ಮಂಗಳವಾರ, ನವೆಂಬರ್ 16, 2010

ದೌರ್ಜನ್ಯಕ್ಕೊಳಗಾದವನ ಮೇಲೆ ಮಾನಭಂಗ ದೂರು ದಾಖಲು!

ಅರಕಲಗೂಡು: ಕಳೆದ ಭಾನುವಾರ ಮುಸುವತ್ತೂರು ಗ್ರಾಮದಲ್ಲಿ ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಲ್ಪಟ್ಟ ವ್ಯಕ್ತಿಯ ವಿರುದ್ದ ತಡವಾಗಿ ಮಾನಭಂಗದ ಪ್ರಕರಣ ದಾಖಲಾಗಿದ್ದು ಪ್ರಕರಣ ತಿರುವು ಪಡೆದುಕೊಂಡಿದೆ.
ಕೂಲಿ ಕೆಲಸಕ್ಕೆ ಬರಲಿಲ್ಲವೆಂಬ ವಿಚಾರಕ್ಕೆ ಭಾನುವಾರ ಸಂಜೆ 3ಗಂಟೆ ಸುಮಾರಿಗೆ ರಾಮಚಂದ್ರ(48) ಎಂಬ ದಲಿತ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಥಳಿಸಲಾಗಿತ್ತು, ಅರೆಪ್ರಜ್ಞಾವಸ್ಥೆ ತಲುಪಿದ ಆತನನ್ನು ಸಂಭಂಧಿಕರು ಬಿಡಿಸಿ ರಾತ್ರಿವೇಳೆಗೆ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಹಾಗೂ ಆತನನ್ನು ಜಾತಿ ಹೆಸರಿನಿಂದ ನಿಂದಿಸಿ ಹಲ್ಲೆ ನಡೆಸಿದವರ ವಿರುದ್ಧ ಅರಕಲಗೂಡು ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಸೋಮವಾರ ರಾತ್ರಿಯ ವೇಳೆಗೆ ದೌರ್ಜನ್ಯ ನಡೆಸಿದ ಆರೋಪಿಗಳಲ್ಲಿ ಒಬ್ಬರಾದ ಯಶೋದಮ್ಮ , ರಾಮಚಂದ್ರನ ವಿರುದ್ದ ಮಾನಭಂಗ ಪ್ರಯತ್ನದ ದೂರು ದಾಖಲಿಸಿದ್ದಾಳೆ. ತಾನು ದನ ಕಾಯುತ್ತಿದ್ದ ವೇಳೆ ತನ್ನ ಮಾನಭಂಗಕ್ಕೆ ರಾಮಚಂದ್ರ ಯತ್ನಿಸಿದ್ದರಿಂದ ಕೂಗಿಕೊಂಡೆ ಆಗ ನನ್ನ ರಕ್ಷಣೆಗೆ ಬಂದ  ರಾಜಣ್ಣ, ಸಣ್ಣಪ್ಪ, ದೊಡ್ಡಪ್ಪ ಮತ್ತು ಮಲ್ಲಪ್ಪ ನನ್ನನ್ನು ಪಾರು ಮಾಡಿದರು ಎಂದು ದೂರಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಡಿವೈಎಸ್ ಪಿ ಪರಶುರಾಂ ಸ್ಥಳಕ್ಕೆ ಭೇಟಿ ನೀಡಿದ್ದರಾದರೂ ಈ ಬಗ್ಗೆ ಗ್ರಾಮದಲ್ಲಿ ಯಾವುದೇ ಚಕಾರವೆತ್ತಿಲ್ಲ ಅಷ್ಟೇ ಅಲ್ಲ ಘಟನೆಗೆ ಕಾರಣರಾದವರನ್ನು ಬಂದಿಸಿಲ್ಲ ಎನ್ನಲಾಗಿದೆ. ಪ್ರಕರಣವನ್ನು ರಾಜೀ ಮಾಡಿಸುವ ಹಿನ್ನೆಲೆಯಲ್ಲಿ ಕೆಲವು ಮದ್ಯವರ್ತಿಗಳು ಪ್ರತೀ ದೂರು ದಾಖಲಾಗುವಂತೆ ಮಾಡಿದ್ದಾರೆ ಇದನ್ನು ತಾವು ಒಪ್ಪುವುದಿಲ್ಲ, ದೌರ್ಜನ್ಯಕ್ಕೊಳಗಾದ ದಲಿತನಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಬಿಎಸ್ ಪಿ ಮುಖಂಡ ರಾಜೇಶ್ ಎಚ್ಚರಿಸಿದ್ದಾರೆ.

ಅರಕಲಗೂಡು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಪಂಚಾಯ್ತಿಯ ಪಿಡಿಓ ಹಾಗೂ ಕಾರ್ಯದರ್ಶಿ ಚೆಕ್ ಗಳಿಗೆ ಅಧ್ಯಕ್ಷರಿಂದ ಬಲವಂತದ ಸಹಿ ಹಾಕಿಸುತ್ತಾ ಅನುಮಾನಸ್ಪದವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವಡ್ಡರಹಳ್ಳಿ ಗ್ರಾ.ಪಂ. ಸದಸ್ಯರುಗಳ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಸದಸ್ಯರುಗ ಳಾದ ಎಸ್ ಪಿ ರೇವಣ್ಣ , ಇರ್ಶಾದ್, ಮೋಹನ್ , ಸಾಕಮ್ಮ, ಶಶಿಕಲ, ಉಪೇಂದ್ರ ಪಿಡಿಓ ಮುರುಳಪ್ಪ ಹಾಗೂ ಕಾರ್ಯದರ್ಶಿ ಕೃಷ್ಣೇಗೌಡ, ಪಂಚಾಯ್ತಿಯ ಅಧ್ಯಕ್ಷರಾದ ಸಾವಿತ್ರಮ್ಮನವರಿಗೆ ಬೆದರಿಕೆ ಹಾಕಿ ಬಲವಂತದಿಂದ 1.70ಲಕ್ಷದ ಚೆಕ್ ಗೆ ಸಹಿ ಪಡೆದಿದ್ದಾರೆ. ಸದರಿ ಚೆಕ್ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದುದಾಗಿದೆ ಈ ಬಗ್ಗೆ ಪ್ರಶ್ನಿಸಿದರೆ ಪಿಡಿ ಓ ಮರುಳಪ್ಪ ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ , ಕ್ಯಾಶ್ ಪುಸ್ತಕದಲ್ಲಿ ಈ ಮಾಹಿತಿ ದಾಖಲಾಗಿಲ್ಲ ಆದುದರಿಂದ ಪ್ರಕರಣ ಕುರಿತು ತನಿಖೆ ನಡೆಸಿ ತಪ್ಪಿತ ಸ್ಥ ನೌಕರರ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.

1 ಕಾಮೆಂಟ್‌:

ವಿ. ಭೂಮಿಕಾ ಹೇಳಿದರು...

ಹೀನ ಮನಸ್ಥಿತಿಯ ಜನರಿಗೆ ಧಿಕ್ಕಾರ...