ಶುಕ್ರವಾರ, ಫೆಬ್ರವರಿ 26, 2010

ಬಿಜೆಪಿ ಸರ್ಕಾರದ ವೈಫಲ್ಯ ಖಂಡಿಸಿ ಮಾ.6ರಿಂದ ಕಾಂಗ್ರೆಸ್ ಪ್ರತಿಭಟನೆ

ಅರಕಲಗೂಡು: ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಮಾರ್ಚ್ 6ರಿಂದ ಕಾಂಗ್ರೆಸ್ ಪಕ್ಷ ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಪಟ್ಟಣದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿದ ಅವರು ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳು ಜನತೆಯ ಮೇಲೆ ಮಾರಕ ಪರಿಣಾಮ ಬೀರಿದೆ. ರೈತರ ಉಚಿತ ವಿದ್ಯುತ್ ನೀಡುತ್ತೇವೆಂದು ಹೇಳಿದ್ದ ಸರ್ಕಾರ ಈಗ ಕನಿಷ್ಠ ವಿದ್ಯುತ್ ಒದಗಿಸಲು ವಿಫಲವಾಗಿದೆ, ಇವರ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ, ಬಿಜೆಪಿಯವರ ನಿಜ ಬಣ್ಣ ಬಯಲಾಗಿದೆ ಎಂದು ನುಡಿದ ಅವರು ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಮಾರ್ಚ್ 6ರಿಂದ ರಾಜ್ಯಾಧ್ಯಂತ ಪಕ್ಷದ ಕಾರ್ಯಕರ್ತರು ಸರಣಿ ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ್ದಕ್ಕೆ ಸಮುದಾಯು ಬೆಂಬಲವಿದೆ ಈ ನಿಟ್ಟಿನಲ್ಲಿ ಸಂಘಟನಾತ್ಮಕ ಬಲ ಹೆಚ್ಚಿಸಲು ನಿರ್ಧರಿಸಲಾಗಿದೆ.ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು, ಆಂತರಿಕ ಪ್ರಜಾಜಾಪ್ರಭುತ್ವಕ್ಕೆ ಮನ್ನಣೆ ಕೊಡಲಾಗುವುದು, ಪ್ರಾಥಮಿಕ ಹಂತದಲ್ಲಿ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿ ಪಂಚಾಯತ್ ವಾರ್ಡ್ ಗಳಲ್ಲಿ ಪಕ್ಷದ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂದರು. ಕೇಂದ್ರ ಸರ್ಕಾರದ ಆಮ್ ಆದ್ಮಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಯತ್ನಿಸಲಾಗುತ್ತಿದೆ, ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಜನರ ವಿಶ್ವಾಸ ಗಳಿಸಲು ಯತ್ನಿಸಲಾಗುತ್ತಿದೆ, ಯುವಕರು ಸ್ವಸಾಮರ್ಥ್ಯದಿಂದ ರಾಜಕೀಯಕ್ಕೆ ಧುಮುಕಬೇಕು. ಈ ಗಾಗಲೇ ರಾಷ್ಟ್ರಾಧ್ಯಂತ 2ಕೋಟಿ ಸದಸ್ಯತ್ವ ಮಾಡಿಸಲಾಗಿದೆ, ರಾಜ್ಯದಲ್ಲಿ ಯುವ ಕಾಂಗ್ರೆಸ್ ಗೆ 9ಲಕ್ಷ ಸದಸ್ಯತ್ವ ನೋಂದಣಿ ಮಾಡಿಸಲಾಗಿದೆ ಇನ್ನೂ ಹೆಚ್ಚಿನ ಸದಸ್ಯತ್ವಕ್ಕೆ ಪ್ರಯತ್ನಿಸಲಾಗುವುದು ಎಂದರು. ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಯಾವುದೇ ಪಕ್ಷ ಆಧಾರಿತ ಅಭ್ಯರ್ತಿಗಳರುವುದಿಲ್ಲ, ಆದರೂ ಪಂಚಾಯತ್ ಮಟ್ಟದಲ್ಲಿ ಯುವ ಕಾಂಗ್ರೆಸ್ಸಿಗರು ಕಣಕ್ಕೆ ಧುಮುಕುವಂತೆ ಪ್ರೋತ್ಸಾಹಿಸಲಾಗುವುದು ಯುವ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂದಿಯವರ ನಿರ್ದೇಶನದಲ್ಲಿ ಯುವ ಕಾಂಗ್ರೆಸ್ ಇನ್ನೂ ಹೆಚ್ಚಿನ ಶಕ್ತಿ ತುಂಬಿಕೊಳ್ಳಲಿದೆ, ಸಧ್ಯದಲ್ಲಿಯೇ ಜಿಲ್ಲೆಯಲ್ಲಿ ಗಮನ ಸೆಳೆಯುವ ಕಾರ್ಯಕ್ರಮದ ಮೂಲಕ ಪಕ್ಷದ ಬಲವರ್ಧನೆಗೆ ಶಕ್ತಿ ತುಂಬಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಹೆಂಟಗೆರೆ ಮಂಜುನಾಥ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಮುಖಂಡರಾದ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಶುಕ್ರವಾರ, ಫೆಬ್ರವರಿ 19, 2010

ಕುಡಿಯುವ ನೀರಿಗೆ ಹಾಹಾಕಾರ ಯಗಟಿಯಲ್ಲಿ ಪ್ರತಿಭಟನೆ



ಅರಕಲಗೂಡು: ಕುಡಿಯುವ ನೀರು ಒದಗಿಸುವಲ್ಲಿ ಗ್ರಾಮ ಪಂಚಾಯತ್ ಆಢಳಿತ ವಿಫಲವಾಗಿದೆ ಎಂದು ಆರೋಪಿಸಿ ಖಾಲಿ ಕೊಡಗಳೊಂದಿಗ ೆಪ್ರತಿಭಟನೆ ನಡೆಸಿದ ಪ್ರಸಂಗ ಇಲ್ಲಿಗೆ ಸಮೀಪದ ಯಗಟಿ ಗ್ರಾಮದಲ್ಲಿ ನಡೆಯಿತು. ಯಗಟಿ ಗ್ರಾಮದ ಹರಿಜನ ಕಾಲೋನಿಯಲ್ಲಿ ನಾಲ್ಕು ಬೋರ್ ವೆಲ್ ಗಳು ಇದ್ದು ಅವುಗಳ ಪೈಕಿ ಒಂದನ್ನು ಮಾತ್ರ ರಿಪೇರಿ ಮಾಡಲಾಗಿದೆಯಾದರು ಅದರಲ್ಲಿ ರಾಡಿ ನೀರು ಬರುತ್ತಿದ್ದು, ಕುಡಿಯಲು ಯೋಗ್ಯವಾದ ನೀರು ಸಿಗುತ್ತಿಲ್ಲ, ಕುಡಿಯುವ ನೀರಿಗಾಗಿ ಒಂದೂವರೆ ಕಿಮಿ ದೂರದಿಂದ ನೀರು ಹೊರಬೇಕಾಗಿದೆ ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಲಾಗಿದ್ದರು ಗಮನ ಹರಿಸುತ್ತಿಲ್ಲ, ನೀರು ಪೂರೈಕೆಗೆ ಅಗತ್ಯವಿರುವ ವಿದ್ಯುತ್ ಟಿಸಿ ಗಳನ್ನು ಹಾಕಿಸುತ್ತಿಲ್ಲ, ಗ್ರಾಮದ ಹರಿಜನರ ಕಾಲೋನಿಯವರ ಹೆಸರಿನಲ್ಲಿ 500-600 ಉದ್ಯೋಗ ಖಾತ್ರಿ ಕರ್ಡುಗಳನ್ನು ಮಾಡಿಸಲಾಗಿದೆ ಆದರೆ ಅವುಗಳನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಘವೇಂದ್ರ ಇಟ್ಟುಕೊಂಡಿದ್ದಾರೆ,ನಮಗೆ ಇದುವರೆ ಉದ್ಯೋಗ ಸಿಕ್ಕಿಲ್ಲ, ನಮ್ಮ ಹೆಸರಿನಲ್ಲಿ ಜಾಬ್ ಕಾರ್ಡುಗಳನ್ನು ಮಾಡಿಸಿ ನಕಲಿ ಸಹಿ ಹಾಕಿ ಹಣ ಪಡೆಯಲಾಗುತ್ತಿದೆ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದ ಗ್ರಾಮಸ್ಥರು ುದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ, ಕಳಪೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ, ಕೆಲವೆಡೆ ಕೆಲಸ ನಿರ್ವಹಿಸದೇ ಬಿಲ್ಲು ಮಾಡಲಾಗಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಗಂಡನೇ ನೀರು ಗಂಟಿಯಾಗಿದ್ದಾನೆ, ಆತನ ತಮ್ಮ ಅಟೆಂಡರ್ ಮತ್ತು ಕಾರ್ಯದರ್ಶಿ ಸೇರಿಕೊಂಡು ದಲಿತರನ್ನು ವಂಚಿಸುತ್ತಿದ್ದಾರೆ ಇವರ ವಿರುದ್ದ ತಕ್ಷಣ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷ ನಂಜುಂಡಾಚಾರ್ ಪ್ರತಿಭಟನಾ ಕಾರರ ಮನವಿ ಸ್ವೀಕರಿಸಿ ಸಮಸ್ಯೆ ಕುರಿತು 2ದಿನಗಳಲ್ಲಿ ಪರಿಹಾರ ಕೈಗೊಳ್ಳಲಾಗುವುದು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಜಾಬ್ ಕಾರ್ಡು ವಿತರಿಸಲು ಸೂಚಿಸುತ್ತೇನೆ ಎಂದರು. ಪ್ರತಿಭಟನೆಯ ನೇತೃತ್ವವನ್ನು ಗ್ರಾಮ ಪಂಚಾಯಿತಿ ಸದಸ್ಯ ರಂಗಸ್ವಾಮಿ ವಹಿಸಿದ್ದರು.

ಬಣವೆಗೆ ಬೆಂಕಿ, ತಹಸೀಲ್ದಾರ್ ವಿರುದ್ದ ಪ್ರತಿಭಟನೆ


ಅರಕಲಗೂಡು: ಹಿರೇಹಳ್ಳಿ ಗ್ರಾಮದ ಹುಲ್ಲಿನ ಮೆದೆಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಭಂದಿಸಿದಂತೆ ತಹಸೀಲ್ದಾರರ ಪರೋಕ್ಷ ಬೆಂಬಲವಿದ್ದು ಅವರನ್ನು ಅಮಾನತ್ತಿಲ್ಲಿಡಬೇಕೆಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲಾಯಿತು.
ಕಳೆದ ಬುಧವಾರ ಹಿರೇಹಳ್ಳಿ ಗ್ರಾಮದಲ್ಲಿ ತಹಸೀಲ್ದಾರ್ ಶೈಲಜಾ ನಿರ್ದೇಶನದ ಮೇರೆಗೆ ಗ್ರಾಮದ ಭಗೀರಥ ಯುವಕ ಸಂಘದ ಸದಸ್ಯರು ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ ನಡು ರಾತ್ರಿಯಲ್ಲಿ ಭತ್ತದ ಬಣವೆಗೆ ಬೆಂಕಿ ಬಿದ್ದಿತ್ತು. ಸದರಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕ ದಾಖಲೆಗಳು ಇಲ್ಲದಿದ್ದರೂ ಸಹಾ ತಹಸೀಲ್ದಾರ್ ದೌರ್ಜನ್ಯದಿಂದ ನಡೆದುಕೊಂಡು ಪಕ್ಷ ಪಾತ ಧೋರಣೆ ಅನುಸರಿಸಿ ರಸ್ತೆ ನಿರ್ಮಿಸಲು ಸೂಚಿಸಿದ್ದಾರೆ ಹಾಗೂ ಯುವಕರನ್ನು ಪ್ರೇರೇಪಿಸಿದ್ದರಿಂದ ಭತ್ತದ ಬಣವೆಗೆ ಬೆಂಕಿ ಹಾಕಲಾಗಿದೆ ಎಂದು ಜೆಡಿಎಸ್ ಮುಖಂಡ ಜನಾರ್ಧನ ಗುಪ್ತ ಆರೋಪಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ್ ಮಾತನಾಡಿ ತಾಲ್ಲೂಕಿನ ಆಡಳಿತ ನಿರ್ವಹಣೆ ಸಂಧರ್ಭ ತಹಸೀಲ್ದಾರ್ ನಿಷ್ಪಕ್ಷಪಾತವಾಗಿ ನಡೆದು ಕೊಳ್ಳುತ್ತಿಲ್ಲ ಹಿರೇ ಹಳ್ಳಿ ಕೊಪ್ಪಲು ಗ್ರಾಮದ ಜಮೀನನ್ನು ಬಗರ್ ಹುಕುಂ ಅಡಿಯಲ್ಲಿ ರೈತ ರಿಗೆ ನೀಡಲಾಗಿದೆ, ಈ ಊರಿನಲ್ಲಿ ಕೆರೆ-ಸರ್ಕಾರಿ ಗೋಮಾಳ ೊತ್ತುವರಿಯಾಗಿದ್ದರೂ ಸಹಾ ಆ ಬಗ್ಗೆ ತಲೆ ಕೆಡಿಸಿಕೊಳ್ಳದ ತಹಸೀಲ್ದಾರ್, ರಾಜಕೀಯ ದುರುದ್ದೇಶದಿಂದ ರೈತರ ಜಮೀನಿನಲ್ಲಿ ಅನಗತ್ಯವಾಗಿ ಕಾಮಗಾರಿ ನಡೆಸಲು ಮುಂದಾಗಿದ್ದಾರೆ ಈ ಸಂಧರ್ಭ ತಿಂಗಿನ ಮರಗಳನ್ನು ಉರುಳಿಸಲಾಗಿದೆ, ಜೆಸಿಬಿ ಬಳಸಿ ಕೆಲಸ ಮಾಡಲಾಗಿದೆ ಎಂದರಲ್ಲದೇ ತಹಸೀಲ್ದಾರ್ ರೈತರ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ ಇದು ಖಂಡನೀಯ ಎಂದರು ಇಡೀ ಪ್ರಕರಣದ ಕೇಂದ್ರ ಬಿಂದುವಾಗಿರುವ ತಹಸೀಲ್ದಾರರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕು, ನೋದ ರೈತನಿಗೆ ಅವರಿಂದ ಪರಿಹಾರ ಕಟ್ಟಿಸಿಕೊಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸಹಾಯಕ ಆಯುಕ್ತ ನಾಗೇಂದ್ರ ಪ್ರಸಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ತವಾಂಶಗಳನ್ನು ಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು. ಆದರೆ ಅದಕ್ಕೊಪ್ಪದ ಪ್ರತಿಭಟನಾಕಾರರು ತಹಸೀಲ್ದಾರರು ಜನಸಾಮಾನ್ಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ, ನ್ಯಾಯ ಕೇಳಲು ಹೋದರೆ ರಾಸ್ಕಲ್, ಗೆಟ್ ಔಟ್ ಎಂಬ ಮಾತುಗಳನ್ನಾಡುತ್ತಾರೆ ಇಂತಹವರ ಅಗತ್ಯ ನಮಗಿಲ್ಲ,ಅವರಿಗೆ ಸೌಜನ್ಯದ ನಡವಳಿಕೆ ಹೇಳಿಕೊಡಿ, ಅಮಾನತ್ತಿಲ್ಲಿಡಿ ಎಂದು ಆಗ್ರಹಿಸಿದರು. ನಂತರ ಎಸಿ ನಾಗೇಂದ್ರ ಪ್ರಸಾದ್ ಒಂದು ವಾರದೊಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಾಟನಾಕಾರರಿಗೆ ಆಶ್ವಾಸನೆ ನೀಡಿದರು. ಇದೇ ಸಂಧರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಪ್ರಕರಣದ ಬಗ್ಗೆ ಜೆಡಿಎಸ್ ಪಕ್ಷದ ವರಿಷ್ಠರ ಗಮನಕ್ಕೆ ಮಾಹಿತಿ ನೀಡಲಾಗಿದೆ, ಜನರ ಹಿತಾಸಕ್ತಿಗನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುವುದು. ತಹಸೀಲ್ದಾರ್ ದೌರ್ಜನ್ಯವನ್ನು ಪಕ್ಷ ಕಟುವಾಗಿ ಖಂಡಿಸುತ್ತದೆ. ವಾರದ ನಂತರವೂ ಕ್ರಮವಾಗದಿದ್ದರೆ ಪ್ರತಿಭಟನೆಯನ್ನು ತೀವ್ರ ಗೊಳಿಸಲಾಗುವುದು ಎಂದು ನುಡಿದರು. ಪ್ರತಿಭಟನೆಯ ನೇತೃತ್ವವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಂಜುಂಡಾಚಾರ್, ಜಿಲ್ಲಾಪಂಚಾಯತ್ ಸದಸ್ಯ ಅಪ್ಪಣ್ಣ ವಹಿಸಿದ್ದರು.

ಸೋಮವಾರ, ಫೆಬ್ರವರಿ 8, 2010

ವಿಶೇಷ ಘಟಕ ಶುರುವಾಗದ ಕೆಲಸ, ಕಾಂಗ್ರೆಸ್ ಪ್ರತಿಭಟನೆ


ಅರಕಲಗೂಡು: ಹೇಮಾವತಿ ಜಲಾಶಯ ಯೋಜನೆ ವ್ಯಾಪ್ತಿಯ ಹರಿಜನ ಕಾಲೋನಿಗಳಲ್ಲಿ ವಿಶೇಷ ಘಟಕ ಯೋಜನೆ(ಎಸ್ ಸಿ ಪಿ )ಕೆಲಸಕ್ಕೆ ಟೆಂಡರ್ ಆಗಿದ್ದರೂ ಕೆಲಸ ಮಾಡಿಸುವಲ್ಲಿ ಇಂಜಿನಿಯರುಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಪಾದಿಸಿ ಗ್ರಾಮಸ್ಥರು ಶಾಸಕ ಎ. ಮಂಜು ನೇತೃತ್ವದಲ್ಲಿ ಗೊರೂರಿನ ಮುಖ್ಯ ಇಂಜಿನಿಯರ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಪ್ರಸಂಗ ಇಂದು ನಡೆಯಿತು.
ವಿಶೇಷ ಘಟಕ ಯೋಜನೆಯಡಿಯಲ್ಲಿ ಹರಿಜನ ಕಾಲೋನಿಗಳಿಗೆ ತಲಾ 7-8ಲಕ್ಷ ರೂಗಳಲ್ಲಿ ಮೂಲ ಸೌಕರ್ಯ ಅಭಿವೃದ್ದಿಗೆ ಅವಕಾಶವಿದೆ, ಈ ಕೆಲಸಗಳಿಗೆ ಟೆಂಡರು ಮಾಡಲಾಗಿದ್ದರೂ ಇಂಜಿನಿಯರುಗಳು ವರ್ಕ್ ಆರ್ಡರು ನೀಡದೇ ಕೆಲಸ ನಡೆಯುತ್ತಿಲ್ಲ, ಕಳೆದ ಕೆಲ ವರ್ಷಗಳಿಂದಲೂ ವಿಶೇಷ ಘಟಕ ಯೋಜನೆಯ ಹಣ ವಿನಿಯೋಗವಾಗದೇ ವಾಪಾಸಾಗುತ್ತಿದೆ. ಇದರಿಂದಾಗಿ ಪ.ಜಾ./ಪ.ವ. ಜನರಿಗೆ ಅನ್ಯಾಯವಾಗುತ್ತಿದೆ ಎಂದು ಶಾಸಕ ಎ ಮಂಜು ಆಪಾದಿಸಿದರು. ಅರಕಲಗೂಡು ತಾಲ್ಲೂಕಿನ 9ಹಳ್ಳಿಗಳಲ್ಲಿ ಕೆಲಸ ಆರಂಭಿಸಲು ಟೆಂಡರು ಪ್ರಕ್ರಿಯೆ ನಡೆಸಲಾಗಿದೆ ಆದರೆ ಅಲ್ಲಿ ಗುತ್ತಿಗೆದಾರರು ಕೆಲಸ ಮಾಡಿಲ್ಲ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿಲ್ಲ ಎಂದು ಮುಖ್ಯ ಇಂಜಿನಿಯರು ಸುದರ್ಶನರನ್ನು ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ನೀವು ಗುತ್ತಿಗೆದಾರರ ಜೊತೆ ಶಾಮಿಲಾಗಿದ್ದೀರೇನ್ರಿ ? ಕೆಲಸ ಮಾಡದಿರುವ ುದ್ದೇಶವಾದರೂ ಏನು ಎಂದು ಪ್ರಶ್ನಿಸಿದರು. ನೀವು ಕೆಲಸ ಶುರುಮಾಡಿಸದಿದ್ದರೆ ನನ್ನ ತಾಲೂಕಿನ ಮತದಾರರಿಗೆ 1.50ಕೋಟಿರೂಪಾಯಿಗಳ ಻ಭಿವೃದ್ದಿ ಕೆಲಸದಿಂದ ವಂಚಿತರಾಗಬೇಕಾಗುತ್ತದೆ ಎಂದು ಹೇಳಿದರು. ಆಗ ಮುಖ್ಯ ಇಂಜಿನಿಯರು ಸುದರ್ಶನ್ ತಮ್ಮ ಅಧೀನ ಸಿಬ್ಬಂದಿಯಿಂದ ತಪ್ಪಾಗಿರುವುದು ನಿಜ ಎಂದು ಬೇಷರತ್ತಾಗಿ ಒಪ್ಪಿಕೊಂಡರಲ್ಲದೇ ತಕ್ಷಣವೇ ವರ್ಕ್ ಆರ್ಡರು ನೀಡಿ ಕೆಲಸ ಆರಭಿಸಲಾಗುವುದು, ಫೆಬ್ರುವರಿ 16ರಂದು ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಫೆಬ್ರುವರಿ 16ರಂದು ಕೆಲಸ ಶುರುವಾಗದಿದ್ದರೆ ಫೆಬ್ರುವರಿ 17ರಂದು ಕಛೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿದ ಶಾಸಕರು ನಂತರ ಸ್ಥಳದಿಂದ ತೆರಳಿದರು. ಈ ಸಂಧರ್ಭದಲ್ಲಿ ಅರಕಲಗೂಡು ತಾಲ್ಲೂಕಿನ ಗ್ರಾಮಸ್ಥರು ಮುಖ್ಯ ಇಂಜಿನಿಯರ್ ಗೆ ಮನವಿ ಪತ್ರ ಅರ್ಪಿಸಿದರು. ಮುಖಂಡರಾದ ಚನ್ನಕೇಶವೇಗೌಡ, ಹಿರಣ್ಣಯ್ಯ, ರೇವಣ್ಣ ುಪಸ್ಥಿತರಿದ್ದರು.




ಅರಕಲಗೂಡು: 7.50ಕೋಟಿರೂ ವೆಚ್ಚದಲ್ಲಿ ಎಚ್ ಎನ್ ಪುರ-ಅರಕಲಗೂಡು ನಡುವನ ರಾಜ್ಯ ಹೆದ್ದಾರಿ ಜ್ಯಾಮಿತಿ ರಸ್ತೆ ಅಭಿವೃದ್ದಿ ನಡೆಯಲಿದೆ ಎಂದು ಶಾಸಕ ಎ. ಮಂಜು ಹೇಳಿದ್ದಾರೆ.

ಅರಕಲಗೂಡು-ಹೊಳೆನರಸಿಪುರ ನಡುವಿನ ರಾಜ್ಯ ಹೆದ್ದಾರಿ ಜ್ಯಾಮಿತಿ ಪರಿಮಿತಿ ಅಭಿವೃದ್ದಿ ಕಾಮಗಾರಿಗಳ ಭೂಮಿ ಪೂಜೆಯನ್ನು ಹೊಡಿಕೆ ಕಟ್ಟೆ ಬಳಿ ನೆರವೇರಿಸಿದ ಅವರು ಈ ರಸ್ತೆಗಾಗಿ ಜಮೀನು ಕಳೆದುಕೊಂಡವರಿಗೆ 45ಲಕ್ಷ ಪರಿಹಾರ ನೀಡಲಾಗುವುದು ಶೀಘ್ರವಾಗಿ ಕಾಮಗಾರಿ ಮುಗಿಸಲು ಸೂಚಿಸಲಾಗುವುದು ಎಂದರು. ತಾಲೂಕಿನಲ್ಲಿ ಜಲಾನಯನ ಯೋಜನೆಯಡಿ 4.85ಕೋಟಿ ಅಂದಾಜು ವೆಚ್ಚದಲ್ಲಿ ಬೂಮಿ ಸಮತಟ್ಟು ಮಾಡುವ ಯೋಜ಻ನೆ ಕೈಗೆತ್ತಿಕೊಳ್ಳಲಾಗುವುದು, ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದು ನುಡಿದ ಅವರು ಸ್ಥಳೀಯ ಜನ ಪ್ರತಿನಿಧಿಗಳು ಅಭಿವೃದ್ದಿ ಕೆಲಸದಲ್ಲಿ ರಾಜಕೀಯ ಮಾಡದೇ ಸಹಕರಿಸಿ ಎಂದು ಮನವಿ ಮಾಡಿದರು. 25ವರ್ಷಗಳಿಂದ ಡೈರಿ ಅಧ್ಯಕ್ಷರಾದವರು ಗ್ರಾಮಕ್ಕೆ ಒಂದು ಡೈರಿ ನೀಡಲಾಗದವರು ಜನರಿಗೆ ಇನ್ನೇನು ತಾನೆ ಮಾಡಿಯಾರು ಎಂದು ಮಾಜಿ ಸಚಿವ ರೇವಣ್ಣ ವಿರುದ್ದ ಕಟಕಿಯಾಡಿದರು. ಕಸಬಾ ಹೋಬಳಿಗೆ 3ಏತನೀರಾವರಿ ಯೋಜನೆ ಲಭಿಸಲಿದ್ದು ಬಜೆಟ್ ನಲ್ಲಿ ಅದು ಪ್ರಸ್ತಾಪವಾಗಲಿದೆ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ ಅದು ಅನುಷ್ಠಾನಗೊಂಡರೆ ಈ ಭಾಗದ ಜನರ ಬಹುದಿನದ ಕನಸು ನನಸಾಗುವುದು ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ಚನ್ನಕೇಶವೇಗೌಡ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕೀರ್ತಿರಾಜ್, ಗಂಜಲಗೋಡು ಮಲ್ಲೇಶ್, ಗ್ರಾಮದ ದೇವರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಬುಧವಾರ, ಫೆಬ್ರವರಿ 3, 2010

'ಶಿಸ್ತು ಸಂಯಮ ಪಾಲಿಸಿ' ಪಿ ಎನ್ ರಮೇಶ್


ಅರಕಲಗೂಡು:ವೃತ್ತಿ ಜೀವನದಲ್ಲಿ ಶಿಸ್ತು ಮತ್ತು ಸಂಯಮ ಪಾಲಿಸಿದರೆ ಯಶಸ್ಸು ಸಾಧ್ಯ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಟ್ರ್ಯಾಕ್ಸ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಪಿ ಎನ್ ರಮೇಶ್ ಹೇಳಿದ್ದಾರೆ. ಪಟ್ಟಣದಲ್ಲಿ ಇಂದು ನಡೆದ ಟ್ರ್ಯಾಕ್ಸ್ ಚಾಲಕರು/ಮಾಲೀಕರ ಸಂಘದ ವಾರ್ಷಿಕ ಸಭೆಯಲ್ಲಿ
ಮಾತನಾಡಿದ ಜೀವನದಲ್ಲಿ ಶಿಸ್ತು ಮುಖ್ಯ, ಕೇವಲ ದುಡಿಮೆಯಿಂದ ಸಾರ್ಥಕ ಬದುಕು ಸಾಧ್ಯವಿಲ್ಲ ಆದುದರಿಂದ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸಿ ಪ್ರಯಾಣಿಕರ ವಿಶ್ವಾಸ ಗಳಿಸಿ ಎಂದರು. ನಂತರ ನಡೆದ ಸಂಘದ ಕಾರ್ಯಕಾರಿ ಸಭೆಯಲ್ಲಿ ಸಂಘಕ್ಕೆ ಹೊಸದಾಗಿ ಸೇರ್ಪಡೆಯಾಗುವವರು ಕಡ್ಡಾಯವಾಗಿ ಡಿಪಾಸಿಟ್ ನೀಡಬೇಕು, ಎಲ್ಲಾ ವಾಹನಗಳ ಮಾಲೀಕರು ಮತ್ತು ಚಾಲಕರು ಸಂಘದ ಆರೋಗ್ಯ ನಿಧಿಗೆ ದೇಣಿಗೆ ನೀಡಬೇಕು ಎಂದರು. ಸಂಘದ ಕಾರ್ಯದರ್ಶಿ ಎ.ವಿ.ಪೃಥ್ವಿ ರಾಜ್ ಸಭೆಗೆ ಎಲ್ಲರನ್ನೂ ಸ್ವಾಗತಿಸಿದರು.ಹಿರಿಯ ವಕೀಲ ಜನಾರ್ಧನ ಗುಪ್ತ ಅವರನ್ನು ಸಂಘದ ಕಾನೂನು ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಕರುಣ, ಖಜಾಂಚಿ ರೇವಣ್ಣ, ಹಿರಿಯ ಮುಖಂಡರಾದ ಬರಗೂರು ಗಣೇಶ್, ಟ್ರ್ಯಾಕ್ಸ್ ಚಾಲಕರು ಮತ್ತು ಮಾಲೀಕರು ಸಕ್ರಿಯವಾಗಿ ಸಭೆಯಲ್ಲಿ ಪಾಲ್ಗೊಂಡು ಸಲಹೆ,ಸಹಕಾರ ನೀಡಿದರು.
ಅಭಿನಂದನೆ: ಅರಕಲಗೂಡು ಪಟ್ಟಣದ ಕುಡಿಯುವ ನೀರಿನ ಯೋಜನೆಗಾಗಿ ರಾಜ್ಯ ಸರ್ಕಾರ 10.46ಕೋಟಿ ರೂಗಳನ್ನು ಮಂಜೂರು ಮಾಡಿರುವುದಕ್ಕೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ನಟರಾಜ್ ಮತ್ತು ಕಾರ್ಯದರ್ಶಿ ಕೇಶವೇಗೌಡ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹಲವಾರು ಭಾರಿ ನಿಯೋಗ ತೆರಳಿ ಮುಖ್ಯಮಂತ್ರಿ ಯಡೆಯೂರಪ್ಪನವರ ಗಮನ ಸೆಳೆದಿದ್ದರು, ಆದ್ದರಿಂದ ಮುಖ್ಯ ಮಂತ್ರಿಗಳು ವಿಶೇಷ ಻ನುದಾನ ಬಿಡುಗಡೆ ಮಾಡಿದ್ದಾರೆ ಸರ್ಕಾರಕ್ಕೆ ಅಭಿನಂದನೆಗಳು ಎಂದಿದ್ದಾರೆ.