತನಾಡಿದ ಶಾಸಕ ಎ ಮಂಜು ಮಾತನಾಡಿ ಗೆಲ್ಲುವವರೆಗೂ ಪಕ್ಷ ರಾಜಕಾರಣ, ಗೆದ್ದ ಮೇಲೆ ಯಾವುದೇ ಪಕ್ಷ ರಾಜಕಾರಣ ಮಾಡದೇ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಕೊಂಡು ಹೋಗಿ, ಹಿಂದಿನ ಎಂ ಎಲ್ ಎ ಸದಸ್ಯರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಾವೇ ನಿರ್ದಾರ ತೆಗೆದುಕೊಂಡು ಸರ್ಕಾರದಿಂದ ಬಂದ ಹಣವನ್ನು ವಿನಿಯೋಗಿಸುತ್ತಿದ್ದರು ಆದರೆ ನಾನು ಹಾಗೆ ಮಾಡದೇ ಎಲ್ಲರನ್ನು ಕೇಳಿ ಆಗಬೇಕಾದ ಕೆಲಸಗಳ ಕಡೆ ಹೆಚ್ಚಿನ ಒತ್ತು ನೀಡಿದ್ದೇನೆ, ಪಟ್ಟಣಕ್ಕೆ ಯುಜಿಡಿ ಕಾಮಗಾರಿ ಆಗಬೇಕೆನ್ನುವುದು ನನಗೆ ದಶಕಗಳ ಕನಸು ಅದು ಈಗ ಮಂಜೂರಾಗಿದೆ, ಈ ಹಿಂದಿನ ಅವಧಿಯಲ್ಲಿ ಆರಂಭಿಕ ಮೊತ್ತ ಕಟ್ಟದಿದುದರಿಂದ ಯೋಜನೆ ವಿಳಂಬವಾಗಿತ್ತು ಎಂದು ಆರೋಪಿಸಿದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಸವಿತಾ ಕಾರ್ಯ ನಿರ್ವಹಿಸಿದರು. ಪ.ಪಂ. ಮುಖ್ಯಾಧಿಕಾರಿ ವಾಸುದೇವ್ ಸಭೆಯಲ್ಲಿ ಹಾಜರಿದ್ದರು.
ಅರಕಲಗೂಡು:ಅನಗತ್ಯವಾಗಿ ಮಾಜಿ ಶಾಸಕ ಎ ಟಿ ರಾಮಸ್ವಾಮಿಯವರ ಮೇಲೆ ಆರೋಪ ಹೊರಿಸುತ್ತಿರುವ ಶಾಸಕ ಎ. ಮಂಜು ಇದುವರೆಗೂ ಎಷ್ಟು ಬಾರಿ ಪಟ್ಟಣದ ವಾರ್ಡುಗಳಿಗೆ ಭೇಟಿ ನೀಡಿದ್ದಾರೆಂಬುದನ್ನು ಹೇಳಲಿ ಎಂದು ಪ.ಪಂ ಮಾಜಿ ಅಧ್ಯಕ್ಷ ಲೋಕೇಶ್ ಸವಾಲು ಹಾಕಿದ್ದಾರೆ.
ಪ.ಪಂ. ನ ಜೆಡಿಎಸ್ ಸದಸ್ಯರೊಂದಿಗೆ ಪತ್ರಿಕಾ ಗೋಷ್ಠಿ ನಡೆಸಿದ ಅವರು ಶಾಸಕ ಮಂಜು ಜವಾಬ್ಧಾರಿಯುತವಾಗಿ ಮಾತನಾಡಬೇಕೆ ವಿನಹ ಸಲ್ಲದ ಮಾತುಗಳನ್ನು ಆಡಬಾರದು, ಮಾಜಿ ಶಾಸಕರು ಹಿಂದಿನ ಆಡಳಿತಾವಧಿಯಲ್ಲಿ ಪ್ರತೀ ವಾರ್ಡುಗಳಿಗೂ ಭೇಟಿ ನೀಡಿ ಸಮಸ್ಯೆಯನ್ನು ಮನಗಂಡಿದ್ದರು ಹಾಘೂ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿದ್ದಾರೆ, ಅದೇ ರೀತಿ ಯುಜಿಡಿ ಕುರಿತು ಶಾಸಕ ಎ ಮಂಜು ಹೇಳಿಕೆ ಸರಿಯಲ್ಲ, ಜೆಡಿಎಸ್ ಅಧಿಕಾರದಲ್ಲಿದ್ದಾಗ ಯುಜಿಡಿ ಆರಂಭಕ್ಕೆ ಆರಂಭಿಕ ಮೊತ್ತವನ್ನು ಪಾವತಿಸಲಾಗಿತ್ತು ಆದರೆ ಸರ್ಕಾರದ ಆಡಳಿತಾತ್ಮಕ ಕಾರಣಗಳಿಂದ ತಡವಾಗಿದೆ ಅದನ್ನು ಸಾರ್ವಜನಿಕರು ಅರಿಯಬೇಕು ಎಂದರು. ಪಕ್ಷೇತರ ಅಭ್ಯರ್ಥಿ ರಮೇಶ್ ಜೆಡಿಎಸ್ ಪಕ್ಷ ಸೇರಿದ್ದಾರೆ ಆದ್ದರಿಂದ ಅವರನ್ನು ಬೇಷರತ್ತಾಗಿ ಬೆಂಬಲಿಸಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು. ಗೋಷ್ಠಿಯಲ್ಲಿ ಸದಸ್ಯರಾದ ರಮೇಶ್, ಶಂಕರಯ್ಯ, ಮುನ್ನಾ, ಅಲೀಂ, ರಾಮಣ್ಣ ಮತ್ತಿತರರು ಇದ್ದರು.

ಮಂಗಳವಾರ, ಆಗಸ್ಟ್ 17, 2010

INDEPENDENCE DAY VISUALS 2010

1. ನಾಗರಿಕ ವೇದಿಕೆ ಆಯೋಜಿಸಿದ್ದ ಸ್ವಾತಂತ್ರ್ಯಓಟದಲ್ಲಿ ಯೋಗಾರಮೇಶ್
2. ಅರಕಲಗೂಡು ಕಾಲೇಜು ಮೈದಾನದಲ್ಲಿ ನಡೆದ ಮುಖ್ಯ ಸಮಾರಂಭದಲ್ಲಿ ಶಾಸದ ಎ ಮಂಜು ಮತ್ತಿತರರು
3. ಅರಕಲಗೂಡು ಕೋಟೆ ಹೈಸ್ಕೂಲ್ ನಲ್ಲಿ ಶಾಸಕ ಎ ಮಂಜು ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಿದರು
4. ಅರಕಲಗೂಡು ಕೋಟೆ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಎ ಮಂಜು ನೋಟ್ ಪುಸ್ತಕ ವಿತರಿಸಿದರು
5. ಪಟ್ಟಣದಲ್ಲಿ ನಡೆದ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಮಾತನಾಡಿದರು.
6. ಅರಕಲಗೂಡಿನಲ್ಲಿ ನಡೆದ ಮಾದಿಗ ದಂಡೋರ ಜಾಗೃತಿ ಕಾರ್ಯಕ್ರಮದಲ್ಲಿ ಮುಖಂಡ ಪಾವಗಡ ಪ್ರಕಾಶ್ ಮಾತನಾಡಿದರು.

ಶುಕ್ರವಾರ, ಆಗಸ್ಟ್ 13, 2010

ದೇಶದ್ರೋಹಿ ವಿನಯ್ ನ ಅಂತರಂಗ-ಬಹಿರಂಗ!

ಅರಕಲಗೂಡು: ಕನ್ನಡದ ಹೆಸರಾಂತ ಕಾದಂಬರಿಕಾರ ಅನಕೃ ಹೆಸರಿನಿಂದಾಗಿ ಗುರುತಿಸಲ್ಪಡುತ್ತಿದ್ದ ಅರಕಲಗೂಡು ಇದೀಗ ಉಗ್ರಗಾಮಿ ಚಟುವಟಿಕೆಗೆ ಸಹಕರಿಸಿ ದೇಶದ್ರೋಹಿ ಚಟುವಟಿಕೆ ನಡೆಸುಯತ್ತಿದ್ದ ವಿನಯ್ ಕುಮಾರ್ ಬಂಧನದಿಂದಾಗಿ ರಾಷ್ಟಾಧ್ಯಂತ ಮತ್ತೊಮ್ಮೆ ಗಮನ ಸೆಳೆದಿರುವುದು ದುರಂತದ ಸಂಗತಿ.
ಅರಕಲಗೂಡು ತಾಲೂಕಿನ ರಾಮನಾಥಪುರ ಕೊಡಗು ಗಡಿಯಂಚಿನಲ್ಲಿದ್ದು ಜಿಲ್ಲಾ ಕೇಂದ್ರದಿಂದ 50ಕಿಮಿ ಹಾಗೂ ತಾಲ್ಲೂಕು ಕೇಂದ್ರದಿಂದ 20ಕಿಮಿ ದೂರದಲ್ಲಿದೆ. ರಾಷ್ಟಕೂಟರು-ಹೊಯ್ಸಳರ ಶೈಲಿಯ ಶಿಲ್ಪ ಕಲೆಯ ದೇಗುಲಗಳ ಸಮುಚ್ಚಯ ಹಾಗೂ ಕಾವೇರಿ ಹೊಳೆ ಇಲ್ಲಿ ಹರಿಯುವುದರಿಂದ ಇದು ಪ್ರಮುಖ ಧಾರ್ಮಿಕ ಕ್ಷೇತ್ರವೂ ಹೌದು. ಅಡಿಕೆ-ಭತ್ತ-ತಂಬಾಕು ಬೆಳೆಯುವ ಮೂಲಕ ಅತ್ಯಂತ ಸಮೃದ್ದಿ ಹಾಗೂ ಸಿರಿತನವೂ ಇಲ್ಲಿದೆಯಾದರೂ ಗ್ರಾಮೀಣ ಪ್ರದೇಶವಾದ ಇಲ್ಲಿ ಆಧುನಿಕತೆಯ ಸೋಂಕು ಇಲ್ಲ .ಇಂತಹ ರಾಮನಾಥಪುರಕ್ಕೆ ವಿನಯ್ ಅಲಿಯಾಸ್ ವಿನಯಕುಮಾರ್(30) ಕುಟುಂಬ ಕಳೆದ 15-20ವರ್ಷಗಳ ಹಿಂದೆ ಕೊಡಗಿನಿಂದ ವಲಸೆ ಬಂದು ಗ್ರಾಮದಲ್ಲಿ ನೆಲೆಸಿತ್ತು. ತಂದೆ ಇಲ್ಲದ ವಿನಯ್ ತನ್ನ ತಾಯಿ ಮಡಿಕೆರಿಯಮ್ಮ ಮತ್ತು ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದ. ತಾರುಣ್ಯದ ಆರಂಭದಲ್ಲಿ ಶ್ರಮವಿಲ್ಲದೇ ದುಡ್ಡು ಸಂಪಾದಿಸುವ ಹಪಾಹಪಿಗೆ ಬಿದ್ದ ಈತ ರೈಸ್ ಪುಲ್ಲಿಂಗ್, 20ಕಾಲುಗಳ ಆಮೆ, 2ತಲೆ ಬಿಳಿ ಹಾವು ಇತ್ಯಾಧಿಗಳ ಬೆನ್ನು ಹತ್ತಿ ತಮಿಳುನಾಡು ,ಕೇರಳ ಹಾಗೂ ಆಂಧ್ರಪ್ರದೇಶಗಳಿಗೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ನಂತರ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರು ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಲೈವ್ ಬ್ಯಾಂಡ್ ನಲ್ಲೂ ಕೆಲ ಕಾಲ ಭೌನ್ಸ್ರರ್ ಆಗಿದ್ದ ಎಂದು ಹೇಳಲಾಗುತ್ತಿದೆ. ಈ ಮದ್ಯೆ ಈತನ ಸಹೋದರಿಯರ ಮದುವೆಯಾಗಿದ್ದು, ತಾಯಿ ಸುಬ್ರಹ್ಮಣ್ಯೇಶ್ವರ ಧೇಗುಲದೆದರುರು ಹೂವು-ಹಣ್ಣು ಮಾರಾಟ ಮಾಡಿ ಜೀವನ ಸಾಕುತ್ತಾರೆ. ಆದರೆ ವಿನಯ್ ಶ್ರೀಮಂತಿಕೆ ಮತ್ತು ಸುಖದ ಜೀವನದ ಹಂಬಲಕ್ಕೆ ಬಿದ್ದು ಅಪಹರಣ, ವಂಚನೆಯಂತಹ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಮತ್ತು ಹಾಸನದ ಪೋಲೀಸ್ ಪೇದೆಯೊಬ್ಬರ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ ಈತನ ಅಸಲಿಯತ್ತು ತಿಳಿದ ಮೇಲೆ ಆಕೆ 2ವರ್ಷಗಳ ಹಿಂದೆ ಈತನನ್ನು ತೊರೆದಿದ್ದಾಳೆ. ಒಂದೂವರೆವರ್ಷಗಳ ಹಿಂದೆ ಮಂಗಳೂರಿನಲ್ಲಿದ್ದ ಕೇರಳ ಮೂಲಕ ಉದ್ಯಮಿಯೊಬ್ಬರನ್ನು ತನ್ನ ತಂಡದೊಂದಿಗೆ ಅಪಹರಿಸಿ ರಾಮನಾಥಪುರದ ತನ್ನ ಮನೆಯಲ್ಲಿ ಕೂಡಿಹಾಕಿ ಒತ್ತೆ ಹಣಕ್ಕೆ ಬೆದರಿಕೆ ಇಟ್ಟಿದ್ದ, ಮೂರು ತಿಂಗಳ ನಂತರ ಕೇರಳ-ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒತ್ತೆ ಬಿಡಿಸಿ ವಿನಯ್ ನನ್ನು ಜೈಲಿಗಟ್ಟಿದ್ದರು. ಜೈಲಿನಿಂದ ಹಿಂತಿರುಗಿದ ಈತ ಹಳ್ಳಿಯಲ್ಲಿ ಜನರ ವಿಶ್ವಾಸ ಬೆಳೆಸಿ ಹಲವು ಚೀಟಿಗಳನ್ನು ಹಾಕಿದ್ದ ಮತ್ತು ಬೇರೆ ಬೇರೆ ಮಾದರಿಯ ಕಾರುಗಳನ್ನು ತಂದು ಶೋಕಿ ಜೀವನ ನಡೆಸುತ್ತಿದ್ದ. ಗ್ರಾಮದಲ್ಲಿ ಸಭ್ಯನಂತೆ ಬದುಕುತಿದ್ದ ಈತನನ್ನು ಬೆಂಗಳೂರಿನ ಪೋಲೀಸರು ಕಳೆದ ಬುಧವಾರವೇ ಬಂಧಿಸಿ ಕರೆದೊಯ್ದಿದ್ದರು. ಇದೀಗ ವಿನಯನ ದೇಶದ್ರೋಹಿ ಪಾತಕಗಳು ಬಯಲಾಗಿದ್ದು ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ. ಆತನ ಮನೆಯಿಂದಲೂ ಪೋಲೀಸರು ಹಲವು ಮುಖ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ , ಆತನ ಮನೆಗೀಗ ಬೀಗ ಜಡಿಯಲಾಗಿದೆ ಆತನ ತಾಯಿ ಹಾಗೂ ಸಂಬಂಧಿಕರು ಸಂಪರ್ಕ ಸದ್ಯಕ್ಕೆ ಲಭ್ಯವಾಗಲಿಲ್ಲ.
ಅರಕಲಗೂಡು: ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ಸಹಿಸದೇ ಮಾಜಿ ಶಾಸಕ ಎ ಟಿ ರಾಮಸ್ತಾಮಿ ವೈಯುಕ್ತಿಕ ಹಿತಾಸಕ್ತಿಯಿಂದ ಉದ್ಯೋಗ ಖಾತ್ರಿ ಯೋಜನೆ ಕುರಿತು ದೂರುನೀಡುವ ಮೂಲಕ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಶಾಸಕ ಎ ಮಂಜು ಹೇಳಿದ್ದಾರೆ. ಕತ್ತಿಮಲ್ಲೇನಹಳ್ಲಿ ಏತ ನೀರಾವರಿ ಬಳಿಯ ಛಾನೆಲ್ ಗೆ ನೀರು ಹರಿಸುವ ಹಾಗೂ ಭಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು, ನಿನ್ನೆ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಪರಿಶೀಲಿಸಿರುವುದು ಗಮನಕ್ಕೆ ಬಂದಿದೆ, ತಪ್ಪು ಕಂಡು ಬಂದರೆ ಕ್ರಮ ಜರುಗಿಸಲಿ ಅದಕ್ಕೆ ತಮ್ಮ ಅಭ್ಯಂತರವಿಲ್ಲ ಆದರೆ ಯೋಜನೆ ಅನುಷ್ಠಾನದಲ್ಲಿ ಆಗಿರುವ ಸಣ್ಣಪುಟ್ಟ ಲೋಪದೋಷಗಳನ್ನು ದೊಡ್ಡದೆಂದು ಬಿಂಬಿಸಿ ಅಭಿವೃದ್ದಿಗೆ ಅಡ್ಡಿಪಡಿಸುವ ಕ್ರಿಯೆಯನ್ನು ತಾವು ಸಹಿಸುವುದಿಲ್ಲ ಎಂದರು. ಕೂಲಿ ಕಾರರ ಹಣ ಶೀಘ್ರವಾಗಿ ಬಿಡುಗಡೆ ಆಗಬೇಕು ಆದರೆ ಸರಕು-ಸಾಮಾಗ್ರಿ ವೆಚ್ಚದ ಬಗ್ಗೆ ತಕರಾರು ತೆಗೆದಿರುವುದು ಸರಿಯಲ್ಲ ಸಾಮಾಗ್ರಿ ವೆಚ್ಚ ಬಿಡುಗಡೆಯಾಗದೇ ಕೆಲಸ ಮಾಡುವುದಾದರೂ ಹೇಗೆ ಎಂದರು. ಮಾಜಿ ಶಾಸಕರು ಅವರ ಅಧಿಕಾರಾವಧಿಯಲ್ಲಿ ಅವರ ೂರಿನಲ್ಲೆ ಎಷ್ಟರ ಮಟ್ಟಿಗೆ ಕಾಮಗಾರಿ ಮಾಡಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ರಾಮನಾಥಪುರದಲ್ಲಿ ಪಟ್ಟಾಭಿರಾಮ ಪ್ರೌಡಶಾಲೆಯ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಿ ಬಿಲ್ ಮಾಡಲಾಗಿದೆ ಇದನ್ನೇಕೆ ಮಾಜಿ ಶಾಸಕರು ದೂರಲಿಲ್ಲ ಎಂದು ಪ್ರಶ್ನಿಸಿದ ಅವರು ಮಾಜಿ ಶಾಸಕರು ಒತ್ತುವರಿ ಸಮಿತಿ ಅಧ್ಯಕ್ಷರಾಗಿದ್ದವರು ತಾಲೂಕಿನಲ್ಲಿ ಅವರು ಮತ್ತು ಅ ವರ ಶಿಷ್ಯರು ಎಷ್ಟು ಪ್ರಮಾಣದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ , ಅದನ್ನು ತೆರವುಗೊಳಿಸಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಿ ಅದನ್ನು ಬಿಟ್ಟು ಅಭಿವೃದ್ದಿ ಸಹಿಸದೇ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಪತ್ರ ಬರೆದಿದ್ದಾರೆ ಎಂದು ಲೇವಡಿ ಮಾಡಿದರು. .

ಗುರುವಾರ, ಆಗಸ್ಟ್ 12, 2010

'ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಅಕ್ರಮವಾಗಿರುವುದು ನಿಜ'


ಅರಕಲಗೂಡು: ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ಅಕ್ರಮನಡೆದಿರುವ ಬಗ್ಗೆ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ತಾಲ್ಲೂಕಿನಲ್ಲಿ ಯೋಜನೆ ಅನುಷ್ಠಾನ ಮಾಡುವಾಗ ಇಂಜಿನಿಯರುಗಳಿಂದ ಅಕ್ರಮ ನಡೆದಿದೆ ಎಂದು ಮಾಜಿಶಾಸಕ ಎ ಟಿ ರಾಮಸ್ವಾಮಿ ಮಾಹಿತಿಯೊಂದಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು. ಈ ಕುರಿತು ಪರಿಶೀಲನೆಗೆಂದು ಪ್ರದಾನ ಕಾರ್ಯದರ್ಶಿ ರವಿಕುಮಾರ್ ತಾಲ್ಲೂಕಿಗೆ ಭೇಟಿ ನೀಡಿದ್ದರು. ಬೆಳಿಗ್ಗೆ 10ಗಂಟೆ ಸುಮಾರಿಗೆ ತಾಲ್ಲೂಕಿಗೆ ಆಗಮಿಸಿದ ಅವರ ಜೊತೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ರಾಜ್ಯ ನಿರ್ದೇಶಕ ಪ್ರಸನ್ನಕುಮಾರ್, ಜಿ.ಪಂ. ಸಿಇಓ ಅಂಜನಕುಮಾರ್, ತಾಲ್ಲೂಕಿನ ಖಾತ್ರಿ ಯೋಜನೆ ನೋಡಲ್ ಅಧಿಕಾರಿ ಜಿಲ್ಲಾ ಜಲಾನಯನ ಇಲಾಖೆಯ ವಿಜಯಕುಮಾರ್ , ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹಾಗೂ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಎಚ್ ಮಾದೇಶ್, ಸದಸ್ಯರಾದ ರಾಮಶೇಷ ಮತ್ತಿತರ ಅಧಿಕಾರಿಗಳು ಪ್ರಧಾನ ಕಾರ್ಯದರ್ಶಿಯವರ ಜೊತೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಿಗೆ ತೆರಳಿ ಕಾಮಗಾರಿಗಳನ್ನು ವೀಕ್ಷಿಸಿದರು. ಯಲಗತವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಮಗಾರಿ ಪರಿಶೀಲನೆ ವೇಳೆ ರಾಜಕೀಯ ಪಕ್ಷಗಳ ಬೆಂಬಲಿಗರು ಕಾಮಗಾರಿ ನಡೆಸಿ 6ತಿಂಗಳಾದರೂ ಕೂಲಿ ಹಣ ಬಿಡುಗಡೆ ಮಾಡದಿರುವ ಬಗ್ಗೆ ಅಸಹನೆ ವ್ಯಕ್ತಪಡಿಸಿದರು. ಬೈಚನಹಳ್ಳಿ ಗ್ರಾಮ ಪಂಚಾಯ್ತಿಗೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಕಾಮಗಾರಿಯನ್ನೇ ಮಾಡದೇ 11ಲಕ್ಷಕ್ಕೂ ಹೆಚ್ಚು ಹಣವನ್ನು ಕಾರ್ಯದರ್ಶಿ ಮತ್ತು ಅಧ್ಯಕ್ಷ ಡ್ರಾ ಮಾಡಿಕೊಂಡಿರುವುದು ಪತ್ತೆಯಾಯಿತು. ಈ ಪಂಚಾಯ್ತಿಯಲ್ಲಿ 53ಲಕ್ಷ ಸರಕು-ಸಾಮಾಗ್ರಿ ವೆಚ್ಚ ಪಾವತಿಸಲಾಗಿದ್ದು 11ಲಕ್ಷ ಕೂಲಿ ಅಕ್ರಮವಾಗಿ ಡ್ರಾ ಮಾಡಿಕೊಂಡು ವಂಚಿಸಲಾಗಿದೆ. ಸದರಿ ಬಾಬ್ತಿಗೆ ಯೋಜನಾ ಅನುಮೋದನೆಯಾಗಲೀ ಎಂಬಿಯನ್ನಾಗಲೀ ಬರೆಯದೇ ಹಣ ಪಡೆಯಲಾಗಿದೆ. ಅಲ್ಲಿನ ಪಂಚಾಯ್ತಿ ಕಾರ್ಯದರ್ಶಿ ಯನ್ನು ಈಗಾಗಲೇ ಅಮಾನತ್ತಿನಲ್ಲಿಡಲಾಗಿದ್ದು ಇದೀಗ ಕಾರ್ಯದರ್ಶಿ ಅಪ್ಪಣ್ಣೇಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಾಲ ಹಾಗೂ ಬಿಲ್ ಕಲೆಕ್ಟರನ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲು ಸೂಚಿಸಲಾಗಿದೆ. ಯಗಟಿ ಗ್ರಾಮದಲ್ಲಿ ಬೂಮಿ ಸಮತಟ್ಟು ಮಾಡಿದ್ದೇವೆಂದು ರೆಕಾರ್ಡು ಮಾಡಲಾಗಿದೆಯಾದರೂ ಅದಕ್ಕೆ ಯಾವುದೇ ಎನ್ ಎಂ ಆರ್ ಲಭ್ಯವಿಲ್ಲ, ಯಲಗತವಳ್ಳಿ ಊರು ಮಧ್ಯೆ ಗುಂಡಿ ಮುಚ್ಚಲು 2ಲಕ್ಷ ವೆಚ್ಚ ಮಾಡಲಾಗಿದೆ, ಮಂಡಿ ಚಿಕ್ಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ತೋಟದ ಕೆರೆಯಿಂದ ಮಣ್ಣು ತಂದು ಹಾಕಿ ಹೂಳೆತ್ತುವ ಕೆಲಸ ಎಂದು 15ಲಕ್ಷ ಬಿಲ್ ಪಡೆಯಲಾಗಿದೆ ಈ ಬಗ್ಗೆ ಪ್ರಧಾನ ಕಾರ್ಯದರ್ಶಿಗಳ ಗಮನ ಸೆಳೆಯಲಾಯಿತು ಎಂದು ತಾ.ಪಂ. ಅಧ್ಯಕ್ಷ ಮಾದೇಶ್ ಪತ್ರಿಕೆಗೆ ತಿಳಿಸಿದರು. ನಂತರ ಕತ್ತಿಮಲ್ಲೇನಹಳ್ಳಿ ಗ್ರಾ.ಪಂ ಗೆ ತೆರಳಿದ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿತು, ಈ ಸಂಧರ್ಭ ಹಾಜರಿದ್ದ ಪತ್ರಕರ್ತರನ್ನು ಗಮನಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಂಜನಕುಮಾರ್ ಪತ್ರಕರ್ತರಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯವರ ಗಮನಸೆಳೆದರು. ತಕ್ಷಣ ಪರಿಶೀಲನೆ ಸ್ಥಗಿತಗೊಳಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಉದ್ಯೋಗ ಖಾತ್ರಿ ಅಕ್ರಮದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಬೇಜವಾಬ್ದಾರಿಯ ಉತ್ತರ ನೀಡಿದರಲ್ಲದೇ ಮೊದಲಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದರು, ಹಾಗಾದರೆ ಬಂದ ಔಚಿತ್ಯವೇನು ಎಂಬ ಪ್ರಶ್ನೆಗೆ ದೂರಿನ ಹಿನ್ನೆಲೆಯಲ್ಲಿ ಬಂದಿದ್ದೇನೆ ಪರಿಶೀಲಿಸುತ್ತಿದ್ದೇನೆ ಎಂದು ನುಡಿದರು. ಭೇಟಿ ನೀಡಿದ ಕಾಮಗಾರಿಗಳು ಅಕ್ರಮವಾಗಿದೆಯೇ ಎಂದು ಕೇಳಿದಾಗ ಆ ಕುರಿತು ತಾಂತ್ರಿಕ ಪರಿಣಿತರ ತಂಡ ಪರಿಶೀಲಿಸುವುದು ಮೇಲ್ನೋಟಕ್ಕೆ ಕಂಡು ಬರುವ ಮಾಹಿತಿಯನ್ನಷ್ಟೆ ತಾವು ಗಮನಿಸುತ್ತಿರುವುದಾಗಿ ತಿಳಿಸಿರುವುದಲ್ಲದೇ ಪರೋಕ್ಷವಾಗಿ ವ್ಯಾಪಕ ಅಕ್ರಮವಾಗಿರುವುದನ್ನು ಒಪ್ಪಿಕೊಂಡರು. ಸಾಮಾಗ್ರಿ ವೆಚ್ಚವನ್ನು ಪಾವತಿಸಿ ಕೂಲಿ ಹಣವನ್ನು 6ತಿಂಗಳಿನಿಂದ ತಡೆಹಿಡಿಯಲಾಗಿರುವ ಕುರಿತು ಪ್ರಶ್ನಿಸಿದಾಗ ದೂರಿನ ಹಿನ್ನೆಲೆಯಲ್ಲಿ ತಡೆಯಲಾಗಿದೆ ಎಂದರು, ಹಾಗಾದರೆ ಸಾಮಾಗ್ರಿ ವೆಚ್ಚವನ್ನು ತಡೆ ಹಿಡಿಯಬಹುದಿತ್ತಲ್ಲವೇ ? ನಿಮ್ಮ ಕ್ರಮದಿಂದ ಕೂಲಿಕಾರರಿಗೆ ಆಗಿರುವ ನಷ್ಟವನ್ನು ತುಂಬಿಕೊಡುವವರು ಯಾರು ? ಅಷ್ಟಕ್ಕೂ ಸಾಮಾಗ್ರಿ ಬಿಲ್ ವಿತರಿಸಲು ಗ್ರಾ.ಪಂ.ಗೆ ಮಾತ್ರ ಅಧಿಕಾರವಿದೆ ಹೀಗಿರುವಾಗ ಜಿ.ಪಂ. ಅಧಿಕಾರಿಗಳು ಸಪ್ಲೈ ಬಿಲ್ ಕೊಟ್ಟದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಲು ತಿಣುಕಾಡಿದ ಅಧಿಕಾರಿ ಹಾರಿಕೆಯ ಉತ್ತರ ನೀಡಿದರು. ಯೋಜನಾನುಷ್ಟಾನದಲ್ಲಿ ವ್ಯಾಪಕ ಅಕ್ರಮವಾಗಿರುವುದನ್ನು ಒಪ್ಪಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಉತ್ತರ ನೀಡಿ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಎಷ್ಟೋ ಮಟ್ಟಿಗೆ ಉತ್ತಮ ಕೆಲಸವಾಗಿದೆ ಸಣ್ಣಪುಟ್ಟ ಲೋಪದೋಷಗಳಾಗಿರಬಹುದು, ಈ ಯೋಜನೆಯಲ್ಲಿ ಯಂತ್ರ ಬಳಸಲು ಅವಕಾಶವಿದೆ, ಕೂಲಿಕಾರ್ಮಿಕರಿಗೆ ವಾಸ್ತವ ನೆಲೆಗಟ್ಟಿನಲ್ಲಿ ಖಾಸಗಿಯವರಿಂದ ಹೆಚ್ಚಿನ ಕೂಲಿ ಸಿಗುತ್ತಿದೆ ಖಾತ್ರಿ ಯೋಜನೆಯಲ್ಲಿ ಕಡಿಮೆ ಇದೆ ಹೀಗಿರುವಾಗ ಯಂತ್ರ ಬಳಸುವುದರಲ್ಲಿ ತಪ್ಪೇನಿದೆ ಎಂದು ಉತ್ತರಿಸಿದಾಗ ಸಿಟ್ಟಿಗೆದ್ದ ಪತ್ರಕರ್ತರು ಹಾಗಾದರೆ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುವ ಯೋಜನಾನುಷ್ಠಾನ ಬೇಕಿಲ್ಲ ರದ್ದುಪಡಿಸಿ ನೀವೇ ಹೀಗೆ ಹೇಳುವುದು ಸರಿಯೇ ಎಂದರು. ಆದರೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ತಿಣುಕಾಡಿದ ಅವರು ತೇಲಿಕೆಯ ಉತ್ತರ ನೀಡಿ ಪತ್ರಕರ್ತರನ್ನು ಸಾಗಹಾಕಿದರು.
ಟೈಂ ಬಾಂಡ್ ಇಲ್ಲ!
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಎಷ್ಟು ಕೋಟಿ ರೂಪಾಯಿ ಕೂಲಿ ಬಾಬ್ತು ಬಾಕಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಪ್ರಧಾನ ಕಾರ್ಯದರ್ಶಿ ತಡಕಾಡಿದಾಗ ಜಿ.ಪಂ. ಸಿಇಓ 10ಕೋಟಿ ಎಂದುತ್ತರಿಸಿದರು ಇದು ಅರಕಲಗೂಡು ತಾಲ್ಲೂಕಿನದ್ದು ಆದರೆ ಜಿಲ್ಲೆಯಲ್ಲಿ ಎಷ್ಟು ಬಾಕಿ ಇದೆ ಎಂಬ ಪ್ರಶ್ನೆಗೆ ಅವರಿಂದ ಉತ್ತರ ಸಿಗಲಿಲ್ಲ. ಕಳೆದ 6ತಿಂಗಳಿನಿಂದ ಕೂಲಿಕಾರರಿಗೆ ಕೂಲಿ ಹಣ ಬಾಕಿ ಇರುವುದರಿಂದ ಸಂಕಷ್ಟದಲ್ಲಿದ್ದಾರೆ ದುಡ್ಡು ಬಿಡುಗಡೆ ಯಾವಾಗ ಎಂದರೆ ಅಕ್ರಮಗಳ ಕುರಿತ ತನಿಖಾ ವರದಿ ಬಂದ ನಂತರ ಶೀಘ್ರವಾಗಿ ಹಣ ಬಿಡುಗಡೆಗೊಳಿಸಲಾಗುವುದು ಎಂದರು.

ಅರಕಲಗೂಡು: ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಂಜಿನಿಯರುಗಳು ಹಣ ಲೂಟಿ ಮಾಡಿದ್ದಾರೆ ಮತ್ತು ಆ ಮೂಲಕ ಕಾಮಗಾರಿ ನಿರ್ವಹಿಸಿದ ಕೂಲಿಕಾರರಿಗೆ ಹಣ ನೀಡದೇ ವಂಚಿಸಲಾಗಿದೆ ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಮಾತನಾಡಿದ ಅವರು, ಲೆಕ್ಕಕ್ಕೆ ಪತ್ರಕ್ಕೆ ಇಲ್ಲದ ಕೆರೆ-ಕಟ್ಟೆಗಳನ್ನು ಮಾಡಿದ್ದೇವೆ, ಕೆರೆಗಳ ಹೂಳೆತ್ತಿದ್ದೇವೆ ಎಂದು ಉದ್ಯೋಗ ಖಾತ್ರಿ ಬಿಲ್ ಮಾಡಲಾಗಿದೆ, ಭೂಮಿ ಸಮತಟ್ಟುಮಾಡಲು ಗ್ರಾವೆಲ್ ಹಾಕಿದ್ದೇವೆಂದು ಹೇಳಿದ್ದಾರೆ, ಎಲ್ಲಾ 29ಗ್ರಾ.ಪಂಗಳಲ್ಲೂ ನೀರುಗಾಲುವೆಗಳನ್ನು ಮಾಡುವಾಗ, ಬೂಮಿ ಸಮತಟ್ಟು ಮಾಡುವಾಗ ಸಪ್ಲೈ ಬಿಲ್ ತೋರಿಸಲಾಗಿದೆ,ಇಂಜಿನಿಯರುಗಳು ಅದೆಷ್ಟು ಎಂಬಿ ಬುಕ್ ಗಳನ್ನು ಇಶ್ಯೂ ಮಾಡಿದ್ದಾರೆಂಬ ಮಾಹಿತಿಯೇ ಇಲ್ಲ, ಒಬ್ಬೊಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ದಿನ 6-7ಕಾಮಗಾರಿ ನಿರ್ವಹಿಸಲಾಗಿದೆ, 7-8ನೇ ತರಗತಿಯ ವಿದ್ಯಾರ್ತಿಗಳ ಹೆಸರಿನಲ್ಲೂ ಜಾಬ್ ಕಾರ್ಡು ವಿತರಣೆಯಾಗಿದೆ, ಸ್ಥಳಕ್ಕೆ ತೆರಳದೇ ಬೇಕಾಬಿಟ್ಟಿ ಎಂಬಿ ಬರೆಯಲಾಗಿದೆ ಇದನ್ನೆಲ್ಲಾ ಸಹಿಸಿಕೊಂಡಿರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಯೋಜನೆಯಲ್ಲಿ ಯಾವುದೇ ಪಕ್ಷದ ಬೆಂಬಲಿಗರು ಕೆಲಸ ಮಾಡಿದ್ದಾರೆ, ಕಂಟ್ರಾಕ್ಟು ಮಾಡಿದ್ದಾರೆ ಎಂದು ನಾನು ಹೇಳುತ್ತಿಲ್ಲ ಎಲ್ಲಾ ಪಕ್ಷದ ಜನರು ಕಾಮಗಾರಿ ನಡೆಸಿದ್ದಾರೆ ಆದರೆ ಕಾಮಗಾರಿ ನಡೆಸಿದ ಜನರಿಗೆ ಹಣ ಬಿಡುಗಡೆ ಮಾಡದೇ ಸಾಮಾಗ್ರಿ ವೆಚ್ಚ ತೋರಿಸಿ 3ಕೋಟಿಗೂ ಅಧಿಕ ಹಣವನ್ನು ಗುಳುಂ ಮಾಡಿರುವ ಇಂಜಿನಿಯರುಗಳ ವಿರುದ್ದ ನನ್ನ ಹೋರಾಟ ನಡೆಸುತ್ತೇನೆ ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ಉತ್ತಮ ಕೆಲಸವಾಗಿದೆ ನಿಜ ಆದರೆ ಕೆಲಸ ಮಾಡದೆ ಸುಳ್ಳು ಲೆಕ್ಕ ಪತ್ರ ನೀಡಿ ದುಡ್ಡು ಹೊಡೆದಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದರು. ಅರಣ್ಯ ಇಲಾಖೆಯಲ್ಲಿ 1ಕಾಲು ಕೋಟಿಯಷ್ಟು ವೆಚ್ಚ ಮಾಡಿ ಗಿಡ ನೆಟ್ಟಿದ್ದೇವೆಂದು ಸುಳ್ಳು ದಾಖಲೆ ನೀಡಿದ್ದಾರೆ, ನೀರಾವರಿ ಇಲಾಖೆಯಲ್ಲು ಹೂಳು ತೆಗೆಯಲು ಕೋಟ್ಯಾಂತರ ರೂ ವೆಚ್ಚ ಮಾಡಲಾಗಿದೆ ಹೀಗೆ ವಿವಿಧ ಇಲಾಖೆಗಳಲ್ಲೂ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಅಕ್ರಮ ಕುರಿತು ಅಧಿಕೃತ ಮಾಹಿತಿ ಸಂಗ್ರಹಿಸಿದ್ದು ದೂರು ನೀಡಿದ್ದೇನೆ ಎಂದರು. ಬೈಚನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 17ಲಕ್ಷ ಹಣ ಡ್ರಾ ಮಾಡಿರುವ ಬಗ್ಗೆ ನನ್ನ ಹತ್ತಿರ ಅಧಿಕಾರಿಗಳು ಧೃಢೀಕರಿಸಿದ ಮಾಹಿತಿಯಿದೆ ಆದರೆ ಈಗ 11ಲಕ್ಷದ ಮಾಹಿತಿ ಮಾತ್ರ ಇದೆ ಎನ್ನುತ್ತಿದ್ದಾರೆ, ಕಂಪ್ಯೂಟರ್ ನಲ್ಲಿ 2009ನೇ ವರ್ಷದ ಮಾಹಿತಿಗಳನ್ನು ಅಕ್ರಮ ಮುಚ್ಚುವ ಸಲುವಾಗಿ ವ್ಯವಸ್ಥಿತವಾಗಿ ತೆಗೆಯಲಾಗಿದೆ, ಇದರಿಂದಾಗಿ ಈಗಾಗಲೇ ಕಾರ್ಯ ನಿರ್ವಹಿಸಿರುವ ಕಾಮಗಾರಿಗಳಿಗೂ ಹಣ ಪಾವತಿಯಾಗದೇ ತೊಂದರೆ ಎದುರಾಗಲಿದೆ, ಅಧಿಕಾರಿಗಳು ಮಾಡಿದ ತಪ್ಪಿಗೆ ಕೂಲಿಕಾರರಿಗೆ ಬವಣೆ ಪಡಬೇಕಿದೆ ಎಂದರು. ಜನರ ಪರವಾಗಿ ತನ್ನ ನಿಲುವಿದ್ದು ಅನ್ಯಾಯವಾಗಿ ಜನರ ತೆರಿಗೆ ಹಣವನ್ನು ಯೋಜನೆ ಮೂಲಕ ಲೂಟಿಗೈದಿರುವ ಅಧಿಕಾರಿಗಳ ವಿರುದ್ದ ಮಾತ್ರ ತಮ್ಮ ಹೋರಾಟವಿದೆ ತನ್ನಿಂದಾಗಿ ಖಾತ್ರಿ ಯೋಜನೆಯ ದುಡ್ಡು ನಿಂತಿಲ್ಲ, ಅಧಿಕಾರಿಗಳ ತಪ್ಪಿನಿಂದ ಹಣ ಬರುವುದು ನಿಂತಿದೆ ಈ ಬಗ್ಗೆ ಜನರ ಬಳಿಗೆ ತೆರಳಿ ಆಗಿರುವ ಅನ್ಯಾಯವನ್ನು ಹೇಳುತ್ತೇನೆ, ಇದನ್ನು ಇಲ್ಲಿಗೆ ಬಿಡುವುದಿಲ್ಲ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನನ್ನ ಹೋರಾಟ ಇದ್ದೇ ಇರುತ್ತದೆ ಎಂದರು. ಈ ಸಂಧರ್ಭದಲ್ಲಿ ತಾ.ಪಂ. ಅಧ್ಯಕ್ಷ ಮಾದೇಶ್, ಜಿ.ಪಂ ಸದಸ್ಯ ಅಪ್ಪಣ್ಣ, ತಾ.ಪಂ. ಸದಸ್ಯ ರಾಮಶೇಷ ಇದ್ದರು.

ಭಾನುವಾರ, ಆಗಸ್ಟ್ 8, 2010

ಕನ್ನಡದ ಚಿತ್ರರಂಗದಲ್ಲಿ 'ಮತ್ತೆ ಮುಂಗಾರು'!

ಕನ್ನಡ ಚಿತ್ರರಂಗದ ಸ್ಥಿತಿ ಇವತ್ತು ಹೇಗಿದೆ? ಸಿದ್ದ ಮಾದರಿಯ ಕಥೆ, ಮಚ್ಚು-ಕತ್ತಿ-ಲಾಂಗು, ಅದೇ ಡೈಲಾಗು, ಅದೇ ಹಾಡು, ಅದೇ ಹಾಸ್ಯ, ರಿಮೇಕ್ ಚಿತ್ರಾನ್ನ, 4ಹಾಡು1ಫೈಟು1ಮಸಾಲೆ ಹಾಕಿ ಯಾವ್ದಾದ್ರೂ ಒಂದು ಥೇಟರಲ್ಲಿ ಬಿಡುಗಡೆ ಮಾಡಿದ್ರೆ ಸಾಕು ಒಂದಿಷ್ಟು ಹಕ್ಕುಗಳನ್ನ ಟಿವಿ ಯವರಿಗೆ ಮಾರಿಕೊಂಡ್ರೆ ಮುಗೀತು.ಪ್ರೇಕ್ಷಕರನ್ನ ಕುರಿತು ಈ ನನ್ನ ಮಕ್ಳು ಥೇಟರಿಗೆ ಬಂದು ಚಿತ್ರ ನೋಡಲ್ಲ ನಾವು ಉದ್ದಾರ ಆಗಲ್ಲ ಅಂತ ಡೈಲಾಗು ಬಿಸಾಕೋರು ಒಂದು ಕಡೆ ಆದ್ರೆ ನಾನೇ ಸುಪ್ರೀಂ ಎಂದು ಬೀಗುವ ನಿರ್ದೇಶಕರ ಸಂಘ, ಕಲಾವಿದರ ಸಂಘ,ಚಲನ ಚಿತ್ರ ವಾಣಿಜ್ಯ ಮಂಡಳಿ ದಿನಕ್ಕೊಂದು ರಾಧ್ದಾಂತ ಎಬ್ಬಿಸಿಕೊಂಡು ಪರಸ್ಪರರ ಮೇಲೆ ಕೆಸರೆರಚಾಡಿಕೊಂಡು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗುತ್ತಿವೆ. ನಾಯಕ ನಟರುಗಳೂ ಒಂದೇ ಮಾದರಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬದಲಾವಣೆಗಳಿಗೆ, ಪ್ರಯೋಗಗಳಿಗೆ ಒಡ್ಡಿಕೊಳ್ಳದೇ ಜಿಡ್ಡುಗಟ್ಟಿದ ಪರಿಸ್ಥಿತಿಯಲ್ಲಿದ್ದಾರೆ. ಹೊಸ ಅಲೆಯ ಕಥೆಗಳು, ಮನಕಲಕುವ ವಿಚಾರಗಳ ಸಂಕೀರ್ಣತೆ ಅದನ್ನು ತೆರೆಯ ಮೇಲೆ ಮೂಡಿಸುವ ಪ್ರಬುದ್ದತೆ ಕೊರತೆ ಇವತ್ತು ಕನ್ನಡ ಚಿತ್ರರಂಗದಲ್ಲಿದೆ. ಒಬ್ಬ ಪುಟ್ಟಣ್ಣ, ಒಬ್ಬ ಶಂಕರ್ ನಾಗ್,ಒಬ್ಬ ಗಿರೀಶ್ ಕಾಸರವಳ್ಳಿ, ಏಕಮೇವಾದ್ವಿತಿಯರೆನಿಸಿದ ರಾಜ್, ವಿಷ್ಣು, ಅಶ್ವಥ್ ಹೀಗೆ ಕನ್ನಡ ಚಿತ್ರರಂಗದಲ್ಲಿ ಛಾಪು ಉಳಿಸಿದ ಹಳಬರನ್ನು ಬಿಟ್ಟರೆ ಹೊಸಬರಲ್ಲಿ ಅಂತಹ ಗಟ್ಟಿತನ ಕೊರತೆ ಇವತ್ತಿಗೂ ಇದ್ದೇ ಇದೆ.
ಇದನ್ನೆಲ್ಲಾ ಇವತ್ತು ನಿಮ್ಮ ಮುಂದೆ ಹೇಳಲು ಕಾರಣವೂ ಇದೆ. ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸ್ವಂತಿಕೆ ಇದೆ, ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದ ಕನ್ನಡ ಚಿತ್ರರಂಗದಲ್ಲಿ ಕಳೆದ 2ದಶಕಗಳಿಂದ ಗುಣಮಟ್ಟದ ಚಿತ್ರಗಳ ಕೊರತೆ ಇದೆ. ಇಲ್ಲಿ ಪ್ರಯೋಗಶೀಲತೆಗೆ ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳುವವರಿಲ್ಲ, ಸಂತೆಗೆ ಮೂರು ಮೊಳ ನೇಯುವವರದ್ದೇ ಕಾರುಬಾರು, ಸಂಘ-ಸಂಸ್ಥೆ ಹಾಗೂ ಮಂಡಳಿಗಳಲ್ಲೂ ಅವರದ್ದೇ ಆಟಾಟೋಪ. ಮೊನ್ನೆ ಮೊನ್ನೆ 92.7 ಬಿಗ್ ಎಫ್ ಎಂ ಮನರಂಜನಾ ರೇಡಿಯೋ ಪ್ರಸಾರದಲ್ಲಿ ಕನ್ನಡ ಚಿತ್ರರಂಗದ ಛತ್ರಿ ಯಾರು? ಎಂಬ ತರ್ಲೆ ಪ್ರಶ್ನೆಯನ್ನು ಇಟ್ಟು ಕನ್ನಡದ ಹಾಸ್ಯ ನಟರ ಪಟ್ಟಿ ನೀಡಿ ಆರಿಸುವಂತೆ ಕೋರಿತ್ತು. ಇದರಿಂದ ಸಿಟ್ಟಿಗೆದ್ದ ಚಲನ ಚಿತ್ರ ಮಂಡಳಿ ಸದರಿ ರೇಡಿಯೋ ವಿರುದ್ದ ಪ್ರತಿಭಟನಾರ್ಥವಾಗಿ ಚಲನಚಿತ್ರ ಚಟುವಟಿಕೆಗಳನ್ನು ಬಂದ್ ಮಾಡುವ ಬೆದರಿಕೆ ಒಡ್ಡಿತ್ತು. ಆಗ ಸಂಧಾನಕ್ಕೆ ಬಂದ ಖಾಸಗಿ ರೇಡಿಯೋದ ಮುಖ್ಯಸ್ಥರು ಕ್ಷಮೆಯಾಚಿಸಿದರು. ಅದಕ್ಕೆ ಮಂಡಳಿ ವಿಧಿಸಿದ ಶಿಕ್ಷೆ ಒಂದು ದಿನ ರೇಡಿಯೋ ಬಂದ್ ಮಾಡಬೇಕು, ಪ್ರತೀ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸಬೇಕು ಇತ್ಯಾದಿ. ಇದ್ಯಾವ ಸೀಮೆಯ ಶಿಕ್ಷೆ ಸ್ವಾಮಿ.? ಇದು ಶಿಕ್ಷೆಯ ಹುಟ್ಟಾ? ಅದ್ಯಾವುದೋ ಒಂದು ರೇಡಿಯೋ ನಟರನ್ನ ಅಪಮಾನಿಸಿದೆ ಎಂದಾದರೆ ಅದಕ್ಕೆ ಕಾನೂನಿನಡಿ ಶಿಕ್ಷೆ ಕೊಡಿಸುವ ಅವಕಾಶವಿದೆ ಹೀಗಿರುವಾಗ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸುವುದು ಅಂದರೆ ಅದೆಂಥದ್ದು. ಇದೇ ಮಂಡಳಿ ತಿಂಗಳ ಹಿಂದೆ 'ರಾವಣ್' ಹಿಂದಿ ಚಿತ್ರ ರಾಜ್ಯದಲ್ಲಿ ಬಿಡುಗಡೆ ಯಾದಾಗ ಬಾಲ ಮುದುರಿಕೊಂಡು ತನ್ನ ನಿಯಮಗಳನ್ನು ಸಡಿಲಿಸಿತು. ಕನ್ನಡ ಚಿತ್ರ ರಂಗದ 75ರ ಸಂಭ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ಸಮರ್ಪಕವಾಗಿ ಆಚರಿಸಲು ಸಾಮರ್ತ್ಯವಿಲ್ಲದ ಚಿತ್ರರಂಗದ ಮಂದಿಗೆ ತನ್ನದೇ ನಟರು,ನಟಿಯರು,ನಿರ್ದೇಶಕರು ಕೆಸರೆರಚಾಡಿಕೊಂಡಾಗ ಸರಿಯಾದ್ದೊಂದು ಖಾಜಿ ನ್ಯಾಯ ಮಾಡಲು ಆಗಲಿಲ್ಲ, ಅನೇಕ ದಶಕಗಳಿಂದ ಕನ್ನಡದಲ್ಲಿ ಪೈರಸಿ ತಡೆಗೆ ಕಟ್ಟುನಿಟ್ಟಾದ ಒಂದು ನಿಯಮ ಹೊರಡಿಸಲು ಆಗಲಿಲ್ಲ, ಹೊಡಿ-ಬಡಿ-ಕೊಚ್ಚು-ಕೊಲ್ಲು-ಸುಂದರ ಹೊರಾಂಗಣ,ಮಧುರ ಹಾಡುಗಳು, ಕೆಟ್ಟುಕೆರ ಹಿಡಿದ ಕಥೆ, ಸವಕಲು ನಿರೂಪಣೆ ಇಂಥಹದ್ದನ್ನು ವಿಮರ್ಶಿಸಿದರೆ ಪತ್ರಕರ್ತರ ವಿರುದ್ದ ಹರಿಹಾಯುವ ಸ್ಥಿತಿ ಇದೆ. ಇಂಥಹ ವೈರುದ್ಯ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ತೆ ಬದಲಾವಣೆ ಗಾಳಿ ಬೀಸುವುದೇ? ಹೌದು ಖಂಡಿತವಾಗಿಯೂ ಒಂದು ಹಂತದಲ್ಲಿ ಇಂತಹದ್ದನ್ನ ನಿರೀಕ್ಷಿಸಲು ಸಾಧ್ಯವಿದೆ. ಹಳೆ ದಿನಗಳ ಮಾಧುರ್ಯವನ್ನ ತುಂಬಲು ಜಯಂತ್ ಕಾಯ್ಕಿಣಿ, ಯೋಗರಾಜ ಭಟ್ ರಂತಹವರ ಸಾಹಿತ್ಯ ಶ್ರೀಮಂತಿಕೆ, ಹರಿಕೃಷ್ಣ,ಮನೋಮೂರ್ತಿ, ಅನೂಪ್ ಸಿಳೀನ್, ರಿಕಿಕೇಜ್, ರಘು ದೀಕ್ಷಿತ್ ರಂತಹ ಹೊಸ ಅಲೆಯ ಸಂಗೀತ ನಿರ್ದೇಶಕರು, ಜೇಕಬ್ ವರ್ಗೀಸ್,ಸೈನೈಡ್ ನ ರಮೇಶ್, ಯೋಗರಾಜಭಟ್, ಸೂರಿ, ರಾಘವ(ದ್ವಾರ್ಕಿ), ಶಶಾಂಕ್, ಚಂದ್ರು, ಗುರುಪ್ರಸಾದ್ ರಂತಹ ಹೊಸ ತುಡಿತದ ನಿರ್ದೇಶಕರು ಮನಸ್ಸು ಮಾಡಿದರೇ ಮತ್ತೆ ಹಳೇ ದಿನಗಳ ವೈಭವ ಕನ್ನಡಕ್ಕೆ ಮರಳಬಹುದು. ಇಂತಹದ್ದೊಂದು ಬೆಳಕು ಕಾಣಿಸಿದ್ದು ಕಳೆದೆರೆಡು ವಾರಗಳಿಂದ ಬಿಡುಗಡೆಯಾದ ಕೆಲವು ಚಿತ್ರಗಳ ವಿಭಿನ್ನತೆಯಿಂದಾಗಿ. ಶಶಾಂಕ್ ರ ಕೃಷ್ಣನ್ ಲವ್ ಸ್ಟೋರಿ, ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಮತ್ತೆ ಮುಂಗಾರು ಅಂತಹ ಭರವಸೆಯನ್ನು ದಕ್ಕಿಸಿಕೊಟ್ಟಿವೆ ಎಂದರೆ ತಪ್ಪಾಗಲಾರದು. ಅದರಲ್ಲೂ ಮತ್ತೆ ಮುಂಗಾರು ಕಥಾವಸ್ತುವಿನಿಂದಾಗಿ ಕನ್ನಡದ ಮಟ್ಟಿಗೆ ಒಂದು ವಿಶಿಷ್ಠ ಚಿತ್ರ.
'ಮತ್ತೆ ಮುಂಗಾರು' ಈ . ಕೃಷ್ಣಪ್ಪ ನಿರ್ಮಾಣದ ಹೊಸ ಚಿತ್ರ. ಮುಂಗಾರು ಮಳೆಯಂತಹ ಉತ್ತಮ ಮನರಂಜನಾ ಚಿತ್ರ ಮೊಗ್ಗಿನ ಮನಸ್ಸು ವಿನಂತಹ ಪ್ರಬುದ್ದ ಚಿತ್ರಗಳು ಇವರ ನಿರ್ಮಾಣದಲ್ಲೇ ಬಂದಿತ್ತು. ಈಗ ಮತ್ತೆ ಮುಂಗಾರು ಬಂದಿದೆ, ಇದು ಮೇಲ್ನೋಟಕ್ಕೆ ಪ್ರೇಮ ಕಥಾವಸ್ತುವಿನಂತಹ ಚಿತ್ರದಂತೆ ಬಿಂಬಿತವಾದರೂ ಆಂತರ್ಯದಲ್ಲಿ ಬೇರೆಯದೇ ಆದ ಕಥೆಯನ್ನು ಹೊಂದಿದೆ. ನಿರ್ದೇಶಕರು, ದೃಶ್ಯನಿರೂಪಣೆ ಹಾಗೂ ಸಂಭಾಷಣೆಯಲ್ಲಿ ಸ್ವಲ್ಪ ಪ್ರಬುದ್ದತೆ ತೋರಿದ್ದರೆ ಇದು ಅಂತರಾಷ್ಟ್ರೀಯ ಗುಣಮಟ್ಟದ ಚಿತ್ರ ವಾಗಿ ರೂಪುಗೊಳ್ಳುವುದು ನಿಸ್ಸಂದೇಹ.ಅಂತಹ ಲೋಪಗಳ ನಡುವೆಯೂ ಮಾತೃ ಪ್ರೇಮೆ, ದೇಶಭಕ್ತಿ, ಪ್ರೇಮ, ಬದುಕಿನ ಅನಿವಾರ್ಯ ಸಂಕಟ ಹಾಗೂ ತಲ್ಲಣವನ್ನು ಮತ್ತೆ ಮುಂಗಾರು ಪ್ರೇಕ್ಷಕರಿಗೆ ಹಿಡಿ ಹಿಡಿಯಾಗಿ ಕಟ್ಟಿಕೊಡುತ್ತದೆ. ಮುಂಬೈ ಕಡಲತೀರದಲ್ಲಿ ಬದುಕುವ ವಲಸಿಗ ಮೀನುಗಾರರ ಬವಣೆ, ಅಲ್ಲಿ ನಾಯಕ-ನಾಯಕಿಯ ನಡುವೆ ನಡೆಯುವ ಪ್ರೇಮ, ತೆಗೆದುಕೊಳ್ಳುವ ಅನಿರೀಕ್ಷಿತ ತಿರುವು, ಕಡಲಿನಲ್ಲಿ ಉಂಟಾಗುವ ಚಂಡಮಾರುತದ ಸುಳಿಗೆ ಸಿಕ್ಕ ಭಾರತೀಯ ಮೀನುಗಾರರು ತಮಗೆ ತಿಳಿಯದಂತೆ ಪಾಕಿಸ್ತಾನದ ಸರಹದ್ದು ಮೀರಿದಾಗ ಅನುಭವಿಸುವ ಕಷ್ಟ, ಕತ್ತಲ ಕಾರಾಗೃಹದಲ್ಲಿ ಅನುಭವಿಸುವ ಪಡಿಪಾಟಲು, ಇಂದಿರಾಗಾಂದಿ-ರಾಜೀವ್ ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಕಾರ್ಗಿಲ್ ಯುದ್ದ ತದನಂತರ ವಾಜಪೇಯಿ ಸರ್ಕಾರದಲ್ಲಿ ಎರಡೂ ದೇಶಗಳ ನಡುವೆ ನಡೆಯುವ ಒಪ್ಪಂದದಿಂದ 21ವರ್ಷಗಳ ನಂತರ ಬಿಡುಗಡೆಯಾಗುವ ಮೀನುಗಾರರು ನಂತರದ ಕಥೆ ಪ್ರೇಕ್ಷಕರ ಕಣ್ಣಾಲಿಗಳು ನೀರು ತುಂಬುವಂತೆ ಮಾಡಿಬಿಡುತ್ತವೆ. ಅಷ್ಟರ ಮಟ್ಟಿಗೆ ನಿರ್ದೇಶಕ ರಾಘವ (ದ್ವಾರ್ಕಿ) ತನ್ನ ಶ್ರಮವನ್ನ ವಿಭಿನ್ನ ಕಥಾವಸ್ತುವಿನ ಮೂಲಕ ಕಟ್ಟಿಕೊಟ್ಟಿದ್ದಾರೆ. ನಾಯಕ ಶ್ರೀನಗರ ಕಿಟ್ಟಿ ಸೇರಿದಂತೆ ಚಿತ್ರದ ಪ್ರತಿಯೊಂದು ಪಾತ್ರವೂ ಸಹಜತೆಗೆ ಒತ್ತುಕೊಡುವ ರೀತಿಯಲ್ಲಿ ಮೂಡಿಬಂದಿವೆ. ಎಷ್ಟೋ ದಿನಗಳ ನಂತರ ಕಾಡುವ ಚಿತ್ರವನ್ನು ರಾಘವ ಕೊಟ್ಟಿದ್ದಾರೆ. ಚಿತ್ರ ಹಲವು ಪ್ರಶ್ನೆಗಳನ್ನು ಮೂಡಿಸಿ ತಾರ್ಕಿಕ ವಾದ ುತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಕನ್ನಡದಲ್ಲಿ ಇಂತಹ ಕಥೆ ಬಂದು ಎಷ್ಟೋ ವರ್ಷಗಳಾಗಿತ್ತು. ಇರಲಿ ಕನ್ನಡ ಚಿತ್ರ ರಂಗದ ಸಧ್ಯದ ಪರಿಸ್ಥಿತಿ ಸುಧಾರಿಸಬೇಕಿದೆ, ಚಿತ್ರರಂಗದ ಮಂದಿ ವೈಯುಕ್ತಿಕ ತಗಾದೆ-ಸಂಘರ್ಷಕ್ಕೆ ಮಹತ್ವ ನೀಡದೇ ಗಂಭೀರವಾಗಿ ಸದಭಿರುಚಿಯ, ವಿಚಾರದ ತುಡಿತ, ಹದವರಿತ ಮನರಂಜನೆಗೆ ಆದ್ಯತೆ ನೀಡುವ ಚಿತ್ರಗಳ ನಿರ್ಮಾಣದಲ್ಲಿ ತೊಡಗುವ ಮೂಲಕ ಕನ್ನಡ ಚಿತ್ರರಂಗಕ್ಕೆ 'ಮತ್ತೆ ಮುಂಗಾರು' ಬರುವುದೇ ಕಾದು ನೋಡಬೇಕು.

ಸೋಮವಾರ, ಆಗಸ್ಟ್ 2, 2010

ಸುವರ್ಣ ಆರೋಗ್ಯ ಚೈತನ್ಯ ಮಕ್ಕಳ ಆರೋಗ್ಯಕ್ಕೆ ಸಹಕಾರಿ

ಅರಕಲಗೂಡು: ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳು ಆರೋಗ್ಯ ಸುಧಾರಿಸಲು ಪೋಷಕರುಮತ್ತು ಶಿಕ್ಷಕರ ಒಗ್ಗೂಡಿದಲ್ಲಿ ಯಶ ಕಾಣಲು ಸಾಧ್ಯ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಪಾರ್ವತಿ ಸಂಜೀವನಾಯ್ಕ ಹೇಳಿದ್ದಾರೆ.
ಪಟ್ಟಣದಲ್ಲಿ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿ ಸಹಯೋಗದಲ್ಲಿ ಏರ್ಪಡಿಸಿದ್ದ ಸುವರ್ಣ ಆರೋಗ್ಯ ಚೈತನ್ಯದಡಿ ಶಾಲಾ ಮಕ್ಕಳು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಶಾಲಾ ಮಕ್ಕಳ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ತಂದಿದೆ ಅವುಗಳನ್ನು ಬಳಸಿಕೊಳ್ಳುವ ಪ್ರಯತ್ನ ಅಗಬೇಕಿದೆಯಷ್ಟೇ.ತಾಲೂಕಿನಲ್ಲಿ ಈಗ ಸಾಂಕ್ರಾಮಿಕ ರೋಗಗಳು ಹರಡಿದ್ದು ವೈದ್ಯರುಗಳು ಎಚ್ಚರಿಕೆ ವಹಿಸಬೇಕು, ಶಿಬಿರದಲ್ಲಿ ಮಕ್ಕಳಿಗೆ ಚಿಕಿತ್ಸೆ ದೊರಕಿಸಲು ಪೋಷಕರು ಶಿಕ್ಷಕರೊಂದಿಗೆ ಸಹಕರಿಸಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಮಾತನಾಡಿ ಉಚಿತ ಆರೋಗ್ಯ ತಪಾಸಣೆ ಸರ್ಕಾರದ ಯೋಜಿತ ಕಾರ್ಯಕ್ರಮವಾಗಿದ್ದು ಕಳೆದ 4ವರ್ಷಗಳಿಂದ ಜಾರಿಯಲ್ಲಿದೆ, ಕಳೆದ ವರ್ಷ 11ಪ್ರಕರಣವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ ಯಶಸ್ವಿನಿ ಯೋಜನೆಯ ಸಹಯೋಗದೊಂದಿಗೆ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. 1 ರಿಂದ 10ನೇ ತರಗತಿಯ ಅನುದಾನಿತ/ಅನುದಾನ ರಹಿತ ಶಾಲೆಯ ಮಕ್ಕಳಿಗೂ ಯೋಜನೆಯ ಲಾಭ ಲಭಿಸಲಿದೆ ಎಂದರು.ಶಿಬಿರ ನಡೆಯುವ ಸಂಧರ್ಭ ಗೈರುಹಾಜರಿ ಬೇಡ ಎಂದು ಸೂಚಿಸಿದರು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶೈಲಜಾ ಮಾತನಾಡಿ ಪೋಷಕರು ಸರ್ಕಾರಿ ಸವಲತ್ತುಗಳ ಬಳಕೆಯನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ನಾಗಲಕ್ಷ್ಮಿ, ವೈದ್ಯರುಗಳಾದ ಸ್ವಾಮಿಗೌಡ, ಲತಾ, ಸೌಮ್ಯ, ಪೂರ್ಣಿಮ, ಅಕ್ಷರ ದಾಸೋಹ ನಿರ್ದೇಶಕ ಮಹೇಶ್ ಉಪಸ್ಥಿತರಿದ್ದರು.

ಭಾನುವಾರ, ಆಗಸ್ಟ್ 1, 2010

ವೃಕ್ಷಾಧಾರಿತ ಬದುಕು ಉಸಿರಾಗಲಿ;ಪರಿಸರವಾದಿ ಚ ನಂ ಅಶೋಕ್







ಅರಕಲಗೂಡು: ವೃಕ್ಷಾಧಾರಿತ ಕೃಷಿ ಬದುಕು ರೈತರ ಉಸಿರಾಗಬೇಕು, ಪ್ರಸಕ್ತ ಸಂಧರ್ಭದಲ್ಲಿ ರೈತರ ಸಂಕಷ್ಟಗಳಿಗೆ ಸಿದ್ದೌಷಧ ಎಂದರೆ ಗಿಡ-ಮರ ಬೆಳೆಸುವುದೇ ಆಗಿದೆ ಎಂದು ಜಿಲ್ಲೆಯ ಪರಿಸರವಾದಿ ಚ.ನಂ. ಅಶೋಕ್ ಹೇಳಿದ್ದಾರೆ.
ಪೊಟ್ಯಾಟೋ ಕ್ಲಬ್ ಆಶ್ರಯದಲ್ಲಿ ತಾಲೂಕಿನ ವಿವಿದೆಡೆ ರೈತರಿಗೆ ಉಚಿತ ಗಿಡಗಳನ್ನು ವಿತರಿಸಿದ ಅವರು ರುದ್ರಪಟ್ಟಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಸಂಕಷ್ಟ ನಿವಾರಣೆಗೆ ವೃಕ್ಷ ಪ್ರೀತಿ ಬೆಳೆಯಬೇಕು, ಪರಿಸರದಲ್ಲಿ ದೇವರನ್ನು ಕಾಣುವ ಮನೋಧರ್ಮ ಬಂದಾಗ ತಂತಾನೆ ಪ್ರಾಕೃತಿಕ ಸಂಪತ್ತು ಬೆಳೆಯಲು ಸಾಧ್ಯ ಎಂದು ನುಡಿದ ಅವರು ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಸಾಂಪ್ರದಾಯಿಕ ಬೆಳೆಯ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಭರಾಟೆಯಲ್ಲಿ ಪ್ರಾಕೃತಿಕ ಸಂಪತ್ತಿಗೆ ಧಕ್ಕೆ ತರುತ್ತಿದ್ದಾರೆ, ಆಧುನಿಕ ಬೇಸಾಯ ಪದ್ದತಿಗಳಿಂದ ನಷ್ಟ ಅನುಭವಿಸುತ್ತಿದ್ದಾರೆ, ಇಂದಿನ ಸಂಧರ್ಬದಲ್ಲಿ ಜಮೀನು-ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆಯೂ ಇದೆ ಹೀಗಿರುವಾಗ ಮರ-ಗಿಡ ನೆಟ್ಟು ಪೋಷಿಸುವುದರಿಂದ ಅವು ನಮ್ಮ ಕಷ್ಟಕಾಲದಲ್ಲಿ ನೆರವಿಗೆ ಬರುತ್ತವೆ ಆದ್ದರಿಂದ ಪ್ರತಿಯೊಬ್ಬರು ತಮ್ಮ ಜಮೀನುಗಳಲ್ಲಿ, ಖಾಲಿ ಸ್ಥಳಗಳಲ್ಲಿ ಗಿಡಬೆಳೆಸಿ ಹಸಿರು ವಾತಾವರಣವನ್ನು ಉಳಿಸಿ ಎಂದು ಮನವಿ ಮಾಡಿದರು. ಪೊಟ್ಯೋಟೋ ಕ್ಲಬ್ ಸಂಚಾಲಕ ಯೋಗಾರಮೇಶ್ ಮಾತನಾಡಿ ತಾಲೂಕಿನ ರೈತರ ಮನೆ ಬಾಗಿಲಿಗೆ ತೆರಳಿ ಉಚಿತ ಗಿಡಗಳನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ಕ್ಲಬ್ ವತಿಯಿಂದ ಹಸಿರು ಆಂಧೋಲನವನ್ನು ಮಾಡಲಾಗುತ್ತಿದೆ ಪ್ರತೀ ವರ್ಷದಂತೆ ಈ ಭಾರಿಯೂ ಗಿಡಗಳನ್ನು ವಿತರಿಸಲಾಗುತ್ತಿದೆ ಎಂದರು. ಕೃಷಿ ಜಮೀನಿಗೆ ಸತ್ವಯುತ ಪೋಷಕಾಂಶಗಳು ಲಭಿಸಬೇಕೆಂದರೆ ಗಿಡ ನೆಡುವುದೊಂದೇ ಏಕೈಕ ಪರಿಹಾರವಾಗಿದೆ ಈ ನಿಟ್ಟಿನಲ್ಲಿ ಪೊಟ್ಯಾಟೋ ಕ್ಲಬ್ ಗಿಡಬೆಳೆಸಲು ಆಯಾ ಊರಿನ ಗ್ರಾಮಸ್ಥರುಗಳು ಚೀಟಿ ಹಾಕಿಕೊಳ್ಳುವ ಮೂಲಕ ಪ್ರತೀ ವರ್ಷ ಹೊಸದಾಗಿ ಗಿಡಖರೀದಿಸಿ ಅವರವರ ಗ್ರಾಮಗಳಲ್ಲಿ ಗಿಡನೆಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದೆ, ಇದನ್ನು ಇತರೆ ಊರುಗಳ ಗ್ರಾಮಸ್ಥರುಗಳು ಅನುಕರಿಸಬೇಕು. ಮರಗಳು ಆಪತ್ತಿನ ಸ್ನೇಹಿತರಿದ್ದಂತೆ ವಾಣಿಜ್ಯ ಬೆಳೆಬೆಳೆದು ಮಣ್ಣಿನ ಫಲವತ್ತತೆ ಹಾಳು ಮಾಡುವ ಮತ್ತು ನೇಣಿಗೆ ಶರಣಾಗುವ ಬದಲಿಗೆ ರೈತರು ಜಮೀನುಗಳಲ್ಲಿ ಗಿಡ ನೆಟ್ಟು ಪೋಷಿಸಿ ಅವು ನಿಮ್ಮನ್ನು ಜೀವನ ಪರ್ಯಂತ ಕಾಯುತ್ತವೆ ಎಂದರು.

ಮುಖಂಡರಾದ ಕಾಂತರಾಜು ಮಾತನಾಡಿ ಹಳ್ಳಿ ಹಳ್ಳಿಗಳಲ್ಲಿ ರೈತರಿಗೆ ಉಚಿತ ಗಿಡ ವಿತರಿಸಿ ಗಿಡನೆಡುವ ಸಂಪ್ರದಾಯ ಆರಂಭಿಸಿರುವ ಯೋಗಾರಮೇಶ್ ಕಾಳಜಿಯನ್ನು ನಮ್ಮ ರೈತರು ಅರ್ಥ ಮಾಡಿಕೊಳ್ಳಬೇಕು, ಪ್ರಾಕೃತಿಕ ಅಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಿಡ ಬೆಳೆಸಿ ಎಂದರು. ಕಾರ್ಯಕ್ರಮದಲ್ಲಿ ಗಿಡಗಳಿಗೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಕ್ಲಬ್ ನ ಮುಖಂಡ ರಾಜೇಂದ್ರ, ಜಾನಪದ ಪರಿಷತ್ ನ ಶ್ರೀಕಂಠ, ನಾಗರಿಕವೇದಿಕೆಯ ಕುಮಾರಸ್ವಾಮಿ ಮಾತನಾಡಿದರು. ಚ.ನಂ. ಅಶೋಕ್ ಹಾಗೂ ಯೋಗಾರಮೇಶ್ ಅವರಿಗೆ ವಕೀಲರ ಸಂಘದ ಅಧ್ಯಕ್ಷ ಆರ್ ಕೆ ಮಂಜುನಾಥ್ ಶಾಲು ಹೊದೆಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ರಾಮಚಂದ್ರ, ಎವಿಕೆ ಕಾಲೇಜು ಉಪನ್ಯಾಸಕ ಪ್ರಕಾಶ್, ಜಯಪ್ಪ, ಸತ್ಯನಾರಾಯಣ,ಸುಬ್ಬೇಗೌಡ ಮತ್ತು ರುದ್ರಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು. ರುದ್ರಪಟ್ಟಣದ ಕಾರ್ಯಕ್ರಮಕ್ಕೂ ಮುನ್ನ ನೆಲಮನೆ ಗ್ರಾಮದ ಶಾಲಾವರಣದಲ್ಲಿ ಗಿಡ ನೆಟ್ಟು ರೈತರಿಗೆ ಸಸಿ ವಿತರಿಸಲಾಯಿತು, ಅಜ್ಜೂರು ಹಾಗೂ ಹೊಸನಗರ ಗ್ರಾಮಗಳಲ್ಲೂ ಉಚಿತವಾಗಿ ಗಿಡಗಳನ್ನು ವಿತರಿಸಲಾಯಿತು.

ಶನಿವಾರ, ಜುಲೈ 31, 2010

ವಿದ್ಯುತ್ ಸ್ಪರ್ಶ ಹಸುಗಳ ಸಾವು

ಅರಕಲಗೂಡು: ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಒಂದು ಹಸು ಮತ್ತು ಒಂದು ಹೋರಿ ಮೃತಪಟ್ಟ ಘಟನೆ ತಾಲೂಕಿನ ಮರವಳಲು ಗ್ರಾಮದಲ್ಲಿ ನಡೆದಿದೆ. ನಿನ್ನೆ ಚಂದ್ರ ಎಂಬುವವರಿಗೆ ಸೇರಿದ ಜಾನುವಾರುಗಳು ಅವರ ಮನೆಯ ಬಳಿ ಮೇಯುತ್ತಿದ್ದವು ಆ ವಿದ್ಯುತ್ ತಂತಿಯೊಂದು ತುಂಡಾಗಿ ಅವುಗಳ ಮೇಲೆ ಬಿದ್ದುದರಿಂದ ಜಾನುವಾರುಗಳು ಸ್ಥಳದಲ್ಲೇ ಮೃತಪಟ್ಟವು. ಮತ್ತೊಂದು ಪ್ರಕರಣದಲ್ಲಿ ಕತ್ತಿಮಲ್ಲೆನಹಳ್ಳಿಯಲ್ಲಿ ಗೋಡೆ ಕುಸಿತದಿಂದ ಹಸುವಿನ ಕೊಂಬುಗಳು ಹಾಗು ಕಾಲು ಮುರಿದಿದೆ. ಸ್ಥಳಕ್ಕೆ ಕಂದಾಯ-ಪಶು ಮತ್ತು ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು ಪರಿಹಾರ ಒದಗಿಸಲು ಕ್ರಮ ಕೈಗೊಂಡಿದ್ದಾರೆ.

ಅರಕಲಗೂಡು: ಪರಿಶಿಷ್ಟವರ್ಗದ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸದಿದುದರಿಂದ ಖಾಲಿ ಉಳಿದಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಹೆಬ್ಬಾಲೆ ಗ್ರಾ.ಪಂ. ನಲ್ಲಿ ಇಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ಶೈಲಜಾ ತಿಳಿಸಿದ್ದಾರೆ. ಹೆಬ್ಬಾಲೆ ಪ.ವ. ಮೀಸಲು ಸ್ಥಾನಕ್ಕೆ ಆಶಾ ಮತ್ತು ಶೈಲ 1ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಚುನಾವಣೆ ನಡೆಯುವುದು. ಯಲಗತವಳ್ಳಿ ಗ್ರಾ.ಪಂ. ನಲ್ಲಿ ಇಂದು ನಡೆದ ಅಧ್ಯಕ್ಷ-ುಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಯಶೋಧಮ್ಮ ಆಯ್ಕೆಯಾಗಿದ್ದಾರೆ. ಚುನಾವಣೆ ಬಹಿಷ್ಕರಿಸಿದ್ದ ವಡ್ವಾನ ಹೊಸಹಳ್ಳಿಯಲ್ಲಿ ಪರಿಶಿಷ್ಠ ಜಾತಿಯ ಪದ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಳೆ ವಿವರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಅರಕಲಗೂಡಿನಲ್ಲಿ ಶನಿವಾರ ಬೆಳಿಗ್ಗೆಯವರೆಗೆ 10.2ಮಿಲಿಮೀ. ಮಲ್ಲಿಪಟ್ಟಣದಲ್ಲಿ 8.0ಮಿಮಿ. ದೊಡ್ಡಮಗ್ಗೆಯಲ್ಲಿ 13.4ಮಿಮಿ, ಬಸವಾಪಟ್ಟಣದಲ್ಲಿ 20.00ಮಿಮಿ ಕೊಣನೂರಿನಲ್ಲಿ 7.2ಮಿಮಿ, ರಾಮನಾಥಪುರದಲ್ಲಿ 6.6ಮಿಮಿ, ದೊಡ್ಡಬೆಮ್ಮತ್ತಿಯಲ್ಲಿ 18.2ಮಿಮಿ ಮಳೆಯಾಗಿದೆ.

ಸೋಮವಾರ, ಜುಲೈ 26, 2010

ಮಲ್ಲಿಪಟ್ಟಣ: ರೋಗಪೀಡಿತರಿಗೆ ಸಾಂತ್ವನ ಹೇಳಿದ ಜಿ.ಪಂ. ಅಧ್ಯಕ್ಷೆ

ಅರಕಲಗೂಡು: ವಾಂತಿಭೇಧಿ ಶುರುವಾಗಿ 3ವಾರಗಳು ಕಳೆದರೂ ಆರೋಗ್ಯ ಇಲಾಖೆ ನಿಖರವಾಗಿ ರೋಗವನ್ನೇ ಪತ್ತೆ ಹಚ್ಚದೇ ಸಾಮಾನ್ಯ ಚಿಕಿತ್ಸೆ ಮುಂದುವರೆಸಿದ ಪರಿಣಾಮ ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ಕಳೆದ ಭಾನುವಾರ ಓರ್ವ ಮೃತಪಟ್ಟು ಇನ್ನು ಮುವ್ವರು ಚಿಂತಾಜನಕ ಸ್ಥಿತಿಯಲ್ಲಿ ಸಾವಿನ ದಿನ ಎಣಿಸುತ್ತಿರುವ ಘಟನೆ ನಡೆದಿದೆ.
ಮಲ್ಲಿಪಟ್ಟಣ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿದ 50ಕ್ಕೂ ಹೆಚ್ಚು ಮಂದಿ ಕಳೆದ 25ದಿನಗಳಿಂದ ಅರಕಲಗೂಡು ಮತ್ತು ಹಾಸನದ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಸಧ್ಯ ಈಗ ಗ್ರಾಮದಲ್ಲಿ 34ಮಂದಿ ಮಾತ್ರ ರೋಗ ಪೀಡಿತರಿದ್ದಾರೆ. ಈ ಮದ್ಯೆ ರಕ್ತಪರೀಕ್ಷೆಗೆ ಕಳುಹಿಸಲಾಗಿದ್ದ ಓರ್ವ ರೋಗಿಯ ಸ್ಯಾಂಪಲ್ ನಲ್ಲಿ ಕಾಲರ ಸೋಂಕು ತಗುಲಿದ್ದು ಸ್ಪಷ್ಟವಾಗಿತ್ತು. ಆದರೆ ಭಾನುವಾರ ಮೃತನಾದ ಚನ್ನಯ್ಯ ಎಂಬಾತ ವಾಂತಿ ಭೇದಿಗೆ ಚಿಕಿತ್ಸೆ ಪಡೆದ ನಂತರವೂ ಮನೆಯಲ್ಲಿ ಸೂಕ್ತ ಆರೈಕೆ ದೊರೆಯದೇ ಹೈಪೋಗ್ಲೈಸೀಮಿಯಾದಿಂದ ಅಂದರೆ ಹಸಿವಿನಿಂದ ಮೃತಪಟ್ಟನೆಂದು ಸ್ಥಳೀಯ ವೈದ್ಯರೊಬ್ಬರು ಹೇಳುತ್ತಾರೆ. ಇಂದು ರೋಗಪೀಡಿತರಿಗೆ ಸಾಂತ್ವನ ಹೇಳಲು ಸ್ಥಳಕ್ಕೆ ಭೇಟಿ ನೀಡಿದ್ದ ಜಿ.ಪಂ. ಅಧ್ಯಕ್ಷೆ-ಉಪಾಧ್ಯಕ್ಷರ ತಂಡದೊಂದಿಗೆ ಆಗಮಿಸಿದ್ದ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಪತ್ರಿಕೆ ಈ ಕುರಿತು ಪ್ರಶ್ನಿಸಿತು. ಕುಡಿಯುವ ನೀರು ಕಲುಷಿತಗೊಂಡಿದ್ದರಿಂದ ವಾಂತಿಭೇಧಿ ಉಂಟಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಪರಿಣಾಮ ಓರ್ವ ರೋಗಿಯ ಸ್ಯಾಂಪಲ್ ನಿಂದ ಕಾಲರ ಎಂದು ತಿಳಿದಿದೆ ಆದರೆ ತಾಲ್ಲೂಕು ವೈದ್ಯಾಧಿಕಾರಿ ಡಾ|| ನಾಗಲಕ್ಷ್ಮಿ ಇದು ಕಾಲರ ಅಲ್ಲ ಎನ್ನುತ್ತಾರೆ ಹಾಗಾದರೆ ಸತತವಾಗಿ ಜನರನ್ನು ಕಾಡುತ್ತಿರುವ ಈ ರೋಗ ಯಾವುದು? ಕಾಯಿಲೆಯನ್ನೇ ತಿಳಿಯದೇ ಏನು ಚಿಕಿತ್ಸೆ ನೀಡು್ತ್ತೀರಿ? ಎಂದರೆ ಆ ಬಗ್ಗೆ ಜಿಲ್ಲಾಸ್ಪತ್ರೆಯ ವೈದ್ಯರು ಉತ್ತರಿಸಬೇಕು ನಮಗೆ ವೈದ್ಯಕೀಯ ವರದಿ ತಲುಪಿಲ್ಲ ಎಂದರು. ವೈದ್ಯಕೀಯ ವರದಿ ಬರಲು ಎಷ್ಟು ದಿನಬೇಕು ? ಜನ ಸತ್ತಮೇಲೆ ವೈದ್ಯಕೀಯ ವರದಿ ತೆಗೆದುಕೊಂಡು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ನಿರುತ್ತರರಾದರು. ಸ್ಥಳದಲ್ಲಿ ಹಾಜರಿದ್ದ ಹಿರಿಯ ವೈದ್ಯಕೀಯ ಪರಿವೀಕ್ಷಕ ಭದ್ರಯ್ಯ, ಡಾ|| ಶಿವೇಗೌಡ ಮತ್ತು ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರ್ ಕೂಡ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದಾದರು. ಆಗ ಮಧ್ಯ ಪ್ರವೇಶಿಸಿದ ಜಿ.ಪಂ. ಉಪಾಧ್ಯಕ್ಷ ದ್ಯಾವೇಗೌಡ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ವೈದ್ಯರ ತಂಡವನ್ನು ಇಲ್ಲಿಗೆ ಕರೆತರಲಾಗಿದೆ, ನಿಮ್ಮ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಚವಾಗಿಡಲು ಸಹಕರಿಸಿ ಎಂದು ಮನವಿ ಮಾಡಿದರು. ಈ ಸಂಧರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಕಾಮಾಕ್ಷಿ ರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೀಲಪ್ಪ, ತಾ.ಪಂ. ಅಧ್ಯಕ್ಷ ಮಾದೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದು ರೋಗಪೀಡಿತರಿಗೆ ಸಾಂತ್ವನ ಹೇಳಿದರು.
ಹಸಿವು ಕಾರಣವೇ?: ಭಾನುವಾರ ಮೃತಪಟ್ಟ ಚನ್ನಯ್ಯ(42) ಎಂಬಾತನು ವಾಂತಿಭೇಧಿಗೆ ಚಿಕಿತ್ಸೆ ಬಂದು ಊರಿಗೆ ಮರಳಿದ್ದ ಆದರೆ ಅವನನ್ನು ನೋಡಿಕೊಳ್ಳಲು ಯಾರೂ ಇಲ್ಲದ್ದರಿಂದ ಆಹಾರದ ಕೊರತೆಯಿಂದ ಭಾನುವಾರ ತೀರಿಕೊಂಡ ಎನ್ನಲಾಗಿದೆ. ಗ್ರಾಮದ ಜನತೆ 25ದಿನಗಳಿಂದ ರೋಗ ಪೀಡಿತರಾಗಿ ನರಳುತ್ತಿದ್ದಾರೆ ಹೀಗಿರುವಾಗ ಅಲ್ಲಿ ಆರೋಗ್ಯ ಸಹಾಯಕರು, ಪರಿಶೀಲಕರು, ಅಂಗನವಾಡಿಯವರು, ವೈದ್ಯರು, ಗ್ರಾಮ ಪಂಚಾಯಿತಿಯವರು ಆಸ್ಥೆ ವಹಿಸುತ್ತಾರಲ್ಲವೇ? ಹಾಗಿದ್ದರೂ ಶುಶ್ರೂಷೆ ಸಿಗದೆ ಹಸಿವಿನಿಂದ ಚನ್ನಯ್ಯ ಮೃತಪಟ್ಟಿದ್ದಾನೆ ಎನ್ನುವುದಾದರೆ ಅದಕ್ಕೆ ತಾಲ್ಲೂಕು ಆಡಳಿತ ಹೊಣೆಯಲ್ಲವೇ? ಈ ಪ್ರಶ್ನೆಗೆ ಜಿಲ್ಲಾಧಿಕಾರಿ ಉತ್ತರಿಸಬೇಕು.
ಎಲ್ಲಿದೆ ಸಮರೋಪಾದಿಯ ಸೇವೆ?: ಕಳೆದ ವಾರ ರೋಗ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಆಗಮಿಸಿದ್ದ ಡಿಎಚ್ ಓ ಡಾ|| ಭೀಷ್ಮಾಚಾರ್ ಹಾಸನದ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ನೆರವಿನೊಂದಿಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮನೆ ಸರ್ವೆ ಮಾಡಿಸಿ ರೋಗ ಪೀಡಿತರಿಗೆ ಚಿಕಿತ್ಸೆ ನೀಡಲಾಗುವುದು ಎಂದಿದ್ದರು. ಆದರೆ ವಾರ ಕಳೆದರೂ ಕಳ್ಳಿಮುದ್ದನಹಳ್ಳಿ ಮತ್ತು ಆನಂದೂರು ಗಳಲ್ಲಿ ಓರ್ವ ವೈದ್ಯರ ಸೇವೆ ಬಿಟ್ಟರೆ ಸರ್ವೆಯೂ ಇಲ್ಲ ಜಾಗೃತಿಯೂ ಆಗಿಲ್ಲ ಪರಿಣಾಂ ರೋಗ ಕೈ ಮೀರಿ ಹೋಗುತ್ತಿದೆ.ತಾಲೂಕಿನ ಮುದ್ದನಹಳ್ಳಿಯಲ್ಲಿ ಡೆಂಗ್ಯೂ, ಕಳ್ಳಿಮುದ್ದನಹಳ್ಳಿಯಲ್ಲಿ ಚಿಕನ್ ಗುನ್ಯಾ, ಮಲ್ಲಿಪಟ್ಟಣದಲ್ಲಿ ಕಾಲರ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಶುಚಿತ್ವಕ್ಕೆಂದೆ ಸ್ವಚ್ಚಗ್ರಾಮ ಯೋಜನೆಯಿದೆ, ಆರೋಗ್ಯ ಇಲಾಖೆಯ ರಾಷ್ಟ್ರೀಯ ಗ್ರಾಮೀನ ಆರೋಗ್ಯ ಸಮಿತಿಯಿದೆ ಇವು ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ತೂಕಡಿಸುತ್ತಿದ್ದಾರೋ ಏನೋ ಗೊತ್ತಿಲ್ಲ. ಪರಿಸ್ಥಿತಿ ಕೈ ಮೀರುವ ಮುನ್ನ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಷ್ಟೆ.

ಸೋಮವಾರ, ಜುಲೈ 19, 2010

ಸಾಂಕ್ರಾಮಿಕ ರೋಗ ಪೀಡಿತ ಗ್ರಾಮಗಳಿಗೆ ಜಿ.ಪಂ ಅಧ್ಯಕ್ಷೆ ಭೇಟಿ

ಅರಕಲಗೂಡು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚಿಕನ್ ಗುನ್ಯಾ, ಹಾಗೂ ಜ್ವರದಿಂದ ಬಳಲುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಾಮಾಕ್ಷಿ ರಾಜು ಹಾಗೂ ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಚ್ ಮಾದೇಶ್ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಡಾ ಸ್ವಾಮಿಗೌಡ ನಿನ್ನೆ ಚಿಕ್ಕ ಅರಕಲಗೂಡು, ಕಳ್ಳಿಮುದ್ದನಹಳ್ಳಿ, ಆನಂದೂರು ಮತ್ತು ಮಲ್ಲಿಪಟ್ಟಣ ಗ್ರಾಮಗಳಿಗೆ ತೆರಳಿ ರೋಗಿಗಳಿಗೆ ಸಾಂತ್ವನ ಹೇಳಿದ್ದರಲ್ಲದೇ ತತ್ ಕ್ಷಣದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಇಂದು ಕೂಡ ಜಿ.ಪಂ ಅಧ್ಯಕ್ಷರೊಂದಿಗೆ ಕಳ್ಳಿಮುದ್ದನಹಳ್ಳಿ ಗ್ರಾಮಕ್ಕೆ ತೆರಳಿ ರೋಗ ಪೀಡಿತರನ್ನು ಸಂತೈಸಿದರಲ್ಲದೇ ಗ್ರಾಮದಲ್ಲಿಯೇ ವೈದ್ಯಕೀಯ ಚಿಕಿತ್ಸೆ ಗೆ ವ್ಯವಸ್ಥೆ ಮಾಡಿದ್ದರು. ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮಂದಿ ರೋಗ ಪೀಡಿತರಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ಇದನ್ನರಿತ ಜಿ.ಪಂ ಅಧ್ಯಕ್ಷೆ ಕಾಮಾಕ್ಷಿ ರಾಜು ಇನ್ನು ಇಬ್ಬರು ವೈದ್ಯರು ಹಾಗೂ ದಾದಿಯರನ್ನು ವೈದ್ಯಕೀಯ ಸೇವೆಗೆ ನಿಯೋಜಿಸಲಾಗುವುದು, ಗ್ರಾಮದ ನೈರ್ಮಲ್ಯೀಕರಣಕ್ಕಾಗಿ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಯವರಿಗೆ ಸೂಚಿಸಲಾಗುವುದು ಎಂದರು. ಇದೇ ಸಂಧರ್ಭದಲ್ಲಿ ಹಾಜರಿದ್ದ ಡಿಎಚ್ ಓ ಬೀಷ್ಮಾಚಾರಿ ತುರ್ತು ವೈದ್ಯಕೀಯ ಸೇವೆ ಒದಗಿಸುವ ಜೊತೆಗೆ ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಪ್ರತಿ ಮನೆಗಳ ಸಮೀಕ್ಷೆಗಾಗಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು, ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಸಮರೋಪಾದಿಯ ವೈದ್ಯಕೀಯ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದರು. ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ದೇವರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ ಸಧ್ಯಕ್ಕೆ ಅವರನ್ನು ರಜೆ ಮೇಲೆ ಕಳುಹಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ನೂತನ ಆಡಳಿತಾಧಿಕಾರಿಯಾಗಿ ಡಾ|| ಶೀತಲ್ ಕುಮಾರ್ ನೇಮಕವಾಗಿದೆ, ತಾಲ್ಲೂಕು ವೈದ್ಯಾಧಿಕಾರಿಯಾಗಿ ಡಾ ನಾಗಲಕ್ಷ್ಮಿ ಯವರನ್ನು ವರ್ಗಾಯಿಸಲಾಗಿದೆ. ಆಸ್ಪತ್ರೆಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲಿ ಸಕಲ ವ್ಯವಸ್ಥೆಗಳು ಸುದಾರಿಸಲಿದೆ ಎಂದರು. ಇದೇ ಸಂಧರ್ಭ ಮಾತನಾಡಿದ ತಾ ಪಂ ಅಧ್ಯಕ್ಷ ಮಾದೇಶ್ ಶೀಶುಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪಂಚಾಯತ್ ಅಧಿಕಾರಿಗಳ ಸಭೆ ಕರೆದು ಪರಿಸ್ಥಿತಿ ಸುದಾರಣೆಗೆ ಯತ್ನಿಸಲಾಗುವುದು ಎಂದರು.

ಶುಕ್ರವಾರ, ಜುಲೈ 16, 2010

ತಾ.ಪಂ. ಅಧ್ಯಕ್ಷರಾಗಿ ಎಚ್ ಮಾದೇಶ್ ಆಯ್ಕೆ


ಅರಕಲಗೂಡು: ತಾಲೂಕು ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ನ ಎಚ್ ಮಾದೇಶ್ ಸರ್ವಾನುಮತದಿಂದ ಆಯ್ಕೆ ಯಾದರು. ತಾಲೂಕು ಪಂಚಾಯ್ತಿ ಅಧ್ಯಕ್ಷರಾಗಿದ್ದ ನಂಜುಂಡಾಚಾರ್ ನಿಧನಾ ನಂತರ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಚುನಾವಣೆ ನಡೆಯಿತು. ತಾಲ್ಲೂಕು ಪಂಚಾಯ್ತಿಯ ಒಟ್ಟು ಸದಸ್ಯ ಬಲ 19 ಆಗಿದ್ದು ಒಬ್ಬರು ಮೃತಪಟ್ಟ ನಂತರ 18ಕ್ಕೆ ಇಳಿದಿತ್ತು . ಶುಕ್ರವಾರ ಬೆಳಿಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಸಿದ ಸದಸ್ಯ ಎಚ್ ಮಾದೇಶ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 18ಸದಸ್ಯರ ಪೈಕಿ 17ಮಂದಿ ಮಾತ್ರ ಹಾಜರಿದ್ದರು. ಕಣದಲ್ಲಿ ಎಚ್ ಮಾದೇಶ್ ಮಾತ್ರ ಉಳಿದಿದ್ದು ಸದಸ್ಯರು ಮಾದೇಶ್ ಆಯ್ಕೆಯನ್ನು ಬೆಂಬಲಿಸಿದರು, ಆಗ ಚುನಾವಣಾಧಿಕಾರಿಗಳು ಮಾದೇಶ್ ರ ಆಯ್ಕೆಯನ್ನು ಘೋಷಿಸಿದರು. ಸಕಲೇಶಪುರ ಉಪವಿಭಾಗಾಧಿಕಾರಿ ನಾಗೇಂದ್ರ ಪ್ರಸಾದ್ ಚುನಾವಣೆ ಪ್ರಕ್ರಿಯೆ ನಡೆಸಿದರು.
ಅಭಿನಂದನೆ: ಆಯ್ಕೆ ಪ್ರಕ್ರಿಯೆ ನಂತರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಮಾತನಾಡಿ ತಾ.ಪಂ. ಸರ್ವ ಸದಸ್ಯರ ಬೆಂಬಲದೊಂದಿಗೆ ಆಯ್ಕೆ ನಡೆದಿರುವುದು ಹರ್ಷ ತಂದಿದೆ ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಮಾದೇಶ್ ತಾ.ಪಂ.ಗೆ ಹೆಚ್ಚಿನ ಅಧಿಕಾರದ ಬಲವಿಲ್ಲ, ಆದಾಗ್ಯೂ ಗ್ರಾಮೀಣಾ ಭಿವೃದ್ದಿಗೆ ಒತ್ತು ನೀಡುವ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿರುವಂತೆ ನೋಡಿಕೊಳ್ಳಲಾಗುವುದು, ಅಧಿಕಾರದ ಮಿತಿಯಲ್ಲಿ ಹೆಚ್ಚಿನ ಸೇವೆ ನೀಡಲು ಬದ್ದನಾಗಿರುತ್ತೇನೆ ಹಾಗೂ ಗೆಲುವಿಗೆ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯರಾದ ಕುಮಾರಸ್ವಾಮಿ,ಜಾನಕಿ ನಾರಾಯಣ್, ರೇಣುಕಾ, ಗೌರಮ್ಮ, ಗಾಯಿತ್ರಿ, ಲಕ್ಷ್ಮಿ ಲಕ್ಷ್ಮಣ್, ುಪಾಧ್ಯಕ್ಷೆ ಪಾರ್ವತಿ ಸಂಜೀವನಾಯ್ಕ, ಮುಖಂಡರಾದ ಪಾಪಣ್ನ, ಬೊಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಅರಕಲಗೂಡು: ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಮೂಲಭೂತ ಸೌಕರ್ಯ ಅಭಿವೃದ್ದಿ ಪಡಿಸುವಂತೆ ಕರವೇ ಮುಖಂಡ ತಾಜೀಂ ಪಾಶ ತಾ.ಪಂ. ಅಧ್ಯಕ್ಷ ಮಾದೇಶ್ ಅವರಿಗೆ ಅಭಿನಂದನೆ ಸಲ್ಲಿಸಿ ಮನವಿ ಅರ್ಪಿಸಿದರು. ಗ್ರಾಮದಲ್ಲಿ ರಸ್ತೆ-ಚರಂಡಿ ಹಾಗೂ ಬೀದಿ ದೀಪದ ವ್ಯವಸ್ಥೆ ಹದಗೆಟ್ಟಿದ್ದು ಗ್ರಾಮದ ಜನತೆ ನೈರ್ಮಲ್ಯದ ಕೊರತೆ ಎದುರಿಸುತ್ತಿದ್ದಾರೆ, ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸಬೇಕು, ಗ್ರಾಮದಲ್ಲಿ ಹುಲ್ಲು ಗುಡಿಸಲಿನಲ್ಲಿ ವಾಸಿಸುವ ಬಡಜನರಿದ್ದು ಅವರಿಗೆ ವಸತಿ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಅವರು ಮನವಿಯಲ್ಲಿ ಕೋರಿದ್ದಾರೆ.
ಅಭಿನಂದನೆ:ಎಚ್ ಮಾದೇಶ್ ಅವರ ಆಯ್ಕೆಯನ್ನು ಕಾಳಿದಾಸ ಯುವಕಸಂಘದ ಶಶಿಕುಮಾರ್ ಸ್ವಾಗತಿಸಿದ್ದಾರೆ. ಕುರುಬ ಸಮುದಾಯದ ಮಾದೇಶ್ ಅವರಿಗೆ ಅಧ್ಯಕ್ಷರಾಗಿ ಆಯ್ಕೆಮಾಡಲು ಸಹಕರಿಸಿದ ಸದಸ್ಯರು ಮತ್ತು ಮಾಜಿ ಶಾಸಕ ಎ ಟಿ ರಾಮಸ್ವಾಮಿಯವರನ್ನು ಅವರು ಅಭಿನಂದಿಸಿದ್ದಾರೆ.

ಬುಧವಾರ, ಮೇ 19, 2010

ರವಿಚಂದ್ರನ್ ಹುಟ್ಟುಹಬ್ಬಕ್ಕೂ ಮುನ್ನ ಹೂ

ಕನಸುಗಾರ ರವಿ ಚಂದ್ರನ್ ಅಭಿನಯದ 'ಹೂ' ಚಿತ್ರ ಕಡೆಗೂ ತೆರೆಕಾಣುತ್ತಿದೆ. ರವಿಚಂದ್ರನ್ ಹುಟ್ಟುಹಬ್ಬಕ್ಕೂ ಎರಡು ದಿನ ಮುನ್ನ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಅಂದರೆ ಮೇ.30ರಂದು ರವಿಚಂದ್ರನ್ ಹುಟ್ಟುಹಬ್ಬ, ಮೇ.28ರಂದು ಚಿತ್ರಮಂದಿರಗಳಲ್ಲಿ 'ಹೂ' ಬಿರಿಯಲಿದೆ. ಹೂ ಚಿತ್ರದ ಎಲ್ಲಾ ಕೆಲಸಗಳು ಮುಗಿದಿವೆ. ಮೇ.28ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ 'ಪ್ರೈವೇಟ್ ನಂಬರ್' ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ರವಿಚಂದ್ರನ್ ತಿಳಿಸಿದ್ದಾರೆ. ಚಿತ್ರದ ಮೊದಲರ್ಧ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಇಷ್ಟವಾಗುತ್ತದೆ. ಉಳಿದ ಭಾಗ ಎಲ್ಲರನ್ನೂ ರಂಜಿಸಲಿದೆ ಎಂದು ರವಿ ಹೇಳಿದ್ದಾರೆ. ಬೆಂಗಳೂರು ಕೆ ಜಿ ರಸ್ತೆಯ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ ಸಂತೋಷ್ ಚಿತ್ರಮಂದಿರದಲ್ಲಿ ಹೂ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಆದರೆ ಮೇ.21ರಂದು ಸಂತೋಷ್ ಚಿತ್ರಮಂದಿರದಲ್ಲಿ ವಿಜಯ್ ಅಭಿನಯದ 'ಶಂಕರ್ ಐಪಿಎಸ್' ಚಿತ್ರ ಬಿಡುಗಡೆಯಾಗಲಿದೆ. ಹಾಗಾಗಿ ರವಿಚಂದ್ರನ್ ಪರ್ಯಾರ್ಯ ಚಿತ್ರಮಂದಿರದ ಬಗ್ಗೆಯೂ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. 'ಮಂಜಿನ ಹನಿ' ಚಿತ್ರವನ್ನು ಹನಿಸಲು ರವಿಚಂದ್ರನ್ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾದ ಕೂಡಲೆ ರವಿಚಂದ್ರನ್ ತಮ್ಮ ಸೀಟನ್ನು ಅವರ ಪುತ್ರ ಮನೋಜ್ ಬಿಟ್ಟುಕೊಡಲಿದ್ದಾರೆ. ರವಿಚಂದ್ರನ್ ನಿವೃತ್ತಿ ಘೋಷಿಸಿಕೊಳ್ಳುತ್ತಾರಾ? ಅಥವಾ ತೆರೆಯ ಹಿಂದೆ ಸರಿದು ಆಕ್ಷನ್, ಕಟ್ ಹೇಳುತ್ತಾರಾ? ಕಾದು ನೋಡಬೇಕಾಗಿದೆ. ಅಂದಹಾಗೆ ಚಿತ್ರರಂಗಕ್ಕೆ ರಜೆ ಘೋಷಿಸಿದ್ದ ನಮಿತಾ ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮೀರಾ ಜಾಸ್ಮಿನ್ ಸಹ ಚಿತ್ರದಲ್ಲಿದ್ದು ಪ್ರೇಕ್ಷಕರಿಗೆ ಡಬ್ಬಲ್ ಧಮಾಕಾ. ಜಿಎಸ್ ವಿ ಸೀತಾರಾಂ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ, ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಶರಣ್ ಅವರ ತಾರಾಗಣ ಚಿತ್ರಕ್ಕಿದೆ. ಚಿತ್ರದ ನಿರ್ಮಾಪಕರು ದಿನೇಶ್ ಗಾಂಧಿ.
ಹನ್ನೆರಡು ಭಾಷೆಗಳಿಗೆ ಅಣ್ಣಾವ್ರ ಸತ್ಯ ಹರಿಶ್ಚಂದ್ರ
ವರನಟ ಡಾ.ರಾಜ್ ಕುಮಾರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರ 12 ಭಾಷೆಗಳಿಗೆ ಡಬ್ ಆಗಲಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ ಕೆಸಿಎನ್ ಗೌಡ ಈ ಸಾಹಸಕ್ಕೆ ಕೈಹಾಕಿದ್ದಾರೆ. ಈ ಹಿಂದೆ ಇವರು ಸತ್ಯ ಹರಿಶ್ಚಂದ್ರ ಚಿತ್ರವನ್ನು ಕಪ್ಪು ಬಿಳುಪಿನಿಂದ ಬಣ್ಣದ ಚಿತ್ರವಾಗಿ ಪರಿವರ್ತಿಸಿದ್ದರು. ಇದಕ್ಕಾಗಿ ರು. 3 ಕೋಟಿ ಖರ್ಚು ಮಾಡಿದ್ದರು. ಡಾ.ರಾಜ್ ಕುಮಾರ್,ಪಂಡರಿಬಾಯಿ, ಉದಯಕುಮಾರ್, ನರಸಿಂಹರಾಜು, ಎಂ.ಪಿ.ಶಂಕರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಹಿಂದಿ ಭಾಷೆಗೆ ಡಬ್ ಆಗಿತ್ತು. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ಬಂದಂತಹ ಸತ್ಯ ಹರಿಶ್ಚಂದ್ರ ಒಂದು ಅವಿಸ್ಮರಣೀಯ ಚಿತ್ರ.ಸತ್ಯಹರಿಶ್ಚಂದ್ರದಂತಹ ಅಪರೂಪದ ಚಿತ್ರ ಬೇರೆ ಭಾಷೆಯ ಪ್ರೇಕ್ಷಕರಿಗೂ ತಲುಪಬೇಕು ಎಂಬುದು ಕೆಸಿಎನ್ ಅವರ ಉದ್ದೇಶ. 'ಕಸ್ತೂರಿ ನಿವಾಸ' ಚಿತ್ರವನ್ನು ಬಣ್ಣದಲ್ಲಿ ತರುವ ಯೋಚನೆ ಕೆಸಿಎನ್ ಗೌಡರಿಗಿದೆ. 1965ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ವಿ ದಾಖಲಿಸಿದ ಚಿತ್ರ ಸತ್ಯ ಹರಿಶ್ಚಂದ್ರ.ಅಂದಿನ ಕಾಲದಲ್ಲೇ ರು.5.5 ಲಕ್ಷ ವೆಚ್ಚದಲ್ಲಿ ಸತ್ಯ ಹರಿಶ್ಚಂದ್ರ ನಿರ್ಮಾಣವಾಗಿತ್ತು. ಲಾಭ ನಷ್ಟದ ಲೆಕ್ಕಾಚಾರಕ್ಕಿಂತ ಈ ಚಿತ್ರ ಎಲ್ಲರನ್ನೂ ತಲುಪಬೇಕು ಎಂಬ ಕಳಕಳಿ ಗೌಡರದ್ದು. ಈ ಚಿತ್ರ ಇಂದಿಗೂ ಪ್ರಸ್ತುತ. ಸತ್ಯ, ಪ್ರಾಮಾಣಿಕತೆಯಂತಹ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಲು 'ಸತ್ಯ ಹರಿಶ್ಚಂದ್ರ' ಚಿತ್ರಕ್ಕಿಂತ ಮಿಗಿಲಾದ ಪಾಠವಿಲ್ಲ. ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್ ಇಆರ್ ಟಿ) ಈ ಹಿಂದೆ ಸುತ್ತೋಲೆ ಹೊರಡಿಸಿತ್ತು.

ಶಿಲ್ಪಾ ಶೆಟ್ಟಿ ಯೂರೋಪ್ ನಲ್ಲಿ ಎರಡನೆ ಹನಿಮೂನ್!

ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎರಡನೆ ಬಾರಿಗೆ ಮಧುಚಂದ್ರ ಆಚರಿಸಿಕೊಳ್ಳಲು ತನ್ನ ಪತಿ ರಾಜ್ ಕುಂದ್ರ ಜೊತೆ ಯೂರೋಪ್ ಗೆ ಹಾರಲಿದ್ದಾರೆ. ಮದುವೆಯಾದ ಆರು ತಿಂಗಳ ಬಳಿಕ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರ ಎರಡನೆ ಹನಿಮೂನ್ ಗೆ ಸಿದ್ಧತೆ ನಡೆಸಿದ್ದಾರೆ.ಈ ಹಿಂದೆ ತಮ್ಮ ಚೊಚ್ಚಲ ಮಧುಚಂದ್ರವನ್ನು ಶಿಲ್ಪಾ ಶೆಟ್ಟಿ ದಂಪತಿಗಳು ಬಹಮಾಸ್ ನಲ್ಲಿ ಸವಿದಿದ್ದರು. ಈಗ ಎರಡನೆ ಬಾರಿಗೆ ಶಿಲ್ಪಾ ಮತ್ತು ಕುಂದ್ರಾ ಮಧುಚಂದ್ರಕೆ ತೆರಳುತ್ತಿದ್ದಾರೆ. ಜುಲೈ ಎರಡನೇ ವಾರದಲ್ಲಿ ಒಂದೂವರೆ ತಿಂಗಳು ಯೂರೋಪ್ ನಲ್ಲಿ ಜೊತೆಯಾಗಿ, ಹಿತವಾಗಿ ಕಳೆಯಲಿದ್ದಾರೆ. ಸದ್ಯಕ್ಕೆ ಶಿಲ್ಪಾ ಶೆಟ್ಟಿ ಶಾಂಪೂ ಒಂದರ ಜಾಹೀರಾತು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಟಿವಿ ಕಾರ್ಯಕ್ರಮ 'ಜರಾ ನಾಚ್ ಕೆ ದಿಖಾ' ಚಿತ್ರೀಕರಣದಲ್ಲಿ ಶಿಲ್ಪಾ ಪಾಲ್ಗೊಳ್ಳಲಿದ್ದಾರೆ. ಆ ಬಳಿಕವಷ್ಟೆ ಯೂರೋಪ್ ಪ್ರವಾಸ ಆರಂಭವಾಗಲಿದೆ. ತಮ್ಮ ತಮ್ಮ ಉದ್ಯೋಗಗಳಲ್ಲಿ ಇಬ್ಬರೂ ಬ್ಯುಸಿಯಾಗಿರುವ ಕಾರಣ ಈ ದಂಪತಿಗಳು ಒಬ್ಬರನ್ನೊಬ್ಬರು ಕೂಡಿ ಎರಡು ವಾರ ಆಗಿವೆಯಂತೆ. "ದಾಂಪತ್ಯದ ಪ್ರತಿ ಕ್ಷಣವನ್ನು ಅನುಭವಿಸುತ್ತಿದ್ದೇನೆ. ಇದು ನನ್ನ ಬಾಳಿನ ಅತ್ಯಂತ ಸುಂದರ ದಿನಗಳು. ಯೂರೋಪ್ ಪ್ರವಾಸ ನೆನಪಿಸಿಕೊಂಡರೆ ಮೈಯಲ್ಲಾ ಪುಳಕವಾಗುತ್ತದೆ" ಎಂದು ಶಿಲ್ಪಾ ಪ್ರತಿಕ್ರಿಯಿಸಿದ್ದಾರೆ.ಮಧುಚಂದ್ರ ಮುಗಿಸಿಕೊಂಡು ಹಿಂತಿರುಗಿದ ಬಳಿಕ ಶಿಲ್ಪಾ ಶೆಟ್ಟಿ ದಂಪತಿಗಳು ಗೃಹಪ್ರವೇಶ ಮಾಡಲಿದ್ದಾರೆ. ಸುಸಾನೆ ರೋಷನ್ ವಿನ್ಯಾಸದ ಹೊಸ ಮನೆಗೆ ಶಿಲ್ಪಾ ಶೆಟ್ಟಿ ದಂಪತಿಗಳಿಗೆ ಸ್ವಾಗತ ಕೋರಲಿದೆ.
ಸ್ವಯಂವರವೆಂಬ ದೊಡ್ಡವರ ಮಕ್ಕಳಾಟ!
ಮದುವೆಗೆ ಸಿದ್ಧವಾಗಿರುವ ಹುಡುಗಿ ಇನ್ನೇನು ತನ್ನನ್ನೇ ಆಯ್ದುಬಿಡುತ್ತಾಳೆ ಎಂದು ಕಾತುರದಿಂದ ಕಾಯ್ದ ಒಬ್ಬ ಹುಡುಗ. ಆದರೆ, ಆ ಚೆಲುವೆ ಅವನನ್ನು ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳದೆ ಇನ್ನೊಬ್ಬನನ್ನು ವರಿಸಲು ಸಿದ್ಧಳಾಗುತ್ತಾಳೆ. ಆದರೆ ಆ ಇನ್ನೊಬ್ಬ ಆ ಹುಡುಗಿಯನ್ನೇ ತಿರಸ್ಕರಿಸಿಬಿಡುತ್ತಾನೆ!ತ್ರಿಕೋನ ಪ್ರೇಮಕಥೆಯಿರುವ ಯಾವುದೇ ಕನ್ನಡ ಚಿತ್ರದ ಕಥೆಯಲ್ಲ ಇದು. ಸುವರ್ಣ ಕನ್ನಡ ಟಿವಿ ಚಾನಲ್ಲಿನಲ್ಲಿ ಸ್ವಯಂವರ ಮದುವೆ ಬ್ರೋಕರಿಂಗ್ ಕಾರ್ಯಕ್ರಮದ ಕಳೆದ ವಾರದ ತಾಜಾ ತಾಜಾ ನಮೂನೆ. ಚಿತ್ರನಟಿ ರಕ್ಷಿತಾ ನಡೆಸಿಕೊಡುತ್ತಿರುವ ಈ ರಿಯಾಲಿಟಿ ಶೋದಲ್ಲಿ ರಿಯಾಲಿಟಿ ಎಂಬುದೊಂದು ಬಿಟ್ಟು ಎಲ್ಲಾ ಇದೆ.ಅಂತಿಮ ಹಂತದಲ್ಲಿ ವಧು ಸ್ಥಾನದಲ್ಲಿ ನಿಂತಿದ್ದ ಉತ್ತರ ಕರ್ನಾಟಕದ ಹುಡುಗಿ ಪ್ರಣತಿ ಎಂಬವಳ ಎದುರು ಇದ್ದದ್ದು ಬಿಜಾಪುರ ಮೂಲದ ಬಸವರಾಜ್ ಬಾವಿಕಟ್ಟಿ ಮತ್ತು ಬೆಂಗಳೂರಿನ ಹೈಫೈ ಹುಡುಗ ಕಾರ್ತಿಕ್. ಪ್ರಣತಿ ಎಲ್ಲರ ನಿರೀಕ್ಷೆಯನ್ನು ಧೂಳಿಪಟ ಮಾಡಿ ಬಸವರಾಜ್ ನನ್ನು ಬಿಟ್ಟು ಕಾರ್ತಿಕ್ ನನ್ನು ತನ್ನ ಬಾಳ ಸಂಗಾತಿಯನ್ನಾಗಿ ಆಯ್ದುಕೊಳ್ಳುತ್ತಾಳೆ. ಕಾರ್ತಿಕ್ ಸ್ಟೇಜಿನ ಮಧ್ಯಭಾಗಕ್ಕೆ ಬಂದು ಈ ಹುಡುಗಿ ನನ್ನ ಸಂಗಾತಿಯಾಗಲು ಸಾಧ್ಯವಿಲ್ಲ ಎಂದು ಮಂಗಳ ಹಾಡುತ್ತಾನೆ.ಈ ಸಂದರ್ಭದಲ್ಲಿ ಪ್ರಣತಿಯಿಂದ ತಿರಸ್ಕೃತನಾದ ಬಸವರಾಜ್, ಕಾರ್ತಿಕ್ ಗೆ ಬೇಡವಾದ ಪ್ರಣತಿ, ಜೀವಸಂಗಾತಿ ಹುಡುಕಲು ಯೋಜಿಸಿರುವ ಕಾರ್ಯಕ್ರಮಕ್ಕೆ ಬಂದು ಮದುವೆ ಆಹ್ವಾನವಿದ್ದರೂ ಮದುವೆ ಬೇಡವೆಂದ ಕಾರ್ತಿಕ್ ಮತ್ತು ಸ್ವಯಂವರದ ಕೇಂದ್ರಬಿಂದು ರಕ್ಷಿತಾ... ಇವರೆಲ್ಲಾ ಒಂದು ಕ್ಷಣ ಸ್ವಯಂವರವೆಂಬ ಪ್ರಹಸನದ ಸೂತ್ರದ ಗೊಂಬೆಗಳಿದ್ದಂತೆ ಭಾಸವಾಯಿತು.ಇಲ್ಲಿಯವರೆಗೆ ನಡೆದ ಮೂರ್ನಾಲ್ಕು ವಾರಗಳ ಪ್ರಹಸನದಲ್ಲಿ ಯಾರೂ ಜೋಡಿಯಾಗಿಲ್ಲ. ಮೊದಲ ವಾರದಲ್ಲಿ ಜೋಡಿ ನಕ್ಕಿಯಾದರೂ ತೆರೆಯ ಹಿಂದೆ ಮದುವೆ ಕಾಂಟ್ರಾಕ್ಟನ್ನು ಹುಡುಗಿಯ ತಾಯಿಯೇ ಮುರಿದಿದ್ದಳು. ಮುಂದಿನ ವಾರದಲ್ಲಿ ಹುಡುಗಿ ಯಾರನ್ನೂ ಆಯ್ದುಕೊಳ್ಳಲಿಲ್ಲ. ಕಳೆದ ವಾರದಲ್ಲಿ ಹುಡುಗಿ ಆಯ್ದುಕೊಂಡರೂ ಹುಡುಗ ಬೇಡವೆಂದ.ಕೇವಲ ಟಿ ಆರ್ ಪಿ ಏರಿಸುವ ಉದ್ದೇಶದಿಂದ ಮತ್ತು ಕೇವಲ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಮಾತ್ರ ಈ ಸ್ವಯಂವರ ನಾಟಕವನ್ನು ಆಯೋಜಿಸಲಾಗಿದೆಯೆ? ಎರಡು ವಾರಗಳ ಹಿಂದೆ ರಕ್ಷಿತಾ ಕಣ್ಣೀರು ಸುರಿಸಿದ್ದೂ ಈ ನಾಟಕದ ಒಂದು ಭಾಗವೆ? ಟಿವಿ ಪರದೆಗೆ ಕಣ್ಣು ನೆಟ್ಟು ನೋಡುವ ಪ್ರೇಕ್ಷಕರ ಮೇಲೆ ಸವಾರಿ ಮಾಡಲಾಗುತ್ತಿದೆಯೆ? ಈ ಪ್ರಶ್ನೆಗಳಿಗೆ ಸುವರ್ಣ ಟಿವಿಯೇ ಉತ್ತರ ನೀಡಲಿ.
ಬೆಳ್ಳಿತೆರೆಗೆ ಸುರೇಶ್ ಹೆಬ್ಳೀಕರ್ ಪುತ್ರ ಅಕ್ಷಯ್
ಖ್ಯಾತ ಚಿತ್ರ ನಿರ್ದೇಶಕ, ನಟ ಹಾಗೂ ಪರಿಸರವಾದಿ ಸುರೇಶ್ ಹೆಬ್ಳೀಕರ್ ಅವರ ಮಗ ಅಕ್ಷಯ್ ಹೆಬ್ಳೀಕರ್ ಕಡೆಗೂ ಬೆಳ್ಳಿತೆರೆಗೆ ಅಡಿಯಿಡಲು ನಿರ್ಧರಿಸಿದ್ದಾರೆ. ಚಿತ್ರರಂಗಕ್ಕೆ ಅಡಿಯಿಡಿವುದಿಲ್ಲ ಎಂದು ಅಕ್ಷಯ್ ಸುದೀರ್ಘ ಸಮಯದಿಂದ ಪಟ್ಟು ಹಿಡಿದಿದ್ದರು. ಬೆಳ್ಳಿತೆರೆಗೆ ಅಡಿಯಿಡುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ಅಕ್ಷಯ್ ಗೆ ಚಿತ್ರರಂಗಕ್ಕಿಂತಲೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ. ಈ ಹಿಂದೆ ಸಾಕಷ್ಟು ಚಿತ್ರಗಳು ಅಕ್ಷಯ್ ಅವರನ್ನು ಹುಡುಕಿಕೊಂಡು ಬಂದಿದ್ದವು. ಆದರೆ ಸಿನಿಮಾ ಎಂದರೆ ಮೂಗು ಮುರಿಯುತ್ತಿದ್ದ ಅಕ್ಷಯ್ ಬಂದ ಯಾವ ಚಿತ್ರವನ್ನೂ ಒಪ್ಪಿಕೊಳ್ಳಲಿಲ್ಲ. ಬಹಳಷ್ಟು ಸಿನಿಮಾ ತಾರೆಗಳ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಆದರೆ ಸುರೇಶ್ ಹೆಬ್ಳೀಕರ್ ತಮ್ಮ ಮಗನನ್ನು ಚಿತ್ರರಂಗದಲ್ಲಿ ತೊಡಗಿಕೊಳ್ಳುವಂತೆ ಎಂದೂ ಬಲವಂತ ಮಾಡಿರಲಿಲ್ಲ.'ಬಿಲಿಯನ್ ಡಾಲರ್ ಬೇಬಿ' ಹಾಗೂ 'ಮೈಲಾರಿ' ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಸುರೇಶ್ ಹೆಬ್ಳೀಕರ್ ಗೆ ಅಕ್ಷಯ್ ಸಹಾಯ ಮಾಡುತ್ತ್ತಿದ್ದರು. ಕಡೆಗೆ ಚಿತ್ರರಂಗಕ್ಕೆ ಧುಮುಕಲು ತೀರ್ಮಾನಿಸಿದ್ದಾರೆ. ಕನ್ನಡದ ಜೊತೆಗೆ ಮಲಯಾಳಂ ಚಿತ್ರಗಳ ಬಗೆಗೂ ಅಕ್ಷಯ್ ಗೆ ಆಸಕ್ತಿಯಿದೆ. ನೃತ್ಯ ಹಾಗೂ ತಬಲಾ ಕಲಾವಿದರೂ ಅಗಿರುವ ಅಕ್ಷಯ್ ಮಹತ್ವಾಕಾಂಕ್ಷೆಯ ಚಿತ್ರವೊಂದನ್ನು ಕನ್ನ್ನಡದಲ್ಲಿ ಮಾಡಲು ತೀರ್ಮಾನಿಸಿದ್ದಾರೆ.

ಮಂಗಳವಾರ, ಏಪ್ರಿಲ್ 27, 2010

ಕೃಷ್ಣನ್ ಲವ್ ಸ್ಟೋರಿ ಶೀಘ್ರದಲ್ಲೆ ತೆರೆಗೆ

ಅಜಯ್, ರಾಧಿಕಾಪಂಡಿತ್ ಜೋಡಿಯ, ಶಶಾಂಕ್ ನಿರ್ದೇಶನದ 'ಕೃಷ್ಣನ್ ಲವ್ ಸ್ಟೊರಿ' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ವಿ.ಶ್ರೀಧರ್ ಸಾರಥ್ಯದಲ್ಲಿ ಹಿನ್ನಲೆ ಸಂಗೀತ ನೀಡಲಾಗುತ್ತಿದೆ. ಹಾಗೆಯೇ ಮುಂಬೈ ನಗರದ ಪ್ರಸಿದ್ಧ ಸ್ಟುಡಿಯೋದಲ್ಲಿ ಡಿ.ಟಿ.ಎಸ್, ಡಿ ಐ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಭಿನ್ನ ಪ್ರೇಮಕಥೆಯುಳ್ಳ ಈ ಚಿತ್ರ ಯುವಪೀಳಿಗೆಗೆ ಹತ್ತಿರವಾಗಲಿದೆ ಎಂದು ಶಶಾಂಕ್ ತಿಳಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ಧವಾಗಲಿದ್ದು ಮುಂದಿನ ತಿಂಗಳು ತೆರೆ ಕಾಣುವ ಸಾಧ್ಯತೆಯಿದೆ.ಶ್ರೀವೆಂಕಟೇಶ್ವರ ಕೃಪ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತ ಹಾಗೂ ಮೋಹನ್.ಜಿ.ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯೋಗೀಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಎಂ.ಎಲ್.ಪ್ರಸನ್ನ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸವಿರುವ ‘ಕೃಷ್ಣನ್ ಲವ್ ಸ್ಟೊರಿಗೆ ಸಿ.ಎಚ್.ಸುರೇಶ್ ಮತ್ತು ಲೋಕೇಶ್ ಆವರ ಸಹ ನಿರ್ಮಾಣವಿದೆ.
ಮಥುರಾನಗರಿಯಲ್ಲಿ ರಮ್ಯಾ ಪ್ರೇಮ ಲೋಕ!
ಬೆಂಗಳೂರು ರಾಯಲ್ ಚಾಲೆಂಜರ್ಸ್ ನ ರಾಯಭಾರಿ ರಮ್ಯಾ ಇಷ್ಟು ದಿನ ಐಪಿಎಲ್ ಪಂದ್ಯಾವಳಿಯಲ್ಲಿ ಕಳೆದು ಹೋಗಿದ್ದರು. ಇದೀಗ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ನಟ ಧ್ಯಾನ್ ಗೆ ಜೊತೆಯಾಗಲಿದ್ದಾರೆ ರಮ್ಯಾ. ಚಿತ್ರದ ಹೆಸರು 'ಮಥುರಾನಗರಿ'. ಟ್ಯಾಗ್ ಲೈನ್ 'ರಾಧೆಯ ಪ್ರೇಮಲೋಕ'!'ಒಂದು ಪ್ರೀತಿಯ ಕಥೆ' ನಿರ್ದೇಶಿಸಿದ್ದ ರಾಜಶೇಖರ ರಾವ್ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ರಮ್ಯಾ ಮತ್ತು ಧ್ಯಾನ್ ಕತೆಯ ಪಾತ್ರಗಳಿಗೆ ಸೂಕ್ತವಾಗಿ ಒಪ್ಪುತ್ತಾರೆ ಎಂಬ ಕಾರಣಕ್ಕೆ ಅವರಿಬ್ಬರನ್ನು ತಮ್ಮ 'ಮಥುರಾನಗರಿ' ಚಿತ್ರಕ್ಕೆ ಆಯ್ಕೆ ಮಾಡಿದ್ದಾಗಿ ರಾಜಶೇಖರ ರಾವ್ ತಿಳಿಸಿದ್ದಾರೆ.ಹಳ್ಳಿಹುಡುಗನ ರೀತಿ ಕಾಣುವ ನಟ ಬೇಕಾಗಿತ್ತು. ಧ್ಯಾನ್ ಗಿಂತಲೂ ಸೂಕ್ತ ನಟ ಇನ್ಯಾರಿದ್ದಾರೆ ಎಂಬುದು ರಾವ್ ಅವರ ಪ್ರತಿಕ್ರಿಯೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ರಮ್ಯಾ ಅವರಿಗೆ ಈ ಪಾತ್ರ ಹೇಳಿ ಮಾಡಿಸಿದಂತಿದೆ. ಆಧುನಿಕ ರಾಧೆಯಾಗಿ ರಮ್ಯಾ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ ಎನ್ನುತ್ತಾರೆ ರಾಜಶೇಖರ.ಚಿತ್ರದ ಉಳಿದ ತಂತ್ರಜ್ಞರ ಹಾಗೂ ತಾರಾಬಳಗದ ಆಯ್ಕೆ ಪ್ರಗತಿಯಲ್ಲಿದ
ಕಿರುತೆರೆಯಲ್ಲಿ ಕಿಚ್ಚ ಸುದೀಪ್ ರಿಯಾಲಿಟಿ ಶೋ
ಹೆಚ್ಚಿನ ನಾಯಕ ನಟರು ಕಿರುತೆರೆ ಎಂದರೆ ಮೂಗುಮುರಿಯುತ್ತಾರೆ. ಆದರೆ ನಮ್ಮ ಕಿಚ್ಚ ಸುದೀಪ್ ಯಾವುದೇ ಅಳುಕಿಲ್ಲದೆ ಕಿರುತೆರೆಗೆ ಅಡಿಯಿಡಲು ಮುಂದಾಗಿದ್ದಾರೆ. ರಮೇಶ್, ದೇವರಾಜ್, ರಕ್ಷಿತಾ, ವರ್ಷಾ ನಂತರ ಇದೀಗ ಸುದೀಪ್ ಕಿರುತೆರೆಯತ್ತ ದಾಪುಗಾಲು ಹಾಕಿದ್ದು ರಿಯಾಲಿಟಿ ಶೋ ಒಂದನ್ನು ನಡೆಸಿಕೊಡಲಿದ್ದಾರೆ.ಸುವರ್ಣ ವಾಹಿನಿಗಾಗಿ ಸುದೀಪ್ ನಡೆಸಿಕೊಡುವ ರಿಯಾಲಿಟಿ ಶೋ ಹೆಸರು 'ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್'. ಹೆಸರು ವಿಚಿತ್ರವಾಗಿ ಹಾಗೂ ಆಕರ್ಷಕವಾಗಿದೆ ಅನ್ನಿಸುವುದಿಲ್ಲವೆ? ಪೇಟೆ ಹುಡುಗಿಯರನ್ನು ಹಳ್ಳಿಗೆ ಬಿಟ್ಟು ಅಲ್ಲಿನ ವಾತಾವರಣಕ್ಕೆ ಅವರೆಲ್ಲಾ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ತಿಳಿದುಕೊಳ್ಳಲಾಗುತ್ತದೆ. ಹಳ್ಳಿಗರ ಎಲ್ಲಾ ಸ್ಪರ್ಧೆಯಲ್ಲಿ ಗೆದ್ದ ಪೇಟೆ ಹುಡುಗಿಯರಿಗೆ ವಿಶೇಷ ಬಹುಮನಾ ಕೊಡಲಾಗುತ್ತದೆ. ಸುದೀಪ್ ನಿರೂಪಿಸುವ ಈ ಕಾರ್ಯಕ್ರಮಕ್ಕೆ ತೀರ್ಪುಗಾರರು ಸಹ ಅವರೇ ಎಂಬುದು ಗಮನಾರ್ಹ ಅಂಶ. ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್ ಕಾರ್ಯಕ್ರಮಕ್ಕೆ ಮಾರ್ಗದರ್ಶನವನ್ನೂ ನೀಡಲಿದ್ದಾರೆ ಸುದೀಪ್.ಈಗಾಗಲೆ ಈ ರಿಯಾಲಿಟಿ ಶೋನ ಚಿತ್ರೀಕರಣ ಆರಂಭವಾಗಿದೆ. 'ವೀರ ಪರಂಪರೆ' ಚಿತ್ರೀಕರಣ ಮುಗಿದ ಕೂಡಲೆ ಸುದೀಪ್ ಕಿರುತೆರೆಗೆ ಮುಖ ಮಾಡಲಿದ್ದಾರೆ. ಸದ್ಯಕ್ಕೆ 'ಕನ್ವರ್ ಲಾಲ್' ಹಾಗೂ ತೆಲುಗಿನಲ್ಲಿ 'ರಕ್ತ ಚರಿತ್ರ' ಚಿತ್ರಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಒಟ್ಟಾರೆಯಾಗಿ ಕಿರುತೆರೆ ಮೂಲಕ ಸುದೀಪ್ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವಣ್ಣನ ಹೊಸ ಚಿತ್ರ ಕ್ಷತ್ರಿಯ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರ 'ಜೋಗಯ್ಯ' ಸೆಟ್ಟೇರುವುದು ತಡವಾಗಲಿದೆ. ಕಾರಣ ಶಿವಣ್ಣ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಚಿತ್ರದ ಹೆಸರು 'ಕ್ಷತ್ರಿಯ'. ಸದ್ಯಕ್ಕೆ ಶಿವಣ್ಣ ಅಭಿನಯಿಸುತ್ತಿರುವ 'ಮೈಲಾರಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.ಕನ್ನಡದ ದಾಖಲೆ ಚಿತ್ರ 'ಜೋಗಿ' ಚಿತ್ರದ ಮುಂದುವರಿದ ಭಾಗ 'ಜೋಗಯ್ಯ' ಎಂಬುದು ಗೊತ್ತೆಯಿದೆ. ರಕ್ಷಿತಾ ಪ್ರೇಮ್ ನಿರ್ಮಿಸುತ್ತಿರುವ 'ಜೋಗಯ್ಯ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಪ್ರೇಮ್. ಚಿತ್ರಕತೆ ಎಲ್ಲವನ್ನೂ ಸಿದ್ಧವಾಗಿಟ್ಟುಕೊಂಡಿರುವ ಪ್ರೇಮ್ಈ ಚಿತ್ರವನ್ನು ಆದಷ್ಟು ಬೇಗ ಮುಗಿಸಬೇಕು ಎಂಬುದು ಉದ್ದೇಶ. ಏತನ್ಮಧ್ಯೆ ಶಿವಣ್ಣ ದಿಢೀರನೆ 'ಕ್ಷತ್ರಿಕ'ನನ್ನು ಒಪ್ಪಿಕೊಂಡು 'ಜೋಗಯ್ಯ'ನಿಗೆ ಬ್ರೇಕ್ ಹಾಕಿದ್ದಾರೆ. ಆದಷ್ಟು ಬೇಗ ಕ್ಷತ್ರಿಯನನ್ನು ಮುಗಿಸಿ ಜುಲೈ ವೇಳೆಗೆ 'ಜೋಗಯ್ಯ'ನನ್ನು ಕೈಗೆತ್ತಿಕೊಳ್ಳಲು ಶಿವಣ್ಣ ನಿರ್ಧರಿಸಿದ್ದಾರೆ. ಕ್ಷತ್ರಿಯ ಚಿತ್ರವನ್ನು ತೆಲುಗಿನ ನಿರ್ಮಾಪಕರಾದ ರವಿ ಮತ್ತು ಭಾಸ್ಕರ್ ನಿರ್ಮಿಸುತ್ತಿದ್ದಾರೆ. ವಿ ವಿ ಬದ್ರಿ ನಿರ್ದೇಶನ, ರಮಣ ಗೋಗುಲ ಅವರ ಸಂಗೀತ ಚಿತ್ರಕ್ಕಿರುತ್ತದೆ. ಮೈಲಾರಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಕ್ಷತ್ರಿಯ ಚಿತ್ರೀಕರಣ ಅರಂಭವಾಗಲಿದೆ. ಆ ಬಳಿಕವಷ್ಟೆ ಜೋಗಯ್ಯನ ಅಬ್ಬರ ಶುರುವಾಗಲಿದೆ ಎನ್ನುತ್ತವೆ ಮೂಲಗಳು. ಸುದೀರ್ಘ ಸಮಯ ಬಳಿಕ ಸಂಗೀತ ನಿರ್ದೇಶಕ ರಮಣ ಕನ್ನಡ ಚಿತ್ರಕ್ಕೆ ಮರಳುತ್ತಿದ್ದಾರೆ. ಅಂದಹಾಗೆ ಮೈಲಾರಿ ಚಿತ್ರಕ್ಕೆ ಸದಾ ಹಾಗೂ ಗಂಡ ಹೆಂಡತಿ ಸಂಜನಾ ಇಬ್ಬರು ನಾಯಕಿಯರು. ಇದು ಶಿವಣ್ಣನ 99ನೇ ಚಿತ್ರ.
ಕೊಳ್ಳೆಗಾಲದಲ್ಲಿ ಗಣೇಶನ ಮದುವೆ ಸಂಭ್ರಮ
ಸದಾ ಹಚ್ಚಹಸಿರಿನಿಂದ ಕಂಗೊಳ್ಳಿಸುವ ಜಿಲ್ಲೆ ಕೊಳ್ಳೆಗಾಲ. ಆ ಜಿಲ್ಲೆಯ ಸಮೀಪ ಎಡಕುರಿಯಾ ಎಂಬ ಸುಂದರ ಹಳ್ಳಿ. ಆ ಹಳ್ಳಿಯಲ್ಲಿ ಗಣೇಶ್ ನಾಯಕನಾಗಿ ನಟಿಸುತ್ತಿರುವ 'ಮದುವೆಮನೆ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಗಣೇಶ್, ಶ್ರದ್ಧಾಆರ್ಯ, ಸ್ಪೂರ್ತಿ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ 'ಮದುವೆಮನೆ' ಚಿತ್ರವನ್ನು ಸುನೀಲ್‌ಕುಮಾರ್ ಸಿಂಗ್ ಕಥೆ , ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕರಿಗೆ ಹಿರಿತೆರೆಯಲ್ಲಿ ಇದು ಚೊಚ್ಚಲ ಯತ್ನ. ಗಣೇಶ್ ಹಾಗೂ ಶ್ರದ್ದಾಆರ್ಯ ನಾಯಕ/ನಾಯಕಿಯರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ 'ಜುಗಾರಿ'ಯ ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಬಲನಾಣಿ, ಶರಣ್, ಹನುಮಂತೇಗೌಡ, ಕೆ.ವಿ.ನಾಗೇಶ್‌ಕುಮಾರ್, ಎಂ.ಎನ್.ಎಂ. ಚಿತ್ಕಲಾ, ಡಾ.ನಾಗೇಶ್, ಜಾದವ್‌ಮೈಸೂರು, ಚಿನ್ನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ, ಮೋಹನ್ ಬಿ ಕೆರೆ ಕಲಾನಿರ್ದೇಶನ 'ಮದುವೆಮನೆ' ಚಿತ್ರಕ್ಕಿದೆ.
ಹೃತಿಕ್ ಜೊತೆ ರೋಮಾನ್ಸ್ ಗೆ ಕ್ರಿಸ್ಟೇನ್
ಹೃತಿಕ್ ರೋಷನ್ ಜೊತೆ ಮತ್ತೊಬ್ಬ ಫಿರಂಗಿ ಚೋರಿ ಕುಣಿಯುವುದು ಖಾತ್ರಿಯಾಗಿದೆ. ಬರ್ಬರಾ ಮೋರಿ ನಂತರ ಈಗ 20 ವರ್ಷದ ಚೆಲುವೆ ಕ್ರಿಸ್ಟೆನ್ ಸ್ಟೀವರ್ಟ್ ಬಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರೆ. ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಅವರ ಪಾನಿ ಚಿತ್ರದಲ್ಲಿ ಈ ಚೆಲುವೆ ಹೃತಿಕ್ ಜೊತೆ ರೋಮಾನ್ಸ್ ಮಾಡಲಿದ್ದಾಳೆ.
Read: In English ಎಲಿಜಬೇತ್ ಚಿತ್ರ ಖ್ಯಾತಿಯ ಶೇಖರ್ ಕಪೂರ್ ಅವರ ಅಭಿಮಾನಿಯಾದ ಈ 'ಟ್ವಿಲೈಟ್ 'ತಾರೆ ಕ್ರಿಸ್ಟೆನ್, ಶೇಖರ್ 'ಪಾನಿ' ಚಿತ್ರದ ಬಗ್ಗೆ ಹೇಳಿದ ತಕ್ಷಣ ಒಪ್ಪಿಕೊಂಡಿದ್ದಾರೆ. ಚಿತ್ರದ ಕಥೆ ಯ ಬಗ್ಗೆ ಶೇಖರ್ ಹೆಚ್ಚು ಸುಳಿವು ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಇದು ಮತ್ತೊಂದು ಹಾಲಿವುಡ್ ಬಾಲಿವುಡ್ ಮಿಶ್ರಣದ ಚಿತ್ರ. ಮೊದಲು ಇಂಗ್ಲೀಷ್ ನಲ್ಲಿ ಚಿತ್ರೀಕರಿಸಿ ನಂತರ ಹಿಂದಿಗೆ ಡಬ್ಬಿಂಗ್ ಮಾಡುವ ಸಾಧ್ಯತೆಯಿದೆ. ಮುಂಬೈನ ಬಡವ ಶ್ರೀಮಂತರ ಕಥೆ ಇದಾಗಿದ್ದು, ಹೃತಿಕ್ ಕೆಳವರ್ಗದ ಯುವಕನ ಪಾತ್ರವಹಿಸಿದ್ದರೆ, ಕ್ರಿಸ್ಟೆನ್ ಶ್ರೀಮಂತ ಹುಡುಗಿ ಪಾತ್ರ ಧರಿಸಲಿದ್ದಾರೆ. ಇವರಿಬ್ಬರ ಪ್ರೇಮಕಥೆಯೇ ಪಾನಿ ಎನ್ನಲಾಗಿದೆ.ಕೈಟ್ಸ್ ನಲ್ಲಿ ಮೆಕ್ಸಿಕನ್ ಬೆಡಗಿ ಬರ್ಬರಾ ಮೋರಿ ಜೊತೆ ಸ್ವಲ್ಪ ಹೆಚ್ಚಾಗೆ ರೋಮಾನ್ಸ್ ಮಾಡಿ ಪತ್ನಿ ಸುಜಾನ್ ಕಣ್ಣು ಕೆಂಪಗಾಗುವಂತೆ ನೀಲಿ ಕಂಗಳ ಚೆಲುವ ಹೃತಿಕ್ ಮಾಡಿದ್ದುಂಟು. ಈ ಜೋಡಿ ಈಗಳೂ ಚಿತ್ರ ಪ್ರಚಾರಕ್ಕಾಗಿ ಮಾರಿಷಸ್ ,ಮುಂಬೈ ಅಲ್ಲಿ ಇಲ್ಲಿ ಎಂದು ಒಟ್ಟಿಗೆ ಓಡಾಡಿಕೊಂಡಿದೆ. ಮತ್ತೊಂದು ವಿದೇಶಿ ಬ್ಯೂಟಿ ಗೆ ಬಾಲಿವುಡ್ ನ ಬೇಡಿಕೆ ನಟನ ಜೊತೆ ಹೆಜ್ಜೆ ಹಾಕುವ ಅದೃಷ್ಟ ಒದಗಿದೆ. ಪಾನಿ ಎಲ್ಲಿಂದ ಎಲ್ಲಿಗೆ ಹರಿಯುವುದೋ ಕಾದು ನೋಡೋಣ.

ಭಾನುವಾರ, ಏಪ್ರಿಲ್ 11, 2010

ತಜ್ಞರ ಸಲಹೆ ಪಡೆದು ಮುಂದುವರೆಯಿರಿ:ಡಾ|| ಸೋಕಿ

Potato Club Organising a Potato Cultivation Seminar at Arkalgud. Farmer M C Rangaswamy inagurating the function. Pavan Joth Sidhu, Seed Supplier, Pathologist Dr. S S Soki, Potato Club Founder Yogaramesh, Hemmige Mohan and others seen in the picture

ಬುಧವಾರ, ಏಪ್ರಿಲ್ 7, 2010

Dr. VISHNUVARDHAN NUDI NAMANA







Vishnu Sena Samithi Organising a Nudi Namana Programme, Ramesh Arvind Indagurating function, Abhijith inagurating naming ceremony for Vishnuvardhan Road, Actor Shivaram, RameshBhat,Honnavally Krishna,Director Hashyam, Social Worker Yogaramesh and others seen in the picture.

ಮಂಗಳವಾರ, ಏಪ್ರಿಲ್ 6, 2010

ANUSHKA - SHAHID KAPOOR

ಶಾಹಿದ್ ಕಪೂರ್ ಎಂಬ ಬಾಲಿವುಡ್ ಸುರಸುಂದರಾಂಗ ದಿನದಿಂದ ದಿನಕ್ಕೆ ತನ್ನ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಗಾಸಿಪ್, ಸಿನಿಮಾ, ಡ್ಯಾನ್ಸ್ ಹೀಗೆ ಎಲ್ಲ ವಲಯದಲ್ಲೂ ಸಾಕಷ್ಟು ಸುದ್ದಿ ಮಾಡುವ ಶಾಹಿದ್ ಇದೀಗ ತಾನು ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋನೇ ಎಂದು ಸಾಬೀತು ಪಡಿಸಿದ್ದಾರೆ.

ಹೌದು. ಸದ್ಯ ಶಾಹಿದ್ ಹಾಗೂ ಬೆಂಗಳೂರಿನ ಚೆಲುವೆ ಅನುಷ್ಕಾ ಶರ್ಮಾ ಜೋಡಿಯ ಬದ್ಮಾಶ್ ಕಂಪನಿ ಎಂಬ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರೀಕರಣ ನಡೆಯುವ ಸಂದರ್ಭ, ಶಾಹಿದ್ ಅನುಷ್ಕಾ ವಿಶಾಲವಾದ ಹಾಲ್ ಒಂದರಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾಗ, ಹಾಲ್‌ನ ಮೇಲೆ ಇದ್ದ ಗಾಜುಗಳ ಅಲಂಕೃತ ಬೃಹತ್ ದೀಪ ಹಠಾತ್ ನೆಲಕ್ಕೆ ಉರುಳಿತು. ಉರುಳುತ್ತಿರುವ ಸಂದರ್ಭವೇ ಜಾಗೃತನಾದ ಶಾಹಿದ್ ತನ್ನ ಜೊತೆಗೆ ಅನುಷ್ಕಾಳನ್ನೂ ಹಿಡಿದೆಳೆದ. ಇಬ್ಬರೂ ದೂರ ಬಿದ್ದರು. ಕೂದಲೆಳೆಯ ಅಂತರದಲ್ಲಿ ಇಬ್ಬರೂ ಭಾರೀ ಅವಘಡವೊಂದರಿಂದ ಪಾರಾದರು! ಆ ಮೂಲಕ ಶಾಹಿದ್ ಮತ್ತೆ ರಿಯಲ್ ಹೀರೋ ಆಗಿಬಿಟ್ಟ!!!
ಅನುಷ್ಕಾಗಂತೂ ಎದೆ ಢವಢವ. ಆ ವಿದ್ಯುದ್ದೀಪ ಬಿದ್ದಿದ್ದರೆ ಖಂಡಿತಾ ಭಾರೀ ಪೆಟ್ಟಾಗುತ್ತಿತ್ತು. ಜೀವ ಸಹಿತ ಉಳಿಯುವುದೇ ಕಷ್ಟ. ಯಾಕೆಂದರೆ ಅದು ಅಷ್ಟು ಚೂಪಾಗಿತ್ತು. ಆದರೆ ಶಾಹಿದ್ ಮಿಂಚಿನ ವೇಗದಲ್ಲಿ ನನ್ನನ್ನು ಹಿಡಿದೆಳೆದ. ಒಂದು ಕ್ಷಣ ನನಗೇನಾಗುತ್ತಿದೆ ಅಂತಾನೇ ಅರ್ಥವಾಗಲಿಲ್ಲ. ಶಾಹಿದ್ ನನ್ನ ಪ್ರಾಣ ಉಳಿಸಿದ. ಆತನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎಂದು ಅನುಷ್ಕಾ ಹೇಳುತ್ತಾಳೆ.

ಆದರೆ ಶಾಹಿದ್ ಇದೇ ಮೊದಲ ಬಾರಿಗೆ ಹೀಗೆ ಮಾಡಿದ್ದಲ್ಲ. ಹಿಂದೆಯೂ ಶಾಹಿದ್ ಹೀಗೆ ಮಾಡಿದ ಉದಾಹರಣೆಯಿದೆ. ಈ ಹಿಂದೆ ಪ್ರಿಯಾಂಕಾ ಛೋಪ್ರಾ ಜೊತೆ ಕಮೀನೇ ಚಿತ್ರದಲ್ಲಿ ನಟಿಸುತ್ತಿದ್ದಾಗ, ಪ್ರಿಯಾಂಕಾ ಅಕಸ್ಮಾತಾಗಿ ಶೂಟಿಂಗ್ ಸಮಯದಲ್ಲಿ ಬೈಕ್‌ನಿಂದ ಬಿದ್ದಳಂತೆ. ಆಗ ಅದೇ ಸಮಯಕ್ಕೆ ಜಾಗೃತನಾದ ಶಾಹಿದ್ ಆಕೆ ನೆಲದ ಮೇಲೆ ಬೀಳುವುದನ್ನು ತಪ್ಪಿಸಿ ತನ್ನ ಬಾಹುಗಳನ್ನೇ ಆಕೆಗೆ ಆಧಾರವಾಗಿ ನೀಡಿದನಂತೆ. ಹೀಗಾಗಿ ಪ್ರಿಯಾಂಕಾರ ಮುಖ ನೆಲಕ್ಕೆ ಬಡಿದು ಗಾಯಗಳಾಗುವುದು ತಪ್ಪಿತ್ತು. ಸಿನಿಮೀಯ ಮಾದರಿಯಲ್ಲಿ ಪ್ರಿಂಯಾಂಕಾರನ್ನು ಹೀಗೆ ರಕ್ಷಿಸಿದ ಮೇಲೆ ಪ್ರಿಯಾಂಕಾ- ಶಾಹಿದ್ ನಡುವೆ ಏನೋ ಇದೆ ಎಂದು ಗಾಸಿಪ್ ಹರಡಿದ್ದು ಸುಳ್ಳಲ್ಲ. ಅದೇನೇ ಇರಲಿ, ಇದೆಲ್ಲ ಹಳೇ ಕಥೆ.

ಒಟ್ಟಾರೆ ಶಾಹಿದ್ ರೀಲ್ ಮಾತ್ರ ಅಲ್ಲ, ರಿಯಲ್ ಹೀರೋ ಎನ್ನೋಣವೇ!

GANESH WITH MUMBAI BEAUTIES


ಯುವಿಕಾ ಚೌಧರಿ, ಅಂಜನಾ ಸುಖಾನಿಯಂಥಾ ಬಾಲಿವುಡ್ ಬೆಡಗಿಯರ ಜೊತೆ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಮಳೆಯಲಿ ಜೊತೆಯಲಿ ನೆನೆದಿದ್ದು ಗೊತ್ತೇ ಇದೆ. ಅದೇ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಈಗ ಮತ್ತೆ ಬಾಲಿವುಡ್ ಬೆಡಗಿಯರ ಜೊತೆ ಮೈ ಕುಣಿಸುವ ಯೋಗ ಬಂದಿದೆ. ಗಣೇಶ್ ಇದೀಗ ಇಂದ್ರಜಿತ್ ಲಂಕೇಶ್ ನಿರ್ದೇಶನದ ತುಂಟ ತುಂಟಿ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ಲೇಖಾ ವಾಷಿಂಗ್ಟನ್ ಹಾಗೂ ಇಶಿತಾ ಶರ್ಮಾ ಎಂಬಿಬ್ಬರು ಬಾಲಿವುಡ್ ಲಲನಾಮಣಿಯರು ಜೊತೆಯಾಗುತ್ತಿದ್ದಾರೆ. ಇದೇ ಎಪ್ರಿಲ್‌ನಿಂದ ತುಂಟ ತುಂಟಿ ಚಿತ್ರೀಕರಣ ಆರಂಭವಾಗಲಿದೆ.

ಇಶಿತಾ ಶರ್ಮಾ ನಾಯಕಿಯಾಗಿ ನಟಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಕೆಲವು ಆಟಕ್ಕುಂಟು ಲೆಕ್ಕಕ್ಕಿಲ್ಲದಂಥಾ ಬಾಲಿವುಡ್ ತೋಪು ಚಿತ್ರಗಳಲ್ಲಿ ನಟಿಸಿದ ಇಸಿತಾ ಈ ಬಾರಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಹಾಗಾಗಿ ಇದು ಆಕೆಯ ಜೀವನದಲ್ಲೊಂದು ಮಹತ್ವದ ಮೈಲುಗಲ್ಲು.

ಇಶಿತಾಗೆ ಇಂದ್ರಜಿತ್ ಅವರು ಚಿತ್ರದ ಕಥೆಯನ್ನು ವಿವರಿಸಿದಾಗ ಖುಷಿಯೋ ಖುಷಿಯಂತೆ. ಇಂದ್ರಜಿತ್ ಹೇಳಿದ ಕಥೆ ತುಂಬಾ ಚೆನ್ನಾಗಿತ್ತು. ನಾನು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದೇನೆ. ಜೊತೆಗೆ ಕನ್ನಡವನ್ನೂ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನಾನು ಸಿನಿಮಾ ಕುಟುಂಬದಿಂದ ಬಂದಿಲ್ಲ. ನನ್ನ ಕುಟುಂಬಕ್ಕೆ ಸಿನಿಮಾ ರಂಗ ಹೊಸತು. ಆದರೂ ನನ್ನ ಕುಟುಂಬದವರು ನನ್ನ ಈ ಆಯ್ಕೆಗೆ ತುಂಬ ಸಂತೋಷ ಹೊಂದಿದ್ದಾರೆ ಎಂದು ಇಶಿತಾ ನುಡಿದರು.

ಲೇಖಾ ವಾಷಿಂಗ್ಟನ್ ಮಾಜಿ ಐಪಿಎಲ್ ನಿರೂಪಕಿ. ಈಗ ಸದ್ಯ ಅಂಡಮಾನ್ ನಿಕೋಬಾರ್‌ನಲ್ಲಿ ವೀಟರ್ ಗಯಾ ಕಾಮ್ ಸೇ ಎಂಬ ಹಿಂದಿ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾಳೆ. ಜೊತೆಗೆ ಕನ್ನಡ ತುಂಟ ತುಂಟಿಗೂ ಒಕೆ ಅಂದಿದ್ದಾಳೆ. ಆದರೂ ತುಂಟ ತುಂಟಿಯ ಬಗ್ಗೆ ಚಕಾರವೆತ್ತದೆ ತುಟಿಪಿಟಿಕ್ಕೆನ್ನದೆ ಕೂತಿದ್ದಾಳೆ. ಕೇಳಿದರೆ, ಈಗ ಚಿತ್ರದ ಬಗ್ಗೆ ಮಾತಾಡುವ ಹಕ್ಕು ನನಗಿಲ್ಲ. ಮಾತಾಡುವ ಅವಕಾಶ ಸೃಷ್ಟಿಯಾದಾಗ ಮಾತಾಡುತ್ತೇನೆ ಎನ್ನುತ್ತಾಳೆ ಈ ಬೆಡಗಿ.

ಈಗಷ್ಟೇ ತೆಲುಗು ಚಿತ್ರ 'ವೇದಂ'ನಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿದ್ದಾಳೆ. ನನ್ನ ತೆಲುಗು ಚಿತ್ರ ಒಂದು ಉತ್ತಮ ಪ್ರಾಜೆಕ್ಟ್. ಇದೀಗ ಕನ್ನಡ ಚಿತ್ರದಲ್ಲೂ ಅವಕಾಶ ಬಂದಿದೆ. ಹಿಂದಿಯಲ್ಲೂ ನಟಿಸುತ್ತಿದ್ದೇನೆ. ಐಪಿಎಲ್‌ನಲ್ಲಿ ಆಂಕರ್ (ನಿರೂಪಕಿ) ಆಗಿ ಕೆಲಸ ಮಾಡಿದ ನಂತರ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸೃಷ್ಟಿಯಾಯಿತು. ಸಿನಿಮಾದ ಹಿನ್ನೆಲೆ ಇಲ್ಲದ, ದಕ್ಷಿಣದ ಮಂದಿಗೆ ಬಾಲಿವುಡ್‌ಗೆ ಎಂಟ್ರಿಯಾಗೋದು ತುಂಬ ಕಷ್ಟ ಎನ್ನುತ್ತಾಳೆ ಈ ಬೆಡಗಿ ಲೇಖಾ.

CHAYASINGH


CHAYA SINGH






ಭರ್ಜರಿ ಸಾಹಸದಲ್ಲಿ ಮಿಂದೇಳಲಿದೆ ವಿಜಯ್‌ರ 'ಕಂಠೀರವ'

ಅದು ಅಂತಿಂಥ ಫೈಟ್ ಅಲ್ಲ. ಭರ್ಜರಿ ಫೈಟ್. ಕುಸ್ತಿಯಿಂದ ಆರಂಭವಾಗುವ ಇದು ಮಾರ್ಷಲ್ ಆರ್ಟ್ಸ್‌ನಲ್ಲಿ ಅಂತ್ಯಗೊಳ್ಳುವುದೇ ಕಂಠೀರವ ಚಿತ್ರದ ವಿಶೇಷ.

ಹೌದು. ವಿಜಯ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರ ಸಾಹಸದಲ್ಲಿ ಒಂದು ಹೊಸ ಮೈಲುಗಲ್ಲನೇ ಸೃಷ್ಟಿಸಲಿದೆ ಎಂದು ಹೇಳುತ್ತಿದೆ ಚಿತ್ರತಂಡ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಹೇಳಿ ಕೇಳಿ, ಈ ಚಿತ್ರದ ನಿರ್ಮಾಪಕರು ರಾಮು. ಅವರ ಚಿತ್ರಗಳಲ್ಲಿ ಸಾಹಸ, ಅದ್ದೂರಿತನಕ್ಕೆ ಕಡಿಮೆಯೇ ಇಲ್ಲ. ಜೊತೆಗೆ ಇನ್ನ ಹೆಚ್ಚಿನ ವಿಶೇಷವೆಂದರೆ, ಇದು ಕಂಠೀರವ ಚಿತ್ರ. ಮೈಸೂರಿನ ಅರಸ ರಣಧೀರ ಕಂಠೀರವ ಕುಸ್ತಿ ಪಟು. ಜೊತೆಗೆ ಕುಸ್ತಿ ನಮ್ಮ ಮಣ್ಣಿನ ಕ್ರೀಡೆ ಎಂಬ ಕಾರಣಕ್ಕೆ ಈ ಫೈಟ್ ಅನ್ನು ಕುಸ್ತಿ ಮೂಲಕವೇ ಆರಂಭಿಸಲಾಗುವುದು ಎನ್ನುತ್ತಾರೆ ವಿಜಯ್.

ವಿಜಯ್‌ಗೆ ಇಲ್ಲಿ ಇಬ್ಬರು ನಾಯಕಿಯರು. ರಿಷಿಕಾ ಮತ್ತು ಶುಭಾ ಪೂಂಜಾ. ರಿಷಿಕಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳು. ನಟ ಆದಿತ್ಯರ ತಂಗಿ. ಅವರಿಗಿಲ್ಲಿ ತುಂಟತನದ, ಹೆಚ್ಚು ಮಾತನಾಡುವ ಪಾತ್ರ. ಅಂದ ಹಾಗೆ ಶುಭಾ ಪೂಂಜಾಗೆ ನಾಲ್ಕನೇ ಬಾರಿ ವಿಜಯ್ ಜೋಡಿಯಾದ ಖುಷಿ. ಈ ಚಿತ್ರದಲ್ಲಿ ಅವರಿಗೆ ಮಾನಸಿಕ ಅಸ್ವಸ್ಥೆಯ ಪಾತ್ರ!

ಈ ಚಿತ್ರವನ್ನು ತುಷಾರ್ ರಂಗನಾಥ್ ನಿರ್ದೇಶಿಸುತ್ತಿದ್ದಾರೆ. ವಿಜಯ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡರಂತೆ. ಇದು ತೆಲುಗಿನ ಸಿಂಹಾದ್ರಿ ಚಿತ್ರದ ರಿಮೇಕ್. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಕೂಡ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ತುಷಾರ್.
ಭರದಿಂದ ಸಾಗುತ್ತಿದೆ ದರ್ಶನ್ ಅವರ 'ಶೌರ್ಯ'!
ದರ್ಶನ್ ನಾಯಕನಾಗಿ ನಟಿಸುತ್ತಿರುವ ಶೌರ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸಧ್ಯದಲ್ಲಿಯೇ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ.

ಚಿತ್ರದಲ್ಲಿ ಮೂರು ಹಾಡುಗಳಿವೆ. ಇದರಲ್ಲಿ ಒಂದು ಗೀತೆ ಭಾರತದ ಪ್ರಸಿದ್ಧ ಪ್ರವಾಸಿ ತಾಣ ಕುಲು ಹಾಗೂ ಮನಾಲಿಯ ಚುಮುಚುಮು ಚಳಿಯಲ್ಲಿ ಚಿತ್ರೀಕರಣಗೊಳ್ಳಲಿದ್ದು, ಮತ್ತೆರಡು ಗೀತೆಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಕಮ್ ಸಂಗೀತ ನಿರ್ದೇಶಕರಾಗಿರುವ ಸಾಧುಕೋಕಿಲಾ ಅಭಿಪ್ರಾಯ.

ಚಿತ್ರಕ್ಕೆ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. ನಾಯಕಿಯಾಗಿ ರೀಮಾ ವರ್ಮ ಅಭಿನಯಿಸುತ್ತಿದ್ದಾರೆ. ಮುಮೈತಾ ಖಾನ್ ಅವರ ಬೆಡಗು ಬಿನ್ನಾಣವೂ ಇದೆ. ಪ್ರೇಕ್ಷಕರನ್ನು ನಗಿಸಲು ಬುಲೆಟ್ ಪ್ರಕಾಶ್ ಹಾಸ್ಯನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಶೀಘ್ರದಲ್ಲಿ ಚಿತ್ರ ಬಿಡುಗಡೆಗೆ ಚಿತ್ರತಂಡ ಸಜ್ಜುಗೊಳ್ಳುತ್ತಿದೆ.
ಸಿನಿಮಾಕ್ಕೆ ಅಗತ್ಯವಿದ್ದರೆ ಬಿಚ್ಚಲು ಸಿದ್ಧ: ಶೀನಾ ಶಹಬಾದಿ!
ಹಾಲಿವುಡ್ ಸಿನಿಮಾಗಳಲ್ಲಿ ಬಿಚ್ಚುವುದು, ಮುತ್ತಿಕ್ಕುವುದು ಎಲ್ಲಾ ಚಿತ್ರದ ಅವಿಭಾಜ್ಯ ಅಂಗ. ಆದರಿದು ಇತ್ತೀಚಿನ ಕೆಲವು ವರ್ಷಗಳಿಂದ ಬಾಲಿವುಡ್‌ನಲ್ಲೂ ಕಾಮನ್ ಎನ್ನಿಸುವಷ್ಟರ ಮಟ್ಟಿಗೆ ನಡೆಯುತ್ತಿದೆ. ಜೊತೆಗೆ ನಿಧಾನವಾಗಿ ದಕ್ಷಿಣ ಭಾರತೀಯ ಚಿತ್ರಗಳತ್ತಲೂ ಪ್ರಭಾವ ಬೀರುತ್ತಿದೆ. ಹೊಸದಾಗಿ ಪಾದಾರ್ಪಣೆ ಮಾಡುವ ಬೆಡಗಿಯರೂ ಕೂಡಾ ಇಂಥದ್ದಕ್ಕೆಲ್ಲ ರೆಡಿಯಾಗೇ ಬಂದಿರುತ್ತಾರೆ. ಈಗ ಇಂಥದ್ದಕ್ಕೆಲ್ಲ ತಯಾರಾಗಿರೋದು ಶೀನಾ ಶಹಬಾದಿ!

ಬಾಲಿವುಡ್‌ನಲ್ಲಿ ತೇರೇ ಸಂಗ್ ಎಂಬ ಚಿತ್ರದಲ್ಲಿ ನಟಿಸಿದ ಈಕೆ ಹಿರಿಯ ನಟಿ ಸಾಧನಾ ಸಿಂಗ್ ಅಂವರ ಮಗಳು. ತೆಲುಗಿನಲ್ಲೂ ಇತ್ತೀಚೆಗೆ ಬಿಂದಾಸ್ ಎಂಬ ಚಿತ್ರದಲ್ಲಿ ನಟಿಸಿ ಪಡ್ಡೆಗಳ ಹೃದಯ ಕೊಳ್ಳೆಹೊಡೆದಿದ್ದಳು. ಇದೀಗ ರಾಜಧಾನಿ ಎಂಬ ಕನ್ನಡ ಚಿತ್ರದಲ್ಲಿ ಯಶ್‌ಗೆ ಜೋಡಿಯಾಗಿ ನಟಿಸಲು ಬೆಂಗಳೂರಿಗೆ ಬಂದಿದ್ದಾಳೆ.

ಚಿತ್ರದ ಪಾತ್ರಕ್ಕೆ ಅಗತ್ಯವಿದ್ದರೆ ಖಂಡಿತಾ ನಾನು ಬಿಚ್ಚುವುದಕ್ಕೆ ಸಿದ್ಧ. ಬಿಚ್ಚಲು ನನಗೇನೂ ಮುಜುಗರವಿಲ್ಲ. ಆದರೆ ಅಗತ್ಯವಿದ್ದರೆ ಮಾತ್ರ ಬಿಚ್ಚುವ ನಿರ್ಧಾರ ಕೈಗೊಳ್ಳುತ್ತೇನೆ ಎನ್ನುತ್ತಾಳೆ ಶೀನಾ.

ನೋಡಲು ಇನ್ನೂ ಪುಟ್ಟ ಹುಡುಗಿಯಂತೆ ಕಾಣುವ ಶೀನಾಗೆ ಮದುವೆಯೂ ಆಗಿದೆ. ಆದರೆ ಅಷ್ಟೇ ಬೇಗ ವಿಚ್ಛೇದನವೂ ಆಗಿದೆ. ಅದಾದ ಮೇಲೆ ಚಿತ್ರದಲ್ಲಿ ನಟಿಸಲು ಚಿತ್ರರಂಗದ ಅಂಗಳಕ್ಕೆ ಇಳಿದಿದ್ದಾಳೆ. ಇತ್ತೀಚೆಗಷ್ಟೇ ಆಕೆಯ ಮಾಜಿ ಗಂಡ ಆಕೆಯ ಜೊತೆಗೆ ತಾನಿದ್ದಾಗ ತೆಗೆದಿದ್ದ ಕೆಲವು ಹಸಿಬಿಸಿ ಫೋಟೋಗಳನ್ನು ಇಂಟರ್‌ನೆಟ್‌ಗೆ ಹರಿಯಲು ಬಿಟ್ಟಿದ್ದ. ಇದು ಭಾರೀ ಸುದ್ದಿ ಮಾಡಿತ್ತು. ಇದಕ್ಕೆಲ್ಲ ಹೆದರದಿರುವ ಈ ಬೆಡಗಿ, ತಾನೀಗ ಚಿತ್ರರಂಗದಲ್ಲಿ ಮಿಂಚುತ್ತಿರುವು ನೋಡಿ ಆತನಿಗೆ ಹೊಟ್ಟೆಕಿಚ್ಚಾಗುತ್ತಿದೆ. ಅದಕ್ಕೇ ಆತ ಹೀಗೆಲ್ಲಾ ಮಾಡಿ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ದೂರಿದ್ದಳು. ಸದ್ಯಕ್ಕೆ ಕನ್ನಡ ಚಿತ್ರದಲ್ಲಿ ಬ್ಯುಸಿಯಾಗಿರುವ ಶೀನಾ ಚಿತ್ರರಂಗದಲ್ಲಿ ಬೆಳೆಯಲು ಕನಸು ಕಾಣುತ್ತಿದ್ದಾಳೆ.

ಹಾಡುಗಳ ಹರಿಕಾರ ಗೀತಪ್ರಿಯ ಹಿನ್ನೋಟ

ಕನ್ನಡ ಚಲನಚಿತ್ರರಂಗದ ಪ್ರಮುಖ ಗೀತರಚನಕಾರ ಹಾಗೂ ನಿರ್ದೇಶಕರ ಸಾಲಿಗೆ ಸೇರುವ ಮತ್ತೊಂದು ಹೆಸರು ಗೀತಪ್ರಿಯ. ಇವರ ನಿಜವಾದ ಹೆಸರು ಲಕ್ಷ್ಮಣರಾವ್ ಮೋಹಿತೆ.ಬಾಲ್ಯಮಿತ್ರ ವಿಜಯಭಾಸ್ಕರ್ ಸಹಾಯದಿಂದ 1955ರಲ್ಲಿ 'ಶ್ರೀರಾಮಪೂಜಾ' ಚಲನಚಿತ್ರಕ್ಕೆ ಗೀತೆ ಬರೆಯುವ ಅವಕಾಶ ದೊರಕಿತು. ವಿಜಯ ಭಾಸ್ಕರ್ ಅವರೆ ಇವರಿಗೆ ಗೀತಪ್ರಿಯ ಎಂದು ನಾಮಕರಣ ಮಾಡಿದರು.

ಇಷ್ಟೆಲ್ಲಾ ಪೀಠಿಕೆಗೆ ಕಾರಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುವ ವಿಭಿನ್ನ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ' ಯಲ್ಲಿ ಗೀತಪ್ರಿಯ ಅವರನ್ನು ಭೇಟಿಯಾಗಬಹುದು. ಏಪ್ರಿಲ್ 10ರಂದು ಸಂಜೆ 4.30ಕ್ಕೆ ಬಾದಾಮಿ ಹೌಸ್ ನಲ್ಲಿ ಗೀತಪ್ರಿಯ ಜೊತೆ ಹಿನ್ನೋಟಕ್ಕೆ ಹೊರಳಬಹುದು.

ಬೆಸುಗೆ ಬೆಸುಗೆ ಜೀವನವೆಲ್ಲಾ ಸುಂದರ ಬೆಸುಗೆ, ನಮ್ಮೂರ್ನಾಗ್ ನಾನೊಬ್ಬನೆ ಜಾಣ, ಇದೇನ ಸಭ್ಯತೆ,ಇದೇನ ಸಂಸ್ಕೃತಿ, ಹಕ್ಕಿಯು ಹಾರುತಿದೆ, ವೀಣಾ ನಿನಗೇಕೋ ಈ ಕಂಪನ...ಹಾಡುಗಳನ್ನು ಕೇಳಿದಾಗಲೆಲ್ಲಾ ಅವರು ಕೇವಲ ಗೀತಪ್ರಿಯರಷ್ಟೆ ಅಲ್ಲ ಸಂಗೀತ ಪ್ರಿಯರು ಎಂಬುದು ಮನದಟ್ಟಾಗುತ್ತದೆ. ಒಂದೇ ಬಳ್ಳಿಯ ಹೂಗಳು, ಬೆಟ್ಟದ ಹುಲಿ, ಹೊಂಬಿಸಿಲು ಸೇರಿದಂತೆ ಮುವ್ವತ್ತು ಅರ್ಥಪೂರ್ಣ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕರು ಗೀತಪ್ರಿಯ.

ಗೀತಪ್ರಿಯ ನಿರ್ದೇಶನದ 'ಮಣ್ಣಿನ ಮಗ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಗೀತಪ್ರಿಯ ನಲವತ್ತೈದು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಬೆಳುವಲದ ಮಡಿಲಲ್ಲಿ, ಪುಟಾಣಿ ಏಜೆಂಟ್ 123, ಪ್ರೀತಿಸಿ ನೋಡು, ಬೆಸುಗೆ, ಹೊಂಬಿಸಿಲು ಚಿತ್ರಗಳು ಗೀತಪ್ರಿಯ ಅವರ ಪ್ರೌಢ ನಿರ್ದೇಶನಕ್ಕೆ ಕನ್ನಡಿ ಹಿಡಿಯುತ್ತವೆ.

ಮಾಜಿ ಪ್ರೇಮಿ ವಿರುದ್ಧ ರಾಖಿ ಕುಣಿತ ಸಮರ



ಬಾಲಿವುಡ್ ನ ಐಟಂಗರ್ಲ್, ವಿವಾದಗಳ ರಾಣಿ ರಾಖಿ ಸಾವಂತ್ ಮತ್ತೆ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯಲು ಸಜ್ಜಾಗಿದ್ದಾರೆ. ಸ್ಟಾರ್ ಪ್ಲಸ್ ನ ರಿಯಾಲಿಟಿ ಷೋ' ಜರಾ ನಚ್ಕೆ ದಿಖಾ' ದಲ್ಲಿ ಕುಣಿಯಲು ರಾಖಿ ಮನಸ್ಸು ಮಾಡಿದ್ದಾರೆ. ರಾಖಿ ಸ್ಪರ್ಧಿಗಿಳಿಯುತ್ತಿರುವುದು ತನ್ನ ಮಾಜಿ ಪ್ರೇಮಿ ಅಭಿಷೇಕ್ ಅವಸ್ಥಿ ವಿರುದ್ಧ ಎಂಬುದು ಇಲ್ಲಿ ವಿಶೇಷ.

ಅಭಿಷೇಕ್ ಕೂಡ ಸ್ಪರ್ಧಿಯಾಗಿದ್ದಾನೆ ಈ ಬಗ್ಗೆ ಏನು ಹೇಳ್ತೀರಾ ಎಂದು ಕೇಳಿದರೆ, 'ಅಭಿಷೇಕ್ ಅವಸ್ಥಿಯಾಗಲಿ, ಅಮೀರ್ ಖಾನ್, ಶಾರುಖ್ ಖಾನ್ ಆಗಲಿ ನಾನು ಕೇರ್ ಮಾಡುವುದಿಲ್ಲ, ಸ್ಪರ್ಧಿಗಿಳಿದ ಮೇಲೆ ಎಲ್ಲರೂ ಒಂದೇ. ಇಲ್ಲಿ ಗೆಲುವು ನಮಗೆ ಖಚಿತ' ಎಂಬ ಬಿಂದಾಸ್ ಮಾತುಗಳನ್ನಾಡಿದರು ರಾಖಿ.

ಸುಮಾರು 9 ವಾರಗಳ ಕಾಲ ನಡೆಯುವ ಈ ಬಾಯ್ಸ್ V/s ಗರ್ಲ್ಸ್ ಡಾನ್ಸ್ ಸಮರದಲ್ಲಿ ಕಿರುತೆರೆಯ ಪ್ರಸಿದ್ಧ ತಾರೆಗಳ ದಂಡೆ ಇದೆ. ರಾಖಿ ಅಲ್ಲದೆ, ಅದಿತಿ ಗುಪ್ತಾ, ಹಜೆಲ್ ಕ್ರೋನಿ, ಕೃತಿಕಾ ಕಾಮ್ರಾ, ಮುಕ್ತಿ ಮೋಹನ್, ರಷ್ಮಿ ದೇಸಾಯಿ, ಸಂಗೀತಾ ಘೋಷ್, ಸಂಜೀದಾ ಶೇಖ್ , ಸಪರ್ಶ್ ಕಂಚಂನ್ ದಾನಿ ಮತ್ತಿತ್ತರಿದ್ದಾರೆ. ಇವರಿಗೆ ಟಾಂಗ್ ಕೊಡಲು ಅಭಿಷೇಕ್ ಅವಸ್ತಿ ಅಲ್ಲದೆ ಕರಣ್ ಕುಂದ್ರಾ, ಸಿದ್ದೇಶ್ ಪೈ, ಸುಶಾಂತ್ ಮುಂತಾದವರು ಭಾಗವಹಿಸಲಿದ್ದಾರೆ.

ವಿ ಮನೋಹರ್ ಕನಸಿನ ಕೂಸು 'ಭೂಮಿ ಗೀತ

ಚಿತ್ರಸಾಹಿತಿ, ಸಂಗೀತ ನಿರ್ದೇಶಕ ವಿ. ಮನೋಹರ್ ಮೊದಲಿನಿಂದಲೂ ಜಾನಪದ ಕಲೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದಾರೆ. ಜಾನಪದ ಕಲೆಯನ್ನು ಇನ್ನೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬುಡಕಟ್ಟು ಜನರ ಹಾಡುಗಾರಿಕೆ, ಕಲೆಯ ಬಗ್ಗೆ ಅಧ್ಯಯನ ಮಾಡಲು ಸಜ್ಜಾಗಿದ್ದಾರೆ. ಅದಕ್ಕಾಗಿ 'ಭೂಮಿ ಗೀತ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಕುರಿತು ಕೆಲ ವಿವರಣೆಗಳನ್ನು ವಿ ಮನೋಹರ್ ನೀಡಿದ್ದಾರೆ.

ಬಾಲ್ಯದಲ್ಲಿ ಕೋಲಾಟದ ದಲಿತರ ಒಂದು ಹಾಡನ್ನು (ಕಥನ ಗೀತೆ) ಕೇಳಿದ್ದೆ. ಅದರ ಒಂದು ಸಾಲು ಮಾತ್ರ ನನಗೆ ನೆನಪಿತ್ತು. ನಾನು ಮತ್ತೆ 5 ವರ್ಷದ ನಂತರ ಅದನ್ನು ಹುಡುಕಿಕೊಂಡು ಹೋದಾಗ ಆ ಹಾಡೂ ಇರಲಿಲ್ಲ. ಅದನ್ನು ಹಾಡುವವರೂ ಇರಲಿಲ್ಲ. ಆ ಹಾಡನ್ನು ಹಾಡಿದರೆ ನಮ್ಮನ್ನು ಕೀಳುಜಾತಿಯವರೆಂದು ನಿರ್ಲಕ್ಷಿಸುತ್ತಾರೆ ಎಂದು ಆ ದಲಿತ ಬುಡಕಟ್ಟು ಜನಾಂಗದವರು ಆ ಹಾಡು ಹಾಡುವುದನ್ನು ಬಿಟ್ಟುಬಿಟ್ಟರು.

ಆ ರೀತಿಯ ಪ್ರದರ್ಶನ ಕೀಳರಿಮೆಯ ಕಾರಣದಿಂದ ನಾಶವಾಗುತ್ತ ಹೋಗುತ್ತದೆ. ಆ ಕಲೆಯನ್ನು ಉಳಿಸಿಕೊಂಡವರನ್ನು ಪ್ರೋತ್ಸಾಹಿಸಿ ಪುನಃ ಬೆಳೆಸಿ ಉಳಿಸಲು ನಮ್ಮ ಸಂಸ್ಥೆಯಿಂದ ಪ್ರಯತ್ನಿಸುತ್ತೇನೆ. ಸಂಗೀತ ನಿರ್ದೇಶಕ ಹಂಸಲೇಖ ಅವರು ನನ್ನ ಸ್ಟುಡಿಯೋದಲ್ಲಿ ಅವರನ್ನು ಕರೆಸಿ ಹಾಡಿಸಿ ಎಂದುನಮಗೆ ಬೆಂಬಲ ಸೂಚಿಸಿದ್ದಾರೆ.

ಸೋಲಿಗರು, ಹಕ್ಕಿ-ಪಿಕ್ಕಿ ವಂಶಜರು ಎಲ್ಲಾ ಸೇರಿ ಹೀಗೆ 45 ರೀತಿಯ ಕೈ-ಕಸುಬುದಾರರಿದ್ದಾರೆ. ಅಂಥವರೆಲ್ಲರ ಸಾಂಸ್ಕೃತಿಕ ಕಲೆಯನ್ನು ಪುನರುಜ್ಜೀವನಗೊಳಿಸಲು ಭೂಮಿಗೀತ ಪ್ರಯತ್ನಿಸುತ್ತದೆ ಎಂದು ತಮ್ಮ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿ. ಮನೋಹರ ವಿವರಿಸಿದರು.ಹೆಸರಾಂತ ಜನಪದ ಕಲಾವಿದ ಮೈಸೂರು ಜನ್ನಿ ಮಾತನಾಡಿ ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯನ್ನು ನಾವು ನಿಕೃಷ್ಟವಾಗಿ ಕಾಣುತ್ತಿದ್ದೇವೆ. ಅದನ್ನು ಮತ್ತೆ ಜೀವಂತವಾಗಿರಿಸಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ, ಬೆಂಬಲ ಕೂಡ ಅತ್ಯಗತ್ಯವಾಗಿದೆ ಎಂದರು.

ಕುಶಾಲನಗರದಲ್ಲಿ ಪುನೀತ್ 'ಜಾki

ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ಡಾ.ರಾಜ್ [^]‌ಕುಮಾರ್ ಅರ್ಪಿಸಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ 'ಜಾಕಿ'. ಈ ಚಿತ್ರದ ಚಿತ್ರೀಕರಣವು ಏಪ್ರಿಲ್ 4 ರಿಂದ ಕುಶಾಲನಗರದಲ್ಲಿ ಮುಂದುವರೆದಿದೆ.ಚಿತ್ರಕ್ಕಾಗಿ 19 ದಿನಗಳ ಕಾಲ ಪುನೀತ್-ಭಾವನಾ ಮತ್ತಿತರರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಬೆಂಗಳೂರಿನ ಸುತ್ತಮುತ್ತ ಸತ್ಯ ಹೆಗ್ಡೆ ಛಾಯಾಗ್ರಹಣದಲ್ಲಿ ನಿರ್ದೇಶಕ ಸೂರಿ ಚಿತ್ರಿಸಿಕೊಂಡರು.

ಹತ್ತು ದಿನಗಳ ಕಾಲ ಕುಶಾಲನಗರ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು ನಂತರ ಮೈಸೂರಿನಲ್ಲಿ ಚಿತ್ರೀಕರಣ ಮುಂದುವರೆಯಲಿದೆ ಎಂದು ನಟ-ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ.ಚಿತ್ರಕ್ಕೆ ಯೋಗರಾಜ್ ಆರ್. ಭಟ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯ, ಸತ್ಯ ಹೆಗ್ಡೆ ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಶಶಿಧರ ಅಡಪ ಕಲೆ, ಇಮ್ರಾನ್ ನೃತ್ಯ, ರವಿವರ್ಮ- ಡಿಫರೆಂಟ್ ಡ್ಯಾನಿ ಸಾಹಸ, ಮಲ್ಲಿಕಾರ್ಜುನ ನಿರ್ಮಾಣ ಮೇಲ್ವಿಚಾರಣೆ ಇದೆ.

ಕಥೆ- ಚಿತ್ರಕಥೆ- ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಸೂರಿ ಹೊತ್ತಿದ್ದಾರೆ.ತಾರಾಗಣದಲ್ಲಿ ಪುನೀತ್ ರಾಜ್ ಕುಮಾರ್ ಜೋಡಿಯಾಗಿ ಚತುರ್ಭಾಷಾ ತಾರೆ ಭಾವನಾ ಕಾಣಿಸಿಕೊಳ್ಳುತ್ತಿದ್ದು, ರಂಗಾಯಣ ರಘು, ರವಿ ಕಾಳೆ, ಶೋಭರಾಜ್, ಸಂಪತ್, ಉಮೇಶ್ ಮುಂತಾದವರಿದ್ದಾರೆ