ಗುರುವಾರ, ಸೆಪ್ಟೆಂಬರ್ 2, 2010

ಅರಕಲಗೂಡಿನಲ್ಲಿ ರಾಧಾ-ಕೃಷ್ಣರ ಸಮಾವೇಶ



ಅರಕಲಗೂಡು: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಟ್ಟಣದಲ್ಲಿ ರಾಧಾ-ಕೃಷ್ಣ ವೇಷದಾರಿಗಳ ಸಮಾವೇಶ ನಿವೇದಿತಾ ಶಾಲೆಯ ಆಶ್ರಯದಲ್ಲಿ ಏರ್ಪಾಟಾಗಿತ್ತು. ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ ಸಮಾವೇಶದಲ್ಲಿ 100ಕ್ಕೂ ಅಧಿಕ ರಾಧಾ-ಕೃಷ್ಣರ ವೇಷಧಾರಿ ಮಕ್ಕಳು ಪಾಲ್ಗೊಂಡಿದ್ದರು. 1ರಿಂದ 7ನೇ ತರಗತಿಯವರೆಗಿನ ಮಕ್ಕಳು ವಿವಿಧ ರೀತಿಯ ಉಡುಗೆ ಧರಿಸಿ ರಾಧ-ಕೃಷ್ಣರಾಗಿ ಕಂಗೊಳಿಸಿದರು, ಮುಸಲ್ಮಾನ ಭಾಂಧವರ ಮಕ್ಕಳು ಸಹಾ ಕೃಷ್ಣ-ರಾಧೆಯ ವೇಷಧರಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು. ಇದೇ ಸಂಧರ್ಭದಲ್ಲಿ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಸಹಾ ಏರ್ಪಾಟಾಗಿತ್ತು. ಸಮಾವೇಶವನ್ನು ವಾಸವಿ ಮಹಿಳಾ ಸಮಾಜದ ಪದ್ಮಾವತಮ್ಮ ಉದ್ಘಾಟಿಸಿದರು. ರಾಗಿಣಿ-ಅಕ್ಷತಾ ಪ್ರಾರ್ಥಿಸಿ, ನಂದಿನಿ ಸ್ವಾಗತಿಸಿದರು, ಲತಾ ವಂದಿಸಿ ರಂಜಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷ್ಣ ವೇಷಧಾರಿ ವಿಜೇತರ ವಿವರ: ತೇಜಸ್ ಎಸ್ ಕಶ್ಯಪ್ (ಪ್ರಥಮ) ಜ್ಯೋತಿ ಆಂಗ್ಲಶಾಲೆ, ಶ್ರೀರಾಂ(ದ್ವಿತಿಯ) ನಿವೇದಿತಾ ಶಾಲೆ, ಪೃಥ್ವಿ (ತೃತೀಯ). ರಾಧೆ ವೇಷಧಾರಿ ವಿಜೇತರು: ಪರ್ವಿತ(ಪ್ರಥಮ), ಮಾನ್ಯ ಎಚ್. ಎಂ(ದ್ವಿತಿಯ), ಮೇಘ(ತೃತೀಯ). ಭಗವದ್ಗೀತೆ ಕಂಠಪಾಠ ವಿಜೇತರು: ಮೇಘನಾ(ಪ್ರಥಮ),ಅನುಕೌಶಿಕ್(ದ್ವಿತಿಯ)ಸುರಭಿ ಎಂ(ತೃತಿಯ).

ಅರಕಲಗೂಡು: ಜಾತ್ಯಾತೀತ ಜನತಾದಳದ ಕಾರ್ಯಕರ್ತರ ಸಭೆ ಸೆಪ್ಟಂಬರ್ 4ರಂದು ಬೆಳಿಗ್ಗೆ 11ಗಂಟೆಗೆ ಶಿಕ್ಷಕರ ಭವನದಲ್ಲಿ ಏರ್ಪಾಟಾಗಿದೆ ಎಂದು ಜೆಡಿಎಸ್ ಮುಖಂಡ ತಾಲೂಕು ಪಂಚಾಯ್ತಿ ಅಧ್ಯಕ್ಷ ಎಚ್ ಮಾದೇಶ್ ತಿಳಿಸಿದ್ದಾರೆ. ಅಂದಿನ ಸಭೆಗೆ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ರಾಜ್ಯ ಸಭಾ ಸದಸ್ಯ ಎಚ್ ಕೆ ಜವರೇಗೌಡ, ಕೃಷಿಕ ಸಮಾಜದ ಅಧ್ಯಕ್ಷ ಎಂ ಸಿ ರಂಗಸ್ವಾಮಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮುತ್ತಿಗೆ ರಾಜೆಗೌಡ, ಮತ್ತಿತರ ಜೆಡಿಎಸ್ ಮುಖಂಡರು ಭಾಗವಹಿಸುವರು, ಮಾಜಿ ಶಾಸಕ ಎ ಟ ರಾಮಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದ್ದಾರೆ.

ಗೋಹತ್ಯೆ ಪ್ರತಿಭಟನೆ: ಗೋ ಹತ್ಯೆ ಕಾಯ್ದೆಗೆ ಅಂಕಿತಾ ಹಾಕುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ಘಟಕ ಸೆ.3ರಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಮುಖಂಡ ಕೇಶವೇಗೌಡ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ: