ಶನಿವಾರ, ನವೆಂಬರ್ 13, 2010

ಉದ್ಯೋಗ ಖಾತ್ರಿ ಕರ್ಮಕಾಂಡ: ಮಾರ್ಗಸೂಚಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ!!

  • ಅರಕಲಗೂಡು ಜಯಕುಮಾರ್
ಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಯ್ದೆ ಸ್ವರೂಪದ ಉತ್ತಮ ಯೋಜನೆ. ಇಂತಹ ಯೋಜನೆಯಲ್ಲಿ ಮಾರ್ಗಸೂಚಿ ಯನ್ವಯಮಾತ್ರವೇ ಕೆಲಸ ಮಾಡಬೇಕು. ಆದರೆತಾಲೂಕಿನಲ್ಲಿ ನಡೆದ ಖಾತ್ರಿ ಅನುಷ್ಠಾನದಲ್ಲಿ ಎಲ್ಲ  ನಿಯಮಗಳನ್ನುಗಾಳಿಗೆ ತೂರಲಾಗಿದೆ.ಉದ್ಯೋಗ ಖಾತ್ರಿಯ ಆರಂಭದಲ್ಲಿ 80ರೂಪಾಯಿ ದಿನಗೂಲಿ ಇದ್ದ ವೆಚ್ಚವನ್ನು 100ರೂ.ಗೆ ಏರಿಸಲಾಗಿದೆ. ಉದ್ಯೋಗ ಖಾತ್ರಿ ಯಲ್ಲಿ ಕೆಲಸ ಗಿಟ್ಟಿಸಲು  ಸಾರ್ವಜನಿಕವಾಗಿ ಹೆಸರು ನೋಂದಣಿ ಮಾಡಿಸಲು ಅವಕಾಶವಿದೆ, ಹೆಸರು ನೋಂದಾಯಿಸಿದ ಮೇಲೆ 15ದಿನಗಳೊಳಗೆ ಜನಸಂಖ್ಯೆಗನುಗುಣವಾಗಿ ಕಾಮಗಾರಿಯನ್ನು ನಿರ್ದರಿಸಬೇಕು. ಅಂತಹ ಕಾಮಗಾರಿಗೆ ವಾರ್ಡ್ ಸಭೆ ನಡೆಸಿ ಗ್ರಾ.ಪಂ. ನಿರ್ಣಯಿಸಬೇಕು ನಂತರ ಜಿ.ಪ.ಇಂಜಿನಿಯರು ಯೋಜನೆ ತಯಾರಿಸಿ ವೆಚ್ಚವನ್ನು  ನಿಗದಿಪಡಿಸಬೇಕು  ಈ ಹಂತ ಮುಗಿದ ಮೇಲೆ .ತಾಪಂ. ಕಾರ್ಯ ನಿರ್ವಾಹಕ ಅಧಿಕಾರಿ  ಕೆಲಸದ ಆದೇಶ ನೀಡಬೇಕು ಆದರೆ ಜಿಲ್ಲೆಯಾಧ್ಯಂತ ಆಗಿದ್ದೇನು?  ಜಿಲ್ಲೆಯ ಯಾವ ತಾಲೂಕುಗಳಲ್ಲೂ ಖಾತ್ರಿ ಅನುಷ್ಠಾನದ ಮಾನದಂಡಗಳನ್ನು ಅನುಸರಿಸಿಲ್ಲ. ಅರಕಲಗೂಡು ತಾಲ್ಲೂಕಿನಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಎಸ್ಟಿಮೇಟುಗಳನ್ನು ಮಾಡಲಾಗಿದೆ,ಕೂಲಿ ಹಣವನ್ನು ರಾಷ್ರ್ಟೀ ಯಬ್ಯಾಂಕುಗಳಲ್ಲಿ ಪಾವತಿಸಬೇಕೆಂಬ ಆದೇಶವಿದ್ದರೂ ಸ್ಥಳೀಯ ಬ್ಯಾಂಕುಗಳಲ್ಲಿ ಕೂಲಿಕಾರರ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಬ್ಯಾಂಕುಸಿಬ್ಬಂದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡ ಗುತ್ತಿಗೆದಾರು  ಕೂ ಲಿಕಾರರ ಹಣವನ್ನು ಅಕ್ರಮವಾ ಗಿ ಡ್ರಾ ಮಾಡಿದ್ದಾರೆ.ಕೂಲಿಕಾರರ ಕಾರ್ಡುಗಳು ಕೂಲಿಕಾರರ ಬಳಿ ಇರದೇ ಗುತ್ತಿಗೆದಾರರ ಬಳಿ ಕೇಂದ್ರೀಕೃತವಾಗಿದೆ. ಇಂಜಿನಿಯರುಗಳು  ಮತ್ತುಗ್ರಾ.ಪಂ. ಕಾರ್ಯದರ್ಶಿಗಳು ನಕಲಿ ಎನ್ ಎಂ ಆರ್ ,ಎಸ್ಟೀಮೇಟುಗಳನ್ನು ಲೆಕ್ಕವಿಲ್ಲದಷ್ಟು ಸಂಖ್ಯೆಯ ಲ್ಲಿ ಮಾಡಿದ್ದಾರೆ. ಅಮಾಯಕ ಗುತ್ತಿಗೆದಾರರುಗಳಿಗೆ ಅಕ್ರಮವಾಗಿ ಪಂಚಾಯ್ತಿಗಳಲ್ಲಿ ಅನುಮೋದನೆ ಇಲ್ಲದಿದ್ದರೂ ಕಾರ್ಯದೇಶ ನೀಡಿ ಅನೇಕ ಕೆಲಸಗಳನ್ನು ಮಾಡಿಸಲಾಗಿದೆ. ಆದರೆ ಇಂಜಿನಿಯರುಗಳು ಯೋಜನೆಯಲ್ಲಿ ಲಭ್ಯವಿಲ್ಲದ 125ರೂ ಕೂಲಿಯನ್ನು ನಮೂದಿಸಿ ಸರಕು ಸಾಮಾಗ್ರಿ ಬಿಲ್ , ತೆರಿಗೆ,ಕಮೀಷನ್ ಗಳನ್ನು ಡ್ರಾ ಮಾಡಿಕೊಂಡು ಲೂಟಿ ಮಾಡಿದ್ದಾರೆ. ಗುತ್ತಿಗೆದಾರರು  ಗಂಟುಕಳೆದುಕೊಂಡು ಬಾರದ ಕಾಮಗಾರಿ ಬಿಲ್ ಗಳಿಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.  ಜಿ.ಪಂ. ಸಿಇಓ ಅಂಜನ್ ಕುಮಾರ್ ಸರ್ಕಾರಕ್ಕೆ ಸಲ್ಲಿಸಿದ  ರಹಸ್ಯ ವರದಿಯಲ್ಲಿನ ಮುಖ್ಯಾಂಶಗಳು ಈ ಮುಂದಿನಂತಿವೆ.
  •  ಅನುಷ್ಠಾನಾಧಿಕಾರಿಯಾದ ಜಿ.ಪಂ. ಸ.ಕಾ.ಅ. ನಾಗೇಶ ವಾಸ್ತವವಾಗಿ ಕಾರ್ಯ ನಿರ್ವಾಹಕ ಏಜೆನ್ಸಿಯಾಗಿದ್ದು ತಮ್ಮ ಅಧೀನ ಕಾರ್ಯ ನಿರ್ವಾಹಕ ತಾಂತ್ರಿಕ ಸಿಬ್ಬಂದಿಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ವಿಫಲರಾಗಿರುತ್ತಾರೆ.ಐವರು ಇಂಜಿನಿಯರುಗಳ ತಾಂತ್ರಿಕ ಮಾನವ ಸಂಪನ್ಮೂಲ ಇದ್ದಾಗ್ಯೂ ಸಹಾ ಕಿ.ಇಂ. ನಿಂಗೇಗೌಡ ಎಂಬ ಶಾಖಾ ಇಂಜಿನಿಯರ್ ಗೆ ಪೂರ್ಣ ತಾಲೂಕಿಕನ MNREGA ಅನುಷ್ಠಾನ ಸಾಧ್ಯವಾಗದಿರುವುದಕ್ಕೆ ಕಾರಣಕರ್ತರಾಗಿರುತ್ತಾರೆ. ಕಾಮಗಾರಿಗಳ ಕಾರ್ಯನಿರ್ವಹಣೆ ಉಸ್ತುವಾರಿ ಮತ್ತು ದಾಖಲೆಗಳ ನಿರ್ವಹಣೆ ಈ ಎಲ್ಲ ವಿಭಾಗಗಳಲ್ಲಿಯೂ ಸ.ಕಾ.ಇಂ. ಮತ್ತು ಕಿ.ಇಂ. ಇಬ್ಬರು ವಿಫಲರಾಗಿರುತ್ತಾರೆ.ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿರುತ್ತದೆ.ಕಾಮಗಾರಿಗಳ ಅಳತೆಗಳು ದಿನಾಂಕಗಳಲ್ಲಿ ಸಾಕಷ್ಟು ವ್ಯತ್ಯಯವಿದ್ದು ದಾಖಲೆಗಳು ಕೇವಲ ದಾಖಲೆ ಮಾಡುವ ಹಾಗೂ ಸ್ವ-ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಮಾತ್ರವೇ ಸೃಷ್ಟಿಸಲಾಗಿದೆ. ಸುಮಾರು 20ಕೋಟಿಗೂ ಹೆಚ್ಚು ಮೊತ್ತವುಳ್ಳ ಅಂದಾಜುಗಳ ವಿವಿಧ ಕಾಮಗಾರಿಗಳಿಗೆ ರೂ.284.00ಲಕ್ಷ ಮೊತ್ತದ ಸಾಮಾಗ್ರಿ ಬಿಲ್ಲು ತಯಾರಿಸಿ ಪಾವತಿಸಿದ್ದು ಸೂಕ್ತ ಉಸ್ತುವಾರಿ, ನಿರ್ವಹಣೆ, ಪರಿಶೀಲನೆ, ದಾಖಲೆ ಧೃಢೀಕರಣ ನಿರ್ವಹಿಸಿರುವುದಿಲ್ಲ.
  • ಜಿ.ಪಂ. ಕಿ.ಇಂ. ನಿಂಗೇಗೌಡ ರವರು ಅಂದಾಜು ತಯಾರಿಕೆ ಕಾಮಗಾರಿಯ ಕಾರ್ಯ ನಿರ್ವಹಣೆ, ಉಸ್ತುವಾರಿ ಪರಿಶೀಲನೆ, ದಾಖಲೆಗಳ ನಿರ್ವಹಣೆಯನ್ನು ಸರ್ಕಾರದ ನಿಯಮಾವಳಿಯ ರೀತ್ಯಾ ನಿರ್ವಹಿಸದೇ ಮನಬಂದಂತೆ ಬೇಜವಾಬ್ದಾರಿಯಿಂದ ನಿರ್ವಹಿಸುತ್ತಿರುವುದು ಕಂಡು ಬರುತ್ತದೆ. ಅಂದಾಜು ತಯಾರಿಕೆಯನ್ನು ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾಗಿರುವ ಮೊತ್ತಕ್ಕೆ ಮಾಡದೇ ಕ್ರಿಯಾ ಯೋಜನೆಯಲ್ಲಿ ಸೂಚಿಸಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ತಯಾರಿಸಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಕಾರಣರಾಗಿರುತ್ತಾರೆ ಹಾಗೂ ಕೆಲವು ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ಸಹಾ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಂದ ಮಂಜೂರು ಮಾಡಿಸಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಕಾರಣಕರ್ತರಾಗಿರುತ್ತಾರೆ. ಈ ರೀತಿಯ ಕಾರ್ಯ ನಿರ್ವಹಣೆಯಲ್ಲಿ ತಾಲ್ಲೂಕಿನ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದು ಕಂಡು ಬರುತ್ತದೆ.
  • ಅಳತೆ ಪುಸ್ತಕಗಳಲ್ಲಿ ಕೆಲವು ಸಾಮಾಗ್ರಿ ಬಿಲ್ಲುಗಳಲ್ಲಿ ಅಳತೆಗಳ ನಮೂದು ದಿನಾಂಕಗಳನ್ನು ಖಾಲಿ ಇಟ್ಟುಕೊಂಡು ನಂತರದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಮೂದಿಸಿರುವುದು ಕಂಡು ಬರುತ್ತದೆ.ಅಳತೆ ಪುಸ್ತಕಗಳನ್ವಯ ಅಳತೆ ಪುಸ್ತಕಗಳನ್ವಯ ಅಳತೆ ದಾಖಲೆಯ ದಿನಾಂಕಗಳು ಕ್ರಮಬದ್ದವಾಗಿರುವುದಿಲ್ಲ. ಇದು ಪೂರ್ಣ ಸಂಶಯಕ್ಕೆ ಕಾರಣವಾಗಿದೆ. ಇದಲ್ಲದೇ ಬಹಳಷ್ಟು ಖಾಸಗಿ ಫಲಾನುಭವಿಗಳ ಜಮೀನು ಸಮತಟ್ಟು ಕಾರ್ಯಕ್ರಮಗಳಿಗೆ ಗ್ರಾವೆಲ್ ಮಣ್ಣು ಹಾಕಿ ಸಮತಟ್ಟು ಮಾಡಿರುವುದು ಎಂದು ಬಿಲ್ಲುಗಳಲ್ಲಿ ದಾಖಲಿಸಿ ಟ್ರಾಕ್ಟರ್ ಬಾಡಿಗೆ, ಗ್ರಾವೆಲ್ ಮಣ್ಣು ಸಂಗ್ರಹಣೆಗಾಗಿ ಹಣ ನೀಡಿರುವುದು ಕಂಡು ಬರುತ್ತದೆ. ಇದು ಯೋಜನೆಯ ಫಲಕಾರಿ ಅನುಷ್ಠಾನವಲ್ಲ.

1 ಕಾಮೆಂಟ್‌:

ವಿ. ಭೂಮಿಕಾ ಹೇಳಿದರು...

"ಜನಸಂಖ್ಯೆಗನುಗುಣವಾಗಿ ಕಾಮಗಾರಿಯನ್ನು ನಿರ್ದರಿಸುವುದಿಲ್ಲ" ಒಟ್ಟೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳ ಯಾದಿಯನ್ನು ತಯಾರಿಸಿ ಅಭಿವೃದ್ಧಿ ಮುನ್ನೋಟ (Five years Perspective Plan) ಸಿದ್ಧಪಡಿಸಲಾಗುವುದು..ನಂತರ ಪ್ರತಿ ವರ್ಷ ಆದ್ಯತೆ ಮೇರೆ ಕೈಗೆತ್ತಿಕೊಳ್ಳಬಹುದಾದ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುತ್ತಾರೆ...