ಸೋಮವಾರ, ಆಗಸ್ಟ್ 23, 2010

ಅತಿಥಿ ಉಪನ್ಯಾಸಕರ ಸಂದರ್ಶನ ಇಂದು

ಅರಕಲಗೂಡು: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆ.24ರಂದು ಸಂದರ್ಶನ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಚಲುವಯ್ಯ ತಿಳಿಸಿದ್ದಾರೆ. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಕನ್ನಡ-1,ಇಂಗ್ಲೀಷ್-2,ಅರ್ಥಶಾಸ್ತ್ರ-2,ಸಮಾಜ ಶಾಸ್ತ್ರ-3,ವಾಣಿಜ್ಯ ಶಾಸ್ತ್ರ-9,ಇತಿಹಾಸ-1 ಮತ್ತು ಪರಿಸರ ಅಧ್ಯಯನ-1 ತಾತ್ಕಾಲಿಕ ಉಪನ್ಯಾಸಕ ಹುದ್ದೆಗಳು ಖಾಲಿ ಇದ್ದು ವಿವಿ ನಿಯಮಾನುಸಾರ NET,SLET,PhD., ಆದವರಿಗೆ ಆದ್ಯತೆ ನೀಡಲಾಗುವುದು. ಅರ್ಹರು ಆ.24ರಂದು ಮದ್ಯಾಹ್ನ ಕಾಲೇಜಿನಲ್ಲಿ ಸಂದರ್ಶನ ನಡೆಯಲಿದೆ, ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸಿದ್ದಾರೆ.
ದಸಂಸ ನೂತನಸಮಿತಿ: ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಯನ್ನು ಪುನರ್ ರಚಿಸಲಾಗಿದೆ. ದಸಂಸ ಮುಖಂಡ ಡಿ ಇ ಜನಾರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮುಂದಿನಂತೆ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಟಿ ವಿ ಶಿವರಾಮಯ್ಯ-ಸಂಚಾಲಕರು, ಮಗ್ಗೆಸಣ್ಣಸ್ವಾಮಿ,ಎ ಸಿ ಮಂಜುನಾಥ,ಸುರೇಶ-ಸಂಘಟನಾ ಸಂಚಾಲಕರುಗಳು ಗಿರೀಶ್-ಖಜಾಂಚಿ, ಪ್ರವೀಣ್ ಕುಮಾರ್,ಜೆ ಸ್ವಾಮಿ,ಚನ್ನಕೇಶವ, ಡಿ ಜೆ ಸಾಗರ್ - ಸಲಹಾ ಸಮಿತಿ ನಿರ್ದೇಶಕರುಗಳು.

ಕಾಮೆಂಟ್‌ಗಳಿಲ್ಲ: