ಮಂಗಳವಾರ, ಜನವರಿ 19, 2010

ಕನ್ನಡ ಬೆಳ್ಳಿಪರದೆಯ 'ಸಿರಿವಂತ' ಕೆಎಸ್ ಅಶ್ವತ್ಥ್

'ಸ್ತ್ರೀರತ್ನ' ಚಿತ್ರದ ಮೂಲಕ ಬೆಳ್ಳಿತೆರೆ ಅಲಂಕರಿಸಿದ ಹಿರಿಯ ಪೋಷಕ ನಟ ಕೆ ಎಸ್ ಅಶ್ವತ್ಥ್ ನಂತರ 370 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಶ್ವತ್ಥ್ ಅಭಿನಯಿಸಿದ ಕೆಲವು ಚಿತ್ರಗಳು ಇಂದಿಗೂ ಅಜರಾಮರ. 1960ರಲ್ಲಿ ತೆರೆಕಂಡ ಬಿ ಸರೋಜಾದೇವಿ ಅಭಿನಯದ 'ಕಿತ್ತೂರು ಚೆನ್ನಮ್ಮ' ಚಿತ್ರದಲ್ಲಿ ಸ್ವಾಮೀಜಿಯಾಗಿ ಅಭಿನಯಿಸಿದ್ದರು. ಅದೇ ವರ್ಷ ತೆರೆಕಂಡ 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ನಾರದ ಮುನಿಯ ಪಾತ್ರದಲ್ಲಿ ಕಾಣಿಸಿದ್ದರು.

'ಗಾಳಿ ಗೋಪುರ' ಚಿತ್ರದ ಮೂಲಕ ತಾವೊಬ್ಬ ಅಪ್ಪಟ ಕಲಾವಿದ ಎಂಬುದನ್ನು ತೋರಿಸಿಕೊಟ್ಟರು. ಅಶ್ವತ್ಥ್ ಅವರು ಆಂಗ್ಲ ಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. Seven Wonders of the World ಎಂಬ ಆಂಗ್ಲ ಚಿತ್ರದಲ್ಲಿ ಅಶ್ವತ್ಥ್ ಅಭಿನಯಿಸಿದ್ದರು. ಆಂಗ್ಲ ಚಿತ್ರದಲ್ಲಿ ನಟಿಸಿದ ಮೊದಲ ಕನ್ನಡ ನಟ ಎಂಬ ಖ್ಯಾತಿಯೂ ಅಶ್ವತ್ಥ್ ಅವರಿಗೆ ಸಲ್ಲುತ್ತದೆ.

ಮೇರುನಟ ಅಶ್ವಥ್ ಚಿತ್ರಸಂಪುಟ

ನಾಗಹಾವು, ನಂದಾದೀಪ, ಗೆಜ್ಜೆಪೂಜೆ, ಶರಪಂಜರ, ಜೇನುಗೂಡು, ನ್ಯಾಯವೇ ದೇವರು ಮತ್ತು ಬೆಳ್ಳಿ ಮೋಡ ಚಿತ್ರಗಳು ಅಶ್ವತ್ಥ್ ನಟನೆಯ ಅತ್ಯುತ್ತಮ ಚಿತ್ರಗಳಲ್ಲಿ ಕೆಲವು. ಫುಡ್ ಇನ್ಸ್ ಫೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಅಶ್ವತ್ಥ್ ಅವರು ಕೆಲಸಕ್ಕೆ ರಾಜೀನಾಮೆ ನೀಡಿ ಚಿತ್ರರಂಗೆಕ್ಕೆ ಬಂದಿದ್ದರು. ಈ ಬಗ್ಗೆ ಅವರ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಅಶ್ವತ್ಥ್ ನಟನೆಯ ಕೆಲವು ಚಿತ್ರಗಳು
ಸ್ತ್ರೀರತ್ನ, ಅಣ್ಣತಂಗಿ, ನಮ್ಮ ಮಕ್ಕಳು, ಶುಭಮಂಗಳ, ನಾಗರಹಾವು, ಶ್ರೀ ಪುರಂದರದಾಸರು, ಕಸ್ತೂರಿ ನಿವಾಸ, ಉಪಾಸನೆ, ಮುತ್ತಿನ ಹಾರ, ಪರಾಜಿತ, ಜೇನುಗೂಡು, ಹೃದಯ ಸಂಗಮ, ಹೇಮರೆಡ್ಡಿ ಮಲ್ಲಮ್ಮ, ನಾ ನಿನ್ನ ಬಿಡಲಾರೆ, ನವಜೀವನ, ಸಂಧ್ಯಾರಾಗ, ಗೆಜ್ಜೆ ಪೂಜೆ, ಮಹಾಸತಿ ಅನಸೂಯ, ಒಂದೇ ಬಳ್ಳಿಯ ಹೂಗಳು, ಬೆಳ್ಳಿ ಮೋಡ, ಅನುರಾಧ, ಕರುಣಾಮಯಿ, ಕಾಚದೇವಯಾನಿ, ಕೋಕಿಲ ವಾಣಿ, ಚಿಂತಾಮಣಿ, ಪ್ರಭುಲಿಂಗ ಲೀಲೆ, ಭೂ ಕೈಲಾಸ, ಮಂಗಲ ಯೋಗ, ಮನೆಗೆ ಬಂದ ಮಹಾಲಕ್ಷ್ಮಿ, ಮಹಿಷಾಸುರ ಮರ್ದಿನಿ, ರಣಧೀರ ಕಂಠೀರವ, ಭಕ್ತ ಕನಕದಾಸ, ಕುಲವಧು, ನಂದಾದೀಪ, ಮಹಾಶಿಲ್ಪಿ, ಪ್ರೇಮಮಯಿ, ಸುಬ್ಬಾ ಶಾಸ್ತ್ರಿ, ಸತಿ ಸುಕನ್ಯ, ಇಮ್ಮಡಿ ಪುಲಿಕೇಶಿ, ಜೇಡರ ಬಲೆ, ಬೆಂಗಳೂರು ಮೇಲ್, ಅಮ್ಮ, ಭಗೀರಥಿ, ಕಲ್ಪವೃಕ್ಷ, ಉಯ್ಯಾಲೆ, ಗೃಹಲಕ್ಷ್ಮಿ, ಅನಿರೀಕ್ಷಿತ, ನಮ್ಮ ಮನೆ, ವಿಷ ಕನ್ಯೆ, ಬಾಲ ಪಂಜರ, ದೇವರು ಕೊಟ್ಟ ವರ, ಮಾತು ತಪ್ಪದ ಮಗ, ಆಟೋ ರಾಜ, ನಾರದ ವಿಜಯ, ಸಿರಿವಂತ, ಶಬ್ದವೇದಿ.
ತಿಪ್ಪಗೊಂಡನಹಳ್ಳಿ ಬಸ್ ಹತ್ತಿದ ಜಗ್ಗೇಶ್, ಕೋಮಲ್
ನವರಸ ನಾಯಕ ಜಗ್ಗೇಶ್ ಅಭಿನಯಕ್ಕೆ ಮನ ಸೋಲದವದರ ಸಂಖ್ಯೆ ವಿರಳ. ತಮ್ಮ ಅಮೋಘ ಅಭಿನಯದಿಂದ ಅಭಿಮಾನಿ ಸಮೂಹಕ್ಕೆ ನಗೆಯ ರಸದೌತಣ ನೀಡುವ ಅಪರೂಪದ ಕಲಾವಿದರವರು. ಅವರ ಸಹೋದರ ಕೋಮಲ್ ಕೂಡ ಮೇಲಿನ ಮಾತಿಗೆ ಹೊರತಲ್ಲ. ನಿರ್ದೇಶನ, ಸಂಗೀತ ನಿರ್ದೇಶನದೊಂದಿಗೆ, ನಟನೆಯಲ್ಲೂ ಅದ್ಭುತ ಯಶಸ್ಸು ಕಂಡವರು ಸಾಧುಕೊಕಿಲಾ. ಇವರನ್ನು ತೆರೆಯಲ್ಲಿ ಕಂಡ ಕೂಡಲೆ ಚಪ್ಪಾಳೆ, ಶಿಳ್ಳೆಗಳದೇ ಆರ್ಭಟ. ಮತ್ತೊಬ್ಬ ಕಲಾವಿದ ರಾಜುತಾಳಿಕೋಟೆ. ರಂಗಭೂಮಿಯಲ್ಲಿ ಹೆಚ್ಚಿನ ಅನುಭವ. ‘ಮನಸಾರೆ’ ಚಿತ್ರದಲ್ಲಿ ಅಭಿನಯಿಸಿ ನೋಡುಗರ ಮನಸೂರೆಗೊಂಡರು. ಇಂತ ಅನುಭವಿ ಕಲಾವಿದರ ಅಭಿನಯ ‘ಲಿಫ್ಟ್ ಕೊಡ್ಲಾ’ ಚಿತ್ರಕ್ಕೆ ಲಭ್ಯ. .

ಈ ನಾಲ್ವರು ಕಲಾವಿದರು ಒಂದೇ ಬಸ್‌ನಲ್ಲಿ ಕುಳಿತು ತಿಪ್ಪಗೊಂಡನಹಳ್ಳಿ ಸುತ್ತಾಮುತ್ತಾ ಪ್ರಯಾಣಿಸುತ್ತಾರೆ. ಆ ಬಸ್ಸಿನಲ್ಲಿ ಹಾಸ್ಯಭರಿತ ಮಾತುಗಳನ್ನು ಆಡುತ್ತಾರೆ. ಈ ಸನ್ನಿವೇಶವನ್ನು ‘ಲಿಫ್ಟ್ ಕೊಡ್ಲಾ’ ಚಿತ್ರಕ್ಕಾಗಿ ಚಿತ್ರೀಕರಿಸಿಕೊಂಡ ನಿರ್ದೇಶಕ ಅಶೋಕ್ ಕಶ್ಯಪ್ ಸಂತಸದಲಿದ್ದಾರೆ. ‘ಈ ನಾಲ್ವರು ನಟರ ಅಭಿನಯ ಅದ್ಭುತ’ ಎಂದು ಪ್ರಶಂಸೆ ಕೂಡ ಮಾಡಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಸಿಕರಿಗೆ ಈ ಚಿತ್ರ ಉತ್ತಮ ಮನೋರಂಜನೆ ನೀಡುವುದಂತು ಸತ್ಯ.

ಸಿ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ ಎಂ ಆರ್ ಶಂಕರ್‌ರೆಡ್ಡಿ ನಿರ್ಮಿಸುತ್ತಿರುವ ‘ಲಿಫ್ಟ್ ಕೊಡ್ಲಾ’ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ರಾಂನಾರಾಯಣ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಛಾಯಾಗ್ರಹಣದ ನಿರ್ವಹಣೆ ಮಾಡುತ್ತಿದ್ದಾರೆ. ಜಗ್ಗೇಶ್, ಕೋಮಲ್, ಅರ್ಚನಾಗುಪ್ತಾ, ಸುದರ್ಶನ್, ರಾಜುತಾಳಿಕೋಟೆ, ಕಿಲ್ಲರ್‌ವೆಂಕಟೇಶ್, ಕಿಶೋರ್, ಶೋಭ್‌ರಾಜ್, ವಿ.ಮನೋಹರ್, ಬುಲೆಟ್‌ಪ್ರಕಾಶ್, ಸಾಧುಕೋಕಿಲಾ, ಬ್ಯಾಂಕ್ ಜನಾರ್ದನ್ ಮುಂತಾದವರು ಚಿತ್ರದ ತಾರಾಗಣದಲಿದ್ದಾರೆ. ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕಾಮೆಂಟ್‌ಗಳಿಲ್ಲ: