ಬುಧವಾರ, ಅಕ್ಟೋಬರ್ 20, 2010

ಕೋಟಿ ಬಹುಮಾನದ ಆಮಿಷಕ್ಕೆ ಮರುಳಾಗದಿರಿ..


  • ಅರಕಲಗೂಡು ಜಯಕುಮಾರ್

TO REDEEM YOUR PRIZE IS FREE OF CHARGE!!

Your E-ID was selected online in this week''s AWARD PROMO BRITISH CANADIAN
LOTTERY BC-49 05 07 14 20 32 34 06 Your draw has a total value of
$1,000,000.00 USD
And your Winning No:05 07 14 20 32 34 06. Please acknowledge the receipt of
this mail 
with the details below to our claim agent.

Contact Agent: Mr.Tross Brian.
E-mail: onlinepromo_7171yahoo.com.hk

Claims Requirements


ಹೀಗೊಂದು ಈ ಮೇಲ್ ಅಥವಾ ಮೊಬೈಲ್ ಎಸ್ ಎಂ ಎಸ್ ನಿಮಗೂ ಬಂದಿರಬಹುದು. ಜೋಕೆ ಇಂಥಹದ್ದಕ್ಕೆಲ್ಲ ಮರುಳಾಗಿ ನಿಮ್ಮ ಸಂಪೂರ್ಣ ಮಾಹಿತಿ ನೀಡಿ ಒಮ್ಮೆ ಸಂಪರ್ಕಿಸಿದಿರೋ ನಿಮ್ಮನ್ನು ಪೂರಾ ಸುಲಿದು ಬಿಡಲು ಅಪರಾಧಿಗಳು ಸಜ್ಜಾಗಿರುತ್ತಾರೆ. ಕಳೆದ ಒಂದೆರೆಡು ವರ್ಷಗಳಿಂದಲೂ ಇಂಥಹದ್ದೊಂದು ದಂಧೆ ಜಾಗೃತಾವಸ್ಥೆಯಲ್ಲಿದೆ. ಅಂತರ್ಜಾಲದಲ್ಲಿ ಜಾಹಿರಾತು ಆಕರ್ಷಣೆಗಳು ಬೇಡವೆಂದರೂ ನಾನಾ ನಮೂನೆಯ ಮೇಲ್ ಗಳು ಮೊಬೈಲ್ ಗೆ ಎಸ್ ಎಂ ಎಸ್ ಗಳು ಬರುವುದು ಸಹಜ. ಅದೊಮ್ಮೆ ನನ್ನ ಮೇಲ್ ಗೆ ಪದೇ ಪದೇ ಬಂದು ಬೀಳುತ್ತಿದ್ದ ಅಪರಿಚಿತ ಆಗಂತುಕನ ಮೇಲ್ ಅನ್ನು ಕುತೂಹಲದಿಂದ ತೆರೆದು ನೋಡಿದೆ. ''ನಾನು ಉಗಾಂಡ ದೇಶದ ರಾಜಮನೆತನದ ಗಣ್ಯ ವ್ಯಕ್ತಿ, ಅಲ್ಲಿನ ಆಂತರಿಕ ಕಲಹಗಳಿಂದ ದೇಶಾಂತರ ಬಂದಿದ್ದೇನೆ. ರಾಯಭಾರ ಕಛೇರಿಯಲ್ಲಿ ನಿಮ್ಮ ಈ ಮೇಲ್ ವಿಳಾಸ ತಿಳಿಯಿತು, ದೇಶ ಬಿಟ್ಟು ಬರುವಾಗ ಅಪಾರ ಮೊತ್ತದ ಹಣವನ್ನು ತಂದಿದ್ದೇನೆ. ನಿಮ್ಮಲ್ಲಿ ವಿಶ್ವಾಸವಿಟ್ಟು ಯಾವುದಾದರೂ ವ್ಯವಹಾರದಲ್ಲಿ ನಿಮ್ಮ ಹೆಸರಿನಲ್ಲಿ ಹಣ ಹೂಡುವವನಿದ್ದೇನೆ. ಬಂದ ಲಾಭಾಂಶದಲ್ಲಿ ಅರ್ಧಕ್ಕರ್ಧ ಹಂಚಿಕೊಳ್ಳೋಣ ಈ ವಿಚಾರ ನಮ್ಮ ನಡುವೆ ಮಾತ್ರ ಇರಲಿ ಸಧ್ಯಕ್ಕೆ ನಿಮ್ಮ ವ್ಯಕ್ತಿ ವಿವರವನ್ನು ಕಳುಹಿಸಿ ಎಂದಿತ್ತು. ಪರವಾಗಿಲ್ವೇ ಮನೆ ಬಾಗಿಲಿಗೆ ಅದೃಷ್ಠ ಒದ್ಕೊಂಡು ಬಂದಿದೆ ಅಂತ ವಿವರ ಕಳುಹಿಸಿದರೆ ನನ್ನಲ್ಲಿರುವ ದಶಲಕ್ಷ ಹಣವನ್ನು ನಿಮ್ಮ ಅಕೌಂಟಿಗೆ ಹಾಕಬೇಕು ನಿಮ್ಮ ಬ್ಯಾಂಕ್ ಖಾತೆ ನಂಬರು ಕಳುಹಿಸಿ ಎಂಬ ಪತ್ರ ಬಂತು, ಆತನ ಮನವಿಯಂತೆ ಅಕೌಂಟ್ ನಂಬರು ಕಳುಹಿಸಿದರೆ ಹಣವನ್ನು ನನ್ನ ಖಾತೆಗೆ ವರ್ಗಾಯಿಸಲು ಇಂತಿಷ್ಟು ವಿನಿಮಯ ಹಣ ಕಟ್ಟಿ ಎಂದು ಆತನ ಬ್ಯಾಂಕ್ ಖಾತೆ ನಂಬರು ಬಂತು, ಅಲ್ಲಿಗೆ ಇದು ಟೋಪಿ ಸ್ಕೀಮು ಅಂತ ಖಾತ್ರಿ ಆಯ್ತು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದೆ. ಆದರೆ ನಿಮ್ಮ ಮೊಬೈಲು ನಂಬರನ್ನು ಲಕ್ಕಿ ಡ್ರಾದಲ್ಲಿ 250ಲಕ್ಷ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಅಭಿನಂದನೆಗಳು ನಿಮ್ಮ ವಿವರ ಕಳುಹಿಸಿ ಎಂದು ಲಕ್ಷಾಂತರ ಮಂದಿಗೆ ಇಂದಿಗೂ ಮೆಸೆಜುಗಳು ಬರುತ್ತಲೇ ಇವೆ ಆದರೆ ಅಮಾಯಕ ಜನ ಇಂಟರ್ ನೆಟ್ ಪಾರ್ಲರ್ ಗಳಿಗೆ ತೆರಳಿ ಮಾಹಿತಿ ನೀಡುವುದು, ಪದೇ ಪದೇ ಪತ್ರ ವ್ಯವಹಾರ ಮಾಡುವುದು, ಬ್ಯಾಂಕ್ ಗಳಲ್ಲಿ ಹಣ ಜಮಾವಣೆ ಮಾಡುವುದು ಇಂದಿಗೂ ನಡೆದಿದೆ. ಹಾಸನ ಜಿಲ್ಲೆಯಲ್ಲಿ ಅನೇಕ ಮಂದಿ ಇಂಥ ಮೋಸದ ಬಹುಮಾನಗಳಿಗೆ ಬಲಿಯಾಗಿದ್ದಾರೆ. ದುಡ್ಡು ಕಳೆದುಕೊಂಡ ಎಷ್ಟೋ ಮಂದಿ ಮೋಸ ಹೋದದ್ದನ್ನು ಹೇಳಿಕೊಳ್ಳಲಾಗದೇ ಸಂಕಟಪಡುತ್ತಿದ್ದಾರೆ. ಜನರನ್ನು ಸುಲಭ ರೀತಿಯಲ್ಲಿ ಆಕರ್ಷಿಸುವ ಸಲುವಾಗಿ ವಿವಿಧ ನಮೂನೆಯ ಕಟ್ಟುಕಥೆಗಳನ್ನು ಹೆಣೆಯುವ ಮಂದಿ ದೆಹಲಿ,ಮುಂಬೈ ಇಲ್ಲವೇ ಕೊಲ್ಲಿ ರಾಷ್ಟ್ರಗಳನ್ನು ಕಾರಾಸ್ಥಾನವಾಗಿ ಮಾಡಿಕೊಂಡು ಟೋಪಿ ಹಾಕುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರ ಮಾತನ್ನು ನಂಬಿ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಮುಗಿಯಿತು ಅದು ಮತ್ತೆ ಸಂಪರ್ಕಕ್ಕೆ ಸಿಗುವುದಿಲ್ಲ ಆದರೆ ಸದರಿ ಕ್ರಿಮಿನಲ್ ಗಳು ಸುಲಭವಾಗಿ ಮೋಬೈಲ್ ನಲ್ಲಿ ಸಿಕ್ಕುತ್ತಾರೆ.ಅಮೇರಿಕನ್ ಆಕ್ಸೆಂಟ್ ನಲ್ಲಿ ಮಾತನಾಡುತ್ತಾರೆ ನಂಬಿಕೆ ಬರುವ ರೀತಿ ವ್ಯವಹರಿಸುತ್ತಾರೆ. ಇನ್ನೇನು ಮುಂದಿನ ವಾರ ಕೋಟಿ ರೂಪಾಯಿಗಳ ಬಹುಮಾನದ ಮೊತ್ತ ಬಂದೆ ಬಿಡುತ್ತೆ ಎಂಬಷ್ಟರ ಮಟ್ಟಿಗೆ ಅವರು ಆಮಿಷ ಒಡ್ಡುತ್ತಾರೆ.ಕೆಲವು ಸ್ಥಳೀಯರೊಂದಿಗೆ ಸೇರಿ ವಿದೇಶಿ ಕ್ರಿಮಿನಲ್ ಗಳು ಇಂಥಹ ದಂಧೆಗೆ ಇಳಿದಿದ್ದಾರೆ. ಈ ಬಗ್ಗೆ ಆಗಾಗ್ಯೆ ಸೈಬರ್ ಠಾಣೆಗಳಲ್ಲಿ ದೂರು ದಾಖಲಾಗುತ್ತಿದೆ ಆದರೆ ಅಪರಾಧಿಗಳು ಸಿಕ್ಕಿರುವ ಪ್ರಕರಣಗಳು ಅತ್ಯಂತ ಕಡಿಮೆ. ಹೆಸರು ಹೇಳಲು ಇಚ್ಚಿಸದ ಪತ್ರಿಕೆಯ ಓದುಗರೊಬ್ಬರು ಇಂತಹ ವಂಚನೆಗೆ ಬಲಿಯಾಗಿದ್ದಾರೆ. ಬಹುಮಾನದ ಆಸೆಗೆ ಅತ್ತ ಕಡೆಯಿಂದ ಹೇಳಿದಷ್ಟು ದುಡ್ಡನ್ನು ಹಂತ ಹಂತವಾಗಿ ಅನಾಮತ್ತು 2ಲಕ್ಷರೂ ವರೆಗೆ ಕಟ್ಟಿದ್ದಾರೆ. ಇದಾಗಿ 7-8ತಿಂಗಳ ನಂತರವೂ ವಂಚಕ ಅವರ ಮೋಬೈಲಿಗೆ ವಂಚಕ ದಹಲಿಯಿಂದ ಫೋನಾಯಿಸುತ್ತಿದ್ದಾನೆ. ಬಹುಮಾನದ ಮೊತ್ತವನ್ನು ಪಾವತಿಸಲು ಅಂತಿಮವಾಗಿ ಇನ್ನೂ ಹೆಚ್ಚುವರಿ 20ಸಾವಿರ ಕಟ್ಟಿ ಅನ್ನುತ್ತಿದ್ದಾನೆ. ಆತನನ್ನು ಹುಡುಕಿಕೊಂಡು ಒಂದೆರೆಡುಬಾರಿ ದೆಹಲಿಗೆ ಹೋಗಿ ಬಂದದ್ದಾಗಿದೆ ಆದರ ಆತ ಕಣ್ಣಾಮುಚ್ಚಾಲೆ ಆಟ ಆಡುತ್ತಾ ತಪ್ಪಿಸಿಕೊಂಡಿದ್ದಾನೆ ನಂಬುವಂತಹ ಸಬೂಬು ಹೇಳಿದ್ದಾನೆ. ವಂಚನೆಗೊಳಗಾದ ಓದುಗ ತನಗಾದ ವಂಚನೆಯಿಂದ ಪರಿತಪಿಸುತ್ತಿದ್ದಾನೆ. ಇದೇ ರೀತಿ ಬಹುಮಾನದ ಆಸೆಗೆ ಬಿದ್ದ ಹಲವು ಮಂದಿ ಇಂದಿಗೂ ಇಂತ ಮೆಸೇಜುಗಳಿಗೆ ಬಲಿ ಬೀಳುತ್ತಿದ್ದಾರೆ. ಈ ಪೈಕಿ ಸರ್ಕಾರಿ ನೌಕರರು, ವ್ಯವಹಾರಸ್ಥರು, ವಿದ್ಯಾರ್ಥಿಗಳು ಇದ್ದಾರೆ. ಅಷ್ಟೆ ಏಕೆ ಜಿಲ್ಲೆಯ ಕೆಲವು ಪೋಲೀಸರು ಮತ್ತಿ ಎಸ್ ಐ ಗಳು ಕೂಡ ಇಂತ ಆಮಿಷಕ್ಕೆ ತುತ್ತಾಗಿ ಪಿಗ್ಗಿ ಬಿದ್ದಿದ್ದಾರೆ. ಸುಲಭ ಮಾರ್ಗದಲ್ಲಿ ದುಡ್ಡು ಸಿಗುತ್ತದೆ ಎಂದರೆ ಯಾರಿಗಾದರೂ ಆಸೆ ಸಹಜವೇ ಆದರೆ ಅದನ್ನು ಪರಿಗ್ರಹಿಸಿ ನೋಡುವ ಗುಣ ಬೆಳೆಯಬೇಕಿದೆ. ಆಧುನಿಕ ಜಗತ್ತಿನಲ್ಲಿ ವಂಚನೆಗೆ ನೂರು ದಾರಿಗಳಿವೆ ಬಣ್ಣ ಬಣ್ಣದ ಆಕರ್ಷಣೆ ಒಡ್ಡಿ ವಂಚಿಸುವ ಮೋಸಗಾರರಿದ್ದಾರೆ ಆದರೆ ನಾಗರೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.   

ಕಾಮೆಂಟ್‌ಗಳಿಲ್ಲ: