ಸೋಮವಾರ, ಮಾರ್ಚ್ 8, 2010

ಪ.ಪಂ ಹಾಗೂ ಪಾರ್ಕ್ ಗೆ ಸೇರಿದ ಅತಿಕ್ರಮಣ ತೆರವಿಗೆ ಶೀಘ್ರವೇ ಕ್ರಮ

ಅರಕಲಗೂಡು: ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತಿಕ್ರಮಣಗೊಂಡಿರುವ ಜಾಗಗಳ ತೆರವಿಗೆ ವರದಿ ತಯಾರಿಸಲಾಗಿದ್ದು ಶೀಘ್ರವೇ ತೆರವಿಗೆ ಕ್ರಮ ಜರುಗಿಸಲಾಗುವುದು ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲೋಕೇಶ್ ಹೇಳಿದ್ದಾರೆ.
ಪಟ್ಟನ ಪಂಚಾಯ್ತಿಯ ಬಜೆಟ್ ಪೂರ್ವ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ ಪಟ್ಟಣದಲ್ಲಿ ಅತಿಕ್ರಮಣ ಗೊಂಡಿರುವ ಖಾಲಿ ಜಾಗ, ಪಾರ್ಕು ಗಳು ಅಂದಾಜು 60-70 ಇದೆ, ಈ ಬಗ್ಗೆ ಕೂಲಂಕುಶವಾದ ವರದಿಯನ್ನು ತಯಾರಿಸಲಾಗಿದೆ, ಈ ಜಾಗವನ್ನು ತೆರವು ಗೊಳಿಸಿ ಸಂರಕ್ಷಿಸಲು 20ಲಕ್ಷವನ್ನು ತೆಗೆದಿರಿಸಲಾಗಿದೆ ಎಂದರು. ಪಟ್ಟಣದ ದೊಡ್ಡಕೆರೆ ಆವರಣದಲ್ಲಿ 70ಲಕ್ಷರೂ ವೆಚ್ಚದಲ್ಲಿ ಈಜುಕೊಳ, ಮತ್ತು ಬಯಲು ರಂಗ ಮಂದಿರ ನಿರ್ಮಿಸಲಾಗುವುದು, ಅಗತ್ಯವಿರುವೆಡೆ ಹೈ ಮಾಸ್ಟ್ ದೀಪಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದ ಅವರು ಎಸ್ ಎಫ್ ಸಿ ಯೋಜನೆಯಲ್ಲಿ ಪಟ್ಟಣದ ವಿವಿಧ ರಸ್ತೆಗಳ ಡಾಂಬರೀಕರಣ ಮಾಡಲಾಗುವುದು ಅಗತ್ಯವಿರುವೆಡೆ ಸಿಮೆಂಟು ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ನುಡಿದ ಅವರು, ಹಿಂದಿನ ವರ್ಷಗಳಲ್ಲಿ 2000 ನಳನೀರು ಸಂಪರ್ಕವಿದ್ದರೆ ಈಗ ಅದು 3800 ಆಗಿದೆ ಇದರಿಂದಾಗಿ ಪ್ರತಿದಿನ ಸುಗಮವಾಗಿ ನೀರು ಒದಗಿಸಲು ಅಡ್ಡಿಯಾಗಿದೆ ಕುಡಿಯುವ ನೀರು ಯೋಜನೆಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದೆ ಇದರಲ್ಲಿ ಪಟ್ಟಣದ 3ಕಡೆ ಹೊಸದಾಗಿ ನೀರಿನ ಟ್ಯಾಂಕುಗಳನ್ನು ನಿರ್ಮಿಸಲಾಗುವುದು ಆಗ ಸಮಸ್ಯೆ ಬಗೆಹರಿಯುವುದು ಎಂದರು. ಪಟ್ಟಣದ ಸ್ವಚ್ಚತೆ ಸುದಾರಣೆಗೆ ಆದ್ಯ ಗಮನ ಹರಿಸಲಾಗುವುದು, ಅನಕೃ ವೃತ್ತದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಸಲಾಗುವುದು, ಮುಂದಿನ ಏಪ್ರಿಲ್ ವೇಳೆಗೆ ಪ.ಪಂ. ಪುರಸಭೆಯಾಗಿ ಪರಿವರ್ತನೆಯಾಗುತ್ತಿದೆ, ಸ್ಮಶಾನ ಅಭಿವೃದ್ದಿ, ಕಸಹೀರುವ ಮೆಶಿನು, ಹೆಚ್ಚುವರಿ ಟ್ರ್ಯಾಕ್ಟರು ಕೊಂಡುಕೊಳ್ಳಲಾಗುವುದು, ಬಡಾವಣೆಗಳಿಗೆ ವಾರ್ಡ ಸಂಕ್ಯೆ ಫಲಕ ಹಾಕಲಾಗುವುದು ಎಂದರು. ಸಂಯೋಜನಾಧಿಕಾರಿ ಶಶಿಕುಮಾರ್ ಮಾತನಾಡಿ ಪ.ಪಂ. ವ್ಯಾಪ್ತಿಯಲ್ಲಿ 19ಕೊಳಗೇರಿಗಳನ್ನು ಗುರುತಿಸಲಾಗಿದೆ ಈಗ ಿವುಗಳ ಗಣತಿ ನಡೆಸಿ ಮೂಲ ಸೌಕರ್ಯ ಅಭಿವೃದ್ದಿಗೆ ಯೋಜನೆ ರೂಪಿಸಲಾಗುವುದು ಎಂದರು. ಪ.ಪಂ. ಮುಖ್ಯಾಧಿಕಾರಿ ವಾಸುದೇವ ಮಾತನಾಡಿ ಪಟ್ಟಣದ ನಾಗರಿಕರು 25ಲಕ್ಷಕ್ಕೂ ಹೆಚ್ಚು ನೀರಿನ ಕಂದಾಯ, ಮನೆ ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ ಸಕಾಲದಲ್ಲಿ ಅದನ್ನು ಪಾವತಿಸಿದರೆ ಉತ್ತಮ ಸೇವೆಗೆ ಅನುಕೂಲವಾಗುವುದು ಎಂದರು. ಸಭೆಯಲ್ಲಿ ಸದಸ್ಯರಾದ ರವಿಕುಮಾರ್, ಶಂಕರಯ್ಯ, ಶ್ರೀನಿವಾಸ, ಮುನ್ನಾ, ುಪಾಧ್ಯಕ್ಷೆ ವಿಮಲ, ಭೂಪತಿ ಮತ್ತಿತರರು ಭಾಗವಹಿಸಿದ್ದರು. ನಾಗರಿಕರು ಸಭೆಯಲ್ಲಿ ಸಲಹೆ ನೀಡಿದರು. ಕಛೇರಿ ಅಧಿಕ್ಷಕ ಜಯರಾಂ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಕಾಮೆಂಟ್‌ಗಳಿಲ್ಲ: