ಸೋಮವಾರ, ಆಗಸ್ಟ್ 2, 2010

ಸುವರ್ಣ ಆರೋಗ್ಯ ಚೈತನ್ಯ ಮಕ್ಕಳ ಆರೋಗ್ಯಕ್ಕೆ ಸಹಕಾರಿ

ಅರಕಲಗೂಡು: ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳು ಆರೋಗ್ಯ ಸುಧಾರಿಸಲು ಪೋಷಕರುಮತ್ತು ಶಿಕ್ಷಕರ ಒಗ್ಗೂಡಿದಲ್ಲಿ ಯಶ ಕಾಣಲು ಸಾಧ್ಯ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಪಾರ್ವತಿ ಸಂಜೀವನಾಯ್ಕ ಹೇಳಿದ್ದಾರೆ.
ಪಟ್ಟಣದಲ್ಲಿ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿ ಸಹಯೋಗದಲ್ಲಿ ಏರ್ಪಡಿಸಿದ್ದ ಸುವರ್ಣ ಆರೋಗ್ಯ ಚೈತನ್ಯದಡಿ ಶಾಲಾ ಮಕ್ಕಳು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಶಾಲಾ ಮಕ್ಕಳ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ತಂದಿದೆ ಅವುಗಳನ್ನು ಬಳಸಿಕೊಳ್ಳುವ ಪ್ರಯತ್ನ ಅಗಬೇಕಿದೆಯಷ್ಟೇ.ತಾಲೂಕಿನಲ್ಲಿ ಈಗ ಸಾಂಕ್ರಾಮಿಕ ರೋಗಗಳು ಹರಡಿದ್ದು ವೈದ್ಯರುಗಳು ಎಚ್ಚರಿಕೆ ವಹಿಸಬೇಕು, ಶಿಬಿರದಲ್ಲಿ ಮಕ್ಕಳಿಗೆ ಚಿಕಿತ್ಸೆ ದೊರಕಿಸಲು ಪೋಷಕರು ಶಿಕ್ಷಕರೊಂದಿಗೆ ಸಹಕರಿಸಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಮಾತನಾಡಿ ಉಚಿತ ಆರೋಗ್ಯ ತಪಾಸಣೆ ಸರ್ಕಾರದ ಯೋಜಿತ ಕಾರ್ಯಕ್ರಮವಾಗಿದ್ದು ಕಳೆದ 4ವರ್ಷಗಳಿಂದ ಜಾರಿಯಲ್ಲಿದೆ, ಕಳೆದ ವರ್ಷ 11ಪ್ರಕರಣವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ ಯಶಸ್ವಿನಿ ಯೋಜನೆಯ ಸಹಯೋಗದೊಂದಿಗೆ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. 1 ರಿಂದ 10ನೇ ತರಗತಿಯ ಅನುದಾನಿತ/ಅನುದಾನ ರಹಿತ ಶಾಲೆಯ ಮಕ್ಕಳಿಗೂ ಯೋಜನೆಯ ಲಾಭ ಲಭಿಸಲಿದೆ ಎಂದರು.ಶಿಬಿರ ನಡೆಯುವ ಸಂಧರ್ಭ ಗೈರುಹಾಜರಿ ಬೇಡ ಎಂದು ಸೂಚಿಸಿದರು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶೈಲಜಾ ಮಾತನಾಡಿ ಪೋಷಕರು ಸರ್ಕಾರಿ ಸವಲತ್ತುಗಳ ಬಳಕೆಯನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ನಾಗಲಕ್ಷ್ಮಿ, ವೈದ್ಯರುಗಳಾದ ಸ್ವಾಮಿಗೌಡ, ಲತಾ, ಸೌಮ್ಯ, ಪೂರ್ಣಿಮ, ಅಕ್ಷರ ದಾಸೋಹ ನಿರ್ದೇಶಕ ಮಹೇಶ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ: