ಶನಿವಾರ, ಜುಲೈ 31, 2010

ವಿದ್ಯುತ್ ಸ್ಪರ್ಶ ಹಸುಗಳ ಸಾವು

ಅರಕಲಗೂಡು: ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಒಂದು ಹಸು ಮತ್ತು ಒಂದು ಹೋರಿ ಮೃತಪಟ್ಟ ಘಟನೆ ತಾಲೂಕಿನ ಮರವಳಲು ಗ್ರಾಮದಲ್ಲಿ ನಡೆದಿದೆ. ನಿನ್ನೆ ಚಂದ್ರ ಎಂಬುವವರಿಗೆ ಸೇರಿದ ಜಾನುವಾರುಗಳು ಅವರ ಮನೆಯ ಬಳಿ ಮೇಯುತ್ತಿದ್ದವು ಆ ವಿದ್ಯುತ್ ತಂತಿಯೊಂದು ತುಂಡಾಗಿ ಅವುಗಳ ಮೇಲೆ ಬಿದ್ದುದರಿಂದ ಜಾನುವಾರುಗಳು ಸ್ಥಳದಲ್ಲೇ ಮೃತಪಟ್ಟವು. ಮತ್ತೊಂದು ಪ್ರಕರಣದಲ್ಲಿ ಕತ್ತಿಮಲ್ಲೆನಹಳ್ಳಿಯಲ್ಲಿ ಗೋಡೆ ಕುಸಿತದಿಂದ ಹಸುವಿನ ಕೊಂಬುಗಳು ಹಾಗು ಕಾಲು ಮುರಿದಿದೆ. ಸ್ಥಳಕ್ಕೆ ಕಂದಾಯ-ಪಶು ಮತ್ತು ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು ಪರಿಹಾರ ಒದಗಿಸಲು ಕ್ರಮ ಕೈಗೊಂಡಿದ್ದಾರೆ.

ಅರಕಲಗೂಡು: ಪರಿಶಿಷ್ಟವರ್ಗದ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸದಿದುದರಿಂದ ಖಾಲಿ ಉಳಿದಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಹೆಬ್ಬಾಲೆ ಗ್ರಾ.ಪಂ. ನಲ್ಲಿ ಇಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ಶೈಲಜಾ ತಿಳಿಸಿದ್ದಾರೆ. ಹೆಬ್ಬಾಲೆ ಪ.ವ. ಮೀಸಲು ಸ್ಥಾನಕ್ಕೆ ಆಶಾ ಮತ್ತು ಶೈಲ 1ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಚುನಾವಣೆ ನಡೆಯುವುದು. ಯಲಗತವಳ್ಳಿ ಗ್ರಾ.ಪಂ. ನಲ್ಲಿ ಇಂದು ನಡೆದ ಅಧ್ಯಕ್ಷ-ುಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಯಶೋಧಮ್ಮ ಆಯ್ಕೆಯಾಗಿದ್ದಾರೆ. ಚುನಾವಣೆ ಬಹಿಷ್ಕರಿಸಿದ್ದ ವಡ್ವಾನ ಹೊಸಹಳ್ಳಿಯಲ್ಲಿ ಪರಿಶಿಷ್ಠ ಜಾತಿಯ ಪದ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಳೆ ವಿವರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಅರಕಲಗೂಡಿನಲ್ಲಿ ಶನಿವಾರ ಬೆಳಿಗ್ಗೆಯವರೆಗೆ 10.2ಮಿಲಿಮೀ. ಮಲ್ಲಿಪಟ್ಟಣದಲ್ಲಿ 8.0ಮಿಮಿ. ದೊಡ್ಡಮಗ್ಗೆಯಲ್ಲಿ 13.4ಮಿಮಿ, ಬಸವಾಪಟ್ಟಣದಲ್ಲಿ 20.00ಮಿಮಿ ಕೊಣನೂರಿನಲ್ಲಿ 7.2ಮಿಮಿ, ರಾಮನಾಥಪುರದಲ್ಲಿ 6.6ಮಿಮಿ, ದೊಡ್ಡಬೆಮ್ಮತ್ತಿಯಲ್ಲಿ 18.2ಮಿಮಿ ಮಳೆಯಾಗಿದೆ.

ಕಾಮೆಂಟ್‌ಗಳಿಲ್ಲ: