![](https://blogger.googleusercontent.com/img/b/R29vZ2xl/AVvXsEj6QDaVI9xBdMBF7Xv5gBcnsKshIoL5shPoRoeQP6QiWZR9UgWuzoxlWdJlfe_Ret6MP68t4O8C_Q0Mi55mspyb5JXhoweqBkc4fOtRP7igN4HKJl_7dkagv4LwTZGMprtDENd8K_G_C7Lu/s400/img1091105081_1_1.jpg)
ಗಣೇಶ್ ಈಸ್ ಗ್ರೇಟ್ ಆಕ್ಟರ್: ಮನಸಾರೆ ಚಿತ್ರದಲ್ಲಿ ದಿಗಂತ್ ಪಾತ್ರವನ್ನು ಗಣೇಶ್ ಪಾತ್ರಕ್ಕೆ ಎಲ್ಲರೂ ಹೋಲಿಸುತ್ತಿದ್ದಾರಲ್ಲಾ? ಎಂದರೆ, ''ಗಣೇಶ್ ಒಬ್ಬ ಗ್ರೇಟ್ ನಟ. ದಿಗಂತ್ ಕೂಡಾ ಉತ್ತಮ ನಟನೇ. ಇಬ್ಬರಿಗೂ ಅವರದ್ದೇ ಆದ ನಟನಾ ತಾಕತ್ತಿದೆ, ಪ್ರತಿಭೆಯಿದೆ. ಇವರಿಬ್ಬರನ್ನೂ ಹೋಲಿಸುವುದು ಸ್ವಾಭಾವಿಕ, ಯಾಕೆಂದರೆ ಇಬ್ಬರೂ ಒಂದೇ ನಿರ್ದೇಶಕನ ಜೊತೆಗೆ ಕೆಲಸ ಮಾಡಿದವರಲ್ಲವೇ'' ಎನ್ನುತ್ತಾರೆ ಭಟ್.ಹಾಗಾದರೆ ಈ ಬಾರಿ ಮನಸಾರೆ ಮೂಲಕ ಗಣೇಶ್ ಅವರನ್ನು ಈ ಬಾರಿ ಮಿಸ್ ಮಾಡಿಕೊಂಡಂತೆ ಅನಿಸುತ್ತಿಲ್ಲವಾ? ಎಂದರೆ ಅದಕ್ಕೂ ಯೋಗರಾಜ್ ಭಟ್ ಬಳಿ ಸಿದ್ಧ ಉತ್ತರವಿದೆ. ''ಚಿತ್ರಕಥೆ ಬರೆದು ಗಣೇಶ್ ಜೊತೆಗೆ ಚಿತ್ರಕ್ಕೆ ತಯಾರಿ ಮಾಡೋದೇ ಒಂಥರಾ ಖುಷಿ, ಮಜಾ. ಆದರೂ ಮನಸಾರೆ ಚಿತ್ರಕ್ಕೆ ನನ್ನ ಆಯ್ಕೆ ದಿಗಂತ್ ಆಗಿದ್ದರು. ಗಣೇಶ್ ಅಲ್ಲ. ಹಾಗಾಗಿ ನಾನು ಗಣೇಶ್ ಅವರನ್ನು ಮಿಸ್ ಮಾಡಿಕೊಂಡೆ ಅನಿಸಿಲ್ಲ. ಆದರೆ ಮನಸಾರೆಯ ಯಶಸ್ಸು ಮುಂಗಾರು ಮಳೆಯ ಪರ್ವಕಾಲದಿಂದ ನನಗೆ ಮುಕ್ತಿ ಕರುಣಿಸಿದೆ. ಮನಸಾರೆಯನ್ನು ಗಣೇಶ್ ಜೊತೆಗೆ ಕೂತು ವೀಕ್ಷಿಸಬೇಕು ಹಾಗೂ ಆತನ ಮುಖದಲ್ಲಿ ಪ್ರತಿಕ್ರಿಯೆಯನ್ನು ನೋಡಬೇಕು ಎಂಬ ಆಸೆಯಿದೆ. ಗಣೇಶ್ನನ್ನು ನಾನು ತುಂಬ ಗೌರವಿಸುತ್ತೇನೆ'' .
ಮನಸಾರೆಯಿಂದ ಯದ್ವಾತದ್ವಾ ಖುಷಿ: ಮನಸಾರೆಗೆ ಸಿಕ್ಕಾಪಟ್ಟೆ ಉತ್ತಮ ಪ್ರತಿಕ್ರಿಯೆ ಕಂಡು ಸ್ವತಃ ಯೋಗರಾಜ ಭಟ್ಟರು ಥ್ರಿಲ್ಲಾಗಿದ್ದಾರಂತೆ. ''ಕರ್ನಾಟಕದೆಲ್ಲೆಡೆ ಐಂದ್ರಿತಾ, ದಿಗಂತ್ ಹಾಗು ಇತರ ನಟರ ಜೊತೆಗೆ ಸುತ್ತಿದ್ದೇನೆ. ಜನರ ಪ್ರತಿಕ್ರಿಯೆ ಕಂಡು ಆಶ್ಚರ್ಯವಾಯಿತು. ನಾನೇ ಸ್ವತಃ ಇಂಥ ಯಶಸ್ಸನ್ನು ನಿರೀಕ್ಷಿಸಿರಲಿಲ್ಲ'' ಎನ್ನುತ್ತಾರೆ.''ಮುಂಗಾರು ಮಳೆಯ ನಂತರ ಬಹಳಷ್ಟು ಮಂದಿ ತಾವೂ ತಮ್ಮ ಸಿನಿಮಾದಲ್ಲಿ ಮುಂಗಾರು ಮಳೆಯಂತೆಯೇ ಮಾಡಹೊರಟರು. ನನ್ನ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಮಾತಾಡಿಕೊಂಡರು. ಆದರೆ ಜನರು ನನ್ನ ಕೈಬಿಡಲಿಲ್ಲ. ನನ್ನ ಸಿನಿಮಾಗಳ ಬಗ್ಗೆ ಜನರು ಒಂದು ನಂಬಿಕೆಯಿಟ್ಟುಕೊಂಡಿದ್ದಾರೆ. ಮನಸಾರೆಯ ಈ ಯಶಸ್ಸು ಹಲವು ಮಂದಿಯ ಬಾಯಿಗೆ ಬೀಗ ಜಡಿದಂತಾಗಿದೆ'' ಎಂದು ಯೋಗರಾಜ ಭಟ್ಟರು ಹೇಳುತ್ತಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ