ಮಂಗಳವಾರ, ಸೆಪ್ಟೆಂಬರ್ 21, 2010

ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢಶಾಲೆ ಮಾನ್ಯತೆ ರದ್ದು

ಅರಕಲಗೂಡು: ಪಟ್ಟಣದ ಪ್ರತಿಷ್ಟಿತ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಮಾನ್ಯತೆಯನ್ನು ರದ್ದು ಪಡಿಸಲಾಗಿದ್ದು ಮುಂದಿನ ಪರ್ಯಾಯ ಕ್ರಮಗಳಿಗಾಗಿ ಪೋಷಕರ ತುರ್ತು ಸಭೆಯನ್ನು ಸೆ.23ರಂದೆಉ ಕರೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಸೀತಾ ರಾಘವ ಎಜುಕೇಶನ್ ಸೊಸೈಟಿ(ರಿ) ವತಿಯಿಂದ ನಡೆಯುತ್ತಿರುವ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢಶಾಲೆಯನ್ನು ಇಲಾಖೆಯ ಅನುಮತಿಯಿಲ್ಲದೇ ಬೇರೆಡೆಗೆ ಸ್ಥಳಾಂತರಿಸಿರುವುದರಿಂದ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ತಕ್ಷಣದಿಂದ ಶಾಲೆಯ ಮಾನ್ಯತೆಯನ್ನು ಹಿಂಪಡೆದಿದ್ದಾರೆ. ಆದ್ದರಿಂದ ಸದರಿ ಶಾಲೆಯನ್ನ ತಕ್ಷಣದಿಂದ ಜಾರಿಗೆ ಬ ರುವಂತೆ ಮುಚ್ಚಲಾಗುತ್ತದೆ. ಶಾಲೆಯಲ್ಲಿ 8,9,10ನೇ ತರಗತಿ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಹತ್ತಿರದ ಬೇರೆ ಶಾಲೆಗಳಿಗೆ ದಾಖಲಿಸುವಂತೆ ಸೂಚಿಸಲಾಗಿದೆ, ಹಾಗೂ ಈ ಬಗ್ಗೆ ಕ್ರಮ ವಹಿಸಲು ಸೆ.23 ರಂದು ಬೆಳಿಗ್ಗೆ 10ಗಂಟೆಗೆ ಮಕ್ಕಳ ಪೋಷ ಕರಸಭೆಯನ್ನು ಶಾಲೆಯ ಸಭಾಂಗಣದಲ್ಲಿ ಕರೆಯಲಾಗಿದ್ದು ತಪ್ಪದೇ ಸಭೆಗೆ ಹಾಜರಾಗಲು ಪೋಷಕರನ್ನು ಕೋರಲಾಗಿದೆ.
ಆಕ್ಷೇಪ: ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಫಣೀಶ್ ಶಿಸ್ತಿನ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ, ಆದರೆ ಅವರನ್ನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮವೆಸಗಿದ್ದಾರೆಂದು ಅಮಾನತುಗೊಳಿಸಿರುವುದು ವಿಷಾಧನೀಯಕರ ಸಂಗತಿ ಎಂದು ನೌಕರ ಸಂಘದ ಅಧ್ಯಕ್ಷ ವೆಂಕಟೇಶ್ ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ: