ಭಾನುವಾರ, ಮಾರ್ಚ್ 14, 2010

ಎಚ್ ಎನ್ ನಂಜೇಗೌಡರ ಪುತ್ಥಳಿ ಸ್ಥಾಪನೆಗೆ ನಿರ್ಧಾರ

ಅರಕಲಗೂಡು: ಪಟ್ಟಣದ ಸಮಕಾಲೀನ ಸಮಸ್ಯಗಳು ವಿಚಾರ ಮಂಥನ ಹಾಗೂ ಸ್ಪಂದನೆಗೆ ಅನುವಾಗುವಂತೆ ನಾಗರಿಕ ಹಿತರಕ್ಷಣಾ ವೇದಿಕೆ ಇಂದು ಪಟ್ಟಣದಲ್ಲಿ ಅಸ್ತಿತ್ವಕ್ಕೆ ಬಂದಿದೆ. ತಾಲ್ಲೂಕಿನ ಸಾಂಸ್ಕೃತಿಕ ಪರಂಪರೆ, ಸಾಹಿತ್ಯ-ಸಂಗೀತ, ಸಮಾಜ ಸೇವಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವೇದಿಕೆ ಕೆಲಸ ಮಾಡಲಿದೆ. ಪಟ್ಟಣದ ಪ್ರಮುಖರಾದ ಯೋಗಾರಮೇಶ್, ಅಪ್ಪಾಜಿಗೌಡ ರಾಮಣ್ಣ, ರವಿಕುಮಾರ್,ಪಟ್ಟಣ ಪಂಚಾಯಿತಿ ಅಧ್ಯಕ್ಷ ಲೋಕೇಶ್, ಮಾಜಿ ಜಿ.ಪಂ ಸದಸ್ಯ ಶೆಟ್ಟಿಗೌಡ, ವಕೀಲರಾದ ಜಯಪ್ಪ ಶಾಂತಮ್ಮ, ಅಜೀಂ,ಆಲದಹಳ್ಳಿ ಸುಬ್ಬೇಗೌಡ, ರಮೇಶ್ ವಾಟಾಳ್ , ಕಾಂತರಾಜ್ಮ, ಮತ್ತ್ತಿತರರ ನಾಗರಿಕರು ಸಭೆಯಲ್ಲಿ ಪಾಲ್ಗೊಂಡು ವೇದಿಕೆಯನ್ನು ಅಸ್ತಿತ್ವಕ್ಕೆ ತಂದರು. ಸಭೆಯಲ್ಲಿ ಹಿರಿಯ ರಾಜಕಾರಣಿ ದಿವಂಗತ ಎಚ್ ಎನ್ ನಂಜೇಗೌಡರ ರಾಜಕೀಯ ಮತ್ತು ಸಮಾಜ ಸೇವೆಯನ್ನು ಸ್ಮರಿಸಿಕೊಂಡು ಅವರ ಪುತ್ತಳಿಯನ್ನು ಪಟ್ಟಣದಲ್ಲಿ ಸ್ಥಾಪಿಸುವ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾಯಿತು. ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಯೋಗಾ ರಮೇಶ್ ರನ್ನು ಆಯ್ಕೆ ಮಾಡಲಾಯಿತು.
ಪ್ರವಾಸ: ಪಟ್ಟಣದ ಪೊಟ್ಯಾಟೋ ಕ್ಷಬ್ ಆಶ್ರಯದಲ್ಲಿ ತಾಲ್ಲೂಕಿನ ರೈತರ ತಂಡ ಕೋಕೋ ಬೆಳೆ ಕುರಿತು ತಿಳಿಯಲು ಪುತ್ತೂರಿಗೆ ಪ್ರವಾಸ ಕೈಗೊಂಡಿತು.ಈ ಸಂಧರ್ಭದಲ್ಲಿ ಮಾತನಾಡಿದ ಪೊಟ್ಯಾಟೋ ಕ್ಲಬ್ ನ ಸಂಚಾಲಕ ಯೋಗಾರಮೇಶ್ ತೋಟಗಾರಿಕ ಬೆಳೆಯಾಗಿ ಬೆಳೆಯುವ ಕೋಕೋ, ತೆಂಗು ಹಾಗೂ ಅಡಿಕೆ ಬೆಳೆಯಂತೆ ಉತ್ತಮ ಲಾಭ ತರುವ ಬೆಳೆಯಾಗಿದ್ದು ರೈತರು ಈ ಬೆಳೆಯ ಬಗ್ಗೆ ಆಸಕ್ತಿ ವಹಿಸಬೇಕೆಂದು ಮನವಿ ಮಾಡಿದರು.ಈ ಸಂಧರ್ಭದಲ್ಲಿ ದೊಡ್ಡಮಗ್ಗೆ ರಾಜೇಂದ್ರ, ವೀರಾಜು ಉಪಸ್ಥಿತರಿದ್ದರು. ರೈತರ ತಂಡದ ಜೊತೆ ಪೊಟ್ಯಾಟೊ ಕ್ಲಬ್ ನ ರಂಗಸ್ವಾಮಿ ತೆರಳಿದರು.

ಕಾಮೆಂಟ್‌ಗಳಿಲ್ಲ: