ಶುಕ್ರವಾರ, ಸೆಪ್ಟೆಂಬರ್ 10, 2010

ಉದ್ಯೋಗ ಖಾತ್ರಿ ಅಕ್ರಮ: ಅಧಿಕಾರಿಗಳ ಅಮಾನತ್ತಿಗೆ ಸ್ವಾಗತ

ಸೋಮನಹಳ್ಳಿಗೆ ನೂತನ ಸಾರಿಗೆ ಮಾರ್ಗಕ್ಕೆ ನಿಶಾನೆ
ಅರಕಲಗೂಡು: ತಾಲೂಕಿನ ಸೋಮನಹಳ್ಳಿ ಗ್ರಾಮಕ್ಕೆ ನೂತನ ಸಾರಿಗೆ ಸಂಪರ್ಕ ವ್ಯವಸ್ಥೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್ ಮಾದೇಶ್ ಶನಿವಾರ ಚಾಲನೆ ನೀಡಿದರು.ಸೋಮನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮೀಣ ಭಾಗದ ಅಭಿವೃದ್ದಿಗೆ ಸಂಪರ್ಕ ವ್ಯವಸ್ಥೆ ಅತ್ಯವಶ್ಯಕವಾಗಿದೆ, ಸರ್ಕಾರ ಹಲವು ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳ ಮೂಲಬೂತ ಸೌಕರ್ಯಾಭಿವೃದ್ದಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕೈಗೊಂಡಿದೆ, ಈ ಹಿಂದಿನ ದಶಕಗಳಿಗಿಂತ ಇತ್ತಿಚಿನ ದಿನಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ ಆದ್ದರಿಂದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಸಹಾಯವಾಗಿದೆ ಮುಖ್ಯವಾಗಿ ರೈತರು, ವಿದ್ಯಾರ್ಥಿಗಳಿಗೆ ಈ ಮಾರ್ಗದ ಪ್ರಯೋಜನವಾಗಲಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅರಕಲಗೂಡು ಡಿಪೋ ವ್ಯವಸ್ಥಾಪಕ ರವೀಂದ್ರ ಮಾತನಾಡಿ ಅರಕಲಗೂಡಿನಿಂದ ಸೋಮನಹಳ್ಳಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ ಬೆಳಿಗ್ಗೆ 8-30ಕ್ಕೆ ಅರಕಲಗೂಡಿನಿಂದ ಹೊರಡಲಿದೆ, ಅದೇ ರೀತಿ ಸಂಜೆ 4-30ಕ್ಕೆ ಮತ್ತೆ ಅದೇ ಮಾರ್ಗವಾಗಿ ಸಂಚರಿಸಲಿದೆ ಎಂದರು. ಈ ಮಾರ್ಗದ ಸಾರಿಗೆ ಸಂಪರ್ಕಕ್ಕಾಗಿ ಕರವೇ ಮುಖಂಡ ತಾಜೀಂ ಪಾಶ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲೆಯ ಹಿರಿಯ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸದ್ದರು, ಇದನ್ನು ಪುರಸ್ಕರಿಸಿದ ಅಧಿಕಾರಿಗಳು ಗೌರಿ-ಗಣೇಶ ಹಬ್ಬದಂದೇ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದ್ದಾರೆ.ಬಸ್ ಗ್ರಾಮಕ್ಕೆ ಬರುತ್ತಿದ್ದಂತೆ ಜನರು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಸಾರಿಗೆ ಸೌಲಭ್ಯದ ಸ್ವಾಗತ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಈರೇಗೌಡ, ಸದಸ್ಯರಾದ ಸುರೇಶ್, ಅನ್ವರ್, ತಾಲೂಕು ಕರವೇ ಗೌರವಾಧ್ಯಕ್ಷ ಕೃಷ್ಣೇಗೌಡ,ಮುಖಂಡರಾದ ಅಜೀಂ ಸಾಬ್, ಸಾದಿಕ್ ಸಾಬ್, ಸಂಚಾರ ನಿಯಂತ್ರಕ ನಿತ್ಯಾನಂದ ಹಾಜರಿದ್ದರು.
ಉದ್ಯೋಗ ಖಾತ್ರಿ ಅಮಾನತ್ತು ಸ್ವಾಗತ
ಅರಕಲಗೂಡು: 'ಉದ್ಯೋಗ ಖಾತ್ರಿ' ಅಕ್ರಮದಲ್ಲಿ ಭಾಗಿಯಾಗಿರುವ ಜಿಲ್ಲಾ ಪಂಚಾಯ್ತಿ ಇಂಜಿನಿಯರುಗಳು ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಅಮಾನತ್ತು ಮಾಡಿರುವ ಸರ್ಕಾರದ ಕ್ರಮವನ್ನು ಭಾರತೀಯ ಜನತಾ ಪಕ್ಷದ ರೈತ ಘಟಕದ ಅಧ್ಯಕ್ಷ ವಸಂತಕುಮಾರ್ ಸ್ವಾಗತಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಧಿಕಾರಿಗಳು ಸ್ವೇಚ್ಚಾಚಾರದಿಂದ ಉದ್ಯೋಗ ಖಾತ್ರಿ ಕೆಲಸವನ್ನು ನಿರ್ವಹಿಸಿದ್ದು ಕೂಲಿಕಾರರಿಗೆ ವಂಚನೆ ಮಾಡಿದ್ದಾರೆ, ನಕಲಿ ಜಾಬ್ ಕಾರ್ಡು, ಎಸ್ಟಿಮೇಟು ಹಾಗೂ ಬಿಲ್ಲುಗಳನ್ನು ತಯಾರಿಸಿ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ಈ ನಿಟ್ಟಿನಲ್ಲಿ ಇಲಾಖೆಯ ಸಚಿವರಾದ ಜಗದೀಶ್ ಶೆಟ್ಟರ್ ಅಕ್ರಮ ಸಾಬಿತಾಗಿರುವುದರಿಂದ ಅಧಿಕಾರಿಗಳನ್ನು ಅಮಾನತ್ತು ಪಡಿಸಿದ್ದಾರೆ, ಇನ್ನೂ ಹಲವು ಮಂದಿ ಇಂಜಿನಿಯರುಗಳು ಮತ್ತು ಪಂಚಾಯ್ತಿ ಕಾರ್ಯದರ್ಶಿಗಳು ಉದ್ಯೋಗ ಖಾತ್ರಿ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ ಅವರುಗಳನ್ನು ಸಹಾ ಅಮಾನತ್ತು ಗೊಳಿಸಿ ಯೋಜನೆಯ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯ ಬೇಕೆಂದು ಮನವಿ ಮಾಡಿರುವ ಅವರು ರಾಜ್ಯ ಸರ್ಕಾರ ಬಡಜನರ ಹಿತಾಸಕ್ತಿಯಿಂದ ಇಂತಹ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ ಅದನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.






ಕಾಮೆಂಟ್‌ಗಳಿಲ್ಲ: