ಶನಿವಾರ, ಡಿಸೆಂಬರ್ 11, 2010

KANAKA JAYANTHI CELEBERATION AT ARKALGUD





01. 523rd Kanaka Jayanthi Celeberation held Arkalgud on Saturday evening, Hampi Kannada University Vice Chancellor Dr. H J Lakkappagowda inagurating the function. Kaginele Sri Sri Shivanandapuri Mahaswamy and Nagarika Vedike President Yogaramesh and others seen in the picture. Programme organised by Nagarika Vedike.

02. Ramanathpur carfestival held this morning, piligrims suffered to bathing at cauvery river due to no convinient places provided by the Temple administration.

03. Madiga Dandora protesting against government with fire sticks  due to police lati charge on Madiga Dandora activists.

04. Brahma Rathothsava held at Ramanathpur this noon, in presence of thousand devotees.

ಸೋಮವಾರ, ನವೆಂಬರ್ 29, 2010

ಗೊಬ್ಬಳಿ-ಮುಸವತ್ತೂರು ದಲಿತರ ಮೇಲಿನ ದೌರ್ಜನ್ಯ:ಪ್ರಗತಿಪರ ಸಂಘಟನೆಗಳ ಪ್ರತಿಭಟನೆ





ಅರಕಲಗೂಡು: ಕಳೆದ 15ದಿನಗಳ ಹಿಂದೆ ತಾಲೂಕಿನ ಗೊಬ್ಬಳಿ ಮತ್ತು ಮುಸವತ್ತೂರು ಗ್ರಾಮಗಳಲ್ಲಿ ದಲಿತರ ಮೇಲೆ ನಡೆದ ಅಮಾನವೀಯ ದೌರ್ಜನ್ಯವನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಬೃಹತ್  ಪ್ರತಿಭಟನೆ ನಡೆಸಿದವು.
         2ವಾರಗಳ ಹಿಂದೆ ಗೊಬ್ಬಳಿ ಗ್ರಾಮದಲ್ಲಿ ಬೀಗರ ಔತಣಕ್ಕೆ ಸಹಪಂಕ್ತಿಯಲ್ಲಿ ದಲಿತರು ಕುಳಿತರೆಂಬ ಕಾರಣಕ್ಕೆ ದಲಿತರ ಮೇಲೆ ಹಲ್ಲೆ ನಡೆಸಿ  ದೌರ್ಜನ್ಯ ನಡೆಸಿದ ಬಗ್ಗೆ ವರದಿಯಾಗಿತ್ತು ಅದೇ ದಿನ ಮಲ್ಲಿಪಟ್ಟಣ ಹೋಬಳಿಯ ಮುಸವತ್ತೂರು ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಬರಲು ನಿರಾಕರಿಸಿದ ದಲಿತನೋರ್ವನನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಲಾಗಿತ್ತು. ಧೌರ್ಜನ್ಯಕ್ಕೆ ಒಳಗಾದವರು ಆಸ್ಪತ್ರೆಯಲ್ಲಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಆದರೆ ಅರಕಲಗೂಡು ಮತ್ತು ಕೊಣನೂರು ಪೋಲೀಸರು ದೌರ್ಜನ್ಯ ೆಸಗಿದವರ ವಿರುದ್ದ ಕ್ರಮ ಜರುಗಿಸಿ ಬಂಧಿಸದೇ ಆರೋಪಿಗಳಿಂದಲೇ ಪ್ರತಿ ದೂರು ಪಡೆದು ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ, ಘಟನೆಯಿಂದ ನೊಂದಿರುವ ದಲಿತರು ಭೀತಿಯಿಂದ ದಿನ ಕಳೆಯುವಂತಾಗಿದೆ, ಗ್ರಾಮದಲ್ಲಿ ಇದುವರೆಗೂ ಶಾಂತಿ ಸಭೆ ನಡೆಸಿಲ್ಲ ಬದಲಾಗಿ ದ್ವೇಷದ ವಾತಾವರಣಕ್ಕೆ ಪೋಲೀಸರೆ ಪ್ರೋತ್ಸಾಹ ನೀಡಿತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ದಲಿತ ಸಂಘರ್ಷ ಸಮಿತಿ, ಬಹುಜನ ಸಮಾಜವಾದಿ ಪಾರ್ಟಿ ಮತ್ತು ಡಿವೈಎಫ್ಐ ಮತ್ತಿತರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಜಾಥ ನಡೆಸಿದವು. ತಾಲೂಕು ಕಛೇರಿ ಮುಂದೆ ಸಮಾವೇಶಗೊಂಡ ಪ್ರತಿಭಟನಾ ನಿರತರು ಪೋಲೀಸರು ಮತ್ತು ತಾಲೂಕು ಆಡಳಿತ ದಲಿತ ವಿರೋಧಿ ನಿಲುವು ತಳೆದಿದೆ, ದೌರ್ಜನ್ಯ ವೆಸಗಿದವರ ರಕ್ಷಣೆಗೆ ಮುಂದಾಗಿದೆ ಎಂದು ಆರೋಪಿಸಿದರು. ಪ್ರತಿಭಟನಾಕರರ ಮನವಿಯನ್ನು ತಹಸೀಲ್ದಾರ್ ಸವಿತಾ ಸ್ವೀಕರಿಸಿ ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ಒದಗಿಸಲಾಗುವುದು,ಆರೋಪಿಗಳ ಬಂಧನಕ್ಕೆ ಪೋಲಿಸರಿಗೆ ಕ್ರಮವಹಿಸಲು ಸೂಚನೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ಜಾಗೃತ ದಳ ರಚಿಸಲಾಗುವುದು ಎಂದರು. ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್ ಐ ನ ಧರ್ಮೇಶ್, ಬಿಎಸ್ ಪಿಯ ಬಿ ಸಿ ರಾಜೇಶ್, ದಸಂಸ ದ ಗಣೇಶ ವೇಲಾಪುರಿ ಮತ್ತಿತರರು ವಹಿಸಿದ್ದರು.

ಮಂಗಳವಾರ, ನವೆಂಬರ್ 23, 2010

ತಂಬಾಕು ಬೆಲೆ ಕುಸಿತ:ಮಾರುಕಟ್ಟೆ ಸ್ಥಗಿತ,ಬೆಲೆ ನಿಗದಿಗೆ ಪಟ್ಟು



ಅರಕಲಗೂಡು: ತಂಬಾಕು ಬೇಲ್ ಗಳಿಗೆ ಸೂಕ್ತ ಬೆಲೆ ದೊರಕದಿದ್ದುದರಿಂದ ಕಂಗಾಲಾದ ರೈತರು ಮಾರುಕಟ್ಟೆಯನ್ನು ಅನಿರ್ದಿಷ್ಠಾವಧಿಗೆ  ಬಹಿಷ್ಕರಿಸಿದರಲ್ಲದೇ ತಂಬಾಕು ಬೇಲ್ ಗಳಿಗೆ ಬೆಂಕಿ ಹಚ್ಚಿದ ಪ್ರಸಂಗವೂ ಇಂದು ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ನಡೆಯಿತು. 
       ಸೂಕ್ತ ಬೆಲೆ ನೀಡುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದಲೂ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭೇಟಿಯಾಗಲು ತಂಬಾಕು ಮಂಡಳಿಯ ಮೈಸೂರು  ವಿಭಾಗೀಯ ವ್ಯವಸ್ಥಾಪಕ  ವೇಣುಗೋಪಾಲ್ ಹಾಗೂ ಐಟಿಸಿ ಕಂಪನಿಯ ಪ್ರತಿನಿಧಿ ರವೀಶ್ ಆಗಮಿಸಿದ್ದ ವೇಳೆ ಅಧಿಕಾರಿಗಳ ಬೇಜವಾಬ್ದಾರಿ ಮಾತುಗಳಿಂದ ಬೇಸತ್ತ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನಡುವೆಯೇ ಮಾತನಾಡಿದ ವೇಣುಗೋಪಾಲ್ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಅನುಸರಿಸಿ ಬೆಲೆ ನೀಡಲಾಗುತ್ತಿದೆ, ಮಾರುಕಟ್ಟೆಗೆ ಹೆಚ್ಚಿನ ತಂಬಾಕು ಆವಕವಾಗುವುದರಿಂದ ಬೆಲೆಯಲ್ಲಿ ಏರುಪೇರು ಉಂಟಾಗಿದೆ ಎಂದರು. ತಂಬಾಕು ಖರೀದಿಸುವ  ಕಂಪನಿಗಳೊಂದಿಗೆ ರೈತರ ಹಿತಾಸಕ್ತಿ ಕಾಪಾಡುವ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲಾಗುತ್ತಿದೆ, ಇನ್ನೆರೆಡು ದಿನಗಳಲ್ಲಿ ಯಾವುದನ್ನು ಹೇಳುತ್ತೇನೆ ಎಂದರು. ನಂತರ ಮಾತನಾಡಿದ ಐಟಿಸಿ ಕಂಪನಿಯ ಪ್ರತಿನಿಧಿ ರವೀಶ್ ಕಂಪನಿ ನಿಗದಿ ಪಡಿಸಿರುವ ಬೆಲೆಯನ್ನಷ್ಟೆ ನಾವು ನೀಡಲು ಸಾಧ್ಯ, ಬೇಡಿಕೆಯನ್ನಾಧರಿಸಿ ಬೆಲೆ ನಿಗದಿಯಾಗುತ್ತದೆ ಎಂದರಲ್ಲದೇ, ರೈತರೊಬ್ಬರು ಕೇಳಿದ ಪ್ರಶ್ನೆಗೆ ನಾನು ಬೆಲೆ ಕುರಿತು ಚರ್ಚಿಸಲು ಬಂದಿಲ್ಲ ಅದಕ್ಕೆ ಬೇರೆ ಅಧಿಕಾರಿಗಳಿದ್ದಾರೆ ಎಂದಿದ್ದು ರೈತ ಸಮೂಹವನ್ನು ಕೆರಳಿಸಿತು. ಈ ಸಂಧರ್ಭದಲ್ಲಿ ರೊಚ್ಚಿಗೆದ್ದ ರೈತರು ನಮ್ಮ ಸಮಸ್ಯೆ ಕುರಿತು ಚರ್ಚಿಸುವ ಆಸಕ್ತಿ ಇಲ್ಲದಿದ್ದರೆ ನೀವು ಇಲ್ಲಿಂದ ಹೊರಡಿ ಎಂದು ತಾಕೀತು ಮಾಡಿ ಗದ್ದಲ ಆರಂಭಿಸಿದರು. ಈ ಹಂತದಲ್ಲಿ ಕೆಲಹೊತ್ತು ನೂಕಾಟ ತಳ್ಳಾಟ ಆರಂಭವಾಗಿ ಗೋಂದಲದ ವಾತಾವರಣ ಮೂಡಿತ್ತು. ಇದೇ ಸಂಧರ್ಭದಲ್ಲಿ ಕೆರಳಿದ ರೈತರು ಅಧಿಕಾರಿಗಳು ಮತ್ತು ಸರ್ಕಾರವನ್ನು ಶಪಿಸುತ್ತಾ ತಂಬಾಕು ಬೇಲ್ ಗಳನ್ನು ಅಧಿಕಾರಿಗಳೆದುರೇ ಸುರಿದು ಬೆಂಕಿ ಹಚ್ಚಿದರು. ಅಂತಿಮವಾಗಿ ಮಾತನಾಡಿದ ರೈತ ಮುಖಂಡರು ಅಧಿಕಾರಿಗಳು ಬೆಲೆ ಏರಿಕೆ ಕುರಿತು ಸ್ಪಷ್ಟ ಚಿತ್ರಣ ನೀಡುವವರೆಗೂ ಮಾರುಕಟ್ಟೆ ಬಹಿಷ್ಕರಿಸಲಾಗುವುದು ಎಂದರು. ಪ್ರತಿಭಟನೆಯ ನೇತೃತ್ವವನ್ನು ರಾಮೇಗೌಡ,ಕೃಷ್ಣೆಗೌಡ ಮತ್ತು ತಿಮ್ಮೇಗೌಡ ವಹಿಸಿದ್ದರು. 
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಮೈಸೂ ವಿಭಾಗೀಯ ವ್ಯವಸ್ಥಾಪಕ ವೇಣುಗೋಪಾಲ್ ಈ ಬಾರಿ 115ಮಿಲಿಯನ್ ತಂಬಾಕು ಉತ್ಪಾದನೆ ಗುರಿ ಸಾಧಿಸಲಾಗಿದೆ, ಆದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದೇಶಗಳಲ್ಲಿ ಉತ್ಪಾದನೆ ಯಾಗುತ್ತಿದ್ದ ತಂಬಾಕಿನ ಪ್ರಮಾಣ ದುಪ್ಪಟ್ಟಾಗಿದೆ, ಜಿಂಬಾಬ್ವೆ ದೇಶದಲ್ಲಿ 40ಮಿಲಿಯನ್ ನಿಂದ 200 ಮಿಲಿಯನ್ ಗೆ ಏರಿದೆ, ದಕ್ಷಿಣ ಆಫ್ರಿಕಾದಲ್ಲೂ ಉತ್ಪಾದನಾ ಪ್ರಮಾಣ ಏರಿದೆ ಆದ್ದರಿಂದ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶೀಯ ಉತ್ಪನ್ನಕ್ಕೆ ಬೇಡಿಕೆ ಕುಸಿದಿದೆ ಎಂದರು. ಮಾರುಕಟ್ಟೆ ಆರಂಭವಾದಾಗ 130ರೂ. ಹೆಚ್ಚಿನ ಬೆಲೆ ಪ್ರತೀ ಕೆಜಿ ತಂಬಾಕಿಗೆ ದೊರಕಿದೆ, ಈಗ ುತ್ತಮ ದರ್ಜೆಯ ತಂಬಾಕಿಗೆ 110ರೂ ಸಿಗುತ್ತಿದೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುದಾರಿಸ ಬಹುದು ಎಂದರು. ಈ ಸಂಧರ್ಭದಲ್ಲಿ ಮಾರುಕಟ್ಟೆ ಅಧೀಕ್ಷಕ ಶಿವರುದ್ರಯ್ಯ ಹಾಜರಿದ್ದರು.

ಅರಕಲಗೂಡು: ಇದೇ ನ.25ರಂದು ಪಟ್ಟಣದಲ್ಲಿ ಏರ್ಪಟಾಗಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ಯೋಗಾರಮೇಶ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು 55ನೇ ಕನ್ನಡ ರಾಜ್ಯೊತ್ಸವವು ಪಟ್ಟಣದ ಶಿಕ್ಷಕರ ಭವನದ ಮುಂಬಾಗದಲ್ಲಿ ಸಂಜೆ 4ಗಂಟೆಗೆ ಜರುಗಲಿದೆ, ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಸಾಧಕರಾದ ಸಂಗೀತ ವಿದ್ಯಾನ್ ಪದ್ಮನಾಭ್, ಜನಪದ ತಜ್ಞ ಡಾ ಎಚ್ ಜೆ ಲಕ್ಕಪ್ಪಗೌಡ, ಅರ್ಥಶಾಸ್ತ್ರಜ್ಞ ಪ್ರೊ| ಕೆ ಸಿ ಬಸವರಾಜು, ಮತ್ತಿತರ ಗಣ್ಯರಿಗೆ ಸನ್ಮಾನ ಏರ್ಪಡಿಸಲಾಗಿದೆ, ಹಾಗೂ ಶಿವಮೊಗ್ಗ ಸುಬ್ಬಣ್ಣ ಮತ್ತು ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದು ಯೋಗಾರಮೇಶ್ ತಿಳಿಸಿದರು. 

ಸೋಮವಾರ, ನವೆಂಬರ್ 22, 2010

ತಂಬಾಕು ಬೆಲೆ ದಿಢೀರ್ ಕುಸಿತ:ರೈತರ ಪ್ರತಿಭಟನೆ

ಅರಕಲಗೂಡು/ರಾಮನಾಥಪುರ: ತಂಬಾಕು ಮಾರಾಟದ ಬೆಲೆ ದಿಢೀರ್ ಕುಸಿತ ಕಂಡಿದ್ದರಿಂದ ಕಂಗಾಲಾದ ರೈತರು ನಿಶ್ಚಿತ ಬೆಲೆ ನೀಡುವಂತೆ ಆಗ್ರಹಿಸಿ  ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ  ಪ್ರತಿಭಟನೆ ನಡೆಸಿದರು. ಒಂದು ವಾರದಿಂದಲೂ ತಂಬಾಕಿನ ಮಾರುಕಟ್ಟೆ ದರ ಇಳಿಕೆಯಾಗಿದ್ದು ರೈತರ ಅಸಹನೆ ಹೊಗೆಯಾಡುತ್ತಿತ್ತು, ನಿಗದಿತ ಗುರಿಗಿಂತ ಮಾರುಕಟ್ಟೆಗೆ ಹೆಚ್ಚಿನ ತಂಬಾಕು ಆವಕವಾಗಿರುವುದು ಮತ್ತು ಈ ಮುಂಚೆ ಆಂದ್ರ ಪ್ರದೇಶದಲ್ಲಿ ನಡೆದ ಮಾರುಕಟ್ಟೆಯಲ್ಲೂ ಬೆಲೆ ಕುಸಿತ ಕಂಡಿದ್ದರಿಂದ ಅದು ಇಲ್ಲಿನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ.  ಕಳೆದ ವರ್ಷ ಪ್ರತೀ ಕೇಜಿಗೆ 130ರೂ ಇದ್ದ ತಂಬಾಕು ಬೆಲೆ ಈ ಬಾರಿ 75ಕ್ಕೆ ಇಳಿದಿದೆ, ಇದು ರೈತರಿಗೆ ಕಣ್ಣೀರು ತರಿಸುತ್ತಿದೆ. ಸೋಮವಾರ ಬೆಳಿಗ್ಗೆ ಪ್ಲಾಟ್ ಫಾರಂ 63ರಲ್ಲಿ 1250ಬೇಲ್ (1ಬೇಲ್=50-150ಕೆಜಿ) ಆವಕವಾಗಿತ್ತು. ಈ ಹಿಂದೆ ಪ್ರತೀ ಕೆಜಿಗೆ 130ರೂ ಬೆಲೆ ಲಭ್ಯ ವಾಗುತ್ತಿತ್ತು, ಸರಾಸರಿ 106ರೂ. ಬೆಲೆ ಇತ್ತಾದರು ಇಂದು ದಿಢೀರನೇ ಪ್ರತಿ ಕೆಜಿಗೆ ರೂ.75 ನಿಗದಿ ಗೊಳಿಸಿದ್ದರಿಂದ ರೈತರು ಕಂಗಾಲಾದರು ಮತ್ತು ತಂಬಾಕು ಕೊಳ್ಳಲು ಬಂದಿದ್ದ ವಿವಿಧ ಕಂಪನಿಗಳ ಪ್ರತಿನಿಧಿಗಳ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು. ಅಚಾನಕ್ಕಾಗಿ ಮಳೆ ಬೀಳುತ್ತಿರುವುದರಿಂದ ಬೆಳೆಯ ಇಳುವರಿಯೂ ಸಹಾ ಕುಂಠಿತಗೊಂಡಿದೆ ಈ ನಡುವೆ ಬೆಳೆದ ಬೆಳೆಗೆ ಸೂಕ್ತ ಬೆಲೆಯೂ ಸಿಗದಿದ್ದರೆ ಬದುಕು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡ ರೈತರು ತಂಬಾಕು ಬೆಳೆಗಾಗಿ ಬ್ಯಾಂಕುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇವೆ ಮುಂದೇನು ಮಾಡಬೇಕೋ ತೋಚುತ್ತಿಲ್ಲ, ನಾಳೆ ಮೈಸೂರಿನಿಂದ ತಂಬಾಕು ಮಂಡಳಿಯ ಹಿರಿಯ ಅಧಿಕಾರಿಗಳು ಬಂದು ಸಮಸ್ಯೆ ಸುಧಾರಿಸುವ ಭರವಸೆ ನೀಡಿದ್ದಾರೆ ನಮಗೆ ನಿರೀಕ್ಷಿತ ಕನಿಷ್ಟ ಬೆಲೆ 95ರೂ ಸಿಕ್ಕರೂ ಬದುಕುತ್ತೇವೆ ಇಲ್ಲದಿದ್ದರೆ ಸತ್ತಂತಯೇ ಎಂದು ವಿಷಾದದಿಂದ ನುಡಿದರು. ಇಂದು ಪ್ರತಿಭಟನೆಯ ನಂತರ ಅರಕಲಗೂಡಿಗೆ ಆಗಮಿಸಿದ ತಂಬಾಕು ಬೆಳೆಗಾರರು ತಹಸೀಲ್ದಾರರನ್ನು ಭೇಟಿಯಾಗಿ  ನ.23ರಂದು ಸೂಕ್ತ ಬೆಲೆ ನಿಗದಿಗೊಳಿಸುವಂತಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಸಲ್ಲಿಸಿದರು. ಪ್ರತಿಭಟನೆಯ ನೇತೃತ್ವವನ್ನು ರಾಮೇಗೌಡ, ಯೋಗೇಶ್, ಕೃಷ್ಣೆಗೌಡ ವಹಿಸಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ ತಂಬಾಕು ಮಂಡಳಿಯ ಅಧೀಕ್ಷಕ ಶಿವರುದ್ರಯ್ಯ ಕಳೆದ ಬಾರಿಗಿಂತ ಈ ಸಲ ಮಾರುಕಟ್ಟೆ ದರ ಕುಸಿದಿದೆ ಆದರೆ ಪ್ಲಾಟ್ ಫಾರಂ 7ರಲ್ಲಿ ಬಂದ 1200ಬೇಲುಗಳು ಪೂರ್ಣವಾಗಿ ಮಾರಾಟವಾಗಿವೆ ಎಂದರು.
ಮನವಿ: ತಂಬಾಕಿಗೆ ಸೂಕ್ತ ದರ ನೀಡುವಂತೆ ರಾಮನಾಥಪುರ ತಂಬಾಕು ಮಾರುಕಟ್ಟೆ ಆವರಣದಲ್ಲಿ ಬೆಳಿಗ್ಗೆ 9ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಎಲ್ಲ ತಂಬಾಕು ಬೆಳೆಗಾರರು ಭಾಗವಹಿಸುವಂತೆ ರೈತ ಮುಖಂಡ ರಾಮೇಗೌಡ ಮನವಿ ಮಾಡಿದ್ದಾರೆ.
ಆಗ್ರಹ:  ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ತಕ್ಷಣವೇ ಸೂಕ್ತ ಬೆಲೆ ನಿಗದಿಗೊಳಿಸಿ ರೈತರನ್ನು ಸಂಕಷ್ಟದಿಂದ ಪಾರುಮಾಡಬೇಕು ಎಂದು ಬಿಜೆಪಿ ವಕ್ತಾರ ಕೆ ಎನ್ ಪ್ರದೀಪ್ ಮನವಿ ಮಾಡಿದ್ದಾರೆ. ತಾಲೂಕಿನಲ್ಲಿ ಸುಮಾರು 15ಸಾವಿರ ತಂಬಾಕು ಬೆಳೆಗಾರರಿದ್ದು  ಅವರು ಬೆಳೆದ ತಂಬಾಕಿಗೆ ಸರಾಸರಿ 70ರೂ ದೊರಕುತ್ತಿದೆ ಆದರೆ ಒಂದು ಕೆಜಿ ತಂಬಾಕು ಉತ್ಪಾದಿಸಲು ರೈತನಿಗೆ 70-75ರೂ ಆಗುತ್ತದೆ ಆದ್ದರಿಂದ ಮಂಡಳಿಯು ಪ್ರತೀ ಕೆಜಿಗೆ ಕನಿಷ್ಠ ರೂ.100 ನಿಗದಿಗೊಳಿಸಬೇಕು ಎಂದಿರುವ ಅವರು ಈ ಕುರಿತು ಡಿಸೆಂಬರ್ 5ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅರಕಲಗೂಡು:ಅರಕಲಗೂಡು ತಾಲೂಕು ವಕೀಲರ ಸಂಘದ 2010-11ನೇ ಸಾಲಿನ ನೂತನ ಅಧ್ಯಕ್ಷರಾಗಿ ವಕೀಲ ಬಿ ಸಿ ರಾಜೇಶ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಕಾರ್ಯದರ್ಶಿಯಾಗಿ ವಕೀಲ ವಿಜಯಕುಮಾರ್ ಆಯ್ಕೆಯಾಗಿದ್ದಾರೆ.

ಮಂಗಳವಾರ, ನವೆಂಬರ್ 16, 2010

ದೌರ್ಜನ್ಯಕ್ಕೊಳಗಾದವನ ಮೇಲೆ ಮಾನಭಂಗ ದೂರು ದಾಖಲು!

ಅರಕಲಗೂಡು: ಕಳೆದ ಭಾನುವಾರ ಮುಸುವತ್ತೂರು ಗ್ರಾಮದಲ್ಲಿ ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಲ್ಪಟ್ಟ ವ್ಯಕ್ತಿಯ ವಿರುದ್ದ ತಡವಾಗಿ ಮಾನಭಂಗದ ಪ್ರಕರಣ ದಾಖಲಾಗಿದ್ದು ಪ್ರಕರಣ ತಿರುವು ಪಡೆದುಕೊಂಡಿದೆ.
ಕೂಲಿ ಕೆಲಸಕ್ಕೆ ಬರಲಿಲ್ಲವೆಂಬ ವಿಚಾರಕ್ಕೆ ಭಾನುವಾರ ಸಂಜೆ 3ಗಂಟೆ ಸುಮಾರಿಗೆ ರಾಮಚಂದ್ರ(48) ಎಂಬ ದಲಿತ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಥಳಿಸಲಾಗಿತ್ತು, ಅರೆಪ್ರಜ್ಞಾವಸ್ಥೆ ತಲುಪಿದ ಆತನನ್ನು ಸಂಭಂಧಿಕರು ಬಿಡಿಸಿ ರಾತ್ರಿವೇಳೆಗೆ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಹಾಗೂ ಆತನನ್ನು ಜಾತಿ ಹೆಸರಿನಿಂದ ನಿಂದಿಸಿ ಹಲ್ಲೆ ನಡೆಸಿದವರ ವಿರುದ್ಧ ಅರಕಲಗೂಡು ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಸೋಮವಾರ ರಾತ್ರಿಯ ವೇಳೆಗೆ ದೌರ್ಜನ್ಯ ನಡೆಸಿದ ಆರೋಪಿಗಳಲ್ಲಿ ಒಬ್ಬರಾದ ಯಶೋದಮ್ಮ , ರಾಮಚಂದ್ರನ ವಿರುದ್ದ ಮಾನಭಂಗ ಪ್ರಯತ್ನದ ದೂರು ದಾಖಲಿಸಿದ್ದಾಳೆ. ತಾನು ದನ ಕಾಯುತ್ತಿದ್ದ ವೇಳೆ ತನ್ನ ಮಾನಭಂಗಕ್ಕೆ ರಾಮಚಂದ್ರ ಯತ್ನಿಸಿದ್ದರಿಂದ ಕೂಗಿಕೊಂಡೆ ಆಗ ನನ್ನ ರಕ್ಷಣೆಗೆ ಬಂದ  ರಾಜಣ್ಣ, ಸಣ್ಣಪ್ಪ, ದೊಡ್ಡಪ್ಪ ಮತ್ತು ಮಲ್ಲಪ್ಪ ನನ್ನನ್ನು ಪಾರು ಮಾಡಿದರು ಎಂದು ದೂರಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಡಿವೈಎಸ್ ಪಿ ಪರಶುರಾಂ ಸ್ಥಳಕ್ಕೆ ಭೇಟಿ ನೀಡಿದ್ದರಾದರೂ ಈ ಬಗ್ಗೆ ಗ್ರಾಮದಲ್ಲಿ ಯಾವುದೇ ಚಕಾರವೆತ್ತಿಲ್ಲ ಅಷ್ಟೇ ಅಲ್ಲ ಘಟನೆಗೆ ಕಾರಣರಾದವರನ್ನು ಬಂದಿಸಿಲ್ಲ ಎನ್ನಲಾಗಿದೆ. ಪ್ರಕರಣವನ್ನು ರಾಜೀ ಮಾಡಿಸುವ ಹಿನ್ನೆಲೆಯಲ್ಲಿ ಕೆಲವು ಮದ್ಯವರ್ತಿಗಳು ಪ್ರತೀ ದೂರು ದಾಖಲಾಗುವಂತೆ ಮಾಡಿದ್ದಾರೆ ಇದನ್ನು ತಾವು ಒಪ್ಪುವುದಿಲ್ಲ, ದೌರ್ಜನ್ಯಕ್ಕೊಳಗಾದ ದಲಿತನಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಬಿಎಸ್ ಪಿ ಮುಖಂಡ ರಾಜೇಶ್ ಎಚ್ಚರಿಸಿದ್ದಾರೆ.

ಅರಕಲಗೂಡು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಪಂಚಾಯ್ತಿಯ ಪಿಡಿಓ ಹಾಗೂ ಕಾರ್ಯದರ್ಶಿ ಚೆಕ್ ಗಳಿಗೆ ಅಧ್ಯಕ್ಷರಿಂದ ಬಲವಂತದ ಸಹಿ ಹಾಕಿಸುತ್ತಾ ಅನುಮಾನಸ್ಪದವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವಡ್ಡರಹಳ್ಳಿ ಗ್ರಾ.ಪಂ. ಸದಸ್ಯರುಗಳ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಸದಸ್ಯರುಗ ಳಾದ ಎಸ್ ಪಿ ರೇವಣ್ಣ , ಇರ್ಶಾದ್, ಮೋಹನ್ , ಸಾಕಮ್ಮ, ಶಶಿಕಲ, ಉಪೇಂದ್ರ ಪಿಡಿಓ ಮುರುಳಪ್ಪ ಹಾಗೂ ಕಾರ್ಯದರ್ಶಿ ಕೃಷ್ಣೇಗೌಡ, ಪಂಚಾಯ್ತಿಯ ಅಧ್ಯಕ್ಷರಾದ ಸಾವಿತ್ರಮ್ಮನವರಿಗೆ ಬೆದರಿಕೆ ಹಾಕಿ ಬಲವಂತದಿಂದ 1.70ಲಕ್ಷದ ಚೆಕ್ ಗೆ ಸಹಿ ಪಡೆದಿದ್ದಾರೆ. ಸದರಿ ಚೆಕ್ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದುದಾಗಿದೆ ಈ ಬಗ್ಗೆ ಪ್ರಶ್ನಿಸಿದರೆ ಪಿಡಿ ಓ ಮರುಳಪ್ಪ ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ , ಕ್ಯಾಶ್ ಪುಸ್ತಕದಲ್ಲಿ ಈ ಮಾಹಿತಿ ದಾಖಲಾಗಿಲ್ಲ ಆದುದರಿಂದ ಪ್ರಕರಣ ಕುರಿತು ತನಿಖೆ ನಡೆಸಿ ತಪ್ಪಿತ ಸ್ಥ ನೌಕರರ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.

ಸೋಮವಾರ, ನವೆಂಬರ್ 15, 2010

ಕೂಲಿಗೆ ಬಾರದ ದಲಿತನಿಗೆ ಮರಕ್ಕೆ ಕಟ್ಟಿ ಹೊಡೆದರು!

ಅರಕಲಗೂಡು: ಕೂಲಿಗೆ ಬರಲು ನಿರಾಕರಿಸಿದ ದಲಿತನೋರ್ವನಿಗೆ ಸವರ್ಣಿಯರು ಮರಕ್ಕೆ ಕಟ್ಟಿ ಥಳಿಸಿದ ಅಮಾನವೀಯ ಘಟನೆ ತಾಲ್ಲೂಕಿನ ಮುಸುವತ್ತೂರಿನಿಂದ ವರದಿಯಾಗಿದೆ.
ಮುಸುವತ್ತೂರು ಗ್ರಾಮದ ರಾಮಚಂದ್ರ(48) ಎಂಬಾತನೇ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯಾಗಿದ್ದು ಸಧ್ಯ ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾನೆ. ಮುಸುವತ್ತೂರು ಗ್ರಾಮದ ಸವರ್ಣಿಯರ ಮನೆಗಳ ಹಬ್ಬ ಹರಿದಿನ, ತಿಥಿ ಇತ್ಯಾದಿ ಕಾರ್ಯಕ್ರಮಗಳಿಗೆ ದಲಿತರು  ಚಾಕರಿ ಮಾಡಲು ಹೋಗುವುದು ಸಾಮಾನ್ಯ ವಿಚಾರ , ಆದರೆ ಈಗ್ಯೆ ಕೆಲ ತಿಂಗಳುಗಳಿಂದ ಸವರ್ಣಿಯರ ಮನೆಗಳಿಗೆ ಕೂಲಿ ಹೋಗುವುದನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮದ್ಯಾಹ್ನ 3.30ರಲ್ಲಿ ಜಮೀನಿನಿಂದ ವಾಪಾಸಾಗುತ್ತಿದ್ದ ರಾಮಚಂದ್ರನ ಮೇಲೆ ಕ್ಯಾತೆ ತೆಗೆದ ಮುಸುವತ್ತೂರಿನ ಪಟೇಲರ ಮಗ ರಾಜಣ್ಣ, ಆತನ ಪತ್ನಿ ಯಶೋದಮ್ಮ, ಸಣ್ಣಪ್ಪ, ದೊಡ್ಡಪ್ಪ ಮತ್ತು ಆತನ ಪುತ್ರ ಮಲ್ಲಪ್ಪ ನಿಂದಿಸಿ ಹಲ್ಲೆನಡೆಸಿದರು,ನಂತರ ಲೈಟ್ ಕಂಬಕ್ಕೆ ನನ್ನನ್ನು ಕಟ್ಟಿಹಾಕಿ ಪ್ರಜ್ಞೆ ಕಳೆದುಕೊಳ್ಳುವವರೆಗೂ ಥಳಿಸಿದರು ಎಂದು ಆಸ್ಪತ್ರೆಯಲ್ಲಿದ್ದ ರಾಮಚಂದ್ರ ಪತ್ರಿಕೆಗೆ ತಿಳಿಸಿದರು. ಅದೇ ಸಂಧರ್ಭ ನನ್ನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಲು ಯತ್ನಿಸಿದರು ಎಂದು ರಾಮಚಂದ್ರ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದರು. ಸಂಜೆಯ ವೇಳೆಗೆ ರಾಮಚಂದ್ರನ ಬಾಂಧವರಾದ ದ್ಯಾವಯ್ಯ, ಕೃಷ್ಣ, ರಂಗಸ್ವಾಮಿ ಬಿಡಿಸಿಕೊಳ್ಳಲು ಹೋದಾಗ ಆರೋಪಿಗಳು ಅವರಿಗೂ ಕೊಲೆ ಬೆದರಿಕೆ ಹಾಕಿದರು ಎಂದು ಅರಕಲಗೂಡು ಪೋಲೀಸರಿಗೆ ದೂರಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಬೀಗರ ಔತಣಕ್ಕೆ ಕರೆದು ಹಿಗ್ಗಾ-ಮುಗ್ಗಾ ಥಳಿಸಿದರು
ಅರಕಲಗೂಡು: ಬೀಗರ ಔತಣಕ್ಕೆ ಬಂದ ದಲಿತರು ಸಮಾನ ಪಂಕ್ತಿಯಲ್ಲಿ ಕುಳಿತರು ಎಂದು ಸಿಟ್ಟಿಗೆದ್ದ ಸವರ್ಣಿಯರು ಹಿಗ್ಗಾ-ಮುಗ್ಗಾ ಥಳಿಸಿದ್ದರಿಂದ 6ಮಂದಿ ಗಾಯಗೊಂಡ ಘಟನೆ ಕಳೆದ ಭಾನುವಾರ ಸಂಜೆ ತಾಲೂಕಿನ ಗೊಬ್ಬಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಗೊಬ್ಬಳಿ ಗ್ರಾಮದ ಸುಂದರಮ್ಮ ಎಂಬುವರ ಮನೆಗೆ ಬೀಗರ ಔತಣಕ್ಕೆ ಸಾಮೂಹಿಕ ಆಹ್ವಾನವಿದ್ದುದರಿಂದ ಸಂಜೆ 5-30ಕ್ಕೆ ತೆರಳಿದ್ದರೆನ್ನಲಾಗಿದೆ. ಈ ಸಂಧರ್ಭದಲ್ಲಿ ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಸವರ್ಣಿಯರ ಸಮಾನ ಪಂಕ್ತಿಯಲ್ಲಿ ಸುರೇಶ,ಜವರಯ್ಯ, ಸಣ್ಣಯ್ಯ, ಸತೀಶ, ಹಲಗಯ್ಯ, ಕುಮಾರ ಮತ್ತಿತರ ದಲಿತರು ಕುಳಿತಾಗ ಜಾತಿಯ ಹೆಸರಿಡಿದು ನಿಂದಿಸಿದ ಸವರ್ಣಿಯರು ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದರು ಎಂದು ಕೊಣನೂರು ಪೋಲೀಸರಿಗೆ ದೂರಲಾಗಿದೆ. ನಂತರ ದಲಿತರ ಕೇರಿಗೂ ನುಗ್ಗಿ ದೊಣ್ಣೆ ಮತ್ತು ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸುಟ್ಟುಹಾಕುವುದಾಗಿ ಬೆದರಿಸಿದರು ಎನ್ನಲಾಗಿದೆ. ನಂತರ ಗಾಯಾಳುಗಳನ್ನು ಕೊಣನೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಹಲ್ಲೆ ನಡೆಸಿದವರ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಬಿಎಸ್ ಪಿ ನೇತೃತ್ವದಲ್ಲಿ ದಲಿತರು ಕೊಣನೂರು ಪೋಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಾಗರಾಜು ಪ್ರತಿಭಟನಾ ನಿರತರಿಂದ ಮನಿವಿ ಸ್ವೀಕರಿಸಿ ಕ್ರಮ ಜರುಗಿಸುವ ಭರವಸೆ ನೀಡಿದರು. ಪ್ರತಿಭಟನೆಯ ನೇತೃತ್ವವನ್ನು ಬಿಎಸ್ ಪಿ ಮುಖಂಡ ಬಿ ಸಿ ರಾಜೇಶ್ ವಹಿಸಿದ್ದರು.

ಹಾಸನ: ನಗರದಿಂದ ಅರಕಲಗೂಡಿಗೆ ತೆರಳಲು ಸಾರಿಗೆ ಬಸ್ ಗಳ ಕೊರತೆ ಉಂಟಾಗಿದ್ದರಿಂದ ನೂರಾರು ಪ್ರಯಾಣಿಕರು ದಿಢೀರ್ ಪ್ರತಿಭಟನೆ ನಡೆಸಿದ ಪ್ರಸಂಗ ಹಾಸನ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆಯಿತು.
ಪ್ರತಿನಿತ್ಯ ಹಾಸನದಿಂದ ಅರಕಲಗೂಡು ತಾಲ್ಲೂಕು ಕೇಂದ್ರಕ್ಕೆ 600ಕ್ಕೂ ಹೆಚ್ಚು ಮಂದಿ ಸರ್ಕಾರಿ ನೌಕರರು ತೆರಳುತ್ತಿದ್ದು ಬಹುತೇಕರು ಬಸ್ ಪಾಸ್ ಹೊಂದಿದ್ದಾರೆ, ಬಸ್ ನಲ್ಲಿ ಇವರೇ ತುಂಬಿ ಕೊಂಡರೆ ಕಲೆಕ್ಷನ್ ಆಗುವುದಿಲ್ಲ ಎಂಬ ನೆಪ ಒಡ್ಡಿ  ಬಸ್ ಚಾಲಕರು ಮತ್ತು ನಿರ್ವಾಹಕರುಗಳು ಬೆಳಿಗ್ಗೆ 8ಗಂಟೆಯಿಂದ 9-30ರವರೆಗೂ ಬಸ್ ಹೊರಡಿಸುವುದೇ ಇಲ್ಲ ೆಂದು ಪ್ರತಿಭಟನಾಕಾರರು ಆರೋಪಿಸಿದರು. ತಕ್ಷಣ ಪ್ರತಿಭಟನೆಗೆ ಮಣಿದ ನಿಲ್ದಾಣ ವ್ಯವಸ್ಥಾಪಕರು ಹೆಚ್ಚುವರಿ ಬಸ್ ಗಳನ್ನು ಓಡಿಸಿ ಪ್ರತಿಭ ಟನಾನಿರತರನ್ನು ಶಾಂತಗೊಳಿಸಿದರು. ಅರಕಲಗೂಡಿನಿಂದ ಸಂಜೆ 5ಗಂಟೆಯಿಂದ 7ಗಂಟೆಯವರೆಗೂ ಸಾರಿಗೆ ಬಸ್ ಗಳು ಓಡಿಸುವುದಿಲ್ಲ ಹಾಗೆಯೇ ರಾತ್ರಿ 9-30ರ ನಂತರ ಹಾಸನದಿಂದ ಅರಕಲಗೂಡು ತಾಲೂಕಿಗೆ ತೆರಳುವವರಿಗೂ  ಸಾರಿಗೆ ಬಸ್ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ.

ಶನಿವಾರ, ನವೆಂಬರ್ 13, 2010

ಉದ್ಯೋಗ ಖಾತ್ರಿ ಕರ್ಮಕಾಂಡ: ಮಾರ್ಗಸೂಚಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ!!

  • ಅರಕಲಗೂಡು ಜಯಕುಮಾರ್
ಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಯ್ದೆ ಸ್ವರೂಪದ ಉತ್ತಮ ಯೋಜನೆ. ಇಂತಹ ಯೋಜನೆಯಲ್ಲಿ ಮಾರ್ಗಸೂಚಿ ಯನ್ವಯಮಾತ್ರವೇ ಕೆಲಸ ಮಾಡಬೇಕು. ಆದರೆತಾಲೂಕಿನಲ್ಲಿ ನಡೆದ ಖಾತ್ರಿ ಅನುಷ್ಠಾನದಲ್ಲಿ ಎಲ್ಲ  ನಿಯಮಗಳನ್ನುಗಾಳಿಗೆ ತೂರಲಾಗಿದೆ.ಉದ್ಯೋಗ ಖಾತ್ರಿಯ ಆರಂಭದಲ್ಲಿ 80ರೂಪಾಯಿ ದಿನಗೂಲಿ ಇದ್ದ ವೆಚ್ಚವನ್ನು 100ರೂ.ಗೆ ಏರಿಸಲಾಗಿದೆ. ಉದ್ಯೋಗ ಖಾತ್ರಿ ಯಲ್ಲಿ ಕೆಲಸ ಗಿಟ್ಟಿಸಲು  ಸಾರ್ವಜನಿಕವಾಗಿ ಹೆಸರು ನೋಂದಣಿ ಮಾಡಿಸಲು ಅವಕಾಶವಿದೆ, ಹೆಸರು ನೋಂದಾಯಿಸಿದ ಮೇಲೆ 15ದಿನಗಳೊಳಗೆ ಜನಸಂಖ್ಯೆಗನುಗುಣವಾಗಿ ಕಾಮಗಾರಿಯನ್ನು ನಿರ್ದರಿಸಬೇಕು. ಅಂತಹ ಕಾಮಗಾರಿಗೆ ವಾರ್ಡ್ ಸಭೆ ನಡೆಸಿ ಗ್ರಾ.ಪಂ. ನಿರ್ಣಯಿಸಬೇಕು ನಂತರ ಜಿ.ಪ.ಇಂಜಿನಿಯರು ಯೋಜನೆ ತಯಾರಿಸಿ ವೆಚ್ಚವನ್ನು  ನಿಗದಿಪಡಿಸಬೇಕು  ಈ ಹಂತ ಮುಗಿದ ಮೇಲೆ .ತಾಪಂ. ಕಾರ್ಯ ನಿರ್ವಾಹಕ ಅಧಿಕಾರಿ  ಕೆಲಸದ ಆದೇಶ ನೀಡಬೇಕು ಆದರೆ ಜಿಲ್ಲೆಯಾಧ್ಯಂತ ಆಗಿದ್ದೇನು?  ಜಿಲ್ಲೆಯ ಯಾವ ತಾಲೂಕುಗಳಲ್ಲೂ ಖಾತ್ರಿ ಅನುಷ್ಠಾನದ ಮಾನದಂಡಗಳನ್ನು ಅನುಸರಿಸಿಲ್ಲ. ಅರಕಲಗೂಡು ತಾಲ್ಲೂಕಿನಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಎಸ್ಟಿಮೇಟುಗಳನ್ನು ಮಾಡಲಾಗಿದೆ,ಕೂಲಿ ಹಣವನ್ನು ರಾಷ್ರ್ಟೀ ಯಬ್ಯಾಂಕುಗಳಲ್ಲಿ ಪಾವತಿಸಬೇಕೆಂಬ ಆದೇಶವಿದ್ದರೂ ಸ್ಥಳೀಯ ಬ್ಯಾಂಕುಗಳಲ್ಲಿ ಕೂಲಿಕಾರರ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಬ್ಯಾಂಕುಸಿಬ್ಬಂದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡ ಗುತ್ತಿಗೆದಾರು  ಕೂ ಲಿಕಾರರ ಹಣವನ್ನು ಅಕ್ರಮವಾ ಗಿ ಡ್ರಾ ಮಾಡಿದ್ದಾರೆ.ಕೂಲಿಕಾರರ ಕಾರ್ಡುಗಳು ಕೂಲಿಕಾರರ ಬಳಿ ಇರದೇ ಗುತ್ತಿಗೆದಾರರ ಬಳಿ ಕೇಂದ್ರೀಕೃತವಾಗಿದೆ. ಇಂಜಿನಿಯರುಗಳು  ಮತ್ತುಗ್ರಾ.ಪಂ. ಕಾರ್ಯದರ್ಶಿಗಳು ನಕಲಿ ಎನ್ ಎಂ ಆರ್ ,ಎಸ್ಟೀಮೇಟುಗಳನ್ನು ಲೆಕ್ಕವಿಲ್ಲದಷ್ಟು ಸಂಖ್ಯೆಯ ಲ್ಲಿ ಮಾಡಿದ್ದಾರೆ. ಅಮಾಯಕ ಗುತ್ತಿಗೆದಾರರುಗಳಿಗೆ ಅಕ್ರಮವಾಗಿ ಪಂಚಾಯ್ತಿಗಳಲ್ಲಿ ಅನುಮೋದನೆ ಇಲ್ಲದಿದ್ದರೂ ಕಾರ್ಯದೇಶ ನೀಡಿ ಅನೇಕ ಕೆಲಸಗಳನ್ನು ಮಾಡಿಸಲಾಗಿದೆ. ಆದರೆ ಇಂಜಿನಿಯರುಗಳು ಯೋಜನೆಯಲ್ಲಿ ಲಭ್ಯವಿಲ್ಲದ 125ರೂ ಕೂಲಿಯನ್ನು ನಮೂದಿಸಿ ಸರಕು ಸಾಮಾಗ್ರಿ ಬಿಲ್ , ತೆರಿಗೆ,ಕಮೀಷನ್ ಗಳನ್ನು ಡ್ರಾ ಮಾಡಿಕೊಂಡು ಲೂಟಿ ಮಾಡಿದ್ದಾರೆ. ಗುತ್ತಿಗೆದಾರರು  ಗಂಟುಕಳೆದುಕೊಂಡು ಬಾರದ ಕಾಮಗಾರಿ ಬಿಲ್ ಗಳಿಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.  ಜಿ.ಪಂ. ಸಿಇಓ ಅಂಜನ್ ಕುಮಾರ್ ಸರ್ಕಾರಕ್ಕೆ ಸಲ್ಲಿಸಿದ  ರಹಸ್ಯ ವರದಿಯಲ್ಲಿನ ಮುಖ್ಯಾಂಶಗಳು ಈ ಮುಂದಿನಂತಿವೆ.
  •  ಅನುಷ್ಠಾನಾಧಿಕಾರಿಯಾದ ಜಿ.ಪಂ. ಸ.ಕಾ.ಅ. ನಾಗೇಶ ವಾಸ್ತವವಾಗಿ ಕಾರ್ಯ ನಿರ್ವಾಹಕ ಏಜೆನ್ಸಿಯಾಗಿದ್ದು ತಮ್ಮ ಅಧೀನ ಕಾರ್ಯ ನಿರ್ವಾಹಕ ತಾಂತ್ರಿಕ ಸಿಬ್ಬಂದಿಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ವಿಫಲರಾಗಿರುತ್ತಾರೆ.ಐವರು ಇಂಜಿನಿಯರುಗಳ ತಾಂತ್ರಿಕ ಮಾನವ ಸಂಪನ್ಮೂಲ ಇದ್ದಾಗ್ಯೂ ಸಹಾ ಕಿ.ಇಂ. ನಿಂಗೇಗೌಡ ಎಂಬ ಶಾಖಾ ಇಂಜಿನಿಯರ್ ಗೆ ಪೂರ್ಣ ತಾಲೂಕಿಕನ MNREGA ಅನುಷ್ಠಾನ ಸಾಧ್ಯವಾಗದಿರುವುದಕ್ಕೆ ಕಾರಣಕರ್ತರಾಗಿರುತ್ತಾರೆ. ಕಾಮಗಾರಿಗಳ ಕಾರ್ಯನಿರ್ವಹಣೆ ಉಸ್ತುವಾರಿ ಮತ್ತು ದಾಖಲೆಗಳ ನಿರ್ವಹಣೆ ಈ ಎಲ್ಲ ವಿಭಾಗಗಳಲ್ಲಿಯೂ ಸ.ಕಾ.ಇಂ. ಮತ್ತು ಕಿ.ಇಂ. ಇಬ್ಬರು ವಿಫಲರಾಗಿರುತ್ತಾರೆ.ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿರುತ್ತದೆ.ಕಾಮಗಾರಿಗಳ ಅಳತೆಗಳು ದಿನಾಂಕಗಳಲ್ಲಿ ಸಾಕಷ್ಟು ವ್ಯತ್ಯಯವಿದ್ದು ದಾಖಲೆಗಳು ಕೇವಲ ದಾಖಲೆ ಮಾಡುವ ಹಾಗೂ ಸ್ವ-ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಮಾತ್ರವೇ ಸೃಷ್ಟಿಸಲಾಗಿದೆ. ಸುಮಾರು 20ಕೋಟಿಗೂ ಹೆಚ್ಚು ಮೊತ್ತವುಳ್ಳ ಅಂದಾಜುಗಳ ವಿವಿಧ ಕಾಮಗಾರಿಗಳಿಗೆ ರೂ.284.00ಲಕ್ಷ ಮೊತ್ತದ ಸಾಮಾಗ್ರಿ ಬಿಲ್ಲು ತಯಾರಿಸಿ ಪಾವತಿಸಿದ್ದು ಸೂಕ್ತ ಉಸ್ತುವಾರಿ, ನಿರ್ವಹಣೆ, ಪರಿಶೀಲನೆ, ದಾಖಲೆ ಧೃಢೀಕರಣ ನಿರ್ವಹಿಸಿರುವುದಿಲ್ಲ.
  • ಜಿ.ಪಂ. ಕಿ.ಇಂ. ನಿಂಗೇಗೌಡ ರವರು ಅಂದಾಜು ತಯಾರಿಕೆ ಕಾಮಗಾರಿಯ ಕಾರ್ಯ ನಿರ್ವಹಣೆ, ಉಸ್ತುವಾರಿ ಪರಿಶೀಲನೆ, ದಾಖಲೆಗಳ ನಿರ್ವಹಣೆಯನ್ನು ಸರ್ಕಾರದ ನಿಯಮಾವಳಿಯ ರೀತ್ಯಾ ನಿರ್ವಹಿಸದೇ ಮನಬಂದಂತೆ ಬೇಜವಾಬ್ದಾರಿಯಿಂದ ನಿರ್ವಹಿಸುತ್ತಿರುವುದು ಕಂಡು ಬರುತ್ತದೆ. ಅಂದಾಜು ತಯಾರಿಕೆಯನ್ನು ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾಗಿರುವ ಮೊತ್ತಕ್ಕೆ ಮಾಡದೇ ಕ್ರಿಯಾ ಯೋಜನೆಯಲ್ಲಿ ಸೂಚಿಸಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ತಯಾರಿಸಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಕಾರಣರಾಗಿರುತ್ತಾರೆ ಹಾಗೂ ಕೆಲವು ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ಸಹಾ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಂದ ಮಂಜೂರು ಮಾಡಿಸಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಕಾರಣಕರ್ತರಾಗಿರುತ್ತಾರೆ. ಈ ರೀತಿಯ ಕಾರ್ಯ ನಿರ್ವಹಣೆಯಲ್ಲಿ ತಾಲ್ಲೂಕಿನ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದು ಕಂಡು ಬರುತ್ತದೆ.
  • ಅಳತೆ ಪುಸ್ತಕಗಳಲ್ಲಿ ಕೆಲವು ಸಾಮಾಗ್ರಿ ಬಿಲ್ಲುಗಳಲ್ಲಿ ಅಳತೆಗಳ ನಮೂದು ದಿನಾಂಕಗಳನ್ನು ಖಾಲಿ ಇಟ್ಟುಕೊಂಡು ನಂತರದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಮೂದಿಸಿರುವುದು ಕಂಡು ಬರುತ್ತದೆ.ಅಳತೆ ಪುಸ್ತಕಗಳನ್ವಯ ಅಳತೆ ಪುಸ್ತಕಗಳನ್ವಯ ಅಳತೆ ದಾಖಲೆಯ ದಿನಾಂಕಗಳು ಕ್ರಮಬದ್ದವಾಗಿರುವುದಿಲ್ಲ. ಇದು ಪೂರ್ಣ ಸಂಶಯಕ್ಕೆ ಕಾರಣವಾಗಿದೆ. ಇದಲ್ಲದೇ ಬಹಳಷ್ಟು ಖಾಸಗಿ ಫಲಾನುಭವಿಗಳ ಜಮೀನು ಸಮತಟ್ಟು ಕಾರ್ಯಕ್ರಮಗಳಿಗೆ ಗ್ರಾವೆಲ್ ಮಣ್ಣು ಹಾಕಿ ಸಮತಟ್ಟು ಮಾಡಿರುವುದು ಎಂದು ಬಿಲ್ಲುಗಳಲ್ಲಿ ದಾಖಲಿಸಿ ಟ್ರಾಕ್ಟರ್ ಬಾಡಿಗೆ, ಗ್ರಾವೆಲ್ ಮಣ್ಣು ಸಂಗ್ರಹಣೆಗಾಗಿ ಹಣ ನೀಡಿರುವುದು ಕಂಡು ಬರುತ್ತದೆ. ಇದು ಯೋಜನೆಯ ಫಲಕಾರಿ ಅನುಷ್ಠಾನವಲ್ಲ.

ಶುಕ್ರವಾರ, ನವೆಂಬರ್ 12, 2010

ಉದ್ಯೋಗ ಖಾತ್ರಿ ಅಕ್ರಮ:ಮಾರ್ಗಸೂಚಿ ಲೆಕ್ಕಕ್ಕಿಲ್ಲ ನೈಜಕೂಲಿಕಾರರಿಗೆ ಕೆಲಸವಿಲ್ಲ!

  • ಅರಕಲಗೂಡು ಜಯಕುಮಾರ್
ಅರಕಲಗೂಡು: ಮಹಾತ್ಮ ಗಾಂಧಿ ರಾಷ್ಟ್ರೀಯ ುದ್ಯೋಗ ಖಾತ್ರಿ ಯೋಜನೆ ಕಾಯ್ದೆ ಸ್ವರೂಪದ ಉತ್ತಮ ಯೋಜನೆ. ಇಂತಹ ಯೋಜನೆಯಲ್ಲಿ ಮಾರ್ಗಸೂಚಿ ಯನ್ವಯಮಾತ್ರವೇ ಕೆಲಸ ಮಾಡಬೇಕು. ಆದರೆತಾಲೂಕಿನಲ್ಲಿ ನಡೆದ ಖಾತ್ರಿ ಅನುಷ್ಠಾನದಲ್ಲಿ ಎಲ್ಲ  ನಿಯಮಗಳನ್ನುಗಾಳಿಗೆ ತೂರಲಾಗಿದೆ.ಉದ್ಯೋಗ ಖಾತ್ರಿಯ ಆರಂಭದಲ್ಲಿ 80ರೂಪಾಯಿ ದಿನಗೂಲಿ ಇದ್ದ ವೆಚ್ಚವನ್ನು 100ರೂ.ಗೆ ಏರಿಸಲಾಗಿದೆ. ಉದ್ಯೋಗ ಖಾತ್ರಿ ಯಲ್ಲಿ ಕೆಲಸ ಗಿಟ್ಟಿಸಲು ಮಾನದಂಡಗಳಿದ್ದು ಸಾರ್ವಜನಿಕವಾಗಿ ಹೆಸರು ನೋಂದಣಿ ಮಾಡಿಸಲು ಅವಕಾಶವಿದೆ, ಹೆಸರು ನೋಂದಾಯಿಸಿದ ಮೇಲೆ 15ದಿನಗಳೊಳಗೆ ಜನಸಂಖ್ಯೆಗನುಗುಣವಾಗಿ ಕಾಮಗಾರಿಯನ್ನು ನಿರ್ದರಿಸಬೇಕು. ಅಂತಹ ಕಾಮಗಾರಿಗೆ ವಾರ್ಡ್ ಸಭೆ ನಡೆಸಿ ಗ್ರಾ.ಪಂ. ನಿರ್ಣಯಿಸಬೇಕು ನಂತರ ಜಿ.ಪ.ಇಂಜಿನಿಯರು ಯೋಜನೆ ತಯಾರಿಸಿ ವೆಚ್ಚವನ್ನು  ನಿಗದಿಪಡಿಸಬೇಕು  ಈ ಹಂತ ಮುಗಿದ ಮೇಲೆ .ತಾಪಂ. ಕಾರ್ಯ ನಿರ್ವಾಹಕ ಅಧಿಕಾರಿ  ಕೆಲಸದ ಆದೇಶ ನೀಡಬೇಕು ಆದರೆ ಜಿಲ್ಲೆಯಾಧ್ಯಂತ ಆಗಿದ್ದೇನು?  ಜಿಲ್ಲೆಯ ಯಾವ ತಾಲೂಕುಗಳಲ್ಲೂ ಖಾತ್ರಿ ಅನುಷ್ಠಾನದ ಮಾನದಂಡಗಳನ್ನು ಅನುಸರಿಸಿಲ್ಲ. ಅರಕಲಗೂಡು ತಾಲ್ಲೂಕಿನಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಎಸ್ಟಿಮೇಟುಗಳನ್ನು ಮಾಡಲಾಗಿದೆ, ಕೂಲಿಕಾರರಿಗೆ ಕೆಲಸ ಕೊಡುವ ಬದಲು ಅನಧಿಕೃತವಾಗಿ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ, ಕೂಲಿ ಹಣವನ್ನು ರಾಷ್ರ್ಟೀ ಯಬ್ಯಾಂಕುಗಳಲ್ಲಿ ಪಾವತಿಸಬೇಕೆಂಬ ಆದೇಶವಿದ್ದರೂ ಸ್ಥಳೀಯ ಬ್ಯಾಂಕುಗಳಲ್ಲ ೂಕೂಲಿಕಾರರ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಬ್ಯಾಂಕುಸಿಬ್ಬಂದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೂ  ಲಿ ಹಣ ಡ್ರಾ ಮಾಡಲಾಗಿದೆ. ಕೂಲಿಕಾರರ ಕಾರ್ಡುಗಳು ಕೂಲಿಕಾರರ ಬಳಿ ಇರದೇ ಗುತ್ತಿಗೆದಾರರ ಬಳಿ ಕೇಂದ್ರೀಕೃತವಾಗಿದೆ. ಇಂಜಿನಿಯರುಗಳು  ಮತ್ತುಗ್ರಾ.ಪಂ. ಕಾರ್ಯದರ್ಶಿಗಳು ನಕಲಿ ಎನ್ ಎಂ ಆರ್ ,ಎಸ್ಟೀಮೇಟುಗಳನ್ನು ಲೆಕ್ಕವಿಲ್ಲದಷ್ಟು ಸಂಖ್ಯೆಯ ಲ್ಲಿ ಮಾಡಿದ್ದಾರೆ. ಅಮಾಯಕ ಗುತ್ತಿಗೆದಾರರುಗಳಿಗೆ  ಪಂಚಾಯ್ತಿಗಳಲ್ಲಿ ಅನುಮೋದನೆ ಇಲ್ಲದಿದ್ದರೂ ಕಾರ್ಯದೇಶ ನೀಡಿ ಅನೇಕ ಕೆಲಸಗಳನ್ನು ಮಾಡಿಸಲಾಗಿದೆ. ಆದರೆ ಇಂಜಿನಿಯರುಗಳು ಯೋಜನೆಯಲ್ಲಿ ಲಭ್ಯವಿಲ್ಲದ 125ರೂ ಕೂಲಿಯನ್ನು ನಮೂದಿಸಿ ಸರಕು ಸಾಮಾಗ್ರಿ ಬಿಲ್ , ತೆರಿಗೆ,ಕಮೀಷನ್ ಗಳನ್ನು ಡ್ರಾ ಮಾಡಿಕೊಂಡು ಲೂಟಿ ಮಾಡಿದ್ದಾರೆ. ಗುತ್ತಿಗೆದಾರರು  ಗಂಟುಕಳೆದುಕೊಂಡು ಬಾರದ ಕಾಮಗಾರಿ ಬಿಲ್ ಗಳಿಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನೈಜವಾಗಿ ಕಾಮಗಾರಿಗಳನ್ನು ಕೂಲಿಯಾಳುಗಳು ನಿರ್ವಹಿಸದಿದ್ದುದರಿಂದ ಇವ ತ್ತು ಕೂಲಿ ಹಣವನ್ನು ಕೇಳಿಕೊಂ ಡು ಯಾವ ಕಾರ್ಮಿಕನು ಧ್ವನಿಯೆತ್ತುತ್ತಿಲ್ಲ. ಈ ಎಲ್ಲ ಅಂಶಗಳನ್ನು ಸವಿಸ್ತಾರವಾಗಿ ಜಿ.ಪಂ. ಸಿಇಓ ಅಂಜನ್ ಕುಮಾರ್ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ.ಪತ್ರದ ಮುಂದುವರೆದ ಮುಖ್ಯಾಂಶಗಳು ಈ ಮುಂದಿನಂತಿವೆ.
  • ಕ್ರಿಯಾ ಯೋಜನೆ ಮೀರಿ ಅಥವಾ ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ತಮ್ಮ ಅಧೀನ ತಾಂತ್ರಿಕ ಸಿಬ್ಬಂದಿ ತಯಾರಿಸಿರುವ ಅಂದಾಜುಗಳಿಗೆ ಅನುಷ್ಠಾನಾಧಿಕಾರಿ ಜವಾಬ್ದಾರರು. ಕಾರಣ ಅಂತಹ ಕಾಮಗಾರಿಗಳಿಗೂ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ, ಸೂಕ್ತ ಪರಿಶೀಲನೆ ನಡೆಸಿದ್ದರೆ ಇಂತಹ ನ್ಯೂನ್ಯತೆಗಳು ಬರುತ್ತಿರಲಿಲ್ಲ. ಸಾಮಾಗ್ರಿ ಸರಬರಾಜು ಬಿಲ್ಲನ್ನು ಸರಬರಾಜು ಗುತ್ತಿಗೆದಾರರುಗಳಿಗೆ ನೇರವಾಗಿ ಅನುಷ್ಟಾನಾಧಿಕಾರಿಗಳೂ ಹಾಗು ಕಾರ್ಯ ನಿರ್ವಾಹಕ ಏಜೆನ್ಸಿ ಸ.ಕಾ.ಇಂ. ನಾಗೇಶ್ ಚೆಕ್ ಮುಖೇನ ಹಣ ಪಾವತಿಸಿರುತ್ತಾರೆ. ಹಣ ಪಾವತಿಸಿದ ಎಲ್ಲ ಸಾಮಾಗ್ರಿಗಳು ಆಯಾ ಕಾಮಗಾರಿಗಳಿಗೆ ಸದ್ಭಳಕೆ ಮಾಡಿರುವ ಬಗ್ಗೆ ಖಾತರಿ ಪಡಿಸಿಕೊಂಡಿರುವುದಿಲ್ಲ.


  • ತಾಲ್ಲೋಕಿಗೆ ಉದ್ಯೋಗ ಖಾತ್ರಿ ಕಾರ್ಯ ಹಂಚಿಕೆಯನ್ನು ಒಬ್ಬನೇ ಶಾಖಾ ಇಂಜಿನಿಯರ್ ನಿಂಗೇಗೌಡ ಎಂಬುವವರಿಗೆ ವಹಿಸಿರುತ್ತಾರೆ. ಜೊತೆಗೆ ಹಂಚಿಕೆಯನುಸಾರ ಜಿ.ಪಂ.-ತಾ.ಪಂ.-ಗ್ರಾ.ಪಂ.ವ್ಯಾಪ್ತಿಯ ಹತ್ತಾರು ಲೆಕ್ಕ ಶೀರ್ಷಿಕೆಗಳ ಕಾಮಗಾರಿಗಳನ್ನು ನಿರ್ವಹಿಸಲು ಹಂಚಿಕೆ ಮಾಡಿದ್ದಾರೆ. ಈ ಕಾರ್ಯ ಹಂಚಿಕೆ ತೀರ್ಮಾನ ಅನುಮಾನಕ್ಕೆ ಆಸ್ಪದ ನೀಡಿದೆ.ಹೀಗಾಗಿ ಪರಿಣಾಮಕಾರಿ ಕಾರ್ಯ ನಿರ್ವಹಣೆ ಮತ್ತು ದಾಖಲೆಗಳ ನಿರ್ವಹಣೆ ಸೂಕ್ತವಾಗಿರುವುದಿಲ್ಲ.29ಗ್ರಾ.ಪಂ.ಗಳ ಖಾತ್ರಿ ಕಾರ್ಯ ನಿರ್ವಹಣೆ ಒಬ್ಬ ಇಂಜಿನಿಯರ್ ನಿಂದ ಸಾಧ್ಯವಿಲ್ಲದಾಗಿದ್ದು ಅವ್ಯವಹಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಹೀಗಾಗಿ ಇವರು ಬಹಳಷ್ಟು ಕಾಮಗಾರಿಗಳ ಅಂದಾಜು ಸಿದ್ಧಪಡಿಸಿಲ್ಲ, ಅಳತೆ ಬರೆದಿಲ್ಲ ಸ್ಥಳ ಪರಿಶೀಲನೆ ಮಾಡಿಲ್ಲ, ಅಳತೆ ಪರಿಶೀಲಿಸಿಲ್ಲಸಾಮಾಗ್ರಿ ಬಿಲ್ಲುಗಳು ಹಾಗು ಸರಬರಾಜುದಾರರ ವಿಳಾಸಗಳು ತಿದ್ದಲ್ಪಟ್ಟಿವೆ.

  • ಕಾಮಗಾರಿಯ ನುಷ್ಠಾನದ ನಂತರದ ಹಂತದಲ್ಲಿ ಕೂಲಿ ಮತ್ತು ಸಾಮಾಗ್ರಿ ಪಾವತಿಗೆ ಕ್ರಮವಾಗಿ ಆದ್ಯತೆ ಇರುತ್ತದೆ ಆದರೆ ಸಾಮಾಗ್ರಿ ಬಿಲ್ಲು ಪಾವತಿಗೆ ಪ್ರಥಮ ಆದ್ಯತೆ ನೀಡಿ ಕೂಲಿಕಾರರಿಗೆ ಹಣ ಪಾವತಿಸದೇ ಇರುವುದು ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ವಿಫಲವಾದಂತೆ ಆಗಿದೆ. ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಲಹೆಗಳನ್ನು ಸೂಚನೆಗಳನ್ನು ಸುತ್ತೋಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಿರುವುದಿಲ್ಲ ಮತ್ತು ತಮ್ಮ ಅಧೀನ ಅಧಿಕಾರಿಗಳಿಗೂ ಸೂಕ್ತ ತಿಳುವಳಿಕೆ ನೀಡಿರುವುದಿಲ್ಲ.ಕಾಮಗಾರಿಗಳ ನಿರ್ವಹಣೆ ಉಸ್ತುವಾರಿ ಹಾಗೂ ದಾಖಲೆಗಳ ನಿರ್ವಹಣೆ ಎಲ್ಲಾ ವಿಭಾಗಗಳಲ್ಲೂ ಸ.ಕಾ.ಇಂ. ಮತ್ತು ಕಿ.ಇಂ. ವಿಫಲರಾಗಿದ್ದು ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.

  • ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ುದ್ಯೋಗ ಖಾತ್ರಿ ಕಾಯ್ದೆಯು ಸಾಮಾನ್ಯ ಯೋಜನೆಯಾಗಿರದೇ ಕಾಯ್ದೆಯ ಸ್ವರೂಪ ಹೊಂದಿದ್ದು ಗ್ರಾಮೀಣ ಜನತೆಗೆ ಉದ್ಯೋಗ ೊದಗಿಸುವ ತನ್ಮೂಲಕ ಆಸ್ತಿ ಸೃಷ್ಟಿಸುವ ಅತ್ಯಂತ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಸಮಗ್ರ ಯೋಜನೆಯಾಗಿದೆ. ಹೀಗಾಗಿ ಸದರಿ ಕಾಯ್ದೆ ಅಡಿಯಲ್ಲಿನ ಅನುಷ್ಠಾನ ಮಾರ್ಗಸೂಚಿ ಇತರ ವ್ಯತ್ಯಯಗಳಿಗೆ ಅಧಿಕಾರಿಗಳು ಕಾರಣರಾಗಿದ್ದು ಇದನ್ನು ಕಾಯ್ದೆ ಉಲ್ಲಂಘನೆ ಎಂದು ಪರಿಗಣಿಸಿ ಇದರಿಂದ ುದ್ಭವವಾಗಿರುವ ಅವ್ಯವಹಾರ ದುರುಪಯೋಗದ ಸಂಬಂಧಗಳಿಗೆ ಅಧಿಕಾರಿಗಳು ಮತ್ತು ನೌಕರರು ಸಂಶಯಾತೀತವಾಗಿ ಕಾರಣಕರ್ತರಾಗಿರುತ್ತಾರೆ. ಅಂತೆಯೇ ಉದ್ದೇಶ ಪೂರ್ವಕವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ಕರ್ತವ್ಯ ಲೋಪ ಎಸಗಿದ್ದು ಶಿಸ್ತು ಕ್ರಮಕ್ಕೆ ಅರ್ಹರಾಗಿರುತ್ತಾರೆ.(ಮುಂದುವರೆಯುವುದು)
ಅರಕಲಗೂಡು: ತಾಲೂಕಿನಲ್ಲಿ ನಿನ್ನೆ ಸುರಿದ ಭಾರಿ  ಮಳೆಯಿಂದಾಗಿ 100ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು  ಹಲವುಕೆರೆ-ಕಟ್ಟೆ-ನಾ ಲೆಗಳು ಒಡೆದು ಸಾವಿರಾರು ಎಕರೆ ಬೆಳೆ ಜಲಾವೃತ್ತವಾಗಿದೆ. ಗುರುವಾರ ಸಂಜೆ ಸುರಿದ ಮಳೆಗೆ ಮಲ್ಲಿಪಟ್ಟಣದಲ್ 2, ರಾಮನಾಥಪುರದಲ್ಲಿ -36 ಕೊಣನೂರಿನಲ್ಲಿ 32, ಕಸಬ ಹೋಬಳಿಯಲ್ಲಿ 8, ದೊಡ್ಡಮಗ್ಗೆಯಲ್ಲಿ 23 ಮನೆಗಳು ಕುಸಿದಿವೆ ಯಾದರೂ ಯಾವುದೇ ಜೀವಹಾನಿ ಸಂಭವಿಸಿಲ್ಲ. ಕಳೆದ 4ದಿನಗಳಿಂ ದ ತಾಲ್ಲೂಕಿನಾಧ್ಯಂತ ಮಳೆಗೆ 200ಕ್ಕೂ ಹೆಚ್ಚು ಕುಸಿದಿರುವ ವರದಿಯಾಗಿದೆ. ರಾಗಿಬೈಚನಹಳ್ಳಿಯಲ್ಲಿ ಕಲ್ವರ್ಟ್ ಕುಸಿದು ನೂರಾರು ಎಕರೆ ಜಮೀನು ಜಲಾವೃತ್ತವಾಗಿದ್ದರೆ, ಕಾಳೇನಹಳ್ಳಿಯಲ್ಲಿ ಕೆರೆ ಏರಿ ಒಡೆದಿದ, ಕೊಣನೂರು ಹೋಬಳಿಯಲ್ಲಿ ಹಾರಂಗಿ ಬಲದಂಡೆ ನಾಲೆ ಗೋಡೆ  ಕುಸಿದಿದೆ, ಮಲ್ಲಿಪಟ್ಟಣದ ಮೊರಾ  ರ್ಜಿಶಾಲೆಯಮೇಲ್ಚಾವಣಿ ಕುಸಿದಿದೆ, ಮುತ್ತಿಗೆ ಕೆರೆ ಏರಿ ಒಡೆದ ಪರಿಣಾಮ ಸಾವಿರಾರು ಎಕರೆ ಯಲ್ಲಿದ್ದ ತೆಂಗು,ಅಡಿಕೆ, ಬಾಳೆ, ಶುಂಠಿ, ಜೋಳ ಹಾಗೂ ಭತ್ತದ ಫಸಲು ನಾಶವಾಗಿದೆ. ಗ್ರಾಮೀಣ ಭಾಗದ ಹಲವು ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಸಂ ಚಾರಕ್ಕೆ ವ್ಯತ್ಯಯವಾಗಿದೆ. ಮುದ್ದನಹಳ್ಳಿ ಬಳಿ ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ರಸ್ತೆ ದಾಟಲು ಯತ್ನಿಸಿದ ಗೂಡ್ಸ್ ಆಟೋ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದಾಗ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಆಟೋ ಹಾಗೂ ಚಾಲಕನನ್ನು ರಕ್ಷಿಸಲಾಗಿದೆ.  ಗುರುವಾರ ಸಂಜೆ  ಸಿಡಿಲಿನಹೊಡೆತಕ್ಕೆ ಸಿ ಲುಕಿಮೃತಪಟ್ಟ ಬಾಲಕಿ ಮೇಘ ಳ  ಅಂತ್ಯಕ್ರಿಯೆ ಇಂದು ಜರುಗಿತು. ಗಾಯಗೊಂಡಿದ್ದ ಮತ್ತಬ್ಬ  ಬಾಲಕಿ ದೀಪಿಕಾ ಹಾಗೂ ಕಾಳಯ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಮಾದೇಶ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಬೊಮ್ಮೇಗೌಡ, ತಹಸೀಲ್ದಾರ್ ಸವಿತಾ, ಶಾಸಕ ಎ. ಮಂಜು, ಮಾಜಿ ಶಾಸಕ ಎ ಟಿ ರಾಮಸ್ವಾಮಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅರಕಲಗೂಡು : ನೆರೆ ಹಾವಳಿ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಚರ್ಚಿಸಲು ಶಾಸಕ ಎ. ಮಂಜು  ಶುಕ್ರವಾರತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿದರು.  ನೆರೆಹಾವಳಿ ಪ್ರದೇಶಕ್ಕೆ ತಗೆರಳದೇ ನಿರ್ಲಕ್ಷಯ ಧೋರಣೆ ತಳೆದ ಜಿ.ಪಂ. ಇಂಜಿನಿಯರ್ ಈಶ್ವರ್  ನ್ನು ಅಮಾನತ್ತುಗೊಳಿಸಲು ಸೂಚಿಸಿದ ಶಾಸಕ ಮಂಜು ಬೆಳೆ ನಷ್ಟ ಕುರಿತು ಸೂಕ್ತ ಮಾಹಿತಿ ನೀಡದ ಸಹಾಯಕ ಕೃಷಿ ನಿರ್ದೇಶಕ ವಾಸುವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 15ದಿನಗಳಿಂದ ಮಳೆ ಸುರಿಯುತ್ತಿದ್ದರೂ ಸಹ ಸ್ಥಳಕ್ಕೆ ಭೇಟಿ ನೀಡದೆ ಮುಗುಮ್ಮಾಗಿದ್ದ ಅಧಿಕಾರಿಯ ವರ್ತನೆಯನ್ನು ಖಂಡಿಸಿದ ಅವರು 3ದಿನದೊಳಗೆ ಸಮಗ್ರ ಮಾಹಿತಿ ನೀಡಲು ಸೂಚಿಸಿದರು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇದ್ದು ಮಳೆ ಹಾನಿ ಕುರಿತ ವರದಿ ಹಾಗೂ ಪರಿಹಾರೋಪಾಯ ಒದಗಿಸುವಂತೆ ಸೂಚಿಸಿದರು. ಸಭೆಯಲ್ಲಿ ನಿನ್ನೆ ಸಿಡಿಲಿನಿಂದ ಮೃತಪಟ್ಟ ಗಂಜಲಗೋಡಿನ ಬಾಲಕಿಯ ಪೋಷಕರಿಗೆ 1ಲಕ್ಷರೂಪಾಯಿಯ ಪರಿಹಾರ ವಿತರಿಸಿದ ಶಾಸಕರು ಅದೇ ಘಟನೆಯಲ್ಲಿ ಗಾಯಗೊಂಡ ಬಾಲಕಿ ದೀಪಿಕಾ ಹಾಗೂ ಕಾಳಯ್ಯ ನ ಮನೆಯವರಿಗೆ 2000ಪರಿಹಾರದ ಚೆಕ್ ನೀಡಿದರು.

ಬುಧವಾರ, ನವೆಂಬರ್ 10, 2010

ಉದ್ಯೋಗ ಖಾತ್ರಿ ಕರ್ಮಕಾಂಡ-2

ಉದ್ಯೋಗ ಖಾತ್ರಿ ಅಕ್ರಮ ಕುರಿತು ಸರ್ಕಾರಕ್ಕೆ ಸಿಇಓ ಸಲ್ಲಿಸಿದ ರಹಸ್ಯ ವರದಿಯಲ್ಲಿ ಏನಿದೆ?
  • ಅರಕಲಗೂಡು ಜಯಕುಮಾರ್

ಕೇಂದ್ರ ಸರ್ಕಾರ ಈ ಮೊದಲು ಎಸ್ ಜೆ ಆರ್ ವೈ ಯೋಜನೆಯನ್ನು ಕೂಲಿಗಾಗಿ ಕಾಳು ಹೆಸರಿನಲ್ಲಿ ಜಾರಿಗೆ ತಂದಿತ್ತು . ಈ ಯೋಜನೆಯು ಕೂಡಾ ಅಧಿಕಾರಿಶಾಹಿಯ ಭ್ರಷ್ಟಾಚಾರದಿಂದಾಗಿ ಹಳ್ಳ ಹಿಡಿದಿತ್ತು ಮತ್ತು ಬಡವರಿಗೆ ಕೂಲಿಯ ಜೊತೆಗೆ ವಿತರಣೆಯಾಗ ಬೇಕಾಗಿದ್ದ ಸಾವಿರಾರು ಟನ್ ಅಕ್ಕಿ ವಿದೇಶಕ್ಕೆ ಮಾರಾಟವಾಗಿ 40ಕ್ಕೂ ಹೆಚ್ಚು ಮಂದಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಂಗಳೂರು ಜೈಲಿನಲ್ಲಿ 3ತಿಂಗಳುಗಳ ಕಾಳ ಮುದ್ದೆ ಮುರಿಯುತ್ತಾ ಕಂಬಿ ಎಣಿಸಿದ್ದರು! ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳು ಸಾಬೀತಾದರೆ ಜಿಲ್ಲೆಯಲ್ಲಿಯೂ ಕೆಲವು ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರುಗಳು ಕಂಬಿ ಎಣಿಸುವುದು ಶತಸಿದ್ಧ ಎಂದು ಪತ್ರಿಕೆಯ ವರದಿಯಲ್ಲಿ 10ತಿಂಗಳ ಹಿಂದೆಯೇ ಸ್ಪಷ್ಟವಾಗಿ ಬರೆಯಲಾಗಿತ್ತು. ಆದರೂ ಜಗ್ಗದ ಭ್ರಷ್ಟ ಅಧಿಕಾರಶಾಹಿಯ ಸ್ವೇಚ್ಚಾಚಾರದಿಂದ ಅರಕಲಗೂಡು ತಾಲ್ಲೂಕಿನಲ್ಲಿ 2009ನೇ ಸಾಲಿಗೆ ಉದ್ಯೋಗ ಚೀಟಿಗಳಿಗನುಗುಣವಾಗಿ 22ಕೋಟಿ ಮಾತ್ರ ಕಾಮಗಾರಿಗಳು ನಡೆಯಬೇಕಿತ್ತು ಆದರೆ ಅನಾಮತ್ತು 150ಕೋಟಿ ರೂಪಾಯಿಗಳ ಕಾಮಗಾರಿಗೆ ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿಯನ್ನೇ ನಿರ್ವಹಿಸದೇ ಶೇ.40ರ ಸಾಮಾಗ್ರಿ ಬಿಲ್ ಸುಮಾರು 3ಕೋಟಿ ವೆಚ್ಚವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಸದರಿ ಸರಕು-ಸಾಮಾಗ್ರಿ ಬಿಲ್ ಗೆ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಹಣ 35ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕಟ್ಟದೇ ವಂಚಿಸಲಾಗಿದೆ. ವಾಸ್ತವವಾಗಿ ಉದ್ಯೋಗ ಖಾತ್ರಿ ಕೆಲಸವನ್ನು ನಿರ್ವಹಿಸಬೇಕಾದ ಸಂಪೂರ್ಣ ಹೊಣೆಗಾರಿಕೆ ಇರುವುದು ಗ್ರಾ.ಪಂ.ಗಳಿಗೆ ಆದರೆ ಇಲ್ಲಿ ಹಿರಿಯ ಅನುಷ್ಠಾನಾಧಿಕಾರಿಗಳು ಗ್ರಾ.ಪಂ.ಯವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಸ್ವೇಚ್ಚಾಚಾರದಿಂದ ವರ್ತಿಸಿದ್ದಾರೆ. ಈ ಎಲ್ಲಾ ಅಂಶಗಳ ಕುರಿತು ಹಾಸನ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜನಕುಮಾರ್ ಸರ್ಕಾರಕ್ಕೆ ಸಲ್ಲಿಸಿದ ರಹಸ್ಯ ವರದಿ ಪತ್ರಿಕೆಗೆ ಲಭ್ಯವಾಗಿದ್ದು ಅದರ ಮುಖ್ಯಾಂಶಗಳನ್ನು ಆಯ್ದು ಇಲ್ಲಿ ನೀಡಲಾಗಿದೆ. 
  • ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ತಾಲ್ಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ (ಕಾರ್ಯಕ್ರಮ ಅಧಿಕಾರಿ)ಯಾಗಿದ್ದು ತೋಟಗಾರಿಕೆ, ಸಾಮಾಜಿಕ ಅರಣ್ಯ, ಪಂಚಾಯತ್ ರಾಜ್ ಇಂಜಿನಿಯರಿಂಗ್ ,ನೀರಾವರಿ ಹಾಗೂ ಜಲಾನಯನ ಹಾಗೂ ಮುಂತಾದ ಇಲಾಖೆಗಳು ಮಾತ್ರ ಒಳಗೊಂಡಿರುತ್ತದೆ. ಆದರೆ ತಾಲ್ಲೂಕಿನ ಉದ್ಯೋಗಖಾತ್ರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ನಾಗೇಶ್,ಜಿ.ಪಂ.ನ ಸಹಾಯಕ ಕಾರ್ಯಪಾಲಕ ಅಭಿಯಂತರ,ಫಣೀಶ್,ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಜಿ.ಪಂ. ನ ಕಿರಿಯ ಇಂಜಿನಿಯರ್ ನಿಂಗೇಗೌಡ ಇವರುಗಳು ಮಾತ್ರ ಅನುಷ್ಠಾನದಲ್ಲಿ ಪ್ರಮುಖವಾಗಿ ಭಾಗಿಗಳಾಗಿರುವುದು ಕಂಡು ಬಂದಿರುತ್ತದೆ. 
  • ಕಾಮಗಾರಿಗಳಿಗೆ ಸಾಮಾಗ್ರಿ ಬಿಲ್ ಪಾವತಿಯನ್ನು ತ್ವರಿತವಾಗಿ ಪೂರ್ಣಗೊಳಿಸಿರುವ ಅನುಷ್ಠಾನಾಧಿಕಾರಿಗಳು ಇದೇ ಆಸಕ್ತಿಯನ್ನು ಕಾಮಗಾರಿಗಳ ಪೂರ್ಣ ಅನುಷ್ಠಾನದಲ್ಲಿ ತೋರಿಸಿರುವುದಿಲ್ಲ. ತಮಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಪಟ್ಟ ಕಾಮಗಾರಿಗಳ ಅಂದಾಜು ಪರಿಶೀಲನೆಯಿಂದ ಹಿಡಿದು ಕಾಮಗಾರಿ ಉಸ್ತುವಾರಿ ಪರಿಣಾಮಕಾರಿ ಕಾರ್ಯನಿರ್ವಹಣೆ, ಅಳತೆ ಪುಸ್ತಕಗಳ ಸೂಕ್ತ ಪರಿಶೀಲನೆ, ಎನ್ ಎಂಆರ್ ಗಳು ಇತರೆ ದಾಖಲೆಗಳ ಧೃಢೀಕರಣವನ್ನು ಸಹಾ ಅನುಷ್ಠಾನಾಧಿಕಾರಿಯಾದ ಸಹಾಯಕ ಕಾರ್ಯಪಾಲಕ ಅಭಿಯಂತರ ನಿರ್ವಹಿಸಬೇಕಾಗಿತ್ತು ಆದರೆ ಈ ಪ್ರಕ್ರಿಯೆಗಳಿಂದ ಸದರಿ ಅಧಿಕಾರಿಯವರು ಪ್ರಗತಿಯಲ್ಲಿರುವ ಉಳಿದ ಎಲ್ಲಾ ಕಾಮಗಾರಿಗಳ ಶೇ.10ರಷ್ಟು ಕಾಮಗಾರಿಗಳ ಅಳತೆ ಪರಿಶೀಲನೆಯನ್ನು ಸಹಾ ಧೃಢೀಕರಿಸಿಲ್ಲ. ಯೋಜನೆಯ ಹಣ ಇಲ್ಲಿ ನೇರವಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಶ್ ಹೆಸರಿನಲ್ಲಿ ಬಿಡುಗಡೆಯಾಗಿದ್ದು ಅವರೇ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ.
  • ಕ್ರಿಯಾ ಯೋಜನೆ ಮೀರಿ ಅಥವಾ ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ತಮ್ಮ ಅಧೀನ ತಾಂತ್ರಿಕ ಸಿಬ್ಬಂದಿ ತಯಾರಿಸಿರುವ ಅಂದಾಜುಗಳಿಗೆ ಅನುಷ್ಠಾನಾಧಿಕಾರಿ ಜವಾಬ್ದಾರರು. ಕಾರಣ ಅಂತಹ ಕಾಮಗಾರಿಗಳಿಗೂ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ, ಸೂಕ್ತ ಪರಿಶೀಲನೆ ನಡೆಸಿದ್ದರೆ ಇಂತಹ ನ್ಯೂನ್ಯತೆಗಳು ಬರುತ್ತಿರಲಿಲ್ಲ. ಸಾಮಾಗ್ರಿ ಸರಬರಾಜು ಬಿಲ್ಲನ್ನು ಸರಬರಾಜು ಗುತ್ತಿಗೆದಾರರುಗಳಿಗೆ ನೇರವಾಗಿ ಅನುಷ್ಟಾನಾಧಿಕಾರಿಗಳೂ ಹಾಗು ಕಾರ್ಯ ನಿರ್ವಾಹಕ ಏಜೆನ್ಸಿ ಸ.ಕಾ.ಇಂ. ನಾಗೇಶ್ ಚೆಕ್ ಮುಖೇನ ಹಣ ಪಾವತಿಸಿರುತ್ತಾರೆ. ಹಣ ಪಾವತಿಸಿದ ಎಲ್ಲ ಸಾಮಾಗ್ರಿಗಳು ಆಯಾ ಕಾಮಗಾರಿಗಳಿಗೆ ಸದ್ಭಳಕೆ ಮಾಡಿರುವ ಬಗ್ಗೆ ಖಾತರಿ ಪಡಿಸಿಕೊಂಡಿರುವುದಿಲ್ಲ.
  • ತಾಲ್ಲೋಕಿಗೆ ಉದ್ಯೋಗ ಖಾತ್ರಿ ಕಾರ್ಯ ಹಂಚಿಕೆಯನ್ನು ಒಬ್ಬನೇ ಶಾಖಾ ಇಂಜಿನಿಯರ್ ನಿಂಗೇಗೌಡ ಎಂಬುವವರಿಗೆ ವಹಿಸಿರುತ್ತಾರೆ. ಜೊತೆಗೆ ಹಂಚಿಕೆಯನುಸಾರ ಜಿ.ಪಂ.-ತಾ.ಪಂ.-ಗ್ರಾ.ಪಂ.ವ್ಯಾಪ್ತಿಯ ಹತ್ತಾರು ಲೆಕ್ಕ ಶೀರ್ಷಿಕೆಗಳ ಕಾಮಗಾರಿಗಳನ್ನು ನಿರ್ವಹಿಸಲು ಹಂಚಿಕೆ ಮಾಡಿದ್ದಾರೆ. ಈ ಕಾರ್ಯ ಹಂಚಿಕೆ ತೀರ್ಮಾನ ಅನುಮಾನಕ್ಕೆ ಆಸ್ಪದ ನೀಡಿದೆ.ಹೀಗಾಗಿ ಪರಿಣಾಮಕಾರಿ ಕಾರ್ಯ ನಿರ್ವಹಣೆ ಮತ್ತು ದಾಖಲೆಗಳ ನಿರ್ವಹಣೆ ಸೂಕ್ತವಾಗಿರುವುದಿಲ್ಲ.29ಗ್ರಾ.ಪಂ.ಗಳ ಖಾತ್ರಿ ಕಾರ್ಯ ನಿರ್ವಹಣೆ ಒಬ್ಬ ಇಂಜಿನಿಯರ್ ನಿಂದ ಸಾಧ್ಯವಿಲ್ಲದಾಗಿದ್ದು ಅವ್ಯವಹಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಹೀಗಾಗಿ ಇವರು ಬಹಳಷ್ಟು ಕಾಮಗಾರಿಗಳ ಅಂದಾಜು ಸಿದ್ಧಪಡಿಸಿಲ್ಲ, ಅಳತೆ ಬರೆದಿಲ್ಲ ಸ್ಥಳ ಪರಿಶೀಲನೆ ಮಾಡಿಲ್ಲ, ಅಳತೆ ಪರಿಶೀಲಿಸಿಲ್ಲಸಾಮಾಗ್ರಿ ಬಿಲ್ಲುಗಳು ಹಾಗು ಸರಬರಾಜುದಾರರ ವಿಳಾಸಗಳು ತಿದ್ದಲ್ಪಟ್ಟಿವೆ. 
  • ಕಾಮಗಾರಿಯ ನುಷ್ಠಾನದ ನಂತರದ ಹಂತದಲ್ಲಿ ಕೂಲಿ ಮತ್ತು ಸಾಮಾಗ್ರಿ ಪಾವತಿಗೆ ಕ್ರಮವಾಗಿ ಆದ್ಯತೆ ಇರುತ್ತದೆ ಆದರೆ ಸಾಮಾಗ್ರಿ ಬಿಲ್ಲು ಪಾವತಿಗೆ ಪ್ರಥಮ ಆದ್ಯತೆ ನೀಡಿ ಕೂಲಿಕಾರರಿಗೆ ಹಣ ಪಾವತಿಸದೇ ಇರುವುದು ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ವಿಫಲವಾದಂತೆ ಆಗಿದೆ. ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಲಹೆಗಳನ್ನು ಸೂಚನೆಗಳನ್ನು ಸುತ್ತೋಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಿರುವುದಿಲ್ಲ ಮತ್ತು ತಮ್ಮ ಅಧೀನ ಅಧಿಕಾರಿಗಳಿಗೂ ಸೂಕ್ತ ತಿಳುವಳಿಕೆ ನೀಡಿರುವುದಿಲ್ಲ.ಕಾಮಗಾರಿಗಳ ನಿರ್ವಹಣೆ ಉಸ್ತುವಾರಿ ಹಾಗೂ ದಾಖಲೆಗಳ ನಿರ್ವಹಣೆ ಎಲ್ಲಾ ವಿಭಾಗಗಳಲ್ಲೂ ಸ.ಕಾ.ಇಂ. ಮತ್ತು ಕಿ.ಇಂ. ವಿಫಲರಾಗಿದ್ದು ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. 
  • ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ುದ್ಯೋಗ ಖಾತ್ರಿ ಕಾಯ್ದೆಯು ಸಾಮಾನ್ಯ ಯೋಜನೆಯಾಗಿರದೇ ಕಾಯ್ದೆಯ ಸ್ವರೂಪ ಹೊಂದಿದ್ದು ಗ್ರಾಮೀಣ ಜನತೆಗೆ ಉದ್ಯೋಗ ೊದಗಿಸುವ ತನ್ಮೂಲಕ ಆಸ್ತಿ ಸೃಷ್ಟಿಸುವ ಅತ್ಯಂತ  ಮಹತ್ವಾಕಾಂಕ್ಷೆಯನ್ನು ಹೊಂದಿದೆ ಸಮಗ್ರ ಯೋಜನೆಯಾಗಿದೆ. ಹೀಗಾಗಿ ಸದರಿ ಕಾಯ್ದೆ ಅಡಿಯಲ್ಲಿನ ಅನುಷ್ಠಾನ ಮಾರ್ಗಸೂಚಿ ಇತರ ವ್ಯತ್ಯಯಗಳಿಗೆ  ಅಧಿಕಾರಿಗಳು ಕಾರಣರಾಗಿದ್ದು ಇದನ್ನು ಕಾಯ್ದೆ ಉಲ್ಲಂಘನೆ ಎಂದು ಪರಿಗಣಿಸಿ ಇದರಿಂದ ುದ್ಭವವಾಗಿರುವ ಅವ್ಯವಹಾರ ದುರುಪಯೋಗದ ಸಂಬಂಧಗಳಿಗೆ ಅಧಿಕಾರಿಗಳು ಮತ್ತು ನೌಕರರು ಸಂಶಯಾತೀತವಾಗಿ ಕಾರಣಕರ್ತರಾಗಿರುತ್ತಾರೆ. ಅಂತೆಯೇ ಉದ್ದೇಶ ಪೂರ್ವಕವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ಕರ್ತವ್ಯ ಲೋಪ ಎಸಗಿದ್ದು ಶಿಸ್ತು ಕ್ರಮಕ್ಕೆ ಅರ್ಹರಾಗಿರುತ್ತಾರೆ.(ಮುಂದುವರೆಯುವುದು).
ಅರಕಲಗೂಡು: ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ವ್ಯಾಪಕ ವಾಗಿ ನೀತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಮತ್ತು ದಾಖಲೆಗಳ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಲಾಗಿದೆ ಎಂದು ಜಿ.ಪಂ. ಸಿಇಓ ಒಪ್ಪಿಕೊಳ್ಳುತ್ತಾರೆ ಆದರೆ ಶಿಸ್ತು ಕ್ರಮಕ್ಕೆ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯನ್ನು ಕಳೆದ 2-3ವರ್ಷಗಳಿಂದ ಬಿಜೆಪಿ ಸರ್ಕಾರ ಕಡೆಗಣಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವರುಗಳ ಬೇಜವಾಬ್ದಾರಿಯೂ ಸಹಾ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಮತ್ತು ಸ್ವೇಚ್ಚಾಚಾರಕ್ಕೆ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಅರ್ಥೈಸಲಾಗುತ್ತಿದೆ. ತಾಲೂಕಿನಲ್ಲಿ ಅನುಷ್ಠಾನವಾದ ುದ್ಯೋಗ ಖಾತ್ರಿಯ ಭ್ರಷ್ಟಾಚಾರವನ್ನು ಪತ್ರಕೆ ಬಯಲಿಗೆಳೆಯುತ್ತಿದ್ದಂತೆ ಸಮಗ್ರ ಮಾಹಿತಿ ಸಂಗ್ರಹಿಸಿ ವಿಧಾನ ಸೌಧದಲ್ಲಿ ಧರಣಿ ಕೂರುವ ಮೂಲಕ ಹೋರಾಟ ಆರಂಭಿಸಿದ ಮಾಜಿ ಶಾಸಕ ಎ ಟಿ ರಾಮಸ್ವಾಮಿ ತಾಲೂಕಿನಾದ್ಯಂತ ಸಂಚರಿಸಿ ಉದ್ಯೋಗ ಖಾತ್ರಿ ಭ್ರಷ್ಟಾಚಾರದ ತೀವ್ರತೆಯನ್ನು ತಿಳಿಸುತ್ತಿದ್ದಾರೆ. ಆರಂಭದಲ್ಲಿ ಖಾತ್ರಿ ಭ್ರಷ್ಟಾಚಾರದ ವಿರುದ್ದ ಜಿಲ್ಲಾ ಮಟ್ಟದಲ್ಲಿ  ಧ್ವನಿಯೆತ್ತಿದ  ಮಾಜಿ ಸಚಿವ ಬಿ ಶಿವರಾಂ ಈಗ ಮುಗುಮ್ಮಾಗಿರುವುದೇಕೋ ತಿಳಿಯುತ್ತಿಲ್ಲ. ತಾಲೂಕಿನಲ್ಲಿ ನಡೆದಿರುವ ಖಾತ್ರಿ ಭ್ರಷ್ಟಾಚಾರದಿಂದ ಯೋಜನೆಯಡಿ ನೈಜವಾಗಿ ಕಾರ್ಯ ನಿರ್ವಹಿಸಿದ ಸಾವಿರಾರು ಮಂದಿ ಕೂಲಿಕಾರರು 10ತಿಂಗಳಿನಿಂದ ಕೂಲಿ ಸಿಗದೇ ಪರಿತಪಿಸುತ್ತಿದ್ದಾರೆ. ಎರಡು ಮೂರು ಬಾರಿ ಪ್ರತಿಭಟನೆಯನ್ನು ಮಾಡಿದ್ದಾರೆ ಆದರೆ ಪ್ರಯೋಜನವಾಗಿಲ್ಲ. ಮಾಡಿದ ತಪ್ಪನ್ನು ಮುಚ್ಚಿ ಹಾಕುವ ಸಲುವಾಗಿ ಅನೇಕ ದಾಖಲೆಗಳನ್ನು ಅಧಿಕಾರಿಗಳು ತಿದ್ದುಪಡಿ ಮಾಡಿ ಕೆಲವನ್ನು ನಾಶಪಡಿಸಿರುವುದರಿಂದ ಅನೇಕ ಕಾಮಗಾರಿಗಳ ದುಡ್ಡು ಬರುವುದು ಸಾಧ್ಯವೇ ಇಲ್ಲ ಎಂಬಂತಾಗಿದೆ. ಇದರಿಂದಾಗಿ ಕಂಗೆಟ್ಟು ಹೋಗಿರುವ ಅನೇಕರು ಕೂಲಿಯ ಆಸೆಗೆ ಎಳ್ಳು ನೀರು ಬಿಡಬೇಕಾದ ಪರಿಸ್ತಿತಿ ಒದಗಿದೆ. ಈಗಾಗಲೆ ಖಾತ್ರಿ ಅಕ್ರಮದ ಹಿನ್ನೆಲೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ. ನ ಸ.ಕಾ.ಇಂ ಮತ್ತು ಕಿ.ಇಂ. ಅಮಾನತ್ತಾಗಿದ್ದು ಇನ್ನು 6ಮಂದಿ ಕಿ.ಇಂ. ನಿಗಳು ಮತ್ತು ಗ್ರಾ.ಪಂ. ನ 29ಕಾರ್ಯದರ್ಶಿಗಳ ವಿರುದ್ದ ಶಿಸ್ತು ಕ್ರಮವಾಗಬೇಕಿದೆ. ಆದರೆ ಜಿಲ್ಲೆಯ ಹಿರಿಯ ಅಧಿಕಾರಿಗಳೂ ಹಾವು ಏಣಿ ಆಟ ಆಡಿಸುತ್ತಾ ಹುಲಿ ಬಂತು ಹುಲಿ ಎಂಬಂತೆ ನಡೆದು ಕೊಳ್ಳುತ್ತಿರುವುದರಿಂದ ಜಿ.ಪಂ. ನಲ್ಲಿ ಕಿ.ಇಂ. ಗಳು ಮತ್ತು ಗ್ರಾ.ಪಂ. ನಲ್ಲಿ ಕಾರ್ಯದರ್ಶಿಗಳು ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಸ್ಥಳೀಯ ಆಡಳಿತ ವ್ಯವಸ್ಥೆ ಕುಸಿದಿದ್ದು ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಒಂದು ಮೂಲದ ಪ್ರಕಾರ ತಪ್ಪಿತ್ಸ್ಥರನ್ನು ರಕ್ಷಿಸುವ ಭರವಸೆ ನೀಡುತ್ತಿರುವ ಜಿ.ಪಂ. ನ ಹಿರಿಯ ಅಧಿಕಾರಿಗಳು ದೂರು ವಾಪಾಸ್ ಪಡೆಯುವಂತೆ ದೂರುದಾರರ ಮನವೊಲಿಸಲು ಒತ್ತಡ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ. ಒಟ್ಟಾರೆ ಈ ಪ್ರಕರಣ ನಡೆಯಲು ಈ ಹಿಂದೆ ಜಿ.ಪಂ. ಉಪಕಾರ್ಯದರ್ಶಿಯಾಗಿದ್ದ ಬಾಲಕೃಷ್ಣ ಎಂಬಾತನೇ ಕಾರಣಕರ್ತನಾಗಿದ್ದು ನಾವು ಈಗ ನೋವು ಅನುಭವಿಸುವಂತಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ಹೇಳುತ್ತಾರೆ. ಅಷ್ಟೇ ಅಲ್ಲ ಈ ಹಗರಣದ ಲಾಭ ಪಡೆಯಲು  ಅಧಿಕಾರಿಗಳು  ಹವಣಿಸುತ್ತಿದ್ದಾರೆ. ಜಿಲ್ಲೆಗೆ ಇಂದು ಭೇಟಿ ನೀಡಲಿರುವ ಮುಖ್ಯ ಮಂತ್ರಿ ಯಡಿಯೂರಪ್ಪ ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ನಿರ್ಧಾರ ಪ್ರಕಟಿಸುವುದನ್ನು ಜನತೆ ಎದುರು ನೋಡುತ್ತಿದ್ದಾರೆ. ತಪ್ಪಿದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರಕ್ಕೆ ನೊಂದ ಜನರ ಶಾಪ ತಟ್ಟದಿರದು.

ಮಂಗಳವಾರ, ನವೆಂಬರ್ 9, 2010

ಉದ್ಯೋಗ 'ಖತ್ರಿ' ಅಕ್ರಮ ಕ್ರಿಮಿನಲ್ ಕೇಸು ದಾಖಲಿಸಲು ಜಿ.ಪಂ. ಸಿಇಓ ಮೀನಾಮೇಷ!


  • ಅರಕಲಗೂಡು ಜಯಕುಮಾರ್
ದೇಶದಲ್ಲಿನ ಗ್ರಾಮೀಣ ಪ್ರದೇಶದ  ಬಡವರಿಗೆ ತುತ್ತಿನ ಚೀಲ ತುಂಬಿಸುವ, ದುಡಿಯಲು ಕೆಲಸ ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹಲವು ದಶಕಗಳಿಂದಲೂ ಮಾಡುತ್ತಲೇ ಬಂದಿದೆ. ಆದರೆ ಯೋಜನೆಗಳ ಅನುಷ್ಠಾನದ ಹಂತದಲ್ಲಿ ನಡೆಯುವ ಭ್ರಷ್ಟಾಚಾರ ಯೋಜನೆಗಳ ಗುರಿಯನ್ನು ಮಸುಕಾಗಿಸುತ್ತದೆ. ಸರ್ಕಾರ ಜಾಣ ಕುರುಡು ಪ್ರದರ್ಶಿಸಿ ಮತ್ತೆ ಮತ್ತೆ ಅಂತಹುದೇ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ ಅದು ರಾಜಕಾರಣಿಗಳು ಮತ್ತು ಆಢಳಿತಶಾಹಿಗಳ ಹಿತ ಕಾಪಾಡಲು ಎಂದರೆ ತಪ್ಪಾಗಲಾರದೇನೋ. ಇದಕ್ಕೆ ಸಧ್ಯದ ಜ್ವಲಂತ ನಿದರ್ಶನವೆಂದರೆ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ'.ಸದರಿ ಯೋಜನೆ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ಬದಲಿಗೆ ಅಧಿಕಾರಶಾಹಿಗಳಿಗೆ ಮತ್ತು ಗುತ್ತಿಗೆದಾರರಿಗೆ ಹಣ ದೋಚುವ 'ಅಕ್ಷಯ ಪಾತ್ರೆ'ಯಾಗಿದ್ದು ಈಗ ಇತಿಹಾಸ!
     ಕಳೆದ 10ತಿಂಗಳ ಹಿಂದೆಯೇ ಪತ್ರಿಕೆ ಉದ್ಯೋಗ ಖಾತ್ರಿಯ ಅಕ್ರಮಗಳನ್ನು ದಾಖಲೆಗಳ ಸಮೇತ 'ುದ್ಯೋಗ ಖಾತ್ರಿಯಲ್ಲಿ ದುಡ್ಡೇ ದುಡ್ಡು:ತಿನ್ನದವನೇ ಪರಮ ಪಾಪಿ' ಹಾಗೂ 'ಹುಚ್ಚುಮುಂಡೆ ಮದ್ವೇಲಿ ಉಂಡೋನೆ ಜಾಣ:ುದ್ಯೋಗ ಖಾತ್ರಿ ಜಾತ್ರೆ' ಶೀರ್ಷಿಕೆಯಲ್ಲಿ ಬಯಲಿಗೆಳೆಯಲಾಗಿತ್ತು. ಆದರೆ ಯೋಜನೆಯಲ್ಲಿ ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದ ದುಷ್ಟ ಹಿತಾಸಕ್ತಿಗಳು ಜನವರಿ 29ರಂದು ಪತ್ರಿಕಾ ವರದಿಯ ವಿರುದ್ದ ಸಾರ್ವಜನಿಕ ಪ್ರತಿಭಟನೆ ನಡೆಸಿದ್ದವು. ಆದರೆ ಪತ್ರಿಕೆಯು ಅಂದು ಬರೆದ ಪ್ರತೀ ಅಕ್ಷರವೂ ಸತ್ಯಕ್ಕೆ ಹತ್ತಿರವಾಗಿದ್ದು ಹಾಸನ ಜಿ.ಪಂ. ಸಿಇಓ ಅಂಜನಕುಮಾರ್ ಸ್ವತ: ಸರ್ಕಾರಕ್ಕೆ ಬರೆದಿರುವ ರಹಸ್ಯ ಪತ್ರದಲ್ಲಿ ಉದ್ಯೋಗ ಖಾತ್ರಿಯಲ್ಲಿ ಆಗಿರುವ ಭ್ರಷ್ಟಾಚಾರ ಹಾಗೂ ಅಕ್ರಮಗಳು ನಿಜವೆಂದು ದಾಖಲಿಸಿದ್ದು ಮದ್ಯಂತರ ವರದಿಯನುಸಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿ ಸೆ.4ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ವರದಿಯನ್ನು ಆಧರಿಸಿ ಅಕ್ಟೋಬರ್ 10ರಂದು ಸಚಿವಾಲಯದಿಂದ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ ರವಿಕುಮಾರ್, ಜಿ.ಪಂ ಸಿಇಓ ಗೆ ತುರ್ತು ಆದೇಶ ಲಿಖಿತ ಪತ್ರ ರವಾನಿಸಿದ್ದು ಲಭ್ಯವಿರುವ ದಾಖಲೆಗಳನ್ನು ಆಧರಿಸಿ ತಕ್ಷಣವೇ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲು ಸೂಚಿಸಿದ್ದಾರೆ. ಸದರಿ ಮದ್ಯಂತರ ವರದಿ ಹಾಗೂ ಸಾಮಾಜಿಕ ವರದಿಯನ್ನು ಪರಿಶೀಲಿಸಿದಾಗ ರಾಮನಾಥಪುರ, ಹುಲಿಕಲ್, ಹಂಡ್ರಂಗಿ, ದೊಡ್ಡಮಗ್ಗೆ, ಕತ್ತಿಮಲ್ಲೇನಹಳ್ಳಿ, ಮಲ್ಲಿಪಟ್ಟಣ, ಬೈಚನಹಳ್ಳಿ, ವಿಜಾಪುರ ಅರಣ್ಯ, ಯಲಗತವಳ್ಳಿ, ಸಂತೆಮರೂರು, ದೊಡ್ಡಬೆಮ್ಮತ್ತಿ, ಹೊನ್ನವಳ್ಳಿ, ಗಂಜಲಗೋಡು,ಹೊಳಲಗೋಡು, ಚಿಕ್ಕಹಳ್ಳಿ, ಲಕ್ಕೂರು, ವಡ್ಡರಹಳ್ಳಿ ಮತ್ತು ಹೆಬ್ಬಾಲೆ ಗ್ರಾಮ ಪಂಚಾಯಿತಿಗಳಲ್ಲಿ ತೀವ್ರ ಲೋಪವಾಗಿದೆಯೆಂದು ತಿಳಿಸಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸದರಿ ತಪ್ಪಿತಸ್ಥರ ವಿರುದ್ದ ದುರುಪಯೋಗವಾಗಿರುವ ಮೊತ್ತವನ್ನು ವಸೂಲಿ ಮಾಡಲು ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲು ಮತ್ತು ಅವಶ್ಯಕ ಕ್ರಮ ಜರುಗಿಸಲು ಸದರಿ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಶಿಸ್ತುಕ್ರಮಕ್ಕೆ ಸೂಚಿಸಿರುವ ಪತ್ರ ಬಂದು ಇಂದಿಗೆ ಒಂದು ತಿಂಗಳು ಕಳೆದಿದೆ ಆದರೆ ಹಾಸನ ಜಿ.ಪಂ ಸಿಇ ಓ ಅಂಜನಕುಮಾರ್ ಮರುಪರಿಶೀಲನೆಗೆ ಸ್ಥಳೀಯ ಅಧಿಕಾರಿಗಳನ್ನು ಅದರಲ್ಲೂ ಮುಖ್ಯವಾಗಿ ಅಕ್ರಮದಲ್ಲಿ ಸಂಪೂರ್ಣವಾಗಿ ಪಾಲುದಾರರಾದ ಜಿ.ಪಂ. ಇಂಜಿನಿಯರುಗಳು ಮತ್ತು ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿದ್ದಾರೆ. ಈ ತಂಡ ಪ್ರತೀ ಗ್ರಾಮ ಪಂಚಾಯ್ತಿಗಳಿಗೆ ತೆರಳಿ ಉದ್ಯೋಗ ಖಾತ್ರಿಯ ಅಕ್ರಮಗಳನ್ನು ಪರಿಶೀಲಿಸುದಂತೆ! ಕಳೆದವಾರ ತಾಲೂಕಿಗೆ ತರಾತುರಿಯಲ್ಲಿ ಭೇಟಿ ನೀಡಿ ಸಿಎಂ ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 10ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅಷ್ಟೇ ಅಲ್ಲ ತಪ್ಪಿ ತಸ್ಥ ಅಧಿಕಾರಿಗಳು, ಮುಖ್ಯವಾಗಿ ಜಿ.ಪಂ. ಇಂಜಿನಿಯರುಗಳು ಮತ್ತು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಿ ಕ್ರಿಮಿನಲ್ ಕೇಸು ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಈ ನಿಲುವಿನ ಹಿಂದೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಂಜನ್ ಕುಮಾರ್ ಏನು ಹುನ್ನಾರ ನಡೆಸಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಷ್ಟಕ್ಕೂ ತಾನೇ ಅಕ್ರಮಗಳ ಕುರಿತು ಸರ್ಕಾರಕ್ಕೆ ರಹಸ್ಯ ವರದಿ ನೀಡಿದ್ದು ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಎಂಬ ಪ್ರಶ್ನೆಯ ಬೆನ್ನಲ್ಲೇ ಸಿಇಓ ಪರೋಕ್ಷವಾಗಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆಸಿದ್ದಾರೆಂಬ ಅನುಮಾನವೂ ಇದೆ. ಸಿಇಓ ಅಂಜನಕುಮಾರ್ ಬರೆದ ರಹಸ್ಯ ಪತ್ರದಲ್ಲಿ ಏನಿದೆ?(ಮುಂದುವರೆಯುವುದು)

ಗುರುವಾರ, ನವೆಂಬರ್ 4, 2010

ಅಕ್ರಮ ಮರಳುಗಾರಿಕೆಗೆ ಕಡಿವಾಣ ಬೀಳದಿದ್ದರೆ ಪ್ರತಿಭಟನೆ:ಶಾಸಕ ಎ. ಮಂಜು

"ಮಾಮೂಲಿ ಎಷ್ಟು ವಸೂಲಿ ಮಾಡ್ತಿದೀರಾ? ಬಡ್ಡಿ ಮಕ್ಕಳಾ ದುಡ್ಡು ಮಾಡ್ಕೊಂಡು ಸುಮ್ನಿರ್ತೀರಾ?ಜನ ಬಯ್ಯೋದು ನಮ್ಗೆ", ಎಷ್ಟು ಫಿಕ್ಸ್ ಮಾಡ್ಕಂಡಿದೀರಾ ಗಾಡಿಗೆ? ಹೀಗೆ ಮುಂದುವರೆದರೆ ಲೋಕಾಯುಕ್ತರಿಗೆ ನಾನೇ ದೂರು ಕೊಡ್ತೀನಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾರಿಗೆ ಅಧಿಕಾರಿಗಳಿಗೆ ಎಚ್ಚರಿಸಿದ್ದು ಶಾಸಕ ಎ. ಮಂಜು.
 ತಾಲ್ಲೂಕಿನಾಧ್ಯಂತ ಅವ್ಯಾಹತವಾಗಿ ನಡೆಯುತ್ತಿರುವ  ಮರಳುದಂಧೆಯಿಂದ ತಾಲ್ಲೂಕಿನ ಪ್ರಮುಖ ರಸ್ತೆಗಳೆಲ್ಲ ಸಂಪೂರ್ಣವಾಗಿ ಹಾಳಾಗಿದ್ದು ರಾಮನಾಥಪುರ ಸೇತುವೆ ಕುಸಿದು ಬಿದ್ದಿದೆ ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ,ಕಂದಾಯ,ಲೋಕೋಪಯೋಗಿ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕೊಣನೂರಿನಲ್ಲಿ ನಡೆಸಿದ ಶಾಸಕ ಎ. ಮಂಜು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಹರೀಶ ಎಂಬಾತನಿಗೆ ಚುರುಕು ಮುಟ್ಟಿಸಿದ ಶಾಸಕ ಮಂಜು ಇದಕ್ಕೆಲ್ಲಾ ತಡೆಬೀಳಬೇಕು ಎಂದು ತಾಕೀತು ಮಾಡಿದರು. ಆರ್ ಟಿ ಓ ಅಧಿಕಾರಿಗಳಿಗೆ ತಾಲೂಕಿನಲ್ಲಿ ಎಷ್ಟು ಕಡೆ ಮರಳು ತೆಗೆಯಲು ಟೆಂಡರು ಆಗಿದೆಯೆಂಬುದೇ ತಿಳಿದಿಲ್ಲ ಈ ವಿಚಾರದಲ್ಲಿ ಅಧಿಕಾರಿಗಳಿಗೆ ಸಮನ್ವಯದ ಕೊರತೆಯಿದೆ ಇಂತಹದ್ದನ್ನೆಲ್ಲ ನಾನು ಸಹಿಸುವುದಿಲ್ಲ, ತಾಲೂಕಿನ ರಸ್ತೆಗಳಲ್ಲಿ ಅಧಿಕ ಭಾರದ ಲಾರಿಗಳು ಓಡಾಡುತ್ತಿವೆ ನಿಗದಿತ ಮಿತಿಗಿಂತ ಅಧಿಕ ಪ್ರಮಾಣದ ಮರಳನ್ನು ಸಾಗಾಣಿಕೆ ಮಾಡಲಾಗುತ್ತಿದೆ ಇದಕ್ಕೆ ತಕ್ಷಣವೇ ಕಡಿವಾಣ ಹಾಕಿ ಎಂದು ನುಡಿದ ಅವರು ಪೋಲೀಸ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿಯನ್ನು ಕುರಿತು "ಪ್ರಾಮಾಣಿಕರಂತೆ ಮಾತನಾಡ ಬೇಡಿ ನಿಮ್ಮ ಇಲಾಖೆಯ ಪೇದೆ ಪರಮೇಶ ಪ್ರತೀ ಮರಳು ಲಾರಿಯಿಂದ 300ರೂಪಾಯಿಗಳನ್ನು ವಸೂಲು ಮಾಡುತ್ತಿದ್ದಾನೆಂಬ ದೂರಿದೆ ಅದನ್ನು ತಕ್ಷಣವೇ ನಿಲ್ಲಿಸಿ ಎಂದರು. ತಾಲೂಕಿನಲ್ಲಿ ಈ ವರೆಗೆ ಕೇವಲ 15ಲಾರಿಗಳನ್ನು ಮಾತ್ರ ಹಿಡಿಯಲಾಗಿದೆ, ಪ್ರತಿ ನಿತ್ಯ ನೂರಾರು ಲಾರಿಗಳು ನಿಯಮ ಉಲ್ಲಂಘಿಸಿ ಮರಳು ಸಾಗಿಸುತ್ತಿವೆ ಇದು ಹೀಗೆ ಮುಂದುವರೆದರೆ ಲೋಕಾಯುಕ್ತರಿಗೆ ದೂರು ನೀಡಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿ ನಂತರ ಹೊರಬಂದ ವಿವಿಧ ಇಲಾಖೆಗಳ ಅಧಿಕಾರಿಗಳು ನಿಯಮ ಉಲ್ಲಂಘಿಸಿದ ಲಾರಿ ಹಿಡಿದರೆ ಜನಪ್ರತಿನಿಧಿಗಳೇ ಫೋನು ಮಾಡುತ್ತಾರೆ ನಮಗೆ ಒತ್ತಡವಿಲ್ಲದೇ ಕೆಲಸ ನಿರ್ವಹಿಸಲು ಬಿಡುತ್ತಿಲ್ಲ ಎಂದು ಪತ್ರಕರ್ತರೊಂದಿಗೆ ಅಸಮಧಾನ ಪ್ರದರ್ಶಿಸಿದರು.

ಗುರುವಾರ, ಅಕ್ಟೋಬರ್ 21, 2010

ಉದ್ಯೋಗ ಖಾತ್ರಿ ಅಕ್ರಮ ಸಾಬೀತು:18ಗ್ರಾ.ಪಂ.ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸೂಚನೆ

ಅರಕಲಗೂಡು:ತಾಲೂಕಿನ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ವ್ಯಾಪಕ ಅಕ್ರಮ ಎಸಗಿದ್ದ 18ಗ್ರಾಮಪಂಚಾಯ್ತಿ ಗಳ ಕಾರ್ಯದರ್ಶಿಗಳು ಹಾಗೂ ಮೂವರು ಅಧಿಕಾರಿಗಳ ವಿರುದ್ದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ತಕ್ಷಣವೇ ಕ್ರಿಮಿನಲ್ ಕೇಸು ದಾಖಲಿಸಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶ ನೀಡಿದ್ದಾರೆ.
ಈ ಬಗ್ಗೆ ವಾರದ ಹಿಂದೆಯೇ ಪ್ರಧಾನ ಕಾರ್ಯದರ್ಶಿಯವರು ಬರೆದಿರುವ ಪತ್ರ ಆದೇಶ ಸಂಖ್ಯೆ:ಗ್ರಾ.ಅ.ಪ.ಇ/24/ಉ.ಖಾ.ಯೋ-08, ದಿ:8-10-2010ರಲ್ಲಿ ತಾಲೂಕಿನಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಅಕ್ರಮ ದೃಢಪಟ್ಟಿದ್ದು ಈಗಾಗಲೇ ಅಮಾನತು ಗೊಂಡಿರುವ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ.ನ ಸಹಾಯಕ ಕಾರ್ಯಪಾಲಕ ಅಭಿಯಂತರ ಮತ್ತು ಕಿರಿಯ ಅಭಿಯಂತರ ಸೇರಿದಂತೆ 18ಗ್ರಾ.ಪಂ.ಗಳ ಕಾರ್ಯದರ್ಶಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚಿಸಲಾಗಿದೆ. ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಖುದ್ದು ತಾಲೂಕಿಗೆ ಆಗಮಿಸಿದ್ದ ಪ್ರಧಾನ ಕಾರ್ಯದರ್ಶಿಯವರು ಹೆಚ್ಚಿನ ತನಿಖೆಗಾಗಿ ತನಿಖಾ ತಂಡಗಳನ್ನು ರಚಿಸಿದ್ದರು. ಸದರಿ ತನಿಖಾ ತಂಡ ಮತ್ತ ಸಾಮಾಜಿಕ ಲೆಕ್ಕ ಪರಿಶೋಧನಾ ತಂಡಗಳು ತನಿಖೆ ನಡೆಸಿ ಸರ್ಕಾರಕ್ಕೆ ಸಲ್ಲಿಸಿದ್ದ ಮದ್ಯಂತರ ವರದಿ ಹಾಗೂ ಹಾಸನ ಜಿ.ಪಂ. ಮುಖ್ಯ ನಿರ್ವಾಹಕ ಅಧಿಕಾರಿ ಅಂಜನಕುಮಾರ್ ನೀಡಿದ ಮೇಲು ವರದಿಯನುಸಾರ ತಾಲೂಕಿನ ರಾಮನಾಥಪುರ, ಹುಲಿಕಲ್, ಹಂಡ್ರಂಗಿ, ದೊಡ್ಡಮಗ್ಗೆ, ಕತ್ತಿಮಲ್ಲೇನಹಳ್ಳಿ, ಮಲ್ಲಿಪಟ್ಟಣ, ಬೈಚನಹಳ್ಳಿ, ವಿಜಾಪುರ ಅರಣ್ಯ, ಯಲಗತವಳ್ಳಿ, ಸಂತೆಮರೂರು, ದೊಡ್ಡಬೆಮ್ಮತ್ತಿ, ಹೊನ್ನವಳ್ಳಿ, ಗಂಜಲಗೋಡು, ಹೊಳಲಗೋಡು, ಚಿಕ್ಕಳ್ಳಿ, ಲಕ್ಕೂರು, ವಡ್ಡರಹಳ್ಳಿ ಮತ್ತು ಹೆಬ್ಬಾಲೆ ಗ್ರಾಮ ಪಂಚಾಯ್ತಿಗಳಲ್ಲಿ ಅಕ್ರಮ ಮತ್ತು ಭ್ರಷ್ಠಾಚಾರಗಳು ಕಂಡುಬಂದಿದ್ದು ಯೋಜನಾನುಷ್ಠಾನದಲ್ಲಿ ತೀವ್ರ ಲೋಪವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಕಾರ್ಯದರ್ಶಿಗಳು ಮತ್ತು ಅಮಾನತುಗೊಂಡಿರುವ ಅಧಿಕಾರಿಗಳ ವಿರುದ್ದ ತಕ್ಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದುರುಪಯೋಗವಾಗಿರುವ ಮೊತ್ತವನ್ನು ವಸೂಲಿ ಮಾಡಿ ಅವಶ್ಯಕ ಕ್ರಮ ಜರುಗಿಸಲು ಆದೇಶದಲ್ಲಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಉಳಿದ 11ಗ್ರಾಮ ಪಂಚಾಯ್ತಿಗಳಲ್ಲಿನ ಯೋಜನಾನುಷ್ಠಾನ ಕುರಿತು ತನಿಖೆ ಪ್ರಗತಿಯಲ್ಲಿದ್ದು ಸದರಿ ಪಂಚಾಯ್ತಿ ಕಾರ್ಯದರ್ಶಿಗಳ ವಿರುದ್ದವೂ ಕ್ರಮ ಜರುಗಿಸುವ ಸಾಧ್ಯತೆ ಇದೆ. ಅಕ್ರಮದಲ್ಲಿ ಹಣ ಬಿಡುಗಡೆ ಮಾಡಲು ಕಾರ್ಯದರ್ಶಿಗಳ ಜೊತೆ ಜಂಟಿ ಖಾತೆಗೆ ಸಹಿ ಹಾಕಿರುವ ಹಿಂದಿನ ಗ್ರಾ.ಪಂ ಅಧ್ಯಕ್ಷರುಗಳ ವಿರುದ್ದವೂ ಸಹಾ ಕ್ರಮ ಜರುಗಿಸುವ ನಿರೀಕ್ಷೆಯಿದೆ.
ಅರಕಲಗೂಡು: ಕ್ಷೇತ್ರದ ಶಾಸಕ ಎ. ಮಂಜು ಕಾಂಗ್ರೆಸ್ ತೊರೆಯುವುದಿಲ್ಲ ಈ ಬಗ್ಗೆ ಬರುತ್ತಿರುವ ಸುದ್ದಿಗಳು ಸುಳ್ಳು ಎಂದು ತಾಲೂಕು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಎ. ಮಂಜು ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ ಎಂಬ ದಟ್ಟ ಸುದ್ದಿಗಳ ಹಿನ್ನೆಲೆಯಲ್ಲಿ  ಕಳವಳಕ್ಕೀಡಾದ ಸ್ಥಳೀಯ ಮುಖಂಡರಾದ ಕಬ್ಬಳಿಗೆರೆ ಬೈರೇಗೌಡ, ಬ್ಲಾಕ್ ಕಾಂಗೈ ಅಧ್ಯಕ್ಷ ಕೀರ್ತಿರಾಜು ಮತ್ತಿತರರು ದಿಡೀರ್ ಪತ್ರಿಕಾ ಗೋಷ್ಠಿ ನಡೆಸಿದರು. ಶಾಸಕ ಮಂಜು ಜೊತೆ ಕಾಂಗ್ರೆಸ್ ಪಕ್ಷದ ಮಖಂಡರುಗಳು ನಿರಂತರ ಸಂಪರ್ಕದಲ್ಲಿದ್ದು ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಮಾದ್ಯಮಗಳಲ್ಲಿ ಬರುತ್ತಿರುವ ಸುದ್ದಿ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಅವರು ಹೇಳಿದ್ದಾರೆಂದು ಪಕ್ಷದ ಅಧ್ಯಕ್ಷ ಕೀರ್ತಿರಾಜ್ ಸ್ಪಷ್ಠಪಡಿಸಿದರು. ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್  ಸಾರಿರುವ ಸಮರದಲ್ಲಿ ಮಂಚೂಣಿಯಲ್ಲಿರುವ ನಮ್ಮ ನಾಯಕ ಮಂಜು ವಿರುದ್ದ ಆಗದವರು ಗಾಳಿ ಸುದ್ದಿ ಹಬ್ಬಿಸಿದ್ದಾರೆ, ಕಾರ್ಯಕರ್ತರಲ್ಲಿ ಶಂಕೆ ಹುಟ್ಟುವಂತೆ ಮಾಡಿದ್ದಾರೆ ಆದರೆ ಇದನ್ನೆಲ್ಲಾ ನಂಬಬಾರದೆಂದು ಅವರು ಮನವಿ ಮಾಡಿದರು. ಕಬ್ಬಳಿಗೆರೆ ಬೈರೇಗೌಡ ಮಾತನಾಡಿ ರೆಸಾರ್ಟ್ ರಾಜಕೀಯ ಬಿಜೆಪಿಯಿಂದ ಆರಂಭವಾಗಿದೆ, ಎ. ಮಂಜು ಪಕ್ಷ ತೊರೆಯುತ್ತೇನೆಂದು ಎಲ್ಲಿಯೂ ಹೇಳಿಲ್ಲ ಪಕ್ಷಕ್ಕೆ ಸೆಳೆಯುವ ದುರುದ್ದೇಶದಿಂದ ಬಿಜೆಪಿ ಕುತಂತ್ರ ನಡೆಸಿದೆ ಎಂದು ಕಿಡಿಕಾರಿದ ಅವರು ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರ ಅತೀಭ್ರಷ್ಠ ಹಾಗೂ ಅತೀ ಕೆಟ್ಟ ಸರ್ಕಾರ ಇದನ್ನು ತೊಲಗಿಸುವುದೇ ನಮ್ಮ ಗುರಿಯಾಗಿದೆ ಆದ್ದರಿಂದ ಶಾಸಕ ಮಂಜು ನೇತೃತ್ವದಲ್ಲಿ ಇದೇ. ಅ.23ರಂದು ಸಾರ್ವಜನಿಕವಾಗಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಯುವ ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ ಬಿಜೆಪಿ ಪಕ್ಷ ಮುಳುಗುತ್ತಿರುವ ಹಡಗು ಅಲ್ಲಿಗೆ ಎ. ಮಂಜು ಹೋಗಲು ಸಾಧ್ಯವಿಲ್ಲ ಆರಂಭದಲ್ಲೇ ಬಿಜೆಪಿ ಆಮಿಷವೊಡ್ಡಿ ಸೆಳೆಯಲು ಯತ್ನಿಸಿತ್ತು ಆದರೆ ಮಂಜು ಆಮಿಷಕ್ಕೆ ಬಲಿಯಾಗಲಿಲ್ಲ ಮುಂದಿನ ದಿನಗಳಲ್ಲೂ ಇದಕ್ಕೆಲ್ಲ ಸೊಪ್ಪುಹಾಕುವುದಿಲ್ಲ ಎಂದರು. ಗೋಷ್ಠಿಯಲ್ಲಿ ಮುಖಂಡರಾದ ಚೌಡೇಗೌಡ,ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಮೇಶ್ ಮುತ್ತಿಗೆ,ಯುವ ಕಾಂಗೈ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಅನ್ಸರ್ ಪಾಶ ಹಾಜರಿದ್ದರು

ಬುಧವಾರ, ಅಕ್ಟೋಬರ್ 20, 2010

ಕೋಟಿ ಬಹುಮಾನದ ಆಮಿಷಕ್ಕೆ ಮರುಳಾಗದಿರಿ..


  • ಅರಕಲಗೂಡು ಜಯಕುಮಾರ್

TO REDEEM YOUR PRIZE IS FREE OF CHARGE!!

Your E-ID was selected online in this week''s AWARD PROMO BRITISH CANADIAN
LOTTERY BC-49 05 07 14 20 32 34 06 Your draw has a total value of
$1,000,000.00 USD
And your Winning No:05 07 14 20 32 34 06. Please acknowledge the receipt of
this mail 
with the details below to our claim agent.

Contact Agent: Mr.Tross Brian.
E-mail: onlinepromo_7171yahoo.com.hk

Claims Requirements


ಹೀಗೊಂದು ಈ ಮೇಲ್ ಅಥವಾ ಮೊಬೈಲ್ ಎಸ್ ಎಂ ಎಸ್ ನಿಮಗೂ ಬಂದಿರಬಹುದು. ಜೋಕೆ ಇಂಥಹದ್ದಕ್ಕೆಲ್ಲ ಮರುಳಾಗಿ ನಿಮ್ಮ ಸಂಪೂರ್ಣ ಮಾಹಿತಿ ನೀಡಿ ಒಮ್ಮೆ ಸಂಪರ್ಕಿಸಿದಿರೋ ನಿಮ್ಮನ್ನು ಪೂರಾ ಸುಲಿದು ಬಿಡಲು ಅಪರಾಧಿಗಳು ಸಜ್ಜಾಗಿರುತ್ತಾರೆ. ಕಳೆದ ಒಂದೆರೆಡು ವರ್ಷಗಳಿಂದಲೂ ಇಂಥಹದ್ದೊಂದು ದಂಧೆ ಜಾಗೃತಾವಸ್ಥೆಯಲ್ಲಿದೆ. ಅಂತರ್ಜಾಲದಲ್ಲಿ ಜಾಹಿರಾತು ಆಕರ್ಷಣೆಗಳು ಬೇಡವೆಂದರೂ ನಾನಾ ನಮೂನೆಯ ಮೇಲ್ ಗಳು ಮೊಬೈಲ್ ಗೆ ಎಸ್ ಎಂ ಎಸ್ ಗಳು ಬರುವುದು ಸಹಜ. ಅದೊಮ್ಮೆ ನನ್ನ ಮೇಲ್ ಗೆ ಪದೇ ಪದೇ ಬಂದು ಬೀಳುತ್ತಿದ್ದ ಅಪರಿಚಿತ ಆಗಂತುಕನ ಮೇಲ್ ಅನ್ನು ಕುತೂಹಲದಿಂದ ತೆರೆದು ನೋಡಿದೆ. ''ನಾನು ಉಗಾಂಡ ದೇಶದ ರಾಜಮನೆತನದ ಗಣ್ಯ ವ್ಯಕ್ತಿ, ಅಲ್ಲಿನ ಆಂತರಿಕ ಕಲಹಗಳಿಂದ ದೇಶಾಂತರ ಬಂದಿದ್ದೇನೆ. ರಾಯಭಾರ ಕಛೇರಿಯಲ್ಲಿ ನಿಮ್ಮ ಈ ಮೇಲ್ ವಿಳಾಸ ತಿಳಿಯಿತು, ದೇಶ ಬಿಟ್ಟು ಬರುವಾಗ ಅಪಾರ ಮೊತ್ತದ ಹಣವನ್ನು ತಂದಿದ್ದೇನೆ. ನಿಮ್ಮಲ್ಲಿ ವಿಶ್ವಾಸವಿಟ್ಟು ಯಾವುದಾದರೂ ವ್ಯವಹಾರದಲ್ಲಿ ನಿಮ್ಮ ಹೆಸರಿನಲ್ಲಿ ಹಣ ಹೂಡುವವನಿದ್ದೇನೆ. ಬಂದ ಲಾಭಾಂಶದಲ್ಲಿ ಅರ್ಧಕ್ಕರ್ಧ ಹಂಚಿಕೊಳ್ಳೋಣ ಈ ವಿಚಾರ ನಮ್ಮ ನಡುವೆ ಮಾತ್ರ ಇರಲಿ ಸಧ್ಯಕ್ಕೆ ನಿಮ್ಮ ವ್ಯಕ್ತಿ ವಿವರವನ್ನು ಕಳುಹಿಸಿ ಎಂದಿತ್ತು. ಪರವಾಗಿಲ್ವೇ ಮನೆ ಬಾಗಿಲಿಗೆ ಅದೃಷ್ಠ ಒದ್ಕೊಂಡು ಬಂದಿದೆ ಅಂತ ವಿವರ ಕಳುಹಿಸಿದರೆ ನನ್ನಲ್ಲಿರುವ ದಶಲಕ್ಷ ಹಣವನ್ನು ನಿಮ್ಮ ಅಕೌಂಟಿಗೆ ಹಾಕಬೇಕು ನಿಮ್ಮ ಬ್ಯಾಂಕ್ ಖಾತೆ ನಂಬರು ಕಳುಹಿಸಿ ಎಂಬ ಪತ್ರ ಬಂತು, ಆತನ ಮನವಿಯಂತೆ ಅಕೌಂಟ್ ನಂಬರು ಕಳುಹಿಸಿದರೆ ಹಣವನ್ನು ನನ್ನ ಖಾತೆಗೆ ವರ್ಗಾಯಿಸಲು ಇಂತಿಷ್ಟು ವಿನಿಮಯ ಹಣ ಕಟ್ಟಿ ಎಂದು ಆತನ ಬ್ಯಾಂಕ್ ಖಾತೆ ನಂಬರು ಬಂತು, ಅಲ್ಲಿಗೆ ಇದು ಟೋಪಿ ಸ್ಕೀಮು ಅಂತ ಖಾತ್ರಿ ಆಯ್ತು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದೆ. ಆದರೆ ನಿಮ್ಮ ಮೊಬೈಲು ನಂಬರನ್ನು ಲಕ್ಕಿ ಡ್ರಾದಲ್ಲಿ 250ಲಕ್ಷ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಅಭಿನಂದನೆಗಳು ನಿಮ್ಮ ವಿವರ ಕಳುಹಿಸಿ ಎಂದು ಲಕ್ಷಾಂತರ ಮಂದಿಗೆ ಇಂದಿಗೂ ಮೆಸೆಜುಗಳು ಬರುತ್ತಲೇ ಇವೆ ಆದರೆ ಅಮಾಯಕ ಜನ ಇಂಟರ್ ನೆಟ್ ಪಾರ್ಲರ್ ಗಳಿಗೆ ತೆರಳಿ ಮಾಹಿತಿ ನೀಡುವುದು, ಪದೇ ಪದೇ ಪತ್ರ ವ್ಯವಹಾರ ಮಾಡುವುದು, ಬ್ಯಾಂಕ್ ಗಳಲ್ಲಿ ಹಣ ಜಮಾವಣೆ ಮಾಡುವುದು ಇಂದಿಗೂ ನಡೆದಿದೆ. ಹಾಸನ ಜಿಲ್ಲೆಯಲ್ಲಿ ಅನೇಕ ಮಂದಿ ಇಂಥ ಮೋಸದ ಬಹುಮಾನಗಳಿಗೆ ಬಲಿಯಾಗಿದ್ದಾರೆ. ದುಡ್ಡು ಕಳೆದುಕೊಂಡ ಎಷ್ಟೋ ಮಂದಿ ಮೋಸ ಹೋದದ್ದನ್ನು ಹೇಳಿಕೊಳ್ಳಲಾಗದೇ ಸಂಕಟಪಡುತ್ತಿದ್ದಾರೆ. ಜನರನ್ನು ಸುಲಭ ರೀತಿಯಲ್ಲಿ ಆಕರ್ಷಿಸುವ ಸಲುವಾಗಿ ವಿವಿಧ ನಮೂನೆಯ ಕಟ್ಟುಕಥೆಗಳನ್ನು ಹೆಣೆಯುವ ಮಂದಿ ದೆಹಲಿ,ಮುಂಬೈ ಇಲ್ಲವೇ ಕೊಲ್ಲಿ ರಾಷ್ಟ್ರಗಳನ್ನು ಕಾರಾಸ್ಥಾನವಾಗಿ ಮಾಡಿಕೊಂಡು ಟೋಪಿ ಹಾಕುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರ ಮಾತನ್ನು ನಂಬಿ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಮುಗಿಯಿತು ಅದು ಮತ್ತೆ ಸಂಪರ್ಕಕ್ಕೆ ಸಿಗುವುದಿಲ್ಲ ಆದರೆ ಸದರಿ ಕ್ರಿಮಿನಲ್ ಗಳು ಸುಲಭವಾಗಿ ಮೋಬೈಲ್ ನಲ್ಲಿ ಸಿಕ್ಕುತ್ತಾರೆ.ಅಮೇರಿಕನ್ ಆಕ್ಸೆಂಟ್ ನಲ್ಲಿ ಮಾತನಾಡುತ್ತಾರೆ ನಂಬಿಕೆ ಬರುವ ರೀತಿ ವ್ಯವಹರಿಸುತ್ತಾರೆ. ಇನ್ನೇನು ಮುಂದಿನ ವಾರ ಕೋಟಿ ರೂಪಾಯಿಗಳ ಬಹುಮಾನದ ಮೊತ್ತ ಬಂದೆ ಬಿಡುತ್ತೆ ಎಂಬಷ್ಟರ ಮಟ್ಟಿಗೆ ಅವರು ಆಮಿಷ ಒಡ್ಡುತ್ತಾರೆ.ಕೆಲವು ಸ್ಥಳೀಯರೊಂದಿಗೆ ಸೇರಿ ವಿದೇಶಿ ಕ್ರಿಮಿನಲ್ ಗಳು ಇಂಥಹ ದಂಧೆಗೆ ಇಳಿದಿದ್ದಾರೆ. ಈ ಬಗ್ಗೆ ಆಗಾಗ್ಯೆ ಸೈಬರ್ ಠಾಣೆಗಳಲ್ಲಿ ದೂರು ದಾಖಲಾಗುತ್ತಿದೆ ಆದರೆ ಅಪರಾಧಿಗಳು ಸಿಕ್ಕಿರುವ ಪ್ರಕರಣಗಳು ಅತ್ಯಂತ ಕಡಿಮೆ. ಹೆಸರು ಹೇಳಲು ಇಚ್ಚಿಸದ ಪತ್ರಿಕೆಯ ಓದುಗರೊಬ್ಬರು ಇಂತಹ ವಂಚನೆಗೆ ಬಲಿಯಾಗಿದ್ದಾರೆ. ಬಹುಮಾನದ ಆಸೆಗೆ ಅತ್ತ ಕಡೆಯಿಂದ ಹೇಳಿದಷ್ಟು ದುಡ್ಡನ್ನು ಹಂತ ಹಂತವಾಗಿ ಅನಾಮತ್ತು 2ಲಕ್ಷರೂ ವರೆಗೆ ಕಟ್ಟಿದ್ದಾರೆ. ಇದಾಗಿ 7-8ತಿಂಗಳ ನಂತರವೂ ವಂಚಕ ಅವರ ಮೋಬೈಲಿಗೆ ವಂಚಕ ದಹಲಿಯಿಂದ ಫೋನಾಯಿಸುತ್ತಿದ್ದಾನೆ. ಬಹುಮಾನದ ಮೊತ್ತವನ್ನು ಪಾವತಿಸಲು ಅಂತಿಮವಾಗಿ ಇನ್ನೂ ಹೆಚ್ಚುವರಿ 20ಸಾವಿರ ಕಟ್ಟಿ ಅನ್ನುತ್ತಿದ್ದಾನೆ. ಆತನನ್ನು ಹುಡುಕಿಕೊಂಡು ಒಂದೆರೆಡುಬಾರಿ ದೆಹಲಿಗೆ ಹೋಗಿ ಬಂದದ್ದಾಗಿದೆ ಆದರ ಆತ ಕಣ್ಣಾಮುಚ್ಚಾಲೆ ಆಟ ಆಡುತ್ತಾ ತಪ್ಪಿಸಿಕೊಂಡಿದ್ದಾನೆ ನಂಬುವಂತಹ ಸಬೂಬು ಹೇಳಿದ್ದಾನೆ. ವಂಚನೆಗೊಳಗಾದ ಓದುಗ ತನಗಾದ ವಂಚನೆಯಿಂದ ಪರಿತಪಿಸುತ್ತಿದ್ದಾನೆ. ಇದೇ ರೀತಿ ಬಹುಮಾನದ ಆಸೆಗೆ ಬಿದ್ದ ಹಲವು ಮಂದಿ ಇಂದಿಗೂ ಇಂತ ಮೆಸೇಜುಗಳಿಗೆ ಬಲಿ ಬೀಳುತ್ತಿದ್ದಾರೆ. ಈ ಪೈಕಿ ಸರ್ಕಾರಿ ನೌಕರರು, ವ್ಯವಹಾರಸ್ಥರು, ವಿದ್ಯಾರ್ಥಿಗಳು ಇದ್ದಾರೆ. ಅಷ್ಟೆ ಏಕೆ ಜಿಲ್ಲೆಯ ಕೆಲವು ಪೋಲೀಸರು ಮತ್ತಿ ಎಸ್ ಐ ಗಳು ಕೂಡ ಇಂತ ಆಮಿಷಕ್ಕೆ ತುತ್ತಾಗಿ ಪಿಗ್ಗಿ ಬಿದ್ದಿದ್ದಾರೆ. ಸುಲಭ ಮಾರ್ಗದಲ್ಲಿ ದುಡ್ಡು ಸಿಗುತ್ತದೆ ಎಂದರೆ ಯಾರಿಗಾದರೂ ಆಸೆ ಸಹಜವೇ ಆದರೆ ಅದನ್ನು ಪರಿಗ್ರಹಿಸಿ ನೋಡುವ ಗುಣ ಬೆಳೆಯಬೇಕಿದೆ. ಆಧುನಿಕ ಜಗತ್ತಿನಲ್ಲಿ ವಂಚನೆಗೆ ನೂರು ದಾರಿಗಳಿವೆ ಬಣ್ಣ ಬಣ್ಣದ ಆಕರ್ಷಣೆ ಒಡ್ಡಿ ವಂಚಿಸುವ ಮೋಸಗಾರರಿದ್ದಾರೆ ಆದರೆ ನಾಗರೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.   

ಸೋಮವಾರ, ಅಕ್ಟೋಬರ್ 18, 2010

ರಾಗಿ,ಅವರೇಕಾಯಿಗೆ ಹಸಿರು ಹುಳು ಕಾಟ!

ಅರಕಲಗೂಡು: ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆದ ರೈತ ನಿರೀಕ್ಷಿಸಿದ ಫಸಲು ಬರದೇ ಕಂಗೆಟ್ಟು ಹೋಗಿರುವಾಗಲೇ ಪ್ರಮುಖ ಆಹಾರ ಬೆಳೆಯಾದ ರಾಗಿ ಬೆಳೆಗೆ ಹಸಿರು ಹುಳುವಿನ ಕಾಟ ಉಂಟಾಗಿದ್ದು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ತಾಲೂಕಿನ ರಾಮನಾಥಪುರ ಮತ್ತು ಕೊಣನೂರು ಹೋಬಳಿಗಳ ರಾಗಿ,ಅವರೇಕಾಳು, ತಡಣಿಕಾಳು ಬೆಳೆಗೆ ಹಸಿರು ಹುಳುವಿನ ಕಾಟ ದಟ್ಟವಾಗಿ ಹರಡಿದ್ದು 2-3ದಿನಗಳಲ್ಲೆ ಫಸಲನ್ನು ಹಾಳುಮಾಡುತ್ತಿವೆ. ತಾಲೂಕಿನಲ್ಲಿ ಮೊದಲ ಭಾರಿಗೆ ಈ ಮಾಹಿತಿ ಅನುಸರಿಸಿ ರಾಮನಾಥಪುರ ಹೋಬಳಿಯ ಮಲ್ಲಾಪುರ, ಗಂಗೂರು, ರಾಗಿಮರೂರು, ಲಕ್ಕೂರು ಮತ್ತಿತರ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿದ್ದ ಅರಕಲಗೂಡು ಪೊಟ್ಯಾಟೋ ಕ್ಲಬ್ ನ ಯೋಗಾರಮೇಶ್ ಈ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದನೆ ಮತ್ತು ಕೃಷಿ ಮಾಹಿತಿಗಾಗಿ ತಾಲೂಕಿನಲ್ಲಿ ಸ್ಥಾಪಿತವಾಗಿರುವ ಪೊಟ್ಯಾಟೋ ಕ್ಲಬ್ ಗೆ ಬಂದ ಮಾಹಿತಿ ಅನುಸರಿಸಿ ಗ್ರಾಮಗಳಿಗೆ ಕೃಷಿ ತಜ್ಞರೊಂದಿಗೆ ಭೇಟಿ ನೀಡಿದ ಅವರು ರೈತರ ಸಮಸ್ಯೆಗಳನ್ನು ಆಲಿಸಿ ಕೃಷಿ ತಜ್ಞರಾದ ಡಾ|| ರಾವುಲ್, ಡಾ|| ಅರುಣಕುಮಾರ್ ಅವರನ್ನು ಸಂಪರ್ಕಿಸಿ ಹಸಿರು ಹುಳು ನಿವಾರಣೆಗೆ ಪರಿಹಾರೋಪಾಯ ಸೂಚಿಸಿದರು. ಈ ಹಿಂದೆ ಟೊಬ್ಯಾಕೋ, ಶುಂಠಿ ಮತ್ತಿತರ ವಾಣಿಜ್ಯ ಬೆಳೆಗಳನ್ನು ಬೆಳೆದ ಭೂಮಿಯಲ್ಲಿ ರಾಗಿ ಬೆಳೆದಾಗ ಇಂತಹ ಸಮಸ್ಯೆ ಕಂಡು ಬಂದಿದೆ ಎನ್ನಲಾಗುತ್ತಿದೆ. ಈ ಭಾಗದ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ರಾಗಿ ಬೆಳೆ ಹಸಿರು ಹುಳುವಿನ ಕಾಟಕ್ಕೆ ತುತ್ತಾಗಿದೆ. ಪ್ರತೀ ಎಲೆಯ ಮೇಲೂ 3-4ಹುಳುಗಳೂ ಹರಿದಾಡುತ್ತಿದ್ದು 3-4ದಿನದಲ್ಲಿ ಬುಡಸಮೇತ ಬೆಳೆಯನ್ನು ತಿಂದು ಹಾಕುತ್ತಿವೆ. ರೇಷ್ಮೇ ಹುಳುವಿನ ಮಾದರಿಯಲ್ಲಿ ರೂಪಾಂತರ ಹೊಂದುತ್ತಿರುವ ಇದು ಅಂತಿಮ ಹಂತದಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಹುಳುಗಳ ನಿವಾರಣೆಗೆ ರೈತರು ತಮಗೆ ತೋಚಿದ ರೀತಿಯಲ್ಲಿ ಔಷಧ ಸಿಂಪಡಿಸಿದ್ದಾರಾದರೂ ಹುಳುವಿನ ಹತೋಟಿ ಆಗಿಲ್ಲ. ಆದರೆ ಪೊಟ್ಯಾಟೋ ಕ್ಲಬ್ ನ ಕೃಷಿ ತಜ್ಞರಾದ ಡಾ|| ರಾವುಲ್ ಗೊಬ್ಬರದ ಅಂಗಡಿಗಳಲ್ಲಿ ದೊರೆಯುವ ಕ್ರಿಮಿನಾಶಕಗಳಾದ ಲ್ಯಾನೆಟ್ ಪೌಡರಿನೊಂದಿಗೆ ನಿರ್ದಿಷ್ಠ ಪ್ರಮಾಣದ ನೀರನ್ನು ಸೇರಿಸಿ ಸಿಂಪರಣೆ ಮಾಡಬಹುದು ಅದೇ ರೀತಿ ಆವಂತ್ 1ಲಿ. ಗೆ 0.5ಗ್ರಾಂ ನೀರು ಬೆರೆಸಿ ಸಿಂಪರಣೆ ಮಾಡಿದಲ್ಲಿ ಹುಳುವಿನ ನಿವಾರಣೆ ಆಗುವುದು ಎಂದು ತಿಳಿಸಿದ್ದಾರೆ. ಎಲ್ಲ ಕ್ರಿಮಿನಾಶಕ ಮಾರಾಟದ ಅಂಗಡಿಗಳಲ್ಲೂ ಈ ಕ್ರಿಮಿನಾಶಕಗಳು ಲಭ್ಯವಿದೆ ರೈತರಿಗೆ ಹೆಚ್ಚಿನ ಮಾಹಿತಿ ಬೇಕಾದರೆ ಪೊಟ್ಯಾಟೋ ಕ್ಲಬ್ ನ ಮೊಬೈಲ್ ಸಂಖ್ಯೆ 9141573331ಕ್ಕೆ ಕರೆ ಮಾಡಬಹುದು ಎಂದು ಯೋಗಾರಮೇಶ್ ಹೇಳಿದ್ದಾರೆ. ಕ್ರಿಮಿನಾಶಕ ಮಾರಾಟಗಾರರಾಗಲು ನಿರ್ದಿಷ್ಠವಾಗಿ ತಿಳುವಳಿಕೆ ಇರುವಂತೆ ಕೃಷಿ ಪಧವೀಧರರಿಗೆ ಮಾತ್ರ ಲೈಸೆನ್ಸ್ ನೀಡಿದರೆ ರೈತರಿಗೂ ಅನುಕೂಲವಾಗುತ್ತದೆ ಎಂದು ಯೋಗಾರಮೇಶ್ ಅಭಿಪ್ರಾಯಪಟ್ಟರು.
ಕೃಷಿಅಧಿಕಾರಿಗಳ ಭೇಟಿ: ಪೊಟ್ಯಾಟೋ ಕ್ಲಬ್ ನ ತಂಡ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿದ ಮೇಲೆ ಎಚ್ಚೆತ್ತುಕೊಂಡಿರುವ ತಾಲೂಕು ಕೃಷಿ ಅಧಿಕಾರಿಗಳ ತಂಡ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕೆಲ ತಜ್ಞರೊಂದಿಗೆ ಹಸಿರು ಹುಳು ಕಾಟವಿರುವ ಕೃಷಿ ಜಮೀನುಗಳಿಗೆ ಭೇಟಿ ನೀಡಿತ್ತು.

ಮಂಗಳವಾರ, ಅಕ್ಟೋಬರ್ 12, 2010

ಖಾತ್ರಿ ಅನುಷ್ಠಾನ ತಡೆ ನಿವಾರಣೆಗೆ 'ಹಗಲು ವೇಷ'ದ ತಂಡ !

ಅರಕಲಗೂಡು: ಕುರಿ ಕಾಯಲು ತೋಳ ಬಿಟ್ಟರೆ ಹೇಗಿರುತ್ತೆ? ಹೌದು ಇಂತಹುದೇ ಪರಿಸ್ಥಿತಿ ಈಗ ತಾಲೂಕಿನಲ್ಲಿ ನಿರ್ಮಾಣವಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಹಾಗೂ ಕೂಲಿ ಬಿಡುಗಡೆ ಗೊಳಿಸುವ ಉದ್ದೇಶದಿಂದ ಸ್ಥಳಕ್ಕೆ ತೆರಳಿ ಕಾಮಗಾರಿ ಪರಿಶೀಲಿಸಿ ವರದಿ ನೀಡಲು ತಾಲ್ಲೂಕು ಮಟ್ಟದ ಅಧಿಕಾರಿಗಳ ನೇತೃತ್ವದ 5ತಂಡಗಳನ್ನು ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮಿನರಸಯ್ಯ ರಚಿಸಿದ್ದಾರೆಂದು ತಿಳಿದು ಬಂದಿದೆ..ತಮಾಷೆಯ ಸಂಗತಿಯೆಂದರೆ ಉದ್ಯೋಗ ಖಾತ್ರಿಯ ಎಬಿಸಿಡಿ ಗೊತ್ತಿಲ್ಲದ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ಈಗಾಗಲೇ ನಡೆದಿರುವ ಖಾತ್ರಿ ಅಕ್ರಮದ ಪಾಲುದಾರರಾಗಿರುವ ಆರೋಪ ಹೊತ್ತಿರುವ ಜಿ.ಪಂ. ಇಂಜಿನಿಯರುಗಳನ್ನು ತಾಂತ್ರಿಕ ಸಲಹೆಗಾರರನ್ನಾಗಿ ಮಾಡಲಾಗಿದೆ ಮತ್ತು ಅಕ್ರಮದ ನೇರ ಪಾಲುದಾರರಾದ ಪಂಚಾಯ್ತಿ ಕಾರ್ಯದರ್ಶಿಗಳು ಮತ್ತು ಕೆಲವು ಪಿಡಿಓಗಳು ಈ ತಂಡದ ಮಾರ್ಗದರ್ಶಕರಾಗಿರುವುದು ದುರಂತವೇ ಸರಿ.ಸದರಿ ಕೆಲಸ ನಿರ್ವಹಿಸಲು ಪ್ರತೀ ತಾಲೂಕುಗಳಲ್ಲು ಸಾಮಾಜಿಕ ಲೆಕ್ಕಪರಿಶೋಧಕರುಗಳಿದ್ದಾರೆ ಹಾಗೂ ಪ್ರಾಮಾಣಿಕವಾಗಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ ಆದರೆ ತಾಲೂಕು ಹೊರತು ಪಡಿಸಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾತ್ರಿ ಯೋಜನೆಯ ುಸ್ತುವಾರಿ ಹೊತ್ತ ಅಧಿಕಾರಿಗಳೇ ಲೆಕ್ಕಪರಿಶೋಧಕರುಗಳನ್ನು ಬೆದರಿಸಿ ಮಟ್ಟಹಾಕುವ ಪ್ರಯತ್ನ ನಡೆಸಿರುವುದರಿಂದ ಅಕ್ರಮ ಖಾತ್ರಿಯ ಮಹಾತ್ಮೆ ತಿಳಿಯುತ್ತಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ುದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ಈಗ ಗುಟ್ಟಾಗಿ ಉಳಿದಿಲ್ಲ, ನಿಗದಿತ ಕೂಲಿಕಾರರ ಸಂಖ್ಯೆಗಿಂತ ದುಪ್ಪಟ್ಟು ಕಾಮಗಾರಿಗಳ ನಿರ್ವಹಣೆ, ಬೋಗಸ್ ದಾಖಲೆಗಳು, ಕೆಲಸವೇ ನಡೆಯದೇ ಬಿಲ್ ಪಡೆದಿರುವುದು, ಒಂದೇ ಕೆಲಸಕ್ಕೆ 3-4ಬಿಲ್ ಗಳನ್ನು ಪಡೆದಿರುವುದು, ನಕಲಿ ಎನ್ ಎಂ ಆರ್ ಹೀಗೆ ಒಂದೇ ಎರಡೇ. ಈ ಎಲ್ಲ ಕರ್ಮಕಾಂಡಗಳ ಕುರಿತು ರಾಜ್ಯ ಮಟ್ಟದ ತನಿಖಾ ಸಮಿತಿ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ, ಇದೇ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜನ್ ಕುಮಾರ್ ಸಹಾ ಅಕ್ರಮಗಳು ನಡೆದಿರುವುದನ್ನು ಪ್ರಮಾಣಿಕರಿಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ, ವರದಿಯನುಸಾರ ಇಬ್ಬರು ಇಂಜಿನಿಯರುಗಳು ಮತ್ತು ಒಬ್ಬ ಕಾರ್ಯನಿರ್ವಾಹಕ ಅಧಿಕಾರಿ ಅಮಾನತ್ತುಗೊಂಡಿದ್ದಾರೆ. ಇದೀಗ ರಚನೆ ಆಗಿರುವ ಹೊಸ ತಂಡದ ಉದ್ದೇಶವೇ ಸಾರ್ವಜನಿಕ ವಲಯದಲ್ಲಿ ಶಂಕೆಗೆ ಕಾರಣವಾಗಿದೆ. ಸಾಮಾಜಿಕ ಲೆಕ್ಕ ಪರಿಶೋಧಕರ ವರದಿಗಿಂತ ಭಿನ್ನವಾಗಿ ಈ ತಂಡ ವರದಿ ನೀಡಿತೇ ಎಂಬುದು ಈಗ ಪ್ರಶ್ನೆಯಾಗಿದೆ. ಅಧಿಕಾರಿಗಳು ಮಾಡಿದ ತಪ್ಪುಗಳು ಮತ್ತು ಹಣದ ಲೂಟಿಯಿಂದ ನೈಜವಾಗಿ ಕೆಲಸವಾಗಿರುವ ಕಡೆಯೂ ದುಡ್ಡು ಬಾರದೇ ನಿಂತು ಹೋಗಿದೆ, ಜನಪ್ರತಿನಿಧಿಗಳ ಮಾತುಕೇಳಿ ದಾಖಲೆಯಲ್ಲಿ ಇಲ್ಲದ ಜಿ.ಪಂ ಸೆಲ್ಫ್ ಕೆಲಸಗಳನ್ನು ಬೇಕಾಬಿಟ್ಟಿಯಾಗಿ ಸೇರಿಸಿದ್ದರಿಂದಾಗಿ ಕೆಲಸ ನಡೆದರೂ ತಾಲೂಕಿನ ಹಲವೆಡೆ ಕ್ರಿಯಾ ಯೋಜನೆ ಅನುಮೋದನೆ ಇಲ್ಲದಿರುವುದರಿಂದ ಕೂಲಿಕಾರರ ದುಡ್ಡು ನಿಂತುಹೋಗಿದೆ. ಇದೆಲ್ಲಾ ಹೋಗಲಿ ಎಂದರೆ ಕೂಲಿಕಾರರು ಮಾಡಿದ ಕೆಲಸಕ್ಕಿಂತ 100ಪಟ್ಟು ಹೆಚ್ಚು ಬೋಗಸ್ ಕಾಮಗಾರಿಗಳನ್ನು ತೋರಿಸಿ ರಾಜಾರೋಷವಾಗಿ 2.80ಕೋಟಿ ಸರಕು-ಸಾಮಾಗ್ರಿ ಹಣವನ್ನು ಇಂಜಿನಿಯರುಗಳು ಕೊಳ್ಳೆ ಹೊಡೆದಿದ್ದಾರೆ. ಅಧಿಕೃತ ದಾಖಲೆಗಳೊಂದಿಗೆ ಕೂಲಿಕಾರರಿಗೆ ವಂಚನೆಯಾಗಿರುವ ಕುರಿತು ಕ್ಷೇತ್ರದ ಶಾಸಕ ಎ ಟಿ ರಾಮಸ್ವಾಮಿ ಮತ್ತು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಒಂದು ವಿಶ್ವಸನೀಯ ಮೂಲದ ಪ್ರಕಾರ ತಾಲೂಕಿನ ಎಲ್ಲಾ 29 ಪಂಚಾಯ್ತಿಗಳಲ್ಲೂ ಅಕ್ರಮಗಳು ಕಣ್ಣಿಗೆ ಕಟ್ಟುವಂತೆ ನಡೆದಿದ್ದು ಹಲವುಮಂದಿ ಸರ್ಕಾರಿ ನೌಕರರು ಕಂಬಿ ಹಿಂದೆ ಹೋಗುವ ಲಕ್ಷಣಗಳಿವೆ.ಆದರೆ ಯೋಜನೆಯ ಮೇಲೆ ದುಷ್ಪರಿಣಾಮ ಉಂಟಾಗಿ ಕೇಂದ್ರ ಸರ್ಕಾರ ಅನುದಾನ ಸ್ಥಗಿತವಾಗುತ್ತದೆಂಬ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ತಡವಾಗುತ್ತಿದೆ ಎಂದು ತಿಳಿದು ಬಂದಿದೆ, ಹಂತ ಹಂತವಾಗಿ ತಪ್ಪಿತಸ್ಥರನ್ನು ಬಲಿಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಡೀ ಪ್ರಕರಣವನ್ನು ಸಿಓಡಿಗೆ ವಹಿಸಲು ಚಿಂತನೆ ನಡೆಸಿದೆ. ಮತ್ತೊಂದು ಬೆಳವಣಿಗೆಯಲ್ಲಿ ಇಡೀ ಪ್ರಕರಣ ರಾಜ್ಯ ಲೋಕಾಯುಕ್ತದ ಸುಪರ್ದಿಗೆ ಬಂದರೂ ಅಚ್ಚರಿ ಏನಿಲ್ಲ. ಇವೆಲ್ಲಾ ಬೆಳವಣಿಗೆಯ ನಡುವೆಯೇ ಜಿ.ಪಂ. ಸಿಇಓ ವರದಿಯ ಹಿನ್ನೆಲೆಯಲ್ಲಿ ಸರಕು-ಸಾಮಾಗ್ರಿ ಬಿಲ್ ಪಾವತಿಯಾಗಿದ್ದರೂ ಕಾಮಗಾರಿಗಳು ನಡೆಯದಿಲ್ಲದಿರುವುದರಿಂದ ಸ್ಟಾಕ್ ಪರಿಶೀಲನೆಗೆ ಕ್ಷಿಪ್ರ ಜಾಗೃತ ದಳ ಧಾಳಿ ನಡೆಸಲಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಕೆಂದ್ರ ತಂಡವೂ ಸಹಾ ಜಿಲ್ಲೆಯ ಒಟ್ಟು ಅಕ್ರಮ ಪರಿಶೀಲನೆಗೆ ಮುಂದಿನ ತಿಂಗಳು ಆಗಮಿಸುವ ನಿರೀಕ್ಷೆ ಇದೆಯೆಂದು ತಿಳಿದುಬಂದಿದೆ.

ಸೋಮವಾರ, ಅಕ್ಟೋಬರ್ 4, 2010

ಉದ್ಯೋಗ ಖಾತ್ರಿ ಕೂಲಿ ಬಡುಗಡೆಗೆ ಪ್ರತಿಭಟನಾ ಧರಣಿ



ಅರಕಲಗೂಡು:ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ತಕ್ಷಣವೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ತಾಲ್ಲೂಕು ಕಛೇರಿ ಎದುರು ಧರಣಿ ನಡೆಸಿದರು. ಜಡಿಎಸ್ ಮುಖಂಡ ಬೊಮ್ಮೇಗೌಡ ಮಾತನಾಡಿ ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ನಡೆಸಲಾಗಿದೆ ಕಳೆದ 10ತಿಂಗಳಿನಿಂದ ಕೂಲಿ ವೆಚ್ಚ ನೀಡಿಲ್ಲ, ಬದಲಾಗಿ ಸರಕು ಸಾಮಗ್ರಿ ಬಿಲ್ ಗಳನ್ನು ಪಾವತಿಸಲಾಗಿದೆ, ಅಧಿಕಾರಿಗಳು ಕೂಲಿ ಹಣವನ್ನು ಪಾವತಿಸದೇ ವಂಚಿಸಿದ್ದಾರೆ ಅವರಿಗೆ ಅಮಾನತ್ತು ಶಿಕ್ಷೆಯಲ್ಲ, ಜೈಲಿಗೆ ಅಟ್ಟಿ ಹಣವನ್ನು ವಸೂಲಿ ಮಾಡಿ ಎಂದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾ.ಪಂ ಅಧ್ಯಕ್ಷ ಎಚ್ ಮಾದೇಶ್ ಮಾತನಾಡಿ ಕ್ರಿಯಾಯೋಜನೆಯಲ್ಲಿ ಸೇರದ ಕೆಲಸಗಳಿಗೆ ಸರಕು ಸಾಮಾಗ್ರಿ ಬಿಲ್ ಗಳನ್ನು ತಯಾರಿಸಿ 3ಕೋಟಿ ಗೂ ಹೆಚ್ಚು ಹಣವನ್ನು ಲೂಟಿ ಮಾಡಿದ ಅಧಿಕಾರಿಗಳು ಅಮಾನತ್ತಿನ ನೆವದಲ್ಲಿ ಹೆಂಡತಿ ಮಕ್ಕಳ ಜೊತೆ ಮೋಜಿನ ಪ್ರವಾಸ ಕೈಗೊಂಡಿದ್ದಾರೆ, ಕೆಲಸ ಮಾಡಿದ ಕೂಲಿಕಾರರು ಕೂಲಿಗೂ ಗತಿಯಿಲ್ಲದೇ ಪರಿತಪಿಸುತ್ತಿದ್ದಾರೆ ಇಂತಹ ಸ್ಥಿತಿಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ದ ತಕ್ಷಣವೇ ಸೂಕ್ತ ಕ್ರಮ ಜರುಗಿಸಿ ಹಣವಸೂಲಿಗೆ ಕ್ರಮ ಜರುಗಿಸಬೇಕು ಎಂದರು. ಜಿ.ಪಂ. ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ ಯೋಜನೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ ಪರಿಣಾಮವಾಗಿ ಅಭಿವೃದ್ದಿ ಕಾರ್ಯಗಳಿಗೆ ಹಿನ್ನೆಡೆ ಆಗಿದೆ, ಜನ ಕೂಲಿ ಇಲ್ಲದೇ ಪರಿತಪಿಸುತ್ತಿದ್ದಾರೆ ಆದ್ದರಿಂದ ತಕ್ಷಣವೇ ಹಣ ಬಿಡುಗಡೆಗೆ ಸರ್ಕಾರ ಗಮನಹರಿಸಬೇಕು ಎಂದರು. ಜಿ.ಪಂ ಸದಸ್ಯ ಎಚ್ ಎಸ್ ಶಂಕರ್ ಮಾತನಾಡಿ ಅಧಿಕಾರಿಗಳು ಯೋಜನೆಯನ್ನು ದಿಕ್ಕು ತಪ್ಪಿಸಿದ್ದಾರೆ, ತಕ್ಷಣ ಕೂಲಿ ಬಿಡುಗಡೆ ಮಾಡಿ ಅಕ್ರಮದಲ್ಲಿ ಪಾಲ್ಗೊಂಡವರ ವಿರುದ್ದ ಕ್ರಮವಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು. ಜಿ.ಪಂ. ಸದಸ್ಯರಾದ ಬಿ ಜೆ ಅಪ್ಪಣ್ಣ, ನೀರುಬಳಕೆದಾರರ ಮಹಾಮಂಡಲದ ಮಾಜಿ ಅಧ್ಯಕ್ಷ ದೊಡ್ಡೇಗೌಢ, ಮುಖಂಡರಾದ ಜನಾರ್ಧನಗುಪ್ತ, ಮತ್ತಿತರರು ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಹಾಗೂ ಮುಖಂಡರಾದ ಕೇಶವಮೂರ್ತಿ ವಹಿಸಿದ್ದರು. ಪ್ರತಿಭಟನಾಕಾರರು ಮನವಿ ಪತ್ರವನ್ನು ತಹಸೀಲ್ದಾರ್ ಸವಿತಾ ಅವರಿಗೆ ಸಲ್ಲಿಸಿದರು.


ಅರಕಲಗೂಡು:ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಅ.5ರಂದು ಬೆಳಿಗ್ಗೆ 11ಗಂಟೆಗೆ ಕರೆಯಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ತಾಲ್ಲಕು ಪಂಚಾಯ್ತಿ ಅಧ್ಯಕ್ಷ ಮಾದೇಶ್ ಸಭೆಯ ಅಧ್ಯಕ್ಷತೆ ವಹಿಸುವರು.

ಪ್ರತಿಭಟನೆ: ಕೊಣನೂರು ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಪರಿವರ್ತಿಸುವವರೆಗೆ ಸಾರ್ವಜನಿಕ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ವಿವಿಧ ಪಕ್ಷಗಳ ಮುಖಂಡರು ತೀರ್ಮಾನಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಅ.5ರಿಂದ ಗ್ರಾಮ ಪಂಚಾಯ್ತಿ ಎದರು ಅನಿರ್ಧಿಷ್ಠಾವದಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಮತ್ತು ಯಾರೂ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಹೋರಾಟ ಸಮಿತಿಯ ಮುಖಂಡ ಕಬ್ಬಳಿಗೆರೆ ಬೈರೇಗೌಡ ಹೇಳಿದ್ದಾರೆ. ಇಂದು ಕೋಟೆ ಕೋಡಿ ಅಮ್ಮನ ದೇಗುಲದಲ್ಲಿ ನಡೆದ ಸರ್ವಪಕ್ಷದ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿ.ಪಂ. ಸದಸ್ಯ ಅಪ್ಪಣ್ಣ, ಮುಖಂಡರಾದ ಚೌಡೇಗೌಡ,ತಾ.ಪಂ. ಸದಸ್ಯ ಶ್ರೀನಿವಾಸ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಭಾನುವಾರ, ಅಕ್ಟೋಬರ್ 3, 2010

ಬಾಳೆ ಬೆಳೆದು ನೆಮ್ಮದಿಯ ಬದುಕು ಸಾಗಿಸಿ:ಡಾ. ರವೋಫ್

ಅರಕಲಗೂಡು: ರೈತರಿಗೆ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಬೆಳೆ ನಷ್ಟ ಹೊಂದಿ ಸಂಕಟಕ್ಕೆ ಸಿಲುಕುತ್ತಿದ್ದಾರೆ, ಆದರೆ ಸರಿಯಾದ ಕ್ರಮಗಳನ್ನು ಶ್ರದ್ದೆಯಿಂದ ಅನುಸರಿಸಿದರೆ ರೈತರು ನೆಮ್ಮದಿಯ ಬದುಕನ್ನು ಕಾಣಬಹುದು ಎಂದು ಪ್ರಗತಿಪರ ಕೃಷಿಕ ಡಾ|| ರವೂಫ್ ಹೇಳಿದ್ದಾರೆ. ಪಟ್ಟಣದ ಶಿಕ್ಷಕರ ಭವನದಲ್ಲಿ ಪೋಟ್ಯಾಟೋ ಕ್ಲಬ್ ವತಿಯಿಂದ ನಡೆದ ಮಾಸಿಕ ಸಭೆಯಲ್ಲಿ 'ಬಾಳೆ ಒಂದು ಮುಖ್ಯ ಬೆಳೆ ಹಾಗೂ ಉಪಬೆಳೆ' ಕುರಿತು ಮಾಹಿತಿ ನೀಡಿ ಸಂವಾದ ನಡೆಸಿದ ಅವರು ಮಳೆ ಹಾಗೂ ವಾತಾವರಣ ಕೈಕೊಟ್ಟರೆ ರೈತರು ಸಹಜವಾಗಿ ವಾಣಿಜ್ಯ ಬೆಳೆ ಗಳಲ್ಲಿ ನಷ್ಟ ಹೊಂದುತ್ತಾರೆ ಆದರೆ ಬೆಳೆಗಳನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಿಕೊಂಡು ಕೃಷಿ ಮಾಡಿದರೆ ಯಾವುದೇ ರೀತಿಯ ತೊಂದರೆಯೂ ಎದುರಾಗದು ಎಂದರು. ರೈತರು ಟೊಮ್ಯಾಟೋ, ಮೆಣಸಿನಕಾಯಿ, ಆಲೂಗಡ್ಡೆ ಇತ್ಯಾದಿಗಳನ್ನು ಬೆಳೆದು ಸೂಕ್ತ ಬೆಲೆಯು ಸಿಗದೆ ತೊಂದರೆ ಅನುಭವಿಸುತ್ತಾರೆ ಆದರೆ ಬಾಳೆ ಬೆಳೆದ ರೈತ ನಷ್ಟಹೊಂದಿದ ಉದಾಹರಣೆ ಸಿಗಲು ಸಾಧ್ಯವಿಲ್ಲ, ನಾನು ಒಂದು ಎಕರೆಯಲ್ಲಿ 3-4ಲಕ್ಷದವರೆಗೆ ಆದಾಯ ಪಡೆದಿದ್ದೇನೆ ನೀವು ಕೂಡ ಅಂತಹದ್ದನ್ನು ಸಾಧಿಸಲು ಸಾಧ್ಯವಿದೆ, ಪ್ರಯತ್ನ ಮತ್ತು ಶ್ರದ್ದೇ ಮಾತ್ರ ನಿಮ್ಮ ಕೈ ಹಿಡಿಯುತ್ತದೆ ಎಂದರು. ಕಡಿಮೆ ಖರ್ಚಿನಲ್ಲಿ ಬೆಳೆಯಲ್ಪಡುವ ಬಾಳೆಯನ್ನು ಅಗತ್ಯ ಪ್ರಮಾಣದಲ್ಲಿ ಪೂರೈಸಲು ಸಾಧ್ಯವಾಗುತ್ತಿಲ್ಲ, ಇಲ್ಲಿನ ಉತ್ಪಾದನೆ ಸಾಲದೆ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂದ್ರಪ್ರದೇಶ,ಕೇರಳ ಮತ್ತು ಮಹಾರಾಷ್ಟ್ರಗಳಿಂದ ಬಾಳೆಹಣ್ಣನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ರವೂಫ್ ನುಡಿದರು. ಆಸಕ್ತ ರೈತರು ನನ್ನ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಬಹುದು, ಬಾಳೆ ಬೆಳೆಗೆ ಬೇಕಾದ ಮಾರ್ಗದರ್ಶನವನ್ನು ನೀಡಲು ಸದಾ ಸಿದ್ದನಿರುತ್ತೇನೆ, ಹಾಗೆಯೇ ಆಸಕ್ತ ರೈತರು ಮುಂದೆ ಬಂದರೆ 5000ಬಾಳೆ ಗಿಡಗಳನ್ನು ಉಚಿತವಾಗಿ ನೀಡುತ್ತೇನೆ ಎಂದು ಘೋಷಿಸಿದರು. ನಾನು ಬಾಳೆ ಬೆಳೆ ಜೊತೆಗೆ ಅನಾನಸ್ ಹಾಗೂ ಇತರೆ ವಾಣಿಜ್ಯ ಬೆಳೆಗಳನ್ನು ಸಹಾ ಬೆಳೆಯುತ್ತಿದ್ದೇನೆ, ಸಾವಯವ ಗೊಬ್ಬರನ್ನು ತಯಾರಿಸಿಕೊಂಡು ಬಳಕೆ ಮಾಡುತ್ತಿರುವುದರಿಂದ ಹೆಚ್ಚಿನ ಇಳುವರಿ ಪಡೆಯಲಾಗುತ್ತಿದೆ ಎಂದರು. ಕೃಷಿ ತಜ್ಞ ದತ್ತಾತ್ರೇಯ ಮಾತನಾಡಿ ಕೃಷಿ ಸಂಸ್ಕೃತಿ ಮರೆಯಬಾರದು, ಕೃಷಿ ನಿಂತ ನೀರಲ್ಲ ಅದು ಸದಾ ಚಲನೆಯುಳ್ಳದ್ದು ಜನರಿಗೆ ಬದುಕು ಕೊಡುವ ಪ್ರಯತ್ನವನ್ನು ಅದು ಮಾಡುತ್ತದೆ ಎಂದರು. ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಯೋಗಾರಮೇಶ್ ಮಾತನಾಡಿ ರೈತರು ಆರ್ಥಿಕವಾಗಿ ಸಧೃಢವಾಗಬೇಕಾದರೆ ವಿವೇಚನಾಯುಕ್ತವಾದ ಕೃಷಿ ಮಾಡಬೇಕು. ನಷ್ಟದ ಬೆಳೆಗಳನ್ನು ಬೆಳೆದು ಶ್ರಮ-ಹಣ ಎರಡನ್ನೂ ಪೋಲು ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಬೇಡಿ, ಹೆಚ್ಚಿನ ವೆಚ್ಚವಿಲ್ಲದೇ ಬೆಳೆಯಬಹುದಾದ ಬೆಳೆಗಳ ಮಾಹಿತಿ ಪಡೆದು ಅದರ ಪ್ರಯೋಜನ ಪಡೆಯಿರಿ ಎಂದರು. ಬಾಳೆ ಬೆಳೆಗೆ ಅಗತ್ಯವಿರುವ ಪ್ರೋತ್ಸಾಹದಾಯಕವಾದ ಸಾಲ ಸೌಲಭ್ಯ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಲಭ್ಯವಿದೆ ಅಗತ್ಯಕ್ಕನುಸಾರವಾಗಿ ಅದನ್ನು ಬಳಸಿಕೊಳ್ಲಿ ಎಂದು ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ತಜ್ಞರಾದ ಅರುಣ್ ಕುಮಾರ್, ಸೂರ್ಯನಾರಾಯಣ ಮಾತನಾಡಿದರು. ಪ್ರಗತಿ ಪರ ರೈತರಾದ ಹೆಮ್ಮಿಗೆ ಮೋಹನ್, ಹೆದ್ದಾರಿ ಉಪವಿಭಾಗದ ಅಭಿಯಂತರ ಸೋಮಶೇಖರ್, ಮುಖಂಡರಾದ ಜಯಪ್ಪ, ಕಾಂತರಾಜು, ಸತ್ಯನಾರಾಯಣ,ಆರ್ ಕೆ ಮಂಜುನಾಥ್, ಸಾದಿಕ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

ಅರಕಲಗೂಡು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಲಾಗಿರುವ ಕಾಮಗಾರಿಗಳಿಗೆ ಕೂಲಿ ಹಣವನ್ನು ತಕ್ಷಣವೆ ಬಿಡುಗಡೆ ಮಾಡಬೇಕು ಎಂದು ಅ.4 ರಂದು ಪಟ್ಟಣದಲ್ಲಿ ಜಾತ್ಯತೀತ ಜನತಾದಳದ ವತಿಯಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಈಗಾಗಲೇ 150ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ ಎಂದು ಮಾಹಿತಿ ನೀಡಿರುವ ಅಧಿಕಾರಿಗಳು ಸರಕು ಸರಬರಾಜು ವೆಚ್ಚವನ್ನು ಪಡೆದಿದ್ದಾರೆ ಆದರೆ ಕಳೆದ 10ತಿಂಗಳಿನಿಂದ ಕೂಲಿಕಾರರಿಗೆ ಕೂಲಿ ಪಾವತಿಸದೇ ವಂಚನೆ ಮಾಡುತ್ತಿದ್ದಾರೆ ಅಲ್ಲದೇ ಅಕ್ರಮದಲ್ಲಿ ಸಿಲುಕಿ ಅಮಾನತ್ತುಗೊಂಡಿದ್ದಾರೆ ಕೂಲಿಕಾರ ಕೂಲಿ ಇಲ್ಲದೇ ಪರಿತಪಿಸುವಂತಾಗಿದೆ ಆದ್ದರಿಂದ ತಕ್ಷಣವೇ ಕೂಲಿ ಹಣ ಬಿಡುಗಡೆ ಮಾಡಬೇಕು ಇಲ್ಲದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿರುವ ಮಾದೇಶ್, ಕೂಲಿಕಾರರ ಹಿತ ಕಾಯುವ ದಿಸೆಯಲ್ಲಿ ಸ್ಥಳೀಯ ಸಂಸ್ಥೆಗಳ ಜಿ.ಪಂ ಸದಸ್ಯರುಗಳು, ತಾ.ಪಂ. ಸದಸ್ಯರುಗಳು ಹಾಗೂ ಗ್ರಾ.ಪಂ ಸದಸ್ಯರುಗಳ ನೇತೃತ್ವದಲ್ಲಿ ಕೂಲಿಕಾರರೊಂದಿಗೆ ತಾಲ್ಲೂಕು ಕಛೇರಿ ಮುಂದೆ ಬೆಳಿಗ್ಗೆ 11ಗಂಟೆಯಿಂದ ಪ್ರತಿಭಟನಾ ಧರಣಿ ನಡೆಸಲಾಗುವುದುಎಂದು ತಿಳಿಸಿದ್ದಾರೆ.
ರೈತ ಸಂಘದ ಪ್ರತಿಭಟನೆ: ಬಿಜೆಪಿ ಸರ್ಕಾರ ರೈತರ ಬಗ್ಗೆ ತಳೆದಿರುವ ಧೋರಣೆ, ಬೆಳೆನಷ್ಟ, ನಕಲಿ ರಸಗೊಬ್ಬರ, ನಕಲಿ ಬೀಜ ಹಾಗು ಕೃಷಿ ಉತ್ನ್ನಕ್ಕೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಒದಗಿಸದ ಸರ್ಕಾರದ ವಿರುದ್ದ ಬೆಳಿಗ್ಗೆ 11ಗಂಟೆಗೆ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡ ಹೊ.ತಿ ಹುಚ್ಚಪ್ಪ ತಿಳಿಸಿದ್ದಾರೆ.

ಅರಕಲಗೂಡು: ತಾಲೂಕಿನ ಕೊಣನೂರು ಗ್ರಾ.ಪಂ.ಗೆ ಇದೇ ಅ.24ರಂದು ನಡೆಯಲಿರುವ ಚುನಾವಣೆಯನ್ನು ಬಹಿಷ್ಕರಿಸಲು ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ. ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಗ್ರಾಮವಾಗಿರುವ ಕೊಣನೂರು ಈಗ ಗ್ರಾಮ ಪಂಚಾಯ್ತಿ ಆಡಳಿತವನ್ನು ಹೊಂದಿದೆ. 25ಸದಸ್ಯ ಬಲವಿರುವ ಈ ಪಂಚಾಯ್ತಿಗೆ ಅತೀ ಹೆಚ್ಚು ಕಂದಾಯವೂ ಸಂಗ್ರಹವಾಗುತ್ತಿದೆ, ಮೂರು ಹಳ್ಳಿಗಳ ವ್ಯಾಪ್ತಿಯನ್ನೂ ಸಹಾ ಇದು ಹೊಂದಿದೆ. ಆದರೆ ಗ್ರಾ.ಪಂ ಆಗಿರುವುದರಿಂದ ಬರುತ್ತಿರುವ ಅಭಿವೃದ್ದಿ ಅನುದಾನ ಸಾಲದೇ ಅಗತ್ಯ ಅಭಿವೃದ್ದಿ ಕಾಮಗಾರಿಗಳಿಂದ ಗ್ರಾಮದ ಜನತೆ ವಂಚಿತರಾಗಿದ್ದಾರೆ. ಕಳೆದ ಬಜೆಟ್ ನಲ್ಲಿ ತಾಲೂಕು ಕೇಂದ್ರದ ಪ.ಪಂ. ಯನ್ನು ಪುರಸಭೆ ಮಾಡಿ ಕೊಣನೂರಿನ ಗ್ರಾ.ಪಂ. ಯನ್ನು ಪ.ಪಂ. ಮಾಡುವ ಪ್ರಸ್ತಾವನ್ನು ಬಿಜೆಪಿ ಸರ್ಕಾರ ಮಾಡಿತ್ತು ಆದರೆ ಕೊಟ್ಟ ಮಾತು ಉಳಿಸಿಕೊಳ್ಳದ ಸಿಎಂ ಯಡಿಯೂರಪ್ಪ ನಿಲುವಿನಿಂದ ಸ್ಥಳೀಯ ಸಂಸ್ಥೆಗಳು ಯಥಾ ಸ್ಥಿತಿಯಲ್ಲೆ ಉಳಿಯುವಂತಾಗಿದೆ. ಇದರಿಂದ ಬೇಸತ್ತಿರುವ ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ಪತ್ರಿಕೆಯೊಂದಿಗೆ ಮಾತನಾಡಿ ಪಂಚಾಯ್ತಿಯನ್ನು ಮೇಲ್ದರ್ಜೆಗೇರಿಸಿ ಪ.ಪಂ. ಮಾಡದಿದ್ದರೆ ಅ.24ರಂದು ನಡೆಯುವ ಸಾರ್ವಜನಿಕ ಚುನಾವಣೆಯನ್ನು ಬಹಿಸಷ್ಕರಿಸುತ್ತೇವೆ ಈ ಕುರಿತು ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಮನವಿ ಮಾಡಲಾಗುವುದು ಎಂದರು.

ಗಾಂಧೀ ತತ್ವಾದರ್ಶ ಅನುಕರಣೀಯವಾಗಬೇಕು-ಎಟಿಆರ್

ಅರಕಲಗೂಡು: ಪ್ರಸಕ್ತ ಸಂಧರ್ಭದಲ್ಲಿ ಮಹಾತ್ಮ ಗಾಂಧಿಯವರ ತತ್ವಾದರ್ಶ ಅನುಕರಣೀಯವಾಗಬೇಕು ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹೇಳಿದ್ದಾರೆ. ಪಟ್ಟಣದ ನೂತನ ಮಹಾತ್ಮಗಾಂಧಿ ಬಡಾವಣೆ, ನಾಗೇಂದ್ರಶ್ರೇಷ್ಠಿ ಉದ್ಯಾನವನ, ಗಾಂಧಿ ಸೇವಾ ಸಂಘವನ್ನು ಉದ್ಗಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಆದರ್ಶಗಳು ಮರೆಯಾಗಿವೆ, ಭ್ರಷ್ಟಾಚಾರ ಮೇರೆ ಮೀರಿದೆ ಇದು ಪ್ರಜಾ ತಾಂತ್ರಿಕ ವ್ಯವಸ್ಥೆ ಸುಲಲಿತವಾಗಿ ನಡೆಯಲು ಅಡ್ಡಿಯಾಗಿದೆ ಎಂದರು. ಗಾಂಧಿ ಹುಟ್ಟಿದ ಈ ನಾಡಿನಲ್ಲಿ ನ್ಯಾಯ-ನೀತಿ ಇನ್ನೂ ಉಳಿದುಕೊಂಡಿದೆ ಎಂಬುದಕ್ಕೆ ದೇಶದ ನ್ಯಾಯಾಂಗ ವ್ಯವಸ್ಥೆ ಅತ್ಯುತ್ತಮ ಸಾಕ್ಷಿಯಾಗಿದೆ, ಅಯೋಧ್ಯೆ ತೀರ್ಪು ಸರ್ವಸಮ್ಮತವಾಗಿ ಪ್ರಕಟಗೊಳ್ಳುವ ಮೂಲಕ ನ್ಯಾಯಾಂಗದ ಸುಭದ್ರತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದರು. ಇವತ್ತಿನ ದಿನಗಳಲ್ಲಿ ನಮ್ಮೆದುರು ಕಠಿಣ ಸನ್ನಿವೇಶಗಳಿವೆ, ಆಂತರಿಕ ವ್ಯವಸ್ಥೆಯಲ್ಲಿ ಅನುಕೂಲಕ್ಕೆ ತಕ್ಕಂತೆ ಅಧಿಕಾರಗಳನ್ನು ಬಳಸಿಕೊಳ್ಲುತ್ತಿರುವುದರಿಂದ ಕ್ಷುಲ್ಲುಕ ವಿಚಾರಗಳು ಪ್ರಾಧಾನ್ಯತೆ ಪಡೆಯುತ್ತಿರುವುದರಿಂದ ಸಾಧನೆಗಳೆಲ್ಲ ಮಂಕಾಗುತ್ತಿವೆ ಎಂದು ವಿಷಾಧಿಸಿದರು. ಜಗತ್ತಿನ ಬಹುದೊಡ್ಡ ಪ್ರಜಾತಾಂತ್ರಿಕ ರಾಷ್ಟ್ರವೆಂಬ ಹೆಗ್ಗಳಿಕೆಯ ಭಾರತದ ಮಾನ ಕಾಮನ್ ವೆಲ್ತ್ ಗೇಮ್ ಸಂಘಟಿಸುವಲ್ಲಿನ ಭ್ರಷ್ಟಾಚಾರದ ಮೂಲಕ ಹರಾಜಾಗಿದೆ ಇದು ದುರಾದೃಷ್ಟಕರ, ಗಾಂಧಿ ಹುಟ್ಟಿದ ಈ ದೇಶದಲ್ಲಿ ದುರಾಸೆಗೆ, ಸ್ವಾರ್ಥಕ್ಕೆ ಅವಕಾಶ ಕಲ್ಪಿಸಬಾರದು. ದುರಾಸೆಯನ್ನು ಮೆಟ್ಟಿ ನಿಲ್ಲುವ ಮೂಲಕ ಪಾವಿತ್ರ್ಯತೆಯನ್ನು ತರಬೇಕಾಗಿದೆ ಎಂದರು. ರಾಜ್ಯದಲ್ಲಿ ಬಡವರು ಹಾಗೂ ರೈತರ ಹೆಸರಿನಲ್ಲಿ ಸರ್ಕಾರದ ಸಚಿವರೆ ನಕಲಿ ಕಂದಾಯ ದಾಖಲೆಗಳನ್ನು ಸೃಷ್ಟಿಸಿ ಕೋಟಿಗಟ್ಟಲೆ ಹಣ ನುಂಗಿದ್ದಾರೆ ಈ ಬಗ್ಗೆ ನಾನು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ ಈಗ ಅವೆಲ್ಲ ಬಹಿರಂಗವಾಗುತ್ತಿವೆ, ತಪ್ಪು ಮಾಡಿದವರಿಗೆ ತಡವಾಗಿಯಾದರೂ ಶಿಕ್ಷೆಯಾಗಲೇ ಬೇಕು ಆ ಮೂಲಕ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಚಿಲುಮೆ ಮಠದ ಶ್ರೀ ಜಯದೇವಸ್ವಾಮಿಜಿ, ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅರೆಮಾದನಹಳ್ಳಿ ಮಠದ ಶ್ರೀ ಗುರುಶಿಸುಜ್ಞಾನ ಸ್ವಾಮಿಜಿ, ಕಾಗಿನೆಲೆ ಗುರುಪೀಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ,ಆಶೀರ್ವಚನ ನೀಡಿದರು. ರಾಜ್ಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಂಚೀರಾಯ ಪ್ರೌಢಶಾಲೆಯ ಶಿಕ್ಷಕ ಕೆ ಗಂಗಾಧರಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಮಾದೇಶ್, ಪ.ಪಂ. ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷ ರಮೇಶ್, ಸದಸ್ಯ ಶಂಕರಯ್ಯ, ಶಶಿಕುಮಾರ್, ಜನಾರ್ಧನಗುಪ್ತ, ಎ. ಜಿ ರಾಮನಾಥ್ ಉಪಸ್ಥಿತರಿದ್ದರು. ಗಾನಕಲಾ ಸಂಘದ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಶನಿವಾರ, ಅಕ್ಟೋಬರ್ 2, 2010

141st Gandhi Jayanthi Celebration at Arkalgud KARAVE


1) Gandhi Jayanthi Celebration held at Arkalgud Pet Bypass Road Councilor Ramanna, Leaders Tajim Pasha, Kanchenahally Srinivas, Sadiq Saab and others were seen on the picture.
2)Gandhi Jayanthi programme celeberation held at Arkalgud, Minority Leader Sadiq Saab presiding the function Senior Advocate Janardhana Gupta, ANV College Trustee A G Ramanath, Karave Leader Bhaskar, Councillor Shankaraiah and Tajim Pasha were seen the picture.



ಶುಕ್ರವಾರ, ಅಕ್ಟೋಬರ್ 1, 2010

ಅರಕಲಗೂಡು:ಅಭಿವೃದ್ದಿಗೆ ಕಿರಿಕಿರಿ ಇಲ್ಲಿ ಹೊಸತೇನಲ್ಲ!

  • ಅರಕಲಗೂಡುಜಯಕುಮಾರ್

ಅರಕಲಗೂಡು: ಅಕ್ಕಿಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅನ್ನೋ ಗಾದೆ ಮಾತಿದೆ, ಹಾಗೇ ಇಲ್ಲಿನ ಜನಕ್ಕೆ ಅಭಿವೃದ್ದಿ ಬೇಕು ಆದರೆ ಅಭಿವೃದ್ದಿಗೆ ಇರುವ ಅಡಚಣೆ ನಿವಾರಣೆ ಬೇಡ. ಹಾಗಂತ ಬಹುಸಂಖ್ಯೆಯ ಜನ ಹೀಗಿದ್ದಾರೆ ಅಂತಲ್ಲ, ಎಲ್ಲೋ 10ಪರ್ಸೆಂಟಿನಷ್ಟು ಜನ ಇಂತಹ ಕ್ರಿಯೆಗೆ ಮುಂದಾಗುತ್ತಾರಾದ್ದರಿಂದ ಒಟ್ಟು ಅಭಿವೃದ್ದಿಯೋಜನೆಗೆ ಅಡ್ಡಿ ಆತಂಕ ಉಂಟಾಗುತ್ತಲೇ ಇರುತ್ತದೆ. ಹಾಗಾಗಿ ಇವತ್ತಿಗೂ ಪೂರ್ಣ ಪ್ರಮಾಣದಲ್ಲಿ ಪಟ್ಟಣದ ಸಮರ್ಪಕ ಅಭಿವೃದ್ದಿ ಸಾಧ್ಯವಾಗಿಲ್ಲ. ಇಂತಹ ಕ್ರಿಯೆಗೆ ಕೆಲವೊಮ್ಮೆ ರಾಜಕೀಯ ಪ್ರತಿಷ್ಟೆಯೂ ಜೊತೆಯಲ್ಲೇ ಬರುತ್ತೆ. ಹಾಸನ ಜಿಲ್ಲೆಯಲ್ಲಿ ಅರಕಲಗೂಡು ಅಭಿವೃದ್ದಿಯ ದೃಷ್ಟಿಯಿಂದ ಹಿಂದುಳಿದ ತಾಲೂಕು ಕೇಂದ್ರ. ಇದನ್ನರಿಯಲು ತಾಲೂಕು ಸಂಚಾರ ಮಾಡಬೇಕಿಲ್ಲ, ಕೇಂದ್ರ ಸ್ಥಾನವಾದ ಅರಕಲಗೂಡಿಗೆ ಬಂದರೆ ಸಾಕು ಅದರ ದರ್ಶನವಾಗುತ್ತದೆ. ನಂಜುಂಡಪ್ಪ ಆಯೋಗದ ವರದಿಯಲ್ಲಿ ಅರಕಲಗೂಡಿನ ಉಲ್ಲೇಖವಿದೆ, ಬಿಜೆಪಿ ಸರ್ಕಾರ ಬಂದ ಮೇಲೆ ಆಯೋಗದ ವರದಿಯನುಸಾರ ಹೆಚ್ಚಿನ ಅನುದಾನ ಅಭಿವೃದ್ದಿ ಸಲುವಾಗಿಯೇ ಹರಿದು ಬಂದಿದೆ. ಅದರೆ ಅದರ ಬಳಕೆ ಮಾತ್ರ ವಿಳಂಬವಾಗಿದೆ. ಇದಕ್ಕೆ ಅಧಿಕಾರಸ್ಥರ ಇಚ್ಚಾಶಕ್ತಿಯೂ ಕಾರಣವೆಂದರೆ ತಪ್ಪಾಗಲಾರದು. ಪಟ್ಟಣವನ್ನು ಸುಂದರವಾಗಿ ಮಾಡಬೇಕು ಎಂದು ಇಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳೂ ಆಶಿಸುತ್ತಾರೆ, ಹಾಗೂ ಆ ದಿಸೆಯಲ್ಲಿ ತಕ್ಕಮಟ್ಟಿಗೆ ಕೆಲಸವೂ ಆಗುತ್ತಿದೆ. ರಸ್ತೆ ಆಗಿದೆ, ಕ್ರೀಡಾಂಗಣ ನಿರ್ಮಾಣವಾಗುತ್ತಿದೆ, ಸುಸಜ್ಜಿತ ಬಸ್ ನಿಲ್ದಾಣ ಪೂರ್ಣಗೊಳ್ಳುತ್ತಿದೆ, ಸಾರ್ವಜನಿಕ ಈಜುಕೊಳದ ಪ್ರಸ್ತಾವನೆ ಇದೆ. ಪಟ್ಟಣದ ಮುಖ್ಯ ಭಾಗಗಳಲ್ಲಿ ಹೈಮಾಸ್ಟ್ ದೀಪಗಳು ಬಂದಿವೆ ಆದರೆ ಹದಗೆಟ್ಟ ಸಂಚಾರಿ ವ್ಯವಸ್ಥೆ,ಬೇಕಾಬಿಟ್ಟಿಯಾಗಿ ನಿಲ್ಲುವ ಖಾಸಗಿ ವಾಹನಗಳು, ಪಟ್ಟಣದ ಮುಖ್ಯ ರಸ್ತೆಯಲ್ಲಿ ಜನಸಂದಣಿ ಇರುವ ಕಡೆ ವೇಗವಾಗಿ ಸಾಗುವ ವಾಹನಗಳು ರಸ್ತೆ ದಾಟುವವರನ್ನು, ಪಾದಚಾರಿಗಳನ್ನು ಬೆಚ್ಚಿ ಬೀಳಿಸುತ್ತವೆ. ಹೊಳೆನರಸೀಪುರಕ್ಕೆ ಸಾಗುವ ರಸ್ತೆಯಲ್ಲಿ ರಸ್ತೆಯನ್ನೇ ಆಕ್ರಮಿಸಿರುವ ಖಾಸಗಿ ವಾಹನಗಳು ಅನಧಿಕೃತವಾಗಿ ಫುಟ್ ಪಾತ್ ಆಕ್ರಮಿಸಿ ಬೋರ್ಡನ್ನು ತಗುಲಿಸಿಕೊಂಡು ಬಿಟ್ಟಿವೆ. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲುವ ವಾಹನಗಳ ಬಗ್ಗೆ ಸ್ಥಳೀಯ ಪೋಲೀಸರನ್ನ ಪ್ರಶ್ನಿಸಿದರೆ ಅವರಿಗೆ ಪಾರ್ಕಿಗ್ ಜಾಗ ಕೊಟ್ಟರೆ ಸ್ಥಳಾಂತರಿಸಬಹುದು ಪಟ್ಟಣ ಪಂಚಾಯ್ತಿಯವರು ಜಾಗ ಕೊಡಲಿ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ರಸ್ತೆ ಸುರಕ್ಷತೆಗಾಗಿ ಪಟ್ಟಣ ಪಂಚಾಯ್ತಿ ವತಿಯಿಂದ ಉಚಿತವಾಗಿ ಫಲಕಗಳನ್ನು ಪೋಲೀಸರಿಗೆ ನೀಡಲಾಗಿದೆ, ಪೋಲೀಸ್ ಚೌಕಿಗಳನ್ನು ನಿಗದಿತ ಸ್ಥಳದಲ್ಲಿ ಹಾಕಲು ಸಿದ್ದಪಡಿಸಿಟ್ಟು ಕೊಳ್ಳಲಾಗಿದೆಯಾದರೂ ಅವುಗಳನ್ನು ನಿಗದಿತ ಸ್ಥಳದಲ್ಲಿ ಹಾಕಿ ಸಂಚಾರಿ ವ್ಯವಸ್ಥೆ ಸುಧಾರಿಸಲು ಇನ್ನೂ ಕಾಲ ಕೂಡಿಬಂದಿಲ್ಲದಿರುವುದು ದುರಾದೃಷ್ಟಕರ ಸಂಗತಿ. ದಕ್ಷಿಣ ವಲಯ ಐಜಿಪಿ ಎ ಎಸ್ ಎನ್ ಮೂರ್ತಿ ಮತ್ತು ಎಸ್ಪಿ ಶರತ್ ಚಂದ್ರ ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿ ಸಾರ್ವಜನಿಕ ಅಹವಾಲುಗಳನ್ನು ಕೇಳಿ ಹೋದರೆ ವಿನಹ ಕನಿಷ್ಠ ಸುಧಾರಣೆಯೂ ಸಹಾ ಆಗಿಲ್ಲ. ಪಟ್ಟಣದ ಮುಖ್ಯ ರಸ್ತೆ ಗಳನ್ನು ಪುನರ್ ನಿರ್ಮಾಣ ಮಾಡುವಾಗ ಪೇಟೆ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಿ ನಿರ್ಮಿಸುವ ಪ್ರಸ್ತಾವನೆಯೂ ಇತ್ತು ಆದರೆ ಅಡ್ಡಿ ಎದುರಾಗಿದ್ದರಿಂದ ಸ್ಥಗಿತವಾಗಿತ್ತು. ಇತ್ತೀಚೆಗೆ ಪಟ್ಟಣ ಪಂಚಾಯ್ತಿಯಲ್ಲಿ ಶಾಸಕ ಎ ಮಂಜು ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಯಾರಿಗೂ ತೊಂದರೆಯಾಗದಂತೆ ಪೇಟೆ ಮುಖ್ಯ ರಸ್ತೆಯನ್ನು ನಿರ್ಮಿಸುವ ಬಗ್ಗೆ ತೀರ್ಮಾನಿಸಲಾಯಿತು. ಸಧ್ಯ ಒಂದು ಕಿಮಿ ಇರುವ ರಸ್ತೆಗೆ 93ಲಕ್ಷದ ಕ್ರಿಯಾ ಯೋಜನೆ ತಯಾರಿಸಿರುವ ಪ.ಪಂ. ರಸ್ತೆ ಅಗಲೀಕರಣದ ತೀರ್ಮಾನ ಕೈಗೊಂಡಿರುವುದರಿಂದ ಇನ್ನೂ ಹೆಚ್ಚಿನ ಅನುದಾನವನ್ನು ನಿರೀಕ್ಷಿಸುತ್ತಿದೆ. ಹಾಗಾಗಿ ಟೆಂಡರು ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ. ರಸ್ತೆ ಅಗಲೀಕರಣದ ವೇಳೆ ಪಂಚಾಯ್ತಿ ಕಛೇರಿ ಮುಂದೆ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಉಳಿಸಿಕೊಂಡು ಮುಂದಕ್ಕೆ ಎರಡೂ ಬದಿಯಲ್ಲಿ ಅಗತ್ಯ ಜಾಗ ಪಡೆಯುವ ಪ್ರಕ್ರಿಯೆಗೆ ನಿರ್ದರಿಸಲಾಗಿದೆ. ಆದರೆ ಕೆಲ ದಶಕಗಳ ಹಿಂದೆ ಪೇಟೆಯ ಒಳಗೆ ಹೆದ್ದಾರಿ ಹಾದು ಹೋಗುತ್ತದೆ ಎಂದು ಆತಂಕಗೊಂಡ ಜನ ಅವರವರ ಶಕ್ತ್ಯಾನುಸಾರ ಹಣ, ಜಾಗ ಎರಡನ್ನೂ ನೀಡಿ ಪಟ್ಟಣದಿಂದ ಕೊಣನೂರಿಗೆ ಬೈಪಾಸ್ ರಸ್ತೆ ನಿರ್ಮಾಣವಾಗಲು ಸಹಕರಿಸಿದ್ದರು. ಈಗ ಮತ್ತೆ ಹಳೆ ಜಾಗದಲ್ಲೇ ಅಂದರೆ ಪೇಟೆಯ ಒಳಗೆ ರಸ್ತೆ ಅಗಲೀಕರಣವಾಗುತ್ತಿರುವುದು ಕೆಲವು ಕುಟುಂಬಗಳಿಗೆ ಆತಂಕಗೊಳ್ಳುವಂತೆ ಮಾಡಿದೆ, ಆದರೆ ಬಹುತೇಕ ಮಂದಿ ರಸ್ತೆ ಅಗಲೀಕರಣವನ್ನು ಬೆಂಬಲಿಸುತ್ತಿದ್ದಾರೆ. ಅಷ್ಟೇ ಅಲ್ಲ ವಾಣಿಜ್ಯ ಮಳಿಗೆ ರಿಯಾಯ್ತಿ ಬೇಡೆ ತೆಗೆಯುವುದಿದ್ದರೆ ಅಗತ್ಯವಿರುವ ಎಲ್ಲಾ ಕಟ್ಟಡಗಳನ್ನು ಒಡೆಯಿರಿ ಎಂಬ ಅಭಿಪ್ರಾಯ ಬಂದಿದೆ ಎನ್ನಲಾಗಿದೆ, ಈ ಸಲುವಾಗಿ ಪಟ್ಟಣಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ದಿ ಅಧಿಕಾರಿಗಳು ಎಲ್ಲರಿಗೂ ಸರ್ವಸಮ್ಮತವಾಗುವಂತೆ ವಾಣಿಜ್ಯ ಮಳಿಗೆಗಳನ್ನು ಒಡೆದು ಬೇರೆ ಕಡೆ ಅವಕಾಶ ಕಲ್ಪಿಸಿ ಮುಂದುವರೆಯಲು ಸೂಚನೆ ನೀಡಿದ್ದಾರೆ.ಲಬ್ಯ ಮಾಹಿತಿ ಪ್ರಕಾರ ಈಗಿರುವ ರಸ್ತೆಯ ಮದ್ಯದಿಂದ ಎರಡೂ ಬದಿಗೂ ತಲಾ 30ಅಡಿ ವಿಸ್ತರಿಸುವ ಪ್ರಸ್ತಾವವಿದೆ. 40ಅಡಿ ರಸ್ತೆ, 5 ಅಡಿ ರಸ್ತೆ ವಿಭಜಕ, 10ಅಡಿ ಚರಂಡಿಗೆ ಬಾಕಿ ಎಂಟು ಅಡಿ ಪಾದಚಾರಿ ರಸ್ತೆ,ವಿದ್ಯತ್ ಕಂಬ ಹಾಗೂ ಯುಜಿಡಿಗೆ ಬಳಸುವ ಯೋಜನೆ ಇದೆ. ಲೋಕೋಪಯೋಗಿ ಸದರಿ ರಸ್ತೆ ನಿರ್ಮಾಣಕ್ಕೆ ಮಾತ್ರ ಪ.ಪಂ.ಗೆ ಅನುಮತಿನೀಡಲಿದ್ದು ಅದನ್ನು ಕಾಯಲಾಗುತ್ತಿದೆ. ಈ ವರ್ಷದ ದಸರೆಗೆ ಕೊರಕಲು ಬಿದ್ದಿರುವ ಪೇಟೆ ರಸ್ತೆಯನ್ನು ತಕ್ಕಮಟ್ಟಿಗೆ ಸಜ್ಜುಗೊಳಿಸಿ ನಂತರ ರಸ್ತೆ ನಿರ್ಮಾಣದ ಕಾರ್ಯ ಆರಂಭವಾಗಲಿದೆ ಎನ್ನುತ್ತಾರೆ ಪ.ಪಂ ಸದಸ್ಯ ರವಿಕುಮಾರ್.ಪಟ್ಟಣದ ನಿರ್ವಸಿತರಿಗೆ ಹಂಚಿಕೆಗೆ ಬಾಕಿ ಉಳಿದಿರುವ 300 ನಿವೇಶನಗಳನ್ನು ಹಂಚುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ, ಹಲವು ಬಾರಿ ಮುಂದೂಡಲ್ಪಟ್ಟಿದ್ದ ಸಭೆ ಕಳೆದ ವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದಿದ್ದು ಫಲಾನುಭವಿಗಳ ಮುಖದಲ್ಲಿ ಹರ್ಷ ಮೂಡಿಸಿದೆ. ಪಟ್ಟಣದಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಹಾಗೂ ಹುಚ್ಚು ಹಿಡಿದ ನಾಯಿಗಳನ್ನು ಕೊಲ್ಲುವ ಕ್ರಿಯೆಗೆ ಚಾಲನೆ ಸಿಕ್ಕಿದೆ. ಪ.ಪಂ. 2.50ಕೋಟಿ ರೂಗಳ ಅನುದಾನದಲ್ಲಿ ಎಲ್ಲ ವಾರ್ಡ್ ಗಳಿಗೂ ಅಭಿವೃದ್ದಿ ಕ್ರಿಯಾಯೋಜನೆ ಅನುಮೋದನೆ ದೊರೆತಿದ್ದು ಶಾಸಕ ಎ.ಮಂಜು ಹಾಗುಅಧ್ಯಕ್ಷೆ ಯಶೋಧಮ್ಮ ಉಪಾಧ್ಯಕ್ಷ ರಮೇಶ್, ಪುರ ಪ್ರತಿನಿಧಿಗಳು ಉತ್ಸಾದಿಂದ ಚಾಲನೆ ನೀಡಿದ್ದಾರೆ. ಕುಡಿಯುವ ನೀರಿನ ಅಭಿವೃದ್ದಿ ಯೋಜನೆ ಮಂಜೂರಾಗಿದ್ದರು ಅನುಷ್ಠಾನ ಕುಂಟುತ್ತಾ ಸಾಗಿದೆ. ಪಟ್ಟಣದ ಜನತೆಯ ಬಹುದಿನಗಳ ಕನಸು ಯುಜಿಡಿ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ. ಪಟ್ಟಣದ ಕೆಲವು ವಾರ್ಡಗಳಲ್ಲಿ ಈಗಾಗಲೇ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದ್ದರೂ ಜೈಬೀಮ್ ನಗರ, ಕೆಇಬಿ ರಸ್ತೆಯ ವಸತಿ ಪ್ರದೇಶ, ಅನಕೃ ಬಡಾವಣೆ, ಸಾಲಗೇರಿ ಮತ್ತಿತರೆಡೆಗಳಲ್ಲಿ ಹೈ ಮಾಸ್ಟ್ ಅಳವಡಿಕೆಯಾಗಬೇಕಿದೆ. ಆದರೆ ಜನ ವಸತಿ ವಿರಳವಾಗಿರುವ ಬಸವೇಶ್ವರ ಸರ್ಕಲ್ ನಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ಪ.ಪಂ. ಆದ್ಯತೆ ನೀಡಿದ ಔಚಿತ್ಯ ತಿಳಿಯುತ್ತಿಲ್ಲ. ಪ.ಪಂ. ಕೋಟೆ ಪ್ರದೇಶದಲ್ಲಿ ಖರೀದಿಸಿರುವ ರುದ್ರಭೂಮಿ ಜಾಗದ ಅಭಿವೃದ್ದಿಗೆ ಗ್ರೀನ್ ಸಿಗ್ನಲ್ ದೊರಕಿದ್ದು ಮುಂದಿನ ಕ್ರಮಕ್ಕೆ ಸಿದ್ದತೆ ನಡೆಯುತ್ತಿದೆ. ತ್ಯಾಜ್ಯ ವಿಲೇವಾರಿಗೆ ದೇವರಹಳ್ಳಿ ಬಳಿ ಇರುವ ಜಾಗದ ಜೊತೆಗೆ ಇನ್ನೂ ಎರಡು ಎಕರೆ ಜಾಗ ಅವಶ್ಯವಿರುವುದರಿಂದ ಪ್ರಸ್ತಾವನೆ ಸಲ್ಲಿಸಲು ಪ.ಪಂ. ಚಿಂತನೆ ನಡೆಸಿದೆ. ಅಂದುಕೊಂಡ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ನಡೆದರೆ ಪ.ಪಂ. ಜನಮನ್ನಣೆಗೆ ಪಾತ್ರವಾಗುತ್ತದೆ ಆದರೆ ಇವತ್ತಿಗೂ ಸಾರ್ವಜನಿಕರಿಂದ ಉಪೇಕ್ಷೆಗೆ ಒಳಗಾಗುವ ವಿಚಾರವೆಂದರೆ ಪ.ಪಂ. ಇದುವರೆಗೂ ತನ್ನ ಆಸ್ತಿಯನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ವಿಫಲವಾಗಿರುವುದು, ಹಲವೆಡೆ ಒತ್ತುವರಿಯಾಗಿದ್ದರೂ ಅದು ಜಾಣ ಮೌನವನ್ನು ತಾಳಿದೆ. ಪಟ್ಟಣದ ಜನತೆಗೆ ಇದ್ದ ಟೌನ್ ಹಾಲ್ ಅನ್ನು ಅಕ್ರಮಿಸಿಕೊಂಡಿರುವ ಪ.ಪಂ. ತನ್ನ ಮೂಲ ಸ್ಥಾನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ದುಡ್ಡು ಮಾಡುವ ದಾರಿ ಕಂಡುಕೊಂಡಿದೆ, ಮತ್ತು ಟೌನ್ ಹಾಲ್ ಜಾಗದಲ್ಲಿ ಮನಸ್ಸಿಗೆ ಬಂದಂತೆ ಹೊಸ ಕಟ್ಟಡಗಳನ್ನು ನಿರ್ಮಿಸುತ್ತಿದೆ ಆ ಮೂಲಕ ಪಟ್ಟಣದ ಜನತೆಗೆ ಸಭೆ-ಸಮಾರಂಭ ನಡೆಸಲು ಅಡ್ಡ ಉಂಟಾಗಿದೆ. ಈಗ ಖಾಲಿ ಉಳಿದಿರುವ ಶಿಕ್ಷಕರ ಭವನದ ಎದುರಿಗಿರುವ ಜಾಗದ ಮೇಲೆ ಕಣ್ಣು ಹಾಕಿರುವ ಪ.ಪಂ. ಅಲ್ಲಿಗೆ ತನ್ನ ವಾಸ್ತವ್ಯ ಬದಲಿಸುವ ಆಲೋಚನೆ ಜೊತೆಗೆ 50ಕ್ಕೂ ಹೆಚ್ಚು ವಾಣಿಜ್ಯ ಮಳಿಗೆ ನಿರ್ಮಿಸುವ ಉದ್ದೇಶ ಹೊಂದಿರುವ ಮಾಹಿತಿ ಇದೆ. ಆದರೆ ಸದರಿ ಜಾಗ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ್ದು ಇನ್ನೂ ಆ ಬಗ್ಗೆ ಕಾಲವೇ ನಿರ್ಣಯಿಸಬೇಕಾಗಿದೆ.

ಅರಕಲಗೂಡು: ಪಟ್ಟಣದ ಸಂತೆಮರೂರು ರಸ್ತೆಯಲ್ಲಿರುವ ನೂತನ ವಸತಿ ಲೇಔಟ್ ಗೆ ಮಹಾತ್ಮಗಾಂಧಿ ಬಡಾವಣೆ ಎಂದು ನಾಮಕರಣ ಮಾಡಲಾಗುವುದು ಎಂದು ಹಿರಿಯ ವಕೀಲ ಜನಾರ್ಧನ ಗುಪ್ತ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಗಾಂಧಿ ಜಯಂತಿಯ ಅಂಗವಾಗಿ ಕಾರ್ಯಕ್ರಮವನ್ನು ಮದ್ಯಾಹ್ನ 2ಗಂಟೆಗೆ ನೂತನ ವಸತಿ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿದೆ. ನಾಮಫಲಕ ಅನಾವರಣ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಶ್ರೀ ಗುರುಶಿವಸುಜ್ಞಾನ ಮೂರ್ತಿ, ಶ್ರೀ ಶಿವಾನಂದಪುರಿ ಸ್ವಾಮಿ, ಶ್ರೀ ಜಯದೇವ ಸ್ವಾಮಿ, ಶ್ರೀ ನಯಾಜ್ ಅಹಮದ್, ಫಾ ಜಾಯ್ ವರ್ಗೀಸ್, ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹಾಗೂ ಜಿಲ್ಲಾ ನ್ಯಾಯಾಧೀಶ ಹಾಲಪ್ಪ ಮತ್ತಿತರ ಗಣ್ಯರು ಪಾಲ್ಗೋಳ್ಳುವರು ಎಂದು ತಿಳಿಸಿದ್ದಾರೆ.

ಅರಕಲಗೂಡು: ಪೊಟ್ಯಾಟೋ ಕ್ಲಬ್ ವತಿಯಿಂದ ಬಾಳೆ ಬೆಳೆ ಬೇಸಾಯ ಕ್ರಮದ ಬಗ್ಗೆ ಸಂವಾದ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಅ.3ರಂದು ಶಿಕ್ಷಕರ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕ್ಲಬ್ ನ ಅಧ್ಯಕ್ಷ ಯೋಗಾರಮೇಶ್ ತಿಳಿಸಿದ್ದಾರೆ. 'ಬಾಳೆ ಒಮದು ಮುಖ್ಯ ಬೆಳೆ ಹಾಗೂ ಉಪಬೆಳೆ ಎಂಬ ಕುರಿತು ಪ್ರಗತಿ ಪರ ರೈತ ಡಾ ರವೂಫ್ ಮಾತನಾಡುವರು, ಪರಿಸರವಾದಿ ಹೆಮ್ಮಿಗೆ ಮೋಹನ್, ತಜ್ಞ ಡಾ ಬಿ ಸಿ ಸೂರ್ಯನಾರಾಯಣ, ರೈತ ಪಾಲಾಕ್ಷ, ಎಸ್ ದತ್ತಾತ್ರಿ ಮಾಹಿತಿ ಹಾಗೂ ವಿಚಾರಗೋಷ್ಟಿಯಲ್ಲಿ ಪಾಲ್ಗೊಂಡು ರೈತರಿಗೆ ಉಪಯುಕ್ತ ಸಲಹೆಗಳನ್ನು ನೀಡುವರು, ಆಸಕ್ತ ರೈತರು ಸಭೆಯ ಸದುಪಯೋಗ ಪಡೆಯುವಂತೆ ಕೋರಲಾಗಿದೆ.

ಮಂಗಳವಾರ, ಸೆಪ್ಟೆಂಬರ್ 21, 2010

ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢಶಾಲೆ ಮಾನ್ಯತೆ ರದ್ದು

ಅರಕಲಗೂಡು: ಪಟ್ಟಣದ ಪ್ರತಿಷ್ಟಿತ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಮಾನ್ಯತೆಯನ್ನು ರದ್ದು ಪಡಿಸಲಾಗಿದ್ದು ಮುಂದಿನ ಪರ್ಯಾಯ ಕ್ರಮಗಳಿಗಾಗಿ ಪೋಷಕರ ತುರ್ತು ಸಭೆಯನ್ನು ಸೆ.23ರಂದೆಉ ಕರೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಸೀತಾ ರಾಘವ ಎಜುಕೇಶನ್ ಸೊಸೈಟಿ(ರಿ) ವತಿಯಿಂದ ನಡೆಯುತ್ತಿರುವ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢಶಾಲೆಯನ್ನು ಇಲಾಖೆಯ ಅನುಮತಿಯಿಲ್ಲದೇ ಬೇರೆಡೆಗೆ ಸ್ಥಳಾಂತರಿಸಿರುವುದರಿಂದ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ತಕ್ಷಣದಿಂದ ಶಾಲೆಯ ಮಾನ್ಯತೆಯನ್ನು ಹಿಂಪಡೆದಿದ್ದಾರೆ. ಆದ್ದರಿಂದ ಸದರಿ ಶಾಲೆಯನ್ನ ತಕ್ಷಣದಿಂದ ಜಾರಿಗೆ ಬ ರುವಂತೆ ಮುಚ್ಚಲಾಗುತ್ತದೆ. ಶಾಲೆಯಲ್ಲಿ 8,9,10ನೇ ತರಗತಿ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಹತ್ತಿರದ ಬೇರೆ ಶಾಲೆಗಳಿಗೆ ದಾಖಲಿಸುವಂತೆ ಸೂಚಿಸಲಾಗಿದೆ, ಹಾಗೂ ಈ ಬಗ್ಗೆ ಕ್ರಮ ವಹಿಸಲು ಸೆ.23 ರಂದು ಬೆಳಿಗ್ಗೆ 10ಗಂಟೆಗೆ ಮಕ್ಕಳ ಪೋಷ ಕರಸಭೆಯನ್ನು ಶಾಲೆಯ ಸಭಾಂಗಣದಲ್ಲಿ ಕರೆಯಲಾಗಿದ್ದು ತಪ್ಪದೇ ಸಭೆಗೆ ಹಾಜರಾಗಲು ಪೋಷಕರನ್ನು ಕೋರಲಾಗಿದೆ.
ಆಕ್ಷೇಪ: ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಫಣೀಶ್ ಶಿಸ್ತಿನ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ, ಆದರೆ ಅವರನ್ನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮವೆಸಗಿದ್ದಾರೆಂದು ಅಮಾನತುಗೊಳಿಸಿರುವುದು ವಿಷಾಧನೀಯಕರ ಸಂಗತಿ ಎಂದು ನೌಕರ ಸಂಘದ ಅಧ್ಯಕ್ಷ ವೆಂಕಟೇಶ್ ಹೇಳಿದ್ದಾರೆ.

ಭಾನುವಾರ, ಸೆಪ್ಟೆಂಬರ್ 19, 2010

ಉದ್ಯೋಗ ಖಾತ್ರಿ ಕೂಲಿ ಬಿಡುಗಡೆಗೆ ಎಟಿಆರ್ ಆಗ್ರಹ

ಅರಕಲಗೂಡು/ಕೊಣನೂರು: ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿರುವ ಉದ್ಯೋಗ ಖಾತ್ರಿ ಕಾಮಗಾರಿ ಕೂಲಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಆಗ್ರಹಿಸಿದ್ದಾರೆ.
ಕೊಣನೂರಿನಲ್ಲಿ ಶನಿವಾರ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ತಾಲೂಕಿನಲ್ಲಿ 150ಕೋಟಿ ರೂಪಾಯಿಗಳಿಗೆ ಅಕ್ರಮವಾಗಿ ಎಂಬಿ ಬರೆದು ಕ್ರಿಯಾ ಯೋಜನೆ ಅನುಮೋದನೆ ಪಡೆಯದೇ ಸಪ್ಲೈ ಬಿಲ್ ಪಡೆದಿರುವ ಅಧಿಕಾರಿಗಳು ಮಸ್ಟರ್ ರೋಲ್ ತಯಾರಿಸಲು ಹಿಂದೇಟು ಹಾಕುತ್ತಿದ್ದಾರೆ, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿರುವ ಕೂಲಿಕಾರರಿಗೆ ಕಳೆದ 6-7ತಿಂಗಳಿನಿಂದ ಕೂಲಿ ಪಾವತಿಯಾಗದೇ ಪರದಾಡುವಂತಾಗಿದೆ.ಅಧಿಕಾರಿಗಳು ಎಂಬಿ ಬರೆದು ಸಪ್ಲೈ ಬಿಲ್ ಪಡೆದುಕೊಂಡ ಮೇಲೆ ಕೂಲಿಕಾರರ ವೇತನವೂ ಪಾವತಿಯಾಗ ಬೇಕಲ್ಲವೇ ? ಎಂದು ಪ್ರಶ್ನಿಸಿದ ಅವರು ಅಧಿಕಾರಿಗಳು ತಕ್ಷಣವೇ 150ಕೋಟಿಗೆ ಎಂಬಿ ಬರೆದಂತೆ ಮಸ್ಟರ್ ರೋಲ್ ಕೂಡ ತಯಾರಿಸಿ ಕೂಲಿಕಾರರಿಗೆ ಹಣ ಕೊಡಿಸಬೇಕು ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದರು. ಜಾಬ್ ಕಾರ್ಡಿಗೆ ಅನುಗುಣವಾಗಿ ಕಾಮಗಾರಿ ನಿರ್ವಹಿಸಿದಲ್ಲಿ ಕೇವಲ 22.80ಕೋಟಿ ವೆಚ್ಚ ಮಾಡಲು ಸಾಧ್ಯ. ಹೀಗಿರುವಾಗ 150ಕೋಟಿ ಅಂದಾಜ ಪಟ್ಟಿ ತಯಾರಿಸಿರುವ ಅಧಿಕಾರಿಗಳು 'ಅಭಿವೃದ್ದಿ' ಯನ್ನು ಚೆನ್ನಾಗಿಯೇ ಮಾಡಿದ್ದಾರೆ, ಕೆಲಸ ನಿರ್ವಹಿಸಿರುವ ಕೂಲಿ ಕಾರ್ಮಿಕರು ಮಾತ್ರ ಕೂಲಿ ಇಲ್ಲದೇ ನಿರಾಶರಾಗಿದ್ದಾರೆ ಎಂದು ಕಟಕಿಯಾಡಿದರು. ಅದಿಕಾರಿಗಳು ಮಾಡಿರುವ ತಪ್ಪಿನಿಂದ ಉದ್ಯೋಗ ಖಾತ್ರಿ ಹಣ ನಿಂತಿದೆ ಎಂಬ ಆರೋಪ ಕೇಳಿ ಬರುತ್ತಿದೆ, ಹಣ ನಿಲ್ಲಿಸಿ ಎಂದು ನಾನು ಹೇಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು ಕಳೆದ ಡಿಸೆಂಬರ್ ನಲ್ಲೆ ಕೇಂದ್ರ ಸರ್ಕಾರ ನಿಗದಿತ ಸಂಖ್ಯೆಗಿಂತ ದುಪ್ಪಟ್ಟಾಗಿದ್ದ ಉದ್ಯೋಗ ಚೀಟಿ ಹಾಗೂ ಅನಿಯಂತ್ರಿತ ವೆಚ್ಚ ಕುರಿತು ಅಧಿಕಾರಿಗಳಿಗೆ 2ಬಾರಿ ನೋಟೀಸ್ ನೀಡಿದೆ, ಅಕ್ರಮ ಮನದಟ್ಟಾಗುತ್ತಿದ್ದಂತೆ ಜನವರಿಯಿಂದ ಹಣ ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರವೂ ಸೂಚಿಸಿದೆ ಆದರೂ ಸ್ವೇಚ್ಚಾಚಾರದಿಂದ ವರ್ತಿಸಿರುವ ಅಧಿಕಾರಿಗಳು ಹಣ ನಿಲುಗಡೆಗೆ ಕಾರಣರಾಗಿದ್ದಾರೆ ಈ ಕುರಿತು ಪ್ರತೀ ಹೋಬಳಿಗಳಲ್ಲೂ ಸಭೆ ನಡೆಸಿ ಜನರನ್ನು ಜಾಗೃತಗೊಳಿಸಲಾಗುವುದು ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್ ಎಸ್ ಶಂಕರ್ ಮಾತನಾಡಿ ಶಾಸಕರಿಗೆ ಹೊಲ ಉತ್ತಿದ್ದರೆ ಕೂಲಿ ಕಾರರ ಕಷ್ಟ ತಿಳಿಯುತ್ತಿತ್ತು, ಸುಮ್ಮನೆ ಚಂಗಲು ಹೊಡೆದುಕೊಂಡು ಎಂಎಲ್ ಎ ಆಗಿದ್ರೆ ಏನು ಪ್ರಯೋಜನ? ಜೆಡಿಎಸ್ ಮುಖಂಡರ ವಿರುದ್ದ ಕರಪತ್ರ ಹೊರಡಿಸುವ ಮೂಲಕ ಷಂಡತನದ ರಾಜಕೀಯ ಮಾಡುತ್ತಿದ್ದಾರೆ, ಎಟಿಆರ್ ತಮ್ಮ ಆಸ್ತಿ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ನೀಡುತ್ತಿದ್ದಾರೆ ಇದೀಗ ಸಾರ್ವಜನಿಕವಾಗಿಯೂ ನೀಡುತ್ತಿದ್ದಾರೆ ಎಂದು. ಹಿರಿಯ ರಾಜಕಾರಣಿ ಎ. ಮಂಜು ಭಾವ ಎಚ್ ಎನ್ ನಂಜೇಗೌಡರೇ, ಎ ಟಿ ರಾಮಸ್ವಾಮಿಯವರ ಪ್ರಾಮಾಣಿಕತೆ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಹೀಗಿರುವಾಗ ಶಾಸಕರು ಅನಗತ್ಯವಾಗಿ ಕೆಸರೆರಚುವ ಕೆಲಸ ಮಾಡುತ್ತಿದ್ದಾರೆ, ಉದ್ಯೋ ಗಖಾತ್ರಿ ಅನುಷ್ಠಾನ ಮಾಡುವಾಗ ಅಧಿಕಾರಿಗಳನ್ನು ಹೆದರಿಸಿ ಕೆಲಸ ಮಾಡಿಸಿದ್ದಾರೆ ಆದರೆ ದುಡ್ಡುಕೊಡಿಸುವ ಯೋಗ್ಯತೆ ಇವರಿಗಿಲ್ಲ ಎಂದು ಕಿಡಿಕಾರಿದರು. ಕಾಮಗಾರಿ ನಿರ್ವಹಿಸಿದವರಿಗೆ ಕೆಲಸ ಕೊಡಬೇಡಿ ಅಂತ ಹೇಳಿಲ್ಲ, ಕರಪತ್ರ ಹಂಚಿದವರು ಏನು ಮಾಡಿದ್ದಾರೆ ಎಂಬುದು ತಿಳಿದಿದೆ ಸಾರ್ವತ್ರಿಕ ಚುನಾವಣೆ ಯನಂತರ ಪಕ್ಷದ ಬಲವರ್ಧನೆಗೊಂಡಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಹೇಳಿದರು. ಮುಖಂಡ ಬೊಮ್ಮೇಗೌಡ ಮಾತನಾಡಿ ಸಾರ್ವಜನಿಕರ ಸಮಸ್ಯೆ ಕುರಿತು ಜನಸಾಮಾನ್ಯರ ಅಭಿಪ್ರಾಯಕ್ಕೆ ಮಾದ್ಯಮಗಳ ಸ್ಪಂದನೆಯಿಲ್ಲ, ಮುಖಂಡರುಗಳು ಮಾತನಾಡಿದರೆ ಮಾತ್ರ ಸುದ್ದಿ ಆಗುತ್ತಿದೆ ಇದು ಶೋಚನೀಯ ಎಂದರು. ಮುತ್ತಿಗೆ ರಾಜೇಗೌಡ ಮಾತನಾಡಿ ಎಟಿಆರ್ ಅನಾಮಧೇಯ ಪತ್ರಕ್ಕೆ ಬೆಲೆ ಕೊಡಬೇಕಾದ ಅಗತ್ಯ ಇರಲಿಲ್ಲ, ಎಟಿಆರ್ ಛಲದಿಂದಾಗಿ ಉದ್ಯೋಗ ಖಾತ್ರಿ ಯ ಅಕ್ರಮ ಬಯಲಿಗೆ ಬಂದಿದೆ ಎಂದರಲ್ಲದೇ ನೈಜವಾಗಿ ಕೆಲಸವಾಗಿದ್ದರೆ ಕೂಲಿಕಾರರ ವೇತ ನಬಿಡುಗಡೆ ಮಾಡಲಿ ಎಂದರು. ಮುಖಂಡರಾದ ಸಾದಿಕ್ ಸಾಬ್ ಮಾತನಾಡಿ ತಾಲೂಕಿನಲ್ಲಿ ಕೆಲವು ದಿನಗಳಿಂದ ಪಟ್ಟಭದ್ರ ಹಿತಾಸಕ್ತಿಯೊಂದು ಕಾರ್ಯನಿರ್ವಹಿಸುತ್ತಿದೆ, ಅಕ್ರಮವಾಗಿ ಸಂಪತ್ತು ಕ್ರೋಢೀಕರಿಸಿಕೊಂಡ ವ್ಯಕ್ತಿಯೋರ್ವ ರೈತರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಅಂತಹವರ ಕುಯುಕ್ತಿಗೆ ಯಾರೂ ಬಲಿಯಾಗಬಾರದು ಎಂದರು.

ಶನಿವಾರ, ಸೆಪ್ಟೆಂಬರ್ 18, 2010

ಭ್ರಷ್ಟಾಚಾರದ ವಿರುದ್ದ ಧ್ವನಿಯೆತ್ತಿದರೆ ಅದು ಅಭಿವೃದ್ದಿ ವಿರೋಧ ಹೇಗೆ? -ಎಟಿಆರ್





'ನಾನು ಜನರ ಕೂಲಿ ದುಡ್ಡು ನಿಲ್ಲಿಸಿ ಎಂದು ಹೇಳುತ್ತಿಲ್ಲ,ಅಭಿವೃದ್ದಿಗೆ ಅಡ್ಡಗಾಲಾಗುತ್ತಿಲ್ಲ ಆದರೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರ ದುಡ್ಡು ಲೂಟಿ ಮಾಡಿದ ಇಂಜಿನಿಯರುಗಳಿಗೆ ಬುದ್ದಿಕಲಿಸಿ, ತಿಂದ ಹಣ ವಸೂಲಿ ಮಾಡಿ ಎಂದು ಹೇಳುತ್ತಿದ್ದೇನೆ ಹೀಗೆ ಕೇಳುವುದು ತಪ್ಪಾ? ಜನರ ದುಡ್ಡು ಕೋಟಿ ಕೋಟಿಗಳಲ್ಲಿ ಲೂಟಿಯಾಗುತ್ತಿದ್ದರೆ ನೋಡಿಕೊಂಡು ಸುಮ್ಮನೆ ಕೂರಬೇಕಾ?ಎಂದು ಪ್ರಶ್ನಿಸಿದ್ದು ಮಾಜಿ ಶಾಸಕ ಹಾಗೂ ಅಕ್ರಮ ಭೂ ಒತ್ತುವರಿ ಜಂಟಿ ಸದನ ಸಮಿತಿಯ ಮಾಜಿ ಅಧ್ಯಕ್ಷ ಎ ಟಿ ರಾಮಸ್ವಾಮಿ. ತಾಲೂಕಿನ ಕೊಣನೂರಿನಲ್ಲಿ ನಡೆದ ಜೆಡಿಎಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ದಿಗೆ-ಶಿಕ್ಷಣಕ್ಕೆ-ಮೂಲಭೂತ ಸೌಕರ್ಯಾಭಿವೃದ್ದಿಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು ಅಂದು ಮಂಜೂರಾದ ಕಾಮಗಾರಿಗಳು ಈಗಲೂ ನಡೆಯುತ್ತಿವೆ. ಪ್ರಸಕ್ತ ಸಂಧರ್ಭದಲ್ಲಿ ನಾವು ವಿರೋಧ ಪಕ್ಷವಾಗಿದ್ದೇವೆ, ಇಂತಹ ಸನ್ನಿವೇಶದಲ್ಲಿ ನಮ್ಮ ಜವಾಬ್ದಾರಿ ಏನು?ಬಡವರ ಸಾರ್ವಜನಿಕರ ಹಣ ದುರುಪಯೋಗವಾಗದಂತೆ ಗಮನ ನೀಡಬೇಕಾಗಿದೆ ಜನರಿಗೆ ನ್ಯಾಯ ಒದಗಿಸಬೇಕಾಗಿದೆ ಅದಕ್ಕಾಗಿ ಪಕ್ಷದ ಸಂಘಟನೆಯನ್ನು ಭದ್ರ ಪಡಿಸುವ ಕೆಲಸ ಮಾಡಬೇಕಾಗಿದೆ ಆ ಮೂಲಕ ಸಾರ್ವನಿಕರ ಹಿತ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಹೀಗಿರುವಾಗ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಡವರ-ಕೂಲಿ ಕಾರ್ಮಿಕರ ಹಿತ ಕಾಪಾಡುವ ಸಲುವಾಗಿ ಅನುಷ್ಟಾನ ವಾಗಬೇಕಾಗಿದೆ ಆದರೆ ಸದರಿ ಯೋಜನೆಯನ್ನು ಅಧಿಕಾರಿಗಳು ಹಳ್ಳ ಹಿಡಿಸಿದ್ದಾರೆ ಕೆಲಸ ಮಾಡಿದ ಕೂಲಿ ಕಾರ್ಮಿಕರನ್ನು ವ್ಯವಸ್ಥಿತವಾಗಿ ವಂಚಿಸಿದ್ದಾರೆ ಇದನ್ನು ಪ್ರಶ್ನಿಸಿದರೆ ಭ್ರಷ್ಟಾಚಾರವನ್ನು ಬೆಂಬಲಿಸುವ ಪಟ್ಟಭದ್ರ ಹಿತಾಸಕ್ತಿಗಳು ಕೂಲಿ ಕಾರರ ಹೆಸರಿನಲ್ಲಿ ನಮ್ಮ ವಿರುದ್ದ ಅಪಪ್ರಚಾರದ ಕರಪತ್ರ ಹೊರಡಿಸುವ ನೀಚ ಕೆಲಸ ಮಾಡುತ್ತಾರೆ, ಒಂದು ರೀತಿಯಲ್ಲಿ ಇದು ನನಗೆ ಒಳ್ಳೆಯದೇ ಆಗಿದೆ. ವ್ಯಕ್ತಿಗತವಾಗಿ ನನ್ನ ವಿರುದ್ದ ಮಾಡಿರುವ ಆರೋಪಗಳಿಗೆ ನಾನು ಸ್ಪಷ್ಟ ಉತ್ತರವನ್ನು ಹೇಳುತ್ತೇನೆ, ನಾನು ರಾಜಕೀಯ ಪ್ರವೇಶಿಸುವ ಮುನ್ನವೇ ನನ್ನ ಸಾರ್ವಜನಿಕ ವ್ಯವಹಾರ-ವಹಿವಾಟುಗೆ ತಿಲಾಂಜಲಿ ಹೇಳಿ ಪ್ರಾಮಾಣಿಕವಾಗಿ ಜನಸೇವೆ ಮಾಡುವ ಬದ್ದತೆ ಇಟ್ಟುಕೊಂಡಿದ್ದೇನೆ. ಅಕ್ರಮವಾಗಿ ಆಸ್ತಿಪಾಸ್ತಿ ಮಾಡುವ, ಸ್ವಜನ ಪಕ್ಷಪಾತ ಮಾಡುವ ದರ್ದು ನನಗಿಲ್ಲ, ಪಾಪದ ಅನ್ನ ಉಂಡು ನನ್ನ ರಕ್ತದಲ್ಲಿ ಸೇರಿಲ್ಲ, ನನಗೆ ನೈತಿಕತೆ ಇದೆ ಎಂದು ನುಡಿದ ಅವರು ವಿರೋಧಿಗಳು ಆಪಾದಿಸುವಂತೆ ನಾನು ಯಾವುದೇ ತೋಟ ಮಾಡುವುದರಲ್ಲಿ ಬೇರೆಯವರೊಂದಿಗೆ ಪಾಲುದಾರಿಕೆ ಹೊಂದಿಲ್ಲ, ರಸ್ತೆ ಕೆಲಸದ ಕಂಟ್ರಾಕ್ಟಿನಲ್ಲಿ ಪಾಲಿಲ್ಲ, ಬೆಂಗಳೂರಿನಲ್ಲಿ ಯಾವುದೇ ಅಕ್ರಮ ಲೇಔಟ್ ವ್ಯವಹಾರದಲ್ಲಿ ಶಾಮೀಲಾಗಿಲ್ಲ ಆದರೆ ರಾಜಕೀಯ ದ್ವೇಷ, ಅಸೂಯೆ ಹೊಟ್ಟೆಕಿಚ್ಚಿನಿಂದ ನನ್ನ ವಿರುದ್ದ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದರು. ಉದ್ಯೋಗ ಖಾತ್ರಿಯಲ್ಲಿ ಜನ ಕೆಲಸ ಮಾಡಿ ದುಡ್ಡು ತಿಂದಿದ್ದರೆ ನಾನು ಕೇಳುತ್ತಿರಲಿಲ್ಲ ಆದರೆ ಜನರ ಹೆಸರಿನಲ್ಲಿ ಬೋಗಸ್ ದಾಖಲೆ ಸೃಷ್ಟಿಸಿ ವ್ಯವಸ್ಥೆಯನ್ನೆ ಕತ್ತಲಲ್ಲಿಟ್ಟು ದುಡ್ಡು ಹೊಡೆದಿದ್ದಾರಲ್ಲ ಅಧಿಕಾರಿಗಳು ಅವರನ್ನೇನು ಮಾಡಬೇಕ್ರಿ ? 50ಕೋಟಿಗೂ ಹೆಚ್ಚು ವೆಚ್ಚವನ್ನು ಮಣ್ಣಿಗೆ ಹಾಕಿದ್ದೇವೆಂದು ಹೇಳುತ್ತಾರಲ್ಲ ಯಾವ ಮಣ್ಣಿಗೆ ದುಡ್ಡು ಕೊಟ್ಟಿದ್ದಾರೆ ಅಧಿಕಾರಿಗಳು, ಒಂದೆ ಕೆಲಸಕ್ಕೆ 3-4ಬಿಲ್ಲುಗಳನ್ನು ಮಾಡಿಕೊಂಡು ಲೂಟಿ ಹೊಡೆದಿದ್ದಾರಲ್ಲ ಅವರನ್ನ ಕೇಳೋದು ಬೇಡವೇನ್ರಿ ?100ಮಂದಿಯ ಜಾಬ್ ಕಾರ್ಡಿಗೆ 10ಲಕ್ಷ ವೆಚ್ಚ ಮಾಡಲು ಸಾಧ್ಯ ಆದರೆ 1.50ಕೋಟಿಯ ಬಿಲ್ ತೋರಿಸುತ್ತಾರೆ ಇದು ಹೇಗೆ ಸಾಧ್ಯ?ಕೆಲಸವೇ ಆಗದೆ ಬಿಲ್ಲುಗಳನ್ನು ನೀಡಿದ್ದಾರೆ, 23ಕೋಟಿ ನಿಗದಿಯಾಗಿದ್ದರೂ ಅಕ್ರಮವಾಗಿ 150ಕೋಟಿಗೆ ಎಷ್ಟಿಮೇಟ್ ತಯಾರಿಸಿ ಸಪ್ಲೈ ಬಿಲ್ಲು ಪಡೆದಿದ್ದಾರೆ ಹೀಗಿರುವಾಗ ತಪ್ಪು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನೇ ಕೂತಿದ್ದರೆ ಅದನ್ನು ತಪ್ಪು ಎನ್ನುತ್ತೀರಿ ತಪ್ಪನ್ನು ಎತ್ತಿ ತೋರಿಸಿದರೆ ರಾಮಸ್ವಾಮಿಯಿಂದ ುದ್ಯೋಗ ಖಾತ್ರಿ ದುಡ್ಡು ನಿಂತಿದೆ ಎನ್ನುತ್ತೀರಿ ಹಾಗಾದರೆ ನಾನು ಏನು ಮಾಡಬೇಕು ನೀವೆ ಹೇಳಿ ಎಂದು ಪ್ರಶ್ನಿಸಿದ ಅವರು ತಪ್ಪನ್ನು ಪ್ರಶ್ನಿಸಲು ಹತಾಶ ಪರಿಸ್ಥಿತಿ ನಿರ್ಮಾಣವಾಗಬಾರದು ಹಾಗಾದರೆ ಅದು ಪ್ರಜಾತಾಂತ್ರಿಕ ವ್ಯವಸ್ಥೆಯ ಕಗ್ಗೊಲೆ ಆಗುತ್ತದೆ ಆದ್ದರಿಂದ ಜನರು ಜಾಗೃತರಾಗಬೇಕು ಪಕ್ಷದ ಕಾರ್ಯ ಕರ್ತರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಈ ಬೃಹತ್ ಆಂಧೋಲನ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಎಚ್ ಮಾದೇಶ್ ಉದ್ಯೋಗ ಖಾತ್ರಿ ಅಕ್ರಮ ನಡೆಸಿದ ಖದೀಮರುಗಳು ಒಟ್ಟಾಗಿ ತಮ್ಮ ವಿರುದ್ದ ಅಪ್ಪ-ಅಮ್ಮ ಇಲ್ಲದ ಕರಪತ್ರ ಹೊರಡಸಿದ್ದಾರೆ, ಅಂತಹವರು ತಾಯಿಯ ಎದೆ ಹಾಲು ಕುಡಿದು ಜನಿಸಿದ್ದರೆ ಎದುರಿಗೆ ಬಂದು ಮಾತನಾಡಲಿ ಎಂದು ಸವಾಲು ಹಾಕಿದ ಅವರು ಉದ್ಯೋಗ ಖಾತ್ರಿ ಅಕ್ರಮ ಪ್ರಶ್ನಿಸಿದ್ದು ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ ಎಂದರು. ತಮ್ಮ ವಿರುದ್ದ ಮಾಡಲಾಗಿರುವ ಆರೋಪ ಹುರುಳಿಲ್ಲದ್ದು ಜೈಲಿಗೆ ಹೋಗಿ ಬಂದವನ್ನನ್ನು ತಾ.ಪಂ. ಅಧ್ಯಕ್ಷನನ್ನಾಗಿ ಮಾಡಲಾಗಿದೆ ಎಂದು ದೂರಲಾಗಿದೆ. ನಾನು ಪ್ರಕರಣವೊಂದರಲ್ಲಿ ವ್ಯವಸ್ಥೆಯ ತಪ್ಪು ತಿಳುವಳಿಕೆಯಿಂದ ಜೈಲಿಗೆ ಹೋಗಿದ್ದು ನಿಜ, ಸದರಿ ವಿಚಾರವಾಗಿ ವಿಚಾರಣೆ ನಡೆದು ನ್ಯಾಯಾಲಯ ನನ್ನನ್ನು ದೋಷ ಮುಕ್ತ ಗೊಳಿಸಿದೆ ಆದರೆ ರಾಜಕೀಯ ದುರುದ್ದೇಶದಿಂದ ತಿಳಿಗೇಡಿಗಳು ಅಪಪ್ರಚಾರ ನಡೆಸಿದ್ದಾರೆ ಇಂತಹ ಅಪ ಪ್ರಚಾರಗಳಿಗೆ ನಾನು ಅಂಜುವುದಿಲ್ಲ ಭ್ರಷ್ಠಾಚಾರದ ವಿರುದ್ದ ನನ್ನ ಹೋರಾಟ ಮುಂದುವರೆಸುತ್ತೇನೆ ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಿ ಲೂಟಿಆಗಿರುವ ಸಾರ್ವಜನಿಕರ ಹಣ ಕಕ್ಕಿಸುವವರೆಗೂ ವಿಶ್ರಮಿಸುವುದಿಲ್ಲ ಎಂದರು. ಭ್ರಷ್ಟಾಚಾರ ಪ್ರಶ್ನಿಸಿದರೆ ಅಭಿವೃದ್ದಿಗೆ ಅಡ್ಡಗಾಲಾಗಿದ್ದಾರೆ ಎಂದು ಆರೋಪಿಸುವ ಕ್ಷೇತ್ರದ ಶಾಸಕರು ತಾಲೂಕಿನ ಜನ ಸಾಂಕ್ರಾಮಿಕ ರೋಗಕ್ಕೆ ಸಿಲುಕಿದಾಗ ಜನರ ಕಷ್ಟಸುಖ ಕೇಳಲು ಬರಲಿಲ್ಲ ಬದಲಿಗೆ ಯಾವ ಯಾವ ಯೋಜನೆಯಲ್ಲಿ ಎಷ್ಟು ಹಣ ಬಂದಿದೆ ? ಹಣ ಬಂದ ವಿಚಾರ ನನಗೇಕೆ ತಿಳಿಸಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಾ ಬಳ್ಳಾರಿಗೆ ಪಾದಯಾತ್ರೆ ಹೋಗಿದ್ದರು ಇಂತಹವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಹೊನ್ನವಳ್ಳಿ ಸತೀಶ್, ಕುಮಾರಸ್ವಾಮಿ ಜಿ.ಪಂ ಸದಸ್ಯರಾದ ಶಂಕರ್, ಮುಖಂಡರಾದ ಬೊಮ್ಮೇಗೌಡ, ಮುತ್ತಿಗೆ ರಾಜೇಗೌಡ, ದೊಡ್ಡೇಗೌಡ, ಸಾದಿಕ್ ಸಾಬ್ ಮಾತನಾಡಿದರು.

ಧೃಢೀಕೃತ ಬಿತ್ತನೆ ಬೀಜ ದಿಂದ ರೋಗಮುಕ್ತ ಬಂಪರ್ ಬೆಳೆ:ಪೊಟ್ಯಾಟೋ ಕ್ಲಬ್
ಅರಕಲಗೂಡು: ಪೊಟ್ಯಾಟೋ ಕ್ಲಬ್ ವತಿಯಿಂದ ತಾಲೂಕಿನ ವಿವಿದೆಡೆ ವಿತರಿಸಲಾಗಿರುವ ಧೃಡೀಕೃತ ಬಿತ್ತನೆ ಬೀಜದಿಂದ ಬೆಳೆಯಲಾಗಿರುವ ಆಲೂಗಡ್ಡೆ ಜಮೀನುಗಳಿಗೆ ಭೇಟಿ ನೀಡಿದ ತೋಟಗಾರಿಕೆ ಅಧಿಕಾರಿಗಳು ಅತ್ಯುತ್ತಮ ಬೆಳೆ ಬಂದಿರುವುದನ್ನು ಧೃಢೀಕರಿಸಿದ್ದಾರೆ.
ಕ್ಲಬ್ ವತಿಯಿಂದ ಸುಮಾರು 600ಟನ್ ಗಳಷ್ಟು ಧೃಢೀಕೃತ ಾಲೂ ಬಿತ್ತನೆ ಬೀಜವನ್ನು ಪಂಜಾಬ್ ನಿಂದ ತರಿಸಿ ರೈತರಿಗೆ ನೀಡಲಾಗಿತ್ತು ಹಾಗೂ ಅವುಗಳ ಕೃಷಿ ಪದ್ದತಿಯನ್ನು ಕಾಲಾನುಕಾಲಕ್ಕೆ ಗಮನಿಸಲಾಗಿತ್ತು ಅಗತ್ಯ ಸಂಧರ್ಭದಲ್ಲಿ ಉಚಿತವಾಗಿ ಔಷಧಿಗಳನ್ನು ಸಹಾ ನೀಡಲಾಗಿತ್ತು. ಪರಿಣಾಮವಾಗಿ ತಾಲೂಕಿನ ಕಸಬಾ ಹೋಬಳಿಯ ಕಳ್ಳಿಮುದ್ದನಹಳ್ಳಿ, ದೇವೀಪುರ ಮತ್ತಿತರೆಡೆಗಳಲ್ಲಿ ಪ್ರತೀ ಎಕರೆಗೆ 14-15ಟನ್ ಆಲೂಗಡ್ಡೆ ದೊರೆತಿದೆ. ಪ್ರತೀ ಗಿಡದಲ್ಲೂ 8-10ಆಲೂಗಡ್ಡೆ ಫಸಲು ಬಿಟ್ಟಿದೆ ಅಷ್ಟೆ ಅಲ್ಲ ಯಾವುದೇ ರೋಗವು ಬೆಳೆಯನ್ನು ಭಾದಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದ ತೋಟಗಾರಿಕೆ ಅಧಿಕಾರಿ ನವೀನ್ ಹಾಗೂ ದೊಡ್ಡೇಗೌಡ ಪತ್ರಿಕೆಯೊಂದಿಗೆ ಮಾತನಾಡಿ ತಾಲೂಕಿನಾದ್ಯಂತ ಈ ಭಾರಿ ಒಟ್ಟಾರೆಯಾಗಿ 1500ಹೆಕ್ಟೇರುಗಳಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ, ಕಳೆದ ವರ್ಷಕ್ಕಿಂತ 300ಹೆಕ್ಟೇರು ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ಇದೆ. ಆದರೆ ರೈತರ ನಿರ್ಲಕ್ಷ್ಯದಿಂದ ತಾಲೂಕಿನಾದ್ಯಂತ ಶೇ.70ರಷ್ಟು ಬೆಳೆ ಕಾಯಿಲೆಯಿಂದ ಹಾಳಾಗಿದೆ, ಇಲಾಖೆಯಿಂದ ಸೂಚಿಸಿದ ಮಾರ್ಗಸೂಚಿಯನ್ವಯ ಕೃಷಿ ಕೆಲಸ ನಿರ್ವಹಿಸಿಲ್ಲ ಎಂದರು. ಸಾಧಾರಣವಾಗಿ ಪ್ರತಿ ಹೆಕ್ಟೇರಿಗೆ 10ಟನ್ ಆಲೂಗಡ್ಡೆ ಸಿಗುತ್ತದೆ ಆದರೆ ಕ್ಲಬ್ ವತಿಯಿಂದ ನಿರ್ವಹಿಸಿರುವ ಪ್ರದೇಶದಲ್ಲಿ ಉತ್ತಮ ಫಸಲು ಇಳುವರಿ ದೊರೆತಿದೆ ಎಂದರು. ತಾಲೂಕಿನಲ್ಲಿ ಈ ಭಾರಿ ಪೆಪ್ಸಿ ಆಲೂಬೀಜ ಬಿತ್ತನೆ ಆಗಿಲ್ಲ ಬದಲಿಗೆ ಉತ್ತಮ ಇಳುವರಿ ನೀಡುವ ಕುಫ್ರಿ ಜ್ಯೋತಿ ತಳಿ ಬಿತ್ತನೆ ಮಾಡಲಾಗಿದೆ ಇದು ಇಲ್ಲಿನ ಹವಾಗುಣ ಮತ್ತು ಮಣ್ನಿಗೆ ಹೊಂದಾಣಿಕೆಯಾಗಿದೆ ಎಂದರು. ಕಳ್ಳಿಮುದ್ದನಹಳ್ಳಿ ಲೋಕೇಶ್ ಅವರ ಜಮೀನಿಗೆ ಅಧಿಕಾರಿಗಳು ಭೇಟಿ ನೀಡಿದ ಸಂಧರ್ಭದಲ್ಲಿ ಪೊಟ್ಯಾಟೋ ಕ್ಲಬ್ ಉಪಾಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.


ಶುಕ್ರವಾರ, ಸೆಪ್ಟೆಂಬರ್ 10, 2010

ಉದ್ಯೋಗ ಖಾತ್ರಿ ಅಕ್ರಮ: ಅಧಿಕಾರಿಗಳ ಅಮಾನತ್ತಿಗೆ ಸ್ವಾಗತ

ಸೋಮನಹಳ್ಳಿಗೆ ನೂತನ ಸಾರಿಗೆ ಮಾರ್ಗಕ್ಕೆ ನಿಶಾನೆ
ಅರಕಲಗೂಡು: ತಾಲೂಕಿನ ಸೋಮನಹಳ್ಳಿ ಗ್ರಾಮಕ್ಕೆ ನೂತನ ಸಾರಿಗೆ ಸಂಪರ್ಕ ವ್ಯವಸ್ಥೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್ ಮಾದೇಶ್ ಶನಿವಾರ ಚಾಲನೆ ನೀಡಿದರು.ಸೋಮನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮೀಣ ಭಾಗದ ಅಭಿವೃದ್ದಿಗೆ ಸಂಪರ್ಕ ವ್ಯವಸ್ಥೆ ಅತ್ಯವಶ್ಯಕವಾಗಿದೆ, ಸರ್ಕಾರ ಹಲವು ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳ ಮೂಲಬೂತ ಸೌಕರ್ಯಾಭಿವೃದ್ದಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕೈಗೊಂಡಿದೆ, ಈ ಹಿಂದಿನ ದಶಕಗಳಿಗಿಂತ ಇತ್ತಿಚಿನ ದಿನಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ ಆದ್ದರಿಂದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಸಹಾಯವಾಗಿದೆ ಮುಖ್ಯವಾಗಿ ರೈತರು, ವಿದ್ಯಾರ್ಥಿಗಳಿಗೆ ಈ ಮಾರ್ಗದ ಪ್ರಯೋಜನವಾಗಲಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅರಕಲಗೂಡು ಡಿಪೋ ವ್ಯವಸ್ಥಾಪಕ ರವೀಂದ್ರ ಮಾತನಾಡಿ ಅರಕಲಗೂಡಿನಿಂದ ಸೋಮನಹಳ್ಳಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ ಬೆಳಿಗ್ಗೆ 8-30ಕ್ಕೆ ಅರಕಲಗೂಡಿನಿಂದ ಹೊರಡಲಿದೆ, ಅದೇ ರೀತಿ ಸಂಜೆ 4-30ಕ್ಕೆ ಮತ್ತೆ ಅದೇ ಮಾರ್ಗವಾಗಿ ಸಂಚರಿಸಲಿದೆ ಎಂದರು. ಈ ಮಾರ್ಗದ ಸಾರಿಗೆ ಸಂಪರ್ಕಕ್ಕಾಗಿ ಕರವೇ ಮುಖಂಡ ತಾಜೀಂ ಪಾಶ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲೆಯ ಹಿರಿಯ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸದ್ದರು, ಇದನ್ನು ಪುರಸ್ಕರಿಸಿದ ಅಧಿಕಾರಿಗಳು ಗೌರಿ-ಗಣೇಶ ಹಬ್ಬದಂದೇ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದ್ದಾರೆ.ಬಸ್ ಗ್ರಾಮಕ್ಕೆ ಬರುತ್ತಿದ್ದಂತೆ ಜನರು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಸಾರಿಗೆ ಸೌಲಭ್ಯದ ಸ್ವಾಗತ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಈರೇಗೌಡ, ಸದಸ್ಯರಾದ ಸುರೇಶ್, ಅನ್ವರ್, ತಾಲೂಕು ಕರವೇ ಗೌರವಾಧ್ಯಕ್ಷ ಕೃಷ್ಣೇಗೌಡ,ಮುಖಂಡರಾದ ಅಜೀಂ ಸಾಬ್, ಸಾದಿಕ್ ಸಾಬ್, ಸಂಚಾರ ನಿಯಂತ್ರಕ ನಿತ್ಯಾನಂದ ಹಾಜರಿದ್ದರು.
ಉದ್ಯೋಗ ಖಾತ್ರಿ ಅಮಾನತ್ತು ಸ್ವಾಗತ
ಅರಕಲಗೂಡು: 'ಉದ್ಯೋಗ ಖಾತ್ರಿ' ಅಕ್ರಮದಲ್ಲಿ ಭಾಗಿಯಾಗಿರುವ ಜಿಲ್ಲಾ ಪಂಚಾಯ್ತಿ ಇಂಜಿನಿಯರುಗಳು ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಅಮಾನತ್ತು ಮಾಡಿರುವ ಸರ್ಕಾರದ ಕ್ರಮವನ್ನು ಭಾರತೀಯ ಜನತಾ ಪಕ್ಷದ ರೈತ ಘಟಕದ ಅಧ್ಯಕ್ಷ ವಸಂತಕುಮಾರ್ ಸ್ವಾಗತಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಧಿಕಾರಿಗಳು ಸ್ವೇಚ್ಚಾಚಾರದಿಂದ ಉದ್ಯೋಗ ಖಾತ್ರಿ ಕೆಲಸವನ್ನು ನಿರ್ವಹಿಸಿದ್ದು ಕೂಲಿಕಾರರಿಗೆ ವಂಚನೆ ಮಾಡಿದ್ದಾರೆ, ನಕಲಿ ಜಾಬ್ ಕಾರ್ಡು, ಎಸ್ಟಿಮೇಟು ಹಾಗೂ ಬಿಲ್ಲುಗಳನ್ನು ತಯಾರಿಸಿ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ಈ ನಿಟ್ಟಿನಲ್ಲಿ ಇಲಾಖೆಯ ಸಚಿವರಾದ ಜಗದೀಶ್ ಶೆಟ್ಟರ್ ಅಕ್ರಮ ಸಾಬಿತಾಗಿರುವುದರಿಂದ ಅಧಿಕಾರಿಗಳನ್ನು ಅಮಾನತ್ತು ಪಡಿಸಿದ್ದಾರೆ, ಇನ್ನೂ ಹಲವು ಮಂದಿ ಇಂಜಿನಿಯರುಗಳು ಮತ್ತು ಪಂಚಾಯ್ತಿ ಕಾರ್ಯದರ್ಶಿಗಳು ಉದ್ಯೋಗ ಖಾತ್ರಿ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ ಅವರುಗಳನ್ನು ಸಹಾ ಅಮಾನತ್ತು ಗೊಳಿಸಿ ಯೋಜನೆಯ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯ ಬೇಕೆಂದು ಮನವಿ ಮಾಡಿರುವ ಅವರು ರಾಜ್ಯ ಸರ್ಕಾರ ಬಡಜನರ ಹಿತಾಸಕ್ತಿಯಿಂದ ಇಂತಹ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ ಅದನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.






ಸೋಮವಾರ, ಸೆಪ್ಟೆಂಬರ್ 6, 2010

ಉದ್ಯೋಗ 'ಅಕ್ರಮ' ಖಾತ್ರಿ,ಮೂವರು ಅಧಿಕಾರಿಗಳು ಅಮಾನತ್ತು

ಹಾಸನ/ಅರಕಲಗೂಡು: ಜಿಲ್ಲೆಯಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಅಕ್ರಮಕ್ಕಾಗಿ ತಾಲೂಕಿನ ಮೂವ್ವರು ಅಧಿಕಾರಿಗಳು ಮೊದಲ ಬಾರಿಗೆ ಅಮಾನತ್ತಾಗಿದ್ದಾರೆ. ಆ ಮೂಲಕ ಉದ್ಯೋಗ ಖಾತ್ರಿ ಅಕ್ರಮದ ಖಾತೆ ತೆರೆದಂತಾಗಿದ್ದು ಇನ್ನೂ ಹಲವು ಮಂದಿ ಅಧಿಕಾರಿಗಳು ಹಾಗೂ ನೌಕರರು ಅಮಾನತ್ತಿಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ತಾಲ್ಲೂಕಿನಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲಾ ತಾಲೂಕುಗಳಲ್ಲು ಉದ್ಯೋಗ 'ಅಕ್ರಮ' ಖಾತ್ರಿ ಇದೆ ಆದ್ದರಿಂದ ಇಡೀ ಯೋಜನೆಗೆ ಕೇಂದ್ರದ ಸ್ವಾಮ್ಯದ ಸ್ವತಂತ್ರ ಸಂಸ್ಥೆ ಸಮಗ್ರ ತನಿಖೆ ನಡೆಸದಲ್ಲಿ ಹಲವು ಮಂದಿ ನೌಕರರು/ಅಧಿಕಾರಿಗಳು ಮನೆಗೆ ಹೋಗುವುದು ಗ್ಯಾರಂಟಿಯಾಗಲಿದೆ. ಕೆಲ ವರ್ಷಗಳ ಹಿಂದೆ ಕೂಲಿಗಾಗಿ ಕಾಳು ಯೋಜನೆಯಲ್ಲಿನ ಅಕ್ರಮದಿಂದ 39ಮಂದಿ ಗೆಜೆಟೆಡ್ ದರ್ಜೆಯ ಅಧಿಕಾರಿಗಳು ಮಂಗಳೂರು ಜೈಲಿನಲ್ಲಿ ಮುದ್ದೆ ಮುರಿಯುತ್ತಾ 3ದಿಂಗಳ ಕಾರಾಗೃಹ ವಾಸ ಕಂಡಿದ್ದರು, ಈಗ ಅದು ಪುನರಾವರ್ತನೆಯಾಗಲಿದೆಯೇ ಕಾದು ನೋಡಬೇಕು.
ಪತ್ರಿಕೆಗೆ ಈ ಮಾಹಿತಿ ನೀಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್ ಮಾದೇಶ್ ಉದ್ಯೋಗ ಖಾತ್ರಿ ಅಕ್ರಮದ ವಿರುದ್ದ ನಮ್ಮ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ ಇದನ್ನು ನಾವು ಸ್ವಾಗತಿಸುತ್ತೇವೆ ಎಂದರು. ಸೆ.1 ರಿಂದಲೇ ಅನ್ವಯವಾಗುವಂತೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಫಣೀಶ್, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಶ್ ಮತ್ತು ಕಿರಿಯ ಅಭಿಯಂತರ ನಿಂಗೇಗೌಡ ಮೊದಲ ಹಂತದಲ್ಲಿ ಅಮಾನತ್ತಾದ ಅಧಿಕಾರಿಗಳಾಗಿದ್ದಾರೆ ಎಂದು ಅವರು ತಿಳಿಸಿದರು. ಇಂದು ಜಿ.ಪಂ. ನಲ್ಲಿ ನಡೆದ ಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಇಡೀ ಜಿಲ್ಲೆಗೆ 150ಕೋಟಿ ರೂಗಳ ಕ್ರಿಯಾ ಯೋಜನೆಯನ್ನು ಅನುಮೋದನೆ ನೀಡಲಾಗಿದೆ, ಸದರಿ ಕ್ರಿಯಾ ಯೋಜನೆಯ ಕೆಲಸ ಜನವರಿಯಲ್ಲೇ ಮುಗಿದಿದೆ ಎಂದು ನುಡಿದ ಅವರು ಅರಕಲಗೂಡಿನಲ್ಲಿ ಕಳೆದ ವರ್ಷ 22.80ಕೋಟಿ ರೂಗೆ ಕ್ರಿಯಾ ಯೋಜನೆ ವೆಚ್ಚ ನಿಗದಿ ಯಾಗಿತ್ತಾದರೂ ಅಧಿಕಾರಿಗಳು 150ಕೋಟಿ ರೂಗಳ ಕ್ರಿಯಾ ಯೋಜನೆ ತಯಾರಿಸಿದ್ದಲ್ಲದೇ ಜಿಲ್ಲಾ ಪಂಚಾಯ್ತಿಯ ಇಂಜಿನಿಯರುಗಳು ಶೇ.40 ಸಪ್ಲೈ ಬಿಲ್ ಗಳನ್ನು ಪಡೆದಿದ್ದರು ಆದರೆ ಕೂಲಿ ಕಾರರ ಹಣ ಬಿಡುಗಡೆ ಆಗಿರಲಿಲ್ಲ, ನಕಲಿ ಜಾಬ್ ಕಾರ್ಡು, ನಕಲಿ ಎಸ್ಟಿಮೇಟ್, ಸುಳ್ಳು ಎಂಬಿಗಳನ್ನು ವ್ಯಾಪಕವಾಗಿ ಬರೆಯಲಾಗಿದೆ ಇದನ್ನೆಲ್ಲ ಗಮನಿಸಿದ ಕೇಂದ್ರದ ಅಧಿಕಾರಿಗಳು ಡಿಸೆಂಬರ್ ನಲ್ಲೇ ವ್ಯತ್ಯಾಸದ ಕುರಿತು ನೋಟೀಸ್ ನೀಡಿ ವಿವರ ಕೇಳಿದ್ದರು ಆದರೆ ತಪ್ಪಿಗೆ ಸಿಕ್ಕಿ ಬಿದ್ದ ಅಧಿಕಾರಿಗಳು ಜನರಿಗೆ ತಪ್ಪು ಮಾಹಿತಿ ನೀಡಿ ತಾಲ್ಲೂಕಿನಿಂದಲೇ ತರಾತುರಿಯಲ್ಲಿ ವರ್ಗಾವಣೆ ಮಾಡಿಸಿ ಕೊಂಡಿದ್ದರು, ಈ ಹಂತದಲ್ಲಿ ಮಾಜಿ ಶಾಸಕ ಎ ಟಿ ರಾಮಸ್ವಾಮಿ ವಿಧಾನ ಸೌಧದಲ್ಲಿ ಪ್ರತಿಭಟನೆ ನಡೆಸಿ ಇಲಾಖೆಗೆ ದೂರು ನೀಡಿದ ಪರಿಣಾಮ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಾಲ್ಲೂಕಿಗೆ ಭೇಟಿ ನೀಡಿದ್ದರು. ಅಕ್ರಮ ಧೃಢವಾಗುತ್ತಿದ್ದಂತೆ ಮುಂದಿನ ತನಿಖೆ ಕಾಯ್ದಿರಿಸಿ ತಾ.ಪಂ. ಇ ಓ , ಇಂಜಿನಿಯರುಗಳನ್ನು ಅಮಾನತ್ತು ಗೊಳಿಸಿದ್ದಾರೆ ಈ ಅಕ್ರಮದಲ್ಲಿ ಹಿರಿಯ ಅಧಿಕಾರಿಗಳು ಸಹಾ ಪಾಲ್ಗೊಂಡಿರುವುದರಿಂದ ಅವರ ಮೇಲೂ ಕ್ರಮವನ್ನು ನಿರೀಕ್ಷಿಸಲಾಗುತ್ತಿದೆ ಎಂದರು. ಇಡೀ ಪ್ರಕರಣ ಸಮಗ್ರವಾಗಿ ತನಿಖೆಯಾಗಬೇಕು ತಪ್ಪಿತಸ್ಥರೆನಿಸಿದ ಎಲ್ಲಾ ನೌಕರರು ಮತ್ತು ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಮತ್ತು ಕೂಲಿಕಾರರನ್ನು ವಂಚಿಸಿದ ಹಣವನ್ನು ಅವರಿಂದ ಕಕ್ಕಿಸಬೇಕು ಎಂದರು ಮಾದೇಶ್ ನುಡಿದರು. ಮಾಜಿ ಶಾಸಕ ಎ ಟಿ ರಾಮಸ್ವಾಮಿ ನೇತೃತ್ವದಲ್ಲಿ ನಡೆಸಿ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ತೆಗೆದುಕೊಂಡಿದೆ ಮುಂದೆಯೂ ಹೀಗೆ ಕಾರ್ಯ ನಿರ್ವಹಿಸಿ ತಪ್ಪಿತಸ್ಥರನ್ನು ಬಲಿಹಾಕಲಿ, ಇದು ಅಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಲಿ ಎಂದು ಹೇಳಿದ ಅವರು ಅದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸುತ್ತೇವೆ ಎಂದರು.

ಶನಿವಾರ, ಸೆಪ್ಟೆಂಬರ್ 4, 2010

ನೈತಿಕ ಬೆಂಬಲ ನೀಡಿದರೆ ಭ್ರಷ್ಟಾಚಾರದ ವಿರುದ್ದ ಹೋರಾಟ

ಅರಕಲಗೂಡು: ಸರ್ಕಾರದ ಸಂವಿದಾನ ಬದ್ದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರ ಭ್ರಷ್ಟಾಚಾರದಿಂದಾಗಿ ಸಾರ್ವಜನಿಕ ಸಂಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಂಡಿವೆ ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ವಿಷಾಧಿಸಿದ್ದಾರೆ. ಪಟ್ಟಣದಲ್ಲಿ ಏರ್ಪಾಡಾಗಿದ್ದ ಜೆಡಿಎಸ್ ಪಕ್ಷದ ಸಭೆ ಯಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರ ನಿಯಂತ್ರಿಸಲಾಗದಷ್ಟು ಮಟ್ಟಿಗೆ ವ್ಯಾಪಿಸಿದೆ, ಈ ವ್ಯವಸ್ಥೆಯ ಸುಧಾರಣೆಗೆ ನೈತಿಕ ಬೆಂಬಲ ನೀಡಿದರೆ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸುತ್ತೇನೆ ಎಂದು ನುಡಿದ ಅವರು ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು, ತಾಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಪಕ್ಷದ ಬಲ ವೃದ್ದಿಸಿದೆ, ಗ್ರಾ.ಪಂ ಚುನಾಯಿತ ಪ್ರತಿನಿಧಿಗಳನ್ನು ಗೌರವಿಸುವ ಸಲುವಾಗಿ ಇಂದು ಕಾರ್ಯಕ್ರಮ ನಡೆಸುತ್ತಿದ್ದೇವೆ 15ದಿನಗಳ ಮುಂಚೆಯೇ ಕಾರ್ಯಕ್ರಮಕ್ಕಾಗಿ ಶಿಕ್ಷಕರ ಭವನವನ್ನು ಅಧಿಕೃತವಾಗಿ ಪಡೆಯಲಾಗಿದೆ ಆದರೆ ಇಂತಹ ಕಾರ್ಯಕ್ರಮಕ್ಕೂ ಅಧಿಕಾರ ಶಾಹಿ ಅಡ್ಡಿ ಪಡಿಸಿತು ಎಂದರು. ಶಿಕ್ಷಕ ಸಮುದಾಯದ ಸಹಕಾರದಿಂದ ಅಡ್ಡಿ ನಿವಾರಣೆಯಾಗಿದೆ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ ಎಂದು ನುಡಿದರು.
ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳ ಕುರಿತು ಮಾತನಾಡಿದ ಅವರು ತಾಲೂಕಿನಲ್ಲಿ ನನ್ನಿಂದಾಗಿ ಕೂಲಿಕಾರರ ಹಣ ನಿಂತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಇದು ಸರಿಯಲ್ಲ, ಕಣ್ಣೆದುರಿಗೆ ಅಕ್ರಮ ನಡೆಯುತ್ತಿದ್ದರೆ ನೋಡಿಕೊಂಡು ಕುಳಿತಿರಲು ಸಾಧ್ಯವಿಲ್ಲ. ಜನರ ತೆರಿಗೆ ದುಡ್ಡನ್ನು ಇಂಜಿನಿಯರುಗಳು ಲೂಟಿ ಮಾಡುತ್ತಿದ್ದರೆ ಸಹಿಸುವುದು ಹೇಗೆ ಎಂದು ಪ್ರಶ್ನಿಸಿದ ಅವರು ಇಂಜಿನಿಯರುಗಳಿಗೆ ಅನ್ನ ತಿನ್ನಿ ಎಂದರೆ ಭ್ರಷ್ಟಾಚಾರ ನಡೆಸುವ ಮೂಲಕ ಮಣ್ಣುತಿನ್ನುವ ಕೆಲಸ ಮಾಡಿದ್ದಾರೆ, ಇಂತಹದ್ದನ್ನು ಪ್ರಶ್ನೆ ಮಾಡಲು ಹತಾಶ ಸ್ಥಿತಿ ಬರಬಾರದು, ಅಂತಹ ಸ್ಥಿತಿ ಎದುರಾದರೆ ಪ್ರಜಾಪ್ರಭುತ್ವದ ಕಗ್ಗೊಲೆ ಆದಂತೆ ಆಗುತ್ತದೆ ಇದಕ್ಕೆ ಅವಕಾಶ ಮಾಡಬೇಡಿ ಎಂದು ಮನವಿ ಮಾಡಿದರು.ಉದ್ಯೋಗ ಖಾತ್ರಿ ಯೋಜನೆಗೆ ಯಾವ ಪುಣ್ಯಾತ್ಮ ಮಹಾತ್ಮ ಗಾಂಧಿ ಹೆಸರಿಟ್ಟನೋ ಗೊತ್ತಿಲ್ಲ ಇದಕ್ಕೆ ಚಂಬಲ್ ಕಣಿವೆಯ ಡಕಾಯಿತರ ಹೆಸರನ್ನು ಇಲ್ಲವೇ ವೀರಪ್ಪನ್ ಹೆಸರನ್ನಿಟ್ಟಿದ್ದರೆ ಚೆನ್ನಾಗಿತ್ತು, ಯೋಜನೆಗೆ ಮಹಾತ್ಮ ಗಾಂಧಿ ಹೆಸರನ್ನಿಟ್ಟು ಅಪಮಾನವೆಸಗಲಾಗಿದೆ, ವ್ಯಾಪಕ ಅಕ್ರಮದ ತವರು ಉದ್ಯೋಗ ಖಾತ್ರಿ ಯೋಜನೆಯಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮತ್ತು ಇಂಜಿನಿಯರುಗಳು ಇಡೀ ತಾಲೂಕಿನ ಜನಸಾಮಾನ್ಯರಿಗೆ ಮಣ್ಣುತಿನ್ನಿಸಿದ್ದಾರೆ, ಜನಸಂಖ್ಯೆಗನುಗುಣವಾಗಿ ಕ್ರಿಯಾ ಯೋಜನೆಗಳು ತಯಾರಾಗಬೇಕು ಮತ್ತು ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆಗೊಳ್ಳಬೇಕು ಆದರೆ ಆ ಪ್ರಕ್ರಿಯೆಗಳು ನಡೆದಿಲ್ಲ, ಇಡೀ ಯೋಜನೆಯಲ್ಲಿ ಹೆಜ್ಜೆ ಹೆಜ್ಜೆಗೂ ಅಕ್ರಮದ ಸಾಕ್ಷ್ಯ ಇದೆ ಪ್ರಜಾ ರಾಜ್ಯದಲ್ಲಿ ಇಂಜಿನಿಯರುಗಳು ಮನಸ್ಸೊ ಇಚ್ಚೆ ವರ್ತಿಸುವ ಮೂಲಕ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ಎಂದರು. ತಾಲೂಕಿಗೆ ನಿಗದಿಯಾದ ಅನುದಾನಕ್ಕಿಂತ ಹೆಚ್ಚಿಗೆ ಅಂದರೆ 150ಕೋಟಿ ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ 3ಕೋಟಿ ಸಪ್ಲೈ ಬಿಲ್ ಗಳನ್ನು ಡ್ರಾ ಮಾಡಲಾಗಿದೆ, ಕೆರೆ-ಕಟ್ಟೆಗಳ ಕೆಲಸವನ್ನು ಪೂರ್ಣಗೊಳಿಸದೇ ಎಂಬಿ ಬರೆಯಲಾಗಿದೆ, ನಕಲಿ ಜಾಬ್ ಕಾರ್ಡುಗಳನ್ನು ಸೃಷ್ಟಿಸಲಾಗಿದೆ ಆ ಮೂಲಕ ಅಮಾಯಕ ಜನರನ್ನು ವಂಚಿಸಲಾಗಿದೆ ಇದನ್ನು ಪ್ರಶ್ನಿಸಿದ್ದು ತಪ್ಪೇ? ಪ್ರಶ್ನಿಸಿದರೆ ಅಭಿವೃದ್ದಿ ನಿಂತು ಹೋಗುತ್ತಾ? ವಿಧಾನ ಸಭೆಯಲ್ಲಿ ಹಗಲು ರಾತ್ರಿ ಪ್ರತಿಭಟನೆ ಮಾಡಿದರಲ್ಲ, ಆಗ ಅಭಿವೃದ್ದಿ ನಿಂತು ಹೋಗಿತ್ತಾ ಎಂದು ಹಾಲಿ ಶಾಸಕರನ್ನು ಪರೋಕ್ಷವಾಗಿ ಚುಚ್ಚಿದ ಎಟಿಆರ್ ನನ್ನ ಹೋರಾಟದ ಉದ್ದೇಶ ಹಾಗೂ ಕಳಕಳಿಯನ್ನು ಅರಿಯಿರಿ ಎಂದರು. ನನ್ನ ಅಣ್ಣನ ಮಗನೇ ಬನ್ನೂರಿನಲ್ಲಿ ಅಧ್ಯಕ್ಷನಾಗಿದ್ದಾನೆ ಅಲ್ಲಿಂದಲೇ ಅಕ್ರಮಗಳ ತನಿಖೆ ಆರಂಭವಾಗಲಿ ಸಂತೋಷಿಸುತ್ತೇನೆ, ಪಟ್ಟಾಭಿರಾಮ ಶಾಲೆಯ ುದ್ಯೋಗ ಖಾತ್ರಿ ಕೆಲಸದ ಬಗ್ಗೆ ಕೇಳಬೇಕಿತ್ತು ಎಂದು ಹೇಳುವವರು ತಾವೇ ಅ ಬಗ್ಗೆ ಪ್ರಶ್ನಿಸಬಹುದಿತ್ತಲ್ಲವೇ ? ತಪ್ಪು ಯಾರು ಮಾಡಿದರೂ ತಪ್ಪೇ, ನಾನು ಆ ಪಾರ್ಟಿ ಈ ಪಾರ್ಟಿ ಎಂದು ಎಲ್ಲೂ ಹೇಳಿಲ್ಲ ಆದರು ನನ್ನ ಬಗ್ಗೆ ಸಣ್ಣತನದ ಆರೋಪ ಮಾಡಲಾಗಿದೆ ಸಣ್ಣತನ ನನ್ನ ಜಾಯಮಾನದಲ್ಲೇ ಇಲ್ಲ ನೈತಿಕತೆ ಇದ್ದರೆ ಅದನ್ನು ಅರಿತುಕೊಳ್ಳಲಿ ಎಂದರು. ಮಾನವೀಯತೆ ದೃಷ್ಟಿಯಿಂದ ತಾಳಿಬಾಳಿ ಹೋಗುತ್ತಿದ್ದೇನೆ, ಇತ್ತೀಚೆಗೆ ರಾಮನಾಥಪುರದಲ್ಲಿ ಸಿಕ್ಕಿಬಿದ್ದ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ ದೇಶದ್ರೋಹಿಯನ್ನು ಜೊತೆಗಿಟ್ಟುಕೊಂಡು ಓಡಾಡುವ ಇವರಿಂದ ನಾನು ಕಲಿಯಬೇಕಾದುದೇನಿಲ್ಲ, ನನ್ನಲ್ಲಿ ಪಾಪದ ರಕ್ತವಿಲ್ಲ ಶುದ್ಧ ರಕ್ತವಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆಯ ಅಕ್ರಮದ ತೀವ್ರತೆ ಎಷ್ಟಿದೆ ಎಂದರೇ ಗ್ರಾಮ ಪಂಚಾಯ್ತಿಯೊಂದರ ಮಹಿಳಾ ಕಾರ್ಯದರ್ಶಿಯೋರ್ವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಪರಿಶೀಲನೆಗೆ ಬಂದಿದ್ದಾಗ ಖಾತ್ರಿ ಯೋಜನೆಯಲ್ಲಿ ಶೇ.1ರಷ್ಟು ಕೆಲಸವೂ ಆಗಿಲ್ಲ, ನಾನು ಆತ್ಮಹತ್ಯೆ ಮಾಡ್ಕೋತೀನಿ ಎಂದರು ಇದಕ್ಕಿಂತ ಹೆಚ್ಚಿಗೆ ಬೇರೇನೂ ಹೇಳಲು ಸಾಧ್ಯ ಎಂದರು.
ಇದಕ್ಕೂ ಮುನ್ನ ಮಾತನಾಡಿದ ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಜಿಲ್ಲಾ ಪಂಚಾಯ್ತಿಯ ಉಪಕಾರ್ಯದರ್ಶಿ ಬಾಲಕೃಷ್ಣ ತಾಲೂಕಿನ ಅಧಿಕಾರಿಗಳಿಗೆ ಟೋಪಿ ಹಾಕಿದ್ದಾರೆ ಆ ಮೂಲಕ ಜನತೆಯನ್ನು ವಂಚಿಸಿದ್ದಾರೆ ಎಂದರು. ತಾಲೂಕಿನಲ್ಲಿ ಕಳೆದ ವರ್ಷಕ್ಕೆ 22.80ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ಮಾಡಬೇಕಿತ್ತು ಆದರೆ ಬಾಲಕೃಷ್ಣರ ಕುಮ್ಮಕ್ಕಿನಿಂದ 300ಕೋಟಿಗೆ ಬೇಕಾಬಿಟ್ಟಿ ಕ್ರಿಯಾ ಯೋಜನೆ ಮಾಡಲಾಗಿದೆ 15ಒಕೋಟಿಗೆ ಅನುಮೋದನೆ ನೀಡಿ 3ಕೋಟಿ ಸಪ್ಲೈ ಬಿಲ್ ಪಡೆಯಲಾಗಿದೆ ಈ ಕುರಿತು ಕೇಂದ್ರ ಸರ್ಕಾರ ಡಿಸೆಂಬರ್ ಅಂತ್ಯದಲ್ಲೇ ನೋಟೀಸ್ ನೀಡಿ ಉದ್ಯೋಗ ಚೀಟಿ 1:6 ಆಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಯೋಜನೆಯನ್ನು ಸ್ಥಗಿತಗೊಳಿಸಿತ್ತು ಆದರೆ ಇದನ್ನು ಸರಿಪಡಿಸಲಾಗದ ಅಧಿಕಾರಿಗಳು ಸಾಮೂಹಿಕ ವರ್ಗಾವಣೆಗೆ ಸಂಚು ರೂಪಿಸಿದ್ದರು ಈ ಮಾಹಿತಿ ತಿಳಿದ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಜುಲೈ ತಿಂಗಳಿನಲ್ಲಿ ದೂರು ನೀಡಿದರು ಆಗ ಇಂಜಿನಿಯರುಗಳ ಅಕ್ರಮ ಬೆಳಕಿಗೆ ಬಂದಿದೆ ಎಂದರು. ಆದರೆ ರಾಮಸ್ವಾಮಿ ಯೋಜನೆಯ ದುಡ್ಡು ನಿಲ್ಲಿಸಿದ್ದಾರೆ ಎಂಬ ಆರೋಪ ಸರಿಯಾದುದಲ್ಲ ಜನರಿಗೆ ದಕ್ಕಬೇಕಾಗಿದ್ದ ಯೋಜನೆಯಲ್ಲಿ ಹಣ ಲೂಟಿ ಆಗುತ್ತಿದ್ದರೆ ನೋಡಿಕೊಂಡು ಕೂರಲು ಸಾಧ್ಯವೇ ಇಲ್ಲ ಇಂಜಿನಿಯರುಗಳಿಂದ ಜನರ ಕೂಲಿ ಹಣ ನಿಂತಿದೆ ಅವರನ್ನು ಶಿಕ್ಷಿಸಬೇಕು ಮತ್ತು ಹಣ ವಸೂಲು ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ರಾಜ್ಯಸಭಾ ಸದಸ್ಯ ಜವರೇಗೌಡ, ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ,ಮತ್ತಿತರ ಮುಖಂಡರು ಮಾತನಾಡಿದರು.
ಆರೋಪ: ತಾಲೂಕು ಕಛೇರಿ ಆವರಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಭಾಗವಹಿಸದೇ ಸ್ಥಳೀಯ ಸಂಸ್ಥೆಯ ಜೆಡಿಎಸ್ ಪ್ರತಿನಿಧಿಗಳು ಜನರಿಗೆ ವಂಚನೆ ಮಾಡಿದ್ದಾರೆ ಎಂದು ಪ.ಪಂ ಸದಸ್ಯ ರವಿಕುಮಾರ್ ಆರೋಪಿಸಿದ್ದಾರೆ. ಜೆಡಿಎಸ್ ಸದಸ್ಯರುಗಳಿಗೆ ಜನರ ಸಮಸ್ಯೆಗಳಿಗಿಂತ ಪಕ್ಷದ ಸಭೆ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.